✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday 18 February 2021

ಜೇನು ತುಪ್ಪ ಸರಿಯಾಗಿ ಬಳಸಿದರೆ ಅಮೃತ. ಇಲ್ಲದಿದ್ದರೆ ವಿಷ!!

🙏ಅಮೃತಾತ್ಮರೇ ನಮಸ್ಕಾರ 🙏
 🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
19.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-25
••••••••••••••
✍️: ಇಂದಿನ ವಿಷಯ:
ಜೇನು ತುಪ್ಪ ಸರಿಯಾಗಿ ಬಳಸಿದರೆ ಅಮೃತ. ಇಲ್ಲದಿದ್ದರೆ ವಿಷ!!
•••••••••••••••••••••••••••••••••••••••••

ಈ ದಿನ,
ಜೇನುತುಪ್ಪವನ್ನು ಗರವಿಷವನ್ನಾಗಿಸುತ್ತಿರುವ ವಿಧಾನವನ್ನೂ ಮತ್ತು ಅದು ಸಿರೋಸಿಸ್, ನೆಫ್ರೈಟೀಸ್ ರೋಗಗಳನ್ನು ಉಂಟುಮಾಡುವ ವಿಧಾನ ನೋಡೋಣ. 

📜 ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||
-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

👉 ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!!
ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ.
ಹಾಗಾಗಿ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
★ ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. 
★ ಅದನ್ನು ಬಿಸಿ ಆಹಾರಕ್ಕೆ ಹಾಕಿದರೆ ಆ ವಿಷ ತೀಕ್ಷ್ಣತೆ ಪಡೆಯುತ್ತದೆ.‌ 
★ ಜ್ವರಪೀಡಿತನಿಗೆ ಕುಡಿಸಿದರೆ ಅದು ಅತ್ಯುಗ್ರ ರೋಗ ತರುತ್ತದೆ.
★ ಬಿಸಿಲಿನಲ್ಲಿ ಬಳಲಿದ ಉಷ್ಣಪೀಡಿತನಿಗೆ ಕೊಟ್ಟರೆ ತಕ್ಷಣ ಕೊಂದೇ ಹಾಕುತ್ತದೆ!!!

👉 ಏನು ಮಾಡುತ್ತಿದ್ದೇವೆ?
ಈಗ ಬಹುತೇಕರು, ಶರೀರವನ್ನು ತೆಳ್ಳಗೆ ಮಾಡಿಕೊಳ್ಳಲು, ಕೊಬ್ಬಿನಅಂಶ ಕರಗಿಸಲು ಪ್ರತಿದಿನ ಬೆಳಿಗ್ಗೆ ಬಿಸಿನೀರು ಜೇನುತುಪ್ಪವನ್ನು ಯಾವ ಸಂಶಯ ಭಯವೂ ಇಲ್ಲದೇ ಸೇವಿಸುತ್ತಿದ್ದಾರೆ!! ಯಾವ ಫಲಿತಾಂಶವೂ ಇಲ್ಲದೇ!!!
ಇದು ಅಚ್ಚರಿಯೇ ಸರಿ.

👉 ಪರಿಣಾಮ ಏನು?
ಬಿಸಿನೀರಿನ ಸಂಪರ್ಕದಿಂದ ಜೇನು ಮಂದಗತಿಯ ವಿಷವಾಗುತ್ತದೆ. ಇದರಿಂದ ಹಾನಿಗೊಳಗಾಗುವ
 ಮೊದಲ ಅಂಗ ಎಂದರೆ "ಯಕೃತ್"!!
ನೆನಪಿಡಿ, ಯಾವುದೇ ಕಾಯಿಲೆಗೆ ನಾವು ಬಿಟ್ಟೂ ಬಿಡದಂತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತುತ್ತಿರುವುದಕ್ಕೆ ಕಾರಣವೇ ಯಕೃತ್ತನ್ನು ವಿಷಮಯವಾಗಿಸಿರುವುದು.

👉 ನಿಧಾನಗತಿಯ ವಿಷವಾಗುವ ಕಾರ್ಯ:
ಬಿಸಿ ಜೇನುತುಪ್ಪ ಶರೀರದ ಅಂಗಗಳಿಗೆ ಬದುಕಲು ಅತ್ಯಗತ್ಯವಾಗಿ ಬೇಕಾಗುವ ಲಿಪಿಡ್ ಅನ್ನು ವಿಭಜನೆ ಮಾಡುತ್ತದೆ. ಆಗ ‌ಯಕೃತ್ ಅದನ್ನು ತಡೆಯಲು ಪ್ರಯತ್ನಿಸಿ ತನ್ನ ಸ್ನಿಗ್ಧತೆಯ ಸತ್ವವನ್ನೇ ಕಳೆದುಕೊಂಡು *ಸಿರೋಸಿಸ್ ಎಂಬ ತಾನೇ ಒಣಗಿಹೋಗುವ ಕಾಯಿಲೆಗೆ ತುತ್ತಾಗುತ್ತದೆ.*😐
ತದನಂತರ ವಿಷವನ್ನು ನೇರ ರಕ್ತಕ್ಕೆ ಬಿಟ್ಟುಬಿಡುತ್ತದೆ, ತತ್ಪರಿಣಾಮ ಎರಡೂ ಕಿಡ್ನಿಗಳು ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ *ನೆಫ್ರೈಟೀಸ್* ಆಗಿ ಕಿಡ್ನಿ ಫೇಲ್ ನಲ್ಲಿ ಅಂತ್ಯವಾಗುತ್ತಿವೆ 😶

👉 ಶೀಘ್ರ ವಿಷಕಾರಿ ಪರಿಣಾಮ:
ಬಿಸಿ ಜೇನು
+ಬಿಸಿನೀರು
+ಬೇಸಿಗೆ ಕಾಲದಲ್ಲಿ 
+ಉಷ್ಣಪೀಡಿತ ಅವಸ್ಥೆಯಲ್ಲಿ 
"ಕುದಿಸಿದ ಜೇನನ್ನು ಕೊಟ್ಟರೆ, ಯಕೃತ್-ಕಿಡ್ನಿಯನ್ನೂ ಮೀರಿ ಹೃದಯದ/ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತತ್ಕ್ಷಣ ಸಂಕೋಚ ಮಾಡಿ ಹೃದಯ ಸ್ತಂಭನ ಮಾಡಿ ಕೊಲ್ಲುತ್ತದೆ.
 ಅಥವಾ 
ಮೆದುಳು/ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆಯನ್ನು ನಿಲ್ಲಿಸಿ ತಕ್ಷಣ ಕೊಂದುಹಾಕುತ್ತದೆ.

👉 ವೈಜ್ಞಾನಿಕ ವಿವರಣೆ:
ಬಿಸಿ ಜೇನಿಗೆ ಕೊಬ್ಬನ್ನು ಕರಗಿಸುವ ಪ್ರಭಲ ಶಕ್ತಿ ಇದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಆದರೆ ಜೀವ ಉಳಿಯಲು ಅಗತ್ಯವಾದ ಕೊಬ್ಬನ್ನೇ ಕರಗಿಸುತ್ತದೆ ಎಂದು ಅನೇಕರು ಅರಿಯರು.
ಇದೇ ಕಾರಣಕ್ಕೆ  *ಆಯುರ್ವೇದ ಓದದ, ಆ ವಿಜ್ಞಾನದ ಗಂಧವನ್ನೇ ಅರಿಯದ ಅನಾಮಧೇಯರೂ ಆಯುರ್ವೇದ ಸಲಹೆ ಮತ್ತು ಔಷಧ ಕೊಡುತ್ತಿದ್ದಾರೆ!*🤦‍♂

🙆‍♂ ಸಾವಿರಾರು ಜನರನ್ನು ಸೇರಿಸಿ ಯೋಗ ಹೇಳಿಕೊಡುವವರೂ ಯಾವುದೇ ಅಧ್ಯಯನ ಇಲ್ಲದೇ ಇದ್ದರೂ ಎಗ್ಗಿಲ್ಲದೇ ಸಲಹೆ ಕೊಡುತ್ತಿದ್ದಾರೆ, ಔಷಧಗಳನ್ನೂ ಕೊಡುತ್ತಿದ್ದಾರೆ(ಎಲ್ಲರೂ ಹಾಗಲ್ಲ, ಹಲವಾರು ಜನ ಯೋಗ್ಯ ಸ್ವ-ಅಧ್ಯಯನ, ಕುಟುಂಬ ಪರಂಪರೆಯಿಂದ ಶುದ್ಧ ಆಯುರ್ವೇದ ಪಾಲಿಸುವವರೂ ಇದ್ದಾರೆ).

💁‍♂ ತೂಕ ಕಳೆದುಕೊಳ್ಳಲು ಜೇನುತುಪ್ಪ+ಬಿಸಿನೀರನ್ನು ಎಂದಿಗೂ ಸೇವನೆ ಮಾಡದಿರಿ.
ಮತ್ತು
ಯಾರೇ ಹೇಳಲಿ ದಯಮಾಡಿ ಯಾವ ಆಯುರ್ವೇದ ಆಚಾರ್ಯರು ಎಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ ಎಂದು ರೆಫೆರೆನ್ಸ್ ಕೇಳಿ ತಿಳಿದುಕೊಳ್ಳುವುದನ್ನು ಮರೆಯದಿರಿ. ಇದು ನಮ್ಮೆಲ್ಲರ ಹಕ್ಕು, ಅಲ್ಲವೇ?

✍ ಕಂಡ ಸತ್ಯ:
ಹಿಮಾಚಲ ಪ್ರದೇಶದ, ಕಾಂಗ್ರಾದ ಅಥರ್ವ ಆಯುರ್ಧಾಮದ ಶಾಖೆಗೆ ಇತ್ತೀಚಿಗೆ ದಂಪತಿಗಳಿಬ್ಬರೂ "ಸಿರೋಸಿಸ್ ಆಫ್ ಲಿವರ್" ಸಮಸ್ಯೆಯಿಂದ ಬಂದಿದ್ದರು. ಅವರ ಆ ಸಿರೋಸಿಸ್ ಗೆ ಕಾರಣ ಹುಡುಕುತ್ತಾ ಹೋದರೆ ಕಂಡ ಸತ್ಯ ನಮ್ಮನ್ನೊಮ್ಮೆ ದಿಗ್ಭ್ರಾಂತರನ್ನಾಗಿಸಿತು.
ಜೇನು ಮತ್ತು ಬಿಸಿಬಿಸಿ ನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು! ಹಾಗಾಗಿ ಅವರ ಕೊಬ್ಬಿನ ಮೂಲ ಸ್ಥಾನ ಯಕೃತ್ ಒಣಗಿಹೋಗಿತ್ತು.!! ಲಿವರ್ ಸಿರೋಸಿಸ್ ಬಂದಿತ್ತು!!!

👉 ಪರಿಹಾರ?:
 • ತಕ್ಷಣವೇ ಅಪಾಯಕಾರಿ ಪದ್ಧತಿಯನ್ನು ನಿಲ್ಲಿಸುವುದು. 
 • ಕೇವಲ ಶುದ್ಧ ಜೇನನ್ನು ಸೇವಿಸಬಹುದು.  
• ಆಯುರ್ವೇದ ವೈದ್ಯರನ್ನು ಕಾಣುವುದು.
 • ಪ್ರಾಮಾಣೀಕರಿತ ಮುದ್ರೆ ಇರುವ ಜೇನನ್ನು ಬಿಸಿಮಾಡಿ ತಯಾರಿಸಿರುತ್ತಾರೆ, ಹಾಗಾಗಿ ಅದು ನಿಶಿದ್ಧ!!. 
• ಅದರಲ್ಲಿ ಹರಳುಗಟ್ಟಿದರೆ ಬಿಸಿನೀರಿನಲ್ಲಿ ಇಡಲು ತಿಳಿಸುತ್ತಾರೆ!!! ಅದೂ ನಿಶಿದ್ಧ. 
 • ನಾವೇ ಜೇನುಸಾಕಣೆ ಮಾಡುವುದು ಅಥವಾ ಸಾಕಣೆ ಕೇಂದ್ರಕ್ಕೆ ಹೋಗಿ ಕಣ್ಮುಂದೆ ಸಂಗ್ರಹಿಸುವುದು ಒಳ್ಳೆಯ ಉಪಾಯ.

       🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline