🦢 ಅಮೃತಾತ್ಮರೇ, ನಮಸ್ಕಾರ 🦢
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-94 ದಿನಾಂಕ: 11.07.2022
••••••••••••••••••••••••••••••••••••••
✍️: _ಇಂದಿನ ವಿಷಯ:__
"ಮನಸ್ಸೆಂಬ ಅದ್ಬುತ ವೈದ್ಯ" -- ಭಾಗ-1
••••••••••••••••••••••••••••••••••••••
"ಮನವರಿಯದ ವಿಜ್ಞಾನವಿಲ್ಲ!"
ಇದು ಓದು ಬಲ್ಲವನಿಗಿಂತ ಓದು ಬಾರದವನಿಗೆ ಬಹು ಬೇಗ ಅರ್ಥ ಆಗುತ್ತದೆ!!
ಅಚ್ಚರಿಯೇ?! ಸತ್ಯ ಅದೇ ಆಗಿದೆ...
••••••••••••••••••••••••••••••••••••••
ಆಯುರ್ವೇದ ಆಚಾರ್ಯ ವಾಗ್ಭಟರು ಹೇಳಿರುವ -- ದಶವಿಧ ಚಿಕಿತ್ಸಾ ಉಪಚಾರ ಪರೀಕ್ಷೆಗಳಲ್ಲಿ "ಸತ್ವ" ಎಂಬ ಒಂದು ಪ್ರಧಾನ ಅಂಶ ಇದೆ. ಅದೇ ವಿಷಯವನ್ನು ಈ ಸಂಚಿಕೆಯಲ್ಲಿ "ಮನವೆಂಬ ಅದ್ಭುತ ವೈದ್ಯ" ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳುತ್ತಿದ್ದೇವೆ.
••••••••••••••••••••••••••••••••••••••
ಸತ್ವ -- ಇದು ಮನಸ್ಸಿನ ಇನ್ನೊಂದು ಪರ್ಯಾಯ ಪದ. ಅದರ ಸಾಮರ್ಥ್ಯ ಎಷ್ಟು ಎಂದರೆ -- ವಿಷರಹಿತ ಹಾವು ಕಡಿಸಿಕೊಂಡು ಪ್ರಾಣವನ್ನು ಕಳೆದುಕೊಂಡವರ ರಕ್ತದಲ್ಲಿ ಸಾಯುವಷ್ಟು ಕಾರ್ಕೋಟಕ ವಿಷ ತುಂಬಿದ್ದು ಹಾವಲ್ಲ "ನಮ್ಮ ಮನಸ್ಸು."
••••••••••••••••••••••••••••••••••••••
ಬಹುಶಃ ನಾವು ಏನು ಹೇಳುತ್ತಿರುವೆವು ಎಂಬುದನ್ನು ತಾವುಗಳು ಗ್ರಹಿಸಿರಬಹುದು...
••••••••••••••••••••••••••••••••••••••
"ಅರ್ಥ ಮಾಡಿಕೊಳ್ಳಲು ಹೋದರೆ ಅದು ಸುಲಭದ ವಿಷಯವಲ್ಲ..."
ನಾವು ಕಲಿತದ್ದನ್ನೆಲ್ಲಾ ಮರೆತು ಸರಳಾತಿ ಸರಳರಾದರೆ ಮಾತ್ರ, ಶೇಕಡ 99ರಷ್ಟು ಕಾಯಿಲೆಗಳು ಇಲ್ಲವಾಗುತ್ತವೆ!!
••••••••••••••••••••••••••••••••••••••
ವ್ಯಕ್ತಿಯು ಹೆಚ್ಚು ಹೆಚ್ಚು ಸಾತ್ವಿಕವಾದಷ್ಟೂ, ಚಿಕಿತ್ಸೆಗೆ ಸ್ಪಷ್ಟವಾಗಿ ಸ್ಪಂದಿಸುತ್ತಾನೆ, ಮತ್ತೆ ಮತ್ತೆ ರೋಗ ಮತ್ತು ಚಿಕಿತ್ಸೆ ಎಂಬ ದುಷ್ಟ ವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳಲಾರ...
ಸತ್ವವಾನ್ ವ್ಯಕ್ತಿಯು --
• ತನ್ನ ರೋಗ ಲಕ್ಷಣಗಳನ್ನು ಸ್ಪಷ್ಟವಾಗಿ ಗುರುತಿಸುತ್ತಾನೆ
• ಚಿಕಿತ್ಸೆಯಲ್ಲಿ ಆಗುವ ಬದಲಾವಣೆಗಳನ್ನು ಯಥಾರ್ಥವಾಗಿ ಗ್ರಹಿಸುತ್ತಾನೆ
• ವೈದ್ಯ ನೀಡುವ ಚಿಕಿತ್ಸೆಗೆ ಬಹು ಸಹಕಾರಿಯಾಗಿ ನಿಲ್ಲುತ್ತಾನೆ
• ಪೂರ್ಣ ಯಶಸ್ವಿಯಾಗುತ್ತಾನೆ...
ಆತ್ಮೀಯರೇ, ಹೀಗೆ ಅಥರ್ವದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರು, ತಮ್ಮ ಸಾತ್ವಿಕ ಶ್ರದ್ಧೆಯಿಂದ ಗುಣವಾಗದ ಕಾಯಿಲೆಗಳಾದ --
• ಮಧುಮೇಹ
• ಹೈಪೋಥೈರಾಯ್ಡಿಸಮ್
• ಲಿವರ್ ಕಾಯಿಲೆಗಳು
• ಇಂಟಸ್ಟೀಷಿಯಲ್ ಲಂಗ್ಸ್ ಡಿಸೀಜ್
• ಅನೇಕ ರೀತಿಯ ಹೃದ್ರೋಗಗಳು
• ಥೆಲಸೀಮಿಯಾ
ಮುಂತಾದ ಅಪಾಯಕಾರಿ ಕಾಯಿಲೆಗಳಿಂದ ಹೊರಬಂದಿದ್ದಾರೆ...
ಗಮನಿಸಿ, ಅಂತಹದೇ ಔಷಧಗಳನ್ನು ಕೊಟ್ಟ ತಮೋ ಭೂಯಿಷ್ಟರಿಗೆ, ಶ್ರದ್ಧಾರಹಿತರಿಗೆ ಯಶಸ್ವಿ ಚಿಕಿತ್ಸೆ ಸಾಧ್ಯವಾಗಿಲ್ಲ... 🤔
ಹಾಗಾಗಿ ವಾಗ್ಭಟೋಕ್ತ "ಸತ್ವ ಪರೀಕ್ಷೆ" ಅಥವಾ "ಸತ್ವವೃದ್ಧಿ" ಚಿಕಿತ್ಸಾ ಸಂಗತಿಯಲ್ಲಿ ಅತ್ಯಂತ ಪ್ರಮುಖವಾಗಿ ಪರಿಣಾಮ ಬೀರುತ್ತಿದೆ.
ಆಸ್ಪತ್ರೆ ರಹಿತ ಜೀವನ ಏರ್ಪಡಲು, ಈ ಮನಸ್ಸು ಬಹು ಮುಖ್ಯ ಸವಾಲಾಗಿ ಅಥವಾ ಸಹಕಾರಿಯಾಗಿ ಪರಿಣಮಿಸುತ್ತಿದೆ.
ಒಟ್ಟಾರೆ ಏನನ್ನು ಹೇಳಬಹುದು ಎಂದರೆ -- "ಮನಸ್ಸು ಸರ್ವ ರೋಗಗಳ ಮತ್ತು ಚಿಕಿತ್ಸೆಯ ಮೂಲ."
ನಾಳೆಗೆ ಮುಂದುವರಿಯುತ್ತದೆ...
•••••••••••••••••••••••••••••••••••••••
🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
••••••••••••••••••••••••••••••••••••••
ಚಂದ್ರಯಾನ-3 ರ ನೌಕೆಯು ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿಯುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಸ್ರೋ ಈ ಕೆಳಗಿನ ಲಿಂಕ್ ಗಳ ಮೂಲಕ ನೇರ ಪ್ರ ಸಾರ.
ನೇರಪ್ರಸಾರದ ಲಿಂಕ್ ಗಳು ಹೀಗಿವೆ:
👉ISRO Website: https://www.isro.gov.in/
👉YouTube: https://youtube.com/watch?v=DLA_64yz8Ss
👉Facebook: https://facebook.com/ISRO
👉DD National TV
ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿ, ತನ್ನ ಸಂದೇಶದಲ್ಲಿ ದೇಶದ ಜನರಿಗೆ ಈ ರೀತಿಯಾಗಿ ತಿಳಿಸಿದೆ:
ಇಸ್ರೋ ಸಂದೇಶ..
ಭಾರತದ ಬಾಹ್ಯಾಕಾಶ ಅನ್ವೇಷಣೆಯ ಅಭಿಯಾನವು ಚಂದ್ರಯಾನ-3 ಮಿಷನ್ನಿನೊಂದಿಗೆ ಒಂದು ಗಮನಾರ್ಹ ಮೈಲಿಗಲ್ಲು ತಲುಪಿದೆ, ಇದು ಚಂದ್ರನ ಮೇಲ್ಮೈಗೆ ಮೃದುವಾಗಿ ಇಳಿಯಲು ಸಿದ್ಧವಾಗಿದೆ. ಈ ಸಾಧನೆ ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೈಗಾರಿಕೆಗಾಗಿ ಗಮನಾರ್ಹ ಹೆಜ್ಜೆ, ನಮ್ಮ ರಾಷ್ಟ್ರದ ಬಾಹ್ಯಾಕಾಶ ಅನ್ವೇಷಣೆಯ ಪ್ರಗತಿಯನ್ನು ಸೂಚಿಸುತ್ತದೆ.ಈ ಉತ್ಸುಕವಾಗಿ ನಿರೀಕ್ಷಿತ ಘಟನೆಯನ್ನು 2023 ರ ಆಗಸ್ಟ್ 23 ರಂದು 17:27 IST ರಿಂದ ಲೈವ್ ಪ್ರಸಾರ ಮಾಡಲಾಗುವುದು. ಲೈವ್ ಕವರೇಜ್ ನ್ನು ISRO ವೆಬ್ಸೈಟ್, YouTube, ISRO ರ Facebook ಪುಟ ಮತ್ತು DD ರಾಷ್ಟ್ರೀಯ ಟಿವಿ ಚಾನೆಲ್ಗಳಂತಹ ಹಲವಾರು ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುತ್ತದೆ.ಚಂದ್ರಯಾನ-3 ರ ಮೃದು ಇಳಿಯುವಿಕೆಯು ಒಂದು ಮಹತ್ವದ ಕ್ಷಣವಾಗಿದ್ದು ಅದು ಕುತೂಹಲವನ್ನು ಹುಟ್ಟುಹಾಕುವುದಲ್ಲದೆ ನಮ್ಮ ಯುವಜನರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಉಂಟುಮಾಡುತ್ತದೆ. ಇದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೌಢಿಮೆಯನ್ನು ನಾವು ಒಟ್ಟಾಗಿ ಆಚರಿಸುವಾಗ ಗಾಢ ಭಾವನೆಯ ಗೌರವ ಮತ್ತು ಏಕತೆಯನ್ನು ಉಂಟುಮಾಡುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನವೀಕರಣದ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡುತ್ತದೆ.ಈ ನಿಟ್ಟಿನಲ್ಲಿ, ರಾಷ್ಟ್ರದಾದ್ಯಂತದ ಎಲ್ಲಾ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಈ ಐತಿಹಾಸಿಕ ಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಲು ಆಹ್ವಾನಿಸಲಾಗಿದೆ. ಸಂಸ್ಥೆಗಳನ್ನು ನಿಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಈ ಘಟನೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ಚಂದ್ರಯಾನ-3 ರ ಮೃದು ಇಳಿಯುವಿಕೆಯ ಲೈವ್ ಸ್ಟ್ರೀಮಿಂಗ್ ಅನ್ನು ಶಾಲಾ ಆವರಣದಲ್ಲಿ ಆಯೋಜಿಸಲು ತಿಳಿಸಿದೆ.