✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Saturday, 18 July 2026

ಮಜ್ಜಿಗೆಯ ಮಾತು ಭಾಗ-01

🦢   ಅಮೃತಾತ್ಮರೇ, ನಮಸ್ಕಾರ   🦢

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
    ಸಂಚಿಕೆ-92, ದಿನಾಂಕ: 19.07.2026
•••••••••••••••••••••••••••••••••••••••
✍️: ಇಂದಿನ ವಿಷಯ:
  ಮಜ್ಜಿಗೆಯ ಮಾತು
•••••••••••••••••••••••••••••••••••••••
  "ಶಕ್ರಸ್ಯ ತಕ್ರ ದುರ್ಲಭಮ್" ಅಂದರೆ, ದೇವಲೋಕದ ಇಂದ್ರನಿಗೂ ಮಜ್ಜಿಗೆಯು ದುರ್ಲಭ; ಏಕೆಂದರೆ ಅಲ್ಲಿ‌ ಅಮೃತ ಇದೆಯಲ್ಲ, ಮತ್ತೆ ಮಜ್ಜಿಗೆ ಏಕೆ ಬೇಕು? 

  ಅಂದರೆ, "ಮಜ್ಜಿಗೆಯು ಭೂಲೋಕದ ಅಮೃತ " ಎಂದು ಹೇಳುವುದು ಶ್ಲೋಕದ ಉದ್ದೇಶ...
•••••••••••••••••••••••••••••••••••••••
  ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ.

  ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುವ ಕಾರಣ ಈ ಸಂಚಿಕೆ -- "ಮಜ್ಜಿಗೆಯ ಸರಿಯಾದ  ತಯಾರಿಕೆ ಮತ್ತು ಸೂಕ್ತ ರೀತಿಯ ಬಳಕೆಯಿಂದಾಗುವ ಸತ್ಪರಿಣಾಮಗಳನ್ನು ನೋಡೋಣ..."

• ಮಜ್ಜಿಗೆ ತಯಾರಿಸುವುದು ಹೇಗೆ?
ಉತ್ತರ:
  ಹುಳಿ ಇರದ, ಆಗತಾನೇ ಪೂರ್ಣರೂಪದಿಂದ ತಯಾರಾದ ಮೊಸರನ್ನು ಕೆನೆ ಸಮೇತ ಹದವಾಗಿ ಕಡೆಯಬೇಕು, ತೀರಾ ಅನಿವಾರ್ಯ ಎನ್ನುವವರು ಮಾತ್ರ ಮಿಕ್ಸರ್ ಬಳಸಿಯೂ ಮಜ್ಜಿಗೆ ತಯಾರಿಸಬಹುದು.

  ನಂತರ ತೆಳುವಲ್ಲದ ಒಂದು ಹದದಲ್ಲಿ ಜಿಡ್ಡು ಪ್ರತ್ಯೇಕಗೊಂಡು ಬೆಣ್ಣೆ ಬರುವ ತನಕ ಕಡೆದು, ಬೆಣ್ಣೆಯನ್ನು ಪ್ರತ್ಯೇಕಗೊಳಿಸಿದ ನಂತರ ಸೋಸಿದರೆ ಸಿಗುವ ಮಹೌಷಧಿ ರೂಪದ ಭೂಲೋಕದ ಅಮೃತವೇ ನಿಜವಾದ "ಮಜ್ಜಿಗೆ"

ಮಜ್ಜಿಗೆಗೆ ಎಕ್ಸ್‌ಪೈರಿ ಸಮಯ ಇದೆಯೇ!? ಹಾಗಿದ್ದಲ್ಲಿ ಬಳಸುವ ವಿಧಾನ:
  ಮೇಲೆ ಹೇಳಿದ ರೀತಿಯಲ್ಲಿ ಚೆನ್ನಾಗಿ ಕಡೆದ ಮಜ್ಜಿಗೆಯನ್ನು ಸೋಸಿದ ನಂತರ ಅದು ಕೇವಲ 45 ನಿಮಿಷಗಳ ಕಾಲಾವಧಿ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿರುತ್ತದೆ. ಅಂದರೆ, "ತಯಾರಾದ 45 ನಿಮಿಷಗಳಿಗೆ ಮಜ್ಜಿಗೆಯು ತನ್ನ ಅಮೃತತ್ವವನ್ನು ಅಥವಾ ಔಷಧೀಯ ಗುಣಗಳನ್ನು ಕಳೆದುಕೊಂಡು ಎಕ್ಸ್‌ಪೈರಿ ಆಗುತ್ತದೆ!!"
•••••••••••••••••••••••••••••••••••••••
ನಂತರ ಸೇವಿಸಿದರೆ ಏನಾಗುತ್ತದೆ?:
  ಕರುಳಿನ ಹೀರುವ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ. ಅಂದರೆ, ಆಚಾರ್ಯರು ಉದಾಹರಣೆ ಸಹಿತ ಹೀಗೆ ವಿವರಿಸುತ್ತಾರೆ - "ಗರಿಕೆ ಎಂಬ ಕಳೆಹುಲ್ಲು ಎಷ್ಟು ತೆಗೆದರೂ ಹೋಗದಿದ್ದರೆ, ಹುಳಿಯಾದ ಮಜ್ಜಿಗೆಯನ್ನು ಸುರಿದರೆ ಅದರ ಬೇರು ಸಂಪೂರ್ಣ ಒಣಗುತ್ತದೆ ಮತ್ತು ತನ್ನ ಆಹಾರ ಹೀರುವ ಸಾಮರ್ಥ್ಯವನ್ನು ಕಳೆದುಕೊಂಡು ಒಣಗಿಹೋಗುತ್ತದೆ!!" ಅಂದರೆ ಇಲ್ಲಿ ತಯಾರಾದ 3 ತಾಸುಗಳ ನಂತರದ ಮಜ್ಜಿಗೆಯ ಬಗ್ಗೆ ಹೇಳುತ್ತಾರೆ. ಇದನ್ನು ಯಾವುದೇ ಕಳೆನಾಶಕಕ್ಕಿಂತ ಹೆಚ್ವು ಸಮರ್ಥವಾಗಿ ನಮ್ಮ ರೈತರು ಬಳಸಬಹುದು. ಇನ್ನು ಮಾನವನ ಕರುಳುಗಳ ಗತಿ ಏನಾಗಬೇಡ? 🤔

  ಕೆಲವರು ಕೇಳಿದ್ದಾರೆ, ನಮ್ಮ ಮನೆಗಳಲ್ಲಿ ಹುಳಿ ಮಜ್ಜಿಗೆ ಊಟ ಮಾಡಿಯೇ ಜೀವಿಸಿದ್ದೇವೆ, ಏನೂ ಆಗಿಲ್ಲ...?! ಎಂದು... ಹೌದು, ಬಹುಶಃ ನಿಮ್ಮ ರಕ್ತಹೀನತೆ ಕ್ಯಾಲ್ಸಿಯಂ ಕೊರತೆ... ಮುಂತಾದವುಗಳಿಗೆ ಇದೇ ಕಾರಣ ಇರಬಹುದು ಗಮನಿಸಿ, ಇಲ್ಲ ಎಂದಾದರೆ ಸಂಧಿಗಳ ನೋವು, ಮಾಂಸಖಂಡಗಳ ನೋವಿಗೆ ಸಹ ಕಾರಣ ಆಗಿರಬಹುದು ಗಮನಿಸಿ ನೋಡಿ, ಏಕೆಂದರೆ ನಮ್ಮ ಗಮನಕ್ಕೆ ಬಂದಂತೆ ಇಂತವರ 'ಯೂರಿಕ್ ಆಮ್ಲ' ಅತಿಯಾಗಿ ಮತ್ತು ಶಾಶ್ವತವಾಗಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಮತ್ತು ಚಿಕಿತ್ಸೆಯಲ್ಲಿ ಸ್ಪಂದಿಸುವ ಅವರ ಸಾಮರ್ಥ್ಯ ಸಾಕಷ್ಟು ಕುಂಠಿತವಾಗಿರುವುದನ್ನೂ ಕಂಡಿದ್ದೇವೆ.

  ನಾಳೆಗೆ ಮುಂದುವರಿಯುತ್ತದೆ...

•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••

Monday, 29 June 2026

"ಮನಸ್ಸೆಂಬ ಅದ್ಬುತ ವೈದ್ಯ" -- ಭಾಗ-1

🦢   ಅಮೃತಾತ್ಮರೇ, ನಮಸ್ಕಾರ   🦢

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

    ಸಂಚಿಕೆ-94 ದಿನಾಂಕ: 11.07.2022
••••••••••••••••••••••••••••••••••••••
✍️: _ಇಂದಿನ ವಿಷಯ:__
  "ಮನಸ್ಸೆಂಬ ಅದ್ಬುತ ವೈದ್ಯ" -- ಭಾಗ-1
••••••••••••••••••••••••••••••••••••••
  "ಮನವರಿಯದ ವಿಜ್ಞಾನವಿಲ್ಲ!"

  ಇದು ಓದು ಬಲ್ಲವನಿಗಿಂತ ಓದು ಬಾರದವನಿಗೆ ಬಹು ಬೇಗ ಅರ್ಥ ಆಗುತ್ತದೆ!!

  ಅಚ್ಚರಿಯೇ?! ಸತ್ಯ ಅದೇ ಆಗಿದೆ...
••••••••••••••••••••••••••••••••••••••
  ಆಯುರ್ವೇದ ಆಚಾರ್ಯ ವಾಗ್ಭಟರು ಹೇಳಿರುವ -- ದಶವಿಧ ಚಿಕಿತ್ಸಾ ಉಪಚಾರ ಪರೀಕ್ಷೆಗಳಲ್ಲಿ "ಸತ್ವ" ಎಂಬ ಒಂದು ಪ್ರಧಾನ ಅಂಶ ಇದೆ. ಅದೇ ವಿಷಯವನ್ನು ಈ ಸಂಚಿಕೆಯಲ್ಲಿ  "ಮನವೆಂಬ ಅದ್ಭುತ ವೈದ್ಯ" ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳುತ್ತಿದ್ದೇವೆ.
••••••••••••••••••••••••••••••••••••••
  ಸತ್ವ -- ಇದು ಮನಸ್ಸಿನ ಇನ್ನೊಂದು ಪರ್ಯಾಯ ಪದ. ಅದರ ಸಾಮರ್ಥ್ಯ ಎಷ್ಟು ಎಂದರೆ -- ವಿಷರಹಿತ ಹಾವು ಕಡಿಸಿಕೊಂಡು ಪ್ರಾಣವನ್ನು ಕಳೆದುಕೊಂಡವರ ರಕ್ತದಲ್ಲಿ ಸಾಯುವಷ್ಟು ಕಾರ್ಕೋಟಕ ವಿಷ ತುಂಬಿದ್ದು ಹಾವಲ್ಲ "ನಮ್ಮ ಮನಸ್ಸು."
••••••••••••••••••••••••••••••••••••••
  ಬಹುಶಃ ನಾವು ಏನು ಹೇಳುತ್ತಿರುವೆವು ಎಂಬುದನ್ನು ತಾವುಗಳು ಗ್ರಹಿಸಿರಬಹುದು...
••••••••••••••••••••••••••••••••••••••
  "ಅರ್ಥ ಮಾಡಿಕೊಳ್ಳಲು ಹೋದರೆ ಅದು ಸುಲಭದ ವಿಷಯವಲ್ಲ..."

  ನಾವು ಕಲಿತದ್ದನ್ನೆಲ್ಲಾ ಮರೆತು ಸರಳಾತಿ ಸರಳರಾದರೆ ಮಾತ್ರ, ಶೇಕಡ 99ರಷ್ಟು ಕಾಯಿಲೆಗಳು ಇಲ್ಲವಾಗುತ್ತವೆ!!
••••••••••••••••••••••••••••••••••••••
  ವ್ಯಕ್ತಿಯು ಹೆಚ್ಚು ಹೆಚ್ಚು ಸಾತ್ವಿಕವಾದಷ್ಟೂ, ಚಿಕಿತ್ಸೆಗೆ ಸ್ಪಷ್ಟವಾಗಿ ಸ್ಪಂದಿಸುತ್ತಾನೆ, ಮತ್ತೆ ಮತ್ತೆ ರೋಗ ಮತ್ತು ಚಿಕಿತ್ಸೆ ಎಂಬ ದುಷ್ಟ ವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳಲಾರ...

ಸತ್ವವಾನ್ ವ್ಯಕ್ತಿಯು --
ತನ್ನ ರೋಗ ಲಕ್ಷಣಗಳನ್ನು ಸ್ಪಷ್ಟವಾಗಿ ಗುರುತಿಸುತ್ತಾನೆ
ಚಿಕಿತ್ಸೆಯಲ್ಲಿ ಆಗುವ ಬದಲಾವಣೆಗಳನ್ನು ಯಥಾರ್ಥವಾಗಿ ಗ್ರಹಿಸುತ್ತಾನೆ
ವೈದ್ಯ ನೀಡುವ ಚಿಕಿತ್ಸೆಗೆ ಬಹು ಸಹಕಾರಿಯಾಗಿ ನಿಲ್ಲುತ್ತಾನೆ
ಪೂರ್ಣ ಯಶಸ್ವಿಯಾಗುತ್ತಾನೆ...

  ಆತ್ಮೀಯರೇ, ಹೀಗೆ ಅಥರ್ವದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರು, ತಮ್ಮ ಸಾತ್ವಿಕ ಶ್ರದ್ಧೆಯಿಂದ ಗುಣವಾಗದ ಕಾಯಿಲೆಗಳಾದ --
ಮಧುಮೇಹ
ಹೈಪೋಥೈರಾಯ್ಡಿಸಮ್
ಲಿವರ್ ಕಾಯಿಲೆಗಳು
ಇಂಟಸ್ಟೀಷಿಯಲ್ ಲಂಗ್ಸ್ ಡಿಸೀಜ್
ಅನೇಕ ರೀತಿಯ ಹೃದ್ರೋಗಗಳು
ಥೆಲಸೀಮಿಯಾ
  ಮುಂತಾದ ಅಪಾಯಕಾರಿ ಕಾಯಿಲೆಗಳಿಂದ ಹೊರಬಂದಿದ್ದಾರೆ...

  ಗಮನಿಸಿ, ಅಂತಹದೇ ಔಷಧಗಳನ್ನು ಕೊಟ್ಟ ತಮೋ ಭೂಯಿಷ್ಟರಿಗೆ, ಶ್ರದ್ಧಾರಹಿತರಿಗೆ ಯಶಸ್ವಿ ಚಿಕಿತ್ಸೆ ಸಾಧ್ಯವಾಗಿಲ್ಲ... 🤔

  ಹಾಗಾಗಿ ವಾಗ್ಭಟೋಕ್ತ "ಸತ್ವ ಪರೀಕ್ಷೆ" ಅಥವಾ "ಸತ್ವವೃದ್ಧಿ" ಚಿಕಿತ್ಸಾ ಸಂಗತಿಯಲ್ಲಿ ಅತ್ಯಂತ ಪ್ರಮುಖವಾಗಿ ಪರಿಣಾಮ ಬೀರುತ್ತಿದೆ.

  ಆಸ್ಪತ್ರೆ ರಹಿತ ಜೀವನ ಏರ್ಪಡಲು, ಈ ಮನಸ್ಸು ಬಹು ಮುಖ್ಯ ಸವಾಲಾಗಿ ಅಥವಾ ಸಹಕಾರಿಯಾಗಿ ಪರಿಣಮಿಸುತ್ತಿದೆ.

  ಒಟ್ಟಾರೆ ಏನನ್ನು ಹೇಳಬಹುದು ಎಂದರೆ -- "ಮನಸ್ಸು ಸರ್ವ ರೋಗಗಳ ಮತ್ತು ಚಿಕಿತ್ಸೆಯ ಮೂಲ."


  ನಾಳೆಗೆ ಮುಂದುವರಿಯುತ್ತದೆ...
•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
••••••••••••••••••••••••••••••••••••••

ಮಜ್ಜಿಗೆಯ ಮಾತು ಭಾಗ-01

🦢   ಅಮೃತಾತ್ಮರೇ, ನಮಸ್ಕಾರ   🦢   ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ     ಸಂಚಿಕೆ-92, ದಿನಾಂಕ: 19.07.2026 ••••••••••••••••••••••••••••••••••••••• ...