✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 28 February 2021

*ಮಾನವನ ಅನ್ನಕಾಲಗಳೆಷ್ಟು*(ಒಂದು ಅನ್ನಕಾಲ= ಒಂದು ಬಾರಿ ಸೇವಿಸುವ ಆಹಾರ)*ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸಬೇಕು?*

*ಅಮೃತಾತ್ಮರೇ,*

*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-34
01.03.2021

*ಮಾನವನ ಅನ್ನಕಾಲಗಳೆಷ್ಟು*
(ಒಂದು ಅನ್ನಕಾಲ= ಒಂದು ಬಾರಿ ಸೇವಿಸುವ ಆಹಾರ)
*ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸಬೇಕು?*
____

*ತಸ್ಮಾತ್..............................ಕಾಲಯೋಃ ಉಭಯೋಃ ಅಪಿ || ಸಮಾಗ್ನೇ ತಥಾ ಆಹಾರ ದೇಯಃ..............|*
-ಸುಶ್ರುತ ಸಂಹಿತಾ

*ಕ್ಷುತ್ ಸಂಭವತಿ.............ಸೋ ಅನ್ನಕಾಲ.....||*
-ಭಾವಪ್ರಕಾಶ ನಿಘಂಟು

*ಏಕ ಕಾಲಂ.......ದುರ್ಬಲಾಗ್ನಿ......||*
-ಸುಶ್ರುತ ಸಂಹಿತಾ

*

ಸಾಮಾನ್ಯವಾಗಿ ಎಲ್ಲರಿಗೂ *ಉಭಯ ಅನ್ನ ಕಾಲ*
ಬಾಲಕರಿಗೆ, ವೃದ್ಧರಿಗೆ, ರೋಗಿಗಳಿಗೆ *ಅನೇಕ ಅನ್ನಕಾಲ*
ಅಜೀರ್ಣ ಇರುವಾಗ *ಒಂದೇ ಅನ್ನಕಾಲ*

*ಉಭಯ ಅನ್ನಕಾಲ:*
ಆರೋಗ್ಯ ಬೇಕೆಂದು ಬಯಸುವ ಯಾರೇ ಆದರೂ ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸಬೇಕು. 3-4 ಬಾರಿ ಸೇವನೆ ರೋಗ ತರುವಂತಹುದು, ಸರ್ವದಾ ನಿಷಿದ್ಧ.
ಮಾನವನ ಆಹಾರ ಸಾರವುಳ್ಳದ್ದು, ಪ್ರಾಣಿಗಳು ಗಿಡ ಮರಗಳ ಎಲೆ ದಂಟುಗಳನ್ನು ತಿನ್ನುವುದರಿಂದ ಅವು ಎಷ್ಟು ಬಾರಿ ತಿಂದರೂ ರೋಗ ಬರುವುದಿಲ್ಲ. ಧಾನ್ಯಗಳು, ಹಣ್ಣು, ಗಡ್ಡೆ ಗೆಣಸು ಮುಂತಾದವುಗಳಲ್ಲಿ ಆಯಾ ಗಿಡದ ಸಂವೃದ್ದ ಸಾರ ಶಕ್ತಿ ತುಂಬಿರುವ ಕಾರಣ, ಪ್ರಾಣಿಗಳ ಹೋಲಿಕೆಯಲ್ಲಿ ಮಾನವನ ಆಹಾರದ ಪ್ರಮಾಣವೂ ಮತ್ತು ಸೇವನಾ ಕಾಲವೂ ಕಡಿಮೆ ಇರಲೇಬೇಕು.

*ಎರೆಡು ಅನ್ನಕಾಲದ ಲಾಭ ಏನು?*
1) ಶಕ್ತಿಸಾರ ಪದಾರ್ಥ ಸೇವನೆಯ ಕಾರಣವೇ ಮಾನವ ಶರೀರ ಚಿಕ್ಕದಾಗಿದ್ದರೂ, ಬುದ್ಧಿ ಪ್ರಖರವಾಗಿ ಇಡೀ ವಿಶ್ವವನ್ನೇ ತಿಳಿಯುತ್ತಾನೆ ಮತ್ತು ಆಳುತ್ತಾನೆ. ಅತಿ ಪ್ರಮಾಣದ ಆಹಾರ ಸೇವಿಸುವವರ ಬೌದ್ಧಿಕ ಮಟ್ಟ ಸಾಮಾನ್ಯವಾಗಿ ಕಡಿಮೆ(rare exception are there). ಶರೀರ ದೃಢ ಮತ್ತು ಬುದ್ಧಿ ಚುರುಕಾಗಿರಬೇಕೇ? ದಿನಕ್ಕೆ ಎರೆಡುಬಾರಿ ಆಹಾರ ಸೇವಿಸಿ.

2) ಸಾರ ಭಾಗ ಸೇವನೆಯಿಂದ ಸತ್ವಗುಣ ವರ್ಧಿಸುತ್ತದೆ. ಕೇವಲ ಸೊಪ್ಪು-ದಂಟು ತಿನ್ನುವ ಪ್ರಾಣಿಗಳು ತಮೋಪ್ರಧಾನ(ಹಸುವನ್ನು ಹೊರತುಪಡಿಸಿ), ಮಾಂಸಾಹಾರ ಪ್ರಾಣಿಗಳು ರಜೋಪ್ರಧಾನ. ಆದರೆ ಮಾನವ ಅತಿ ಪ್ರಮಾಣ, ಪದೇ ಪದೇ ಆಹಾರ ಸೇವನೆ ಮಾಡಿದರೆ ರಜೋ/ತಮೋಗುಣ ವೃದ್ಧಿಯಾಗುತ್ತದೆ.

3) ಮಾನವನ ಜನ್ಮೋದ್ದೇಶವೇ ಆತ್ಮ ಸಾಕ್ಷಾತ್ಕಾರ ಮತ್ತು ಜಗತ್ತಿಗೆ ಹಿತ ಉಂಟುಮಾಡುವುದು. ಇವೆರಡೂ ಸತ್ವಗುಣ ಅಥವಾ ಗುಣರಹಿತ ಅವಸ್ಥೆಯಿಂದ ಮಾತ್ರ ಸಾಧ್ಯ.

*ಅನೇಕ ಅನ್ನಕಾಲ:*
ಬಾಲ್ಯಾವಸ್ಥೆ ಮುಗಿವವರೆಗೆ, ವೃದ್ಧಾವಸ್ಥೆ ಪ್ರಾಪ್ತವಾದ ನಂತರ, ರೋಗಾವಸ್ಥೆಯಲ್ಲಿ ಮತ್ತು ಶಾರೀರಿಕ ಶ್ರಮದ ಕೆಲಸ ಮಾಡಿದಾಗಲೂ ಸೇವಿಸಿದ ಆಹಾರ ಜಠರದಲ್ಲಿಯೂ ಜೀರ್ಣಿಸಿ, ರಕ್ತದಲ್ಲೂ ಜೀರ್ಣಿಸಿ, ಮಲ(ಬೆವರು, ಮೂತ್ರ, ಮಲ) ಬಹಿರ್ಗಮನವಾದರೆ ಹಸಿಉಂಟಾಗುತ್ತದೆ, ಆಗ ಅಕಾಲವಾದರೂ ಅನ್ನಕಾಲ ಎಂದು ಪರಿಗಣಿಸಿ ಆಹಾರ ಸೇವನೆ ಮಾಡಬೇಕು.
ಉದಾ: ತೀವ್ರ ಜ್ವರ, ತೀವ್ರ ನೋವುಗಳು, ಮಧುಮೇಹ ಮುಂತಾದ ಅವಸ್ಥೆಗಳಲ್ಲಿ, ನಿರ್ದಿಷ್ಟ ಅನ್ನ ಕಾಲ ಇಲ್ಲ, ರಕ್ತ ಹಸಿದರೆ, ಬೆವರಿದರೆ ಯಾವಗ ಬೇಕಾದರೂ ಆಹಾರ ಕೊಡಬೇಕು.
(ಎಷ್ಟು ಚನ್ನಾಗಿ ವಿವರಿಸಿದೆ ಆಯುರ್ವೇದ)


ಬಾಲ್ಯ ಮುಗಿದಮೇಲೂ ಹಾಗೆಯೇ ರೋಗಿಗೆ ರೋಗ ಪರಿಹಾರ ಆದನಂತರವೂ ಮತ್ತು ಶಾರೀರಿಕ ಶ್ರಮವಿಲ್ಲದ ದಿನವೂ ಕೇವಲ ಎರೆಡು ಅನ್ನಕಾಲಕ್ಕೆ ಮರಳಬೇಕು.

*ಏಕ‌ಅನ್ನಕಾಲ:*
ಜಠರ, ರಕ್ತದಲ್ಲಿ ಆಹಾರ ಜೀರ್ಣವಾಗದೇ ಉಳಿದರೆ ಹಸಿವೆಯೇ ಆಗದು(ಸಂಕಟ ಆಗಬಹುದು ಅದು ಹಸಿವಲ್ಲ, ಸಂಕಟ ಆದಾಗ ಕೇವಲ ಒಂದು ಲೋಟ ನೀರು, ಸ್ವಲ್ಪ ವ್ಯಾಯಾಮ ಮಾಡಿದರೆ ಸಾಕು) ಆಗ ಜೀರ್ಣಕ್ರಿಯೆ ಹೆಚ್ಚಿಸಲು, ಹಸಿವುಂಟುಮಾಡಲು ಉಪವಾಸ ಮಾಡಬೇಕು, ಅಂದರೆ ಒಂದು ಅನ್ನಕಾಲ ಮಾತ್ರ ಆಹಾರ ಸೇವಿಸಿ ಶೀಘ್ರವಾಗಿ ಅಗ್ನಿಯನ್ನು ವರ್ಧಿಸಬೇಕು.

*ಇವುಗಳ ಪಾಲನೆ ಸರ್ವಕಾಲಕ್ಕೂ ಆರೋಗ್ಯದಿಂದ ಇರಲು ಸಹಾಯಕ*


*ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ.*

*ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?*

By
ಹೆಚ್.ಬಿ.ಮೇಟಿ

Friday 26 February 2021

ರಾತ್ರಿ ಆಹಾರ ಸೇವನೆ ವಿಧಾನ ಸರಿಯಾದರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು.

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
27.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-33
••••••••••••••
✍️: ಇಂದಿನ ವಿಷಯ:
ರಾತ್ರಿ ಆಹಾರ ಸೇವನೆ ವಿಧಾನ ಸರಿಯಾದರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು.
•••••••••••••••••••••••••••••••••••••••••

📜 ರಾತ್ರೌ ಚ  ಕುರ್ಯಾತ್ ಪ್ರಥಮ  ಪ್ರಹರಾಂತರೇ |
ಕಿಂಚಿತ್ ಊನಂ ಸಮಶ್ನೀಯಾತ್ ದುರ್ಜರಂ ತತ್ರ ವರ್ಜಯೇತ್ ||
- ಭಾವಪ್ರಕಾಶ ನಿಘಂಟು

💠 ರಾತ್ರಿ ಆಹಾರದ ಸಮಯ, ಗುಣ ಮತ್ತು ಪ್ರಮಾಣ:
ರಾತ್ರಿ ಆರಂಭದ ಪ್ರಥಮ ಪ್ರಹರದೊಳಗೆ ಅಂದರೆ ಸೂರ್ಯಾಸ್ತದ ಒಂದೂವರೆ ಗಂಟೆಯೊಳಗೆ ಊಟ ಮುಗಿಸಬೇಕು.

ಜೀರ್ಣಕ್ಕೆ ಕಷ್ಟವಾಗುವ ಗುಣ ಇರುವ ಅಂಟುಳ್ಳ ಪದಾರ್ಥಗಳಿಂದ(ಮೈದಾ, ಉದ್ದು, ಗೋಧಿ, ಸಕ್ಕರೆ, ಎಣ್ಣೆ....) ತಯಾರಿಸಿದ ಆಹಾರ ಬಿಟ್ಟು, ಸುಖವಾಗಿ ಜೀರ್ಣಿಸುವ ಲಘು ಆಹಾರಗಳೇ ರಾತ್ರಿ ಭೋಜನಕ್ಕೆ ಶ್ರೇಷ್ಠ.

ರಾತ್ರಿ ಆಹಾರದ ಪ್ರಮಾಣವನ್ನೂ ಸಹ ಕಿಂಚಿತ್ ಊನ(ಕಡಿಮೆ) ಪ್ರಮಾಣದಲ್ಲಿ ಸೇವಿಸಬೇಕು.

💠 ಆಹಾರ ಸೇವನೆಯ ನಂತರ-
📜 ಭುಕ್ತ್ವಾ ರಾಜವತ್ ಆಸೀತ ಯಾವತ್ ಅನ್ನ ಕ್ಲಮೋ ಗತಃ|
ತತಃ ಪಾದಶತಂ ಗತ್ವಾ ವಾಮಪಾರ್ಶ್ವೇ ತು ಸಂವಿಶೇತ್||......
-ಸುಶ್ರುತ ಸಂಹಿತಾ

★ ಊಟ ಮಾಡಿದ ನಂತರ ಬರುವ ಆಯಾಸ(ಕ್ಲಮ) ಕಡಿಮೆಯಾಗುವವರೆಗೆ, ರಾಜನಂತೆ ಆರಾಮವಾಗಿ ಕುಳಿತಿರಬೇಕು. ಮನಸ್ಸಿಗೆ ಪ್ರಿಯವಾದ ಮಾತುಗಳನ್ನಾಡಬೇಕು, ಹಿತಕರವಾದ ನೋಟ ಸ್ಪರ್ಶಾದಿಗಳಿಂದ ಕುಳಿತು, ನಂತರ-
ನೂರು ಹೆಜ್ಜೆಗಳಷ್ಟು ನಡೆದು 
ಎಡಗಡೆ ಮಗ್ಗುಲಾಗಿ ಮಲಗಿಬಿಡಬೇಕು.

💠 ನಾವು ಎಷ್ಟು ಜನ ಹೀಗೆ ಮಾಡುತ್ತಿದ್ದೇವೆ? 
★ ಬಹುತೇಕ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ ಮತ್ತು ಚಿರಕಾಲ ಇರುವ ರೋಗಗಳಿಗೆ ತುತ್ತಾಗಿದ್ದೇವೆ.

💠 ತಡರಾತ್ರಿ ಊಟ:
★ ರೋಗಕಾರಕ ಸೂಕ್ಷ್ಮಜೀವಿಗಳು(Micro organism) ಕ್ರಿಯಾಶೀಲವಾಗಿರುವ ರಾತ್ರಿ 9-12ರ ನಡುವಿನ ಕಾಲವನ್ನು "ಭೂತವೇಲ ಕಾಲ" ಎನ್ನುತ್ತಾರೆ. ಈ ಸಮಯದ ಭೋಜನದಿಂದ ಶರೀರದಲ್ಲಿ ರೋಗಕಾರಕ ಅಂಶವೇ ಹೆಚ್ಚುತ್ತದೆ.

💠 ಜೀರ್ಣಕ್ಕೆ ಕಷ್ಟವಾಗುವ ಭೂರಿ ಭೋಜನ: ಮತ್ತು ಭಾರೀ ಭೊಜನ:
★ ರಾತ್ರಿ ಚಟುವಟಿಕೆ ಇಲ್ಲದ ಶರೀರಕ್ಕೆ ಭೂರೀ ಭೋಜನವನ್ನೂ(ಜೀರ್ಣಕ್ಕೆ ಸುಲಭವಲ್ಲದೆ ಅಂಟುಳ್ಳ ಆಹಾರ) ಮತ್ತು ಭಾರೀ ಪ್ರಮಾಣದ ಭೋಜನವನ್ನೂ ಮಾಡಿಸಿದರೆ,  ಆಮವಿಷ(ರೋಗ ಪೋಷಕ ಅಂಶ) ಹೆಚ್ಚಿ ಧಾತುಗಳನ್ನು ಬಲಹೀನಗೊಳಿಸಿ, ರೋಗಕ್ಕೆ ತಳ್ಳುತ್ತದೆ.
ಆದರೆ ಇಂದಿನ ಜಗದಲ್ಲಿ ರಾತ್ರಿಯೇ ನಿಧಾನವಾಗಿ ಊಟಮಾಡಲು ಸಮಯ ಸಿಗುತ್ತದೆಂಬ ಕಾರಣಕ್ಕೆ ಹೊಟ್ಟೆತುಂಬ ತಿಂದು ರೋಗಕ್ಕೆ ಸಹಕರಿಸಿ ಮಲಗುತ್ತೇವೆ.

💠 ನೆಮ್ಮದಿಯಿಂದ ಕುಳಿತುಕೊಳ್ಳಿ:
★ ರಾತ್ರಿ ಭೋಜನದ ನಂತರ ಮನದಲ್ಲಿ ಯಾವ ಯೋಚನೆಗಳಿಲ್ಲದೇ, ಮಕ್ಕಳ, ಮೊಮ್ಮಕ್ಕಳ ಮಧುರ ಮಾತು, ನೋಟ, ಸ್ಪರ್ಶಗಳಿಂದ ಪರಸ್ಪರರು ಮುದಗೊಳ್ಳಬೇಕು, ಹೀಗೆ ಕ್ಲಮ(ಏನನ್ನಾದರೂ ತಿಂದ ನಂತರ ಬರುವ ಆಯಾಸ) ನಿವಾರಣೆ ಆಗುವವರೆಗೆ ಇದ್ದರೆ- ರಾತ್ರಿ ಚಟುವಟಿಕೆ ಇಲ್ಲದಿದ್ದರೂ ಮನಸ್ಸಿನ ನೆಮ್ಮದಿಯೇ ಆಹಾರವನ್ನು ಜೀರ್ಣ ಮಾಡುತ್ತದೆ. (ಉದಾ: ಶಿಶುಗಳು ರಾತ್ರಿ ಪದೇ ಪದೇ ಹಾಲು ಕುಡಿಯುತ್ತಿದ್ದರೂ, ನೆಮ್ಮದಿಯ ಕಾರಣ ಶಿಶುಗಳಿಗೆ ಅಜೀರ್ಣವಾಗದು.) 
ನಂತರ

💠 ಎಡಮಗ್ಗುಲಾಗಿ ಮಲಗಿ:
★ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಜಠರ ಎಡಕ್ಕೆ ಬಾಗಿದ ಚೀಲದಂತೆ ಇದೆ, ಬಲಕ್ಕೆ ತಿರುಗಿ ಮಲಗಿದರೆ ಆಹಾರದ ಒತ್ತಡ ಅಜೀರ್ಣಕ್ಕೆ ಕಾರಣವಾಗುತ್ತದೆ.
ಹಾಗೆಯೇ
ಜೀರ್ಣಗೊಂಡ ಆಹಾರ ರಸ ರಕ್ತದೊಂದಿಗೆ ಬಲಕ್ಕೆ ಇರುವ ಯಕೃತ್ತಿಗೆ ಹೋಗಿ, ನಂತರ ತಳ್ಳುವ ಬಲ(pumping force ಇಲ್ಲದೇ) ಇಲ್ಲದೇ ರಕ್ತವು ಹೃದಯಕ್ಕೆ ಬರಬೇಕು ಇದು ಬಹಳ ಕಷ್ಟಕರ, ಸಾಕಷ್ಟು ಅಜೀರ್ಣಕ್ಕೆ ಮತ್ತು ರಕ್ತದುಷ್ಟಿಗೆ ಈ ಚಿಕ್ಕ ಅಂಶವೇ ಕಾರಣ. ಹಗಲಲ್ಲಿ ಕಾಲಿನ ಚಲನೆಯಿಂದ ನಮ್ಮ ಮೀನುಖಂಡಗಳ ಸ್ನಾಯುಗಳು(calf muscles) ರಕ್ತವನ್ನು ತಳ್ಳುತ್ತಿರುತ್ತವೆ, ಆಗ ರಕ್ತ ಚಲನೆಗೆ ಈ ಕಷ್ಟಬಾರದು. 

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಿಸಿದ ಸನ್ 2020-21 ನೇ ಸಾಲಿನ ಗಣಿತ ವಿಷಯದ ಮಾದರಿ ಪ್ರಶ್ನೆ ಪತ್ರಿಕೆಗಳ ಉತ್ತರ ಪತ್ರಿಕೆಗಳು.


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ರ ಉತ್ತರ ಪತ್ರಿಕೆ




Thursday 25 February 2021

ಮಲಬದ್ಧತೆಗೆ ಔಷಧ ರಹಿತ ಶಾಶ್ವತ ಪರಿಹಾರ.

🙏ಅಮೃತಾತ್ಮರೇ ನಮಸ್ಕಾರ 🙏
 🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
26.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-32
••••••••••••••
✍️: ಇಂದಿನ ವಿಷಯ:
ಮಲಬದ್ಧತೆಗೆ ಔಷಧ ರಹಿತ ಶಾಶ್ವತ ಪರಿಹಾರ.
•••••••••••••••••••••••••••••••••••••••••

👉 ಮಲಬದ್ಧತೆಯ ಮೂಲ ಕಾರಣ ತಿಳಿದರೆ ಪರಿಹಾರ ಸುಲಭ.

📜 ಅಪಕ್ವಂ ಧಾರಯತಿ, ಪಕ್ವಂ ಸೃಜತಿ ಪಾರ್ಶ್ವತಃ||

🔅 ನಮ್ಮ ಕರುಳಿನ ಸಹಜ ಗುಣ:
• ಇನ್ನೂ ಪೂರ್ಣ ಜೀರ್ಣಗೊಂಡಿರದ ಆಹಾರವನ್ನು ಹಿಡಿದಿಟ್ಟುಕೊಳ್ಳುತ್ತದೆ.
• ಸಂಪೂರ್ಣ ಜೀರ್ಣಗೊಂಡ ಆಹಾರವನ್ನು ಹೊರಕ್ಕೆ ತಳ್ಳುತ್ತದೆ. 

🔅 ಮಲ ನಿಷ್ಕ್ರಮಣ, ಪ್ರಕ್ರಿಯೆ:
ಆಹಾರ ಪೂರ್ಣ ಜೀರ್ಣಗೊಂಡರೆ ನಿಷ್ಕ್ರಮಣ, ಇಲ್ಲದಿದ್ದರೆ
ಮಲಬದ್ಧತೆ.

ಜೀವಕೋಶಗಳ ಹಂತದಲ್ಲಿಯೂ ಇದೇ ವ್ಯವಸ್ಥೆ ಇದೆ-
ನಮ್ಮ ಶರೀರದ ಯಾವುದೇ ಜೀವಕೋಶವೂ ತನ್ನೆದುರು ಬಂದ ಆಹಾರದ ಕಣವು *ಪಾಚಕಾಗ್ನಿ, ಧಾತ್ವಾಗ್ನಿಗಳ* ಸಂಪರ್ಕದಿಂದ ಸಂಪೂರ್ಣ ವಿಭಜನೆಗೊಂಡಿದ್ದರೆ *ಸಮಾನವಾಯು* ಪ್ರಭಾವದಿಂದ ಸಾರವನ್ನು ತಕ್ಷಣ ಹೀರಿಕೊಂಡು ಮಲವನ್ನು ಬಿಟ್ಟುಬಿಡುತ್ತದೆ. 
ಹೀಗೆ ತ್ಯಾಜ್ಯವಾಗಿ ಬಂದ ಮಲವನ್ನು *ಪ್ರಾಣವಾಯುವಿನ* ಸಂಜ್ಞೆಯಿಂದ ಮತ್ತು *ಉದಾನ ವಾತ* ದ ಬಲದಿಂದ *ಅಪಾನವಾಯುವು* ಹೊರ ತಳ್ಳುತ್ತದೆ, ಒಂದೇ ಒಂದು ಕ್ಷಣವೂ ಒಳಗೆ ಇಟ್ಟುಕೊಳ್ಳುವುದಿಲ್ಲ.


🔅 ಈ ಪ್ರಕ್ರಿಯೆ ಹೇಗೆ ನಡೆದಿರುತ್ತದೆ?:
ನಮ್ಮ ದೊಡ್ಡಕರುಳು, ಆಹಾರದೊಳಗಿನ ನೀರಿನ ಅಂಶವನ್ನೂ ಮತ್ತು ಕಟು, ಕಹಿ, ಒಗರಿನ ರಸವನ್ನು  ಹೀರಿಕೊಂಡು ಅತ್ಯಂತ ಉಪಯುಕ್ತ *ಪೋಷಕವಾಯು* ವನ್ನು ಉತ್ಪತ್ತಿ ಮಾಡುತ್ತದೆ. ಈ ವಾಯುವೇ ವಿಭಿನ್ನ ಹೆಸರಿನಿಂದ ಕರೆಯಲ್ಪಟ್ಟು ಶರೀರದಲ್ಲಿ ಆಹಾರ, ನೀರು, ಗಾಳಿ ಮತ್ತು ಮಲ ಸಂಚರಿಸುವ, ಹೀರಿಕೊಳ್ಳು ಮತ್ತು ಆಹಾರವು ಯಾವ ಯಾವಸ್ಥಾನದಲ್ಲಿ ನೆಲೆಗೊಳ್ಳಬೇಕೆಂದು ನಿರ್ಧರಿಸುವ, ಹೊರಹಾಕುವ ಕಾರ್ಯ ನಿರ್ವಹಿಸುತ್ತದೆ.

ಒಟ್ಟಾರೆ, *ಅಗ್ನಿ(ಜೀರ್ಣಶಕ್ತಿ)ಯನ್ನೂ, ವಾತವನ್ನೂ ಆರೋಗ್ಯದಿಂದ ಇಟ್ಟುಕೊಂಡರೆ ಹೊರಗಿನ ಯಾವ ನೆರವೂ ಇಲ್ಲದೆ ಸಹಜವಾಗಿ ಮಲಪ್ರವೃತ್ತಿಯಾಗುತ್ತದೆ.*

🔅 ಮಲಬದ್ಧತೆಯ ಕಾರಣ?
• ಅಗ್ನಿ ಅಥವಾ ಜೀರ್ಣಶಕ್ತಿಗಿಂತ ಅಧಿಕ ಆಹಾರ ಸೇವನೆ.
• ಜೀರ್ಣಕ್ಕೆ ಕಠಿಣವಾಗುವ ಪದಾರ್ಥ ಸೇವನೆ.
• ವ್ಯಾಯಾಮದ ಕೊರತೆ.
• ವಿಶೇಷವಾಗಿ ರಾತ್ರಿ ಹೊಟ್ಟೆಬಿರಿಯುವ ಹಾಗೆ ತಿನ್ನುವುದು.
• ಒಂದೆಡೆ ರುಚಿಗಾಗಿ ಒಣಪದಾರ್ಥ ಸೇವಿಸುವುದು-ಇನ್ನೊಂದೆಡೆ ಲೀಟರ್ ಗಟ್ಟಲೆ ನೀರು ಸೇವಿಸುವುದು.
• ಆಹಾರ ಸೇವನೆಯ ತಕ್ಷಣ, ಶರೀರ ಬೆವರುವಷ್ಟು ಕೆಲಸ ವ್ಯಾಯಾಮ ಮಾಡುವುದು.

🔅 ಶಾಶ್ವತ ಪರಿಹಾರ ಏನು?
• ಶಕ್ತಿ ವ್ಯಯಿಸಿದಷ್ಟೇ ತುಂಬುವುದು ಹೇಗೋ ಹಾಗೆ ವ್ಯಾಯಾಮ ಮಾಡಿದಷ್ಟೇ ಆಹಾರ ಸೇವಿಸಿ.
• ಆಹಾರ ತಯಾರಿಕೆಯಲ್ಲೇ ತಕ್ಕಷ್ಟು ಚನ್ನಾಗಿ ನೀರು ಇರಲಿ.‌ ಮೇಲ್ಗಡೆಯಿಂದ ಹೆಚ್ಚು ಜಲಸೇವನೆಯಿಂದ ಜೀರ್ಣಶಕ್ತಿ ಕುಂದುತ್ತದೆ.
• ಅಧಿಕ ಶಕ್ತಿಯುಳ್ಳ ಮತ್ತು ಜೀರ್ಣಕ್ಕೆ ಕಠಿಣವಾಗುವ ಆಹಾರ ಸೇವನೆ ಬೇಡ.
• ಊಟದ ತಕ್ಷಣ ಸ್ನಾನ, ಮೈಬೆವರುವಂತೆ ವ್ಯಾಯಾಮ ಮಾಡಲೇಬಾರದು, ಇದರಿಂದ ಅಗ್ನಿಯ ಶಕ್ತಿ ಹೊರಹೋಗಿ ಮಲ ಸಂಚಯವಾಗುತ್ತದೆ.
• ಮಲಬದ್ಧತೆ ನಿವಾರಣೆಗೆ ತಿಂದ ಅನ್ನವನ್ನೇ ಹೊರತಳ್ಳುವ ಆಹಾರ ಅಥವಾ ಔಷಧಗಳನ್ನು ನಿತ್ಯವೂ ಸೇವಿಸಬಾರಸು.
• ಆಹಾರದ ನಂತರ ಬಾಳೆಹಣ್ಣನ್ನು ತಿನ್ನುವುದು ಅನಾರೋಗ್ಯಕರ ಮಲ ಪ್ರವೃತ್ತಿಗೆ ಕಾರಣ.
• ರಾತ್ರಿ ಆಹಾರ ಬೇಗ ಮತ್ತು ಅರ್ಧ ಹೊಟ್ಟೆ ಮಾತ್ರ ಸೇವಿಸಿ.

🔅 ಸರಳ ಪರಿಹಾರ:
• ರಾತ್ರಿ ಆಹಾರ 6-7 ಗಂಟೆಯ ಒಳಗೆ ಸೇವಿಸಿ.
• ರಾತ್ರಿ ಅರ್ಧ ಹೊಟ್ಟೆ ತುಂಬುವಷ್ಟು ಮಾತ್ರ ಆಹಾರ ಸೇವಿಸಿ.
• ಬೇಗ ನಿದ್ದೆ ಮಾಡಿ.

*ಮಲಬದ್ಧತೆ ನಿವಾರಣೆಗೆ, ಈಗ ಮಾಡುತ್ತಿರುವ ಉಪಾಯ ಅಪಾಯವೂ ಹೌದು:*

ತಿಂದ ಅನ್ನವನ್ನೇ ಹೊರತಳ್ಳುವ ಆಹಾರ ಅಥವಾ ಔಷಧಗಳನ್ನು ನಿತ್ಯವೂ ಸೇವಿಸಬಾರದು.
ಹೆಚ್ಚು ನಾರಿನ ಅಂಶ ಇರುವ ತರಕಾರಿಗಳು, ಹಿಟ್ಟುಗಳೂ ಹಾಗೆಯೇ ಬಾಳೆಹಣ್ಣು ಅಪಾಯಕರ. ಇವು ಆಹಾರವನ್ನು ಯಾಂತ್ರಿಕವಾಗಿ, ಕೃತ್ರಿಮ ವಿಧಾನದಿಂದ ಅದರ ಜೀರ್ಣಾಜೀರ್ಣತೆಯನ್ನು ಅಳತೆಮಾಡದೇ ಆಹಾರವನ್ನು ಹೊರಕ್ಕೆ ತಳ್ಳುತ್ತವೆ. ಏಕೆಂದರೆ ಜೀರ್ಣಕ್ಕೆ ಮೊದಲೇ ಪೋಷಕಾಂಶಗಳ ಸಮೇತ ಹೊರ ತಳ್ಳುವುದರಿಂದ ಕ್ರಮೇಣ ಶರೀರ ದುರ್ಬಲಗೊಳ್ಳುತ್ತದೆ ಮತ್ತು ನಾನಾ ರೋಗಗಳಿಗೆ ಹಾದಿಯಾಗುತ್ತದೆ.

      🙏ಧನ್ಯವಾದಗಳು 🙏
•••••••••
By
ಹೆಚ್.ಬಿ ಮೇಟಿ

Wednesday 24 February 2021

✍️: *ಆಧುನಿಕ ವಿಜ್ಞಾನ ಮೊಳಕೆ ಕಾಳನ್ನು ಶ್ರೇಷ್ಠ ಎಂದು ಹೇಳಿದರೆ ; ಆಯುರ್ವೇದ ತಿನ್ನಬೇಡಿ ಎನ್ನುತ್ತದೆ!!*

🙏ಅಮೃತಾತ್ಮರೇ ನಮಸ್ಕಾರ 🙏
🙂ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🙂
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
25.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ- 31
••••••••••••••
✍️: ಇಂದಿನ ವಿಷಯ:
*ಆಧುನಿಕ ವಿಜ್ಞಾನ ಮೊಳಕೆ ಕಾಳನ್ನು ಶ್ರೇಷ್ಠ ಎಂದು ಹೇಳಿದರೆ ; ಆಯುರ್ವೇದ ತಿನ್ನಬೇಡಿ ಎನ್ನುತ್ತದೆ!!*
•••••••••••••••••••••••••••••••••••••••••


ಆತ್ಮೀಯರೇ,
🤔 ಬಹಳಷ್ಟು ಓದುಗರು ಕೇಳಿದ್ದಾರೆ,
 ಮೊಳಕೆ ಕಾಳುಗಳನ್ನು ತಿನ್ನುವುದು ಅನಾರೋಗ್ಯಕರವೇ? ಎಂದು,

★ ಇಲ್ಲ, ಅನಾರೋಗ್ಯಕರವಲ್ಲ.
ಆದರೆ,
ಮೊಳಕೆ ಕಾಳುಗಳನ್ನು ತಯಾರಿಸುವ ಮತ್ತು ತಿನ್ನುವ ವಿಧಾನ ಭಿನ್ನವಾಗಿದೆ. ಅದನ್ನು ಇಂದಿನ ಸಂಚಿಕೆಯಲ್ಲಿ ನೋಡೋಣ👇

 🔅 ವಿರೂಢಕ ಎಂದರೆ ಮೊಳಕೆ ಬಂದವುಗಳು ಎಂದರ್ಥ.

📜 ತಿಲಪಿಣ್ಯಾಕ..... *ವಿರೂಢಕಮ್*......ದೃಘ್ನ ದೋಷಲಂ ಗ್ಲಪನಂ ಗುರು |
- ಅಷ್ಟಾಂಗ ಹೃದಯ ಸೂತ್ರ ಸ್ಥಾನ ಅಧ್ಯಾಯ-6/32-33, ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ.

ಜೀವವಿಜ್ಞಾನದಲ್ಲಿ ಕೇವಲ ರಾಸಾಯನಿಕ ದೃಷ್ಠಿ ಪೂರ್ಣ ಸತ್ಯವಲ್ಲ.

ವಿಜ್ಞಾನ ಹೇಳುವ ಶ್ರೇಷ್ಠ ರಾಸಾಯನಿಕಗಳು ಮೊಳಕೆಕಾಳುಗಳಲ್ಲಿರುವುದು ಸತ್ಯ, ಆದರೆ ನಮ್ಮ ಆಂತರಿಕ ಜೈವಿಕ ಪ್ರಕ್ರಿಯೆಗಳ ಪರಿಣಾಮವನ್ನು ಆಯುರ್ವೇದ ಮಾತ್ರ ಸ್ಪಷ್ಟಪಡಿಸಿದೆ.

🤔 ಹೇಗೆ ಉಪಯೋಗಿಸುವುದು?
✍ *ಅಂಕುರಿತ ಸಸ್ಯಂ-ವಿರೂಢಕಂ* ಎಂದಿದ್ದಾರೆ ಆಚಾರ್ಯ ಅರುಣದತ್ತರು.("ಸರ್ವಾಂಗ ಸುಂದರಿ" ವ್ಯಾಖ್ಯಾನ ಗ್ರಂಥ)

ಅಂದರೆ, ದೊಡ್ಡ ದೊಡ್ಡ ಮೊಳಕೆಗಳು ಬಂದ ಧಾನ್ಯಗಳನ್ನು ಸಸ್ಯಗಳೆಂದು ಪರಿಗಣಿಸಿ, ಅಂತಹ ಮೊಳಕೆಗಳನ್ನು ತ್ಯಜಿಸಲೇಬೇಕು. ಅವುಗಳನ್ನು ತಿಂದರೆ ಒರಟಾಗಿ, ರಸಹೀನ ಅಥವಾ ಸ್ವಾದ ಇಲ್ಲದಂತೆ ಆಗಿರುತ್ತದೆ. ಇದನ್ನು ಕೊಬ್ಬೇರುವುದು ಎಂದು ಕರೆಯುತ್ತಾರೆ. ಇದು ನಿಃಸಂಶಯವಾಗಿ ತ್ರಿದೋಷಕರ ಮತ್ತು ಹಾನಿಕರ.

👇 ಮೊಳಕೆ ಬರಿಸುವ ವಿಧಾನ:
ಒಂದೇ ದಿನ ನೆನೆಸಿಟ್ಟು ಅತೀ ಪುಟ್ಟ ಮೊಳಕೆ ಬಂದ ಕಾಳುಗಳನ್ನು ಬಳಸಬಹುದು.

🤔 ಏಕೆ ಮೊಳಕೆ ಬರಿಸಬೇಕು?
✍ ಇದು ಮಾನವನ ಬುದ್ಧಿವಂತಿಕೆ.
ಧಾನ್ಯಗಳು ತಮ್ಮಲ್ಲಿ ಮೊಳಕೆ ಆರಂಭವಾದೊಡನೇ ತಮ್ಮ ಶಕ್ತಿಯನ್ನು ರಸದ ರೂಪದಲ್ಲಿ ಬಿಡುಗಡೆಗೊಳಿಸುವವು, ಏಕೆಂದರೆ  ತನ್ನ ಮಗು ಗಿಡ-ಬಳ್ಳಿ-ಮರವಾಗಿ ಬೆಳೆಯಲು ಆರಂಭಿಸಿರುವುದು, ಅದು ತಾನೇ ಸ್ವತಃ ಬೇರು ಬಿಡುವವರೆಗೆ ಈ ಧಾನ್ಯದಲ್ಲಿರುವ ಶಕ್ತಿಯೇ ತಾಯಿಯ ಎದೆಹಾಲಿನಂತೆ ಪೋಷಿಸುತ್ತದೆ. ಒಂದೊಮ್ಮೆ ಬೇರುಬಿಟ್ಟು, ಪೋಷಕಾಂಶಗಳನ್ನು ಹೀರಿ, ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಕೆ ಆರಂಭ ಮಾಡಿದರೆ, ಅದುವರೆಗೆ ಎಲೆಯಂತೆ ಕೆಲಸ ಮಾಡಿದ್ದ ಈ ಧಾನ್ಯ ಒಣಗಿ ಉದುರಿಹೋಗುತ್ತದೆ.

*ಮೊಳಕೆ ಆರಂಭದಲ್ಲಿ ಅದು ತನ್ನ ಸಂತತಿಯ ಪೋಷಣೆಗೆಂದು ರಸರೂಪಕ್ಕೆ ತಿರುಗಿದಾಗ ನಾವು ಬಳಸಿಕೊಳ್ಳುವುದು ಮಾನವನ ಬುದ್ಧಿವಂತಿಕೆ. (ಉದಾ: ಕರುವನ್ನು ಕೆಚ್ಚಲಿಗೆ ಬಿಟ್ಟು ಹಸು ಹಾಲನ್ನು ಮೊಲೆಗೆ ಇಳಿಸಿದ ತಕ್ಷಣ ಕರುವನ್ನು ಕಟ್ಟಿಹಾಕಿ ಹಾಲುಪಡೆದಂತೆ)*

🤔 ಪುಟ್ಟ ಮೊಳಕೆ ಬಂದ ನಂತರ ಏನುಮಾಡಬೇಕು?
✍ ಅದರಲ್ಲಿರುವ ಎರೆಡು ಹಾನಿಕಾರಕ ಅಂಶಗಳನ್ನು ತೆಗೆಯಬೇಕು.
1) ಸಿಪ್ಪೆ ತೆಗೆಯಬೇಕು- ತನ್ನ ಸಂತತಿ ಜೀವಾಂಕುರವಾಗಿ ಮೊಳಕೆಯಾದಾಗ, ಅದರ ಆಹಾರವನ್ನು ಯಾವಪ್ರಾಣಿಯೂ ಕಸಿದುಕೊಳ್ಳಬಾರದೆಂದು ಸಸ್ಯ ಸೃಷ್ಟಿಸಿದ *ವಿಷಯುಕ್ತ ಗಾಢ ಪ್ರೋಟೀನ್ ಪೊರೆಯೇ ಸಿಪ್ಪೆ.* 
ವಿಚಿತ್ರ ಎಂದರೆ ಈ ಗಾಢವಾದ ಪ್ರೋಟೀನ್ ಅನ್ನೇ ಆಧುನಿಕ ವಿಜ್ಞಾನ ಹೆಚ್ಚು ಪೋಷಕಾಂಶ ಉಳ್ಳದ್ದೆಂದು ತನ್ನ ರಾಸಾಯನಿಕ ದೃಷ್ಟಿಯಿಂದ ವಿಷದೀಕರಿಸಿದೆ!!, ಆದುದರಿಂದ ಬಳಕೆಗೆ ಮೊದಲು ಯಾವುದೇ ಕಾಳಿನ ಸಿಪ್ಪೆ ತೆಗೆಯಲೇಬೇಕು, ಇದು ಎಲ್ಲಾ ಪ್ರಾಣಿಗಳಿಗೂ ಹಾನಿಮಾಡುತ್ತದೆ. 
ಇರುವೆ ಮುಂತಾದ ಜೀವಿಗಳು ಸಿಪ್ಪೆ ಬಿಟ್ಟು ಕಾಳನ್ನು ಮಾತ್ರ ತಿನ್ನುವುದು ಇದೇ ಕಾರಣಕ್ಕೆ.
 ಇದು ಪಕ್ಷಿಗಳಿಗೆ ಅನ್ವಯಿಸದು ಏಕೆಂದರೆ ಅವುಗಳ ಕರುಳಿಗೆ ಹೊಂದಿಕೊಂಡಂತೆ gizzard ಎಂಬ ಕಲ್ಲನ್ನೇ ಕರಗಿಸುವ ಬಲವಾದ ಅಂಗ ಇರುತ್ತದೆ, ಅದು ಕಲ್ಲನ್ನೂ ಸೇರಿ ಎಲ್ಲವನ್ನೂ ಕರಗಿಸಿಬಿಡುತ್ತದೆ. ಮಾನವನಿಗೆ ಈ ವ್ಯವಸ್ಥೆ ಇಲ್ಲ.

2) ಮೊಳಕೆ ತೆಗೆಯಬೇಕು-
ಗಿಡಮರಗಳಿಗೆ ಮೊಳಕೆಯೇ ನಿಜವಾದ ಸಂತತಿ, ಅದರ ಶಕ್ತಿಯ ಸಣ್ಣ ಅಂದಾಜು ನಮಗೆಲ್ಲಾ ಇದೆ. 
ಮೊಳಕೆಯ ತುದಿಯಲ್ಲಿ Root cap ಹೆಸರಿನ ಎಂತಹ ಕಲ್ಲನ್ನೂ ಸೀಳಿ ಆಳಕ್ಕೆ ಇಳಿಯುವ ಶಕ್ತಿ ಇರುವ ಪ್ರೋಟೀನ್ನಿನ ಅತ್ಯಂತ ಗಾಢ ಪೊರೆ!! ಇದೆ. ರಾಸಾಯನಿಕ ದೃಷ್ಟಿಯಿಂದ ಇದೂ ಸಹ ಪ್ರೋಟೀನ್ ಸಂವೃದ್ಧ ಅಂಶ!! 
Root cap ಬಿಟ್ಟು ಉಳಿದ ಮೊಳಕೆ ಅಂಶವೂ ಸಹ ಪ್ರೋಟೀನ್ ಮತ್ತು ಕರಗದ ನಾರಿರುವ ಪದಾರ್ಥ, ಇಂದು ನಾರಿರುವ ಪದಾರ್ಥ ತಿಂದರೆ ಬೇಧಿ ಸರಿಯಾಗಿ ಆಗುತ್ತದೆ ಎಂದು ಅತಿಹೆಚ್ಚು ನಾರುತಿನ್ನುವ ರೂಢಿ ಹಾಕಿಕೊಂಡಿದ್ದೇವೆ!!
(ಮಲಬದ್ಧತೆ ನಿವಾರಣೆಗೆ ನಾರು ಪದಾರ್ಥ ಸೇವನೆ ನಿಜವಾದ ಪರಿಹಾರವೇ ಅಲ್ಲ! ಇದನ್ನು ನಾಳೆ ನೋಡೋಣ).

🤔 ಸೇವಿಸಿದರೆ ಹಾನಿ ಏನು?
✍ ನಮ್ಮ ಕರುಳಿನಲ್ಲಿ ಜೀರ್ಣವಾಗಿ ಶಕ್ತಿಕೊಡುವ ವಸ್ತುವನ್ನು ಮಾತ್ರ ಆಹಾರವೆನ್ನುತ್ತದೆ ಆಯುರ್ವೇದ. ಕಾಳುಗಳ ಸಿಪ್ಪೆ & ಮೊಳಕೆ ಎರಡೂ ಜೀರ್ಣವಾಗಲು ಕರುಳಿನಲ್ಲಿ ಗ್ಯಾಸ್ ಉತ್ಪತ್ತಿಮಾಡಿ ವಿಭಜನೆಗೊಳ್ಳುತ್ತವೆ. ಮೊಳಕೆ ತಿಂದಾಗ ಗ್ಯಾಸ್ ಉತ್ಪತ್ತಿಯಾಗುವುದು ಎಲ್ಲರ ಗಮನಕ್ಕೆ ಬರುತ್ತದೆ. 
*ಈ ವಾಯುವು ನಾವು ಸೇವಿಸಿದ ಆಹಾರವನ್ನು ಸ್ವಮಾರ್ಗದಿಂದ ಅನ್ಯಮಾರ್ಗಕ್ಕೆ ತಳ್ಳಿ ನಿಧಾನಗತಿಯಲ್ಲಿ ಗರವಿಷದಂತೆ ಮಹಾನ್ ವ್ಯಾಧಿಗಳಿಗೆ ಕಾರಣವಾಗುತ್ತದೆ.* ಅದ್ದರಿಂದಲೇ ಆಚಾರ್ಯರು *ದೋಷಲಂ*(ತ್ರಿದೋಷಕಾರಕ) ಎಂದಿದ್ದಾರೆ.

🤔 ಸೇವನಾ ಪೂರ್ವ ಸಂಸ್ಕಾರ ಹೇಗೆ?
✍ ಸಿಪ್ಪೆ-ಮೊಳಕೆ ತೆಗೆದ ಕಾಳನ್ನು ಚನ್ನಾಗಿ ಬೇಯಿಸಿ, ಎಣ್ಣೆ ಅಥವಾ ತುಪ್ಪದಿಂದ ಸಂಸ್ಕರಿಸಬೇಕು,  ಇದರಿಂದ ಮಾತ್ರ ಅದು ನಿಜವಾದ ಆಹಾರವಾಗಿ ತಯಾರಾಗುತ್ತದೆ ಆಗ ಸೇವಿಸಬೇಕು.

*ಆಯುರ್ವೇದ ಹೇಳಿರುವ ದ್ರವ್ಯ(ಆಹಾರ, ಔಷಧಿ) ಸಂಸ್ಕಾರಗಳು ಅತ್ಯಂತ ವೈಜ್ಞಾನಿಕ ಕಾರಣಗಳಿಂದ ಕೂಡಿವೆ. ಅವುಗಳನ್ನು ಮುಂದೆ ಸಂದರ್ಭ ಬಂದಾಗ ನೋಡೋಣ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

*ಜೂನ್ - 2021ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು* ಇಲಾಖಾ ವೆಬ್‌ಸೈಟ್ ನಲ್ಲಿ ಲಭ್ಯವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ...

.    CLICK HEAR TO DOWNLOAD

Tuesday 23 February 2021

ಮೊಳಕೆ ಕಾಳು ಆರೋಗ್ಯಕರವೋ ಅನಾರೋಗ್ಯಕರವೋ ?

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
  .    🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
24.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-30
••••••••••••••
✍️: ಇಂದಿನ ವಿಷಯ:
ಮೊಳಕೆ ಕಾಳು ಆರೋಗ್ಯಕರವೋ ಅನಾರೋಗ್ಯಕರವೋ ? 
•••••••••••••••••••••••••••••••••••••••••

📜 ತಿಲಪಿಣ್ಯಾಕ ವಿಕೃತಿ........ದೃಘ್ನ ದೋಷಲಂ ಗ್ಲಪನಂ ಗುರು |
- ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ-6/32-33, ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ.

ದೃಷ್ಠಿಗೆ ಹಾನಿಮಾಡತಕ್ಕ, ಸರ್ವದೋಷ ಪ್ರಕೋಪ ಮಾಡುವಂತಹ, ಅಂಗಗಳ ಶಕ್ತಿಹ್ರಾಸ ಮಾಡತಕ್ಕ ಕೆಲವು ಆಹಾರಗಳನ್ನು ಹೇಳುತ್ತಾರೆ. ಇವು ಸೇವನೆಗೆ ಯೋಗ್ಯವಲ್ಲ. 

• ಎಳ್ಳಿನ ಹಿಂಡಿಯಿಂದ ತಯಾರಾದ ಭಕ್ಷ್ಯಗಳು.

• ಒಣಗಿದ ತರಕಾರಿಗಳೂ, ಎಣ್ಣೆ, ತುಪ್ಪದಲ್ಲಿ ಹುರಿಯದೇ ತಿನ್ನುವ ಸೊಪ್ಪು ಪಲ್ಯಗಳು.

• ಮೊಳಕೆ ಬರಿಸಿದ ಧಾನ್ಯಗಳು.
ಮತ್ತು

• ಹೆಸರು, ಉದ್ದುಗಳಿಂದ ಮಾಡಿದ ವಡೆಗಳು(ಉದ್ದು, ಹಲಸಂದಿ ವಡೆಗಳು)

ಇವೆಲ್ಲವೂ ಕೇವಲ ಪಚನಕ್ಕೆ ಭಾರ ಅಷ್ಟೇ ಅಲ್ಲ, ಇವು ಒಂದೊಮ್ಮೆ ಕರುಳಿನಲ್ಲಿ ಜೀರ್ಣವಾದಂತೆ ಕಂಡರೂ ರಕ್ತದಲ್ಲಿ ಪಚನವಾಗದೇ ರಕ್ತದುಷ್ಠಿಯನ್ನುಂಟುಮಾಡುತ್ತವೆ. 

🖋 ಮೊಳಕೆಕಾಳು ಆರೋಗ್ಯಕರವೋ?
★ ಆಯುರ್ವೇದವು ದೋಷಕಾರಕ ಗುಂಪಿನ ಕೆಲವೇ ದ್ರವ್ಯಗಳಲ್ಲಿ ಮೊಳಕೆ ಬಂದ ಕಾಳುಗಳನ್ನು ಸೇರಿಸಿದೆ.
  ಮೊಳಕೆಕಾಳಿನಲ್ಲಿರುವ ರಾಸಾಯನಿಕಗಳ ಆಧಾರದಲ್ಲಿ ವಿಜ್ಞಾನ ಅದನ್ನು ಅತ್ಯುತ್ತಮ ಎಂದಿದೆ!! ಆಶ್ಚರ್ಯ, ಮಣ್ಣಿನಲ್ಲೂ ಪೋಷಕಾಂಶಗಳು ಹೇರಳವಾಗಿವೆ!! ತಿನ್ನಲು ಸಾಧ್ಯವೇ?🤦‍♂

✅ ಆಹಾರ ಎಂದರೆ ನಮ್ಮ ಜೀರ್ಣಶಕ್ತಿ ಅದನ್ನು ಗುರುತಿಸಿ ಜೀರ್ಣಿಸಬೇಕೇ ಹೊರತು ಕೇವಲ ರಾಸಾಯನಿಕಗಳ ಆಧಾರದಲ್ಲಿ ಅಲ್ಲ. 

🛡ಮೊಳಕೆಕಾಳು, ಒಂದು ಹೊಸ ಜೀವಿ ಹೊರಬರುವ ಕ್ರಿಯೆ. 
ಅದರ ತಾಯಿ ಅದನ್ನು ಹೇಗೆ ರಕ್ಷಿಸಿರುತ್ತದೆ ಎಂದರೆ, ತನ್ನ ಸಂತತಿಯ ಬೆಳವಣಿಗೆ ಸಂದರ್ಭದಲ್ಲಿ ಯಾವ ಕ್ರಿಮಿಗಳಿಂದಲೂ ನಾಶವಾಗದಿರಲೆಂದು, ವಿಷಪೂರಿತ ಅಂಶವನ್ನು ಕಾಳಿನಸಿಪ್ಪೆ ಮತ್ತು ಮೊಳಕೆಯ ಹೊರಪೊರೆಯಲ್ಲೂ ಇಟ್ಟಿರುತ್ತದೆ. ಅದು ಸೇವನೆಗೆ ಯೋಗ್ಯವಲ್ಲ. 
ಇದು ವಿಷಸಮಾನ, (poisonous protein chain) 
 ತಿಂದರೆ ಕರುಳುಗಳ ಎಂಜೈಮ್ ಗಳಿಗೆ ಜೀರ್ಣಿಸಲು ಸಾಧ್ಯವಾಗದೇ, ದೊಡ್ಡಕರುಳಿನಲ್ಲಿ ಗ್ಯಾಸ್ ಉಂಟಾಗಿ ಮಾಲಿಕ್ಯೂಲ್ ಗಳ ಅಣುವಿಭಜನೆ ಆಗಬೇಕಾಗುತ್ತದೆ.
 ಈ ಕ್ರಿಯೆ ನಿರಂತರ ಇದ್ದರೆ ಅವಿಭಜಿತ ಮಾಲಿಕ್ಯೂಲ್ ಗಳು ರಸ ಮತ್ತು ರಕ್ತದ ಮೇಲೆ ದುಷ್ಪರಿಣಾಮ ಬೀರುತ್ತದೆ. 
ಅವು ಸಂಚಯವಾದರೆ ಆಮವಾತ, ವಾತರಕ್ತ ಎಂಬ ಸಂಧಿಗತ ವ್ಯಾಧಿಗಳು ಬರುತ್ತವೆ. ಆಮದೋಷ ಪ್ರಕೋಪಗೊಂಡರೆ,  ಚರ್ಮದ ತೊಂದರೆಗಳೂ ಬರುತ್ತವೆ. 

🩸 ರಕ್ತವು ಸರ್ವದಾ ಆಮ್ಲದಿಂದ ದೂರ ಇರುವ ದ್ರವ. ಇದಕ್ಕೆ ಆಮ್ಲಭಾವ ಬಂದ ತಕ್ಷಣ ಆಂತರಿಕ ವಾತಾವರಣವೇ ಬದಲಾಗುತ್ತದೆ, ಆಗ ಸರ್ವಶರೀರ ಸಂಚಾರಿ ಆಗಿರುವ ರಕ್ತ ಅನೇಕ ಅಂಗಗಳಿಗೆ ಸರಿಯಾದ ಆಹಾರ, ಆಮ್ಲಜನಕ ಪೂರೈಸಲು ಸಾಧ್ಯವಾಗದೇ, ಗ್ಲಾನಿ 
ಅಂದರೆ ಅತ್ಯಂತ ದೌರ್ಬಲ್ಯ ಉಂಟುಮಾಡುತ್ತಿರುತ್ತದೆ.  ಆದರೆ ಆರಂಭದಲ್ಲೇ ಇದು ಕಂಡುಬರುವುದಿಲ್ಲ ಏಕೆಂದರೆ ಎಲ್ಲಾ ಧಾತುಗಳೂ ತಮ್ಮ ಪಚನಶಕ್ತಿ ಬಳಸಿ ರಕ್ಷಿಸಿಕೊಳ್ಳುತ್ತವೆ ಆದರೆ ಕಾಲಾಂತರದಲ್ಲಿ ಈ ಆಹಾರಗಳಿಂದ ಹಾನಿ ತಪ್ಪಿದ್ದಲ್ಲ. 

👁 ನೇತ್ರವು ಮಜ್ಜಾಧಾತುವಿನಿಂದ ಉಂಟಾದ ತೀಕ್ಷ್ಣ ಅವಯವ. ಇದರಲ್ಲಿ ತೇಜಸ್ಸು ಪ್ರಖರವಾಗಿರುತ್ತದೆ, ಎಲ್ಲಾ ಇಂದ್ರಿಯಗಳು ತಮ್ಮ ಸಂಪರ್ಕಕ್ಕೆ ಬಂದ ಶಬ್ದಾದಿ ವಿಷಯಗಳನ್ನು ಗ್ರಹಿಸಿದರೆ ನೇತ್ರ ದೂರದ ವಸ್ತು ವಿಷಯಗಳನ್ನೂ ಗ್ರಹಿಸಬಲ್ಲದು, ಇದಕ್ಕೆ ಕಾರಣ ತೇಜಸ್ಸು.
 ಮೇಲಿನ ‌ದ್ರವ್ಯಗಳು ತೇಜಸ್ಸನ್ನು ಹಾನಿಗೊಳಿಸುತ್ತವೆ. ನೇತ್ರ ಮಲಿನವಾಗುತ್ತದೆ. ದೃಷ್ಟಿ ಕ್ಷೀಣಿಸುತ್ತದೆ.

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

Sunday 21 February 2021

ಅಕ್ಕಿಯ ಆಯ್ಕೆ ಮತ್ತು ಅನ್ನ ತಯಾರಿಸುವ ವಿಧಾನದಿಂದಲೇ ಅತೀ ಹೆಚ್ಚಿನ ಆರೋಗ್ಯ ಗಳಿಸಬಹುದು.

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
22.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-29
••••••••••••••
✍️: ಇಂದಿನ ವಿಷಯ:
ಅಕ್ಕಿಯ ಆಯ್ಕೆ ಮತ್ತು ಅನ್ನ ತಯಾರಿಸುವ ವಿಧಾನದಿಂದಲೇ ಅತೀ ಹೆಚ್ಚಿನ ಆರೋಗ್ಯ ಗಳಿಸಬಹುದು.
••••••••••••••••••••••••••••••••••••••••• 

📜 ವರಃ ತತ್ರ *ರಕ್ತಶಾಲಿ*......||

ನವಧಾನ್ಯ ಅಭಿಷ್ಯಂದಿ.......ಲಘು *ಸಂವತ್ಸರೋಷಿತಮ್|*

ಸು ಧೌತಃ *ಪ್ರಸೃತಃ ಸ್ವಿನ್ನೋತ್ಯಕ್ತೋಷ್ಮಾ* ಚ ಓದನೇ ಲಘುಃ | ಯತ್ ಚ ಅಗ್ನೆ.............. *ಭೃಷ್ಟ ತಣ್ಡುಲಃ||* ವಿಪರೀತೋ ಗುರುಃ.....|
-ಅಷ್ಟಾಂಗ ಹೃದಯ ಸೂತ್ರಸ್ಥಾನ-6/3,24,29& 30 ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ


👉 ಕೆಂಪು ಅಕ್ಕಿಯು ಏಕದಳ ಧಾನ್ಯಗಳಲ್ಲೇ ಶ್ರೇಷ್ಠ.
ಭತ್ತ ಮತ್ತು ಅಕ್ಕಿಗಳಲ್ಲಿ ರಕ್ತಶಾಲಿ, ಕಮಲಶಾಲಿ, ಯವಕ, ಹಾಯನ, ಪಾಂಸು, ಬಾಷ್ಪಕ, ನೈಷಧಕ, ವ್ರೀಹಿ...ಮುಂತಾದ ಅನೇಕ ವಿಧಗಳನ್ನು ಹೇಳಿದ್ದರೂ *ಕೆಂಪು ಅಕ್ಕಿಯೇ ಶ್ರೇಷ್ಠ* ಎಂದಿದ್ದಾರೆ.

ಹೊಸ ಅಕ್ಕಿ ಅನಾರೋಗ್ಯಕರ, ಒಂದು ಸಂವತ್ಸರ(ವರ್ಷ) ಹಳೆಯ ಅಕ್ಕಿ ಶ್ರೇಷ್ಠ.
ಅಕ್ಕಿ ಹಳೆಯದಾದರೆ, ಪಚನಕ್ಕೆ ಹಗುರವಾಗುತ್ತದೆ ಆದರೆ ಅದರ ಶಕ್ತಿಯಲ್ಲಿ ಕಿಂಚಿತ್ತೂ ನಷ್ಟವಾಗುವುದಿಲ್ಲ. ಹಾಗಾಗಿ, ನಮ್ಮ ಕರುಳು ಅಲ್ಪ ಪಚನ ಶಕ್ತಿಯಿಂದಲೇ ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳಲು ಹಳೆಯ ಅಕ್ಕಿಯೇ ಶ್ರೇಷ್ಠ. ಹೊಸ ಅಕ್ಕಿಗೂ ಪೋಷಕಾಂಶಗಳಲ್ಲಿ, ಶಕ್ತಿಯಲ್ಲಿ ಒಂದೇ ರೀತಿಯ ಗುಣ ಇದ್ದರೂ ಪಚನಕ್ಕೆ ಗುರುತರವಾದ್ದರಿಂದ ನಮಗೆ ಅದರಿಂದ ಹೆಚ್ಚಿನ ಪೋಷಣೆ ದೊರೆಯದು.

🍃 ಅಕ್ಕಿಯನ್ನು ಸ್ವಲ್ಪ ಪಾಲೀಶ್ ಮಾಡುವುದು ಸೂಕ್ತ.

🍃 ಅನ್ನ ತಯಾರಿಗೆ ಮುನ್ನ ಸುಧೌತ ಅಂದರೆ ಚನ್ನಾಗಿ ತೊಳೆಯಬೇಕು.
ಎಲ್ಲರೂ ಮಾಡುವ ಸಾಮಾನ್ಯ ಕ್ರಿಯೆ ಇದು. ಅಕ್ಕಿಯಲ್ಲಿ ಇರಬಹುದಾದ ಕ್ರಿಮಿನಾಶಕ ಮತ್ತು ಸಂರಕ್ಷಕಗಳನ್ನು ತೆಗೆಯಲು ತೊಳೆಯುತ್ತೇವೆ. ಆದರೆ ಹಿಂದೆ ಈ ಸಮಸ್ಯೆ ಇರಲಿಲ್ಲ ಹಾಗಾಗಿ ಇಂದು ಸಾವಯವ/ನೈಸರ್ಗಿಕ, ಪಾಲೀಶ್ ಇಲ್ಲದ ಅಕ್ಕಿ ತಂದರೂ ಚನ್ನಾಗಿ ತೊಳೆಯಬೇಕು.
 ಏಕೆಂದರೆ- ಅಕ್ಕಿಯ ಮೇಲ್ಭಾಗದಲ್ಲಿ ಸೋಪಿನಂತಹ ನೊರೆಯುಳ್ಳ ಜಾರಿಹೋಗುವ ಗುಣ ಇರುತ್ತದೆ, ಇದೇ ಕಾರಣ ಪ್ರಾಣಿಗಳು ತಿಂದ ಕಾಳುಗಳು ಅದರ ಮಲದಲ್ಲಿ ಹೊರಬರುತ್ತದೆ, ಹಾಗೆ ಬಂದರೂ ಕಾಳಿನ ಗುಣಗಳನ್ನು ಅದರ ಕರುಳು ಹೀರಿಕೊಂಡಿರುತ್ತದೆ. ಆದರೆ ಮನುಷ್ಯನ ಕರುಳಿಗೆ ಈ ಗುಣ ಇಲ್ಲ, ಹಾಗಾಗಿ ತೊಳೆಯದ ಪಾಲೀಶ್ ಮಾಡದ ಅಕ್ಕಿಯ ಅನ್ನವನ್ನು ಸೇವಿಸಿದರೆ ಅದು ಇತರೆ ಆಹಾರವನ್ನೂ ಸಹ ಜಾರಿಸಿ, ಕರುಳು ಪೂರ್ಣ ಹೀರಿಕೊಳ್ಳಲು ಆಗದಂತೆ ಮಾಡುತ್ತದೆ. 
ಇದೇ ಕಾರಣದಿಂದ ಅನ್ನ ಉಂಡ ಕೆಲವರಿಗೆ ಹೀರದೇ ಉಳಿದ ಪೋಷಕಗಳು ಹೊಟ್ಟೆಯನ್ನು ಉಬ್ಬರಿಸುತ್ತವೆ ಮತ್ತು ಕಾಲಾಂತರದಲ್ಲಿ ಅನೇಕ ಖನಿಜಾಂಶಗಳ ಕೊರತೆಯೂ ಉಂಟಾಗುತ್ತದೆ.

🍃ಚನ್ನಾಗಿ ಬೆಂದ ಅನ್ನವನ್ನು  ಬಸಿಯಬೇಕು(ಬಟ್ಟೆಯಿಂದ ಸೋಸಬೇಕು). ನಂತರ ಉಳಿದ ಜಲಾಂಶ ಅತ್ಯಲ್ಪ ಬಿಸಿ ಹಬೆಯಿಂದಲೇ ಅಲ್ಲೇ ಇಂಗಿಸಬೇಕು.
ಪ್ರಷ್ಜರ್ ಕುಕ್ಕರ್ ವಿಧಾನದಲ್ಲಿ ಬೇಯಿಸಿದ ಅನ್ನ ಸರ್ವಥಾ ನಿನ್ದ್ಯವಾದದ್ದು. ಈ ವಿಧಾನ ಯುವ ಪೀಳಿಗೆಗೆ ಅನ್ನ ಮಾಡುವ ನೈಜ ಕಲೆಯನ್ನೇ ಮರೆಸಿಬಿಟ್ಟಿದೆ. ಈ ವಿಧಾನದ ಶ್ರೇಷ್ಠತೆ ತಿಳಿಸುವ ವೈಜ್ಞಾನಿಕ ವಿವರಣೆ ಬಹಳ ಇದೆ, ಇಲ್ಲಿ ಕೇವಲ ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ: 
◆ ಮಾವಿನ ಕಾಯಿ ತಂದು ಒತ್ತಡ ಹಾಕಿ ಉಜ್ಜಿ ಉಜ್ಜಿ ಮೆತ್ತಗಾಗುವಂತೆ ಮಾಡಿದರೆ ಅದಕ್ಕೆ ಮಾವಿನಹಣ್ಣಿನ ಗುಣ ಎಂದೂ ಬಾರದು, ಹಾಗೆಯೇ ಅಕ್ಕಿಯು ಗುಣದಲ್ಲಿ ಅನ್ನವಾಗುವ ಬದಲು ಕೇವಲ ಮೆತ್ತಗಾಗಿರುತ್ತದೆ ಅಷ್ಟೆ. ಹಾಗಾಗಿ ಅನ್ನ ತಿಂದರೆ ಹೊಟ್ಟೆ ಉಬ್ಬರಿಸುತ್ತದೆ. ಅಥವಾ ಸ್ವಲ್ಪ ತಿಂದರೂ ಭಾರವಾಗಿ ಬಿಡುತ್ತದೆ. 
ಇದು ಕುಕ್ಕರ್ ಅನ್ನ ಸೇವಿಸಿದ ಎಲ್ಲರ ಅನುಭವ ಅಲ್ಲವೇ?

🌾 ಸರ್ವ ರೀತಿಯ ಪೋಷಣೆಯ ಗುಣವನ್ನೂ ಅನ್ನವು ಹೊಂದಿರುವುದು. 
ಅನ್ನ ಯಾವಕಾಲದಲ್ಲೂ ಆರೋಗ್ಯ ರಕ್ಷಣೆಗೆ ಶ್ರೇಷ್ಠ 🌾

💁 ಗಮನಿಸಿ: ಚರಕಾದಿ ಮಹರ್ಷಿಗಳಲ್ಲಿ ಹೆಚ್ಚಿನವರು ಉತ್ತರ ಭಾರತದವರೇ ಆಗಿದ್ದಾರೆ. ಆದರೆ ಅವರು ಅಲ್ಲಿಗೆ ಗೋಧಿ ಪ್ರಧಾನ ಎಂದಾಗಲೀ, ದಕ್ಷಿಣಕ್ಕೆ ಅಕ್ಕಿ ಪ್ರಧಾನ ಎಂದೂ ಹೇಳದೇ, ಏಕದಳ ಧಾನ್ಯಗಳಲ್ಲೇ ಅಕ್ಕಿ ಶ್ರೇಷ್ಠ ಎಂದಿರುವ ಕಾರಣ, ಅವರನ್ನು ಅನುಸರಿಸೋಣ- ಆರೋಗ್ಯದಿಂದ ಇರೋಣ.

         🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

Saturday 20 February 2021

ಫ್ರುಟ್ ಮಿಲ್ಕ್-ಶೇಕ್ (ಹಾಲನ್ನು ಸೇರಿಸಿದ ಹಣ್ಣಿನ ರಸ) ಯೋಗ್ಯವೋ ಅಯೋಗ್ಯವೋ?

🙏ಅಮೃತಾತ್ಮರೇ ನಮಸ್ಕಾರ 🙏
🍒ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍒
   🍃ಸ್ವಾಸ್ಥ್ಯ ಸರ್ವರದ್ದೂ ಆಗಲಿ🍃
••••••••••••••••••••••••••••••••••••••••••
21.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-28
••••••••••••••
✍️: ಇಂದಿನ ವಿಷಯ:
             🍎🍏🍓🍈🥭
ಫ್ರುಟ್ ಮಿಲ್ಕ್-ಶೇಕ್ (ಹಾಲನ್ನು ಸೇರಿಸಿದ ಹಣ್ಣಿನ ರಸ) ಯೋಗ್ಯವೋ ಅಯೋಗ್ಯವೋ?
•••••••••••••••••••••••••••••••••••••••••

📜 ವಿರುದ್ಧಂ ಆಮ್ಲಂ ಪಯಸಾ.....ಸರ್ವ ಫಲಂ....|
-ಅಷ್ಟಾಂಗ ಹೃದಯ ಸೂತ್ರಸ್ಥಾನ-7/3,
 ಅನ್ನರಕ್ಷ ಅಧ್ಯಾಯ

🍒 ಸರ್ವ ಫಲಗಳೂ ಪ್ರಾಯಶಃ ಹುಳಿಯಾಗಿರುತ್ತವೆ, ಆಮ್ಲವೇ ಅದರ ಸಂರಕ್ಷಕ ದ್ರವ್ಯ(preservative). ಯಾವುದೇ ಹಣ್ಣುಗಳನ್ನು ಹಾಲಿನೊಡನೆ ಮಿಶ್ರಮಾಡಿ ಸೇವಿಸಿದರೆ ಉದರದಲ್ಲಿ ಹಾಲು ಒಡೆದು ಹೋಗಿ ಕೆಡುತ್ತದೆ, ಹಾಗಾಗಿ ವಿರುದ್ಧವು, ಸೇವನೆಗೆ ಯೋಗ್ಯವಲ್ಲ. 


🍏 ಮಿಲ್ಕ್‌ಶೇಕ್ ಕುಡಿದ ನಂತರ ಉದರದಲ್ಲಿ ಒಡೆದ ಹಾಲು ಮೊಸರಿನ ಗುಣವನ್ನೂ ಪಡೆಯುವುದಿಲ್ಲ. ಅದನ್ನು ಕಿಲಾಟ(ಪನ್ನೀರು ಅಥವಾ ಗಿಣ್ಣ) ಎನ್ನುತ್ತೇವೆ, ಅದು ಸೇವನೆಗೆ ಯೋಗ್ಯವಲ್ಲ. 

📜 ಕಿಲಾಟಃ ಬಲ್ಯಃ............ ವಿಷ್ಟಂಭಿ ಗುರು ದೋಷಲಾಃ||
-ಅ.ಹೃ.ಸೂತ್ರ, 5/41
ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

"ಪನ್ನೀರು ಅಥವಾ ಗಿಣ್ಣ" ಮೂರೂ ದೋಷಗಳನ್ನು ಪ್ರಕೋಪ ಮಾಡುತ್ತದೆ, (ಅತ್ಯಂತ ಶ್ರೇಷ್ಠ ಹಸಿವನ್ನು ಹೊಂದಿದ ಮತ್ತು ಹೆಚ್ಚು ಶಾರೀರಿಕ ಶ್ರಮವಹಿಸಿ ದುಡಿಯುವವರಿಗೆ ಮಾತ್ರ ಇವು ಜೀರ್ಣವಾಗಬಲ್ಲವು.) ಆದರೆ ಅವರಿಗೂ ಹಾಲನ್ನು ಸೇರಿಸಿದ ಹಣ್ಣಿನ ರಸ ಒಳ್ಳೆಯದಲ್ಲ.

🍑 ಏನು ತೊಂದರೆ:
◆ ಅಶುದ್ಧ ರಕ್ತ ಹೆಚ್ಚಿ ರಕ್ತಪಿತ್ತ ಎಂಬ ಕಷ್ಟತಮ ಕಾಯಿಲೆ ಬರುತ್ತದೆ, ಇದನ್ನು ಬಿ.ಪಿ ಎನ್ನಬಹುದು. ಮುಂದೊಮ್ಮೆ ಹೃದ್ರೋಗ, ಪಾರ್ಶ್ವವಾಯು ಮುಂತಾದ ತೊಂದರೆಗಳ ಆರಂಭ ಹಾಲು-ಹಣ್ಣುಗಳಲ್ಲಿದೆ !!

◆ ಒಡೆದ ಹಾಲು ಪೋಷಣೆ ಮಾಡುವ ಬದಲು ರಕ್ತದಲ್ಲಿ ಯುರಿಕ್ ಆಮ್ಲ(uric acid) ಹೆಚ್ಚಿಸಿ, ಗೌಟ್(gout) ಎಂಬ ಲಿಗಮೆಂಟ್ ಆಧಾರಿತ ಸಂಧಿಗತ ರೋಗಗಳನ್ನು (ಈಗ ಬಹುತೇಕರಲ್ಲಿ ಸಣ್ಣ ಪೆಟ್ಟಿಗೂ ಲಿಗಮೆಂಟ್ ಟಿಯರ್ ಆಗುತ್ತಿರುವುದಕ್ಕೆ ಇದೂ ಒಂದು ಕಾರಣ) ಮತ್ತು ಮಜ್ಜೆಯನ್ನು ಕೆಡಿಸುವ ಗಂಭೀರ ಸಂಧಿರೋಗ ತರುತ್ತದೆ. ಇದನ್ನು *ವಾತರಕ್ತ* 
ಎನ್ನುತ್ತೇವೆ.

◆ ರಕ್ತಪಿತ್ತವು ರಕ್ತವನ್ನೂ ಮತ್ತು ವಾತರಕ್ತವು ಪರಿಚಲನೆಯನ್ನೂ ಹಾನಿಗೊಳಿಸಿ ಆಹಾರ ಕಣಗಳು ಜೀವಕೋಶಗಳನ್ನು ತಲುಪದಂತೆ ತಡೆದು ಅವುಗಳನ್ನು ನಿರ್ಬಲಗೊಳಿಸುತ್ತದೆ, ಆದಕಾರಣ ಬೇಗ ರೋಗಕ್ಕೆ ತುತ್ತಾಗುತ್ತವೆ. ಹಾಗೆಯೇ ಜೀವಕೋಶಗಳಲ್ಲಿ ಉಂಟಾಗುವ ಕಲ್ಮಶವೂ ಹೊರಹೋಗದೇ ಅವು ಗರವಿಷ(slow poison) ಭಾವವನ್ನು ಪಡೆಯುತ್ತವೆ. ಈ ಗರವಿಷವೇ ಮುಂದೆ ಬಹುದೊಡ್ಡ ಕಾಯಿಲೆಗಳನ್ನು ತಂದು ದೇಹನಾಶ ಮಾಡುತ್ತದೆ.

🍇 ಈಗ ಮಾಡುತ್ತಿರುವ ತಪ್ಪು:
ಪನ್ನೀರು, ಕೊಲೆಸ್ಟ್ರಮ್ ಒಳ್ಳೆಯದು ಬಹಳ ಶಕ್ತಿ ಇದೆ ಎಂದು, ಶಕ್ತಿಯನ್ನು ರಾಸಾಯನಿಕ ಮತ್ತು ಅದರ ಕ್ಯಾಲೋರಿಯಿಂದ ಅಳೆದು ತಿನ್ನಲು ಹೇಳುತ್ತಿರುವುದು ಜನ ವಿಜ್ಞಾನ ಎಂದು ನಂಬಿ ಸೇವಿಸಿ ತೊಂದರೆಗಳಿಂದ ನಿತ್ಯ ಔಷಧ ಸೇವಿಸುತ್ತಿರುವುದು.

🥑 ಸಾಮಾನ್ಯ ಲಕ್ಷಣಗಳು:
ಕಿಲಾಟದ ಅಂಶ ಹೊರಹೋಗಲು ಕೆಲ  ಸಾಮಾನ್ಯ ಲಕ್ಷಣಗಳು ಉಂಟಾಗುತ್ತವೆ- ಕೆಲವರಿಗೆ ಶೀತ, ಕೆಲವರಿಗೆ ಚರ್ಮದ ಅಲರ್ಜಿ ಮತ್ತೆ ಕೆಲವರಿಗೆ ಮೈಭಾರ ಆಗುತ್ತದೆ. ಈ
ಎಲ್ಲಾ ಲಕ್ಷಣಗಳೂ ಕಿಲಾಟ ರಕ್ತದಲ್ಲಿರುವುದರ ಸೂಚನೆ.
(ಉದಾ: ಗಿಣ್ಣವೂ ಕಿಲಾಟದ ಒಂದು ರೂಪ, ಗಿಣ್ಣ ತಿಂದಾಗ ಭಾರ, ಶೀತ, ಚರ್ಮದ ಅಲರ್ಜಿ ಬರುವುದು ಇದೇ ಕಾರಣಕ್ಕೆ)

🥝 ಪರಿಹಾರ ಏನು?
• ನಿದಾನ ಪರಿಮಾರ್ಜನ- ಹಾಲು ಹಣ್ಣು ಜೊತೆಗೆ ಸೇವಿಸುವುದನ್ನು ನಿಲ್ಲಿಸಿ.
• ಹಣ್ಣನ್ನು ಕಚ್ಚಿ ತಿನ್ನಿ , ರಸಸೇವನೆ ಬೇಡ.
• ಒಂದು ವೇಳೆ ಅನಿವಾರ್ಯವಾಗಿ, ಬಿಸಿಲಿನಿಂದ ಅತ್ಯಂತ ಬಾಯಾರಿಕೆ ಆದಾಗ, ಶಕ್ತಿಹ್ರಾಸದಲ್ಲಿ ಮಿಲ್ಕ್ ಶೇಕ್ ಕುಡಿದ ನಂತರ ಚರ್ಮದ, ಶೀತದ... ಲಕ್ಷಣಗಳು ಬಂದರೆ ತಪ್ಪದೇ ಬಿಸಿನೀರು ಕುಡಿದು ವಾಂತಿ ಮಾಡಿಬಿಡಿ.

🍊 ಗಮನಿಸಿ:
• ಮಕ್ಕಳ ಉದರದಲ್ಲಿ ಯಾವುದೋ ಕಾರಣದಿಂದ ಹಾಲು ಕಿಲಾಟವಾಗಿ ಬದಲಾದರೆ, ಮಕ್ಕಳು ವಾಂತಿಮಾಡಿಬಿಡುತ್ತವೆ, ಅದನ್ನು ತಡೆಯಬಾರದು.

• ತುರ್ತು ಅವಸ್ಥೆಯಲ್ಲಿ ಶರೀರಕ್ಕೆ ಆಹಾರದ ಅಗತ್ಯ ಅತೀ ಹೆಚ್ಚು ಇದ್ದರೆ ಆಗ ಮಾತ್ರ ಸೇವಿಸಿರುವ ಮಿಲ್ಕ್‌ಶೇಕ್ ಹೆಚ್ಚಿನ ತೊಂದರೆ ಮಾಡುವುದಿಲ್ಲ, ಆದರೆ ನಿತ್ಯ ಸೇವನೆ ಸರ್ವದಾ ನಿಶಿದ್ಧ.
          🙏ಧನ್ಯವಾದಗಳು 🙏
•••••••••
By 
ಹೆಚ್.ಬಿ.ಮೇಟಿ

Friday 19 February 2021

ತೂಕ ಕಡಿಮೆ ಮಾಡಿಕೊಳ್ಳುವ ಉಪಾಯ.

🙏ಅಮೃತಾತ್ಮರೇ ನಮಸ್ಕಾರ 🙏
   🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
       🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
20.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-26
••••••••••••••
✍️: ಇಂದಿನ ವಿಷಯ:
👉ತೂಕ ಕಡಿಮೆ ಮಾಡಿಕೊಳ್ಳುವ ಉಪಾಯ.
•••••••••••••••••••••••••••••••••••••••••

ಅನೇಕರು *ಜೇನು+ಬಿಸಿನೀರು* ಸೇವನೆಯ ಅಪಾಯದ ಬಗ್ಗೆ ತಿಳಿದು, 
ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಉಪಾಯ ಏನು? ಎಂದು ಕೇಳಿದ್ದಾರೆ. 
ಅತ್ಯಂತ ಸರಳ ಉಪಾಯಗಳಿವೆ. ಪಾಲಿಸಿದರೆ ಮಾತ್ರ, ಅಡ್ಡಪರಿಣಾಮಗಳು ಇಲ್ಲದೇ ದೀರ್ಘಕಾಲದ ಆರೋಗ್ಯಯುತ ಮತ್ತು ದೃಢ ಶರೀರ ಹೊಂದಬಹುದು.

📜 ಕಾರ್ಶಮೇವ ವರಂ.........|
-ಅಷ್ಟಾಂಗ ಸಂಗ್ರಹ ಸೂತ್ರಸ್ಥಾನ.

📜 ಅನ್ನೇನ ಕುಕ್ಷೇ.........ಚತುರ್ಥಂ ಅವಶೇಷಯೇತ್ ||

📜 ಅನುಪಾನಂ..................ಅನ್ನ ಸಂಘಾತ, ಶೈಥಿಲ್ಯ, ವಿಕ್ಲಿತ್ತಿ ಜರಣಾನಿ ಚ |

📜 ಸಮಃ, ಸ್ಥೂಲ, ಕೃಶಾ.....ಭುಕ್ತ ಮಧ್ಯ, ಅಂತಃ, ಪ್ರಥಮ ಅಂಬುಪಾಃ|

📜 ಮಂಡ,‌ ಪೇಯಾ, ವಿಲೇಪಿ.....ಲಾಘವಮ್|.....ಧಾತು ಸಾಮ್ಯಕೃತ್|....ಸ್ರೋತೋ ಮಾರ್ದವ....ಸ್ವೇದೀ....||....ಮಲಾನುಲೋಮನೇ ಪಥ್ಯಾ ಪೇಯಾ ದೀಪನಪಾಚನೀ||

📜 ......ಸ್ಥೂಲಾನ್ ಮಧೂದಕಮ್ ||

- ಅಷ್ಟಾಂಗ ಹೃದಯ, ಸೂ.ಸ್ಥಾನ ಅಧ್ಯಾಯ-8,5 &6 ಮಾತ್ರಾಶಿತೀಯ, ದ್ರವದ್ರವ್ಯ ವಿಜ್ಞಾನೀಯ, ಅನ್ನಸ್ವರೂಪ ಅಧ್ಯಾಯ.

◆ ಆರೋಗ್ಯ, ಸುಖಜೀವನ ಮತ್ತು ಚಿಕಿತ್ಸೆಯನ್ನು ಆಧಾರವಾಗಿಟ್ಟುಕೊಂಡು ನಮ್ಮ ಶರೀರ ಕೃಶವಾಗಿ ಅಂದರೆ ತೆಳ್ಳಗೆ ಇರುವುದು ಶ್ರೇಷ್ಠ ಎಂದಿದೆ ಆಯುರ್ವೇದ.

📝 ನಾವು ಅತೀ ತೆಳ್ಳಗೂ ಅಲ್ಲದೇ, ಅತಿ ದಪ್ಪವೂ ಅಲ್ಲದೇ, ಮಧ್ಯಮ ಮತ್ತು ಸದೃಢ ಶರೀರಿಗಳಾಗಿ ಇರಲು ಸರಳ ಉಪಾಯಗಳು:

🔹 ಪಾಲನಾ ಯೋಗ್ಯ ಉಪಾಯ-
 1) ಆಹಾರದ ಪ್ರಮಾಣ: 
ನಮ್ಮ ಜಠರವೇ ಆಹಾರ ಸೇವನೆಗೆ ಅತ್ಯುತ್ತಮ ಮಾನದಂಡವೇ ಹೊರತು ಅಂಜಲಿ ಪ್ರಮಾಣ(calculation based on calories)ಅಲ್ಲ!!!
ಅಂದರೆ *ಅಳತೆ ಮಾಡಿ ಆಹಾರ ಸೇವನೆ ಸರಿಯಲ್ಲ*, ಇದಕ್ಕಾಗಿ "ಮಾತ್ರಾ ಆಶಿತೀಯ (food dosage)" ಅಧ್ಯಾಯ ವರ್ಣಿಸಿದ್ದಾರೆ.‌

ನಮ್ಮ ಜಠರವು ಇಂದಿನ ಶಾರೀರಿಕ ಶ್ರಮವನ್ನು ಆಧರಿಸಿ ಹಸಿವನ್ನೂ, ಹಸಿವನ್ನಾಧರಿಸಿ ಈ ದಿನದ ಆಹಾರ ಪ್ರಮಾಣವನ್ನೂ, ಎಷ್ಟು ಹಿಡಿಯುತ್ತದೆ ಎಂದು ಊಟಕ್ಕೆ ಕೂರುವ ಮೊದಲೇ ತಿಳಿಸುತ್ತದೆ. *ಅದರಲ್ಲಿ 'ಅರ್ಧಭಾಗ'ದಲ್ಲಿ ಘನ ಆಹಾರವನ್ನೂ, ಇನ್ನು 'ಕಾಲುಭಾಗ' ದ್ರವ ಆಹಾರಗಳಿಂದಲೂ ಮತ್ತು ಉಳಿದ 'ಕಾಲುಭಾಗ' ಗಾಳಿಯಾಡಲು ಖಾಲಿ ಉಳಿಸಲು ತಿಳಿಸುತ್ತಾರೆ.*
ಅಂದರೆ ರೊಟ್ಟಿ, ಮುದ್ದೆ, ಅನ್ನ ಘನ ಆಹಾರ, ಪಲ್ಯೆಗಳು, ಸಂಬಾರು ದ್ರವ ಆಹಾರ...

🔹 ಪಾಲನಾ ಯೋಗ್ಯ ಉಪಾಯ-
 2) ಆಹಾರದೊಡನೆ ನೀರು ಸೇವನೆ: 
° ಆಹಾರದ ಮೊದಲೇ ನೀರುಕುಡಿದರೆ ದುರ್ಬಲ ಮತ್ತು ತೆಳ್ಳಗೂ, 
° ನಂತರ ಕುಡಿದರೆ ದುರ್ಬಲ ಮತ್ತು ದಢೂತಿ ಶರೀರವೂ, 
° ಮಧ್ಯ-ಮಧ್ಯ ನೀರು ಕುಡಿದರೆ ದೃಢ ಮತ್ತು ಸಮಶರೀರವೂ ದೊರಕುತ್ತದೆ. 
ಏಕೆಂದರೆ ಎಂಜೈಮ್ ಗಳು(ಅಗ್ನಿ) ನೀರಿನಿಂದ ನಿರ್ಬಲವಾಗುವ ಕಾರಣ ಮಧ್ಯ ಮಧ್ಯ ಸ್ವಲ್ಪ ಪ್ರಮಾಣ ಅಂದರೆ ಲಾಲಾರಸ ಉತ್ಪತ್ತಿಗೆ ಸಹಾಯವಾಗುವಷ್ಟು ಅಂದರೆ ಬಾಯಿಯ ಎಂಜೈಮ್ ಸಮರ್ಥವಾಗಿ ಸ್ರಾವವಾಗುವಷ್ಟು ನೀರು ಮುಕ್ಕಳಿಸಿದರೆ ಜಠರದ ಅಗ್ನಿಗೆ ಬಾಯಿಯ ಅಗ್ನಿ ಸಹಾಯಮಾಡಿ ದೃಢ ಶರೀರ ಕೊಡುತ್ತದೆ.

🔹 ಪಾಲನಾ ಯೋಗ್ಯ ಉಪಾಯ-
 3) ಅನುಪಾನ ಸೇವನೆ:
ಊಟದ ನಂತರ ಆಹಾರವು ಜೀರ್ಣವಾಗಲು, ಆಹಾರದ ನಂತರ ಏನನ್ನು ಕುಡಿಯಬೇಕು ಎನ್ನುವುದೇ "ಅನುಪಾನ" ಇದು ನಮ್ಮ ಶರೀರವನ್ನು ತೆಳ್ಳಗೆ ಇಡಲು ಅತ್ಯಂತ ಉತ್ತಮ ಮಾರ್ಗ.
★ ಸಿಹಿ ಪ್ರಧಾನ ಆಹಾರ, ಗೋಧಿ ಮುಂತಾದ ಜಿಗುಟುಳ್ಳ ಆಹಾರ, ಅಧಿಕ ಪ್ರಮಾಣದಲ್ಲಿ ಯಾವುದೇ ಆಹಾರವನ್ನು ತಿಂದಿದ್ದರೆ *ಬಿಸಿ-ಬಿಸಿ ನೀರು ಅತ್ಯತ್ತಮ ಅನುಪಾನ* ನಮ್ಮ ತಪ್ಪು ಎಂದರೆ ಹೊಟ್ಟೆ ಭಾರವಾದಾಗ ಜೀರ್ಣಕ್ಕೆ ಸಹಾಯವಾಗುವ ಅನುಪಾನ ಬಿಟ್ಟು ಐಸ್ ಕ್ರೀಮ್, ಜ್ಯೂಸ್, ಬಾಳೆಹಣ್ಣು ಅಥವಾ ಫ್ರೂಟ್ ಸಲಾಡ್ ತಿಂದರೆ ಎಂತಹ ಪಥ್ಯ ಮಾಡಿದರೂ ತೆಳ್ಳಗಾಗುವುದು ಅಸಾಧ್ಯ.

★ ಪ್ರೋಟೀನ್ ಹೆಚ್ಚಿರುವ ದಾಲ್ ಗಳನ್ನು(ಬೇಳೆ ಪಲ್ಯ) ಸೇವನೆ ನಂತರ ಮೊಸರಿನ ತಿಳಿನೀರು ಅಥವಾ ಆಗತಾನೇ ತಯಾರಿಸಿದ ಮಜ್ಜಿಗೆ ಅತ್ಯಂತ ಶ್ರೇಷ್ಠ ಅನುಪಾನ.

★ ದಪ್ಪ ಇರುವವರು ಆಹಾರ, ಮೇದಸ್ಸು, ಕಫ ಜೀರ್ಣವಾಗಲು ಜೇನುತುಪ್ಪ ಶ್ರೇಷ್ಠ ಅನುಪಾನ. ನೆನಪಿಡಿ ಬಿಸಿ ಜೇನುತುಪ್ಪ ಅಲ್ಲ, ಜೇನಿನೊಂದಿಗೆ ಬಿಸಿ ನೀರೂ ಸಲ್ಲದು.

★ ಮಾಂಸಾಹಾರ ತಿಂದವರಿಗೆ ಮದ್ಯಸೇವನೆ ಶ್ರೇಷ್ಠ(ಇಂದಿನ ಬಿಯರ್, ಬ್ರಾಂದಿ, ವಿಸ್ಕಿ....ಮುಂತಾದವುಗಳಲ್ಲ) ಅಂದರೆ 
📜.....ಅರಿಷ್ಠಃ ಸರ್ವಮದ್ಯ ಗುಣಾಧಿಕಃ| ಎಂದಿದ್ದಾರೆ.
 ಮಾಂಸ ಸೇವನೆ ನಂತರ ಮುಸ್ತಾರಿಷ್ಟ, ಅಭಯಾರಿಷ್ಟಗಳು ಶ್ರೇಷ್ಠ ಅನುಪಾನಗಳು. ಇದನ್ನು ಆಯುರ್ವೇದ ವೈದ್ಯರು ನಿರ್ಧರಿಸುತ್ತಾರೆ.

★ ಮಕ್ಕಳಿಗೂ, ವೃದ್ಧರಿಗೂ, ರೋಗದಿಂದ ಶಕ್ತಿ ಕಳೆದುಕೊಂಡವರಿಗೂ, ನಿತ್ಯ ಔಷಧಿ ಸೇವನೆಯಿಂದ ಶಕ್ತಿ ಹೀನರಿಗೂ ಹಾಲು ಶ್ರೇಷ್ಠ ಅನುಪಾನವಾಗಿದೆ.

ಒಟ್ಟಾರೆ,
★ ಅಧಿಕ ಭೋಜನದಲ್ಲಿ ಬಿಸಿನೀರು ಅಥವಾ ಮಜ್ಜಿಗೆಯೂ, ಹಗುರ ಅಲ್ಪ ಭೋಜನದಲ್ಲಿ ಹಾಲು ಉತ್ತಮ ಅನುಪಾನ.

🔹 ಪಾಲಾನಾಯೋಗ್ಯ ಉಪಾಯ-
4) ರಾತ್ರಿ ಆಹಾರದ ಪ್ರಮಾಣ:
ಅತ್ಯಂತ ಹಗುರವಾದ ಅನ್ನದ ಗಂಜಿ ಕುಡಿದು ಮಲಗಿಬಿಡಿ, ಕೆಲವರಿಗೆ ಮಧುಮೇಹದ ಕಾರಣ, ಅಭ್ಯಾಸದ ಕಾರಣ ಮಧ್ಯರಾತ್ರಿ ಹಸಿವಾದರೆ ಮತ್ತೆ ಅನ್ನದ ಗಂಜಿ ಸೇವಿಸಿ. ಎರಡನೇ ದಿನ ಮಧುಮೇಹಿಗಳು ಔಷಧ ಪ್ರಮಾಣ ಕಡಿಮೆ ಮಾಡಿ, ಸಾಮಾನ್ಯರು ಮಧ್ಯರಾತ್ರಿ ಹಸಿವಾದರೆ ಕೇವಲ ನೀರು ಸೇವಿಸಿ. ನಂತರ ಹೊಂದಿಕೆಯಾಗುತ್ತದೆ.

🔹 ಪಾಲಾನಾಯೋಗ್ಯ ಉಪಾಯ-
5) ಬೆಳಗಿನ ‌ಆಹಾರ:
ಅತ್ಯಂತ ಶ್ರೇಷ್ಟತೆಯನ್ನು ಹೊಂದಿದ ಬೆಳಗಿನ ಆಹಾರ ಉಪಹಾರದ ಹೆಸರಿನಲ್ಲಿ ಅತ್ಯಲ್ಪ ಪ್ರಮಾಣ, ತಂಗಳು(ಇಡ್ಲಿ,ದೋಸೆಗಳು), ತೀಕ್ಷ್ಣ ದ್ರವ(ಕಾಫೀ-ಟೀಗಳು) ಸೇವಿಸಿ ಅನಾರೋಗ್ಯಕ್ಕೆ ನಾಂದಿ ಹಾಡುತ್ತೇವೆ. ಬೆಳಿಗ್ಗೆ ಭೋಜನ ಅತ್ಯುತ್ತಮ ಪದಾರ್ಥಗಳಿಂದ ಕೂಡಿರಬೇಕು.

🔹 ಪಾಲಾನಾಯೋಗ್ಯ ಉಪಾಯ-
 6) ಮಧ್ಯಾಹ್ನದ ಆಹಾರ:
ಹಸಿವಾದ ನಂತರ ಮಧ್ಯಮ ಪ್ರಮಾಣದ ಆಹಾರ ಸೇವಿಸಿ.
🔹 ಪಾಲಾನಾಯೋಗ್ಯ ಉಪಾಯ-
 7) ಹಗಲು ನಿದ್ದೆ: 
ಬಹಳ ಜನ ತಪ್ಪು ತಿಳಿದಿದ್ದಾರೆ, ನಿದ್ದೆಯಿಂದ ಶರೀರ ಆಯಾಸ ನೀಗುತ್ತದೆ ಎಂದು, ಆದರೆ ಹಗಲುನಿದ್ದೆಯಿಂದ ಎಂದೆಂದೂ ಸ್ಥೂಲ ಶರೀರ ನಮ್ಮದಾಗುತ್ತದೆ ಎಚ್ಚರ. ತೆಳ್ಳಗಾಗಬೇಕೆ? ಹಗಲು ನಿದ್ದೆ ತ್ಯಜಿಸಿ(ಬೇಸಿಗೆಯಲ್ಲಿ ಹೊರತು) .

🔹 ಪಾಲಾನಾಯೋಗ್ಯ ಉಪಾಯ-
8) ರಾತ್ರಿ ಭೋಜನ ಸಮಯ:
ತಡರಾತ್ರಿ ಭೋಜನ ಅತ್ಯಂತ ಅನಾರೋಗ್ಯಕರ ಮತ್ತು ದಪ್ಪದೇಹಕ್ಕೆ ಕಾರಣ. ರಾತ್ರಿ ಸೂರ್ಯ ಮುಳುಗುವ ಮೊದಲು ಗಂಜಿ ಸೇವಿಸಿ

       ✡ಧನ್ಯವಾದಗಳು ✡
••••••••••••••
By
ಹೆಚ್.ಬಿ.ಮೇಟಿ

e-Notes

10th ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳುpdf

e-Notes CLICK HEAR TO DOWNLOAD

Thursday 18 February 2021

ಜೇನು ತುಪ್ಪ ಸರಿಯಾಗಿ ಬಳಸಿದರೆ ಅಮೃತ. ಇಲ್ಲದಿದ್ದರೆ ವಿಷ!!

🙏ಅಮೃತಾತ್ಮರೇ ನಮಸ್ಕಾರ 🙏
 🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
19.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-25
••••••••••••••
✍️: ಇಂದಿನ ವಿಷಯ:
ಜೇನು ತುಪ್ಪ ಸರಿಯಾಗಿ ಬಳಸಿದರೆ ಅಮೃತ. ಇಲ್ಲದಿದ್ದರೆ ವಿಷ!!
•••••••••••••••••••••••••••••••••••••••••

ಈ ದಿನ,
ಜೇನುತುಪ್ಪವನ್ನು ಗರವಿಷವನ್ನಾಗಿಸುತ್ತಿರುವ ವಿಧಾನವನ್ನೂ ಮತ್ತು ಅದು ಸಿರೋಸಿಸ್, ನೆಫ್ರೈಟೀಸ್ ರೋಗಗಳನ್ನು ಉಂಟುಮಾಡುವ ವಿಧಾನ ನೋಡೋಣ. 

📜 ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||
-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

👉 ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!!
ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ.
ಹಾಗಾಗಿ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
★ ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. 
★ ಅದನ್ನು ಬಿಸಿ ಆಹಾರಕ್ಕೆ ಹಾಕಿದರೆ ಆ ವಿಷ ತೀಕ್ಷ್ಣತೆ ಪಡೆಯುತ್ತದೆ.‌ 
★ ಜ್ವರಪೀಡಿತನಿಗೆ ಕುಡಿಸಿದರೆ ಅದು ಅತ್ಯುಗ್ರ ರೋಗ ತರುತ್ತದೆ.
★ ಬಿಸಿಲಿನಲ್ಲಿ ಬಳಲಿದ ಉಷ್ಣಪೀಡಿತನಿಗೆ ಕೊಟ್ಟರೆ ತಕ್ಷಣ ಕೊಂದೇ ಹಾಕುತ್ತದೆ!!!

👉 ಏನು ಮಾಡುತ್ತಿದ್ದೇವೆ?
ಈಗ ಬಹುತೇಕರು, ಶರೀರವನ್ನು ತೆಳ್ಳಗೆ ಮಾಡಿಕೊಳ್ಳಲು, ಕೊಬ್ಬಿನಅಂಶ ಕರಗಿಸಲು ಪ್ರತಿದಿನ ಬೆಳಿಗ್ಗೆ ಬಿಸಿನೀರು ಜೇನುತುಪ್ಪವನ್ನು ಯಾವ ಸಂಶಯ ಭಯವೂ ಇಲ್ಲದೇ ಸೇವಿಸುತ್ತಿದ್ದಾರೆ!! ಯಾವ ಫಲಿತಾಂಶವೂ ಇಲ್ಲದೇ!!!
ಇದು ಅಚ್ಚರಿಯೇ ಸರಿ.

👉 ಪರಿಣಾಮ ಏನು?
ಬಿಸಿನೀರಿನ ಸಂಪರ್ಕದಿಂದ ಜೇನು ಮಂದಗತಿಯ ವಿಷವಾಗುತ್ತದೆ. ಇದರಿಂದ ಹಾನಿಗೊಳಗಾಗುವ
 ಮೊದಲ ಅಂಗ ಎಂದರೆ "ಯಕೃತ್"!!
ನೆನಪಿಡಿ, ಯಾವುದೇ ಕಾಯಿಲೆಗೆ ನಾವು ಬಿಟ್ಟೂ ಬಿಡದಂತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತುತ್ತಿರುವುದಕ್ಕೆ ಕಾರಣವೇ ಯಕೃತ್ತನ್ನು ವಿಷಮಯವಾಗಿಸಿರುವುದು.

👉 ನಿಧಾನಗತಿಯ ವಿಷವಾಗುವ ಕಾರ್ಯ:
ಬಿಸಿ ಜೇನುತುಪ್ಪ ಶರೀರದ ಅಂಗಗಳಿಗೆ ಬದುಕಲು ಅತ್ಯಗತ್ಯವಾಗಿ ಬೇಕಾಗುವ ಲಿಪಿಡ್ ಅನ್ನು ವಿಭಜನೆ ಮಾಡುತ್ತದೆ. ಆಗ ‌ಯಕೃತ್ ಅದನ್ನು ತಡೆಯಲು ಪ್ರಯತ್ನಿಸಿ ತನ್ನ ಸ್ನಿಗ್ಧತೆಯ ಸತ್ವವನ್ನೇ ಕಳೆದುಕೊಂಡು *ಸಿರೋಸಿಸ್ ಎಂಬ ತಾನೇ ಒಣಗಿಹೋಗುವ ಕಾಯಿಲೆಗೆ ತುತ್ತಾಗುತ್ತದೆ.*😐
ತದನಂತರ ವಿಷವನ್ನು ನೇರ ರಕ್ತಕ್ಕೆ ಬಿಟ್ಟುಬಿಡುತ್ತದೆ, ತತ್ಪರಿಣಾಮ ಎರಡೂ ಕಿಡ್ನಿಗಳು ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ *ನೆಫ್ರೈಟೀಸ್* ಆಗಿ ಕಿಡ್ನಿ ಫೇಲ್ ನಲ್ಲಿ ಅಂತ್ಯವಾಗುತ್ತಿವೆ 😶

👉 ಶೀಘ್ರ ವಿಷಕಾರಿ ಪರಿಣಾಮ:
ಬಿಸಿ ಜೇನು
+ಬಿಸಿನೀರು
+ಬೇಸಿಗೆ ಕಾಲದಲ್ಲಿ 
+ಉಷ್ಣಪೀಡಿತ ಅವಸ್ಥೆಯಲ್ಲಿ 
"ಕುದಿಸಿದ ಜೇನನ್ನು ಕೊಟ್ಟರೆ, ಯಕೃತ್-ಕಿಡ್ನಿಯನ್ನೂ ಮೀರಿ ಹೃದಯದ/ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತತ್ಕ್ಷಣ ಸಂಕೋಚ ಮಾಡಿ ಹೃದಯ ಸ್ತಂಭನ ಮಾಡಿ ಕೊಲ್ಲುತ್ತದೆ.
 ಅಥವಾ 
ಮೆದುಳು/ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆಯನ್ನು ನಿಲ್ಲಿಸಿ ತಕ್ಷಣ ಕೊಂದುಹಾಕುತ್ತದೆ.

👉 ವೈಜ್ಞಾನಿಕ ವಿವರಣೆ:
ಬಿಸಿ ಜೇನಿಗೆ ಕೊಬ್ಬನ್ನು ಕರಗಿಸುವ ಪ್ರಭಲ ಶಕ್ತಿ ಇದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಆದರೆ ಜೀವ ಉಳಿಯಲು ಅಗತ್ಯವಾದ ಕೊಬ್ಬನ್ನೇ ಕರಗಿಸುತ್ತದೆ ಎಂದು ಅನೇಕರು ಅರಿಯರು.
ಇದೇ ಕಾರಣಕ್ಕೆ  *ಆಯುರ್ವೇದ ಓದದ, ಆ ವಿಜ್ಞಾನದ ಗಂಧವನ್ನೇ ಅರಿಯದ ಅನಾಮಧೇಯರೂ ಆಯುರ್ವೇದ ಸಲಹೆ ಮತ್ತು ಔಷಧ ಕೊಡುತ್ತಿದ್ದಾರೆ!*🤦‍♂

🙆‍♂ ಸಾವಿರಾರು ಜನರನ್ನು ಸೇರಿಸಿ ಯೋಗ ಹೇಳಿಕೊಡುವವರೂ ಯಾವುದೇ ಅಧ್ಯಯನ ಇಲ್ಲದೇ ಇದ್ದರೂ ಎಗ್ಗಿಲ್ಲದೇ ಸಲಹೆ ಕೊಡುತ್ತಿದ್ದಾರೆ, ಔಷಧಗಳನ್ನೂ ಕೊಡುತ್ತಿದ್ದಾರೆ(ಎಲ್ಲರೂ ಹಾಗಲ್ಲ, ಹಲವಾರು ಜನ ಯೋಗ್ಯ ಸ್ವ-ಅಧ್ಯಯನ, ಕುಟುಂಬ ಪರಂಪರೆಯಿಂದ ಶುದ್ಧ ಆಯುರ್ವೇದ ಪಾಲಿಸುವವರೂ ಇದ್ದಾರೆ).

💁‍♂ ತೂಕ ಕಳೆದುಕೊಳ್ಳಲು ಜೇನುತುಪ್ಪ+ಬಿಸಿನೀರನ್ನು ಎಂದಿಗೂ ಸೇವನೆ ಮಾಡದಿರಿ.
ಮತ್ತು
ಯಾರೇ ಹೇಳಲಿ ದಯಮಾಡಿ ಯಾವ ಆಯುರ್ವೇದ ಆಚಾರ್ಯರು ಎಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ ಎಂದು ರೆಫೆರೆನ್ಸ್ ಕೇಳಿ ತಿಳಿದುಕೊಳ್ಳುವುದನ್ನು ಮರೆಯದಿರಿ. ಇದು ನಮ್ಮೆಲ್ಲರ ಹಕ್ಕು, ಅಲ್ಲವೇ?

✍ ಕಂಡ ಸತ್ಯ:
ಹಿಮಾಚಲ ಪ್ರದೇಶದ, ಕಾಂಗ್ರಾದ ಅಥರ್ವ ಆಯುರ್ಧಾಮದ ಶಾಖೆಗೆ ಇತ್ತೀಚಿಗೆ ದಂಪತಿಗಳಿಬ್ಬರೂ "ಸಿರೋಸಿಸ್ ಆಫ್ ಲಿವರ್" ಸಮಸ್ಯೆಯಿಂದ ಬಂದಿದ್ದರು. ಅವರ ಆ ಸಿರೋಸಿಸ್ ಗೆ ಕಾರಣ ಹುಡುಕುತ್ತಾ ಹೋದರೆ ಕಂಡ ಸತ್ಯ ನಮ್ಮನ್ನೊಮ್ಮೆ ದಿಗ್ಭ್ರಾಂತರನ್ನಾಗಿಸಿತು.
ಜೇನು ಮತ್ತು ಬಿಸಿಬಿಸಿ ನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು! ಹಾಗಾಗಿ ಅವರ ಕೊಬ್ಬಿನ ಮೂಲ ಸ್ಥಾನ ಯಕೃತ್ ಒಣಗಿಹೋಗಿತ್ತು.!! ಲಿವರ್ ಸಿರೋಸಿಸ್ ಬಂದಿತ್ತು!!!

👉 ಪರಿಹಾರ?:
 • ತಕ್ಷಣವೇ ಅಪಾಯಕಾರಿ ಪದ್ಧತಿಯನ್ನು ನಿಲ್ಲಿಸುವುದು. 
 • ಕೇವಲ ಶುದ್ಧ ಜೇನನ್ನು ಸೇವಿಸಬಹುದು.  
• ಆಯುರ್ವೇದ ವೈದ್ಯರನ್ನು ಕಾಣುವುದು.
 • ಪ್ರಾಮಾಣೀಕರಿತ ಮುದ್ರೆ ಇರುವ ಜೇನನ್ನು ಬಿಸಿಮಾಡಿ ತಯಾರಿಸಿರುತ್ತಾರೆ, ಹಾಗಾಗಿ ಅದು ನಿಶಿದ್ಧ!!. 
• ಅದರಲ್ಲಿ ಹರಳುಗಟ್ಟಿದರೆ ಬಿಸಿನೀರಿನಲ್ಲಿ ಇಡಲು ತಿಳಿಸುತ್ತಾರೆ!!! ಅದೂ ನಿಶಿದ್ಧ. 
 • ನಾವೇ ಜೇನುಸಾಕಣೆ ಮಾಡುವುದು ಅಥವಾ ಸಾಕಣೆ ಕೇಂದ್ರಕ್ಕೆ ಹೋಗಿ ಕಣ್ಮುಂದೆ ಸಂಗ್ರಹಿಸುವುದು ಒಳ್ಳೆಯ ಉಪಾಯ.

       🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

Wednesday 17 February 2021

ಆಹಾರವೋ-ಮಂದ ವಿಷವೋ?!!

🙏ಅಮೃತಾತ್ಮರೇ ನಮಸ್ಕಾರ 🙏
🍇ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍇
    🥝ಸ್ವಾಸ್ಥ್ಯ ಸರ್ವರದ್ದೂ ಆಗಲಿ🥝
••••••••••••••••••••••••••••••••••••••••••
18.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-24
••••••••••••••
✍️: ಇಂದಿನ ವಿಷಯ:
ಆಹಾರವೋ-ಮಂದ ವಿಷವೋ?!!
•••••••••••••••••••••••••••••••••••••••••

ನಿತ್ಯ ತಿನ್ನುವ ಬಹುತೇಕ ಆಹಾರನ್ನು ಅರಿವಿಲ್ಲದೇ ನಾವು *"ವಿಷ"* ವನ್ನಾಗಿಸಿದ್ದೇವೆ.!
ಮತ್ತು 
ನಾವು ನಿತ್ಯ ಸೇವಿಸುವ ಔಷಧಗಳು ಸ್ವತಃ ತಾವೇ ಗರವಿಷಗಳು.!!!

ಅಂದರೆ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಎಂದು ಇನ್ನೊಬ್ಬರ ಮೇಲೆ ಭಾರಹಾಕುವ  ಬದಲು, ನಮ್ಮ ಕೈಯಿಂದಲೇ ವಿಷವನ್ನಾಗಿಸಿಕೊಳ್ಳುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ.

ಸಧ್ಯಕ್ಕೆ ಸಾಧ್ಯವಾಗುವ ಪರಿಹಾರ ಇದೇ, ಮುಂದೆ ರಸಗೊಬ್ಬರ, ಕೀಟನಾಶಕಗಳನ್ನು ವಿಚಾರ ಮಾಡಿ ತ್ಯಜಿಸುವ  ಹಾದಿ ನೋಡೋಣ.

📜 ಯತ್ಕಿಂಚಿತ್ ದೋಷಂ‌ ಉತ್ಕ್ಲೇಶಃ ನ ಹರೇತ್ ತತ್‌ಸಮಾಸತಃ | ವಿರುದ್ಧಂ ಶುದ್ಧಿಃ ಅತ್ರೇಷ್ಟಾ ಶಮೋ ವಾ ತದ್ವಿರೋಧಿಭಿಃ ||*
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅನ್ನರಕ್ಷ ಅಧ್ಯಾಯ-7/45

ಒಂದು ವಾಕ್ಯದಲ್ಲಿ ಗರವಿಷ ಮತ್ತು ಶೀಘ್ರವಿಷದ ವ್ಯಾಖ್ಯೆ, ಪರಿಣಾಮ‌ ಮತ್ತು ಚಿಕಿತ್ಸೆ ಹೇಳಿದ್ದಾರೆ.

ಯಾವುದನ್ನು ತಿಂದ ನಂತರ, ಕರುಳು, ಯಕೃತ್ ಮತ್ತು ರಕ್ತಪರಿಚಲನೆಯಲ್ಲಿ ದ್ರವರೂಪದ *ಆಹಾರರಸ* ಉಂಟಾಗಿ ಜೀವಕೋಶಗಳ ಒಳಗೆ ಹೋಗಬೇಕೋ ಅಂತಹ 
ಆಹಾರರಸವು, ಪರಿಚಲನೆಯಲ್ಲಿ ಮುಂದೆ ಚಲಿಸದೆಯೂ, ಶರೀರದಿಂದ ಹೊರಕ್ಕೆ ಹೋಗದೆಯೂ, ಯಾವುದೋ ಒಂದು ಸ್ಥಳದಲ್ಲಿ  ನಿಂತುಬಿಡುವುದೋ ಅದು *ವಿಷವಾಗಿ ಅಥವಾ ಗರವಿಷವಾಗಿ* ಪರಿಣಮಿಸುತ್ತದೆ. 

🔺 ವಿಷ: ಶೀಘ್ರವಾಗಿ ಕೊಲ್ಲುವುದು.

🔴 ಗರವಿಷ: ಮರಳಿ ಗುಣಪಡಿಸಲಾಗದ ರೋಗಗಳನ್ನು ನಿಧಾನವಾಗಿ ಉಂಟುಮಾಡಿ ಶರೀರವನ್ನು ಬಹುವಾಗಿ ನರಳಿಸಿ ಕೊಲ್ಲುವುದು.

*ಎರಡರಲ್ಲೂ ಅಪಾಯಕ್ಕೆ ತುತ್ತಾಗುವ ಅಂಗ ಯಕೃತ್!! ಆದರೆ ಕೊಲ್ಲುವ ಅಂಗ ಮೂತ್ರಪಿಂಡ, ಹೃದಯ ಅಥವಾ ಮೆದುಳು!!!*

👁‍🗨 ಗಮನಿಸಿ: ಆಹಾರದಲ್ಲಿ ಶರೀರಕ್ಕೆ ಬೇಡವಾದ ಯಾವುದೇ ಅಂಶವನ್ನು ಯಕೃತ್ ಅದನ್ನು ವಿಷ ಎಂದು ಪರಿಗಣಿಸಿ ತಾನು ತೊಂದರೆ ತೆಗೆದುಕೊಂಡು ತೊಂದರೆಗೆ ಒಳಗಾಗುತ್ತದೆ.

ಇಂದಿನ ಅನೇಕರಿಗೆ ಫ್ಯಾಟೀ ಲಿವರ್ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ಅಲೋಪಥಿ ವಿಧಾನದಲ್ಲಿ ಚಿಕಿತ್ಸೆ ಇಲ್ಲದ ಕಾರಣ ಏನಾಗಲ್ಲ ಬಿಡಿ ಎಂದು ಉಪೇಕ್ಷಿಸುತ್ತಾರೆ. ಇದು ಗರವಿಷದ ಪರಿಣಾಮ ಎಂದು ಆ ವಿಜ್ಞಾನಕ್ಕೆ ಗೊತ್ತಿಲ್ಲ. ಹಾಗೇ ಇಂಡೈರೆಕ್ಟ್ ಬಿಲಿರುಬಿನ್ ಹೆಚ್ಚಾಗಿ ಬಹಳ ಕಾಲ ಉಳಿಯುವ ಜಾಂಡೀಸ್, ಯಕೃತ್ ಎಂಜೈಮ್ ವೃದ್ಧಿ ಎಲ್ಲವೂ ಉಪೇಕ್ಷೆಗೆ ಯೋಗ್ಯವೇ ಅಲ್ಲ. 
ಹಾಗೆಯೇ ಆಹಾರ ಒಂದೆಡೆಯಾದರೆ ನಿತ್ಯವೂ ಮಾತ್ರೆ ಸೇವನೆ ಮಾಡಿ ಜೀವಿಸುವ ಅದೆಷ್ಟೋ ಜನರಿಗೆ ಔಷಧಿಗಳ ಅಡ್ಡಪರಿಣಾಮವೇ ಮುಖ್ಯ ಕಾಯಿಲೆಗಿಂತ ಅಪಾಯಕಾರಿ, ಮಧುಮೇಹವನ್ನು ಆಹಾರ ವಿಹಾರಗಳಿಂದ ನಿಯಂತ್ರಿಸುವ ಬದಲು ನಿತ್ಯ ಔಷಧಿ ಸೇವಿಸುವ ಜನ ಗಮನಿಸಬೇಕು, ಆ ಎಲ್ಲಾ ಔಷಧಿಗಳೂ ಯಕೃತ್ತಿನ ಮೇಲೆ ಅಡ್ಡಪರಿಣಾಮ ಬೀರುತ್ತಿರುತ್ತವೆ, ಇವೆಲ್ಲಾ ಗರವಿಷಗಳಾದ್ದರಿಂದ ಮುಂದೆ ಕಿಡ್ನಿ, ಹೃದಯದ ತೊಂದರೆ ಬಂದಾಗ ಔಷಧಗಳ ಹೆಸರಿನಲ್ಲಿ ನುಂಗಿದ ಗರವಿಷಗಳೇ ಕಾರಣ ಎನ್ನಿಸದಂತೆ ಡಯಾಬಿಟೀಸ್ ಇದೆ ಇದೆಲ್ಲಾ ಸಾಮಾನ್ಯ ಎಂದು, ಸುಮ್ಮನಾಗಿಸುವ ವೈದ್ಯಕೀಯವನ್ನು ನಂಬುವುದು ಹಿತಕರವೇ?
ಕೆಲವರು ಕಳೆದ ಐವತ್ತು ವರ್ಷಗಳಿಂದ ಮಧುಮೇಹ ಇದ್ದರೂ ಒಂದೂ ಮಾತ್ರೆ ಇಲ್ಲದೇ ಅಥವಾ ಕೇವಲ ಒಂದು ಮಾತ್ರೆಯಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲದಂತೆ ಬದುಕುತ್ತಿರುವುದು, ಅವರ ಯಕೃತ್ ಆರೋಗ್ಯವನ್ನು ಸದೃಢವಾಗಿಟ್ಟುಕೊಂಡಿರುವುದೇ ಕಾರಣ.

ಇನ್ನು ನಮ್ಮ ಆಹಾರಕ್ಕೆ ಬಂದರೆ "ನಾಲಿಗೆಗೆ ರುಚಿಸುವುದೇ ಆಹಾರವಾಗಿ ಪರಿಗಣಿಸಿರುವ ನಾವು, ಅಂತಹ ಆಹಾರವನ್ನು ಕರುಳು ತಿರಸ್ಕಾರ ಮಾಡಿ ಎದೆ ಉರಿ, ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ ಮುಂತಾದವುಗಳ ಮೂಲಕ ತೋರಿಸಿದರೂ, ಇದು ಗ್ಯಾಸ್ಟ್ರಿಕ್‌ ಎಂದು ಉಪೇಕ್ಷಿಸಿ ಮಾತ್ರೆ ಹೆಸರಿನ ಮುಸುಕು ಔಷಧಗಳನ್ನು ಬಳಸಿ ಮುಚ್ಚಿಹಾಕುತ್ತಿರುವ ಪರಿಣಾಮವೇ ಯಕೃತ್-ಮೂತ್ರಪಿಂಡ-ಹೃದಯ-ಮೆದುಳುಗಳ ಕಾಯಿಲೆ.

ಇದು ಕೇವಲ ಥಿಯರಿ ಎನ್ನುವವರು ಗಮನಿಸಿ *ಇಂದು ಚಿಕ್ಕ ಮಕ್ಕಳಿಗೂ ಡಯಾಲೈಸಿಸ್ ಮಾಡಿಸುತ್ತಿರುವುದು* ಕಿಡ್ನಿ ರೋಗ ಅಲ್ಲದೇ ಮತ್ತೇನು? 
ಕಿಡ್ನಿಗಳು ಹಾಳಾಗುವುದು ಶರೀರದಲ್ಲಿ ವಿಷ ಸೇರಿದಾಗ ಅಲ್ಲವೇ?
ಶೀಘ್ರ ವಿಷದ ಪರಿಣಾಮ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಆದರೆ *ಗರವಿಷ* ನಿಧಾನವಾಗಿ ಕಿಡ್ನಿಗಳನ್ನು ನಾಶಮಾಡುತ್ತವೆ  ಎಂಬುದು ಬಹುತೇಕರಿಗೆ ತಿಳಿದಿಲ್ಲ, ತಿಳಿಸಬೇಕಾದ ವಿಜ್ಞಾನ ತನ್ನ ಅರೆಜ್ಞಾನದ ಕಾರಣ ತಿಳಿಸಿಲೂ ಇಲ್ಲ👁‍🗨

ಇಂತಹ ಅನೇಕ ರೀತಿಯ ಗರವಿಷಗಳನ್ನು ನಾವಿಂದು ಎಗ್ಗಿಲ್ಲದೇ, ಭಯವೂ ಇಲ್ಲದೇ ಬಳಸಿ ನೆಮ್ಮದಿಯಿಂದ ಇದ್ದೇವೆ. ಅದರಲ್ಲಿ ಕೆಲವು ನಮ್ಮ ನಿತ್ಯ ಆಹಾರಗಳು! ಕೆಲವು ಬಾಯಿಚಪಲಗಳು!! ಮತ್ತು ಹಲವಾರು ನಮ್ಮ ನಿತ್ಯ ಔಷಧಿಗಳು!!! 

🛎 ಇಂದು ನಮ್ಮ ಪರಿಚಿತರಿಗೆ ಮಾತ್ರ ಇರುವ ಇಂತಹ ಕಾಯಿಲೆಗಳು, ನಮಗೆ ಪರಿಚಯವಾಗುವ ಮೊದಲೇ ಎಚ್ಚರಗೊಳ್ಳೋಣ.

🗝 ಪರಿಹಾರ:

📜 ಶುದ್ಧೇ....ಹೇಮಚೂರ್ಣಸ್ಯ ...| 
.....ಪದ್ಮಪತ್ರೇ ಅಂಬುವತ್ ವಿಷಮ್||

ಮೊದಲು ಕ್ರಮವರಿತು ಗರವಿಷ ಸೇವನೆ ನಿಲ್ಲಿಸುವುದು.
ಇದರ ಪ್ರಮಾಣ ಅರಿತು "ಸಂಗ್ರಹ ಹೆಚ್ಚಿದ್ದರೆ ಪಂಚಕರ್ಮ ಚಿಕಿತ್ಸೆಯಿಂದ ಹೊರಹಾಕುವುದು"
"ಕಡಿಮೆ ಸಂಗ್ರಹ ಇದ್ದರೆ ಅಲ್ಲೇ ಕರಗಿಸುವ ಶಮನ ಚಿಕಿತ್ಸೆ ಮಾಡಬೇಕು".

ಕೊನೆಗೆ *ಸ್ವರ್ಣಯೋಜನೆ* ಮಾಡುವುದರಿಂದ ಎಂತಹ ವಿಷವನ್ನೂ ಗೆಲ್ಲಬಹುದು 👍

ಇಂತಹ ಅನೇಕ ಕಾಯಿಲೆಗಳ ಗುಣಪಡಿಸಲಾಗದ ಅವಸ್ಥೆಗಳಲ್ಲಿ ಅಥರ್ವ ತಂಡವು ಮೇಲಿನ ರೀತಿಯ ಚಿಕಿತ್ಸಾ ವಿಧಾನಗಳಿಂದ ಯಶಸ್ವಿಯಾಗಿ ಗುಣಪಡಿಸಿದ್ದೂ ಅಲ್ಲದೇ, ಸ್ವರ್ಣಯೋಗ ಪ್ರಯೋಗಗಳಿಂದ ಎಷ್ಟುಬಾರಿ ರಕ್ತಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದರೂ ಯಕೃತ್, ಮೂತ್ರಪಿಂಡಗಳು ವಿಷದ ದುಷ್ಪರಿಣಾಮದಿಂದ ಸಂಪೂರ್ಣ ಹೊರಬಂದು ಆರೋಗ್ಯದಿಂದ ಇರುವುದನ್ನು ನೋಡುತ್ತಿದ್ದೇವೆ.

ಈ ಅನೇಕ ಗರವಿಷಗಳನ್ನು ಹದಿನೆಂಟು ವಿಭಾಗಗಳನ್ನಾಗಿ ಎಚ್ಚರಿಸಿದ್ದಾರೆ ನಮ್ಮ ಆಚಾರ್ಯರು.

ನಾಳೆಯಿಂದ, 
1.ಯಾವ ಆಹಾರ ಗರವಿಷ?
2. ಅದರ ಪರಿಣಾಮ ಏನು?
3. ಚಿಕಿತ್ಸೆ ಹೇಗೆ?
👉 ಇವುಗಳನ್ನು ಪ್ರತಿ ದಿನ 1-2 ಅಥವಾ 3 ಗರವಿಷಗಳನ್ನು ನೋಡೋಣ.

        ✡ಧನ್ಯವಾದಗಳು ✡
•••••••••••
By
ಹೆಚ್.ಬಿ.ಮೇಟಿ

Tuesday 16 February 2021

ಆರೋಗ್ಯದ ವಿಷಯದಲ್ಲಿ ಅತ್ಯಂತ ಪ್ರಮುಖ ವಿಷಯಗಳ ಗುಚ್ಚಕ್ಕೆ ಮುನ್ನುಡಿ ಇಡೋಣ.

🙏ಅಮೃತಾತ್ಮರೇ ನಮಸ್ಕಾರ 🙏
🥗ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍱
   🍹ಸ್ವಾಸ್ಥ್ಯ ಸರ್ವರದ್ದೂ ಆಗಲಿ🍒
••••••••••••••••••••••••••••••••••••••••••
17.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-23
••••••••••••••
✍️: ಇಂದಿನ ವಿಷಯ:
ಇಂದಿನಿಂದ
ಆರೋಗ್ಯದ ವಿಷಯದಲ್ಲಿ ಅತ್ಯಂತ ಪ್ರಮುಖ ವಿಷಯಗಳ ಗುಚ್ಚಕ್ಕೆ ಮುನ್ನುಡಿ ಇಡೋಣ.
•••••••••••••••••••••••••••••••••••••••••

ಸಧ್ಯ ನಾವು ತಿನ್ನುವ ಬಹುತೇಕ ಆಹಾರವನ್ನು *"ವಿಷ"* ದಂತೆ ಪರಿವರ್ತಿಸಿ ತಿನ್ನುತ್ತಿದ್ದೇವೆ! ಅಚ್ಚರಿಯೇ?! 😳

ಅತ್ಯಂತ ಶುದ್ಧ ಸಾತ್ವಿಕ ವ್ಯಕ್ತಿಗೂ ಲಿವರ್ ಫೇಲ್ಯೂರ್? ಕ್ಯಾನ್ಸರ್?  ರೋಗವೇ?!!! ಎಂದು ಅಚ್ಚರಿ ಪಡುತ್ತಿರುವ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಇಂತಹ ಕಾಯಿಲೆಗಳಿಗೆ ಅತ್ಯಂತ ಪ್ರಮುಖ ಕಾರಣವೇ "ಆಹಾರವಿಷ".

*ಅನ್ನ ರಕ್ಷಣೆ* ಹೇಗೆ ಮಾಡಬೇಕು ಮತ್ತು  ಯಾವ ರೀತಿಯಾಗಿ ಸೇವಿಸಿದರೆ "ವಿಷದಂತೆ", "ಗರವಿಷದಂತೆ" ರೋಗ ಅಥವಾ ಮರಣ ತರುತ್ತದೆ ಎಂದು ಹೇಳವ ಚರಕಾದಿ ಎಲ್ಲಾ, ಆಚಾರ್ಯರು *ಅನ್ನ ರಕ್ಷಣೆ* ಗೆ ಗ್ರಂಥದಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ!! ಅವರ ಕಳಕಳಿಗೆ ನಾವೆಲ್ಲಾ ಋಣಿಗಳಾಗಿರಬೇಕು.🙏 

▪️ಸೂಚನೆ: ನಾವು ತಿನ್ನುವ ಯಾವುದೇ ಆಹಾರ ಪದಾರ್ಥವನ್ನು *ಅನ್ನ* ಎಂದೇ ಕರೆಯಲಾಗುತ್ತದೆ, ಈ ಶಬ್ದವನ್ನು ಅಕ್ಕಿಯಿಂದ ತಯಾರಿಸಿದ ಖಾದ್ಯ ಎಂದು ಗ್ರಹಿಸಬಾರದು.  

✍ ವಿರುದ್ಧಂ ಅಪಿ ಚ ಆಹಾರಂ ವಿದ್ಯಾತ್ ವಿಷ, ಗರೋಪಮಮ್|........||
- ಅಷ್ಟಾಂಗ ಹೃದಯ ಸೂತ್ರಸ್ಥಾನ,‌ ಅನ್ನರಕ್ಷ ಅಧ್ಯಾಯ-7/29

ಆಹಾರವನ್ನು ಅತ್ಯಂತ ಆಳದಲ್ಲಿ ಕೆಡಿಸಿದಾಗ ಅದು ವಿಷ ಅಥವಾ ಗರವಿಷವಾಗಿ ಕೆಲಸಮಾಡುವುದು. 

ಇಂದು, ನಾಲಿಗೆ ರುಚಿ ಮತ್ತು ವಿಜ್ಞಾನದ ಹೆಸರಿನ ಆಹಾರದ ಅನಾಲಿಸಿಸ್!(ರಾಸಾಯನಿಕ ಆಧಾರದಲ್ಲಿ ಆಹಾರವನ್ನು ಅಳೆವ ರೀತಿ)ಗಳಿಂದ ನಾವು ತಿನ್ನುವ ಅನ್ನವನ್ನು ವಿಷವನ್ನಾಗಿಸಿಕೊಂಡಿದ್ದೇವೆ. 

*ಎಷ್ಟೇ ನಿಖರವಾಗಿ ಶರೀರದ ಎಲ್ಲಾ ರಾಸಾಯನಿಕಗಳನ್ನು ಬಳಸಿದರೂ ಒಂದು ಜೀವಿಯನ್ನು ಕೃತಕವಾಗಿ ಸೃಷ್ಟಿಸಲು ಅಸಾಧ್ಯ. ಹಾಗೆಯೇ , ಆಹಾರವನ್ನು ತಯಾರಿಸುವುದು ಮತ್ತು ಅದನ್ನು ರಾಸಾಯನಿಕಗಳ ಆಧಾರದಿಂದ ಅಳೆಯುವುದು ಅಸಾಧ್ಯ!

👉 ಆಹಾರ ಕೆಲ ರಾಸಾಯನಿಕಗಳ ಮಿಶ್ರಣ ಎನ್ನುವ ಇಂದಿನ ವಿಜ್ಞಾನ ನಿಖರವಾಗಿದೆ ಎನ್ನುವುದಾದರೆ- ಇಷ್ಟೆಲ್ಲಾ ಯಕೃತ್, ಪ್ಯಾಂಕ್ರಿಯಾಸ್, ರಕ್ತ ಮತ್ತು ಪರಿಚಲನೆಯ ರೋಗಗಳೇಕೆ ಇವೆ? 
ಮತ್ತು ಈ ಯಾವ ಮೆಟಬಾಲಿಕ್ ರೋಗಗಳಿಗೂ ಕಾರಣ ಗೊತ್ತಿಲ್ಲ ಎಂದು ಹೇಳುವುದೇಕೆ? 
ಇಲ್ಲಿ ವಿರೋಧಾಭಾಸ ಮತ್ತು ಅತ್ಯಂತ ಅಂಧ ನಡೆ ಅಲ್ಲವೇ ಇದು⁉️

◆ ಆಹಾರವನ್ನು ಸಂಗ್ರಹಿಸುವ ವಿಧಾನ, 
◆ ಇಡುವ ಪಾತ್ರೆ, 
◆ ಶೇಖರಣೆಯ ಕಾಲಾವಧಿ, ಸ್ಥಳ,
◆ ಮಿಶ್ರಮಾಡುವ ಪದಾರ್ಥ, 
◆ ಸಂಸ್ಕರಣೆ ಮತ್ತು ತಿನ್ನುವ ಸಮಯ,
◆  ಕಾಲಾವಧಿ, 
◆ ತಿನ್ನುವವನ ಜೀರ್ಣಶಕ್ತಿ...... ಆದಿಯಾಗಿ ಎಲ್ಲಿಯೂ ಆಹಾರವು "ವಿಷ" ಅಥವಾ "ಗರವಿಷ"ದ ಭಾವ ಹೊಂದಬಾರದು.
 ಹೀಗಾದರೆ ಮಾತ್ರ  ಅದು ಶರೀರವನ್ನು ಆರೋಗ್ಯದಿಂದ ಪೋಷಣೆ ಮಾಡುತ್ತದೆ ಇಲ್ಲದಿದ್ದರೆ ರೋಗವನ್ನು ಪೋಷಣೆ ಮಾಡುತ್ತದೆ. ಇದಕ್ಕಾಗಿ "ವಿರುದ್ಧ ಅನ್ನ" ಎಂಬ ಸಿದ್ಧಾಂತ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಅಂಶವಾಗಿ ರೂಪುಗೊಂಡಿದೆ.

ಎಷ್ಟೆಂದರೂ
🔆 *ಆಯುರ್ವೇದ ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ ಕೊಟ್ಟ ವಿಜ್ಞಾನವಾಗಿದೆ. ಇಲ್ಲಿ ಚಿಕಿತ್ಸೆಗೆ ಎರಡನೇ ಸ್ಥಾನ*

ನಾಳೆಯಿಂದ,
ನಾವು ಸೇವಿಸುವ ಆಹಾರ, 
ಸಂಗ್ರಹಿಸುವ ವಿಧಾನ,
ತಯಾರಿಕಾ ವಿಧಾನ, 
ಸಿದ್ಧ ಆಹಾರದ ಪರೀಕ್ಷೆ,
ತಿನ್ನುವ ರೀತಿ
ಇವುಗಳಲ್ಲಿ ಯಾವ ಯಾವ ಹಂತಗಳಲ್ಲಿ ಆಹಾರವೇ ವಿಷವಾಗಿ ಪರಿವರ್ತನೆ ಹೊಂದುತ್ತಿದೆ ಎಂದು ನೋಡೋಣ, ಮತ್ತು 
*ಅನ್ನರಕ್ಷಣೆಯಿಂದ ನಮ್ಮ ಆರೋಗ್ಯವನ್ನೂ ರಕ್ಷಿಸಿಕೊಳ್ಳೋಣ*.

            🔆ಧನ್ಯವಾದಗಳು 🔆
••••••••••••••
ಇಂದ
ಹೆಚ್.ಬಿ.ಮೇಟಿ

Monday 15 February 2021

ಧಾರೋಷ್ಣ ಹಾಲಿನ ಮಹತ್ವ, ಹಾಲು ಕಾಯಿಸುವ ವಿಧಾನ ಮತ್ತು ಕಾಯಿಸಿದ ಹಾಲಿನ ವಿವಿಧ ಗುಣ ಧರ್ಮಗಳನ್ನು ನೋಡೋಣ.

🙏ಅಮೃತಾತ್ಮರೇ ನಮಸ್ಕಾರ 🙏
😊ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ😊
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
16.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-22
••••••••••••••
✍️: ಇಂದಿನ ವಿಷಯ:
ಈ ದಿನ,
ಧಾರೋಷ್ಣ ಹಾಲಿನ ಮಹತ್ವ, ಹಾಲು ಕಾಯಿಸುವ ವಿಧಾನ ಮತ್ತು ಕಾಯಿಸಿದ ಹಾಲಿನ ವಿವಿಧ ಗುಣ ಧರ್ಮಗಳನ್ನು ನೋಡೋಣ.
•••••••••••••••••••••••••••••••••••••••••

📜ಪಯೋ..ಅಭಿಷ್ಯಂದಿಃ.............................................................ಧಾರೋಷ್ಣಂ ಅಮೃತೋಪಮಮ್||
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/28-29

ಮತ್ತು

📜 ಅರ್ಧೋ ಅಧಿಕಂ................................................................................................ಸ್ಯಾತ್..ನಿರ್ಜಲಂ ಶೃತಂ ದ್ವಿ, ಚತುರ್ ಅಷ್ಟಾಂಶ ಶೋಷಿತಮ್|................ಬಲ್ಯತಮಂ ಪಯಃ................................ಭವೇತ್ ||
-ಖರನಾದ ಸಂಹಿತಾ ಸೂ.ಸ್ಥಾ-1(ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ)

💎 ಧಾರೋಷ್ಣ ಕ್ಷೀರ 🥛 ಎಂದರೆ-
🔸 ಧಾರಾ- ಹಸುವಿನಿಂದ ಹಾಲನ್ನು ಕರೆಯುತ್ತಿರುವಾಗ ಕ್ಷೀರ ಪಾತ್ರೆಗೆ ಬೀಳುವುದು.
🔸 ಉಷ್ಣ- ಹಸುವಿನ ಶರೀರದ ತಾಪಮಾನದಿಂದ ಕರೆಯುತ್ತಿರುವಾಗ ಬೆಚ್ಚಗಿರುವುದು.

ಧಾರೋಷ್ಣ ಕ್ಷೀರಪಾನ ಎಂದರೆ ಹಸುವಿನ ಕೆಚ್ಚಲಿನಿಂದ ಪಾತ್ರೆಗೆ ಹಾಲು ಬಂದ ತಕ್ಷಣ ಸೇವಿಸುವುದು ಎಂದರ್ಥ. ಇದು ಸರ್ವವಿಧದಿಂದಲೂ ಶ್ರೇಷ್ಠವಾಗಿದ್ದು, ಅದರ ವಿವರಣೆ ನೋಡೋಣ-

🔬 ವೈಜ್ಞಾನಿಕ ವಿವರಣೆ:

• ಹಾಲು ಗೋವಿನ ಕೆಚ್ಚಲಿನಲ್ಲಿರುವಾಗ ಯಾವುದೇ ಬ್ಯಾಕ್ಟೀರಿಯಾ ಬೆಳವಣಿಗೆ ಇರುವುದಿಲ್ಲ, ಹೊರಗೆ ಬಂದ ಹಾಲು ತಾಪಮಾನ ಕಡಿಮೆಯಾಗುವವರೆಗೆ(ಸುಮಾರು 24ನಿಮಿಷಗಳು) ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ. ನಂತರ ಹಾಲು ಕೆಡುವುದರಿಂದ ಅದನ್ನು ಕಾಯಿಸುವ ವಿಧಾನ ಬೆಳೆದಿದೆ. 

• ಧಾರೋಷ್ಣ ಕ್ಷೀರದಲ್ಲಿ ಸ್ನೇಹಾಂಶ, ಜಲ, ಪ್ರೋಟೀನ್ ಮತ್ತು ಅನ್ಯ ಖನಿಜಗಳಲ್ಲಿ ಬೆರೆತು ಕರಗಿಕೊಂಡು ಇರುವ ಕಾರಣ ನಮ್ಮ ಜೀವಕೋಶಗಳಿಗೆ ಸಂಪೂರ್ಣ ಶಕ್ತಿ ಪೂರೈಕೆ ಮಾಡುತ್ತದೆ. ಪ್ರತ್ಯೇಕಗೊಂಡ ಅಂಶಗಳಿಂದ ಈ ತೆರನಾದ ಪರಿಪೂರ್ಣ ಪೋಷಣೆ ದೊರೆಯದು.

• ಗೋವಿನ ಮನಸ್ಸು ಸತ್ವಗುಣ ಸಂವೃದ್ಧವಾಗಿರುವುದರಿಂದ ಗೋದುಗ್ಧ ಸೇವನೆಯಿಂದ ನಮ್ಮ ಜೀವಕೋಶಗಳ ಸೂಕ್ಷ್ಮ ಸ್ಪಂದನೆ ಮಾನವೀಯವಾಗಿಯೂ, ಅತ್ಯಂತ ಸಾತ್ವಿಕವಾಗಿಯೂ, ಶಾಂತವಾಗಿಯೂ, ದೃಢವಾಗಿಯೂ ಇರುತ್ತದೆ. (ಎಮ್ಮೆಯ ಹಾಲೂ ಶಾಂತ ಆದರೆ ತಾಮಸಿಕವಾಗಿರುತ್ತದೆ, ಶಕ್ತಿ ಇದ್ದರೂ ಅಂಧಕಾರ, ಅಜ್ಞಾನ, ಕ್ರೌರ್ಯ, ನಿದ್ದೆ ತರುತ್ತದೆ).

🔅 ಹಸಿಯಹಾಲು-
ಹಾಲು ಕರೆದ ನಂತರ ಅರ್ಧ ಯಾಮಕಾಲ (ಅಂದರೆ-24ನಿಮಿಷ) ಕಳೆದ ಹಾಲನ್ನು ಹಸಿಹಾಲು ಎಂದು ಕರೆಯಬಹುದು. ಕಾಯಿಸದೇ ಇಟ್ಟ ಈ ಹಾಲು ಪಚನಕ್ಕೆ ಅತ್ಯಂತ ಕಷ್ಟ ಮತ್ತು
ಅಭಿಷ್ಯಂದಿ(ರೋಗಾಣುಗಳ ಕಾರಣ ಅಂಟುವ ಗುಣ) ಆಗಿರುವ ಕಾರಣ ಕುಡಿಯಲು, ಖಾದ್ಯ ತಯಾರಿಸಲೂ ಯೋಗ್ಯವಲ್ಲ. ಒಡೆದು ಪನೀರ್ ಮಾಡಲೂ ಸೂಕ್ತವಲ್ಲ.

🔅 ಕಾಯಿಸಿದ ಹಾಲು-
ಕಾಯಿಸಿ ಇಂಗಿಸುವ ಪ್ರಮಾಣದಿಂದ ಗುಣ ವ್ಯತ್ಯಾಸ ಆಗುತ್ತದೆ. 

💠 ಅರ್ಧೋದಕಂ ಶೃತ- ಸಮಾರ್ಧ ಶುದ್ಧ ನೀರನ್ನು ಬೆರೆಸಿ ಕಾಯಿಸಿದ ಹಾಲು ಪಚನಕ್ಕೆ ಹಗುರವಾಗಿರುತ್ತದೆ. ನೀರು ಬೆರೆತಿದೆ ಎಂದರೆ ಶಕ್ತಿಹೀನವಲ್ಲ.
★ ಇದನ್ನು ಕಡಿಮೆ ಜೀರ್ಣಶಕ್ತಿ ಇರುವ ಜ್ವರಾದಿ ವ್ಯಾಧಿಪೀಡಿತ ಅವಸ್ಥೆಯಲ್ಲಿಯೂ, 
★ ಮಕ್ಕಳಿಗೂ, 
★ ವೃದ್ಧರಿಗೂ,
★ ಕಫ-ವಾತ ಹೆಚ್ಚು ಇರುವಾಗಲೂ ಕೊಡಬಹುದು. 
★ ರುಮ್ಯಾಟಿಸಮ್ ನಲ್ಲಿ ಇದು ಶ್ರೇಷ್ಠ.

💠ನಿರ್ಜಲ ಶೃತ-
ನೀರನ್ನು ಬೆರೆಸದೇ ಕಾಯಿಸಿದ ಹಾಲು,
★ ಮಧ್ಯಮ ಪಚನ ಶಕ್ತಿ ಇರುವವರಿಗೂ,
★ ಮಧ್ಯವಯದವರಿಗೂ, 
★ ನಿತ್ಯಸೇವನೆಗೂ ಯೋಗ್ಯ.

💠 ಅರ್ಧಾಂಶ, ಪಾದಾಂಶ, ಅಷ್ಟಾಂಶ ಶೋಷಿತ ಕ್ಷೀರ-
ನೀರು ಹಾಕದೇ ಕಾಯಿಸುತ್ತಾ ಅರ್ಧಕ್ಕೆ, ನಾಲ್ಕಂಶಕ್ಕೆ, ಎಂಟು ಅಂಶಕ್ಕೆ ಅಥವಾ ಪೂರ್ಣ ನೀರು ಹೋಗುವವರೆಗೆ ಕಾಯಿಸಿದರೆ( ಸಾರ ಮಾತ್ರ ಉಳಿಯುವ ಖೋವಾ ಮಾಡುವಂತೆ) 
★ ಉತ್ತರೋತ್ತರ ಅತ್ಯಂತ ಬಲಕರ ಜೀರ್ಣಶಕ್ತಿ ಉಳ್ಳವರಿಗೂ, 
★ ಹೆಚ್ಚು ಹೆಚ್ಚು ಶಾರೀರಿಕ ಶ್ರಮ ಮಾಡುವವರಿಗೂ ಶೀಘ್ರ ಬಲವನ್ನೀಯುತ್ತದೆ.
🔺 ಆದರೆ ಅಜೀರ್ಣ ಇರುವ ಅವಸ್ಥೆಯಲ್ಲಿ ಮತ್ತು ಅತ್ಯಲ್ಪ ಕೆಲಸ ಮಾಡುವವರಿಗೂ ನಿಶಿದ್ಧ. 
(ಗಮನಿಸಿ: ಇಷ್ಟು ಶ್ರಮವಹಿಸಿ ದುಡಿವ ರೈತರು ಹಾಲನ್ನು ಬೆಣ್ಣೆಯನ್ನೂ ಮಾರಾಟ ಮಾಡಿ ಎಣ್ಣೆ ತಂದು ಸೇವಿಸುತ್ತಿರುವುದು ಮತ್ತು ಶಾರೀರಿಕ ಶ್ರಮವಹಿಸದೇ ದುಡಿವವರು ಖೋವಾ ತಿನ್ನುತ್ತಿರುವುದು ಇಂದಿನ ರೋಗಗಳಿಗೆ ಪ್ರಮುಖ ಕಾರಣ 🤦‍♂)

💠 ಕಾಯಿಸಿ ಪೂರ್ಣ ತಣ್ಣಗಾಗಿಸಿದ ಹಾಲು-
ಮನೋ ಶಾರೀರಿಕ ಆಯಾಸವನ್ನು ಶೀಘ್ರ ಪರಿಹರಿಸುತ್ತದೆ.

💠 ಕಾಯಿಸಿ ಬಿಸಿ ಇರುವ ಹಾಲು-
ಕಫ ವೃದ್ಧಿ ಮಾಡುವುದಿಲ್ಲ, ವಾತ ಶಮನ ಮಾಡುತ್ತದೆ.

📜 ಸದಾ ತು ವನಿತಾ ಏವ ಹಿತಂ ಪಯಃ |  
• ಮನುಷ್ಯರಿಗೆ ಅಂದರೆ,
ಮಗುವಿಗೆ ತಾಯಿಯ ಹಾಲು ಸರ್ವಶ್ರೇಷ್ಠ. ತಾಯಿಹಾಲು ಇಲ್ಲದ ಸಂದರ್ಭಗಳಲ್ಲಿ ಅರ್ಧನೀರು ಬೆರೆಸಿ ಕಾಯಿಸಿದ ಗೋಕ್ಷೀರ ಶ್ರೇಷ್ಠ.

             ✡ಧನ್ಯವಾದಗಳು ✡
••••••••••••••
By
ಹೆಚ್.ಬಿ.ಮೇಟಿ

Sunday 14 February 2021

ಮಹಿಷ, ಅಜ ಮುಂತಾದ ಪ್ರಾಣಿಗಳ ಕ್ಷೀರಗಳ ಗುಣಗಳು.

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
        ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
15.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-21
••••••••••••••
✍️: ಇಂದಿನ ವಿಷಯ:
ಮಹಿಷ, ಅಜ ಮುಂತಾದ ಪ್ರಾಣಿಗಳ ಕ್ಷೀರಗಳ ಗುಣಗಳು.
•••••••••••••••••••••••••••••••••••••••••
ಇಂದಿನ ವಿಷಯ ಸ್ವಲ್ಪ ಬಳಕೆಗೂ, ಸ್ವಲ್ಪ ಕೇವಲ ತಿಳುದುಕೊಳ್ಳಲು ಮಾತ್ರ ಇದೆ.

📜 ಹಿತಂ ಅತ್ಯಗ್ನ್ಯಂ ನಿದ್ರೇಭ್ಯೋ...................ಮಾಹಿಷಮ್......................ಅಜಂ.............................ಉಷ್ಟ್ರಂ...........ಮಾನುಷಂ..........................ಆವಿಕಂ..........ಹಸ್ತಿನ್ಯಾಃ....................... ಏಕ ಶಫಂ...............ಜಡಕಾರಕಮ್||
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/23-27

🐃 ಮಹಿಷ(ಎಮ್ಮೆ) ಕ್ಷೀರ:
• ನಿದ್ದೆ ಬಾರದವರಿಗೆ ಶ್ರೇಷ್ಠ, 
• ಆದರೆ, ಜೀರ್ಣಶಕ್ತಿ ಇರದವರಿಗೆ ಸೂಕ್ತವಲ್ಲ.

🐐 ಅಜ(ಆಡು)ಕ್ಷೀರ:
ಅಲ್ಪಜಲಪಾನ ಮಾಡುವ ಮತ್ತು ಎಲ್ಲಾ ಕಹಿರಸದ ಗಿಡಗಳನ್ನೇ ತಿನ್ನುವ ಆಡು, ಅತ್ಯಂತ ಔಷಧೀಗುಣಯುಕ್ತ ಹಾಲನ್ನು ಕೊಡುತ್ತದೆ.
•ಟಿ.ಬಿ
•ತೀವ್ರ ಅಜೀರ್ಣ
•ರಕ್ತಪಿತ್ತ, ಅಸ್ತಮಾ
•ಅತಿಸಾರಗಳಲ್ಲಿ
• ದುರ್ಬಲರಿಗೂ ಶ್ರೇಷ್ಠ.

🐪 ಉಷ್ಟ್ರ(ಒಂಟೆ)ಕ್ಷೀರ:
•ಉದರಕ್ರಿಮಿ
•ಮೂಲವ್ಯಾಧಿ 
•ಅಜೀರ್ಣ ಜನ್ಯ ಹೊಟ್ಟೆಯುಬ್ಬರದಲ್ಲಿ ಯೋಗ್ಯ. 

🦙 ಆವಿ(ಕುರಿ) ಕ್ಷೀರ: 
•ಅಹಿತಕಾರಿ, 
•ಹೃದಯರೋಗ ಉತ್ಪನ್ನ ಮಾಡುವುದು.

🐘 ಗಜ(ಆನೆ)ಕ್ಷೀರ:
• ಜೀರ್ಣಶಕ್ತಿ ಅತ್ಯಂತ ಬಲವಾಗಿದ್ದವರಿಗೆ ಇದು ಸ್ಥಿರತ್ವವನ್ನು ತರುತ್ತದೆ.

🦓🐴 ಏಕ ಖುರ(ಕುರೆ, ಕತ್ತೆ, ಒಂಟಿ..ಮುಂತಾದವು) ಪ್ರಾಣಿಗಳ ಕ್ಷೀರ:
•ಆಮ್ಲ-ಲವಣರಸ ಉಳ್ಳದ್ದು , 
•ಉರುಸ್ಥಂಭ ಎಂಬ ಅತ್ಯಂತ ಕಷ್ಟಕರವಾದ  ರೋಗವನ್ನು ಚಿಕಿತ್ಸಿಸಲು ಈ ಒಂದು ಗೊರಸಿನ ಪ್ರಾಣಿಗಳ ಕ್ಷೀರ ಒಳ್ಳೆಯದೆಂದು ಹೇಳಿದ್ದಾರೆ, ನಾವು ಈ ತನಕ ಈ ರೋಗವನ್ನು ನೋಡಿರುವುದಿಲ್ಲ.
• ಆದರೆ ಸೋಮಾರಿತನವನ್ನುಂಟು ಮಾಡುತ್ತದೆ ಎಂದೂ ತಿಳಿಸಿದ್ದಾರೆ.

🤱 ಸ್ತನ್ಯ(ಸ್ತ್ರೀ ಎದೆಹಾಲು): 
• ನೇತ್ರರೋಗಗಳಾದ ಕೆಂಪಾಗುವುದು(conjunctivitis), ಉರಿ(burning eyes), ಅಶ್ರುಸ್ರಾವ, ನೋವು, ಕೀವುಗುಳ್ಳೆಗಳು ಬಂದಾಗ, ನಿತ್ಯವೂ ಮೂರುಬಾರಿ ಸ್ತನ್ಯ(ಎದೆಹಾಲು)ವನ್ನು ನೇತ್ರಗಳಿಗೆ ಹಾಕಿಕೊಂಡರೆ ಅತ್ಯಂತ ಶೀಘ್ರ ಪರಿಣಾಮ ಎಂದಿದ್ದಾರೆ ಆಚಾರ್ಯರು. ಈ ಅಚ್ಚರಿ ಫಲಿತಾಂಶಗಳನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ.
 
       ✡ಧನ್ಯವಾದಗಳು ✡
••••••••••••••
ಇಂದ
ಹೆಚ್.ಬಿ.ಮೇಟಿ

SSLC ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು

CLICK HEAR TO DOWNLOAD

Friday 12 February 2021

ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-03

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
   🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
12.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ -20
••••••••••••••
✍️: ಇಂದಿನ ವಿಷಯ:
🔅ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು🔅
•••••••••••••••••••••••••••••••••••••••••

📜 ಅತ್ರ ಗವ್ಯಂ ತು ಜೀವನೀಯಂ...........................ರಕ್ತಪಿತ್ತಂ ಚ ನಾಶಯೇತ್ |*
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23

◆ ಆಯುರ್ವೇದದಲ್ಲಿ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ. ಅದರಲ್ಲಿ ನಿನ್ನೆಯವರೆಗೆ 13 ಗುಣಗಳನ್ನು ನೋಡಿದೆವು, ಇಂದು 5 ಗುಣಗಳನ್ನು ನೋಡೋಣ.

14) ತೃಟ್: 
ಕನ್ನಡದ ಬಾಯಾರಿಕೆಯನ್ನು ತೃಷೆ, ತೃಟ್, ತೃಷ್ಣಾ ಎಂದು ಕರೆಯುತ್ತೇವೆ.

ನೀರು ಕುಡಿದರೆ ಹೋಗುವ ಬಾಯರಿಕೆಗೆ ಔಷಧವೇಕೆ? ಎಂದರೆ- ಎರಡು ಉತ್ತರಗಳಿವೆ,
• ಒಂದು:- ನೀರನ್ನು ಹೊರತುಪಡಿಸಿ ಏನು ಕುಡಿದರೂ ಉಪಶಮನವಾಗದ ಬಾಯಾರಿಕೆ ಹಾಲು ಕುಡಿದರೆ ಉಪಶಮನ ಆಗುತ್ತದೆ. ಎಲ್ಲಿ ನೀರು ಸಿಗುತ್ತಿಲ್ಲವೋ ಅಲ್ಲಿ ಕ್ಷೀರವೇ ನೀರಿನ ಕೆಲಸ ನಿರ್ವಹಿಸುತ್ತದೆ, ಅಂದರೆ ಹಾಲಿನಲ್ಲಿ ಪ್ರತ್ಯೇಕಿಸಬಹುದಾದ ಹಾಲಿನ ಅಂಶ ಮತ್ತು ನೀರಿನ‌ ಅಂಶ ಸೇರಿಕೊಂಡಿವೆ. ಇದೇ ಕಾರಣಕ್ಕೆ ಹಂಸಪಕ್ಷಿ 🦢 ಹಾಲಿನ ಅಂಶವನ್ನು ಕುಡಿದು ನೀರನ್ನು ಪಾತ್ರೆಯಲ್ಲೇ ಬಿಡುತ್ತದೆ, ಆ ನೀರು ಶುದ್ಧವೂ ಆರೋಗ್ಯಕರವೂ ಆಗಿರುತ್ತದೆ ಅದನ್ನು *"ಹಂಸೋದಕ"* ಎಂದು ಕರೆಯುತ್ತಾರೆ. ಶರತ್ ಋತುವಿನಲ್ಲಿ(ಅಕ್ಟೋಬರ್-ನವೆಂಬರ್) ಕೆರೆ, ಸರೋವರ, ನದಿಗಳಲ್ಲಿನ ನೀರು ಹಂಸೋದಕದಂತೆ ಶುದ್ಧ ಎಂದಿದ್ದಾರೆ ಆಚಾರ್ಯರು, ಈ ವಿಷಯವನ್ನು ಮುಂದೆ ನೋಡೋಣ. 
• ಎರಡು- ತೃಷ್ಣಾ ಶಬ್ದ 'ಶೋಷ'(ಬಾಯಿ ಒಣಗುವಿಕೆ) ಮತ್ತು ತೃಷೆ(ಜಲಾಭಿಲಾಷೆ/ಬಾಯಾರಿಕೆ) ಎರಡರಿಂದ ಕೂಡಿದೆ.
ಯಾರ ಬಾಯಿ ಒಣಗುತ್ತಿರುವುದೋ ಅದು ರೋಗ,
ಗೋಕ್ಷೀರವು ಬಾಯಿ ಒಣಗುವಿಕೆಯನ್ನೂ ಸಹ ಹೋಗಲಾಡಿಸುತ್ತದೆ, ಅಂದರೆ ಶರೀರದಲ್ಲಿ ಉಷ್ಣತೆಯ(ಕೇವಲ ಪಿತ್ತದ) ಕಾರಣದಿಂದ ಉಂಟಾದ ತೃಷ್ಣಾ ರೋಗಕ್ಕೆ ಗೋಕ್ಷೀರ ಸಿದ್ಧ ಔಷಧ. ಆದರೆ ಅಜೀರ್ಣದಿಂದ(ದೋಸೆ, ಪೂರಿ ತಿಂದಾಗಿನ ಬಾಯಾರಿಕೆ) ಉಂಟಾದ ತೃಷ್ಣಾ ರೋಗಕ್ಕೆ ಕ್ಷೀರ ಯೋಗ್ಯವಲ್ಲ. 

15) ಕ್ಷುಧಃ : 
ಕ್ಷುಧಾ ಎಂದರೆ ಹಸಿವು, ಗೋಕ್ಷೀರವು ಹಸಿವನ್ನು ನಿವಾರಿಸುತ್ತದೆ ಎಂದೇ ತಿಳಿಯಬೇಕು.

*ಒಟ್ಟಾರೆ ಹಸಿವು-ಬಾಯಾರಿಕೆಗಳು ಮನುಷ್ಯನನ್ನು ನಿತ್ಯವೂ ಕಾಡುವ ಸಹಜ ವ್ಯಾಧಿಗಳು. ನೀರು-ಆಹಾರ ಅದಕ್ಕೆ ಔಷಧ, ಆದರೆ ಕೇವಲ ಗೋಕ್ಷೀರ ನೀರು-ಆಹಾರ ಎರಡರ ಕೆಲಸವನ್ನೂ ಮಾಡುವ ಒಂದು ಪರಿಪೂರ್ಣ ಪೋಷಕವಾಗಿದೆ. ಹಾಗಾಗಿ ವಿಷ ಅವಸ್ಥೆಗಳಲ್ಲಿ ಅಗ್ನಿಕ್ಷಯ, ಪಿತ್ತಪ್ರಕೋಪ, ಮನೋದೋಷ ಮುಂತಾದ ಅವಸ್ಥೆಗಳಲ್ಲಿ ಕೇವಲ ಗೋಕ್ಷೀರವೇ "ಆಹಾರ, ನೀರು ಮತ್ತು ಔಷಧ"*ವಾಗಿ ಕೆಲಸ ಮಾಡುತ್ತದೆ.

16)ಜೀರ್ಣಜ್ವರಂ : 
ದೀರ್ಘ ಕಾಲದಿಂದ ಇರುವ ಜ್ವರಕ್ಕೆ ಜೀರ್ಣಜ್ವರ ಎನ್ನುವರು, ಇಂದು ಎಲ್ಲವೂ ಜೀರ್ಣಜ್ವರವೇ!! ಏಕೆಂದರೆ ಜ್ವರ ಜೀರ್ಣ ಎನಿಸಿಕೊಳ್ಳಲು ಅದು ಬಹಳ ಕಾಲ ಇರಬೇಕು, ಇದರಿಂದ ಶರೀರದ ಧಾತುಗಳು ದುರ್ಬಲಗೊಂಡಿರಬೇಕು. ಇಂದು ಜ್ವರ ಬಂದರೆ ಸಾಕು ಅದರ ಲಕ್ಷಣವಾದ ಸಂತಾಪ-ಅರತಿ-ಗ್ಲಾನಿ ಮೂರೂ ಇರುತ್ತವೆ. ಗ್ಲಾನಿ(ಅತಿ ತೀವ್ರ ಆಯಾಸ) ಇದ್ದರೆ ಜೀರ್ಣ ಎಂದೇ ಪರಿಗಣಿಸಬೇಕು, ಇಂದು ಬಹಳಷ್ಟು ಜ್ವರಗಳು ವೈರಸ್ ಗಳಿಂದ ತುಂಬಿ ಧಾತುಕ್ಷಯದಿಂದ ಗ್ಲಾನಿಯನ್ನು ತರುತ್ತವೆ.
 ಹಾಗಾಗಿ ಇಂದಿನ‌ ಎಲ್ಲಾ ಜ್ವರಗಳಲ್ಲೂ ಗೋಕ್ಷೀರ ಸೇವನಾಯೋಗ್ಯ. ಮಕ್ಕಳಲ್ಲಿ ಕಂಡುಬರುವ ಅಜೀರ್ಣ ಜ್ವರದಲ್ಲಿ ಕ್ಷೀರ ಯೋಗ್ಯವಲ್ಲ, ಅಲ್ಲಿ ವಾಂತಿಮಾಡಿಸುವುದೇ ಶ್ರೇಷ್ಠ, ಗಮನಿಸಿ- ಮಕ್ಕಳಲ್ಲಿ ವಾಂತಿಯಾದ ತಕ್ಷಣ ಜ್ವರ ನಿವಾರಣೆಯಾಗುತ್ತದೆ.

17)ಮೂತ್ರಕೃಚ್ಛ್ರಂ :
ಉರಿಮೂತ್ರ ಮತ್ತು ನೋವಿನಿಂದ ಆಗುವ ಮೂತ್ರಕ್ಕೆ ಗೋಕ್ಷೀರ ಯೋಗ್ಯ ಔಷಧ. ಮೂತ್ರವು ಸಹಜವಾಗಿ ಇರಬೇಕಾದ್ದು ಕ್ಷಾರೀಯವಾಗಿ(alkaline). ಆದರೆ ಇಂದಿನ ಹೆಚ್ಚಿನ ಜನರ ಮೂತ್ರ ಆಮ್ಲೀಯವಾಗಿರುವುದನ್ನು  ಕಾಣುತ್ತೇವೆ.

ಒಂದೊಮ್ಮೆ ಮೂತ್ರದ pH6ಕ್ಕಿಂತ ಕಡಿಮೆ ಇದ್ದರೆ ಮೂತ್ರ ಆಮ್ಲೀಯವಾಗಿ ಉರಿ ಮತ್ತು ನೋವನ್ನು ಕೊಡುತ್ತದೆ. ಈ ಸಂದರ್ಭದಲ್ಲಿ ಹೊಟ್ಟೆಬಿರಿಯುವಂತೆ ನೀರು ಕುಡಿಯುವ ಬದಲು, ಗೋಕ್ಷೀರ ಸೇವನೆ ಮಾಡಿದರೆ ಶರೀರದ ಜಲಾಂಶವನ್ನು ತುಂಬುತ್ತದೆ. ರಕ್ತ ಮತ್ತು ಮೂತ್ರದಲ್ಲಿನ‌ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ(Neutralize) ಆಗ ಮೂತ್ರದ ಉರಿ ನಿವಾರಣೆಯಾಗುತ್ತದೆ.

• ನೆನಪಿಡಿ:- ಎಲ್ಲ ಮೂತ್ರ ಉರಿಗಳೂ UTI(urinary tract infection) ಅಲ್ಲ!
ಅದು ಕೇವಲ ಹೊರಗಿನಿಂದಲೇ ಬರುವಂತದ್ದಲ್ಲ!! ಕೇವಲ ಆ್ಯಂಟಿಬಯಾಟಿಕ್ ನಿಂದ ನಿವಾರಣೆ ಅಸಾಧ್ಯ!!!!

18)ರಕ್ತಪಿತ್ತ ಹರಂ :
ಅತೀ ಮುಖ್ಯ ಅಂಶ ಇದು.‌ ಇಂದು ಬಹುತೇಕ ಮನುಷ್ಯರ ಜೀವನವನ್ನೇ ನರಕ ಸದೃಶಗೊಳಿಸುವ ಕಾಯಿಲೆ ಎಂದರೆ *ರಕ್ತಪಿತ್ತ*. 
ಇದೊಂದು ಬಹುದೊಡ್ಡ, ಚರ್ಚಿಸುವ ವಿಷಯ- ಇಂದಿನ ಬಿ.ಪಿ, ಹೃದ್ರೋಗ, ಕಿಡ್ನಿ ಸಮಸ್ಯೆ, ಲಕ್ವಾ/ಪಾರ್ಶ್ವವಾಯು, ರೆಟಿನಾ ಹಾಳಾಗುವಿಕೆ, ವೆರಿಕೋಸ್ ವೇನ್, ವೆರಿಕೋಸೀಲ್, ಡೀಪ್ ವೇನ್ ಥ್ರೋಂಬೋಸಿಸ್, ಪೆರಿಫೆರಲ್ ವ್ಯಾಸ್ಕುಲಾರ್ ಡಿಸೀಜ್, ಗ್ಯಾಂಗ್ರೀನ್, ಯಕೃತ್ ತೊಂದರೆ, ರಕ್ತಕ್ಷೀಣತೆ, ಕೊನೆಗೆ, ರಕ್ತದ ಕ್ಯಾನ್ಸರ್ ಮುಂತಾದ ಅನೇಕ ಪ್ರತ್ಯೇಕ ರೋಗಗಳು *ರಕ್ತಪಿತ್ತ* ಎಂಬ ಈ ರೋಗದ ವಿಧಗಳಷ್ಟೇ...... ಇಷ್ಟೆಲ್ಲಾ ಕಾಯಿಲೆಗಳನ್ನು ಗೋಕ್ಷೀರವೊಂದೇ ತಡೆಯುತ್ತದೆ ಎಂದರೆ, ಭಾರತೀಯರು ಮಾತೆ ಎಂದು ಪೂಜಿಸುವ ಗೋವು ವಿಶ್ವಮಾತೆ ಕೂಡಾ ಹೌದು
🐄 🙏

ತಾಯಿ ಇಲ್ಲದ ಮಗುವಿಗೆ *ಧಾತ್ರಿ(ಪರ್ಯಾಯ ಮಾತೆ)* ನಮ್ಮ ಗೋಮಾತೆ, 
ಹಾಗಾಗಿ, ಅಂತಹ ಸಂದರ್ಭದಲ್ಲಿ ಗೋಕ್ಷೀರವೇ ಸರ್ವಶ್ರೇಷ್ಠ ಎಂದಿದ್ದಾರೆ ಆಚಾರ್ಯರು
.
.
.
.
ಆದರೆ!!!!
🔹 ನೆನಪಿರಲಿ: ಹತ್ತು ಇಪ್ಪತ್ತು ಲೀಟರ್ ಹಾಲುಕೊಡುವ ಹೈಬ್ರೀಡ್ ತಳಿಯ ಪ್ರಾಣಿಯ ಹಾಲಿನಲ್ಲಿ ಈ ಯಾವಗುಣಗಳೂ ಇರುವುದಿಲ್ಲ!!!!

✡ಧನ್ಯವಾದಗಳು ✡
••••••••••••••
By
ಹೆಚ್.ಬಿ.ಮೇಟಿ

Thursday 11 February 2021

ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-೦2

🙏ಅಮೃತಾತ್ಮರೇ ನಮಸ್ಕಾರ 🙏
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
12.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-19
••••••••••••••
✍️: ಇಂದಿನ ವಿಷಯ:
✨ ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ✨
•••••••••••••••••••••••••••••••••••••••••

📜 ಅತ್ರ ಗವ್ಯಂ ತು ಜೀವನೀಯಂ..............ರಕ್ತಪಿತ್ತಂ ಚ ನಾಶಯೇತ್ |
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23

◆ ಆಯುರ್ವೇದದಲ್ಲಿ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ. ಅದರಲ್ಲಿ ನಿನ್ನೆ 7 ಗುಣಗಳನ್ನು ನೋಡಿದೆವು, ಇಂದು 6 ಮತ್ತು ನಾಳೆ 5 ಗುಣಗಳನ್ನು ನೋಡೋಣ.

8) ಶ್ರಮ ನಾಶ: ⛹‍♂
ಶಾರೀರಿಕ ಆಯಾಸವನ್ನೇ ಶ್ರಮ ಎನ್ನುತ್ತೇವೆ. ನಮ್ಮ ಜೀವಕೋಶಗಳಿಗೆ ಆಹಾರ, ನೀರು ಮತ್ತು ಆಮ್ಲಜನಕದ ಕೊರತೆ ಎದುರಾದಾಗ ಶರೀರ ಆಯಾಸ ಹೊಂದುತ್ತದೆ. ಗೋಕ್ಷೀರವು ಪರಿಪೂರ್ಣ ಆಹಾರವಾಗಿರುವುದರಿಂದಲೂ ಅದು ಆಪ್ ಧಾತು(ಜಲಾಂಶದಿಂದ)ವಿನಿಂದ ಕೂಡಿರುವುದರಿಂದಲೂ, ಶೀತವೀರ್ಯದಿಂದ ತುಂಬಿರುವುದರಿಂದಲೂ ಹಾಗೂ ಪುಪ್ಪುಸಗಳ ಕಾರ್ಯಕ್ಕೆ ಶ್ಲಕ್ಷ್ಣ-ಸ್ನಿಗ್ಧ ಸಹಕಾರ(internal mucolytic action) ನೀಡಿ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯವನ್ನು ವರ್ಧಿಸುತ್ತದೆ. ಅಗ್ನಿಶಕ್ತಿಯನ್ನಾಧರಿಸಿ ಶಾರೀರಿಕ ಶ್ರಮವನ್ನು ಸಂಪೂರ್ಣ ನಿವಾರಿಸುತ್ತದೆ. ವಿಶೇಷ ಎಂದರೆ ಗೋದುಗ್ಧವು ಶರೀರದ ಯಾವ ಧಾತುವನ್ನೂ ಬಿಡದೇ ಎಲ್ಲ ವಿಧದ ಜೀವಕೋಶಗಳನ್ನೂ ತಲುಪುತ್ತದೆ. ಏಕೆಂದರೆ ದ್ರವರೂಪದ ಹಾಲು ಅನೇಕ ಹಂತಗಳಲ್ಲಿ ಸ್ನಿಗ್ಧವಾದ ತುಪ್ಪವಾಗಬಲ್ಲದು, ಘನರೂಪೀ ಅಸ್ಥಿಯಾಗಬಲ್ಲದು ಆದರೆ ಬೇರಾವ ದ್ರವರೂಪೀ ಆಹಾರಕ್ಕೂ ಕ್ಷೀರದಂತೆ ವಿವಿಧ ಹಂತದ ಪರಿಣಾಮ ಗುಣ ಇಲ್ಲ. ಹಾಗಾಗಿ ಶ್ರಮ ನಿವಾರಣೆಯಲ್ಲಿ ಹಾಲು ಸರ್ವಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತದೆ.

9) ಭ್ರಮ ನಾಶ: 🎭
ಭ್ರಮ ಎಂದರೆ ತಲೆಸುತ್ತುವಿಕೆ "ರಜೋ ಪಿತ್ತಾನಿಲಭ್ಯಾಂ ಭ್ರಮಃ" ಅಂದರೆ ಪಿತ್ತ ವಾತ ಮತ್ತು ಮನೋ ದೋಷವಾದ ರಜಸ್ಸು ಸೇರಿದರೆ ತಲೆಸುತ್ತು ಉಂಟಾಗುತ್ತದೆ. ಹಾಗಾಗಿಯೇ ನಿದ್ದೆಹೋದ ಮನುಷ್ಯನಿಗೆ ತಲೆಸುತ್ತುವ ಅನುಭವ ಇರುವುದಿಲ್ಲ. ಗೋಕ್ಷೀರ ಸೇವನೆಯಿಂದ ಕೇವಲ ಶರೀರ ಮಾತ್ರವಲ್ಲ ಮನೋದೋಷವಾದ ರಜಸ್ಸು ಸತ್ವಗುಣವಾಗಿ ಬದಲಾಗುತ್ತದೆ. ಧಗಧಗಿಸಿ ಉರಿವ ಅಗ್ನಿ, ಭೋರ್ಗರೆವ ನೀರು ಶಕ್ತಿಯಾಗಿ ಮನೆಮನೆಗಳಲ್ಲಿ ಬೆಳಕು ಕೊಡುವಂತೆ, ಮನದ ರಜಸ್ಸಿನೊಡಗೂಡಿ ಭ್ರಮ ಉಂಟುಮಾಡುತ್ತಿರುವ ವಾತಪಿತ್ತಗಳು ಶಕ್ತಿ ಉತ್ಪತ್ತಿ ಮಾಡುತ್ತವೆ. ಇಲ್ಲಿ ರಜೋ ಶಕ್ತಿ ಕ್ಷೀರದಿಂದ ಪರಿವರ್ತನೆಗೊಂಡು ಸತ್ವವಾಗುತ್ತದೆ.

10) ಮದ್ಯಜನ್ಯ ಮದ ನಾಶ🗿
ಮನಸ್ಸು ಊರ್ಧ್ವಮುಖ ಗತಿ ಪಡೆದು ಅದರ ಶಕ್ತಿ ಪ್ರಕಟವಾಗುವ ಉನ್ಮತ್ತಸ್ಥಿತಿಗೆ "ಮದ" ಎನ್ನುತ್ತೇವೆ. ಆಗ ಮನಸ್ಸು ಶುಚಿ-ಅಶುಚಿಯಲ್ಲಿ, ಧರ್ಮ-ಅಧರ್ಮಗಳಲ್ಲಿ, ತನ್ನ-ಅನ್ಯದಲ್ಲಿ ಭೇದವನ್ನು ಮರೆತು ಲೌಕಿಕ ವ್ಯಾಪಾರಕ್ಕೆ ಧಕ್ಕೆ ತರುತ್ತದೆ. ಈ ಮದಕ್ಕೆ ಎರೆಡು ಕಾರಣ- ಪರಿಪೂರ್ಣ ಜ್ಞಾನವಾದ *ಸತ್ವ* ಮತ್ತು ಅತ್ಯಂತ ಅಜ್ಞಾನವಾದ *ತಮಸ್ಸು.* ಮದ್ಯಸೇವನೆಯಲ್ಲಿ ತಮಸ್ಸಿನ ಪ್ರಭಾವದಿಂದಾಗಿ ಏಕತ್ರಭಾವನೆ ಬಂದರೆ, ಜ್ಞಾನಿಗೆ ಸತ್ವದ ಕಾರಣ ಏಕತ್ರಭಾವ ಬರುತ್ತದೆ. ಗೋಕ್ಷೀರ ಸೇವನೆಯು ಸತ್ವಗುಣವರ್ಧಕವಾಗಿರುವುದರಿಂದ ಮದ್ಯದಿಂದ ಉಂಟಾಗುವ ತಮೋರೂಪಿ ಮದವನ್ನು ನಾಶಮಾಡುತ್ತದೆ. 
ಮದ್ಯಸೇವನೆಯ ಚಟ ಅಂಟಿಸಿಕೊಂಡವರಿಗೆ ನಿತ್ಯವೂ ಗೋಕ್ಷೀರ ಸೇವನೆ ಮಾಡಿಸಿದರೆ, ಅವರಿಂದ ಯಾರಿಗೂ ಯಾವುದೇ ಆಪತ್ತೂ ಬಾರದು ಮತ್ತು ಅವರ ಶರೀರವೂ ಹಾಳಾಗದು.

11) ಅಲಕ್ಷ್ಮಿ ನಾಶ:
ಅಶುಭವನ್ನೇ ಅಲಕ್ಷ್ಮಿ ಎನ್ನುತ್ತೇವೆ. ಪಿತ್ತದೋಷ ದ್ರವತಃ ವರ್ಧಿಸಿದಾಗ ಅಗ್ನಿಮಾಂದ್ಯವಾಗಿರುತ್ತದೆ. ಸೂರ್ಯನ ಬೆಳಕು ಪ್ರಖರವಾಗಿರುವ ಮಧ್ಯಾಹ್ನದಲ್ಲಿ ಕತ್ತಲಾದಂತೆ. ಸೂರ್ಯನಲ್ಲಿ ಯಾವಗುಣವೂ ಕತ್ತಲೆಯನ್ನುಂಟು ಮಾಡದು, ಹಾಗೇ ಪಿತ್ತವು ಅಗ್ನಿಯನ್ನು ಮಂದ ಮಾಡದು. ವಿಶೇಷ ಅವಸ್ಥೆಯಲ್ಲಿ ಎರಡೂ ಘಟಿಸುತ್ತವೆ. ಆಗ ಕಾರಣವನ್ನು ಶಮನಮಾಡಲು ಬರುವುದಿಲ್ಲ, ಅಂದರೆ ಸೂರ್ಯನನ್ನು ಬಡಿದೆಬ್ಬಿಸಲು ಬರುವುದಿಲ್ಲ. ಗೋಕ್ಷೀರದ ಸರಗುಣವೇ ಈ ಪಿತ್ತವನ್ನು ಹೊರಹಾಕಿ ಅಗ್ನಿವರ್ಧನೆ ಮಾಡುತ್ತದೆ. ಎಲ್ಲಿ ಅಗ್ನಿ ಪ್ರಖರವಾಗುತ್ತದೋ ಅಲ್ಲಿ ಶರೀರದ ಕಾಂತಿ ವರ್ಧಿಸುತ್ತದೆ, ಅಲಕ್ಷ್ಮಿ ಎಂಬ ಕಾಂತಿಹೀನ ತ್ವಕ್-ನೇತ್ರ-ಸ್ವರ-ವದನಗಳು ಲಕ್ಷ್ಮೀ ತತ್ವದಿಂದ ಶೋಭಿಸುತ್ತವೆ🌞

12) ಶ್ವಾಸ ನಾಶ: 
ಉಸಿರಾಟದ ತೊಂದರೆಯನ್ನೇ ಆಚಾರ್ಯರು ಶ್ವಾಸರೋಗ ಎಂದಿದ್ದಾರೆ 🫁 ಐದು ಶ್ವಾಸರೋಗಗಳಲ್ಲಿ ಚಿಕಿತ್ಸಾಯೋಗ್ಯ ಶ್ವಾಸರೋಗ ಎಂದರೆ "ತಮಕಶ್ವಾಸ" (ಬ್ರಾಂಕೈಟೀಸ್-ಅಸ್ತಮಾ) ಮಾತ್ರ. ಉಳಿದ 3 ಶ್ವಾಸರೋಗಗಳು ಅಸಾಧ್ಯ ಮತ್ತು 1 ವಿಧದ ಶ್ವಾಸರೋಗ ಔಷಧರಹಿತ ಗುಣ ಹೊಂದುವುದು. ಕಫವೇ ಪ್ರಧಾನವಾದ ಈ ತಮಕಶ್ವಾಸ ಅಥವಾ ಅಸ್ತಮಾ ಉಂಟಾಗುವುದು ಮಾತ್ರ  ಪಿತ್ತಸ್ಥಾನದಲ್ಲಿ!, ಕಫಸ್ಥಾನದಲ್ಲಿ ಅಲ್ಲ!! ಗೋಕ್ಷೀರ ಸೇವನೆಯಿಂದ ನಿತ್ಯವೂ ಬಹಳಷ್ಟು ಬಾರಿ ಭೇದಿಯಾಗುತ್ತದೆ, ಪಿತ್ತ ಹೊರಹೋಗುತ್ತದೆ, ಶ್ವಾಸರೋಗ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಇದನ್ನು *ನಿತ್ಯ ವಿರೇಚನ* ಎನ್ನುತ್ತಾರೆ.

13) ಕಾಸ ನಾಶ🗣
ಕೆಮ್ಮು ಇದನ್ನು "ಕಾಸ" ಎನ್ನುತ್ತದೆ ಆಯುರ್ವೇದ. ಎಲ್ಲಾ ಪ್ರಕಾರದ ಕೆಮ್ಮಿಗೂ ಕಾರಣ "ಅಧಃ ಪ್ರತಿಹತಃ ವಾಯು" ಅಂದರೆ ಅಪಾನವಾತ ಗುದಸ್ಥಾನದಿಂದ ಮೆಲ್ಮುಖ ಚಲಿಸಿ "ವಪೆ" (ಡಯಫ್ರಾಮ್)ಯನ್ನು ಮೇಲ್ಮುಖವಾಗಿ ಚಿಮ್ಮಿಸುತ್ತದೆ. ಆಗ ಉಂಟಾಗುವುದೇ ಕಸ್-ಕಸ್ ಎಂದು ಸದ್ದುಮಾಡುವ ಕಾಸ/ಕೆಮ್ಮು. ಗೋಕ್ಷೀರವು ಅಪಾನ ವಾತವನ್ನು ಅನುಲೋಮನ ಮಾಡುತ್ತದೆ ಅಂದರೆ ಹೊರಹಾಕುತ್ತದೆ, ಆಗ ಕೆಮ್ಮು ಇಲ್ಲವಾಗುತ್ತದೆ.

🙏 ಉಳಿದ ಗುಣಗಳನ್ನು ಗುರುಕೃಪೆಯಿಂದ ನಾಳೆ ನೋಡೋಣ.

*ನೆನಪಿರಲಿ: ಹತ್ತು ಇಪ್ಪತ್ತು ಲೀಟರ್ ಹಾಲುಕೊಡುವ ಹೈಬ್ರೀಡ್ ತಳಿಯ ಪ್ರಾಣಿಯ ಹಾಲಿನಲ್ಲಿ ಈ ಯಾವ ಗುಣಗಳೂ ಇರುವುದಿಲ್ಲ*
🌿 ಧನ್ಯವಾದಗಳು 🌿
••••••••••••••
ಇಂದ
ಹೆಚ್.ಬಿ.ಮೇಟಿ

Wednesday 10 February 2021

ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-01

🏵 ಅಮೃತಾತ್ಮರೇ ನಮಸ್ಕಾರ 🏵
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
11.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-18
••••••••••••••
✍️: ಇಂದಿನ ವಿಷಯ:
🥛ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-01
•••••••••••••••••••••••••••••••••••••••••

📜 ಅತ್ರ ಗವ್ಯಂ ತು ಜೀವನೀಯಂ..............ರಕ್ತಪಿತ್ತಂ ಚ ನಾಶಯೇತ್ |
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23

◆ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ-
ಆದರೆ ನೆನಪಿಡಿ ಇವು *ಭಾರತೀಯ ಗೋವುಗಳ ಕ್ಷೀರದ ಗುಣಗಳು:*

1⃣ ಜೀವನೀಯಂ- ಪ್ರತಿ ಜೀವಕೋಶಗಳಿಗೆ ಪ್ರಾಣ ಇರಲು(ಚಟುವಟಿಕೆಯಿಂದ ಇರಲು) ಬೇಕಾಗುವ ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ಅನ್ಯ ಯಾವ ಆಹಾರವನ್ನೂ, ನೀರನ್ನೂ ಸೇವಿಸದೇ ಕೇವಲ ಕ್ಷೀರದಿಂದಲೇ ಒಂದು ನೂರು ವರ್ಷ ಜೀವಂತವಾಗಿಯೂ ಆರೋಗ್ಯದಿಂದಲೂ ಇರಬಲ್ಲ. ಯಾವುದೇ ಪೋಷಕಾಂಶಗಳ ಕೊರತೆ ಬರುವುದೇ ಇಲ್ಲ. ಅಥರ್ವ ಸಂಸ್ಥೆಯಲ್ಲಿ ಕೇವಲ ಹಾಲಿನಿಂದಲೇ ಆರು ತಿಂಗಳು ಚುಕಿತ್ಸೆ ಮಾಡಿದ್ದು ಜೀವಂತ ನಿದರ್ಶನವಾಗಿದೆ📿. ಆದ್ದರಿಂದ "ಜೀವನೀಯಂ" ಎಂದು ಕರೆಯುತ್ತಾರೆ. ಎಲ್ಲರೂ ಪ್ರಯತ್ನಿಸಿ ನೋಡಬಹುದು.(ದೇಸೀ ಹಸುವಿನ ಹಾಲು)

2⃣ ರಸಾಯನಂ:
ರಸಾದಿ ಸರ್ವಧಾತುಗಳಿಗೆ ಸಾರ ಶಕ್ತಿಯನ್ನು ಒದಗಿಸುತ್ತದೆ.

3⃣ ಕ್ಷತಕ್ಷೀಣ ಹಿತಂ-
ಪುಪ್ಪುಸದ ಅಲ್ವಿಯೋಲೈಗಳ ಅತಿಸೂಕ್ಷ್ಮ ರಕ್ತನಾಳಗಳು ಒಡೆದು, ಊತಬಂದಾಗ ರಕ್ತಕ್ಕೆ ಆಮ್ಲಜನಕ‌ ಕಡಿಮೆ ಸೇರುತ್ತದೆ, ಇದು ಟಿಬಿ ಕಾಯಿಲೆಗೆ ಸಮ ಸಮವಾದ ಗಂಭೀರ ತೊಂದರೆ. ಇದರಿಂದ ಮನುಷ್ಯ ಕ್ಷೀಣ/ಸೊರಗಿ ದುರ್ಬಲನಾಗುತ್ತಾನೆ. ಗೋಕ್ಷೀರ ಇಂತಹ ಸಂದರ್ಭದಲ್ಲಿ ಅತ್ಯುತ್ತಮ‌ ಔಷಧವಾಗಿದೆ, ಆದರೆ ಇಂದಿನ ಬಿಳಿದ್ರವ(ಹೈಬ್ರೀಡ್ ತಳಿಯ ಹಾಲು)ವನ್ನು ಸೇವಿಸಿದರೆ ಅದು ಕಫವನ್ನು ಹೆಚ್ಚುಮಾಡಿ ಇನ್ನಷ್ಟೂ ಅನಾರೋಗ್ಯವನ್ನು ತರುತ್ತದೆ ಎಚ್ಚರ! ಕ್ಷತಕ್ಷೀಣ ರೋಗದಲ್ಲಿ ಆಯುರ್ವೇದ ವೈದ್ಯರು ಕೆಲ ಔಷಧಿಗಳನ್ನು ಗೋ ಕ್ಷೀರದಲ್ಲಿ ಪಾಕಮಾಡಿ ಸೇವಿಸಲು ಹೇಳುತ್ತಾರೆ.

4⃣ ಮೇಧ್ಯಂ🧠
ಮೇಧಾ ಎಂದರೆ ಮೆದುಳಿನ ತೀಕ್ಷ್ಣ ಗ್ರಾಹೀ ಶಕ್ತಿ. ಇದನ್ನು ಹೆಚ್ಚುಮಾಡುವ ದ್ರವ್ಯಕ್ಕೆ ಮೇಧ್ಯ ಎನ್ನುತ್ತೇವೆ. ಸಾರ ಮೆದಸ್ಸು ಎಂದರೆ ಹಾಲಿನ‌ಸಾರ ಭಾಗವಾದ ತುಪ್ಪವಾಗಿದೆ. ಕ್ಷೀರದಲ್ಲಿನ ಸಾರ ಜಿಡ್ಡಿನ ಅಂಶ ನಮ್ಮೊಳಗಿನ‌ ಅಗ್ನಿಯಿಂದ ನಿಧಾನವಾಗಿ ಹಂತಹಂತವಾಗಿ ಪಚನವಾಗುತ್ತಾ ಪ್ರತ್ಯೇಕವಾಗುತ್ತಾ ಮೆದಸ್ಸನ್ನು ಸೇರಿ ಅಲ್ಲಿಂದ ಸಾರಭಾಗವಾಗಿ ಮೆದುಳಿನ ಜೀವಕೋಶಗಳಿಗೆ ಪೋಷಣೆ ಅಂದರೆ ತಾನೇ ಮೆದುಳಾಗಿ ಬದಲಾಗುತ್ತದೆ.  ಹೈಬ್ರೀಡ್ ಹಸು ಎಂಬ ಪ್ರಾಣಿಯ ತುಪ್ಪವನ್ನು ತಿಂದರೆ ಕೊಲೆಸ್ಟರಾಲ್ ಹೆಚ್ಚುತ್ತದೆ ಎಂದು ಸಂಶೋಧನೆ ಹೇಳುತ್ತದೆ. ದುರಾದೃಷ್ಟವಶಾತ್ ಈ ಸಂಶೋಧನೆಗಳು ಭಾರತೀಯ ತಳಿಯ ಗೋಘೃತದ ಮೇಲೆ ಆಗಿಲ್ಲ, ಹಾಗಾಗಿ ಅನೇಕ ವೈದ್ಯರು ಹೈಬ್ರೀಡ್ ತುಪ್ಪವನ್ನೇ ನೆಪ ಮಾಡಿಕೊಂಡು ಅದನ್ನು ಶತೃವಿನಂತೆ ಅಲ್ಲಗಳೆಯುತ್ತಿದ್ದಾರೆ.

5⃣ ಬಲ್ಯಂ💪
ಸಂಪೂರ್ಣ ಪೋಷಕಗಳನ್ನು ಹೊಂದಿರುವ ಹಾಲು ಮಾಂಸಧಾತುವಿನ ಘನ-ದೃಢ ಭಾವವನ್ನು(muscular minerals) ಪೋಷಣೆ ಮಾಡುತ್ತಾ ಬಲವರ್ಧನೆ ಮಾಡುತ್ತದೆ. 
ದುರ್ದೈವ ಎಂದರೆ ಬಿ.ಪಿ ಬಂದಾಗ ರಕ್ತನಾಳಗಳನ್ನು ಮೃದುಗೊಳಿಸುವ ಗೋಕ್ಷೀರಸಿದ್ಧ ದ್ರವ್ಯಪ್ರಯೋಗದ ಬದಲು, calcium channel blocker ಉಪಯೋಗಿಸಿ ಹೃದಯದ ಮಾಂಸಖಂಡಗಳ ಶಕ್ತಿಯನ್ನು ಕುಗ್ಗಿಸಿ ಬಿ.ಪಿ ತಗ್ಗಿಸುವ ವಿಧಾನ ಬಳಸುತ್ತಾರೆ!- ಆದರೆ ನೆನಪಿಡಿ, ಬಿ.ಪಿ ಇರುವವರು ಅದಕ್ಕೆ ಸಂಬಂಧಿಸಿದ ಮಾತ್ರೆ ಬಿಡುವಂತೆಯೇ ಇಲ್ಲ, ಅದು ಅತ್ಯಂತ ಅಪಾಯಕಾರಿ. ಬಹಳ ಪ್ರಯತ್ನ ಪಟ್ಟರೆ ಸೂಕ್ತ ಆಯುರ್ವೇದ ವೈದ್ಯರ ಕೈಯಲ್ಲಿ ಒಂದುವರ್ಷ ಪಥ್ಯಾಹಾರ, ಮನೋಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದ ಬಿ.ಪಿಯನ್ನು ಸಂಪೂರ್ಣ‌ ಗುಣಪಡಿಸಬಹುದು. ಅದರ ಹೊರತು ಬಿ.ಪಿ ಜೊತೆ ಆಟವಾಡದಿರಿ ಜೋಕೆ🤫

6⃣ ಸ್ತನ್ಯಕರಂ-
ಎದೆಹಾಲನ್ನು ಹೆಚ್ಚಿಸುತ್ತದೆ. ಬಹಳಷ್ಟು ಹುಡುಗಿಯರು ದಪ್ಪವಾಗುತ್ತೇವೆ, ವಾಸನೆ, ಸೇರಲ್ಲ, ಇನ್ನೇನೋ ಕಾರಣದಿಂದ ಹಾಲನ್ನೇ ಸೇವಿಸದ ಇಂದಿನ ದಿನಗಳಲ್ಲಿ, ಹೆರಿಗೆ ನಂತರ ಶೇ 40 ಜನರಿಗೆ ಎದೆಹಾಲು ಬರುತ್ತಿಲ್ಲ, ಬಂದರೂ ಸಾಕಾಗುತ್ತಿಲ್ಲ, ಇಲ್ಲಿಂದಲೇ ಮಗವಿಗೆ ಕೃತಕ ಹಾಲಿನ ದೋಷವನ್ನು ಅಂಟಿಸುತ್ತಿದ್ದೇವೆ. ತಾಯಿಯಾದ ನಂತರ ಎಷ್ಟು ಹಾಲುಕುಡಿದರೂ ಅದೇನು ಸ್ತನ್ಯವಾಗದು. ಪ್ರಾಯದ ಬೆಳವಣಿಗೆಯಲ್ಲೇ ಗೋಕ್ಷೀರಸೇವನೆ ಮಾಡಿ.

7⃣ ಸರಮ್-
ಶರೀರದ ಪ್ರತಿ ಜೀವಕೋಶಗಳಲ್ಲಿ ಚಯಾಪಚಯ ಕ್ರಿಯೆಯಿಂದ ನಿತ್ಯವೂ ಸಂಚಯವಾದ ವಿವಿಧ ಮಲಗಳನ್ನೂ, ವಿಷವಸ್ತುಗಳನ್ನೂ ತನ್ನ ಈ ಸರಗುಣದ ಸ್ವಸಾಮರ್ಥ್ಯದಿಂದ ಮೃದುಗೊಳಿಸಿ, ಪಿತ್ತದಿಂದ ಪುನಃ ಪಾಕವಾಗಗೊಡದೇ ಉಪಾಯದಿಂದ ಜಾರಿಸಿ(ಸರ) ಹೊರತರುತ್ತದೆ.

ಅನೇಕ ರೀತಿಯ ಲಿವರ್ ತೊಂದರೆಗಳಲ್ಲಿ ಉಂಟಾಗುವ ವಿಷದ ಅವಸ್ಥೆಯಲ್ಲಿ ಔಷಧ ಸಿದ್ಧ ಕ್ಷೀರಪ್ರಯೋಗವನ್ನು ಮಾಡಿ ಪ್ರಾಣಾಂತಕ cirrhosis of liver ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಿದ್ದೇವೆ, ಇದು ನಿಜವಾದ ಆಯುರ್ವೇದದ ಸಾಮರ್ಥ್ಯ. ಇಲ್ಲಿ ಕ್ಷೀರವು ಉದರದಲ್ಲಿನ ಪೋಷಕ ಜಲಸಂಚಯ(ascitic fluid)ವನ್ನು ನಿಃಷ್ಯೇಶವಾಗಿ ಹೊರಹಾಕುವುದು ಮತ್ತು ತಡೆಯುವುದು ಇದೇ *ಸರಗುಣದಿಂದ*

🔜 ಗೋಕ್ಷೀರದ ಇನ್ನೂ 11 ವಿಶೇಷ ಗುಣಗಳನ್ನು ನಾಳೆ ನೋಡೋಣ.

ನಮ್ಮ ಆಪ್ತರ ಗುಂಪನ್ನು ರಚಿಸಿಕೊಂಡು ಅಮೃತಮಯ ದೇಸೀ ಗೋವುಗಳನ್ನು ನಾವೇಕೆ ಸಾಕಬಾರದು? 

     🎀ಧನ್ಯವಾದಗಳು 🎀
••••••••••••••
ಇಂದ
ಹೆಚ್.ಬಿ.ಮೇಟಿ

Tuesday 9 February 2021

ಕ್ಷೀರವು ಅಮೃತ.

🟢 ಅಮೃತಾತ್ಮರೇ ನಮಸ್ಕಾರ 🟢
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
            🙏🙏🙏🙏🙏
••••••••••••••••••••••••••••••••••••••••••
10.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-17
••••••••••••••
✍️: ಇಂದಿನ ವಿಷಯ:
🥛 ಕ್ಷೀರವು ಅಮೃತ.
•••••••••••••••••••••••••••••••••••••••••
ಆದರೆ ಈಗ ವಿಷವಾಗಿದೆ🤦‍♂
ಎಷ್ಟೋ ಸಂಶೋಧನೆಗಳು "ಹಾಲು ಬಿಳಿ ಬಣ್ಣದ ವಿಷ!" ಎಂದು ಸಾರುತ್ತಿವೆ. ಇದು ಸತ್ಯಕ್ಕೆ ದೂರ. 

🤔 ಸತ್ಯವೇನು? 
ನಿಮ್ಮ ಅನುಭವಕ್ಕೆ ಬರುವಂತಿದ್ದರೆ ಸ್ವೀಕರಿಸಿ.
🙏
 
✍ ನಿಜವಾದ ಹಾಲಿನ ಗುಣ:

📜 ಸ್ವಾದು ಪಾಕ ರಸಂ, ಸ್ನಿಗ್ಧಂ, ಓಜಸ್ಯಂ, ಧಾತುವರ್ಧನಮ್ ||
ವಾತಪಿತ್ತ ಹರಂ ವೃಷ್ಯಂ ಶ್ಲೇಷ್ಮಲಂ ಗುರು ಶೀತಲಮ್ |
ಪ್ರಾಯಃ ಪಯಃ..‌....||
- ಅಷ್ಟಾಂಗ ಸೂತ್ರ, ಅಧ್ಯಾಯ-5

ವಿಶೇಷವಾಗಿ ಗಮನಿಸಬೇಕಾದ ಅಂಶ ಎಂದರೆ, 
ಜೀವಿಗೆ ತನ್ನ ತಾಯಿಯ ಸ್ತನ್ಯ(ಮೊಲೆಹಾಲು) ಪ್ರಾಣಕಾರಕ, ಓಜೋಕಾರಕ.
ಈ ಶ್ಲೋಕದಲ್ಲಿ ವಿಶೇಷವಾಗಿ ಎಲ್ಲಾ ಪ್ರಾಣಿಗಳ ಹಾಲಿನಿಂದ ಮನುಷ್ಯನಿಗೆ ಸಿಗುವ ಉಪಯೋಗವನ್ನು ಉದ್ದೇಶಿಸಿ ಅವುಗಳ ಗುಣಗಳನ್ನು  ವರ್ಣಿಸುತ್ತಾರೆ.

🥛 ಕ್ಷೀರವು
• ಮಧುರ ರಸ ಮತ್ತು ಜೀರ್ಣವಾಗುವಾಗಲೂ, ಜೀರ್ಣದ ನಂತರವೂ ಮಧುರವಾದದ್ದು
• ಸ್ನಿಗ್ಧವಾದದ್ದು
• ಧಾತುಗಳನ್ನು ಪೋಷಿಸುತ್ತದೆ
• ಪ್ರಾಣ-ಬಲಕಾರಕ.

🎗 ಚಿಕಿತ್ಸಾ ದೃಷ್ಟಿಯಿಂದ-
 ಅತ್ಯಂತ ಉಷ್ಣವನ್ನೂ ಮತ್ತು ಧಾತುಕ್ಷಯಮಾಡುವ ಅಂಶವನ್ನೂ ದೇಹದಿಂದ ಹೊರಹಾಕುತ್ತದೆ ಮತ್ತು ಎಲ್ಲಾ ಧಾತುಗಳನ್ನು ರಸಧಾತುವಿನಿಂದ ತುಂಬುತ್ತದೆ, ತಂಪಾಗಿಸುತ್ತದೆ,
ಪೌರುಷತ್ವವನ್ನು ಕೊಡುತ್ತದೆ.

ಇದು ಎಲ್ಲಾ ಪ್ರಾಣಿಗಳ ಹಾಲಿನ ಸಾಮಾನ್ಯ ಗುಣ.
ಆದರೆ ಅಷ್ಟಾಂಗ ಹೃದಯ ಸಂಹಿತೆಯ ವ್ಯಾಖ್ಯಾನಕಾರರು- ಒಂಟೆ ಮತ್ತು ಕುರಿಯ ಹಾಲು ಸ್ವಲ್ಪ ವಿಶೇಷ ಗುಣ ಹೊಂದಿರುತ್ತವೆ ಎಂದು ಸಾಮಾನ್ಯದಿಂದ ಪ್ರತ್ಯೇಕಿಸಿ ಹೇಳಿದ್ದಾರೆ.

✨ ಈಗ ಸಿಗುತ್ತಿರುವ ಹಾಲು ಎಂಥಹುದು?
ಆರ್ಥಿಕ ಸಬಲತೆಯೇ ಇಂದಿನ ಜೀವನದ ಬಹು ದೊಡ್ಡ ಮಾನದಂಡವಾಗಿರುವ ಕಾರಣ ಆಹಾರ ಕಲಬೆರಕೆಯಾಗಿ ಇಷ್ಟೊಂದು ಕೆಡುತ್ತಿದೆ, ಆಹಾರ ಪೂರೈಕೆ ಎಂಬುದು ಒಂದು ಉದ್ಯಮ ‌ಕ್ಷೇತ್ರವಾಗಿ ಬೆಳೆದಿದೆ.

🐄 ಗೋವುಗಳ ಲಕ್ಷಣಗಳೇನು?
ಗೋವಿನ‌ಕ್ಷೀರ ಶ್ರೇಷ್ಠ ಎಂದಿದ್ದಾರೆ, ಆದರೆ ಈಗ ಇರುವ ಹಸುಗಳು ನಿಜವಾಗಿಯೂ ಹಸುಗಳೇ ಅಲ್ಲ.

👉 ಗೋವಿನ ಲಕ್ಷಣಗಳನ್ನು ವರ್ಣಿಸುತ್ತಾ ಆಚಾರ್ಯರು-
🔸 ಗೋ ಸಂತತಿ ಎಂದು ಕರೆಸಿಕೊಳ್ಳಲು "ಗಂಗೆತೊಗಲು" "ಶೃಂಗಗಳು" "ವೃಷಭ ಉಚ್ಛ್ರ(ಹೋರಿಗೆ ಇರುವ ಭುಜ, ಬೆನ್ನು ಶಿಖರ)" ಇರುವುದೇ ಮುಖ್ಯ. ಇವುಗಳು ಇಲ್ಲದಿದ್ದರೆ ಅದನ್ನು ಗೋವು ಎನ್ನಲಾಗದು ಎಂದಿದ್ದಾರೆ. ಅದೊಂದು ಹಾಲುಕೊಡುವ ಪ್ರಾಣಿ ಅಥವಾ ಹಾಲು ತಯಾರಿಸುವ ಯಂತ್ರ ಎನ್ನಬಹುದು!

ಈಗ ನಾವು ಕುಡಿಯುತ್ತಿರುವುದು ಗೋಕ್ಷೀರವಲ್ಲ😳

ಆಚಾರ್ಯರು "ಎಂಟು" ಪ್ರಾಣಿಗಳ ಹಾಲಿನ ಗುಣದ ಬಗ್ಗೆ ಹೇಳಿದ್ದಾರೆ, ಆದರೆ ಇಂದು ಹಸು ಎಂದು ನಾವು ಕರೆಯುತ್ತಿರುವ ಗೋವಿನಾಕಾರದ ಪ್ರಾಣಿಯ ಲಕ್ಷಣ ಮತ್ತು ಇದರ ಹಾಲಿನ ಗುಣದ ಬಗ್ಗೆ ಎಲ್ಲಿಯೂ ಹೇಳಿಲ್ಲ!! ಇದು ಹಾಲು ತಯಾರಿಸುವ ಕೃತಕ ಯಂತ್ರವಾಗಿದೆ.

🔜 ಇರಲಿ ಈ ಯಾಂತ್ರಿಕ ಹಾಲಿನ ಬಗೆಗಿನ ವಿಚಾರ ಮತ್ತು ಏಕೆ ಹಾಲನ್ನು ವಿಷ ಎನ್ನುತ್ತಿದ್ದಾರೆ? ಮುಂದೆ ನೋಡೋಣ.
ನಾಳೆ ಎಲ್ಲಾ ಎಂಟು ಪ್ರಾಣಿಗಳ ಹಾಲಿನ ಉಪಯೋಗಗಳನ್ನು ನೋಡೋಣ.

🙏🙏ಧನ್ಯವಾದಗಳು 🙏🙏
•••••••••••••
By
ಹೆಚ್.ಬಿ.ಮೇಟಿ

Monday 8 February 2021

ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.

🙏ಅಮೃತಾತ್ಮರೇ ನಮಸ್ಕಾರ 🙏
 🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
09.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-16
••••••••••••••
✍️: ಇಂದಿನ ವಿಷಯ:
ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.
•••••••••••••••••••••••••••••••••••••••••

📜 ನಾರಿಕೇಳೋದಕಂ ಸ್ನಿಗ್ಧಂ ಸ್ವಾದು ವೃಷ್ಯಂ ಹಿಮಂ ಲಘು |
ತೃಷ್ಣಾ, ಪಿತ್ತ-ಅನಿಲ ಹರಂ, ದೀಪನಂ ಬಸ್ತಿಶೋಧನಮ್ ||19||
- ಅಷ್ಟಾಂಗ ಸೂತ್ರಸ್ಥಾನ, ಅಧ್ಯಾಯ-5

🍃 ಎಳೆನೀರು ತಂಪು ಉಂಟುಮಾಡುತ್ತದೆ, ಆದರೂ ಅಗ್ನಿಮಾಂದ್ಯವಲ್ಲ ಹಾಗಾಗಿ ಕಫ ನೆಗಡಿ ಉಂಟುಮಾಡದು. 

🍃 ದುಃಖ, ನೋವುಗಳಲ್ಲಿ ಮನ ನೊಂದಾಗ, ಬಿಸಿಲಿಗೆ ಬಾಯಾರಿ ಬಳಲಿ ಬಂದಾಗ, ಪಿತ್ತದಿಂದಾದ ಉರಿಶೀತ, ಎದೆಯುರಿ, ಅತ್ಯಂತ ಆಯಾಸ(ಸಾದ), ಪಿತ್ತಾಜೀರ್ಣ, ಹುಳಿವಾಂತಿ, ತಲೆ ಸುತ್ತು ಇದ್ದಾಗ ಕೊಡಲೇಬೇಕಾದ ಆಹಾರರೂಪೀ ಔಷಧ.

🍃 ಮೂತ್ರಉರಿ, ರಕ್ತಮೂತ್ರ,  ಮೂತ್ರಕೋಶದ‌ಲ್ಲಿ ನೋವು, ಮೈಉರಿ ಮುಂತಾದ ಪಿತ್ತ-ವಾತ-ರಜೋ ವೃದ್ಧಿಗಳಲ್ಲಿ ಎಳೆನೀರು ಶ್ರೇಷ್ಠ.

🍃 ಆಮ್ಲಪಿತ್ತದಲ್ಲಿ ಆ್ಯಸಿಡ್ ಹೆಚ್ಚಾದ ಪರಿಣಾಮ ಉಂಟಾದ "ಅಕ್ಷುಧಾ" ನಿವಾರಿಸಿ "ಹಸಿವನ್ನು ಹೆಚ್ಚಿಸುತ್ತದೆ."

🍃 ಎಳೆನೀರು ಪುರುಷತ್ವವನ್ನು ವರ್ಧಿಸುತ್ತದೆ. ‌ಅತಿಯಾಗಿ ಬಳಸದಿದ್ದರೆ *ಓಜಸ್ಸನ್ನೂ- ತೇಜಸ್ಸನ್ನೂ(ಮನೋ-ಶರೀರ ಕಾಂತಿ) ವರ್ಧಿಸುತ್ತದೆ.

🍃 ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶಗಳಲ್ಲಿ ಶೇಖರಣೆಗೊಂಡ ನಿರುಪಯುಕ್ತ ಮತ್ತು ರೋಗಕಾರಕ ಅಂಶಗಳನ್ನು ಹೊರಹಾಕುತ್ತದೆ.

ಇದು ಬಹಳ ಜನರಿಗೆ ಗೊತ್ತಿದೆ ಆದರೆ..... ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ
ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.

🤔 ಏನು ಮಾಡುತ್ತಿದ್ದೇವೆ....?
◆ ಎಷ್ಟೋ ದಿನಗಳ ಹಿಂದೆ ಸಿದ್ಧಪಡಿಸಿ ಪ್ಯಾಕ್ ಮಾಡಿ ಇಟ್ಟದ್ದು 
◆ ಬೀದಿಯಲ್ಲಿ ಬಿಸಿಲಿಗೆ ಇಟ್ಟದ್ದು
◆ ಕೆತ್ತಿಸಿ ಮನೆಗೆ ತಂದು ಎರೆಡು ದಿನ ಇಟ್ಟದ್ದು
◆ ಕೆತ್ತದೇ ಇದ್ದರೂ, ಮರದಿಂದ ಕಿತ್ತು ಮೂರು ದಿನ ಇಟ್ಟದ್ದು
◆ ಎಳೆನೀರು ತೆಗೆದು ಫ್ರಿಜ್ ನಲ್ಲಿಟ್ಟದ್ದು
◆ ಎಳೆನೀರಿಗೆ ಉಪ್ಪು, ಸಕ್ಕರೆ, ಒ.ಆರ್.ಎಸ್ ಹಾಕಿದ್ದು
◆ ಒಳ್ಳೆಯದೆಂದು ನಿತ್ಯವೂ ಅನಿಯಂತ್ರಿತವಾಗಿ ಸೇವಿಸುವುದು
◆ ಎಳೆನೀರಿನ ಖಾದ್ಯ ತಯಾರಿಸುವುದು.... ಇವುಗಳು ಎಳೆನೀರಿನ ಲಾಭವನ್ನು ಅತ್ಯಂತ ಕ್ಷೀಣವಾಗಿಸುತ್ತವೆ ಅಥವಾ ಇಲ್ಲವಾಗಿಸುತ್ತವೆ ಮತ್ತು ವ್ಯತಿರಿಕ್ತ ಪರಿಣಾಮವನ್ನೂ ಬೀರುತ್ತವೆ. 

🚫 ಪ್ರಧಾನವಾಗಿ, ಹೆಚ್ಚಿನ ಜನ ಮಾಡುವ ತಪ್ಪು- ★ ಬಿಸಿಲಲ್ಲಿ ಇಟ್ಟ ಕಾಯಿ ಮತ್ತು ನೆರಳಿನಲ್ಲಿ ಎರೆಡು ಮೂರು ದಿನ ಇಟ್ಟ ಕಾಯಿಯ ನೀರನ್ನು ಬಳಕೆ ಮಾಡುವುದನ್ನು ಬಿಡಬೇಕು.

★ ಎಳೆ ನೀರಿನ ನಂತರ ಗಂಜಿ ಅತ್ಯಂತ ತೆಳುವಾಗಿದ್ದರೆ ಸೇವಿಸಬೇಕು, ಅದು ಎಳೆನೀರಿಗೆ ಸಮ, ಅದೇ ದಪ್ಪ ಕೊಬ್ಬರಿಯಾಗಿದ್ದರೆ, ಬರೀ ನೀರನ್ನು ಕುಡಿದು ಕೊಬ್ಬರಿ ಬಿಡಬೇಕು.

🛎 ವಿಶೇಷ ಸೂಚನೆ:
🔺 ವಿಶೇಷವಾಗಿ ಹಸಿದಾಗ ಎಳೆನೀರು ಸೇವನೆ ಮಾಡಬಾರದು ಇದರಿಂದ ಮತ್ತಷ್ಟು ಹಸಿವೆ ಹಚ್ಚಿ ಸಂಕಟವಾಗುತ್ತದೆ.
🔺 ಅತಿಯಾಗಿ ಅಂದರೆ ನಿತ್ಯವೂ ಸೇವಿಸುವ ಎಳೆನೀರು ಆರೋಗ್ಯಕರವಲ್ಲ.
🔺ರೋಗದಿಂದ ಬಳಲಿಕೆ, ಬಾಯಾರಿಕೆ, ಬಿಸಿಲಿನಿಂದ ಬಳಲಿದಾಗ ಎಳೆನೀರು ಸೂಕ್ತ.

👁‍🗨 ತಪ್ಪು ಬಳಸಿದರೆ ಏನಾಗುತ್ತದೆ.....?
👁‍🗨 ಅತಿಯಾಗಿ ಬಳಸಿದರೆ ಏನಾಗುತ್ತದೆ?
👉 ದೇಹದಲ್ಲಿ ಉಷ್ಣ ತಡೆಯುವ ಬದಲು ಏರುತ್ತದೆ
👉 ಪಿತ್ತ ಹೆಚ್ಚುತ್ತದೆ
👉  ಶರೀರದಲ್ಲಿ ಜಲ ಸಂಚಯವಾಗುತ್ತದೆ
 ಮತ್ತು
👉 ಇದು ಆರೋಗ್ಯಕರವಲ್ಲ.

🤔 ಏನು ಆಗಬೇಕು.....?
★ ಆಗ ತಾನೇ ಮರದಿಂದ ತೆಗೆದ ಮತ್ತು  ಎಳೆಯದಾಗಿರುವ ಕಾಯಿಯನ್ನು ಸೇವಿಸಬೇಕು.
★ ಏನನ್ನೂ ಬೆರೆಸಬಾರದು.
★  ಬಿಸಿಲಿನಿಂದ ಬಳಲಿಕೆಯಾದಾಗ ಮಾತ್ರ ಬಳಸಿ.

👩‍🔬 ಎಳೆನೀರ ಪರೀಕ್ಷೆ: 
✔️ ಎಳೇಕಾಯಿ ಮುಟ್ಟಿದರೆ ಮಕ್ಕಳ ಚರ್ಮದಂತೆ ನುಣುಪಾಗಿಯೂ,
✔️ ಅಲ್ಲಾಡಿಸಿದರೆ ನೀರು ಶಬ್ದಮಾಡದೆಯೂ,
✔️ ಭಾರವಾಗಿಯೂ, 
✔️ ಆದರೆ ನೀರಿನಲ್ಲಿ ಹಾಕಿದರೆ ತೇಲುತ್ತಲೂ ಇರುತ್ತದೆ.
ಈ ನಾಲ್ಕು ಗುಣ ಇಲ್ಲದೇ ಇದ್ದರೆ ಅದರಲ್ಲಿ ದೋಷ ಇದೆ ಎಂದು ತಿಳಿದು ತ್ಯಜಿಸಬೇಕು.
       ✡ಧನ್ಯವಾದಗಳು ✡
•••••••••••••
By
ಹೆಚ್.ಬಿ ಮೇಟಿ

Sunday 7 February 2021

ನಿತ್ಯವೂ ಬಿಸಿನೀರು ಸೇವನೆ ಒಳ್ಳೆಯದೇ?

🙏ಅಮೃತಾತ್ಮರೇ ನಮಸ್ಕಾರ 🙏
   🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿
           ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
08.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-15
••••••••••••••
✍️: ಇಂದಿನ ವಿಷಯ:
ನಿತ್ಯವೂ ಬಿಸಿನೀರು ಸೇವನೆ ಒಳ್ಳೆಯದೇ?
•••••••••••••••••••••••••••••••••••••••••
✍ ಉತ್ತರ:
• ಬಿಸಿ ನೀರು ಅನೇಕ ರೋಗಗಳನ್ನು ತಡೆಯುತ್ತದೆ, ಎಲ್ಲರೂ ನಿತ್ಯ ಸೇವಿಸುವುದು ಒಳ್ಳೆಯದಲ್ಲ.
• ತಣ್ಣೀರು ಅತ್ಯಂತ ಶ್ರೇಷ್ಠ,  ಆದರೆ ಕೇವಲ ಕೆಲವು ಅವಸ್ಥೆಗಳಲ್ಲಿ ಮಾತ್ರ.

ೱೱೱೱೱ●ೱೱೱೱೱ

📜 ಅನಭಿಷ್ಯಂದಿ ಲಘು ತೋಯಂ ಕ್ವತಿಥ ಶೀತಲಮ್|
ಪಿತ್ತಯುಕ್ತೇ ಹಿತಂ ದೋಷೇ..........||
.........ವ್ಯೂಷಿತಂ ತತ್ ತ್ರಿದೋಷಕೃತ್ ||

ಶೀತಂ ಮದತ್ಯಾಯ ಗ್ಲಾನಿ ಮೂರ್ಚಾ ಛರ್ದಿ ಶ್ರಮ ಭ್ರಮಾನ್ |
ತೃಷ್ಣಾ ಉಷ್ಣ ದಾಹ ಪಿತ್ತಾಸ್ರಕ್ ವಿಶೇಷಾಣಿ ಅಂಬು ನಿಯಚ್ಛತಿ ||
-ಅಷ್ಟಾಂಗ ಹೃದಯ ಸೂತ್ರ ಸ್ಥಾನ ಅಧ್ಯಾಯ-5

🔘 ಉಷ್ಣ ಜಲವು 
"ಕಫ ದೋಷ"ದಲ್ಲೂ (ಹಸಿವೆಯಾಗದಿರುವುದು, ಮೈಭಾರ, ಮೆದಸ್ಸು ಅಥವಾ ಕೊಬ್ಬಿನ ಅಂಶ ಹೆಚ್ಚಾಗಿರುವುದು),
"ಕಫವಾತ" ದೋಷದಲ್ಲೂ (ಆಮವಾತ, ಅಜೀರ್ಣ, ಹೊಟ್ಟೆಯುಬ್ಬರ)
ಒಳ್ಳೆಯದು.
ಮತ್ತು
🔘 ಕಾಯಿಸಿ ಆರಿಸಿದ ನೀರು "ಪಿತ್ತವಾತ" ದೋಷ (ಗೌಟಿ ಸಂಧಿಶೂಲ, ಆರ್ಟರೀ ರಕ್ತನಾಳಗಳ ವಿಕಾರಗಳಾದ, ರಕ್ತದೊತ್ತಡ, ಫೆರಿಫೆರಲ್ ವೆಸ್ಕುಲಾರ್ ಕಾಯಿಲೆ, ಬ್ಲಾಕೇಜ್...)
"ಪಿತ್ತಕಫ" ದೋಷ (ವೇನಸ್ ರಕ್ತನಾಳಗಳ ವಿಕಾರವಾದ ವೆರಿಕೋಸಿಟಿ, ಡಿ.ವಿ.ಟಿ, ರಕ್ತಸ್ರಾವ, ಅಧಿಕ ಮುಟ್ಟು) ಇಂತಹ ರೋಗಗಳಲ್ಲಿ ನಿತ್ಯವೂ ಕುದಿಸುತ್ತಾ 1/5 ಅಂಶಕ್ಕೆ ಇಳಿಸಿ ತಾನಾಗಿ ಆರಿದ ನೀರು ಶ್ರೇಯಸ್ಕರ.

🔘 ಕುದಿವ ನೀರನ್ನು,
★ ವಾತದಲ್ಲಿ 1/4 ಅಂಶಕ್ಕೆ
★ ಪಿತ್ತದಲ್ಲಿ 1/3 ಅಂಶಕ್ಕೆ
★ ಕಫದಲ್ಲಿ 1/2 ಅಂಶಕ್ಕೆ ಇಳಿಸಿ ಸೋಸಿ ಆರಿಸಿ ಕುಡಿಯಬೇಕು.
★ ಎರೆಡು ದೋಷಗಳ ಸಂಯೋಗದಲ್ಲಿ 1/5 ಅಂಶಕ್ಕೆ ಇಳಿಸುವುದು ಸೂಕ್ತ.

ೱೱೱೱೱ●ೱೱೱೱೱ

⏩ ಶರೀರದ ದೋಷಗಳ ಜೊತೆ ಮನಸ್ಸು ಕ್ಷೋಭೆಗೊಂಡರೆ , 
ಉದಾ: ಮದ್ಯ ಕುಡಿದಾಗ, ಮೂರ್ಛೆ ಬಂದಾಗ, ವಾಂತಿ ತಡೆಯದೇ ಇರುವಾಗ, ತಲೆಸುತ್ತು ಇರುವಾಗ, ಅತ್ಯಂತ ಬಾಯಾರಿಕೆ ಇರುವಾಗ, ಶರೀರವೆಲ್ಲಾ ಉರಿ ಮತ್ತು ಬಿಸಿ ಬಿಸಿ ಅನಿಸುತ್ತಿರುವಾಗ, ರಕ್ತಸ್ರಾವ, ವಿಷದೋಷದಲ್ಲೂ, ಮತ್ತು ಕೇವಲ ಪಿತ್ತ ಇದ್ದು ಮನಸ್ಸಿನ ರಜೋಗುಣ ವೃದ್ಧಿಯಾಗಿ ನಿಯಂತ್ರಣ ತಪ್ಪಿದಾಗ, ಅತಿಯಾದ ಕೋಪ ಬರುತ್ತಿರುವಾಗ....

ಒಟ್ಟಾರೆ ಕೇವಲ ಪಿತ್ತ ಮತ್ತು ಅದರ ಮೇಲೆ ಅವಲಂಬಿತವಾದ *ರಕ್ತ ದೂಷಿತಗೊಂಡಾಗ, ಶರೀರ ವಿಷಸದೃಷವಾಗುತ್ತದೆ.* ಆಗ ಶಾಂತಿ ಕಳೆದು, ಮನೋವಿಕಾರ ವರ್ಧಿಸುತ್ತದೆ. ಆಗ ತಣ್ಣೀರು ಪರಮ ಶ್ರೇಷ್ಠ.

👁‍🗨 ಮುಖ್ಯಾಂಶಗಳು ದಯಮಾಡಿ ನೆನಪಿನಲ್ಲಿಡಿ: 
ಮನಸ್ಸು ಯವುದೇ ಕಾರಣಕ್ಕೆ ಕ್ಷೋಭೆಗೊಂಡಾಗ, ವಾತಕಫ ದೋಷ ಇದ್ದರೂ ಬಿಸಿನೀರನ್ನು ಒಟ್ಟಾರೆ ತ್ಯಜಿಸಿ ತಣ್ಣೀರನ್ನೇ ಕೊಡಬೇಕು.
ಏಕೆಂದರೆ,
*ಮನಸ್ಸು ಶರೀರವನ್ನು ಅತೀವೇಗವಾಗಿ ಮತ್ತು ಪ್ರಭಲವಾಗಿ ಉಷ್ಣಗೊಳಿಸುವ ಕಾರಣ ಮಾನಸಿಕ ಒತ್ತಡ ಇದ್ದಾಗ ಎಲ್ಲರಿಗೂ ಶೀತಜಲವೇ, ಶ್ರೇಷ್ಠ.*

ಮನಸ್ಸು ಕ್ಷೋಭೆಗೊಳ್ಳದೇ ಶರೀರದ ಯಾವುದೇ ತೊಂದರೆ ಬಂದರೂ ಕಾಯಿಸಿ ಆರಿಸಿದ ನೀರು ಅಮೃತಸಮಾನ.

👁‍🗨 ವಿಶೇಷ ಎಂದರೆ ಬಾಯಾರಿಕೆ ಇಲ್ಲದೇ ಯಾವಾಗಲೂ ನೀರು ಕುಡಿಯಬಾರದು.

🔅 ನಾಳೆಯ ಸಂಚಿಕೆಯಲ್ಲಿ ತೆಂಗಿನಹಾಲು ಅಥವಾ ಎಳೆನೀರಿನ ಅಥವಾ ಬೊಂಡದ ಬಗ್ಗೆ ತಿಳಿದುಕೊಳ್ಳೋಣ.

🙏🙏ಧನ್ಯವಾದಗಳು 🙏🙏
••••••••••••••
By
ಹೆಚ್.ಬಿ.ಮೇಟಿ

Saturday 6 February 2021

ಕಬ್ಬನ್ನು ಹಲ್ಲಿನಿಂದ ಕಚ್ಚಿ ತಿಂದರೆ ರೋಗಗಳನ್ನು ದೂರಮಾಡುತ್ತದೆ ಮತ್ತು ಅದನ್ನೇ ಯಂತ್ರದಿಂದ ಹಿಂಡಿ ಕಬ್ಬಿನಹಾಲನ್ನು ಕುಡಿದರೆ ರೋಗ ತರುತ್ತದೆ.!!!!

🌷🌷ಅಮೃತಾತ್ಮರೇ ನಮಸ್ಕಾರ 🌷🌷
   ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
    ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
07.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-14
••••••••••••••
✍️: ಇಂದಿನ ವಿಷಯ:
ಕಬ್ಬನ್ನು ಹಲ್ಲಿನಿಂದ ಕಚ್ಚಿ ತಿಂದರೆ ರೋಗಗಳನ್ನು ದೂರಮಾಡುತ್ತದೆ ಮತ್ತು ಅದನ್ನೇ ಯಂತ್ರದಿಂದ ಹಿಂಡಿ ಕಬ್ಬಿನಹಾಲನ್ನು ಕುಡಿದರೆ ರೋಗ ತರುತ್ತದೆ.!!!!
•••••••••••••••••••••••••••••••••••••••••

📜 ಇಕ್ಷುರಸೋ ಗುರುಃ ಸ್ನಿಗ್ಧೋ ಬೃಂಹಣಃ ಕಫಮೂತ್ರಕೃತ್ ||42||

📜 ವೃಷ್ಯಃ ಶೀತೋ ಅಸ್ರಕ್ಪಿತ್ತಘ್ನಃ ಸ್ವಾದುಪಾಕ ರಸಃ ಸರಃ |
ಸೋ ಅಗ್ರೇ ಸಲವಣೋ..........||43||

*.............ದಂತ ಪೀಡಿತಃ ಶರ್ಕರಾಸಮಃ ||43||*

📜 .........ಯಾಂತ್ರಿಕಃ ವಿದಾಹಿ ಗುರು ವಿಷ್ಟಮ್ಬೀ............|
- ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5

🎋 ಕಬ್ಬು ಶಕ್ತಿಯುತ, ಧಾತುಪೋಷಕ, ಮೂತ್ರ ಜನಕ, ಪುರುಷತ್ವ ವರ್ಧಕ, ರಕ್ತಪಿತ್ತನಾಶಕ(ಇಂದಿನ ಬಿ.ಪಿ. ಹೆಮೊರೇಜ್, ಹೃದಯ, ಕಿಡ್ನಿ ರಕ್ತನಾಳಗಳ ಹಾನಿ ತಡೆಯುವುದು. ಆದರೆ ನೆನಪಿಡಿ ಮಧುಮೇಹ ರೋಗಿಗಳಿಗೆ ಅನ್ವಯಿಸುವುದಿಲ್ಲ), ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಆದರೆ ಇದನ್ನು ಹಲ್ಲಿನಿಂದ ಕಚ್ಚಿ ತಿಂದಾಗ ಮಾತ್ರ.

ಅದೇ ಯಂತ್ರಗಳಿಂದ ನಿಷ್ಪೀಡನ ಮಾಡಿ, ಹಿಂಡಿ ತೆಗೆದ ಇಕ್ಷು(ಕಬ್ಬು)ರಸವು, ವಿದಾಹಿ(ವಿದಾಹೀ-ಜಾಠರಾಗ್ನಿ ಸಂಯೋಗಾದ್ಯ...) ಅಂದರೆ ಪಿತ್ತವನ್ನು ರಕ್ತವನ್ನೂ ಕೆಡಿಸುವ ಮೂಲ ವಸ್ತು, ಪಚನಕ್ಕೆ ಕಷ್ಟಕರ ಮತ್ತು ಮಲಬದ್ಧತೆಯನ್ನುಂಟುಮಾಡುತ್ತದೆ!!!

*⃣ ಇದು ಹೀಗೇಕೆ?
ಕಬ್ಬಿನ ಗಿಣ್ಣು(Nodes) ಉಪ್ಪು ಮತ್ತು ಕ್ಷಾರದಿಂದ ಕೂಡಿರುತ್ತದೆ. ಹಲ್ಲಿನಿಂದ ಕಚ್ಚಿ ತಿನ್ನವಾಗ ಅದನ್ನು ತೆಗೆಯುತ್ತೇವೆ, ಕೇವಲ ಸಿಹಿ ರಸ ಇರುವ ಮಧ್ಯದ ಭಾಗ(Internodes)ವನ್ನು ತಿನ್ನುವುದೇ ಇದಕ್ಕೆ ಕಾರಣ.

ಯಂತ್ರಗಳಿಂದ ಕಬ್ಬಿನರಸವನ್ನು ತೆಗೆಯುವಾಗ ಸಿಹಿ ಜೊತೆ ಉಪ್ಪು, ಕ್ಷಾರ ಸೇರಿ ಇಡೀ ಮಧುರ ರಸವನ್ನು ಮತ್ತು ಅದರ ಗುಣವನ್ನು ಕೆಡಿಸುತ್ತವೆ. (ಹಾಲಿಗೆ ಮೊಸರನ್ನು ಸೇರಿಸಿದಂತೆ) ಈ ರಸವನ್ನು ಇಟ್ಟಷ್ಟೂ ಹೆಚ್ಚು ಹೆಚ್ಚು ಹಾಳುಮಾಡುತ್ತದೆ. ಹೀಗೆ ಹುಳಿಬರುವ ಕಾರಣ ಅದು ಪಿತ್ತವನ್ನುಂಟುಮಾಡಿ ಮೇಲೆ ತಿಳಿಸಿದ ಎಲ್ಲಾ ರೋಗಗಳನ್ನು ಗುಣಪಡಿಸುವ ಬದಲು ರೋಗಗಳನ್ನು ಉಂಟುಮಾಡುತ್ತದೆ.

📜 ಭುಕ್ತೇ ಹಿ ಸಮೀರಣಕೃತ್ವಮಸ್ಯ ದೃಷ್ಟಮ್||
-ಅಷ್ಟಾಂಗ ಸಂಗ್ರಹ ಸೂತ್ರ, ಅಧ್ಯಾಯ-6  
🎋 ಊಟದ ನಂತರ ಕಬ್ಬನ್ನು ಹೇಗೆ ಸೇವಿಸಿದರೂ ವಾತದೋಷವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಇದು ಏಕೆಂದರೆ- ನಾವು ಸಿಹಿ-ಹುಳಿ-ಉಪ್ಪು-ಖಾರ-ಕಹಿ ಎಲ್ಲವನ್ನೂ ನಮ್ಮ ಆಹಾರದಲ್ಲಿ ಸೇರಿಸಿ ತಿಂದಿರುತ್ತೇವೆ. ಅದರ ಮೇಲೆ ಕಬ್ಬನ್ನು ತಿಂದರೂ, ರಸವನ್ನು ಕುಡಿದರೂ ಅದು ಅಜೀರ್ಣವಾಗಿ ಜಠರದ ಕೆಳಗೆ ಮೊದಲು ತಿಂದ ಮಧುರ ರಸ ಮತ್ತು ಕೊನೆಗೆ ತಿಂದ ಕಬ್ಬೂ ಮಧುರ ರಸವಾಗಿ ಸ್ತಂಭನ ಮಾಡುವ ಕಾರಣ ಜಾಠರಾಗ್ನಿ ಮತ್ತು ಸಮಾನವಾಯುವನ್ನು ಉದ್ದೀಪಿಸಿ ಆವರಣದಿಂದಾದ ವಾತರೋಗಗಳನ್ನು(ಆಮವಾತ, ಆಧ್ಮಾನ, ಕಟಿಶೂಲ- ಅಂದರೆ ಸಂಧಿಶೂಲ, ಹೊಟ್ಟೆಯುಬ್ಬರ, ಸೊಂಟನೋವು) ಉಂಟು ಮಾಡುತ್ತದೆ. 

🙏🙏ಧನ್ಯವಾದಗಳು 🙏🙏
••••••••••••••
By
ಹೆಚ್.ಬಿ.ಮೇಟಿ

Friday 5 February 2021

ಅಮ್ಲೀಯವಾದ ಫಿಲ್ಟರ್ ನೀರೇ ಸಿಗುತ್ತಿರುವ ಈ ಸಂಧರ್ಭದಲ್ಲಿ ರೋಗ ದೂರಮಾಡುವ ಪರಿಹಾರವೂ ಆಯುರ್ವೇದದಲ್ಲಿದೆ....

❄️ಅಮೃತಾತ್ಮರೇ ನಮಸ್ಕಾರ ❄️
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
06.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-13
••••••••••••••
✍️: ಇಂದಿನ ವಿಷಯ:
ಅಮ್ಲೀಯವಾದ ಫಿಲ್ಟರ್ ನೀರೇ ಸಿಗುತ್ತಿರುವ ಈ ಸಂಧರ್ಭದಲ್ಲಿ ರೋಗ ದೂರಮಾಡುವ ಪರಿಹಾರವೂ ಆಯುರ್ವೇದದಲ್ಲಿದೆ😊
•••••••••••••••••••••••••••••••••••••••••

ಅಚ್ಚರಿಯೇ..?

ಈ ಲೆಖನ ಮಾಲಿಕೆಯ ಓದುಗರೊಬ್ಬರು ಕೇಳಿದ್ದಾರೆ-

🗣 ಸರ್ ನಮ್ಮ ಊರಿನಲ್ಲಿ ಸರಕಾರದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದಾರೆ. ಕುಡಿಯಲು ಅ ನೀರನ್ನು ತಾಮ್ರದ ಪಾತ್ರೆಯಲ್ಲಿ ತುಂಬಿ ಅದನ್ನು ಕುಡಿಯುತ್ತೆವೆ. ಫಿಲ್ಟರ್ ಆಗಿರುವ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಳಸಬಹುದಾ? ಸರ್ ದಯಮಾಡಿ ತಮ್ಮ ಬಿಡುವಿನ ವೇಳೆಯಲ್ಲಿ ತಿಳಿಸಿ.
🙏🙏

✍ ನಮ್ಮ ಉತ್ತರ: ಖಂಡಿತಾ ಬೇಡ, ಮಣ್ಣಿನ‌ಪಾತ್ರೆಯಲ್ಲಿ ಸಂಗ್ರಹಿಸಿ. 
ಮತ್ತು 

🗣 ಓದುಗ ಮತ್ತೆ ಹೇಳಿದ್ದಾರೆ-
 ಈ ನೀರನ್ನು ಬಳಸಿದ ನಂತರ ಗ್ರಾಮದ ಜನರಿಗೆ "ಆಮ್ಲಪಿತ್ತ" ಹೆಚ್ಚಾಗಿದೆ!!! ಎಂದು.

ಅಂದರೆ ಗ್ರಾಮದ ಜನರು, ಸೋಂಕುಗಳಿಂದ ದೂರವಾದರೂ, ಮೆಟಬಾಲಿಕ್ ಕಾಯಿಲೆಗಳಿಂದ ನರಳುತ್ತಿದ್ದಾರೆ....

🗣 ಪರ್ಯಾಯ ಉಪಾಯ ಏನು?

📜 ಕಾಮಂ ಅಲ್ಪಂ, ಅಶಕ್ತೌ, ತು ಪೇಯಂ ಔಷಧ ಸಂಸ್ಕೃತಮ್ | ಪಾಷಾಣ, ರೌಪ್ಯ, ಮೃದ್ಧೇಮಜತು ತಾಪಾರ್ಕತಾಪಿತಮ್|| ಪಾನೀಯಮುಷ್ಣಂ ಶೀತಂ ವಾ ತ್ರಿದೋಷಘ್ನಂ ತೃಟ್ ಜಿತ್ ಇತಿ|
- ಅಷ್ಟಾಂಗ ಸೂತ್ರ ಅಧ್ಯಾಯ-6

💦 ಸದ್ಯಕ್ಕೆ ದೀರ್ಘಕಾಲೀನ ಹಿತಕಾರಕ ಪರಿಹಾರವಾದ ಅಂತರ್ಜಲ ಹೆಚ್ಚಿಸುವುದು ಅಸಾಧ್ಯ.
ಹಾಗಾಗಿ,
ಸಧ್ಯಕ್ಕೆ ಸಿಗುತ್ತಿರುವ ಫಿಲ್ಟರ್ ನೀರಿಗೆ ಸುಣ್ಣದ ಕಲ್ಲನ್ನೋ, ಬೆಳ್ಳಿಯ-ಬಂಗಾರದ ತುಂಡನ್ನೋ ಚೆನ್ನಾಗಿ ಕೆಂಪಾಗುವಂತೆ ಕಾಯಿಸಿ ಒಂದು ಪಾತ್ರೆ ನೀರಿನೊಳಗೆ ಹಾಕಿ ಬಿಟ್ಟು, ಆ ನೀರು ತಿಳಿಯಾದಮೇಲೆ, ಬೆಚ್ಚಗಿರುವಂತೆ ಅಥವಾ ತಣ್ಣಗಾದಮೇಲೆ ಕುಡಿಯುವುದು ಶ್ರೇಯಸ್ಕರ

ಅಥವಾ,
ಜೈನ ಮುನಿಗಳು ಮಾಡುವಂತೆ- ಅರ್ಧ ಲೀಟರ್ ನೀರಿನಲ್ಲಿ ಅರ್ಧ ಗ್ರಾಂ ಸುಣ್ಣ ಕರಗಿಸಿಡಿ, ಒಂದಿಡೀ ದಿನದಲ್ಲಿ ಬೇಕೆನಿಸಿದಾಗ ಕುಡಿಯಲು ಬಳಸಿ. 

👩‍🔬 ವೈಜ್ಞಾನಿಕ ವಿವರಣೆ ಏನು?
ನೀರಿಗೆ ಕಾಯಿಸಿದ ಶುದ್ಧ ಸುಣ್ಣದ ಕಲ್ಲು, ಶುದ್ಧ ಮಣ್ಣಿನ ಹೆಂಟೆ, ಲೋಹಾದಿಗಳನ್ನು ಚೆನ್ನಾಗಿ ಕಾಯಿಸಿ ಹಾಕಿದರೆ-  "ಆಕ್ಷೇಪ ವಿಚ್ಛೇದೈಃ"(water electrolysis) ಕ್ರಿಯೆಯಿಂದ ಪರಮಾಣು ವಿಭಜನೆಯುಂಟಾಗಿ pH ವೃದ್ಧಿಯಾವುದಲ್ಲದೇ, ಲಘು ಮತ್ತು ಅತ್ಯಂತ ಆರೋಗ್ಯಕರ ಜಲ ನಮ್ಮದಾಗುತ್ತದೆ. 
ಹಾಗೆಯೇ ನೀರಿಗೆ  ಸ್ವಲ್ಪ ಶುದ್ಧ ಸುಣ್ಣವನ್ನು ಹಾಕಿದರೂ- ನೀರಿನ‌ pH ಹೆಚ್ಚುತ್ತದೆ.

ಆಗ,
★ ಶರೀರದ ನಿರ್ಜಲೀಕರಣದಿಂದ ಉಂಟಾದ ನಿಶ್ಯಕ್ತಿ ದೂರವಾಗುತ್ತದೆ. 
★ ಅಜೀರ್ಣ-ಆಮ್ಲಪಿತ್ತ ಇಲ್ಲವಾಗುತ್ತದೆ.
★ ಹಸಿವು ಹೆಚ್ಚುತ್ತದೆ.
★ ಮೂತ್ರ ಉರಿಯಂತಹ ಅನೇಕ ತೊಂದರೆಗಳು ಒಂದೆರೆಡು ಗಂಟೆಗಳಲ್ಲಿ ಪರಿಹಾರವಾಗುತ್ತವೆ.
★ ಮೂಳೆಗಳಿಗೆ ಸುಣ್ಣದ ಅಂಶ ಸಿಗುವ ಕಾರಣ ಗಟ್ಟಿಯಾಗುತ್ತವೆ.
★ ಹೈಪೋಥೈರಾಯ್ಡಿಸಮ್ ಬಾಧೆ ಕಡಿಮೆಯಾಗುತ್ತದೆ...
ಇನ್ನೂ ಅನೇಕ ಉಪಯೋಗಗಳು ನಮ್ಮದಾಗುತ್ತವೆ.

ಆತ್ಮೀಯರೇ, 
ಈ ಕ್ರಿಯೆಗಳನ್ನು ಅನೇಕ ಚಿಕಿತ್ಸಾ ಪದ್ಧತಿಗಳಲ್ಲಿ ನಿತ್ಯಕ್ರಿಯೆಗಳಲ್ಲಿ ಅಳವಡಿಸಿಕೊಂಡು ಪರಿಹಾರ ಕಂಡುಕೊಳ್ಳಲಾಗಿದೆ. ಹಾಗಾಗಿ ನಮಗೆ ಇನ್ನಷ್ಟು ಪ್ರಮಾಣೀಕರಿಸಿ ಹೇಳಲು ಸಹಕಾರಿಯಾಗಿದೆ.

    🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ.

Thursday 4 February 2021

ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️!!!

🙏ಅಮೃತಾತ್ಮರೇ ನಮಸ್ಕಾರ 🙏
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
   💫💫💫💫💫💫💫💫💫💫
•••••••••••••••••••••••••••••••••••••
•••••
05.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-12
••••••••••••••
✍️: ಇಂದಿನ ವಿಷಯ:
ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️!!!
•••••••••••••••••••••••••••••••••••••••••
✨ ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

👁 ವಿಚಿತ್ರವಾದರೂ ಸತ್ಯ: 
ಅತಿಯಾಗಿ ನೀರು ಕುಡಿಯುವುದರಿಂದಲೇ ಕಿಡ್ನಿಯಲ್ಲಿ ಕಲ್ಲುಗಳುಂಟಾಗುತ್ತವೆ.!!

👇 ಈ ಶ್ಲೋಕವನ್ನು ಗಮನಿಸಿ: 
📜 ನ ಅಂಬು ಪೇಯಂ ಅಶಕ್ತ್ಯಾ ವಾ ಸ್ವಲ್ಪಂ ಅಲ್ಪಾಗ್ನಿ ಗುಲ್ಮಿಭಿಃ ||13||
ಪಾಂಡು, ಉದರ, ಅತಿಸಾರ, ಅರ್ಶ, ಗ್ರಹಣಿದೋಷ, ಶೋಥಿಭಿಃ |
ಋತೇ ಶರನ್ನಿದಾಘಾಭ್ಯಾಂ ಪಿಬೇತ್ ಸ್ವಸ್ಥೋ ಅಪಿ ಚ ಅಲ್ಪಶಃ ||14||
-ವಾಗ್ಭಟ ಸೂತ್ರಸ್ಥಾನ

◆ ಉಷ್ಣ ಕಾಲದಲ್ಲೂ ಅಂದರೆ,
ಗ್ರೀಷ್ಮ ಋತು (ಮೇ-ಜೂನ್) ಮತ್ತು
ಶರದೃತು(ಅಕ್ಟೋಬರ್-ನವೆಂಬರ್) ಗಳಲ್ಲಿ ಅಗತ್ಯಕ್ಕನುಸಾರ ನೀರನ್ನು ಕುಡಿಯಬಹುದು, ಉಳಿದ ತಿಂಗಳುಗಳಲ್ಲಿ  ಅಲ್ಪ ನೀರು ಸಾಕು, ಹೆಚ್ಚು ಕುಡಿದರೆ ಅನೇಕ ರೋಗಗಳು ಬರುತ್ತವೆ!!! 

👉 ಹೆಚ್ಚು ನೀರನ್ನು ಸೇವಿಸಿದರೆ-
• ನಿಶ್ಯಕ್ತಿ 
• ಅಗ್ನಿಮಾಂದ್ಯ
• ಗುಲ್ಮ
• ರಕ್ತಹೀನತೆ 
• ಮೂಲವ್ಯಾಧಿ
• ಗ್ಯಾಸ್ಟ್ರೈಟೀಸ್
• ಕೊಲೈಟೀಸ್ 
ಮುಂತಾದ ಅನೇಕ ರೋಗಗಳು ಬರುತ್ತವೆ!!!

ನಮ್ಮ ಈ ಮಾತು ಸತ್ಯ, ಏಕೆಂದರೆ ಆಚಾರ್ಯರು ನಿಃಸ್ವಾರ್ಥರು, ಅಹಂಕಾರ ರಹಿತರು, ಕೇವಲ ಮನುಜಕುಲದ ಆರೋಗ್ಯ ಅವರ ಆಶಯವಾಗಿತ್ತು ಎನುವುದು ಸ್ಪಷ್ಟ, ಹಾಗಾಗಿ ಅಸತ್ಯವಲ್ಲ ಮತ್ತು 
ಪ್ರತ್ಯಕ್ಷವಾಗಿ ಅನುಭವ ಪೂರ್ವಕ ನೋಡಿದರೆ,  "ಕಡಿಮೆ ನೀರು ಕುಡಿಯುವವ ಯೋಗಿ, ಹೆಚ್ಚು ಕುಡಿಯುವವ ರೋಗಿ" ಆಗಿದ್ದಾರೋ ಇಲ್ಲವೋ?

ಪ್ರಾಣಿಗಳನ್ನು ಗಮನಿಸಿ ದಿನಕ್ಕೆ ಒಂದುಬಾರಿ ನೀರು ಸೇವಿಸುತ್ತವೆ, ಅದುವೇ ನೈಸರ್ಗಿಕ ಜೀವನ.

📩 ಆಯುರ್ ವಿಜ್ಞಾನ ಏಕೆ ಹೀಗೆ ಹೇಳಿದೆ? ನೋಡೋಣ: 
◆ ಆಹಾರ ಸ್ನಿಗ್ಧವೂ, ಮೃದುವೂ ಮತ್ತು ಸುಖೊಷ್ಣವಾಗಿಯೂ ಇರಬೇಕು. ಚನ್ನಾಗಿ ಬೇಯಿಸಿರಬೇಕು. ಇದರಿಂದಲೇ ಶರೀರಕ್ಕೆ ಬೇಕಾದಷ್ಟು ನೀರು ಸೇರುತ್ತದೆ. 

ಶೀತಲ ಭೂಮಿಯ ಆಹಾರಗಳು ಪಚನಕ್ಕೆ ಕಷ್ಟವಾಗಿ ರೋಗ ತರುತ್ತವೆ, ಕಾರಣ ಅದರಲ್ಲಿರುವ ಹೆಚ್ಚಿನ ನೀರು. ಹಾಗೇ ಉಷ್ಣವಲಯದ ಆಹಾರಗಳು ಪಚನಕ್ಕೆ ಹಗುರ ಹಾಗಾಗಿ ಆರೋಗ್ಯ ತರುತ್ತವೆ, ಕಾರಣ ಅದರಲ್ಲಿರುವ ಅಲ್ಪ ನೀರಿನ ಪ್ರಮಾಣ.

🔥 ನಮ್ಮ ಶರೀರದ ಒಳಗೆ ಅಗ್ನಿ ಇದ್ದು, ಇದು ಅನೇಕ ಸ್ಥೂಲ-ಸೂಕ್ಷ್ಮ ಎಂಜೈಮ್ ರೂಪದಲ್ಲಿದೆ. ಇದಕ್ಕೆ ಹೆಚ್ಚು ನೀರು ಬೆರೆತರೆ ಏನಾಗುತ್ತದೆ? ಅದರ ಪಾಚನ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಸೇವಿಸುವ ಆಹಾರ ಯಾವುದೇ ಇದ್ದರೂ ಸರಿಯಾಗಿ ಪಚನವಾಗದು ಅದರ ಪರಿಣಾಮ, ಉದರದ ಊತ(ಗ್ಯಾಸ್ಟ್ರೈಟೀಸ್...) ಮಲಬದ್ಧತೆ, ಮೂಲವ್ಯಾಧಿ, ಗುಲ್ಮ ಇವುಗಳಿಂದ ರಕ್ತದ ಕೊರತೆ ಉಂಟಾಗಿ ಪಾಂಡು ಅಥವಾ ಅನಿಮಿಯಾ ಉಂಟಾಗುತ್ತದೆ. ಶರೀರದಲ್ಲಿ "ಆಮವಿಷ"(unseparated molecules of food) ಸಂಚಯವಾದ ಕಾರಣ ಸದಾ ನಿಶ್ಯಕ್ತಿ ಮೈಭಾರ ಇರುತ್ತದೆ. ಕೆಲ ಕಾಲ ಕಳೆದರೆ ಹೈಪೋಥೈರಾಯ್ಡಿಸಮ್ ಆಗಿ ಶರೀರ ಮತ್ತಷ್ಟು ದುರ್ಬಲಗೊಳ್ಳುತ್ತದೆ.

👉 ಇನ್ನು ಕಿಡ್ನಿ ಕಲ್ಲುಗಳ ಬಗ್ಗೆ ನೋಡೋಣ: 
ಮೂತ್ರಮಾರ್ಗದಲ್ಲಿ ಈಗಾಗಲೇ ಸಿಕ್ಕಿಹಾಕಿಕೊಂಡ ಕಲ್ಲುಗಳನ್ನು ಕ್ಷಾಲನ(washout) ಮಾಡಲು ಚಿಕಿತ್ಸೆಯಾಗಿ ಜಲಸೇವನೆ ಸರಿ. ಆದರೆ ಕಿಡ್ನಿ ಕಲ್ಲುಗಳನ್ನು ತಡೆಯುವ ಸಲುವಾಗಿ ನೀರನ್ನು ಕುಡಿದರೆ ಅದು ನಮ್ಮನ್ನು ಮೂರ್ಖರನ್ನಾಗಿಸುತ್ತದೆ.  ಅತಿ ಜಲಪಾನದಿಂದ ಅಗ್ನಿಮಾಂದ್ಯವಾಗುವ ಕಾರಣ ಅವಿಭಜಿತ(ಜೀರ್ಣವಾಗದ) ಲವಣಗಳು ನೆಫ್ರಾನ್ಗಳಲ್ಲಿ ಸಂಚಯವಾಗಿ ಮಾರ್ಗದಲ್ಲಿ ಕಟ್ಟಿಕೊಂಡ ಪರಿಣಾಮ ಕಿಡ್ನಿ ಕಲ್ಲುಗಳು ಪದೆ ಪದೆ ಮರುಕಳಿಸುತ್ತವೆ. 

ಬಹಳ ವಿವರ ಕೊಡಬಹುದು, ಆದರೆ ಇಷ್ಟು ಸಾಕು. ಗಮನಿಸಿ ನಿಮ್ಮ ಸುತ್ತ ಇರುವ ತೊಂಭತ್ತು- ನೂರು ವರ್ಷದ ವೃದ್ಧರ ನೀರಿನ ಪ್ರಮಾಣ ಗಮನಿಸಿ ಮತ್ತು ಹಿಂದಿನಿಂದ ಅವರು ಪಾಲಿಸಿದ ಪ್ರಮಾಣ ಗಮನಿಸಿ ಅವರ ಆರೋಗ್ಯದ ಗುಟ್ಟು ಅಲ್ಪ ಜಲಪಾನ ಎಂದು ಗೊತ್ತಾಗುತ್ತದೆ.

ಹಾಗಾಗಿ,
ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

🙏 ಧನ್ಯವಾದಗಳು 🙏
••••••••••••••
ಇಂದ 
ಹೆಚ್.ಬಿ.ಮೇಟಿ

Wednesday 3 February 2021

ಜಲವೇ ಜೀವ. ಭಾಗ-೩

🤝 ಅಮೃತಾತ್ಮರೇ ನಮಸ್ಕಾರ 🙏
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
04.02.20201
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-13
••••••••••••••
✍️: ಇಂದಿನ ವಿಷಯ:
       ಜಲವೇ ಜೀವ. ಭಾಗ-೩
•••••••••••••••••••••••••••••••••••••••••

🖋 ಸಮರ್ಪಕವಾಗಿ ಜಲ ಸೇವಿಸುವ ವಿಧಾನ ಯಾವುದು?
★ ನಮ್ಮ ಜೀವಕೋಶಗಳು ಬದುಕಿರುವುದೇ, ಜಲದ ಆಧಾರದಲ್ಲಿ. ಎಲ್ಲಾ ಧಾತುಗಳಲ್ಲಿರುವ ದ್ರವಾಂಶವನ್ನೇ *ಆಪ್ ಧಾತು* ಎಂದು ಕರೆದಿದ್ದಾರೆ ಆಯುರ್ವೇದ ಆಚಾರ್ಯರು.

ನಾವು ಪ್ರತಿ ದಿನ ಅಳತೆಮಾಡಿ ಅಧಿಕ ಪ್ರಮಾಣದಲ್ಲಿ ಜಲ ಸೇವನೆ ಮಾಡುತ್ತಿದ್ದೇವೆ, ಆದರೂ ನಿರ್ಜಲೀಕೃತ ಕಾಯಿಲೆಗಳಾದ ಮೈಗ್ರೇನ್, ಬಿ.ಪಿ, ಆಯಾಸ, ಮೂಳೆ ಸವೆತ, ಕಿಡ್ನಿ ಕಲ್ಲುಗಳು... ಹೀಗೆ ಅನೇಕ ರೋಗಗಳಿಂದ ಕೊರಗುತ್ತಿದ್ದೇವೆ!!

💢 ಸಮರ್ಪಕವಾಗಿ ಜಲ ಸೇವನೆ ಮಾಡದಿರುವುದೇ ಈ ರೋಗಗಳಿಗೆ ಕಾರಣ.

🖋 ಜಲ ಸೇವನೆಯ ವಿಧಾನಗಳಾವುವು?
★ ಆಹಾರದಲ್ಲಿರುವ ಜಲ ಮತ್ತು ಕುಡಿಯುವ ನೀರು ಈ ಎರೆಡು ವಿಧಾನದಿಂದ ಜಲವು ನಮ್ಮ ಶರೀರವನ್ನು ಸೇರುತ್ತದೆ. ಇವುಗಳ ಅಸಮರ್ಪಕ ನಿರ್ವಹಣೆಯೇ ರೋಗೋದ್ದೀಪನಗೊಳಿಸುತ್ತಿವೆ.

1⃣ ಆಹಾರದಲ್ಲಿರುವ ಜಲ:
ಶರೀರದ ಸದೃಢ ಬೆಳವಣಿಗೆಗೆ ಆಹಾರದಲ್ಲಿರುವ ಜಲವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. 
ಗಮನಿಸಿ-
ಅಕ್ಕಿಯನ್ನು ತಿಂದು ಎಷ್ಟು ನೀರು ಕುಡಿದರೂ ಉದರದಲ್ಲಿ ಅದು ಆಹಾರ(ಅನ್ನ)ವಾಗದು.

ಆದರೆ ಇಂದು ನಾವು, ಬಾಯಿರುಚಿಗೆಂದು ಕಡಿಮೆ ನೀರಿರುವ, ತರಿತರಿಯಾದ ಆಹಾರವನ್ನೂ ಮತ್ತು ಕರಿದ ಅಥವಾ ವಗ್ಗರಣೆ ಕಲಸಿದ ಅಥವಾ ಚಪಾತಿಯಂತಹ ಕಡಿಮೆ ನೀರಿರುವ ಪದಾರ್ಥ ಸೇವಿಸುತ್ತೇವೆ! ಮತ್ತೆ ನೀರು ಒಳ್ಳೆಯದೆಂದು ಮೇಲಿನಿಂದ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತೇವೆ!! ಇದು ಸರ್ವಥಾ ರೋಗಕಾರಕ.

💥 ಇದರ ಪರಿಣಾಮ: 
ಯಾವುದೇ ಜೈವಿಕ ಪರಿವರ್ತನೆಯು ಆಹಾರದಲ್ಲಿನ ದ್ರವದ ಅವಸ್ಥೆಯಲ್ಲಿ ಮತ್ತು ಮೆದುವಾದ ಅವಸ್ಥೆಯಲ್ಲಿ ಆಗುತ್ತದೆ. 
ಹಾಗೆಯೇ, ನಮ್ಮ ಆಹಾರವು ದೃಢ ಶರೀರವಾಗಿ ಪರಿವರ್ತನೆಯಾಗಲು ಆಹಾರದೊಳಗಿನ ನೀರು ಬಹುಮುಖ್ಯ, ಇಲ್ಲದೇ ಹೋದರೆ ಆರಂಭದಲ್ಲಿ ಆಮ್ಲಪಿತ್ತ, ರಕ್ತಪಿತ್ತ, ಲಿವರ್ ನಲ್ಲಿ ಕೊಬ್ಬು ಶೇಖರಣೆ, ಪಿತ್ತಕೋಶದ ಮತ್ತು ಕಿಡ್ನಿಕಲ್ಲುಗಳು... ಮುಂತಾದವು ಉಂಟಾಗುತ್ತವೆ. ಕ್ರಮೇಣ ಗಂಭೀರ ಸ್ವರೂಪದ ಕಾಯಿಲೆಗಳು ಉಂಟಾಗುತ್ತವೆ.

💥 ಆರಂಭದಲ್ಲೇ ಇದನ್ನು ಗುರುತಿಸಿ:
ೱ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ
ೱ ಮೂತ್ರ, ಬೆವರು ದುರ್ಗಂಧದಿಂದ ಕೂಡಿದ್ದರೆ
ೱ ತಲೆಯಲ್ಲಿ ಮೊಡವೆಗಳು ಎದ್ದರೆ
ೱ ಹೊಟ್ಟು ಇದ್ದರೆ 
ತಿಳಿಯಿರಿ ನಿಮ್ಮ ಶರೀರ ನಿರ್ಜಲೀಕರಣಗೊಳ್ಳುತ್ತಿದೆ. 

💥 ಪರಿಹಾರ:
 ಎರೆಡು ದಿನ ಕೇವಲ ಅನ್ನದ ಗಂಜಿ ಸೇವಿಸಿ ನಂತರ ಒಂದು  ವಾರ ನೀರಾಗಿರುವ ಆಹಾರ ಬಳಸಿ. ಶೇ 80-90 ರಷ್ಟು ಬದಲಾವಣೆಗಳನ್ನು ಕಾಣುತ್ತೀರಿ.

2⃣ ಕುಡಿಯುವ ನೀರು:
ನೀರನ್ನು
• ಹೇಗೆ ಕುಡಿಯಬೇಕು?
• ಯಾವಾಗ ಕುಡಿಯಬೇಕು?
• ಎಷ್ಟು ಕುಡಿಯಬೇಕು?
• ಯಾವ ನೀರನ್ನು ಕುಡಿಯಬೇಕು?
ಈ ಪ್ರಶ್ನೆಗಳು ಬಹಳ ಜನರನ್ನು ಕಾಡುತ್ತಿವೆ, ಕೊನೆಗೆ ತಮಗೆ ತಿಳಿದ ಯಾವುದೋ ಒಂದು ರೂಢಿ ಅಥವಾ ಟಿ.ವಿ ನೋಡಿ ಪದೇ ಪದೇ ಬದಲಾಯಿಸುತ್ತಲೂ ಇರುತ್ತಾರೆ.

▶️ ಇದಕ್ಕೆ ಸರಳ ಉತ್ತರಗಳು:

💥 ಹೇಗೆ ಮತ್ತು ಯಾವಾಗ ನೀರು ಕುಡಿಯಬೇಕು?:
📜 ಸಮ ಸ್ಥೂಲ ಕೃಶಾ ಭುಕ್ತ ಮಧ್ಯ ಅಂತ ಪ್ರಥಮ ಅಂಬು ಪಾನಃ ||15||
- ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ-5
 ★ ಆಹಾರದ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ಜಲಪಾನ ಮಾಡುವುದರಿಂದ "ಸಮ ಶರೀರವೂ",
★ ಆಹಾರದ ನಂತರ ನೀರು ಸೇವನೆಯಿಂದ "ಸ್ಥೂಲ ಶರೀರವೂ",
★ ಆಹಾರಕ್ಕಿಂತ ಮೊದಲೇ ಸೇವಿಸುವ ಜಲವು "ಕೃಶ ದುರ್ಬಲ ಶರೀರ"ವನ್ನು ಉಂಟುಮಾಡುತ್ತದೆ.

✍ ಸಮ/ಆರೋಗ್ಯಯುತ ಶರೀರಕ್ಕಾಗಿ ಆಹಾರದ ಮಧ್ಯದಲ್ಲಿ ಸ್ವಲ್ಪ-ಸ್ವಲ್ಪ ಜಲಪಾನ ಶ್ರೇಷ್ಠ.

💥 ಎಷ್ಟು ನೀರನ್ನು ಕುಡಿಯಬೇಕು?
ಒಳಗಿನ ದ್ರವಾಂಶದ ಅಗತ್ಯವನ್ನು ನಮ್ಮ ಶರೀರ ಬಾಯಾರಿಕೆಯ ರೂಪದಲ್ಲಿ ಕೇಳುತ್ತದೆ. ಆಗ ಅದು ಕೇಳಿದಷ್ಟು ನೀರನ್ನು, ಕೇಳಿದಾಗ ಕೊಡಬೇಕು. ಸುಮ್ಮನೇ ಲೆಕ್ಕಮಾಡಿ, ಯಾರೋ ಹೇಳಿದರೆಂದು ಲೀಟರ್ ಲೆಕ್ಕದಲ್ಲಿ ಎಣಿಸಿ ಕುಡಿಯಬಾರದು.

💥 ಯಾವ ನೀರನ್ನು ಕುಡಿಯಬೇಕು?
ಆಳದ ಬೋರ್ ವೆಲ್ ನೀರು ನೇರ ಕುಡಿಯಲು ಯೋಗ್ಯವಲ್ಲ. ಅತ್ಯಂತ ಹೆಚ್ಚು ಖನಿಜಗಳಿಂದ ಕೂಡಿದ ಈ ಜಲ ಯೋಗ್ಯವಲ್ಲ, ಹಾಗೆಯೇ ಅತಿಯಾದ ಸಿಹಿ ಇರುವ ನೀರೂ ರೋಗಕಾರಕ(ಉದಾ: ತುಂಗಾ ಪಾನ)❗️

▪️ಶೈಲ ಜಲ(hilly region water) ರೋಗ ನಿವಾರಕ.
▪️ಜಾಂಗಲ ಜಲ(dry land water)ಆರೋಗ್ಯ ಕಾರಕ.
▪️ ಅನೂಪ ಜಲ(water from ever wet area) ಜೀರ್ಣಕ್ಕೆ ಕಷ್ಟ ಮತ್ತು ಆಹಾರವನ್ನೂ ಜೀರ್ಣಿಸುವುದಿಲ್ಲವಾಗಿ ರೋಗಕಾರಕ.
▪️ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಮಲಯ ಪರ್ವತ, ಹಿಮಾಲಯ ಪರ್ವತದ ಜಲವು ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. 

ಆಳದ ಕೊಳವೆಬಾವಿಯ  ನೀರನ್ನು ಕುಡಿಯಲು, ಬಳಸಲು ಆಯುರ್ವೇದದಲ್ಲಿ ಎಲ್ಲಿಯೂ ಹೇಳಿರುವುದಿಲ್ಲ. ಅದರ ಖನಿಜಾಂಶಗಳು ಹಾನಿ ಉಂಟು ಮಾಡುತ್ತವೆ, ಅದನ್ನು ಪರಿಹರಿಸಲು ಹುಟ್ಟಿಕೊಂಡದ್ದೇ ಆರ್. ಒ ಜಲ!! ಆದರೆ ಅದನ್ನು ಖನಿಜರಹಿತವಾಗಿಸಿ ಆಹಾರ ಪಚನಕ್ಕೆ ಮತ್ತು ಸ್ವತಃ ನೀರಿನ ಪಚನಕ್ಕೆ ಕಷ್ಟಮಾಡಿಕೊಂಡು ಇಂದು ನೂರಾರು ಕಾಯಿಲೆಗಳಿಗೆ ತುತ್ತಾಗಿದ್ದೇವೆ.

ಹಾಗಾಗಿ
ಅಗತ್ಯ ಪ್ರಮಾಣದ ಖನಿಜಗಳುಳ್ಳ ಅತಿಯಾಗಿ ಸಿಹಿಯಾಗಿರದ ಜಲ ಶ್ರೇಷ್ಠ

🙏🙏ಧನ್ಯವಾದಗಳು 🙏🙏
••••••••••••••
ಇಂದ
ಹೆಚ್.ಬಿ.ಮೇಟಿ

ಇ-ವೋಟರ ಐಡಿಯನ್ನು DOWNLOAD ಮಾಡಲು ಇಲ್ಲಿ ಕ್ಲಿಕ ಮಾಡಿ

CLICK HERE TO DOWNLOAD

Tuesday 2 February 2021

ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ? ಭಾಗ-೨

🌷 ಅಮೃತಾತ್ಮರೇ ನಮಸ್ಕಾರ  🌷
🦢ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🦢
   🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀
••••••••••••••••••••••••••••••••••••••••••
03.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-12
••••••••••••••
✍️: ಇಂದಿನ ವಿಷಯ:
🔺 ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ?  ಭಾಗ-೨
•••••••••••••••••••••••••••••••••••••••••

💦 ಅತ್ಯಂತ ಶ್ರೇಷ್ಠ ಜಲ: 
 📜 ಉಪಲಾಸ್ಫಾಲನ ಆಕ್ಷೇಪ ವಿಚ್ಛೇದೈಃ ಖೇದಿತೋದಕಾಃ ||9||
ಹಿಮವನ್ ಮಲಯೋದ್ಭೂತಾಃ .........|
- ಅಷ್ಟಾಂಗ ಹೃದಯ, ಸೂತ್ರ ಸ್ಥಾನ ಅಧ್ಯಾಯ-5


★ ಹಿಮವನ್: ಹಿಮಾಲಯ ಪರ್ವತದಲ್ಲಿ ಹುಟ್ಟುವ
★ ಮಲಯನ್: ಮಲಯ ಪರ್ವತದಲ್ಲಿ ಹುಟ್ಟುವ ನದಿಗಳ ನೀರು ಅತ್ಯಂತ ಶ್ರೇಷ್ಠ ಏಕೆಂದರೆ- ಆ ಜಲ
★ ಉಪಲಾಸ್ಫಾಲನ: ಬಂಡೆಗಳಿಂದ ಬೀಳುವುದು
★ ಆಕ್ಷೇಪ ವಿಚ್ಛೇದೈಃ: ಜಲದ ಪರಮಾಣುಗಳ ವಿಭಜನೆಯಾಗುವುದು
★ ಖೇದಿತ ಉದಕ: ಅಂಕುಡೊಂಕಾಗಿ ಬಂಡೆಗಳ ನಡುವೆ ಸೀಳಿ ಹರಿವ ನೀರು ಕುಡಿಯಲು ಅತ್ಯಂತ ಶ್ರೇಷ್ಠ. 

🏞 ಈ ಜಲವನ್ನು , "ಗಂಗೋದಕ‌" ಎನ್ನುವರು(ಗಂಗಾ ನದಿಯ ಜಲ ಎಂಬ ಅರ್ಥವಲ್ಲ).

🚫 ಇನ್ನುಳಿದ ನೀರುಗಳು, "ಸಾಮುದ್ರಜಲ" (ಸಮುದ್ರದ ಜಲ ಎಂಬ ಅರ್ಥವಲ್ಲ, ಈ ಜಲ ಸಮುದ್ರ ಇದ್ದಂತೆ ಎಷ್ಡೇ ಪ್ರಮಾಣದಲ್ಲಿದ್ದರೂ ಬಳಸಲು ಅಯೋಗ್ಯ ಎಂಬುದು ನಿಜವಾದ ಅರ್ಥ)

📑 ಗಂಗೋದಕದ ವೈಜ್ಞಾನಿಕ ವಿವರಣೆ:
🔻 ಜಲವು ಅತ್ಯಂತ ಎತ್ತರದ ಮೇಲಿನಿಂದ ಬಂಡೆಗಳ ಮೇಲೆ ಬೀಳುವ ಕಾರಣ ಅದು ಆಕ್ಷೇಪ ವಿಚ್ಛೇದನ ಕ್ರಿಯೆಗೆ ಒಳಗಾಗಿ ತನ್ನ ಪರಮಾಣುವಿನ ಗಾತ್ರ ಕುಗ್ಗಿಸುವುದಲ್ಲದೇ, Hydrogen ವಿಭಜನೆಯಾಗಿ pH ವೃದ್ಧಿಯಾಗುವುದರಿಂದ, ಆಮ್ಲೀಯ ಗುಣವನ್ನು ಕಳೆದುಕೊಳ್ಳುತ್ತದೆ. ಇದು ವಿದ್ಯುತ್ ಪೂರಣಗೊಂಡ ಜಲವಾಗಿ ಮಾರ್ಪಡುತ್ತದೆ. ಇದೇ ಕಾರಣದಿಂದ ಈ ಜಲದ ಸಂಪರ್ಕಕ್ಕೆ ಬಂದ ಯಾವುದೇ ವಸ್ತು ಬೇಗ ಹಾಳಾಗುವುದಿಲ್ಲ, ಮನುಷ್ಯ ಕುಡಿದರೆ ಅವನಿಗೆ ಮುಪ್ಪು ಬೇಗ ಬರುವುದಿಲ್ಲ. ಸಧ್ಯಕ್ಕೆ ಜಗತ್ತಿನಲ್ಲಿ Antioxidant ಎಂಬ ಶಬ್ಧ ಅತ್ಯಂತ ಪ್ರಚಲಿತ ವಿಷಯವಾಗಿದೆ, ಈ ಜಲವು   Antioxidant ಗುಣವನ್ನು ಹೊಂದಿದೆ, ಏಕೆಂದರೆ ಜಲದ ಕಣಗಳ ಗಾತ್ರ ಅತ್ಯಂತ ಚಿಕ್ಕದಾಗುತ್ತದೆ, ಖನಿಜಗಳಿಂದ ತುಂಬುತ್ತದೆ ತನ್ಮೂಲಕ ಮುಪ್ಪು, ರೋಗಗಳು ಮನುಷ್ಯರನ್ನು ಹೆಚ್ಚಾಗಿ ಬಾಧಿಸುವುದಿಲ್ಲ.

📑 ಉಪಯೋಗ ಏನು?
★ ಈ ಜಲ ಉಪಯೋಗಿಸಿದ ಮನುಷ್ಯನಿಗೆ ರೋಗಗಳ ಸಾಧ್ಯತೆ ಕಡಿಮೆ.
★  ಮುಪ್ಪು ನಿಧಾನ.
★ ಶರೀರದ *ಆಪ್ ಧಾತು* ಶ್ರೇಷ್ಠಮಟ್ಟದಲ್ಲಿರುವ ಕಾರಣ ಬೇಗ ಆಯಾಸಗೊಳ್ಳುವುದಿಲ್ಲ.
★  pH balance ಕಾರಣದಿಂದ ಜೀವಕೋಶಗಳು ಆಮ್ಲೀಯತೆಯನ್ನು ಸಾಕಷ್ಟು ಕಳೆದುಕೊಳ್ಳುತ್ತವೆ. 
ಈ ಕಾರಣದಿಂದಾಗಿಯೇ ಹಿಮಾಲಯದಲ್ಲಿ ವಾಸಿಸುವ ಜನರು ಅತ್ಯಂತ ಆರೋಗ್ಯವಂತರು, ನಿತ್ಯವೂ, ಬೆಟ್ಟ ಏರಿ ಇಳಿದರೂ ಆಯಾಸಗೊಳ್ಳರು. ನಾವು ಅಲ್ಲಿಗೆ ಹೋದಾಗಲೂ ಸಹ ಎಷ್ಟೇ ನಡೆದರೂ ಸಹ, ಅಲ್ಲಿನ ವಾತಾವರಣದಲ್ಲಿ ಆ ನೀರಿನ ಪ್ರಭಾವ ಇರುವುದರಿಂದ ಆಯಾಸಗೊಳ್ಳುವುದು ಕಡಿಮೆ.

🔭 ಈಗ ಈ ಜಲ ಸಿಗುತ್ತದೆಯೇ? 
ಹೌದು ಪ್ರವಾಸಕ್ಕೆ ಹೋದಾಗ ತಂದುಕೊಳ್ಳಬಹುದು. ಮತ್ತು ಇತ್ತೀಚಿಗೆ ಕೆಲವು ಜಪಾನ್ ತಂತ್ರಜ್ಞಾನ ಎಂಬ ಹೆಸರಿನಲ್ಲಿ ಜಲವನ್ನು ವಿದ್ಯುತೀಕರಣ ಮಾಡುವ ವಾಟರ್ ಫಿಲ್ಟರ್ ಗಳು ಬರುತ್ತಿವೆ.

👉 ನಾನು ಪ್ರತ್ಯಕ್ಷ ನೋಡಿದ ಉದಾಹರಣೆಯನ್ನು ಕೊಡುತ್ತೇನೆ, ಈ ರೀತಿ ವಿದ್ಯುತ್ ಕೃತ ಜಲವನ್ನು ಪ್ರಾಣಿಗಳು ಇಷ್ಟಪಟ್ಟು ಕುಡಿಯುತ್ತವೆ ಮತ್ತು ಪಕ್ಕದಲ್ಲೇ ನಮ್ಮ ಆರ್ ಒ ವಾಟರ್ ಇಟ್ಟರೂ ಅದನ್ನು ತ್ಯಜಿಸುತ್ತವೆ.

ನಮಗಿಂತ ಪ್ರಾಣಿಗಳ ಸಂವೇದನಾಶೀಲತೆ ನೂರುಪಟ್ಟು ಅಧಿಕವಲ್ಲವೇ?


👀 ಆರ್ ಒ ಜಲಪಾನ ನಿಲ್ಲಿಸಿ, ಅದು ಜಲವಲ್ಲ ಆ್ಯಸಿಡ್!! ನಿಧಾನವಾಗಿ ನಮ್ಮನ್ನು ಸುಡುತ್ತದೆ. 

✍ What happens in electrolysis of water?
Due to electrolysis(ಆಕ್ಷೇಪ ವಿಚ್ಛೇದೈಃ) of water, water molecules during falling down from high mountains gets charged and having high hydrogen concentration called hingh pH value, there will be reduction in the oxidation property  and reduce the size of water molecules....

🙏🙏ಧನ್ಯವಾದಗಳು 🙏🙏
••••••••••••••
ಇಂದ
ಹೆಚ್.ಬಿ.ಮೇಟಿ

ಪ್ರವೇಶದ್ವಾರ:ಗಣಿತ

Monday 1 February 2021

ತತ್ಸಮ-ತದ್ಭವಗಳು

CLICK HERE TO DOWNLOAD

ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ?🔹 ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ? ಭಾಗ-೧

🙏ಅಮೃತಾತ್ಮರೇ ನಮಸ್ಕಾರ 🙏
  🌸ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌸
      🌸ಸ್ವಾಸ್ಥ್ಯ ಸರ್ವರದ್ದೂ ಆಗಲಿ🌸
••••••••••••••••••••••••••••••••••••••••••
02.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-11
••••••••••••••
✍️: ಇಂದಿನ ವಿಷಯ:
🔹 ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ?
🔹 ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ?
•••••••••••••••••••••••••••••••••••••••••
 ನಗರದ ಬಹುತೇಕ ಮನೆಗಳಲ್ಲಿ ಮತ್ತು ಇತ್ತೀಚೆಗೆ ಎಲ್ಲಾ ಹಳ್ಳಿಗಳಲ್ಲಿ ಕುಡಿಯುತ್ತಿರುವ ನೀರು, ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದರೂ ಶುದ್ಧ ಎಂದು ಹೇಳುವ ಕಂಪನಿಗಳ ಮಾತು ಕೇಳಿ, ಪೇಯ್ಡ್ ರಿಸರ್ಚ್ ಗಳ ರಿಪೋರ್ಟ್ ಕೇಳಿ ನಿತ್ಯವೂ ಕುಡಿಯುತ್ತಿದ್ದೇವೆ ಮತ್ತು ಅದರಿಂದ ಮಾನವನ ಆರೋಗ್ಯ ಅತ್ಯಂತ ಶೋಚನೀಯವಾಗಿ ಕುಸಿಯುತ್ತಿದೆ!!!

*⃣ ಏನಿದು ಆರ್.ಒ.ವಾಟರ್?
🔅 ರಿವರ್ಸ್ ಆಸ್ಮೋಸಿಸ್ ನೀರು. 
ಅಂದರೆ ನೀರಿಗೆ ಇರುವ ಎಲ್ಲಾಗುಣಗಳನ್ನು ಕಳೆದುಕೊಂಡ ಆಮ್ಲೀಯ ಜಲವೇ ಆರ್.ಒ.ವಾಟರ್.
ಇಂದಿನ ಬಹುತೇಕ ಗ್ಯಾಸ್ಟ್ರೈಟೀಸ್ ಗಳಿಗೆ ಮತ್ತು ಆ್ಯಸಿಡಿಟಿಗಳಿಗೆ  ಈ ಆರ್.ಒ ಜಲವೇ ಕಾರಣವಾಗಿದೆ.

ಈಗಾಗಲೇ ಉದರದಲ್ಲಿ ಅತ್ಯಂತ ಕಡಿಮೆ 
ಪಿ.ಹೆಚ್ ಇರುವ ಆ್ಯಸಿಡ್ ಇದ್ದು ಇನ್ನಷ್ಟು ಘಾಸಿಗೊಳಿಸುತ್ತಿದೆ ಈ ಜಲ.
ಮತ್ತು
ಎಲ್ಲಾ ಖನಿಜಾಂಶಗಳನ್ನು ಇಲ್ಲವಾಗಿಸಿ ಕುಡಿಯುವ ಜಲದ ಕಾರಣದಿಂದಲೇ ಇಂದು ಬಹುತೇಕರ ಮೂಳೆಗಳು ಹರೆಯದಲ್ಲೇ ಸವಕಳಿ ಕಾಣುತ್ತಿವೆ,‌ ಶರೀರ ನೇರ ನಿಲ್ಲಲು ಕಾರಣವಾದ ಅಸ್ಥಿಧಾತುವಿನ‌ಕೊರತೆಯಿಂದಾಗಿ ಯುವಕರಲ್ಲಿ ಅತಿಯಾದ ಸೊಂಟದ ತೊಂದರೆಗಳು ಕಾಣುತ್ತಿವೆ. ಯುವತಿಯರಲ್ಲಿ ಮುಟ್ಟಿನ‌ತೊಂದರೆಗಳು ಕಾಣುತ್ತಿವೆ.


*⃣ ತಾಮ್ರದ ಪಾತ್ರೆಯ ಜಲ ಆರೋಗ್ಯದಾಯಕವೇ? ತಟಸ್ಥವೇ? ಅಥವಾ ಆರೋಗ್ಯಕ್ಕೆ ಮಾರಕವೇ?
🔅 ಇಂದು ನಾವು ಕುಡಿಯುತ್ತಿರುವ ತಾಮ್ರದ ಜಲ ನೇರವಾಗಿ ಮಾರಕವೆಂದೇ ಹೇಳಬಹುದು.
 ಬಹುತೇಕ ಉದರ, ಯಕೃತ್ ಮತ್ತು ಕಿಡ್ನಿ ತೊಂದರೆಗಳಿಗೆ ಈ ತಾಮ್ರದ ಜಲವೇ ಕಾರಣ!!

ಹಿಂದೆ ಕುಡಿಯುತ್ತಿದ್ದ ತಾಮ್ರದ ದೊಡ್ಡ ದೊಡ್ಡ ಹಂಡೆಯ ನೀರು ತಟಸ್ಥ ಅಥವಾ ಕ್ಷಾರೀಯವಾಗಿತ್ತು ಮತ್ತು ತಾಮ್ರದ ಪಾತ್ರೆಯ ಒಳಗೆ "ಕಿಲಾಯ" ಎಂಬ ಹೆಸರಿನಲ್ಲಿ ಲೋಹ ಲೇಪನ ಮಾಡುತ್ತಿದ್ದರು.

💦 ಇಂದು ಆರ್.ಒ ಜಲ, ಆಮ್ಲೀಯ ಗುಣ ಹೊಂದಿದ್ದು ಅದು ನೇರ ತಾಮ್ರಕ್ಕೆ ಸಂಪರ್ಕ ಬಂದರೆ, ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಿ ಹೆಚ್ಚಿನ ತಾಮ್ರ ಅಶುದ್ಧರೂಪದಲ್ಲಿ (ಆಯುರ್ವೆದದಲ್ಲಿ ಮಾತ್ರ ಲೋಹಗಳ ಶುದ್ಧೀಕರಣ‌ ಮತ್ತು ಭಸ್ಮೀಕರಣ‌ ಸಿದ್ಧಾಂತ ಇದೆ) ಶರೀರ ಸೇರುತ್ತದೆ. ಇದು ಕಾಲಾಂತರದಲ್ಲಿ ದೀರ್ಘಕಾಲೀನ ಯಕೃತ್ತೊಂದರೆ (Chronic Liver Disease), ಮೂತ್ರಪಿಂಡಗಳನ್ನು(Chronic Kidney Disease) ಹಾಳು ಮಾಡುತ್ತದೆ ಮತ್ತು ಇದು ಮರಳಿ ಸರಿಮಾಡಲಾಗದ ದೀರ್ಘಕಾಲೀನ ತೊಂದರೆಗಳಾಗಿ ದೇಹನಾಶ ಮಾಡುತ್ತವೆ.!!!

💢 ವಿಜ್ಞಾನ ಎಂದು ನಂಬಿ ಜೀವನಕ್ಕೇ ಕುತ್ತು ತಂದುಕೊಳ್ಳುವ ಈ ವ್ಯವಸ್ಥೆ ನಮಗೆ ಬೇಕೆ?

💢 ಮೊದಲೇ ತಾಮ್ರದ ಪಾತ್ರೆ! ಇನ್ನು ಅದರಲ್ಲಿ  ಆರ್.ಒ.ನೀರು!! ಇದನ್ನು ಕುಡಿಯುವುದು ಸರ್ವಥಾ ವರ್ಜ್ಯ.

💢 ಕ್ರಿಮಿಗಳನ್ನು ಕೊಂದರೇ ನಮ್ಮ ಬದುಕು ಎಂದು ಪ್ರಧಾನವಾಗಿ ನಂಬಿರುವ ಸಿದ್ಧಾಂತದಿಂದ ಆಂತರಿಕ ಇಕೋ ವ್ಯವಸ್ಥೆ ಹಾಳಾಗಿ, metabolic diseases ಬರುತ್ತಿವೆ.

*⃣ ಅತ್ಯಂತ ಸರಳವಾಗಿ ನೀರಿನ ಪರೀಕ್ಷೆ ಹೇಗೆ ಮಾಡಬೇಕು?
🔅 ಇದಕ್ಕೆ ಲ್ಯಾಬ್ ಗಳು ಬೇಕಿಲ್ಲ.

★ ಯೇನಾಭಿವೃಷ್ಟಂ ಅಮಲಂ ಶಾಲ್ಯಾನ್ನಂ ರಜತಸ್ಥಿತಮ್|
 ಅಕ್ಲಿನ್ನಂ ಅವಿವರ್ಣಂ‌ ಚ ತತ್ ಪೇಯಂ ‌ಗಂಗಾಮ್ ಅನ್ಯಥಾ||3||
ಸಾಮುದ್ರಂ ತತ್ ನ‌ಪಾತವ್ಯಂ..........|
- ವಾಗ್ಭಟ ಸೂತ್ರ ಸ್ಥಾನ, ಆಧ್ಯಾಯ-5 

Yenabhi vrustham  amalam shalyannam rajatha sthitam |
Aklinnam avivarnam cha tat peyam Gangaam anyatha ||3|| 
Samudram tam na patavyam...............|
- Vagbhata Sutra sthana chapter-5

✨ ಬೆಳ್ಳಿಯ ಪಾತ್ರೆಯಲ್ಲಿ ಅನ್ನವನ್ನಿಟ್ಟು, ಯಾವ ನೀರನ್ನು ಪರೀಕ್ಷಿಸಬೇಕಿದೆಯೋ ಅದನ್ನು ಚಿಮುಕಿಸಿ ಇಡಬೇಕು. ಮೂರು ಗಂಟೆಯಲ್ಲಿ ಅದು "ಕ್ಲಿನ್ನ" ಅಂದರೆ "ಅಂಟು" ಅಂಟಾಗದಿದ್ದರೆ ಮತ್ತು ಬಣ್ಣ ವ್ಯತ್ಯಾಸಗಾದಿದ್ದರೆ ಆ ಜಲ ಕುಡಿಯಲು ಯೋಗ್ಯ, ಎರಡರಲ್ಲಿ ಯಾವೊಂದು ವ್ಯತ್ಯಾಸ ಆದರೂ ಅಂತಹ ಜಲ ಕುಡಿಯಲು ಅಯೋಗ್ಯ(ಸಾಮುದ್ರ ಜಲ) ಜಲ ಎಂದು ತ್ಯಜಿಸಬೇಕು.


💧 ಯಾವ ನೀರು ಅತ್ಯಂತ ಶ್ರೇಷ್ಠ, ಈ ಕಾಲದಲ್ಲಿ ಅದನ್ನು ಕುಡಿಯಲು ಬಳಸುವುದರಿಂದ ಎಷ್ಟೆಲ್ಲಾ ರೋಗಗಳನ್ನು ತಡೆಯಬಹುದು ಎಂಬುದನ್ನು ನಾಳೆ ನೋಡೋಣ🙋‍♂

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

MATHS TIME LINE

MATHS TIME LINE https://mathigon.org/timeline