✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday 21 December 2021

ATL ಕನ್ನಡ ಕೈಪಿಡಿ

CLICK HERE TO DOWNLOAD

ATL USER MANUAL

CLICK HERE TO DOWNLOAD

ಇಂದಿನ ವಿಷಯ: *ಚರ್ಮದ ವ್ಯಾಧಿಗಳು {Skin diseases}*

🦢  *ಅಮೃತಾತ್ಮರೇ, ನಮಸ್ಕಾರ*  🦢

🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
••••••••••••••••••••••••••••••••••••••
      *ದಿನಾಂಕ: 21.12.2021*
  *ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ -- ಸಂಚಿಕೆ-74
•••••••••••••••••••••••••••••••••••••ll
✍️: _ಇಂದಿನ ವಿಷಯ:_
  *ಚರ್ಮದ ವ್ಯಾಧಿಗಳು {Skin diseases}*

  _ಕಾಂತಿಯುತ ತ್ವಚೆ ಇರಬೇಕೆಂಬುದು ಎಲ್ಲರ ಇಚ್ಛೆ ಅಲ್ಲವೇ? ಇದು ಕೇವಲ ಒಂದು ಅಂಶದ ಮೇಲೆ ನಿರ್ಧಾರವಾಗುವುದಲ್ಲ!ಮಾಂಸಖಂಡಗಳ, ರಕ್ತನಾಳಗಳ ಮತ್ತು ನರಗಳ ಆರೋಗ್ಯ ಈ ಮೂರೂ ಸೇರಿ ಕಾಂತಿಯನ್ನು ತರುತ್ತವೆ. ಇವೇ ಮೂರು ಅಂಶಗಳು ಎಲ್ಲಾ ರೀತಿಯ ತ್ವಚಾರೋಗಗಳಿಗೆ ಕಾರಣ..._  🤔

  _ಯಾವ ಕಾರಣದಿಂದ ಈ ಮೂರರ ಆರೋಗ್ಯ ಹಾಳಾಗುತ್ತದೆ ನೋಡೋಣ..._
*ನಿದ್ದೆಗೆಡುವುದು, ಶರೀರದ ಅಗತ್ಯಕ್ಕಿಂತ ಹೆಚ್ಚು ಹುಳಿ ಸೇವನೆ (ಉದಾಹರಣೆಗೆ ಫರ್ಮೆಂಟೆಡ್ ಹಿಟ್ಟಿನಿಂದ ತಯಾರಿಸಲಾಗುವ ಇಡ್ಲಿ, ದೋಸೆ ಮತ್ತು ಮೈದಾ, ಗೋಧಿಗಳ ಅತಿಯಾದ ಹಾಗೂ ನಿರಂತರ ಬಳಕೆ), ರಾಸಾಯನಿಕಗಳಿಂದ ರುಚಿ ಹೆಚ್ಚಿಸುವ ಪಾನಿಪುರಿ ಮತ್ತು ಇತರೆ ಯಾವುದೇ ಪದಾರ್ಥಗಳ ಸೇವನೆ, ಶರೀರದ ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವನೆ, ಕೆಲವು ಶಕ್ತಿವಿರುದ್ಧ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸುವುದು (ಉದಾಹರಣೆಗೆ ಮೀನು-ಹಾಲು, ಮೀನು-ಮೊಸರು, ಹಾಲು-ಚಕ್ಕೊತ, ಪಾಲಕ, ಹುಳಿ ಸೊಪ್ಪು, ತಕ್ಷಣಕ್ಕೆ ತಣ್ಣೀರು-ಬಿಸಿನೀರು ಸೇವನೆ, ಸ್ನಾನ..., ಸುಡು ಬಿಸಿಲಿನಿಂದ ಬಂದು ತಂಪಾದ ಜಲ ಸೇವನೆ), ಅತಿಯಾದ ಚಿಂತೆ.. ಮುಂತಾದವು*

  _ಇವುಗಳಿಂದ ನಮ್ಮ ರಕ್ತದಲ್ಲಿ "ಸಂಕ್ಲೇದ" ಎಂಬ ಅಂಟಾದ ಕಣಗಳು ಉಂಟಾಗುತ್ತವೆ, ಅವುಗಳು ಬೆವರು ಗ್ರಂಥಿಯ ಮಾರ್ಗಕ್ಕಿಂತ ದೊಡ್ಡ ಕಣಗಳಾಗಿದ್ದು. ಚರ್ಮವನ್ನು ಸೂಕ್ಷ್ಮವಾಗಿ ಒಡೆದು ಹೊರಬರುತ್ತವೆ, ಇದೇ ಚರ್ಮದ ಕಾಯಿಲೆ. ಚರ್ಮದ ಯಾವ ಪದರದಲ್ಲಿ ಸಂಕ್ಲೇದ ಸಂಗ್ರಹವಾಗುತ್ತದೆ ಎನ್ನುವುದರ ಮೇಲೆ ವಿವಿಧ ಚರ್ಮದ ರೋಗಗಳು ಬರುತ್ತವೆ. ಎಲ್ಲದಕ್ಕೂ ಒಂದೇ ಕಾರಣ -- ಸಂಕ್ಲೇದವೆಂಬ ಅಂಟು ರಾಸಾಯನಿಕ!_ *ಉದಾಹರಣೆಗೆ:*
_ರಕ್ತನಾಳಗಳು ಕಟ್ಟಿಕೊಳ್ಳುವ ಒಂದೇ ಕಾರಣಕ್ಕೆ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿತೊಂದರೆ... ಬರಬಹುದು, ರೋಗವು ರಕ್ತನಾಳವು ಎಲ್ಲಿ ಕಟ್ಟಿಕೊಳ್ಳುತ್ತದೆ ಎಂಬುದನ್ನು ಆಧರಿಸುತ್ತದೆ. ಹಾಗೆಯೇ, ಸಂಕ್ಲೇದವೆಂಬ ಅಂಟು ಎಲ್ಲಿ ಶೇಖರಣೆಯಾಗುತ್ತದೆ ಎಂಬ ಕಾರಣವನ್ನು ಆಧರಿಸಿ, ಬೇರೆ ಬೇರೆ ಚರ್ಮದ ರೋಗಗಳಂತೆ ಬಿಂಬಿತವಾಗುತ್ತದೆ._

  _ಈ ಅಂಶಗಳನ್ನು ಆಧುನಿಕ ವಿಜ್ಞಾನ ಪರಿಗಣಿಸದೇ ಕೇವಲ ಬ್ಯಾಕ್ಟೀರಿಯಾ, ಫಂಗಸ್ ಎಂದು ಹೊರಗಿನ‌ ಕಾರಣಗಳನ್ನೇ ನೋಡುತ್ತದೆ. ನಿಜ ಫಂಗಲ್ ಸೋಂಕು ಸತ್ಯವಾದರೂ ಅದರ ಬೆಳವಣಿಗೆಗೆ ಸೂಕ್ತ ಪೋಷಣೆ ಒದಗಿಸುವುದು ಮೇಲೆ ತಿಳಿಸಿದ ಆಹಾರ-ವಿಹಾರಗಳು..._

  *ಉದಾಹರಣೆಗೆ:* _ನೊಣಗಳನ್ನು ಓಡಿಸುವ ಬದಲು ಇಟ್ಟಿರುವ ಬೆಲ್ಲವನ್ನು ತೆಗೆಯುವುದು ಸೂಕ್ತ ಚಿಕಿತ್ಸೆ ಅಲ್ಲವೇ? ಶರೀರದಲ್ಲಿ ಕ್ರಿಮಿಗಳಿಗೆ ಬೇಕಾದ ಆಹಾರವನ್ನು (ಬೆಲ್ಲವನ್ನು) ಇಟ್ಟುಕೊಂಡು ಕ್ರಿಮಿನಿವಾರಕ ಮಾತ್ರೆ ointment ಗಳನ್ನು ಲೇಪಿಸುವುದು ಕೇವಲ ತಾತ್ಕಾಲಿಕ ಪರಿಣಾಮ ಬೀರಬಲ್ಲದು ಅಷ್ಟೇ._

  _ಸೋರಿಯಾಸಿಸ್‌ನಲ್ಲಿ ಯಾವುದೇ ಕ್ರಿಮಿಗಳು ಇರುವುದಿಲ್ಲ, ಅಲ್ಲಿ ಇಮ್ಯೂನಿಟಿಯ ತೀಕ್ಷ್ಣ ಪ್ರತಿಕ್ರಿಯೆ ಇರುತ್ತದೆ. ಇಲ್ಲಿ ಇಮ್ಯೂನ್ ಸಿಸ್ಟಂ ಅನ್ನು ಸಪ್ರೆಸ್ ಮಾಡುವ steroids, anti malarial tablets... etc., ಗಳಂತಹ  completely irrelevant ಔಷಧ ಪ್ರಯೋಗಿಸಿ, ಲಿವರ್, ಕಿಡ್ನಿಗಳನ್ನು ಹಾಳುಮಾಡುವ ಬದಲು ಮೇಲಿನ ಆಹಾರಗಳ ನಿಯಂತ್ರಣ ಮತ್ತು ಸೂಕ್ತ ಕ್ಲೇದ ನಿವಾರಕ ಔಷಧಗಳನ್ನು ಯೋಜಿಸುವುದು ಸೂಕ್ತ._

  _ಆಯುರ್ವೇದ ಚಿಕಿತ್ಸೆ ಅಡ್ಡಪರಿಣಾಮ ಇಲ್ಲದ್ದು ಮತ್ತು ದೀರ್ಘಕಾಲೀನ ಪರಿಣಾಮ ಬೀರಬಲ್ಲದು ಆಗಿದೆ. ಇಲ್ಲಿ ಸಂಕ್ಲೇದವನ್ನು ಕರಗಿಸಲು ಬೇಕಾದ ಆಹಾರ-ವಿಹಾರ-ಔಷಧಿಗಳನ್ನೂ ಮತ್ತು ಕರಗದೇ ಇರುವಷ್ಡು ಹೆಚ್ಚು ಸಂಗ್ರಹವಾಗಿದ್ದರೆ ಸೂಕ್ತ ಪಂಚಕರ್ಮ ಚಿಕಿತ್ಸೆಗಳಿಂದ ಯಥಾವತ್ತಾಗಿ ಹೊರಹಾಕುವ ವಿಧಾನಗಳನ್ನೂ ಯಶಸ್ವಿಯಾಗಿ ಯೋಜಿಸಲಾಗುತ್ತದೆ._

  _ರೋಗಿಯಿಂದ ನಾವು ಅತ್ಯಾವಶ್ಯಕವಾಗಿ ಬಯಸುವುದೇನೆಂದರೆ_ *ಆಹಾರದ ಶುದ್ಧತೆ ಮತ್ತು ಶಾಂತ ಚಿತ್ತತೆ.*

     🙏   *ಧನ್ಯವಾದಗಳು*   🙏
••••••••••••••••••••••••••••••••••

Wednesday 3 November 2021

ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…

Deepawali special ದೀಪಾವಳಿ ವಿಶೇಷ.

image
ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
  ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
ದೀಪಾವಳಿ:
ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ದೀಪಾವಳಿ ಅರ್ಥ ಏನು?
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
  ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.
ನೀರು ತುಂಬುವ ಹಬ್ಬ :-
ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.
ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ
ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.
ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.
ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ, ಮುಂದಿನ ದೀಪಾವಳಿ ಆಚರಿಸೊಣವೇ? ಒಮ್ಮೆ ಚಿಂತಿಸಿ.
ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ;
ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಆಚರಿಸುವ ದಿನಗಳು
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. ೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.
ಪ್ರಾಮುಖ್ಯತೆ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿ ಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
ಆಚರಣೆ
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

Sunday 17 October 2021

ಇಂದಿನ ವಿಷಯ:_ *ಅಕಾಲ‌ ಮುಪ್ಪನ್ನು ತಡೆಯಿರಿ...

🦢 *ಅಮೃತಾತ್ಮರೇ, ನಮಸ್ಕಾರ*  🦢

🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
•••••••••••••••••••••••••••••••••••••••
     *ದಿನಾಂಕ: 18.10.2021*
  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-73*
••••••••••••••••••••••••••••••••••••••
✍️: _ಇಂದಿನ ವಿಷಯ:_
  *ಅಕಾಲ‌ ಮುಪ್ಪನ್ನು ತಡೆಯಿರಿ...* 
••••••••••••••••••••••••••••••••••••••••
  _ಆಮ್ಲೋ.... ಅತ್ಯಭ್ಯಾಸ್ಯ ತು ತನೋಃ ಕುರ್ಯಾತ್ ಶೈಥಿಲ್ಯಂ....||_
  _ಲವಣಃ..... ಸೋ ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_
  ~_ಅಷ್ಟಾಂಗ ಹೃದಯ ಸೂತ್ರ ಸ್ಥಾನ, ಅಧ್ಯಾಯ-10/10-13_

  _*ಅಂದರೆ, ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರದ ಶಿಥಿಲತೆಯೂ, ಅಕಾಲ ವಲಯ ಫಲಿತಗಳೂ ಉಂಟಾಗುತ್ತವೆ ಎಂದು...*_

*ಶಿಥಿಲ* = _ಮೆತ್ತಗಾಗುವಿಕೆ ಅಥವಾ ಹಣ್ಣಾಗುವಿಕೆ_
*ವಲಯ* = _ಚರ್ಮದ ಸುಕ್ಕುಗಳು_
*ಫಲಿತ* = _ಕೂದಲು ಬೆಳ್ಳಗಾಗುವುದು_

  _*ವಲಯ ಫಲಿತಗಳು ಇಲ್ಲಿ ರೋಗರೂಪದಿಂದ ಬರುವಂತಹುಗಳಲ್ಲ, ಬದಲಾಗಿ ವಾರ್ಧಖ್ಯದ ಸೂಚಕವಾಗಿ ಬರುತ್ತವೆ!*_

  _*ಸುಕ್ಕುಗಳು ಕೇವಲ ಹೊರ ಚರ್ಮದಲ್ಲಿ ಕಾಣಿಸಿಕೊಳ್ಳುತ್ತಿವೆ ಆದರೆ ವಾಸ್ತವದಲ್ಲಿ ಅದು ಒಳಗಿನ ಜೀವಕೋಶಗಳ ಮುದುಡಿಕೊಳ್ಳುವಿಕೆ, ಗಡುಸುಗೊಳ್ಳುವಿಕೆ ಮತ್ತು ಶಕ್ತಿಗುಂದಿಸುವಿಕೆಯಿಂದ ಆದದ್ದು, ಇದನ್ನೇ ಜೀವಕೋಶಗಳ ಅಂದರೆ ಈ ಶರೀರದ ವೃದ್ಧಾಪ್ಯ ಎಂದು ಕರೆಯುತ್ತೇವೆ.*_

 *ವೃದ್ದಾವಸ್ಥೆ ಯಾವಾಗ ಬರಬೇಕು?* 

  _*ವಾಸ್ತವದಲ್ಲಿ ತನ್ನ 70ನೇ ಸಂವತ್ಸರದ ನಂತರ ವೃದ್ಧ ಎಂದು ಕರೆಸಿಕೊಳ್ಳಬೇಕಾದ ಮಾನವ ಶರೀರ ಇಂದು 40-50ಕ್ಕೇ ಬಂದಿಳಿದಿರುವುದು ಶೋಚನೀಯ?!*_  🤔 🤔

  _*ಮರಣ ಯಾವಾಗಲಾದರೂ ಬರಲಿ, ಅದು ಆಕಸ್ಮಿಕ 0-100+ ವರೆಗೆ ಯಾವಾಗಂದರೆ ಆಗ ದಾಳಿಯಿಡುವ ಮರಣದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಅಕಾಲ ವಾರ್ಧಖ್ಯದಿಂದ ಅನುಭವಿಸುವ ದೌರ್ಬಲ್ಯ, ರೋಗಗಳ ಬಗ್ಗೆ ಮಾನವ ಕಣ್ಣು ತೆರೆದು ನೋಡಬೇಕಿದೆ...*_

*ವೃದ್ಧಾವಸ್ಥೆ ಬೇಗ ಏಕೆ ಬರುತ್ತಿದೆ?* 

  _ಆಚಾರ್ಯ ವಾಗ್ಭಟರು ಹೇಳುವಂತೆ,_
📜 
  _ಆಮ್ಲೋ.... ಕುರ್ಯಾತ್ ಶೈಥಿಲ್ಯಂ....||_
  _ಲವಣಃ.....ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_

  _*ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರ ಹಣ್ಣಾಗುವುದು, ಅಕಾಲ ವಲಯ, ಫಲಿತಗಳು ಉಂಟಾಗುತ್ತವೆ!*_

  _*ಶರೀರದಲ್ಲಿನ ಜೀವರಸವಾದ ವಿಪಾಕವನ್ನು ಆಮ್ಲೀಯತೆಯಿಂದ ಅಂದರೆ ಹುಳಿಬಿಡುವ ಆಹಾರ ಸೇವನೆಯ ಕಾರಣದಿಂದ ಮತ್ತು ಲವಣಾಧಿಕವಾದ ಕಟುತ್ವದಿಂದ ಅಂದರೆ ಅಧಿಕ ಲವಣಾಂಶಗಳನ್ನು ಸೇವಿಸುವ ಕಾರಣದಿಂದ ಹಾನಿಗೊಳಿಸಿಕೊಂಡು ಬೇಗ ಮುಪ್ಪನ್ನು ಬರಮಾಡಿಕೊಂಡಿದ್ದೇವೆ!!*_

 *ಅಧಿಕ ಆಮ್ಲಸೇವನೆ ಎಂದರೆ ಯಾವುದು ಅದರಿಂದ ಏನಾಗುತ್ತಿದೆ?* 

  _*ಕೇವಲ ಹುಳಿರಸ ಇರುವ ಪದಾರ್ಥ ಸೇವನೆ ಎಂದುಕೊಳ್ಳುವುದು ಅರ್ಧ ಸತ್ಯವಾಗುತ್ತದೆ, ಯಾವುದು ನೀರಿನ ಸಂಪರ್ಕಕ್ಕೆ ಬಂದರೆ ಹುಳಿಯಾಗಿ ಬದಲಾಗುತ್ತದೋ ಅದು ಶರೀರದ ಒಳಗೆ ಹೋಗಿ ಹುಳಿಯನ್ನೇ ಬಿಡುತ್ತದೊ ಅವು ಕೂಡಾ ಹುಳಿರಸಗಳು. ಹಾಗಾಗಿ ಹುಳಿ ಎಂದರೆ, ನೇರ ಹುಳಿ ಇರುವ ಪದಾರ್ಥಗಳು ಮತ್ತು ಹುಳಿಬಿಡುವ ಪದಾರ್ಥಗಳು ಎರಡನ್ನೂ ಗ್ರಹಿಸಬೇಕು...*_

  _*ಹಾಗಾದರೆ ಹುಳಿರಸ‌ ಸೇವನೆ ಹಾನಿಕಾರಕವೇ? ಎಂದರೆ ಅಲ್ಲ ಖಂಡಿತಾ ಅಲ್ಲ ಅದು ಹೃದ್ಯ, ಅಂದರೆ ಹೃದಯ ಮತ್ತು ರಕ್ತನಾಳಗಳಿಗೆ ಹಿತವನ್ನು ಉಂಟುಮಾಡುತ್ತದೆ ಆದರೆ,*_ 
• _ಹುಳಿಯ ಮೂಲ ಮತ್ತು_
• _ಹುಳಿಯ ಪ್ರಮಾಣ ಬಹುಮುಖ್ಯ ಅಂಶ_

  _*ಅಂದರೆ ಪ್ರಾಕೃತಿಕವಾಗಿ ಹುಳಿ ಇರುವ ಪದಾರ್ಥಗಳು ಆರೋಗ್ಯಕರ, ನಾವಾಗಿಯೇ ಕೃತಕವಾಗಿ ಹುಳಿ ಬರಿಸಿಕೊಳ್ಳುವ ಪದಾರ್ಥಗಳು ಅನಾರೋಗ್ಯಕರ ಎಂದು ಸ್ಥೂಲವಾಗಿ ವಿಂಗಡಿಸಿದರೂ.....*_

  _*ಪ್ರಾಕೃತಿಕ ಹುಳಿಯನ್ನೇ ಅಧಿಕ ಪ್ರಮಾಣದಲ್ಲಿ ಸೇವಿಸುವುದು ವೃದ್ಧಾಪ್ಯವನ್ನು ಬೇಗ ತರುತ್ತದೆ!*_

  *ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 1)*
  _ನೇರ ಹುಳಿ ಇರುವ ನಿಂಬೆ, ಮಾವು, ಕಿತ್ತಲೆ, ದಾಳಿಂಬೆ, ಮೊಸಂಬಿ, ಹುಣಸೆ ಮುಂತಾದವುಗಳು ಶರೀರಕ್ಕೆ ಬೇಕು ಮತ್ತು ಇವು ಆರೋಗ್ಯಕರ..._
  *ಆದರೆ ಪ್ರಮಾಣ ಮೀರಿದರೆ ಇವೂ ಸಹ ಅತ್ಯಂತ ಅಪಾಯಕರ!*
_ಉದಾಹರಣೆಗೆ:_
*ಉಪ್ಪಿನಕಾಯಿ ಕಲಸಿಕೊಂಡು ಅನ್ನ ಸೇವನೆ; ಪಲ್ಯ, ಸಾಂಬಾರುಗಳಿಗೆ ನಿಂಬೆಹಣ್ಣನ್ನು ಹೆಚ್ಚಾಗಿಯೇ ಹಿಂಡಿಕೊಂಡು ಸೇವಿಸುವುದು; ಅಡುಗೆಯಲ್ಲಿ ಹುಳಿಯನ್ನೇ ಹೆಚ್ಚು ಇರುವಂತೆ ತಯಾರಿಸುವುದು, ಇವೆಲ್ಲಾ ಅಪಾಯಕರ!*

  _ಮಿತವಾದ ನೇರ ಹುಳಿ ಅತ್ಯಂತ ಆರೋಗ್ಯಕರ, ಅಂದರೆ_ *ಊಟಕ್ಕೆ ಉಪ್ಪಿನಕಾಯಿ ಎಷ್ಟೋ ಅಷ್ಟೇ* _ಆದರೆ ಸೂಕ್ತ!_ 🙄
••••••••••••••••••••••••••••••••••••••••••••••
  *ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 2)*
  _ಇನ್ನೊಂದು ರೀತಿಯ ಹುಳಿ ಪದಾರ್ಥಗಳಿವೆ, ನೀರಿನ ಸಂಪರ್ಕ ಬಂದನಂತರ ಹುಳಿಬಿಡುವ ಇವು ಮತ್ತು ಕಾಲ ಗತಿಸಿದಂತೆ ಹುಳಿಬಿಡುವ ಕೆಲವು ಪದಾರ್ಥಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ!_
_ಉದಾಹರಣೆಗೆ:_
 *ಗೋಧಿ* 
 *ಮೈದಾ* 
*ಉದ್ದಿನಬೇಳೆ* 
  _ಇವು ಕಿಣ್ವೀಕರಣಗೊಂಡು ಹುಳಿಬಿಡುವ ಕಾರಣ ಅಲ್ಕೋಹಾಲ್ ಉತ್ಪತ್ತಿ ಮಾಡುತ್ತವೆ, ಸೇವಿಸುವಾಗ ಹುಳಿ ಇರದಿದ್ದರೂ ಅನ್ನನಾಳದಲ್ಲಿ ಹುಳಿಬಿಟ್ಟು ಜೀವರಸವನ್ನು ಕೆಡಿಸುತ್ತವೆ, ಅವುಗಳೆಂದರೆ, ಚಪಾತಿ, ಬಿಸ್ಕೆಟ್, ಬ್ರೆಡ್, ಬನ್, ಕೇಕ್‌, ಪಿಜ್ಜಾ, ಬರ್ಗರ್‌ ಮುಂತಾದವುಗಳು...!_

  *ಮೊಸರು* _ಸ್ವಭಾವತಃ ಸಿಹಿ ಅಥವಾ ಅತ್ಯಲ್ಪ ಹುಳಿ, ಆದರೆ ಸ್ವಲ್ಪವೇ ತಡಮಾಡಿ‌ ಸೇವಿಸಿದರೂ ಹುಳಿಯಾಗಿ ಆರೋಗ್ಯ ಕೆಡಿಸುತ್ತದೆ...!_

  *ಮಜ್ಜಿಗೆ* _ಸ್ವಭಾವತಃ ಒಗರಾಗಿದ್ದು ಅತ್ಯಂತ ಶ್ರೇಷ್ಠ ಆರೋಗ್ಯದಾಯಕ‌ ಪೇಯ, ಸರ್ವರಿಗೂ ಸೂಕ್ತ, ಆದರೆ ತಡಮಾಡಿ ಸೇವಿಸಿದರೆ ಆರೋಗ್ಯವನ್ನು ಕೆಡಿಸುತ್ತದೆ!_

  *ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 3)*

  _*ನಾವು ಸೃಷ್ಠಿಸಿಕೊಂಡ ಕೃತಕ ಜಲ ಆರ್.ಒ. ವಾಟರ್, ಇದು ಕುಡಿಯಲು ಎಳ್ಳಷ್ಟೂ ಯೋಗ್ಯವಲ್ಲದ ಆ್ಯಸಿಡ್ ರೂಪದ ದ್ರವ...! ಆರ್.ಒ. ಜಲ ಹುಳಿ ಇರುವ ಕಾರಣದಿಂದ ಸ್ವಲ್ಪ ರುಚಿ ಎನಿಸುತ್ತದೆ, ಹಾಗಾಗಿ ಬಾಟಲಿಯಲ್ಲಿ ಮಾರಾಟವಾಗುವ ಈ ಜಲ ರುಚಿಯಲ್ಲಿ ಸ್ವಲ್ಪ ಹಿತ ಎನಿಸುತ್ತದೆ, ಆದರೆ ವಾಸ್ತವದಲ್ಲಿ ಅತ್ಯಂತ ಅಪಾಯಕಾರ! ಏಕೆಂದರೆ, ನಿತ್ಯವೂ ಶರೀರಕ್ಕೆ ಇಂತಿಷ್ಟೇ ಪ್ರಮಾಣದ ಜಲ ಬೇಕೇ ಬೇಕು ಮತ್ತು ಈ ಶರೀರ ಜಲಾಂಶ ಪ್ರಧಾನವಾಗಿದೆ...*_

  _*ಜೀವಕೋಶಗಳ ಒಳಗೆ ತುಂಬಿಕೊಂಡ ಜೀವಕ್ಕೆ ಆಧಾರಸ್ಥಂಭವಾದ ಇಂತಹ ಜೀವದ್ರವವನ್ನೇ ಹುಳಿಯಾಗಿಸಿಕೊಂಡರೆ ಅದು ಅತ್ಯಂತ ಅಪಾಯಕರ...*_ 🤔
               •|•|•|•|•|•
  *ಹುಳಿಯ ಅತಿ ಸೇವನೆಯು ಶರೀರದ ಶಿಥಿಲತೆಗೆ ಮತ್ತು ವೃದ್ಧಾಪ್ಯಕ್ಕೆ ಕಾರಣ ಏಕೆ?* 
  _ಹುಳಿ ಪಿತ್ತವನ್ನು ವರ್ಧಿಸುತ್ತದೆ, ಪಿತ್ತವು ಈ ಶರೀರದ ಜೀವಕೋಶಗಳ ಪೊರೆಯನ್ನು ಮೃದುವಾಗಿಸುತ್ತದೆ. ಅಂದರೆ ಹುಳಿಯ ಮೂಲವನ್ನು ಗ್ರಹಿಸದೇ ಸೇವಿಸಿದರೆ ಮತ್ತು ಪ್ರಾಕೃತಿಕವಾಗಿ ಸಿಗುವ ಹುಳಿಯನ್ನು ಅತಿಯಾಗಿ ಸೇವಿಸಿದರೆ ದೃಢವಾಗಿ ಮತ್ತು ಸ್ಥಿರವಾಗಿ ಇರಬೇಕಾದ ಕೋಶಪೊರೆ ಮೃದುವಾಗಿ ಮತ್ತು ಅಸ್ಥಿರವಾಗಿಬಿಡುತ್ತದೆ. ಆಗ ಅದು ಬಳುಗುವಂತಾಗಿ ಸುಕ್ಕುಗಟ್ಟುವುದು ಅನಿವಾರ್ಯ ಇದನ್ನೇ ಶರೀರದ ಶಿಥಿಲತೆ ಎಂದು ಕರೆಯಲಾಗಿದೆ., ಇದೇ ವೃದ್ಧಾಪ್ಯ. ಇದು ಅಕಾಲವೋ ಸಕಾಲವೋ ಎನುವುದು ಮುಖ್ಯ._
               •|•|•|•|•|•

  _*ಮುಂದುವರಿದು, ಸಕಾಲೀನ ವೃದ್ಧಾಪ್ಯ ಬರುವುದು ಹುಳಿಯಿಂದ ಅಲ್ಲ, ಅಲ್ಲಿ ಜೀವಕೋಶಗಳು ಗಡುಸಾಗುತ್ತಾ ಸಾಗುತ್ತವೆ, ಅದು ಪ್ರಕೃತಿ. ಆದರೆ ಉಪ್ಪು ಸೇವನೆಯಿಂದ ನಾವಾಗಿ ತಂದುಕೊಳ್ಳುವ ಗಡುಸುತನ ಅದುವೇ ಕೃತ್ರಿಮ ಮತ್ತು ಅಕಾಲ ವೃದ್ಧಾಪ್ಯ...*_

  *ಅತಿಯಾದ ಉಪ್ಪು ಸೇವನೆಯ ಹಾನಿಯನ್ನು ನಾಳೆ ನೋಡೋಣ...*

    🙏  *ಧನ್ಯವಾದಗಳು*  🙏
••••••••••••••••••••••••••••••••••••••

Wednesday 6 October 2021

ಇಂದಿನ ವಿಷಯ: - ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!

🦢  *ಅಮೃತಾತ್ಮರೇ ನಮಸ್ಕಾರ*  🦢

🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
••••••••••••••••••••••••••••••••••••••••••••
     *ದಿನಾಂಕ: 06.10.2021*
  *ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-70
••••••••••••••••••••••••••••••••••••••••••••
✍️: *ಇಂದಿನ ವಿಷಯ:*
  _ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!_
•••••••••••••••••••••••••••••••••••••••••
  *ಈ ವರ್ಷದ ನವರಾತ್ರಿಯ ದಿನಾಂಕ:*
  _06/07.10.2021 ರಿಂದ  14/15.10.2021 ರವರೆಗೆ ಇರುತ್ತದೆ._

*ಶರದೃತುವಿನಲ್ಲಿ ಭೂಮಿಯಲ್ಲಿ ಏನು ಬದಲಾವಣೆ ಆಗುತ್ತದೆ?:* 
  _ವರ್ಷಾ ಋತು ಮಳೆಯನ್ನು ಧಾರಾಕಾರವಾಗಿ ಸುರಿಸಿ, ಭೂಮಿಯ ಮೇಲಿನ ಕೊಳೆ, ಕಸ, ಗಿಡಮರಗಳ ಕೊಳೆತ ಅವಶೇಷ, ಸತ್ತ ಪ್ರಾಣಿಗಳ ಅವಶೇಷ ಮುಂತಾದವುಗಳನ್ನು ಎಳೆದು ತಂದು ನದಿ, ಹಳ್ಳ, ಕೆರೆ, ಡ್ಯಾಂ ಗಳಿಗೆ, ಕೊನೆಗೆ ಸಮುದ್ರಕ್ಕೂ ತಳ್ಳಿರುತ್ತದೆ. ಹೀಗೆ ಬಳಸುವ ಜಲಮೂಲಗಳೆಲ್ಲಾ ದೋಷಪೂರಿತವಾಗುವ ಕಾರಣ, ಶರದೃತುವಿನಲ್ಲಿ ಭೂಮಿಯ ಉತ್ತರಾರ್ಧ ಗೋಳದಲ್ಲಿ ಪಿತ್ತದೋಷ ಬಲವಾಗಿ ವರ್ಧಿಸುತ್ತದೆ. ಹೀಗೆ ಭೂಮಿಯಲ್ಲಿ ಪಿತ್ತದೋಷ ವರ್ಧಿಸಿದಾಗ ಮಾನವಾದಿ ಜೀವಿಗಳ ಶರೀರದಲ್ಲೂ ಪಿತ್ತದೋಷ ಹೆಚ್ಚುತ್ತದೆ!_ 

*ಶರದೃತುವಿನಲ್ಲಿ ದೇಹದ ಕ್ರಿಯೆ ಹೇಗಿರುತ್ತದೆ?:*
  _ವರ್ಷಾ ಋತು ಕಳೆದು ಶರದೃತು ಬರುತ್ತಿದ್ದಂತೆಯೇ, ಮಳೆ ನಿಂತು ಅಥವಾ ಕಡಿಮೆಯಾಗಿ ಸೂರ್ಯ ಪ್ರಕಾಶಿಸತೊಡಗುವ ಮತ್ತು ಸಂಜೆಯಾದೊಡೆ ಚಳಿ ಆರಂಭವಾಗುವ ಈ ಸಮಯದಲ್ಲಿ ವರ್ಷಾ ಋತುವಿನಲ್ಲಿ ನಮ್ಮ ಶರೀರದಲ್ಲಿ ಸಂಚಯಗೊಂಡ ಪಿತ್ತದೋಷವು ಸರ್ವ ಶರೀರಕ್ಕೂ ಪಸರಿಸುತ್ತದೆ..._

  _ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ನಮಗೆ ತಿಳಿಯುವ ಸತ್ಯ ಎಂದರೆ, ಈ ಕಾಲದಲ್ಲಿ ಪಿತ್ತಸ್ಥಾನದ, ಪಿತ್ತದೋಷದ ರೋಗಗಳಾದ, ರಕ್ತನಾಳಗಳ ವಿಕಾರಗಳು ಹೆಚ್ಚುತ್ತವೆ,_ *ಉದಾಹರಣೆಗೆ:* _ವೆರಿಕೋಸ್ ವೇನ್ಸ್, ಹೃದಯದ ರಕ್ತನಾಳಗಳು ಕಟ್ಟಿಕೊಂಡು ಹೃದಯಾಘಾತಗಳು, ಮೆದುಳಿನ ರಕ್ತನಾಳಗಳು ಕಟ್ಟಿಕೊಂಡು ಪಾರ್ಶ್ವವಾಯು, ಗ್ಯಾಂಗ್ರೀನ್, ಹಾಗೆಯೇ ಜಾಂಡೀಸ್, ನೇತ್ರದಾಹ, ಹಸ್ತ-ಪಾದ ದಾಹ, ಮೈಗ್ರೇನ್‌, ಆಮ್ಲಪಿತ್ತ ಮುಂತಾದ ಅನೇಕ ರೋಗಗಳು ಹೆಚ್ಚುವುದನ್ನು ಆಸ್ಪತ್ರೆಗಳ ಸಂಖ್ಯಾತ್ಮಕ ಪರಿಶೋಧನೆಯಿಂದ ತಿಳಿಯಬಹುದು..._

 *ಉಪವಾಸ ಏಕೆ?* 
  _ಪಿತ್ತ ವರ್ಧಿಸಿರುವಾಗ, ಆಹಾರ ಸರಿಯಾಗಿ ಪಚನವಾಗದೇ, ಮತ್ತಷ್ಟು ಪಿತ್ತ ವರ್ಧಿಸುತ್ತದೆ. ಹಾಗಾಗಿ ಈಗಾಗಲೇ ಪ್ರಕೃತಿ ಸಹಜತೆಯಿಂದ ವೃದ್ಧಿಗೊಂಡ ಈ ಪಿತ್ತವನ್ನು ಹೊರಹಾಕಲು ಎರಡು ವಿಧಾನಗಳಿವೆ..._

1. *ವಿರೇಚನ‌ ಚಿಕಿತ್ಸೆ*
2. *ಒಂಭತ್ತು ದಿನಗಳ ಉಪವಾಸ!*
 
  _ಈ ಪ್ರಕುಪಿತ ಪಿತ್ತವನ್ನು ಹೊರಹಾಕಿದಾಗ ಶರೀರದ ಆರೋಗ್ಯ ಸುಧಾರಿಸಿ, ನವಚೈತನ್ಯ ತುಂಬುವುದನ್ನು ಅನುಭವಿಸಿಯೇ ನೋಡಬೇಕು!_ 🤔

  _ವಿರೇಚನ ಚಿಕಿತ್ಸೆಯ ವಿಧಿ-ವಿಧಾನಗಳನ್ನು ಹತ್ತಿರದ ಆಯುರ್ವೇದ ಪಂಚಕರ್ಮ ಚಿಕಿತ್ಸಕರ ಬಳಿ ಕೇಳಿ ತೆಗೆದುಕೊಳ್ಳಬಹುದು._

  *ಉಪವಾಸದ ಮೂರು ವಿಧಾನಗಳನ್ನು ಇಲ್ಲಿ ತಿಳಿಸುತ್ತೇವೆ...*

*ಉಪವಾಸದ ಅವಧಿ:* 
  _ಈ ವರ್ಷದಲ್ಲಿ ದಿನಾಂಕ: 06/07.10.2021 ರಿಂದ  14/15.10.2021 ರವರೆಗೆ ಒಂಭತ್ತು ದಿನಗಳ ವರೆಗೆ ಪಾಲಿಸಬೇಕು._

*ಅವರ ಉಪವಾಸ:* 
  _ಅಶಕ್ತರು, ವೃದ್ಧರು, ರೋಗದಿಂದ ಕ್ಷೀಣರಾದವರು ದೀರ್ಘ ಉಪವಾಸ ಮಾಡಲು ಅಸಾಧ್ಯವಿರುವರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ‌ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ, ಉಪಹಾರ ಬೇಡ._

  _ಸಂಜೆ 5-6 ರ ಒಳಗೆ ಮತ್ತೆ ರಾತ್ರಿಯ ಆಹಾರ ಮಾಡಿ ಮುಗಿಸಿ._

  _ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._

  _ಹಣ್ಣು, ಹಾಲು, ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡ._

*ಮಧ್ಯಮ ಉಪವಾಸ:* 
  _ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಮಧ್ಯಮ ಶಾರೀರಿಕ ಬಲ ಉಳ್ಳ ಸಾಮಾನ್ಯರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ‌ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ,_

  _ಸಂಜೆ 5-6 ರ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._

  _ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._

  _ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._

*ಪ್ರವರ ಉಪವಾಸ:* 
  _ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಉತ್ತಮ ಶಾರೀರಿಕ ಬಲ ಉಳ್ಳವರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7-8ಕ್ಕೆ 200ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಸಂಜೆ 5-6 ರ ಮಧ್ಯದಲ್ಲಿ ಮತ್ತೆ 200ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಐದನೇ ದಿನದ ನಂತರ ಬಳಲಿಕೆಯಾದರೆ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._

  _ಮಧ್ಯದಲ್ಲಿ ಬಾಯಾರಿದರೆ ಅಗತ್ಯ ಪ್ರಮಾಣದ ಕುದಿಸಿ ಆರಿಸಿದ ಜಲ ಸೇವನೆ ಶ್ರೇಷ್ಠ._

  _ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._

*ಉಪವಾಸದ ಲಾಭಗಳು:* 
  _ಪಿತ್ತದೋಷವೇ ಇಂದಿನ ಕಾಲದ ರೋಗಕಾರಕ ದೋಷವಾಗಿದೆ, ಇದರ ನಿಯಂತ್ರಣದಿಂದ ಎಲ್ಲಾ ವಿಧದ ಪಿತ್ತಜ ರೋಗಗಳು ಅಂದರೆ ಆಮ್ಲಪಿತ್ತ, ರಕ್ತಪಿತ್ತ, ಸಂಧಿಶೂಲ, ಅಸ್ತಮಾ, ನೆಗಡಿ, ಶೀತ,‌ ಕಾಮಾಲೆ, ಪಿತ್ತಜ ಪ್ರಮೇಹ ಮುಂತಾದವು ನಿಯಂತ್ರಣಕ್ಕೆ ಬರುತ್ತವೆ!_ 🙄

*ವಿರೇಚನದ ಲಾಭಗಳು:*
  _ಮುಂದಿನ ಒಂದು ವರ್ಷ ಮೇಲೆ ಸೂಚಿಸಿದ ರೋಗಗಳ ಬಾಧೆ ಇರುವುದಿಲ್ಲ. ಹಾಗೆಯೇ, ವಾತ ದೋಷ ಅನುಲೋಮ ಹೊಂದುವ ಕಾರಣ, ಅನೇಕ ರೀತಿಯಿಂದ ಶಾಶ್ವತವಾಗಿ ಬಾಧಿಸುವ ಹಾರ್ಮೋನ್ ರೋಗಗಳಾದ ಹೈಪೋಥೈರಾಯ್ಡಿಸಮ್, ಮಧುಮೇಹ, ಸ್ಥೌಲ್ಯ, PCOD, ಋತುಸ್ರಾವದ ವಿಕಾರಗಳು, ಗರ್ಭಾಶಯ-ಸ್ತನದ ಗಡ್ಡೆಗಳು, ಮೆದುಳಿನ ವಿಕಾರಗಳಾದ ಆತಂಕ, ಚಂಚಲತ್ವ, ಸ್ಮೃತಿನಾಶ ಮುಂತಾದವು ದೂರವೇ ಉಳಿಯುತ್ತವೆ!_

  _ಸ್ವಾಸ್ಥ್ಯ ಪಂಚಕರ್ಮ ಚಿಕಿತ್ಸಾ ಭಾಗವಾದ, ಶರದೃತುವಿನ ವಿರೇಚನ ಚಿಕಿತ್ಸೆಯನ್ನು ಮನೆಯಲ್ಲಿಯೇ ಇದ್ದುಕೊಂಡು ಪಡೆಯಲೂ ಬಹುದು._

      🙏  *ಧನ್ಯವಾದಗಳು*  🙏
••••••••••••••••••••••••••••••••••

Monday 27 September 2021

ಸಿರಿನುಡಿ ಕನ್ನಡ ಬ್ಲಾಗ್

CLICK HERE TO DOWNLOAD

ಜೀವರಸ ಶುದ್ಧಿಯೇ ಆರೋಗ್ಯ

🌷 ಅಮೃತಾತ್ಮರೇ, ನಮಸ್ಕಾರ"*  🌷
🦢 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ** 🦢
   🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🍀
•••••••••••••••••••••••••••••••••••••••
  ದಿನಾಂಕ: 27.08.2021
  ಸ್ವಸ್ಥ ಜೀವನಕ್ಕೆ ಆಯುರ್ವೇದ, ಸಂಚಿಕೆ-69
•••••••••••••••••••••••••••••••••••••••
✍️: ಇಂದಿನ ವಿಷಯ:
  ಜೀವರಸ ಶುದ್ಧಿಯೇ ಆರೋಗ್ಯ 💦 
•••••••••••••••••••••••••••••••••••••••
  ಮಾನವನ‌ ಜೀವಕೋಶಗಳು ಆಹಾರವನ್ನು ಸ್ವೀಕರಿಸುವುದು ದ್ರವರೂಪದ ಮಾಧ್ಯಮದಿಂದ ಮಾತ್ರ. ಇಂತಹ ಜೀವ ದ್ರವವನ್ನು ಹುಳಿ ಬರಿಸಿಕೊಂಡು ಜೀವಕೋಶಗಳನ್ನು ರಕ್ಷಿಸುವುದು ಅಸಾಧ್ಯ...
               •|•|•|•|•|•

  ನಾವು ಸೇವಿಸಿದ ಆಹಾರ ಮೊದಲು ಕ್ರಿಯಾತ್ಮಕವಾಗಿ ಮೂರು ಭಾಗವಾಗಿ ವಿಂಗಡಿಸಲ್ಪಡುತ್ತದೆ ಆದರೆ ಅದು ಭೌತಿಕವಾಗಿ ದ್ರವರೂಪದಲ್ಲಿ ಒಂದಾಗಿಯೇ ಇರುತ್ತದೆ. 
ಇಲ್ಲಿ ನಾವು ಹೇಳುತ್ತಿರುವುದು ರಾಸಾಯನಿಕಗಳ ವಿಭಜನೆಯಲ್ಲ, ಅದು ಶುದ್ಧ ಜೈವಿಕ ಪರಿವರ್ತನೆಯಾಗಿರುತ್ತದೆ.

  ಈ ಸತ್ಯವನ್ನು ಕಂಡುಕೊಳ್ಳದ ಆಧುನಿಕ ವೈದ್ಯ ವಿಜ್ಞಾನ ಆಹಾರವನ್ನು ಕೇವಲ ರಾಸಾಯನಿಕಗಳ ರೂಪದಲ್ಲಿ ನೋಡಿ, ಆಹಾರವೇ ಜೀವಿಯಾಗಿ ಉನ್ನತೀಕರಿಸಿಕೊಳ್ಳುತ್ತದೆ ಎಂಬ ಸತ್ಯವನ್ನು ಮರೆತು ಕೃತಕ ರಾಸಾಯನಿಕಗಳನ್ನು ಸೃಷ್ಟಿಸುತ್ತಾ ರೋಗಗಳನ್ನು ನಿರ್ಮೂಲನೆ ಮಾಡಲು ನೋಡುತ್ತಿದೆ. ಅದು ಸರ್ವದಾ ಅಸಾಧ್ಯ...

  ಈ ಜೈವಿಕ ಪರಿವರ್ತನೆಯ ದ್ರವರೂಪದ ಅಂಶವನ್ನೇ ಆಯುರ್ವೇದ ವಿಪಾಕ ಎನ್ನುತ್ತದೆ. ಈ ವಿಪಾಕ ದ್ರವದೊಳಗೆ ಆಹಾರದಿಂದ ವಿಭಜಿತವಾಗಿ ದ್ರವರೂಪದಿಂದ ಸಂಗ್ರಹಿಸಲ್ಪಟ್ಟ ಮೂರು ಕ್ರಿಯಾತ್ಮಕ ಘಟಕಗಳೇ ಫೇನಕಫ, ಶುದ್ಧಪಿತ್ತ ಮತ್ತು ಪೋಷಕ ವಾಯು‌ ಆಗಿವೆ.

  ವಿಪಾಕ ಅಥವಾ ವಿಪಾಕದ್ರವ ಎಂದರೆ ವಿಶೇಷವಾದ ಪಾಕ ಎಂದರ್ಥ.‌ ಇದನ್ನು ರಾಸಾಯನಿಕವಾಗಿ ನೋಡುವ ಬದಲು ಜೀವರಸದ ರೂಪದಲ್ಲಿ ದರ್ಶಿಸುತ್ತದೆ ಆಯುರ್ವೇದ...

  ಈ ವಿಪಾಕ ಎಂಬುದು ಮಧ್ಯದ ಅವಸ್ಥೆಯ ಜೀವಧಾರಕ ಅಂಶವಾಗಿದೆ. ಅಂದರೆ ಅತ್ತ ಆಹಾರವೂ ಅಲ್ಲ, ಇತ್ತ ಶರೀರವೂ ಅಲ್ಲ, ಆಹಾರ ಶರೀರವಾಗಿ ಮಾರ್ಪಡಲು ತನ್ನನ್ನು ತಾನು ರೂಪಾಂತರಗೊಳಿಸಿಕೊಂಡ ಒಂದು ದ್ರವ ರೂಪದ ಜೀವರಸ‌ ಅವಸ್ಥೆಯೇ ವಿಪಾಕ ಅಥವಾ ವಿಪಾಕದ್ರವ.
               •|•|•|•|•|•

  ಇಂದು ನಮ್ಮ ಶರೀರಗಳು ರೋಗಗ್ರಸ್ತವಾಗಲು ಏನು ಕಾರಣ?

ವಿಪಾಕ ಮೂರು ರೂಪದಲ್ಲಿರುತ್ತದೆ -- 
• ಮಧುರ ವಿಪಾಕ
• ಆಮ್ಲವಿಪಾಕ
• ಕಟುವಿಪಾಕ

  ಮಧುರ ವಿಪಾಕವು ಶರೀರದ ಜೀವಕೋಶಗಳನ್ನು ವರ್ಧಿಸುತ್ತಾ, ಸವಕಳಿಯನ್ನು ತುಂಬುತ್ತಾ ದೃಢವಾಗಿ ಇಡುತ್ತದೆ.

  ಆಮ್ಲವಿಪಾಕವು ಶರೀರದ ಅಗ್ನಿಯನ್ನೂ, ರಕ್ತವನ್ನೂ ಪೋಷಿಸುತ್ತದೆ.

  ಕಟುವಿಪಾಕವು ಶರೀರಕ್ಕೆ ಚಲನೆಯನ್ನು ಕೊಡುತ್ತದೆ.

ಈಗ ಆಗುತ್ತಿರುವ ತೊಂದರೆ‌ ಎಲ್ಲಿದೆ ಎಂದರೆ -- 
  ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಮಧುರವಿಪಾಕವು ಕಡಿಮೆ ಪ್ರಮಾಣದಲ್ಲಿ ಅಥವಾ ದುರ್ಬಲ ರೂಪದಿಂದ ಉಂಟಾಗುತ್ತಿದೆ. ಹಾಗಾಗಿ ನಮ್ಮ ಮಕ್ಕಳ ಜೀವಕೋಶಗಳು ಸರಿಯಾಗಿ ವರ್ಧಿಸದೇ ನಮ್ಮ ಜೀವಕೋಶಗಳ ಸವಕಳಿ ಸರಿಯಾಗಿ ತುಂಬದೇ, ದೃಢತೆ ಕುಗ್ಗಿ ಅಂದರೆ ಜೀವಕೋಶಗಳ ಪ್ರತಿರೋಧಕ ಶಕ್ತಿ ಕುಗ್ಗಿ, ಹೆಚ್ಚು ಹೆಚ್ಚು ರೋಗಕ್ಕೆ ತುತ್ತಾಗುತ್ತಿದ್ದೇವೆ.

  ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಆಮ್ಲವಿಪಾಕವು ಯಥೇಚ್ಛವಾಗಿ ರೂಪಾಂತರವಾಗುತ್ತಿದೆ, ಹಾಗಾಗಿ ಎಲ್ಲರ ಶರೀರವೂ "ಹೀಟ್" ಎನ್ನುತ್ತೇವೆ ಮತ್ತು ಇಂದು ಔಷಧ ವ್ಯವಹಾರಿಕ ಜಗತ್ತನ್ನು ಆಳುತ್ತಿರುವ ಗ್ಯಾಸ್‌ಟ್ರೈಟೀಸ್, ಕೊಲೈಟೀಸ್, ಆತಂಕ, ಭಯ, ಮಧುಮೇಹ, ಬಿ.ಪಿ. ಹೃದ್ರೋಗ, ಹೈಪೋಥೈರಾಯ್ಡಿಸಮ್, ಸ್ಪಾಂಡಿಲೈಟೀಸ್, ರುಮಟಾಯ್ಡ್ / ಗೌಟ್(uric acid), ಅಟೋಇಮ್ಯೂನ್ ರೋಗಗಳು ಮುಂತಾದ ಜೀವನ‌ಪರ್ಯಂತ ಹಣ ಸುರಿದೂ ಸರಿಯಾಗದ ರೋಗಗಳಿಗೆ ಕಾರಣವೇ ನಮ್ಮ ಹುಳಿಮೈ ಅಥವಾ ಆಮ್ಲವಿಪಾಕ‌ ಆಗಿದೆ.

  ಇನ್ನು, ಅತ್ಯಲ್ಪ ಪ್ರಮಾಣದಲ್ಲಿ ಮತ್ತು ನಿಯಂತ್ರಿತ ರೂಪದಲ್ಲಿ ಉಂಟಾಗಬೇಕಿದ್ದ ಕಟುವಿಪಾಕ ಹೆಚ್ಚು ಮತ್ತು ಅನಿಯಂತ್ರಿತಗೊಂಡಿದೆ, ಹಾಗಾಗಿ ನಮ್ಮ ಭಾವನೆಗಳ, ಚಲನವಲನಗಳ ನಿಯಂತ್ರಣ ಕಳೆದುಕೊಳ್ಳುತ್ತಿದ್ದೇವೆ ಮತ್ತು ಅದರಿಂದ ಹೃದಯಾಘಾತ, ಪಕ್ಷಾಘಾತ, ಅಪಘಾತಗಳಿಂದ ನರಳುತ್ತಿದ್ದೇವೆ ಮತ್ತು ಆತ್ಮಹತ್ಯೆಗಳಂತಹ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದೇವೆ... 🤔🤔
               •|•|•|•|•|•

ತೀರ್ಮಾನಕ್ಕೆ ಒಂದು ಮಾತು --

  ನಾವು ನಮ್ಮ ಶರೀರ ಉತ್ಪತ್ತಿ ಮಾಡುವ ಜೀವರಸವಾದ ವಿಪಾಕದ್ರವವನ್ನು ಹುಳಿ ಅಥವಾ ಆ್ಯಸಿಡ್ ರೂಪದಲ್ಲಿ ಇಟ್ಟುಕೊಂಡಿದ್ದೇವೆ. ಇದರ ಪರಿಣಾಮವೇ ಹೀಟ್! ಈ ಆ್ಯಸಿಡ್‌ನಲ್ಲಿ ನಮ್ಮ ಜೀವಕೋಶಗಳು ಮೆತ್ತಗಾಗುತ್ತಿವೆ, ಅಸ್ಥಿಗಳು ಕರಗುತ್ತಿವೆ, ಬೇಗ ಮುಪ್ಪು ಆವರಿಸುತ್ತಿದೆ. ಇದನ್ನೇ ಆಕ್ಸಿಡೇಷನ್ ಪ್ರೊಸೆಸ್ ಎನ್ನುವ ಆಧುನಿಕ ವಿಜ್ಞಾನ ಆ್ಯಂಟಿ ಆಕ್ಸಿಡಂಟ್ ಔಷಧಗಳನ್ನು ಸೂಚಿಸಿ ವ್ಯಾಪಾರ ಮಾಡುತ್ತಿದೆಯೇ ಹೊರತು ಆ್ಯಸಿಡ್ ತಡೆಯುವ ತಂತ್ರವನ್ನು ಹೇಳಿಕೊಡುತ್ತಿಲ್ಲ... 🙄🙄
               •|•|•|•|•|•

ರೋಗಗಳನ್ನು ತಡೆಯುವ ತಂತ್ರಗಳೇನು?
  ಸುಲಭವಾಗಿ ಜೀರ್ಣವಾಗದ ಕಾರಣ ಆಮ್ಲವಿಪಾಕ(ಹುಳಿರಸ) ಉಂಟುಮಾಡುವ ಗೋಧಿ, ಉದ್ದು, ಮೈದಾ, ಮೊಳಕೆಕಾಳು, ನೆನೆಸಿದ ಹಸಿಕಾಳು, ಸಕ್ಕರೆಗಳನ್ನು ತ್ಯಜಿಸುವುದು...

  ಹೊಟ್ಟೆ ಬಿರಿಯುವಂತೆ ತಿನ್ನುವ ಕಾರಣ ಜೀರ್ಣವಾಗದೇ ಶುದ್ಧ ಆಹಾರವೂ ಆಮ್ಲವಿಪಾಕ (ಹುಳಿ ಬಿಡುವ) ಆಗುವ ಕಾರಣ, ಮಿತ ಆಹಾರ ಅಥವಾ ಶಾರೀರಿಕ ಶ್ರಮದ ಅಗತ್ಯದಷ್ಟು ಪ್ರಮಾಣದ ಆಹಾರ ಸೇವನೆ ಮಾಡುವುದು...

  ಆರ್.ಒ. ಜಲ ಸೇವಿಸಿ ಅದರ ಆಮ್ಲತೆಯ ಕಾರಣ ಸೇವಿಸಿದ ಶುದ್ಧ ಅಹಾರ ಆಮ್ಲವಿಪಾಕವಾಗುವ ಕಾರಣ ಅದನ್ನು ಸರ್ವದಾ ತ್ಯಜಿಸುವುದು...

  ಫ್ರಿಜ್‌ನಲ್ಲಿ ಇಟ್ಟ ಕಾರಣ ಆಹಾರ ಸತ್ವವನ್ನು ಇಟ್ಟುಕೊಂಡಿರುವುದಿಲ್ಲ, ತಿನ್ನುವಾಗ ತಿಳಿಯುವುದಿಲ್ಲ ಅಷ್ಟೇ ಒಳಹೋಗಿ ಆಮ್ಲವಿಪಾಕ (ಹುಳಿರಸ) ಬಿಡುವ ಕಾರಣ ಫ್ರಿಜ್ ಆಹಾರ ತ್ಯಜಿಸುವುದು...

Thursday 12 August 2021

ಆಸ್ಪತ್ರೆ ರಹಿತ ಜೀವನಕ್ಕೆ ಮನೋ ವಿಶ್ಲೇಷಣೆಯ ಮಹತ್ವ

ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 72
      ದಿನಾಂಕ: 12/08/2021
•••••••••••••••••••••••••••••••••••••••
ಅಮೃತಾತ್ಮರೇ, ನಮಸ್ಕಾರ 
       🙏🙏🙏🙏🙏
ಇಂದಿನ ವಿಷಯ:
  ಆಸ್ಪತ್ರೆ ರಹಿತ ಜೀವನಕ್ಕೆ ಮನೋ ವಿಶ್ಲೇಷಣೆಯ ಮಹತ್ವ
•••••••••••••••••••••••••••••••••••••••
  ಸಹೃದಯ ಓದುಗರೆ, ವಿಶ್ಲೇಷಿಸಬೇಕಾದುದು, ಹೊರ ಪ್ರಪಂಚವನ್ನಲ್ಲ ನಮ್ಮ ಒಳ ಪ್ರಪಂಚವನ್ನು...

  ಏಕೆಂದರೆ, ರೋಗಗಳು ಹೊರಗಿನಿಂದ ಬರುವವು ಎಂಬ ಸಿದ್ಧಾಂತವನ್ನು ಆಯುರ್ವೇದವು ಮುಕ್ಕಾಲು ಪಾಲು ಒಪ್ಪುವುದಿಲ್ಲ. ಶರೀರ ತಾನಾಗಿಯೇ ದುರ್ಬಲಗೊಳ್ಳದೇ, ಹೊರಗಿನ ಕ್ರಿಮಿಗಳ ಆಕ್ರಮಣ ಏನನ್ನೂ ಮಾಡದು.
ಸೂಕ್ಷ್ಮವಾಗಿ ಗಮನಿಸಿ ನೋಡಿ: ಕೊರೋನಾ ವೈರಾಣು ಜಗತ್ತನ್ನೇ ಅಲುಗಾಡಿಸಿದರೂ ಸಹ ಶೇ.90 ಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಲಿಲ್ಲ ಎಂಬುದು ಇದನ್ನೇ ಸೂಚಿಸುತ್ತದೆ.
                    •|•|•|•|•|•

  ಆಸ್ಪತ್ರೆ ರಹಿತ ಜೀವನ ಎಂದರೆ ಸ್ವಸ್ಥ ಜೀವನ ಅಥವಾ ಆರೋಗ್ಯಕರ ಜೀವನ ಎಂದರ್ಥ.
  ಆಯುರ್ವೇದದ ಪ್ರಕಾರ ಸ್ವಸ್ಥ ಜೀವನ ಎಂದರೆ, ಶರೀರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಭಾಗಗಳು ಆರೋಗ್ಯದಿಂದ ಇರುವುದಷ್ಟೇ ಅಲ್ಲದೇ ಇಂದ್ರಿಯಗಳು ಮತ್ತು ಮನಸ್ಸು ಸಧೃಢವಾಗಿ ಇರಬೇಕು ಮತ್ತು ಪ್ರಸನ್ನವಾಗಿರಬೇಕು. ಅಂದರೆ, ನಮ್ಮ ದೃಷ್ಟಿಗೆ ಗೋಚರವಾಗುವ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವು ಸಧೃಢವಾಗಿ ಮತ್ತು ಸೂಕ್ಷ್ಮಗ್ರಾಹಿಯಾಗಿ ಇರಬೇಕು. ಹಾಗೆಯೇ, ಉಭಯೇಂದ್ರಿಯವಾದ ಮನಸ್ಸು ಸಧೃಢವಾಗಿಯೂ ಸೂಕ್ಷ್ಮಗ್ರಾಹಿಯಾಗಿಯೂ ಮತ್ತು ಪರಹಿತತ್ವದಿಂದ ಕೂಡಿರಬೇಕು.
                    •|•|•|•|•|•

  ಮಾನವನೆಂದರೆ ಮನಸ್ಸು ಎಂದರ್ಥ. ಇಲ್ಲಿ ಪ್ರತಿಯೊಂದು ದೇಹಕ್ಕೂ ಒಂದೊಂದು ಮನಸ್ಸು ಇದೆ ಎಂದು ನಮಗೆ ಅನ್ನಿಸಿದರೂ ವಾಸ್ತವದಲ್ಲಿ ಪ್ರತಿಯೊಂದು ಮನಸ್ಸೂ ತನಗೆ ಬೇಕಾದ ರೀತಿಯ ಶರೀರವನ್ನು ಆಯ್ಕೆ ಮಾಡಿಕೊಂಡಿದೆ. ಅಂದರೆ, ಪ್ರತಿಯೊಂದು ಮನಸ್ಸಿಗೂ ಒಂದೊಂದು ಶರೀರವಿದೆ ಎಂದರ್ಥ.
                    •|•|•|•|•|•

  ನಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳಿಗೂ ಸಹಾಯಕವಾಗುವ ಅಥವಾ ಅನುಭವಿಸಲು ಬೇಕಾದ ಯಂತ್ರವೇ ಈ ಶರೀರ. ಕೇವಲ ಯಂತ್ರವನ್ನು ಸರಿಯಾಗಿಟ್ಟುಕೊಳ್ಳುವತ್ತ ಗಮನಿಸಿ ಅದರ ಒಡೆಯನಾದ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳದಿದ್ದರೆ ಅದನ್ನು ಪೂರ್ಣ ಆರೋಗ್ಯ ಎಂದು ಹೇಳಲಾಗದು. ಹಾಗಾಗಿ, ಮನಸ್ಸನ್ನು ಸ್ವಸ್ಥವಾಗಿಟ್ಟುಕೊಂಡಲ್ಲಿ ಶರೀರ ತಾನು ಸ್ವಸ್ಥವಾಗಿರುವುದು ಸುಲಭ! 😀

  ಹೇಗೆಂದರೆ, ಯೋಗ್ಯವಲ್ಲದ ಆದರೆ, ಆಕರ್ಷಣೀಯವಾಗಿಯೂ ರುಚಿಕರವಾಗಿಯೂ ತೋರುವ ಆಹಾರಗಳಿಂದ ದೂರವಿರಲು ನಾವು ಮನಸ್ಸು ಮಾಡಬೇಕೇ ಹೊರತು ಶರೀರದಿಂದ ಮಾಡುವ ಪ್ರಯತ್ನವಲ್ಲ ಅದು. ಕೇವಲ ಶರೀರವನ್ನು ಧೃಢವಾಗಿಟ್ಟುಕೊಂಡು ಮನಸ್ಸು ಅಧೃಢವಾಗಿದ್ದರೆ ಅದು ಬೇಕು ಬೇಕಾದ್ದನ್ನು ಶರೀರಕ್ಕೆ ತಿನ್ನಿಸಿ ಶರೀರದ ಆರೋಗ್ಯವನ್ನು ಹಾಳುಗೆಡವುತ್ತದೆ. ಆಹಾರದಂತೆ, ಇತರ ಇಂದ್ರಿಯಗಳ ಸುಖಕ್ಕೂ ಮನಸ್ಸು ವಿಕೃತ ರೂಪದಿಂದ ಎಡೆ ಮಾಡಿಕೊಟ್ಟರೆ ಅನಾರೋಗ್ಯ ಬರುವುದು ನಿಶ್ಚಿತ. ಹಾಗಾಗಿ "ಮನೋವಿಶ್ಲೇಷಣೆ" ಎಂಬುದು ಮಾನಸಿಕ ಆರೋಗ್ಯಕ್ಕೂ, ಮಾನಸಿಕ ಆರೋಗ್ಯವು ಶರೀರದ ಆರೋಗ್ಯಕ್ಕೂ ಕಾರಣವಾಗುತ್ತದೆ.
                    •|•|•|•|•|•

  ಈ ಮನಸ್ಸಿನ ಅಧಿಪತಿಯಾದ ಚಿತ್ತದಲ್ಲಿ ಸ್ವಾಸ್ಥ್ಯತೆ ಉಂಟಾದರೆ ಮನುಷ್ಯ ಸರ್ವಸ್ವವನ್ನೂ ಪಡೆಯುತ್ತಾನೆ. ಈ ಕಾರಣದಿಂದಲೇ ಆಯುರ್ವೇದ ಆಚಾರ್ಯರು ಚಿತ್ತ ಸ್ವಾಸ್ಥ್ಯ ಅಥವಾ ಪ್ರಸನ್ನ ಚಿತ್ತತೆಯ ಬಗ್ಗೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ.
                    •|•|•|•|•|•

  ಈ ಚಿತ್ತಸ್ವಾಸ್ಥ್ಯ ಮತ್ತು ಮನೋಸ್ವಾಸ್ಥ್ಯಗಳು ಆಸ್ಪತ್ರೆಯಲ್ಲಿ ಸಿಗುವ ಮತ್ತು ಹಣ ಕೊಟ್ಟು ಖರೀದಿಸುವ ವಿಷಯಗಳಲ್ಲ. ಆದರೆ, ಚಿತ್ತಸ್ವಾಸ್ಥ್ಯ ಮತ್ತು ಮನಸ್ಸಿನ ಸ್ವಾಸ್ಥ್ಯತೆ ಇಲ್ಲದೇ ಬಲವಾದ ಶರೀರವೂ ಸಹ ದೌರ್ಬಲ್ಯಕ್ಕೆ ಒಳಗಾಗುತ್ತದೆ.

         🙏 ಧನ್ಯವಾದಗಳು 🙏
•••••••••••••••••••••••••••••••••••••

Thursday 22 July 2021

ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*

*ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*
====================
*ದೇಶದಲ್ಲಿ ಕೇಂದ್ರ ಸರ್ಕಾರದ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರಾಗಿ ನಿವೃತ್ತರಾದವರಿಗೆ ಕೇಂದ್ರ ಸರಕಾರವೂ, ಅದೇರೀತಿ ರಾಜ್ಯ ಸರಕಾರಿ ನೌಕರರು ಹಾಗೂ ರಾಜ್ಯ ಸರಕಾರಿ ನೌಕರರಾಗಿ ನಿವೃತ್ತಿ ಆದವರಿಗೆ ಆಯಾಯಾ ರಾಜ್ಯ ಸರಕಾರಗಳು ತುಟ್ಟಿ ಭತ್ಯೆ ಪ್ರಕಟಿಸುವುದು ಒಂದು ನಿಯಮಿತ ಪದ್ಧತಿ.  ಸೇವೆಯಲ್ಲಿ ಇರುವ ನೌಕರರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DA ಅಂತಲೂ, ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DR ಎಂದೂ ಕರೆಯಲಾಗುತ್ತದೆ. DA ಅಂದರೆ Dearness Allowance ಎಂದೂ, DR ಅಂದರೆ Dearness Relief ಎಂದೂ ಕರೆಯಲಾಗುತ್ತದೆ*. 

1) *ತುಟ್ಟಿ ಭತ್ಯೆ(DA) ಎಂದರೇನು* ?
ಪ್ರಶ್ನೆಯಲ್ಲಿಯೇ ಉತ್ತರವೂ ಇದೆ. ತುಟ್ಟಿ ಎಂದರೆ ಸಾಮಾನ್ಯ ಅರ್ಥದಲ್ಲಿ ಹೆಚ್ಚಾಗು, ಅಧಿಕವಾಗು, ಬೆಲೆ ಏರಿಕೆಯಾಗು ಎಂದಾಗುತ್ತದೆ. ಅಂದರೆ, ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ತೊಂದರೆಗೆ ಒಳಗಾಗದೇ ನೆಮ್ಮದಿಯ ಬದುಕು ಸಾಗಿಸುವುದರ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ಖುಷಿಯಿಂದ ಮಾಡಲಿ ಎನ್ನುವ ಉದ್ದೇಶದಿಂದ ಸರಕಾರಗಳು ಒದಗಿಸುವ ಆರ್ಥಿಕ ಸೌಲಭ್ಯ ಎಂದು ಸರಳವಾಗಿ ಹೇಳಬಹುದು. 

2) *ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಯಾವಾಗ ಪ್ರಕಟಿಸಲಾಗುತ್ತದೆ* ?
ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಕ್ಯಾಲೆಂಡರ್ ವರ್ಷದ ಜನವರಿ ಹಾಗೂ ಜುಲೈ ತಿಂಗಳುಗಳಲ್ಲಿ ಪ್ರಕಟಿಸಲಾಗುತ್ತದೆ. ಒಂದುವೇಳೆ ಬೇರೆ ತಿಂಗಳುಗಳಲ್ಲಿ ಪ್ರಕಟಿಸಿಸಿದರೂ, ಜನವರಿ ಅಥವಾ ಜುಲೈ ತಿಂಗಳುಗಳಿಂದಲೇ ಅನ್ವಯ ಆಗುವಂತೆ ಲೆಕ್ಕಾಚಾರ ಮಾಡಲಾಗುತ್ತದೆ. ಹಾಗಾದಾಗ ಬಾಕಿ ಪಾವತಿ ಮಾಡಿರುವುದೂ ಇದೆ.

3) *ತುಟ್ಟಿ ಭತ್ಯೆ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತದೆಯೆ* ?
ಪ್ರಾರಂಭದಲ್ಲಿ ತುಟ್ಟಿ ಭತ್ಯೆ ಯ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತಿತ್ತು. ನಂತರದ ದಿನಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರಗಳ(NSC) ರೂಪದಲ್ಲಿ ಕೊಡಲಾಯಿತು. ಹಾಗೆ ಕೊಟ್ಟಾಗ ನೌಕರರಿಗೆ ಪೇಪರ್ ಬೆನಿಫಿಟ್ ಸಿಗುತ್ತಿತ್ತು. ಸರಕಾರಕ್ಕೆ ಹಣ ಸಿಗುತ್ತಿತ್ತು. ಆ ಹಣವನ್ನು ಸರಕಾರಗಳು ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ತುಟ್ಟಿ ಭತ್ಯೆ ಬಾಕಿಯನ್ನು ಪುನಃ ನಗದು ರೂಪದಲ್ಲಿ ಕೊಡಲಾಗುತ್ತಿದೆ.           
                                                                                                    4) *ತುಟ್ಟಿ ಭತ್ಯೆ (DA/DR) ಯನ್ನು ಯಾವ ಲೆಕ್ಕಾಚಾರದಲ್ಲಿ ಪ್ರಕಟಿಸಲಾಗುತ್ತದೆ* ?
ಕರ್ನಾಟಕ ರಾಜ್ಯ ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ (DA/DR) ಯನ್ನು 1-1-1987ಕ್ಕೂ  ಮೊದಲು ನೌಕರನ ಅಥವಾ ನಿವೃತ್ತ ನೌಕರನ ಮೂಲ ವೇತನಕ್ಕೆ ಅನುಗುಣವಾಗಿ ರೂಪಾಯಿಗಳ ಲೆಕ್ಕಾಚಾರದಲ್ಲಿ ಅಂದರೆ, 2ರೂ, 5ರೂ, 8ರೂ, 10 ರೂ, 15ರೂ........... ಹೀಗೆ ಪ್ರಕಟ ಮಾಡುತ್ತಿತ್ತು. ಅಷ್ಟೇ ಅಲ್ಲ ಹಾಗೆ ಪ್ರಕಟ ಮಾಡುವಾಗ  ಅದಕ್ಕೆ ಕಾಲಮಿತಿ ಏನೂ ಇರಲಿಲ್ಲ. ವರ್ಷಕ್ಕೆ ಹಲವಾರು ಬಾರಿ, ಕೆಲವೊಮ್ಮೆ ಒಂದೇ ತಿಂಗಳಲ್ಲಿ  ಎರಡು ಮೂರು ಬಾರಿಯೂ DA / DR ಪ್ರಕಟಿಸಿರುವ ಉದಾಹರಣೆಗಳೂ ಇವೆ. 

ರಾಜ್ಯದ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಕಾಲಕಾಲಕ್ಕೆ ಪ್ರಕಟಿಸಿ , ಅದಕ್ಕೆ ಅಗತ್ಯವಾದ ಹಣಕಾಸು ಬಿಡುಗಡೆ ಮಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಅದಕ್ಕಾಗಿ ಯಾವಕಾಣಕ್ಕೂ ಕೇಂದ್ರ ಸರಕಾರದ ನಿಲುವು ನಿರೀಕ್ಷಿಸ ಬೇಕಾದ ಅಗತ್ಯ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಗುಂಡೂರಾಯರು  ವಿಧಾನಸಭೆಯಲ್ಲಿ ಪ್ರಕಟಿಸಿದ್ದರು ಎಂಬುದು ಸದನದ ದಾಖಲೆಗಳಲ್ಲಿ ದಾಖಲಾಗಿದೆ .

1-1-1987 ರ ನಂತರ ಕರ್ನಾಟಕ ರಾಜ್ಯ ಸರ್ಕಾರ ತನ್ನ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ  (%) ಶೇಕಡಾವಾರು ಪ್ರಮಾಣದಲ್ಲಿ ಪ್ರಕಟಿಸಲು ಆರಂಭಿಸಿತು. ನಂತರ ಅದೇ ಒಂದು ಸಹಜ ಕ್ರಿಯೆಯೇ ಆಗಿ ನಡೆದು ಬಂದಿದೆ. 
1-1-1987 ರಲ್ಲಿ ರಾಜ್ಯ ಸರ್ಕಾರ ತನ್ನ ನೌಕರನ ಮೂಲ ವೇತನಕ್ಕೆ 4% DA ಪ್ರಕಟಿಸಿತು. ಹಾಗೆ ಕಾಲಾನುಕಾಲಕ್ಕೆ ಪ್ರಕಟಿಸಿದ DA 1998 ರ ವೇಳೆಗೆ 178% ಆಗಿತ್ತು. ಅಂದರೆ, ಆಗ ನೌಕರನ ಸಂಬಳ 1000 ರೂಪಾಯಿಗಳು ಇತ್ತು ಎಂದರೆ, ಅವನು/ಳು ಪಡೆಯುತ್ತಿದ್ದ DA 1780 ರೂಪಾಯಿಗಳಾಗುತ್ತಿತ್ತು. ಅಂದರೆ ಅವನ/ಳ ಮೂಲ ವೇತನ 1000 + 1780(DA) = 2780 ರೂಪಾಯಿಗಳಾಗುತ್ತಿತ್ತು. 

5) *ಕರ್ನಾಟಕ ರಾಜ್ಯದಲ್ಲಿ ತುಟ್ಟಿ ಭತ್ಯೆಯ ಬೆಳವಣಿಗೆ ಹೇಗೆ ಬೆಳೆದು ಬಂದಿದೆ* ?
ಕರ್ನಾಟಕ ರಾಜ್ಯದಲ್ಲಿ  1-4-1998ರಲ್ಲಿ ನೌಕರನ ಮೂಲ ವೇತನ ಹಾಗೂ ಅದಕ್ಕೆ ಪಡೆಯುತ್ತಿದ್ದ 178% ತುಟ್ಟಿ ಭತ್ಯೆಯನ್ನು ವಿಲೀನ ಮಾಡಿ ಅದನ್ನು ನೌಕರನ ಮೂಲ ವೇತನವನ್ನಾಗಿ ಮಾಡಲಾಯಿತು. ಆಗ ಆದ ಮೂಲ ವೇತನಕ್ಕೆ 16% ತುಟ್ಟಿ ಭತ್ಯೆ ಪ್ರಕಟಿಸಲಾಯಿತು.  ಹಾಗೆಯೇ ಕಾಲಾನಂತರದಲ್ಲಿ ಸರಕಾರ ಪ್ರಕಟಿಸಿದ ತುಟ್ಟಿ ಭತ್ಯೆಯು  2006ರ ಜುಲೈ ವೇಳೆಗೆ 79% ತಲುಪಿತ್ತು. 
2006ರ ಜುಲೈ ತಿಂಗಳಲ್ಲಿ 70% ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನ ಮಾಡಿದ ನಂತರ ಆದ ಮೂಲ ವೇತನಕ್ಕೆ 2.625% ತುಟಿ ಭತ್ಯೆ ಪ್ರಕಟಿಸಲಾಯಿತು. 
ಅನಂತರದ ದಿನಗಳಲ್ಲಿ ಪ್ರಕಟಿಸಿದ ತುಟ್ಟಿ ಭತ್ಯೆ 2012ರ ವೇಳೆಗೆ 76.75% ತಲುಪಿತು. 
ಆಗ ಆ 76.75% ತುಟ್ಟಿ ಭತ್ಯೆಯನ್ನು ನೌಕರನ/ಳ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನದ ನಂರತ ಆದ ಮೂಲ ವೇತನಕ್ಕೆ  4% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು.  ಅನಂತರ ಕಾಲಕಾಲಕ್ಕೆ ಪ್ರಕಟಿಸಿದ ತುಟ್ಟಿ ಭತ್ಯೆ 2017ರ ಜುಲೈ ವೇಳೆಗೆ 45.25% ಆಯಿತು. 2017ರಲ್ಲಿ ಆ 47.25% ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. 
ಆಗ ಆದ ಮೂಲ ವೇತನಕ್ಕೆ 2018ರ ಜನವರಿ ತಿಂಗಳಿನಿಂದ 1.75% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಪ್ರಕಟವಾದ ತುಟ್ಟಿ ಭತ್ಯೆ 2019ರ ಜುಲೈ ವೇಳೆಗೆ 11.25% ಆಯಿತು. 
ಅಲ್ಲಿಂದ ಕರೋನ ಕಾರಣಕ್ಕಾಗಿ  ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ ಎನ್ನುವ ಕಾರಣ ಮುಂದಿಟ್ಟು  ಸರಕಾರ 3 DAಗಳನ್ನು ಪ್ರಕಟಿಸುವುದೇ ಇಲ್ಲ ಎನ್ನುವ ಕೇಂದ್ರ ಸರಕಾರದ  ಆದೇಶವನ್ನು ರಾಜ್ಯ ಸರಕಾರವೂ ಹೊರಡಿಸಿದೆ. 
ಕಳೆದ ಒಂದೂವರೆ ವರ್ಷದಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರುತ್ತಲೇ ಇವೆ. ಆದರೂ ಸರಕಾವೂ DA ಪ್ರಕಟಿಸಿಲ್ಲ.  ಇದರಿಂದಾಗಿ ರಾಜ್ಯದ ಪ್ರತಿ ನೌಕರರಿಗೆ ಸದ್ಯಕ್ಕೆ ಸಾವಿರಾರು ರೂಪಾಯಿಗಳ ನಷ್ಟ. ಸೇವಾವಧಿ ಪೂರ್ತಿ ಹಾಗೂ ನಿವೃತ್ತಿ ಜೀವನ ಮತ್ತು ಜೀವನ ಪೂರ್ತಿ ಲೆಕ್ಕ ಮಾಡಿದರೆ ಲಕ್ಷಾಂತರ ರೂಪಾಯಿಗಳ ನಷ್ಟ  ಆಗತ್ತದೆ.

6) *ತುಟ್ಟಿ ಭತ್ಯೆಯನ್ನು ಯಾವ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ* ?
ತುಟ್ಟಿ ಭತ್ಯೆಯನ್ನು AICPI ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. 

7) *AICPI ಎಂದರೇನು* ? 
AICPI ಎಂದರೆ All India Consumer Price Index ಎಂದರ್ಥ. ಕನ್ನಡದಲ್ಲಿ ಅದನ್ನು ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕ ಎನ್ನುತ್ತಾರೆ. 

8) *AICPIಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ* ?
AICPIಯನ್ನು ಜೀವನ ಅವಶ್ಯಕ ವಸ್ತುಗಳ ಬೆಲೆಗಳ ಏರಿಕೆಯನ್ನು ಒಂದು ವರ್ಷದಲ್ಲಿ ಲೆಕ್ಕಾಚಾರ ಮಾಡಿ ಅದರ ಸರಾಸರಿಯನ್ನು ಗುರುತಿಸುವ ಮೂಲಕ ಮಾಡಲಾಗುತ್ತದೆ. 
ಉದಾಹರಣೆಗೆ 2015ರ ಜನವರಿಯಿಂದ - ಡಿಸೆಂಬರ್ ವರೆಗಿನ ಒಂದು ವರ್ಷದ ಅವಧಿಯಲ್ಲಿ ಜೀವನ ಅವಶ್ಯಕ ಸಾಮಾಗ್ರಿಗಳ ಬೆಲೆ ಏರಿಕೆಯ ಒಟ್ಟು ಮೊತ್ತ 3137.12 ರೂಪಾಯಿಗಳಾಗಿತ್ತು.
 ಆ 3137.12 ÷12 = 261.41 ಆಗಿತ್ತು. ಅದರ ಆಧಾರದಲ್ಲಿ  2016ರ ಜನವರಿ ತಿಂಗಳಲ್ಲಿ DA ಪ್ರಕಟಿಸಲಾಯಿತು. ಅಂತೆಯೇ 2016ರ DA ಪ್ರಕಟಿಸುವಾಗ ಜೂನ್ 2015 ರಿಂದ ಮೇ 2016 ರ ವರೆಗಿನ ಒಂದು ವರ್ಷದ ಅವಧಿಯಲ್ಲಿನ ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಯಿತು. ಪ್ರತಿ ಬಾರಿ DA ಪ್ರಕಟ ಮಾಡುವಾಗಲೂ ಇದೇ ಪ್ರಕ್ರಿಯೆ ಮಾಡಲಾಗುತ್ತದೆ.

9) *DA ಪ್ರಕಟಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದೇ ಅಥವಾ ರಾಜ್ಯ ಸರಕಾರದ್ದೇ* ? 
ಕೇಂದ್ರ ಸರಕಾರಿ ನೌಕರರಿಗೆ ಕೇಂದ್ರ ಸರಕಾರವೂ, ರಾಜ್ಯ ಸರಕಾರಿ ನೌಕರರಿಗೆ ರಾಜ್ಯ ಸರಕಾರವೂ ಪ್ರತ್ಯೇಕವಾಗಿ DA ಪ್ರಕಟಿಸುತ್ತವೆ. ರಾಜ್ಯ ಸರಕಾರಿ ನೌಕರರಿಗೆ DA ಪ್ರಕಟಿಸುವುದಕ್ಕಾಗಿ ಕೇಂದ್ರ ಸರಕಾರ ಯಾವುದೇ ರೀತಿಯ ಹಣಕಾಸು ನೆರವು ನೀಡುವ ಪದ್ಧತಿ ಇಲ್ಲವೇ ಇಲ್ಲ. ..

10) *ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದೇ* ? 
ಇಲ್ಲ. ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದಿಲ್ಲ. AICPI ಒಂದೇ ಆದರೂ, DA ಪ್ರಕಟಿಸುವಲ್ಲಿ ತಾರತಮ್ಯ ಇದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ  ಮೂಲ ವೇತನಕ್ಕೆ ಹೋಲಿಸಿದರೆ ಕೇಂದ್ರ ಸರಕಾರಿ ನೌಕರರ ಮೂಲ ವೇತನ ಬಹಳ ಹೆಚ್ಚು. ಹಾಗಾಗಿ ಕೇಂದ್ರ ಸರಕಾರವು ಸ್ವಲ್ಪವೇ DA ಪ್ರಕಟಿಸಿದರೂ ಆ ನೌಕರರಿಗೆ ಹೆಚ್ಚು ಹಣ ದೊರೆಯುತ್ತದೆ. ರಾಜ್ಯ ಸರಕಾರಿ ನೌಕರರಿಗೆ ಮೂಲ ವೇತನ ಕಡಿಮೆ ಇರುವುದರಿಂದ ಕೇಂದ್ರದ  1% DA = ರಾಜ್ಯದ 0.944% ನಿಯಮವನ್ನು ಕರ್ನಾಟಕ  ರಾಜ್ಯ ಸರಕಾರ ಅನುಸರಿಸುತ್ತಿರುವುದರಿಂದ ರಾಜ್ಯದ ನೌಕರರಿಗೆ "ಕೈ ಹೊಡೆತ ಕಂಬದ ಬಡಿತ" ಎನ್ನುವ ಗಾದೆ ಮಾತಿನಂತೆ ಎರಡೆರಡು ರೀತಿಯಲ್ಲಿ ಅನ್ಯಾಯಗಳು ಆಗುತ್ತಿವೆ.

11)  *ಕೋವಿಡ್-19ರ ಹಿನ್ನೆಲೆಯಲ್ಲಿ  ರಾಜ್ಯ ಸರಕಾರ ತನ್ನ ನೌಕರರಿಗೆ 3 DAಗಳನ್ನು ಕೊಡದೇ ಇರಲು  ಆದೇಶ ಮಾಡಿರುವುದರಿಂದ ನೌಕರರಿಗೆ ಯಾವ ರೀತಿಯ ಪರಿಣಾಮ ಆಗಿದೆ* ?
ಖಂಡಿತ ಭಾರೀ ಪ್ರಮಾಣದ ನಷ್ಟ ಆಗಿದೆ. ಅದು ಏಕ ಮುಖ ನಷ್ಟವಲ್ಲ. ಅನೇಕ ಮುಖ ನಷ್ಟಗಳಾಗಿವೆ. ಅವುಗಳನ್ನು ಉದಾಹರಣೆಗಳ ಸಮೇತವೇ ವಿವರಿಸುವ ಅಗತ್ಯವಿದೆ. ಅಗತ್ಯ ಸಾಮಾಗ್ರಿಗಳ  ವಿಪರೀತ ಬೆಲೆ  ಬೆಲೆ ಏರಿಕೆ ಆಗುತ್ತಿದ್ದರೂ,
ಜುಲೈ 2019 ರಿಂದಲೂ ರಾಜ್ಯದ ಸರಕಾರಿ ನೌಕರರು 11.25% DA ಪಡೆಯುತ್ತಿದ್ದೇವೆ. 
ಜನವರಿ 2020, 
ಜುಲೈ 2020 ಹಾಗೂ 
ಜನವರಿ 2021 ಈ ಮೂರೂ ಅವಧಿಗಳಲ್ಲಿ ರಾಜ್ಯ ಸರಕಾರ ಕ್ರಮವಾಗಿ  ಕೇವಲ 2% + 2% + 2% DA ಪ್ರಕಟಿಸಿದ್ದರೂ ನೌಕರರಿಗೆ ಎಷ್ಟೋ ಅನುಕೂಲ ಆಗುತ್ತಿತ್ತು. ಸರಕಾರ ಹಾಗೆ ಮಾಡದೇ ಇರುವುದರಿಂದ ನೌಕರರಿಗೆ ಭಾರೀ ಪ್ರಮಾಣದ ನಷ್ಡ ಆಗಿದೆ.  ಅಷ್ಟೇ ಅಲ್ಲ ಅವರ ವೃತ್ತಿ ಜೀವನ ಅವಧಿಯಲ್ಲಿ ಮಾತ್ರವಲ್ಲ, ನಿವೃತ್ತಿ ಜೀವನದ ಮೇಲೂ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ. 

ನಷ್ಟದ ಲೆಕ್ಕಾಚಾರ ಹೀಗೂ ಮಾಡಬಹುದು.
1)ಮೂಲವೇತನ × ಪಡೆಯುತ್ತಿರುವ DA 11.25%
2)ಮೂಲವೇತನ× 13.25% DA -11.25%= ವ್ಯತ್ಯಾಸ × 6= ಮೊತ್ತ
3) ಮೂಲವೇತನ

ಉದಾಹರಣೆಗೆ ಒಬ್ಬ ದ್ವಿದಸ ಅವರ ಮೂಲ ವೇತನ 21400 ಇದೆ. 
21400×11.25%=2408
21400×13.25%=2836
21400×15.25%=3263
21400×17.25%=3691

2836-2408=428×6 =2568
3263-2408=855×6=5130
3691-2408=1283×6=7698
-------------------------------------------
                            ಒಟ್ಟು 15396 ರೂಪಾಯಿಗಳ ನಷ್ಟ . ಅದೂ ಕೇವಲ ಒಂದೂವರೆ ವರ್ಷದಲ್ಲಿ. 

ಸರಕಾರ ಪ್ರತಿ ಆರು ತಿಂಗಳಿಗೊಮ್ಮೆ ಕೇವಲ 2% DA ಪ್ರಕಟಿಸಿದ್ದರೂ ಕೂಡಾ ಕಡಿಮೆ ಸೇವಾ ಅವಧಿ ಇರುವ ನೌಕರರಿಗೆ ಗರಿಷ್ಠ ಪ್ರಮಾಣದ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. ದೀರ್ಘ ಸೇವಾವಧಿ ಇರುವ ನೌಕರರಿಗೆ ದೀರ್ಘಾವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. DA ಪ್ರಕಟಿಸಿದ್ದರೆ ಮುಂದಿನ ವೇತನ ಆಯೋಗದ ಸಂದರ್ಭದಲ್ಲಿ ಅದು ಮೂಲ ವೇತನಕ್ಕೆ ವಿಲೀನವಾಗಿ ಅದಕ್ಕೆ  DA ದೊರಕುತ್ತಿತ್ತು.  ನಂತರ ನಿವೃತ್ತಿ ಸಂದರ್ಭದಲ್ಲಿ ನಿವೃತ್ತಿ ವೇತನ ಹೆಚ್ಚಿಗೆ ನಿಗದಿಯಾಗುತ್ತಿತ್ತು. ಒಂದುವೇಳೆ ಕುಟುಂಬ ಪಿಂಚಣಿ ಸೌಲಭ್ಯ ಪಡೆಯಬೇಕಾದ ಸಂದರ್ಭ ಬಂದಲ್ಲಿ ಕುಟುಂಬ ಪಿಂಚಣಿ ಕೂಡಾ ಕನಿಷ್ಠ  3% ಹೆಚ್ಚಿಗೆ ನಿಗದಿ ಆಗುತ್ತಿತ್ತು. ಸರಕಾರ DA ಪ್ರಕಟ ಮಾಡದೇ ತಡೆಹಿಡಿದಿರುವ ಕಾರಣ ಸರ್ವ ನೌಕರರಿಗೂ, ಸರ್ವ ಪಿಂಚಣಿದಾರರಿಗೂ ಜೀವನ ಪರ್ಯಂತ ಆರ್ಥಿಕ ಹೊಡೆತ ಆಗಿದೆ.


ಕರ್ನಾಟಕ ರಾಜ್ಯ ಸರಕಾರವು 3 DA ಪ್ರಕಟ ಪಡಿಸದ ಕಾರಣ ಯಾವಯಾವ ಮೂಲವೇತನದವರಿಗೆ ಕನಿಷ್ಠ ಎಷ್ಟು ಆರ್ಥಿಕ ನಷ್ಟ ಆಗುತ್ತಿದೆ ಎಂಬುದರ ಕೆಲವು ಉದಾಹರಣೆಗಳು ಈ ಕೆಳಗಿನಂತೆ ಇವೆ.
ಮೂಲ ವೇತನ    ನಷ್ಟ( ರೂಗಳಲ್ಲಿ) 
25800                 18033
34300                  24693
42000                  30240
45300                   32616
61150                  43428
ಹೀಗೆ ನಿಮ್ಮ ವೇತನ ನಷ್ಟ ಲೆಕ್ಕ ಮಾಡಿಕೊಳ್ಳಿ.

*ತುಟ್ಟಿಭತ್ಯೆ ಬಗ್ಗೆ ಕರ್ನಾಟಕ ರಾಜ್ಯ 6ನೇ ವೇತನ ಆಯೋಗದ ಆದೇಶಗಳು*

ಹೊಸ ವೇತನ ಶ್ರೇಣಿಗಳನ್ನು ರಚಿಸುವಲ್ಲಿ ಅಖಿಲಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 276.9 ಅಂಶಗಳ ವರೆಗಿನ (ಆಧಾರ ವರ್ಷ 2001=100) ತುಟ್ಟಿಭತ್ತೆಯನ್ನು ದಿನಾಂಕ1.7.2017 ರಂದು ಲಭ್ಯವಿದ್ದ ಸರಕಾರಿ ನೌಕರನ ಮೂಲವೇತನದೊಂದಿಗೆ ವಿಲೀನಗೊಳಿಸಲಾಗಿರುತ್ತದೆ. ಆದುದರಿಂದ ಪರಿಷ್ಕೃತವೇತನ ಶ್ರೇಣಿಗಳಲ್ಲಿ ಮೊದಲ ಕಂತಿನ ವೇತನ ತುಟ್ಟಿ ಭತ್ಯೆಯು ದಿನಾಂಕ1.1.2018 ರಂದು ಪ್ರಾಪ್ತವಾಗುತ್ತದೆ. 

ಸರಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಭಾರತ ಸರ್ಕಾರ ರೂಪಿಸಿರುವ ತುಟ್ಟಿಭತ್ತೆ ಸೂತ್ರಕ್ಕೆ ಅನುಸಾರವಾಗಿ ಪಾವತಿಸತಕ್ಕದ್ದು.

 ಪರಿಷ್ಕೃತವೇತನ ಶ್ರೇಣಿಗಳಲ್ಲಿ ಸರಕಾರಿ ನೌಕರರಿಗೆ ಸಂದಾಯ ಮಾಡಬೇಕಾದ ತುಟ್ಟಿಭತ್ಯೆಯನ್ನು ಕೇಂದ್ರ ಸರಕಾರವು ಮಂಜೂರು ಮಾಡುವ ತುಟ್ಟಿಭತ್ಯೆಯ ಪ್ರತಿ ಶೇಕಡಾ 1ಕ್ಕೆ 0.944 ದರದಲ್ಲಿ (multiflication factor) ಲೆಕ್ಕಾಚಾರ ಮಾಡತಕ್ಕದ್ದು.

 ಇದನ್ನು ಒಂದನೇ ಜನವರಿ ಮತ್ತು ಒಂದನೆ ಜುಲೈ ರಿಂದ ಜಾರಿಗೆ ಬರುವಂತೆ ವರ್ಷಕ್ಕೆರಡು ಬಾರಿ ಪಾವತಿಸತಕ್ಕದ್ದು. 

ಹಣದುಬ್ಬರದ ತಟಸ್ಥೀಕರಣ ವು ಎಲ್ಲ ಹಂತಗಳಲ್ಲಿ ಶೇಕಡಾ ನೂರರಷ್ಟು ಏಕರೂಪವಾಗಿ ರತಕ್ಕದ್ದು.

 ತುಟ್ಟಿಭತ್ತೆಯನ್ನು ಸಂಭಾವನೆಯ ವಿಶಿಷ್ಟ  ಅಂಶವಾಗಿ ತೋರಿಸುವುದನ್ನು ಮುಂದುವರಿಸಲಾಗುವುದು 

*ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶಗಳು ದಿನಾಂಕ : 01-01-1987 ರಿಂದ 01-07-2021 ರ ವರೆಗೆ ನಮ್ಮ ಎಲ್ಲಾ ನೌಕರರಿಗೆ ಶೇರ್ ಮಾಡಿ ಮಾಹಿತಿ ಹಂಚಿಕೊಳ್ಳಿ*

*ದಿನಾಂಕ ಹೆಚ್ಚಳ -ಶೇಕಡ*

01-01-1987- 4% 
01-07-1987- 8% 
01-01-1988- 13% 
01-07-1988- 19% 
01-01-1989- 24% 
01-07-1989- 29% 
01-01-1990- 33% 
01-07-1990- 37% 
01-01-1991- 45% 
01-07-1991 54% 
01-01-1992- 65% 
01-07-1992- 76% 
01-01-1993- 85% 
01-07-1993- 90% 
01-01-1994- 96% 
01-07-1994- 106% 
01-01-1995- 116% 
01-07-1995- 127% 
01-01-1996- 138% 
01-07-1996- 149% 
01-01-1997- 160% 
01-07-1997- 171% 
01-01-1998- 178% 
01-07-1998 - 192%
01-04-1998- 16%
01-07-1998- 22%
01-01-1999 - 32%
01-07-1999 - 37%
01-01-2000 - 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01-07-2016- 40.25%
01-01-2017- 43.25%
01-07-2017- 45.25%
01-01-2018-1.75% 01-07-2018- 3.75%
01-01-2019-  6.50%
01-07-2019- 11.25%
01-07-2021-22.25%.

★ NAVODAYA EXAM HALL TICKET: ★ ✍🏻🍁✍🏻🍁ನವೋದಯ ವಿದ್ಯಾಲಯದ 2021-22ನೇ ಸಾಲಿನ 6ನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು (Hall ticket) ಇಂದಿನಿಂದ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ.!!Registration Number & Date Of Birth ನಮೂದಿಸಿ ಡೌನ್ಲೋಡ್ ಮಾಡಿಕೊಳ್ಳಿ.!👇🏻👇🏻👇🏻👇🏻👇🏻👇🏻👇🏻👇🏻

CLICK HERE TO DOWNLOAD

Monday 19 July 2021

*ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*........!!!

*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 69
     *ದಿನಾಂಕ: 20/07/2021*
 ••••••••••••••••••••••••••••••••••••••••
*ಅಮೃತಾತ್ಮರೇ, ನಮಸ್ಕಾರ*
       🙏🙏🙏🙏🙏
_ಇಂದಿನ ವಿಷಯ:_ 
  * *ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*...!!_ ••••••••••••••••••••••••••••••••••••••
_ಸಹೃದಯ ಓದುಗರೆ,_

*ಪಾರ್ಶ್ವವಾಯು ಏಕೆ ಬರುತ್ತದೆ:*
  _ಮೆದುಳಿಗೆ ಹರಿಯುವ ರಕ್ತದ ಪ್ರಮಾಣ 3 ಸೆಕೆಂಡುಗಳ ಕಾಲ ಕ್ಷೀಣಿಸಿದರೆ ಅಥವಾ ನಿಂತರೆ ತಕ್ಷಣ ದೇಹದ ಚಲನೆ ಸ್ತಬ್ದವಾಗಿಬಿಡುತ್ತದೆ. ಇದು ಪಾರ್ಶ್ವವಾಯು ಆಗಬಹುದು ಅಥವಾ ಪೂರ್ಣವಾಯು ಆಗಬಹುದು._
••••••••••••••••••••••••••••••••••••••••••••••••
  _ನಿನ್ನೆಯ ಸಂಚಿಕೆಯಲ್ಲಿ ನೋಡಿದಂತೆ, ರಕ್ತನಾಳಗಳ ಗಡುಸುತನ, ಅದರಿಂದ ಅವು ಕಟ್ಟಿಕೊಳ್ಳುವಿಕೆ, ರಕ್ತವನ್ನು ಸರಾಗವಾಗಿ ಹರಿಯದಂತೆ ತಡೆಯೊಡ್ಡುವುದು ಮತ್ತು ಆ ತಡೆ ಯಾವ ಅವಯವಕ್ಕೆ ರಕ್ತ ಸರಬರಾಜನ್ನು ನಿಲ್ಲಿಸುತ್ತದೆ ಎನ್ನುವುದರ ಆಧಾರದಲ್ಲಿ ರೋಗಗಳು ಬರುತ್ತವೆ!_

  _ಕತ್ತಿನ ಎಡಬಲಬದಿ ಇರುವ ಕೆರೋಟಿಡ್ ಆರ್ಟರಿ ಹೆಸರಿನಲ್ಲಿ ಕರೆಯಲ್ಪಡುವ ರಕ್ತನಾಳಗಳು ಮೆದುಳಿಗೆ ಅತಿ ಹೆಚ್ಚು ಆಮ್ಲಜನಕವನ್ನು ಹೊಂದಿರುವ ರಕ್ತವನ್ನು ಹರಿಸುತ್ತವೆ. ಗಮನಿಸಬೇಕಾದ ಅತ್ಯಂತ ಮುಖ್ಯ ಸಂಗತಿ ಎಂದರೆ, ಮೆದುಳು ಕ್ರಿಯಾಶೀಲವಾಗಿರಲು ಆಮ್ಲಜನಕ ಮತ್ತು ಸಕ್ಕರೆ ಅಂಶ(ಗ್ಲುಕೋಸ್) ನಿರಂತರವಾಗಿ ಬೇಕು. ಕ್ಷಣಮಾತ್ರ ಇವುಗಳ ಪೂರೈಕೆ ನಿಂತರೆ ಮೆದುಳು ಅರೆಕ್ರಿಯೆ ಅಥವಾ ನಿಷ್ಕ್ರಿಯೆಗೊಳ್ಳುತ್ತದೆ. ಇದನ್ನೇ ಪಾರ್ಶ್ವವಾಯು ಎನ್ನುತ್ತೇವೆ._
               •|•|•|•|•|•

*ಕೇವಲ ಪ್ರೋಟೀನ್ ಸೇವನೆಯಿಂದ ಏನಾಗುತ್ತದೆ:*
      ಅನುಭವದಲ್ಲಿ ಸೂಕ್ಷ್ಮಗ್ರಾಹಿಯಾಗಿ ನೋಡಿದಾಗ. ರೋಗಿಗಳ ಇತಿಹಾಸ ಹೆಕ್ಕಿ ತೆಗೆದು ಮೂಲ ಕಾರಣ ಕಂಡುಕೊಳ್ಳದೇ ಚಿಕಿತ್ಸೆಗೆ ಕೈ ಹಾಕುವುದಿಲ್ಲ . ಶೇಕಡಾ 90 ಜನರ ಕೆರೋಟಿಡ್ ಆರ್ಟರಿ, ಕರೋನರಿ ಆರ್ಟರಿ, ಪೋರ್ಟಲ್ ವೇನ್ ಮುಂತಾದವುಗಳು ಕಟ್ಟಿಕೊಳ್ಳುವುದಕ್ಕೆ ಅತಿ ಕಡಿಮೆ ಜಿಡ್ಡಿನ ಅಂಶ ಸೇವನೆ ಮತ್ತು ಅತಿ ಹೆಚ್ಚು ಪ್ರೋಟೀನ್ ಸೇವನೆಯೇ ಕಾರಣ. ಹೀಗೆ ಪ್ರೋಟೀನ್-ಕೊಬ್ಬಿನ ಅಂಶಗಳ  ಅಸಮತೋಲನದಿಂದ ಗಡುಸುಗೊಳ್ಳುವ ರಕ್ತನಾಳಗಳು ರಕ್ತಪೂರೈಕೆಯಲ್ಲಿ ವಿಫಲವಾಗಿ ನೋರಾರು ರೋಗಗಳನ್ನು ತರುತ್ತದೆ._
               •|•|•|•|•|•

_*ಮೆದುಳಿನ ಮೂಲ ವಸ್ತು ಯಾವುದು*?_
_ಪ್ರೋಟೀನ್ ಅಥವಾ ಕೊಬ್ಬು?_

  _ಮಾನವನ ಮೆದುಳು ಹೆಚ್ಚು ಜಿಡ್ಡಿನಿಂದಲೇ ತಯಾರಾಗಿದೆ. ಅತ್ಯುತ್ತಮ ಕೊಬ್ಬು ಮೆದುಳಿಗೆ ಅಗತ್ಯ ಎನ್ನುವ ಸಂಶೋಧನೆಗಳು ಒಮೆಗಾ-3, 6 ಫ್ಯಾಟೀ ಆ್ಯಸಿಡ್‌ಗಳು ಬೇಕು ಎನ್ನುತ್ತವೆ. ಇದರ ಮೂಲ ಭಾರತೀಯ ಗೋ ತಳಿಗಳ ಹಾಲು ಮತ್ತು ತುಪ್ಪದಲ್ಲಿ ಇವೆ ಎಂಬುದನ್ನು ಮಾತ್ರ ಮುಚ್ಚಿಡುತ್ತವೆ. ಏಕೆಂದರೆ ತುಪ್ಪ ಎನ್ನುವ ಪದಾರ್ಥವನ್ನು ಪಾಶ್ಚಾತ್ಯ ಪದ್ಧತಿಯಿಂದ ತಯಾರಿಸಿ ಸಂಶೋಧಿಸಲಾಗುತ್ತಿದೆ ಮತ್ತು ಅಂಗಡಿಗಳಲ್ಲಿ ಸಿಗುವ ಈ ರೀತಿಯ ತುಪ್ಪ ಹಾಲಿನ ಕೊಬ್ಬೇ ಹೊರತೂ ಶುದ್ಧ ತುಪ್ಪವಲ್ಲ. ಮಜ್ಜಿಗೆ ಕಡೆದು ಬೆಣ್ಣೆ ತೆಗೆದು ಮಾಡುವ ತುಪ್ಪ ಮಾತ್ರ ಮೆದುಳನ್ನು ಪೋಷಣೆ ಮಾಡಬಲ್ಲುದು!_

_*.....ಧೀ ಸ್ಮೃತಿ ಕಾಂಕ್ಷಿಣಾಂ ಸಸ್ಯತೇ ಘೃತಂ*_
  _ಧೈರ್ಯ ಮತ್ತು ನೆನಪಿನ‌ಶಕ್ತಿ ಬಯಸುವವರು ತುಪ್ಪ ಸೇವಿಸಿ ಎಂಬುದು ಶ್ಲೋಕದ ಅರ್ಥ._
               •|•|•|•|•|•

*ಕೇವಲ ಪ್ರೋಟೀನ್‌ ಸೇವನೆಯಿಂದ ಮೆದುಳಿಗೆ ಆಗುವ ಹಾನಿ ಎಂಥಾದ್ದು?*
  _ಇತ್ತೀಚಿಗೆ ನಾವೆಲ್ಲಾ ಹೆಚ್ಚು  ಕೇಳಲ್ಪಡುತ್ತಿರುವ "ಅಲ್ಜೀಮಿರ್" ಅಂದರೆ "ಮರೆಗುಳಿತನ" ಎಂಬ ರೋಗಕ್ಕೆ ಮೆದುಳಿನಲ್ಲಿ ಸಂಚಯವಾಗುತ್ತಿರುವ ಪ್ರೋಟೀನ್ ಕಾರಣವಾಗಿದೆ, ಅದನ್ನು ಹೇಗೆ ತೆಗೆಯುವುದು? ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಂಶೋಧನೆಗಳು, ಹೇಗೆ ತಡೆಯಬಹುದು ಎಂದು ಯೋಚಿಸುತ್ತಲೇ ಇಲ್ಲ!!!_

  _ಯುರಿಕ್ ಆ್ಯಸಿಡ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುತ್ತೇವಲ್ಲ ಅದು ಅಧಿಕ ಪ್ರೋಟೀನ್ ಸೇವನೆಯಿಂದಾಗುವ ಪ್ರಥಮ ಹಾನಿ, ಅದೇ ಮುಂದೆ ಮೆದುಳು, ಹೃದಯ,‌ ಯಕೃತ್ತು ರಕ್ತನಾಳಗಳಿಗೆ ಮಹತ್ತರವಾದ ಅಪಾಯವನ್ನು ತರುತ್ತದೆ ಎಂದು ಗ್ರಹಿಸದೇ ಯುರಿಕ್ ಆ್ಯಸಿಡ್ ಕೇವಲ ಮೂಳೆಗಳ, ಸಂಧು ಕೀಲುಗಳ ಸಮಸ್ಯೆ ಎಂದು ಭಾವಿಸಿ ಸುಖವಾಗಿದ್ದೇವೆ, ಇದು ಹೆಚ್ಚು ಸಂಚಯಗೊಂಡರೆ ಸೂಕ್ಷ್ಮ ರಕ್ತನಾಳಗಳು ಹಾಳಾಗಿ ಕಟ್ಟಿಕೊಂಡು ಯಕೃತ್ ಸಿರೋಸಿಸ್, ಕಿಡ್ನಿ ಫೇಲ್ಯೂರ್ ಬರುತ್ತವೆ..._ 🤔
               •|•|•|•|•|•

  _ಒಟ್ಟಾರೆ ಕೇವಲ‌ ಪ್ರೋಟೀನ್ ಸೇವನೆ ಮೆದುಳಿಗೆ ಎರಡು ರೀತಿಯ ಅಪಾಯವನ್ನು ತರುತ್ತದೆ._
1) _ರಕ್ತನಾಳಗಳು ಕಟ್ಟಿಕೊಂಡು ಉಂಟಾಗುವ ಪಾರ್ಶ್ವವಾಯು_
2) _ಮೆದುಳು ಸವೆತ ಉಂಟಾಗಿ ಧಾತುಕ್ಷಯದಿಂದಾಗುವ ಪಾರ್ಶ್ವವಾಯು (ಇದು ಚಿಕಿತ್ಸೆಗೆ ಅಸಾಧ್ಯ) ಇದನ್ನು ಅಟ್ರೋಪಿಡ್ ಬ್ರೇನ್ ಎಂದು ಕರೆಯುತ್ತಾರೆ ಅಂದರೆ ಮೆದುಳು ತನ್ನ ಗಾತ್ರದಲ್ಲಿ ಕುಗ್ಗಿದೆ ಎಂದು ಅರ್ಥ._
               •|•|•|•|•|•

*ನಮ್ಮ ಚಿಕಿತ್ಸಾ ವಿಧಾನ ಎಷ್ಟು ಹಾಸ್ಯಾಸ್ಪದವಾಗಿದೆ?*
_ಪಾರ್ಶ್ವವಾಯು ಪೀಡಿತರಿಗೆ_ -
• _ಕೊಬ್ಬನ್ನು ಕರಗಿಸುವ ಸ್ಟ್ಯಾಟಿನ್ ಮಾತ್ರೆಗಳು!?_
• _ಯಥೇಚ್ಛವಾಗಿ ತಿನ್ನಿಸುವ ಮೊಳಕೆ ಕಾಳುಗಳು!?_
• _ನಿರ್ದಾಕ್ಷಿಣ್ಯವಾಗಿ ನಿಲ್ಲಿಸುವ ಹಾಲು, ತುಪ್ಪಗಳು?!_
• _ಕೊಬ್ಬನ್ನು ಹೆಚ್ಚಿಸಿ ಶರೀರದ ತೂಕವನ್ನು ಹೆಚ್ಚಿಸುವ ನಿದ್ದೆಮಾತ್ರೆಗಳು!?_
• _ಜಿಡ್ಡನ್ನು ಬಳಸದೇ ಮಾಂಸಖಂಡಗಳಿಗೆ ವಿಪರೀತ ತೊಂದರೆ ಕೊಡುವ ಕೇವಲ ಫಿಜಿಯೋಥೆರಪಿಗಳು?!_
  _ಮನುಷ್ಯ ತಾನು ಸಾಯದೆಯೂ ಮತ್ತು ಔಷಧಿಗಳ ಮೇಲೆ ನಿರಂತರ ಅವಲಂಬಿತನಾಗಿಯೂ ಇರುವಂತೆ ಮಾಡುವ ಚಿಕಿತ್ಸೆಗಳು?!_ 😟
               •|•|•|•|•|•

*ಆತ್ಮೀಯರೇ,*
  _ಈ ಸಂದೇಶದ ಸಾರವನ್ನು ಗ್ರಹಿಸಿ, ಭಯವನ್ನು ಬಿಡಿ, ಜಿಡ್ಡು ಅತ್ಯಂತ ಅವಶ್ಯಕ ಎಂದು ಎಣ್ಣೆ ತಿನಿಸುಗಳನ್ನು ತಿನ್ನುವ ಬದಲು ಭಾರತೀಯ ಗೋ ತಳಿಗಳ ಹಾಲಿನಿಂದ ಮನೆಯಲ್ಲಿಯೇ ಬೆಣ್ಣೆ ತಯಾರಿಸಿ ತುಪ್ಪ ಮಾಡಿಕೊಂಡು ಬಳಸಿರಿ. ಆರೋಗ್ಯದಿಂದ ಇರಿ._

  _*ನಿಮ್ಮ‌ಮಕ್ಕಳಿಗೆ ಹಾಲು-ತುಪ್ಪಗಳನ್ನು ಕೊಡಿ ಮತ್ತು ಚೆನ್ನಾಗಿ ಆಟವಾಡಲು ಬಿಡಿ.*_

    🙏 *ಧನ್ಯವಾದಗಳು* 🙏
••••••••••••••••••••••••••••••••••••••

2020-21ನೇ ಸಾಲಿನ SSLC ಗಣಿತ ವಿಷಯದ ಉತ್ತರಗಳು

CLICK HERE TO DOWNLOAD

Saturday 17 July 2021

Know Ur 2nd PUC Reg. No.: ನೋಂದಾಯಿಸಿದ ಹೊಸ & ಪುನರಾವರ್ತಿತ (Fresher's & Repeater's) ವಿದ್ಯಾರ್ಥಿಗಳು ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನೋಡಿಟ್ಟುಕೊಳ್ಳಿ.!!

Know Ur 2nd PUC Reg. No.:~
✍🏻🗒️✍🏻🗒️✍🏻🗒️✍🏻🗒️✍🏻

♣️ 2021ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಜುಲೈ-20 ರಂದು ಪ್ರಕಟಗೊಳ್ಳಲಿದೆ.!!

♣️ ನೋಂದಾಯಿಸಿದ ಹೊಸ & ಪುನರಾವರ್ತಿತ (Fresher's & Repeater's) ವಿದ್ಯಾರ್ಥಿಗಳು ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನೋಡಿಟ್ಟುಕೊಳ್ಳಿ.!!

♣️ Check your No. here:
👇🏻👇🏻

CLICK HERE TO VIEW

ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"* *ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_

*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 65
       *ದಿನಾಂಕ: 18-07-2021
*ಅಮೃತಾತ್ಮರೇ, ನಮಸ್ಕಾರ*
       🙏🙏🙏🙏🙏

_ಇಂದಿನ ವಿಷಯ:_
  *"ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"* 

  *ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_
••••••••••••••••••••••••••••••••••••••••••
  _ಪ್ರತ್ಯಕ್ಷ ಪ್ರಮಾಣ, ಅನುಮಾನ ಅಥವಾ ಊಹೆ, ಪ್ರಮಾಣ ಉಪಮಾನ, ಪ್ರಮಾಣ ಮತ್ತು ಆಪ್ತೋಪದೇಶ ಅಥವಾ ಶಬ್ದಪ್ರಮಾಣ ಎಂಬ ನಾಲ್ಕು ಜ್ಞಾನದ ಹಾದಿಗಳಿವೆ._

  _ನಾವೆಲ್ಲಾ ಈ ನಾಲ್ಕರಲ್ಲಿ ಒಂದನ್ನು ಬಳಸಿ ಜ್ಞಾನ ಸಂಪಾದಿಸುತ್ತೇವೆ._

  _ಈಗ ಹೇಳಲು ಹೊರಟಿರುವ ಆರೋಗ್ಯ ಸೂತ್ರವು_ *"ಆಪ್ತೋಪದೇಶ"* _ಪ್ರಮಾಣದ ಆಧಾರದಲ್ಲಿ_ *"ಉಪಮಾನ ಪ್ರಮಾಣ"*‌ _ವನ್ನು ಅನುಸರಿಸಿ ಆರೋಗ್ಯ ಜ್ಞಾನ ಹಂಚುವ ಕಾರ್ಯವಾಗಿದೆ. ತಾವುಗಳು, ಇದನ್ನು ಗ್ರಹಿಸಿ, ಊಹಿಸಿ, ತಾಳೆನೋಡಿ, ಇದರಿಂದ ಪ್ರತ್ಯಕ್ಷ ತೊಂದರೆ ಅನುಭವಿಸುತ್ತಿರುವವರನ್ನು ಗಮನಿಸಿ ನಂತರ ದೃಢಪಡಿಸಿಕೊಳ್ಳಿ. ಕೊನೆಗೆ_ *ಪಾಲಿಸಿರಿ ಮತ್ತು ಆರೋಗ್ಯದಿಂದ ಇರಿ...*

  _ಇದೊಂದು ಸೂತ್ರದಿಂದ ನಾವು ಈ ಕೆಳಗಿನ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಮತ್ತು ಮುಕ್ತರಾಗಲೂಬಹುದು!_

• _ಹೃದ್ರೋಗ_
• _ಪಾರ್ಶ್ವವಾಯು_
• _ಯಕೃತ್ ವಿಕಾರಗಳು, ಲಿವರ್ ಸಿರೋಸಿಸ್_
• _ಗಾಲ್‌ಬ್ಲ್ಯಾಡರ್ ತೊಂದರೆ_
• _ಮೂತ್ರಪಿಂಡದ ಕಲ್ಲುಗಳು_
• _ವಿವಿಧ ರೀತಿಯ ಸಂಧಿ‌ಶೂಲಗಳು_
• _ಮಾಂಸಖಂಡಗಳ ಸೆಳೆತ_
• _80ಕ್ಕೂ ಹೆಚ್ಚು ಅಟೋ ಇಮ್ಯೂನ್ ಕಾಯಿಲೆಗಳು_
• _ವಿವಿಧ ಭಾಗದ ಸ್ಪಾಂಡಿಲೋಸಿಸ್_
• _ಸ್ಪಾಂಡಿಲೈಟೀಸ್_
• _ಹೈಪೋಥೈರಾಯ್ಡಿಸಮ್_
• _ಮಧುಮೇಹ_
• _ರಕ್ತದೊತ್ತಡ_
• _ಮ್ಯಕುಲಾರ್ ಡಿಜನರೇಷನ್_
• _ಕಣ್ಣಿನಲ್ಲಿ ರಕ್ತ ಸೋರುವಿಕೆ_
• _ನೆನಪಿನ ಶಕ್ತಿ ಕುಂದುವಿಕೆ_
• _ನರಗಳ ದೌರ್ಬಲ್ಯ_
• 

  _ಎಷ್ಟೊಂದು ಕಾಯಿಲೆಗಳ ಪಟ್ಟಿ ಇದೆ ಇಲ್ಲಿ, "ಕೇವಲ" ಪ್ರೋಟೀನ್ ಸೇವನೆಯ ದುಷ್ಪರಿಣಾಮಗಳು ಇವು..!! ಆಶ್ಚರ್ಯ ಎನಿಸಿದರೂ ಸತ್ಯ._

  _ಜಗತ್ತಿನ ಜನರ ತಲೆಗೆ ಆಧುನಿಕ ವಿಜ್ಞಾನ_ *ಎಂದೂ ಇಲ್ಲದ ಒಂದು ಭೂತವನ್ನು ಬಿಟ್ಟಿದೆ...*

   _?!# ಪ್ರತಿ ನಿತ್ಯ ಇಂತಿಷ್ಟು ಪ್ರೋಟೀನ್ ಬೇಕೇ ಬೇಕು ಎಂಬುದು_ 

  _?!# ಕೊಲೆಸ್ಟರಾಲ್‌ ತಿಂದರೆ ಅಪಾಯ ಎನ್ನುವುದು_

  *ಪ್ರೋಟೀನ್ ಮತ್ತು ಕೊಲೆಸ್ಟರಾಲ್‌‌ಗಳ ನಡುವಿನ ಬಾಂಧವ್ಯವನ್ನು ಮುರಿದು, ಇನ್ನಿಲ್ಲದ ರೋಗಗಳಿಗೆ ಅನ್ಯಾಯವಾಗಿ ತುತ್ತಾಗುತ್ತಿದ್ದೇವೆ...* 
                   •|•|•|•|•|•

  _ಆತ್ಮೀಯರೇ, ಸೂಕ್ಷ್ಮವಾಗಿ ಗಮನಿಸಿ ಅಳವಡಿಸಿಕೊಂಡರೆ, ಸದೃಢ ಆರೋಗ್ಯ ನಮ್ಮದಾಗುವುದು!_ 🙏
                   •|•|•|•|•|•

  _ಉಪಮಾನ(ಹೋಲಿಕೆ) ಎಂಬುದು "ಒಂದು ಪ್ರಮಾಣ" ಅಂದರೆ, ವ್ಯಕ್ತಿ ಹಿಂದೆ ನೋಡಿದ ಒಂದನ್ನು ಹೋಲಿಸಿ ಹೊಸದರ ಬಗ್ಗೆ ತಿಳಿವಳಿಕೆ ಅಥವಾ ಜ್ಞಾನ ಮೂಡಿಸುವುದು._

  _ಈ ಉಪಮಾನ ಪ್ರಮಾಣದ ಅನ್ವಯ ಇಂದಿನ ನಮ್ಮ ಆಹಾರದಲ್ಲಿನ ಪ್ರೋಟೀನ್-ಫ್ಯಾಟ್ ಅಸಮತೋಲನವು ಈ ಮೇಲೆ ಸೂಚಿಸಿದ ಅನೇಕ ಕಾಯಿಲೆಗಳ ಉತ್ಪತ್ತಿ, ಉಲ್ಬಣ, ಅಪಾಯ, ಪ್ರಾಣಹಾನಿ ಮಾಡುತ್ತಿರುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ._
                    •|•|•|•|•|•

  _ತಾವೆಲ್ಲರೂ ಹೋಳಿಗೆ ಅಥವಾ ಒಬ್ಬಟ್ಟು ನೋಡಿದ್ದೀರಿ, ತಿಂದಿದ್ದೀರಿ ಹಾಗೆಯೇ, ಬಹುಜನರ ಅತ್ಯಾಪ್ಯಾಯ ಖಾದ್ಯವಾದ ಒಬ್ಬಟ್ಟು, ಆತ್ಮೀಯರನ್ನು ಉಪಚರಿಸಲು ಮಾಡುವ ಬಹುಮೂಲ್ಯ ಆಹಾರವೂ ಹೌದು. ಹೋಳಿಗೆ ತಯಾರಿಕೆಯನ್ನು ಒಮ್ಮೆ ಗಮನಿಸಿ - "ಆಯುರ್ವೇದದಲ್ಲಿ ಹೋಳಿಗೆಗೆ_ *ಉತ್ಕಾರಿಕಾ* _ಎಂದು ಕರೆಯುತ್ತಾರೆ." ಹೋಳಿಗೆಯು ಪ್ರಧಾನವಾಗಿ ಬೇಳೆಯಿಂದ ಆಗಿರುತ್ತದೆ. ಬೇಳೆ ಪ್ರೋಟೀನ್ ಪ್ರಧಾನ ಧಾನ್ಯ. ಆಯುರ್ವೇದದಲ್ಲಿ ತಿಳಿಸಲಾಗಿದೆ_ - *ಎಲ್ಲಾ ಬೇಳೆಗಳೂ ಅತ್ಯಂತ ಪ್ರಬಲ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ* _ಎಂದು. ಏಕೆಂದರೆ, ಬೇಳೆಗಳು - ಒಗರು ರಸವನ್ನು ಹೊಂದಿರುತ್ತವೆ ಮತ್ತು ಅದರಿಂದ ಶರೀರದ ವಾತವು ಜಾಸ್ತಿಯಾಗಿ ಅತ್ಯಂತ ಹೆಚ್ಚು ಚಟುವಟಿಕೆಯನ್ನು ಉಂಟುಮಾಡುತ್ತದೆ. ಆದರೆ ಆ ಆಂತರಿಕ ಚಟುವಟಿಕೆಯ ಕಾರಣ ಜೀವಕೋಶಗಳು ರಸವನ್ನೂ, ದ್ರವವನ್ನೂ, ಸ್ನೇಹಾಂಶ(ಜಿಡ್ಡನ್ನೂ) ಕಳೆದುಕೊಂಡು ಒಣಗುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ವಾಸ್ತವದಲ್ಲಿ ಎಲ್ಲರ ಅನುಭವಕ್ಕೆ ಬರುವ ಅತ್ಯಂತ ಸ್ಪಷ್ಟವಾದ ವಿಚಾರ._

  _ಉತ್ಕಾರಿಕಾ(ಹೋಳಿಗೆ)ದಲ್ಲಿ ಬಳಸುವ ಬೇಳೆಯು ತನ್ನ ವಾತವರ್ಧಕ ಗುಣದಿಂದ ಜೀವಕೋಶಗಳನ್ನು ಒಣಗಿಸಬಾರದೆಂದು ಅದಕ್ಕೆ_
• _ಬೆಲ್ಲ(ಸಿಹಿ ರಸ) ಹಾಕುತ್ತಾರೆ_
• _ಬೇಯಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ(ಜಿಡ್ಡು) ಹಾಕುತ್ತಾರೆ_
• _ಅಷ್ಟು ಎಣ್ಣೆ ಹಾಕಿದರೂ ಸಹ, ಈಗಾಗಲೇ ಬೆಲ್ಲದ ಸಿಹಿಯಿಂದ ತೃಪ್ತವಾಗಿದ್ದರೂ ಸಹ ಬೇಳೆಯು ಎಲ್ಲಾ ಎಣ್ಣೆಯನ್ನು ಹೀರಿ ಇನ್ನೂ ಒಣಗಿದಂತೆಯೇ ಇರುತ್ತದೆ_
• _ಹಾಗಾಗಿ ಊಟ ಮಾಡುವಾಗ ಅದಕ್ಕೆ ಹೆಚ್ಚು ತುಪ್ಪವನ್ನು ಬಳಸುತ್ತಾರೆ_
• _ಇನ್ನೂ ಸಾಲದೆಂಬಂತೆ ಸಿಹಿ ಹಣ್ಣುಗಳ ಶೀ(ಸೀ)ಕರಣೆಯನ್ನು ಬಳಸುತ್ತಾರೆ. ಆ ಶೀಕರಣೆಗೆ ಮತ್ತೆ ಬೆಲ್ಲ ಬೆರೆಸುತ್ತಾರೆ!!_

  *ಅಬ್ಬಾ ಪ್ರೋಟೀನ್(ಒಗರು ರಸ) ಪ್ರಧಾನ ಬೇಳೆ ಪದಾರ್ಥಗಳಿಗೆ ಇಷ್ಟೊಂದು ಮಧುರ(ಸಿಹಿ), ಸ್ನಿಗ್ಧ(ಜಿಡ್ಡು) ಪದಾರ್ಥಗಳ ಜೋಡು!!!*

  _ಹಾಗೆಯೇ, ಅಡಿಕೆಯನ್ನು ಬೆಲ್ಲದಲ್ಲಿ ಬೇಯಿಸಿ ಮಾರಾಟ ಮಾಡಿದರೆ, ಅದನ್ನು ತಂದು ತುಪ್ಪದಲ್ಲಿ ಹುರಿದು, ಸಕ್ಕರೆ, ಗುಲ್ಕಂದ ಮುಂತಾಗಿ ಸೇರಿಸಿ ತಿನ್ನುತ್ತೇವೆ!! ಅಲ್ಲವೇ?_

  _ನಮ್ಮ ನೆರೆರಾಜ್ಯದವರಾದ ಆಂಧ್ರಪ್ರದೇಶದಲ್ಲಿ_ *ಬೇಳೆಪಪ್ಪುಗೆ* _ಯಥೇಚ್ಛ ಎಣ್ಣೆ ಬಳಸುತ್ತಾರೆ ಮತ್ತು ಅದನ್ನು ಕೇವಲ ಸಿಹಿ ಮತ್ತು ದ್ರವಪ್ರಧಾನ ಅಕ್ಕಿಯ ಅನ್ನದೊಂದಿಗೆ ಸೇವಿಸುತ್ತಾರೆ, ಚಪಾತಿಯೊಂದಿಗೆ ಅಲ್ಲ._

  _ಉತ್ತರ ಭಾರತದ ಗೋಧಿ ಪದಾರ್ಥಗಳನ್ನು ನೇರ ಬೆಂಕಿಯಲ್ಲಿ ಸುಟ್ಟು ಅದರ ವಾತ ಗುಣವನ್ನು ಕಡಿಮೆ ಮಾಡುತ್ತಾರೆ, ಬಾಟಿ, ಫುಲ್ಕಾ ತಿನ್ನುವಾಗ ಅದಕ್ಕೆ ಯಥೇಚ್ಛವಾಗಿ ತುಪ್ಪ, ಗುಡ(ಬೆಲ್ಲ) ಸೇರಿಸಿಕೊಳ್ಳುತ್ತಾರೆ, ದಾಲ್ ಸೇವಿಸುವುದಿಲ್ಲ. ಅದೇ ಸಿಹಿ-ದ್ರವ ಪ್ರಧಾನ ಅನ್ನಕ್ಕೆ ದಾಲ್(ಬೇಳೆ) ಬಳಸುತ್ತಾರೆ. ದಾಲ್-ಚಾವಲ್ ಪ್ರಚಲಿತವಾಗಿದೆಯೇ ಹೊರತು, ಪ್ರೋಟೀನ್ ಪ್ರಧಾನ ಗೋಧಿಗೆ ಇನ್ನೊಂದು ಪ್ರೋಟೀನ್ ಸೇರಿಸುವ ಅವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ. ಗೋಧಿ ಉತ್ಪನ್ನಗಳ ಜೊತೆಗೆ ಗುಡ-ಘೀ(ಬೆಲ್ಲ-ತುಪ್ಪ) ಬಳಸುತ್ತಾರೆ._
                    •|•|•|•|•|•

  _ಹೀಗೆ ಪ್ರೋಟೀನ್‌ನಲ್ಲಿರುವ ಶಕ್ತಿಯನ್ನು ನಿಯಂತ್ರಣದಲ್ಲಿಡಲು_ *ದ್ರವ, ಮಧುರ, ಸ್ನಿಗ್ಧ* _ಗುಣಗಳು ಅತ್ಯಂತ ಅನಿವಾರ್ಯ. ಜಿಡ್ಡಿಲ್ಲದ ಪ್ರಬಲ ಶಕ್ತಿಯ ಆಕರವಾದ ಪೆಟ್ರೋಲ್ ಬಳಸಿ ದೀಪ ಬೆಳಗಿಸಲಾಗದು, ಆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ, ಅದರ ಬದಲು ಸ್ವಲ್ಪ ಜಿಡ್ಡು ಜಿಡ್ಡಾಗಿರುವ, ಗಟ್ಟಿ ದ್ರವದಿಂದ ಕೂಡಿ, ನಿಯಂತ್ರಿತ ಶಕ್ತಿಯನ್ನು ಹೊಂದಿರುವ ಎಣ್ಣೆಯನ್ನು ಬಳಸಿ ದೀಪ ಬೆಳಗಿಸಬಹುದು._

  _ನಮ್ಮ ಶರೀರದಲ್ಲಿ ನಿಯಂತ್ರಿತ ಶಕ್ತಿ ಇರಬೇಕೇ ಹೊರತು, ಅನಿಯಂತ್ರಿತ ಶಕ್ತಿ ಇರಬಾರದು, ಅದರಿಂದ ಶರೀರ ಶಕ್ತಿಯುತವಾದರೂ ರೋಗಗಳನ್ನು ಉದ್ದೀಪನಗೊಳಿಸುತ್ತದೆ, ಈ ಉದ್ದೀಪಿತ ವಾತದ ಶಕ್ತಿಯಿಂದ - ಮೇಲೆ ತಿಳಿಸಿದ ರೋಗಗಳು ಮಾನವರನ್ನು ಕಾಡುತ್ತವೆ. ಮತ್ತು ನಿಯಂತ್ರಣಕ್ಕೆ ಸಿಗುವುದೇ ಇಲ್ಲ..._

  _ಆತ್ಮೀಯರೇ, ಕೇವಲ ಪ್ರೋಟೀನ್ ಸೇವನೆಯ ದುಷ್ಪರಿಣಾಮ ಊಹೆಗೂ ನಿಲುಕದು, ಅದು ನಿಯಂತ್ರಿತವಾಗಿರಬೇಕಾದುದು ದೀರ್ಘಾಯುಷ್ಯಕ್ಕೆ ಅತ್ಯಾವಶ್ಯಕ. ಇಲ್ಲದಿದ್ದರೆ ಶೀಘ್ರವಾಗಿ ರಕ್ತನಾಳಗಳು ಒಣಗಿ ಅಲ್ಲಲ್ಲಿ ಕಟ್ಟಿಕೊಂಡು ವ್ಯಕ್ತಿ ಅತ್ಯಂತ ದಾರುಣ ಅವಸ್ಥೆ ತಲುಪುತ್ತಾನೆ._
                    •|•|•|•|•|•

  _ಹೆಚ್ಚಿನ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ..._
                    •|•|•|•|•|•

••••••••••••••••••••••••••••••••••••••••••••••••
*ಆತ್ಮೀಯರೇ,*
  _ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಎಷ್ಟು ಪಚನವಾಗುತ್ತದೆ ಎನ್ನುವುದರ ಆಧಾರದಲ್ಲಿ ನಮಗೆ ಶಕ್ತಿ ಲಭಿಸುತ್ತದೆ._

    🙏 *ಧನ್ಯವಾದಗಳು* 🙏
••••••••••••••••••••••••••••••••••••••••

ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ತೆಗೆದುಕೊಳ್ಳುವವರಿಗಾಗಿ ಬೇಕಾಗುವ ದಾಖಲೆಗಳು..

*ಸಂಧ್ಯಾಸುರಕ್ಷ*
 ತಿಂಗಳಿಗೆ 1,000 / - ( ಪಿಂಚನಿ ಯೋಜನೆ )

*ವಯೋಮಿತಿ* :- 65 ರಿಂದ 80 ರ ಒಳಗೆ
ಬೇಕಾಗುವ ದಾಖಲೆಗಳು : 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್‌ಬುಕ್
4 ) ಫೋಟೋ ಒಂದು 

*ಸೀನಿಯರ್ ಸಿಟಿಝನ್ ಕಾರ್ಡ್* 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್ 
3 ) ಫೋಟೋ ಒಂದು

*ಕಿಸಾನ್ ಸನ್ಯಾನ್ ಯೋಜನೆ*
ರೈತರಿಗೆ ವಾರ್ಷಿಕ 6,000 / - ಪಿಂಚನಿ 
( 15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ )
1 ) ಆಧಾರ್ ಕಾರ್ಡ್ 
2 ) RTC
3 ) ಬ್ಯಾಂಕ್ ಪಾಸ್‌ಬುಕ್

*PF Claim ( ಭವಿಷ್ಯ ನಿಧಿ )*
1 ) ಆಧಾರ್ ಕಾರ್ಡ್ 
2 ) ಬ್ಯಾಂಕ್ ಪಾಸ್‌ಬುಕ್
3 ) UAN Number 
4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

*ರೇಷನ್ ಕಾರ್ಡ್ ಹೊಸತು ಮತ್ತು ಸೇರ್ಪಡೆ*
*APL*
1 ) ಆಧಾರ್ ಕಾರ್ಡ್
*BPL*
1 )ಆಧಾರ್ ಕಾರ್ಡ್
2 ) ಆದಾಯ ಪ್ರಮಾಣ ಪತ್ರ

*ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್*
1 ) ಆಧಾರ್ ಕಾರ್ಡ್ 
2 ) ರೇಷನ್ ಕಾರ್ಡ್

*ಪಾನ್ ಕಾರ್ಡ್*
1 ) ಆಧಾರ್ ಕಾರ್ಡ್ 
2 ) 2 ಫೋಟೊ

*ಪಾಸ್‌ಪೋರ್ಟ್*
1 ) ಆಧಾರ್ ಕಾರ್ಡ್
2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ 
3 ) ಬ್ಯಾಂಕ್ ಪಾಸ್ ಬುಕ್

 
*ಕಟ್ಟಡ ಕಾರ್ಮಿಕರ ನೋಂದಾಣಿ ಮತ್ತು ರಿನೆವಲ್*
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್ ಬುಕ್
4 ) ಫೋಟೊ ಒಂದು
5 ) ವೋಟರ್ ಐಡಿ
6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ
7 ) ನಾಮಿನಿ ಆಧಾರ್ 
8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್
9 ) ಮಕ್ಕಳ ಆಧಾರ್ ಕಾರ್ಡ್
10 ) ೨ ಪೋಟೊ

 *ದಯವಿಟ್ಟು ಈ ಯೋಜನೆಯ ಬಗ್ಗೆ  ಜಾಗೃತಿ ಮೂಡಿಸಿ**

*ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ  ಈ ಸುದ್ದಿಯನ್ನ ದಯವಿಟ್ಟು  ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ* 

       *ಕಾರ್ಮಿಕ ಕಾರ್ಡ್*

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 *ಉಪಯೋಗಗಳು*
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/- 
 
ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ವಯಸ್ಸಿನ ಮಿತಿ 18 ರಿಂದ 55 ವರ್ಷ.

 *ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ* 

*ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ*

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ 
      👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

*ಅರ್ಜಿ ನಮೂನೆಯನ್ನು*

 *ವಿಧವೆಯಾರಿಗಾಗಿ*
*(ಕೇಂದ್ರ ಸರ್ಕಾರ ಸ್ಕೀಮ್)*
********************
ರಾಷ್ಟ್ರೀಯ ಕುಟುಂಬ  ಸಹಾಯಧನ ಯೋಜನೆ
ವಿಧವೆ ಸ್ರೀಯರಿಗೆ  20000/-ರೂಪಾಯಿ ಧನಸಹಾಯ ಯೋಜನೆ.

*ಅರ್ಜಿ ಹಾಕಬೇಕಾಗಿರೋದು ಅವರವರ ಊರಿನ ಗ್ರಾಮಲೆಕ್ಕಿಗರಿಗೆ(VA).*

*ಅರ್ಜಿಯೊಂದಿಗೆ :*
•ಆಧಾರ್ ಕಾರ್ಡ್(ಗಂಡ & ಹೆಂಡತಿ ಇಬ್ಬರ ಆಧಾರ್ ಕಾರ್ಡ್)
•ರೇಷನ್ ಕಾರ್ಡ್
•ಬ್ಯಾಂಕ್ ಖಾತೆ
•ಗಂಡನ ಡೆತ್ ಸರ್ಟಿಫಿಕೇಟ್
 xerox ಕಾಪಿ ಸೇರಿಸಿ ಕೊಡಬೇಕು.

🛑ಸೂಚನೆ‼️
*ಮರಣ ಹೊಂದಿದ ವ್ಯಕ್ತಿ 60ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಮರಣ ಹೊಂದಿದ 6 ತಿಂಗಳ ಒಳಗೆ ಅರ್ಜಿಹಾಕತಕ್ಕದ್ದು*

ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ ವಿದವೆಯರಾದ ಸ್ತ್ರೀಯರಿಗೆ ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ*

*ಅರ್ಜಿ ಸಲ್ಲಿಸಲು ಕಚೇರಿಯಲ್ಲಿ  ವಿಚಾರಗಳನ್ನು ತಿಳಿಯಬಹುದು.

*1.ಮನೆ ನಿರ್ಮಾಣಕ್ಕೆ ಸಹಾಯಧನ:*

*a)* ಹಳೆ ಮನೆ / ಖಾಲಿ ಜಾಗ ಇದ್ದವರಿಗೆ ನಗರ ಪ್ರದೇಶದವರಿಗೆ:
ವಾಜಪೇಯಿ ವಸತಿ ಯೋಜನೆ 2.7 ಲಕ್ಷ (1.2  state Govt + 1.5 Central Govt)ಹಂತ ಹಂತದಲ್ಲಿ ಹಣ ಬಿಡುಗಡೆ.

*b)* ಹಳೆ ಮನೆ / ಖಾಲಿ ಜಾಗ ಇದ್ದ  ಗ್ರಾಮೀಣ ಪ್ರದೇಶದವರಿಗೆ: (ಮಹಿಳಾ ಅರ್ಜಿದಾರರಿಗೆ)
ಬಸವ ವಸತಿ ಯೋಜನೆ 1.2 ಲಕ್ಷ + 20000 (ನರೇಗಾ ಜಾಬ್ ಕಾರ್ಡ್ ಮಾಡಿದ್ದಲ್ಲಿ ಮಾತ್ರ)
ಹಂತ ಹಂತದಲ್ಲಿ ಹಣ ಬಿಡುಗಡೆ.

*ಅರ್ಜಿ ಸಲ್ಲಿಸುವುದು*: ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆ /Self in Online  (ಪ್ರಧಾನ ಮಂತ್ರಿ ಆವಾಸ್ ಯೋಜನೆಯ http://pmaymis.gov.in/  ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಅದು ಆಯಾ ವ್ಯಾಪ್ತಿಯ ಗ್ರಾಮ ಪಂ/ ನಗರಪಾಲಿಕೆಗಳಿಗೆ ರವಾನೆಯಾಗುತ್ತದೆ)

*ಬೇಕಾದ ದಾಖಲೆಗಳು* 
1. ಆರ್ ಟಿ ಸಿ. Copy.
2.ಒಪ್ಪಿಗೆ ಪತ್ರದ.
3.ಖಾತೆ ಪತ್ರದ copy.
4 Aadar Card copy.
5.Ration Card.
6. Voter Id copy.
7.Bank PassBook Copy
8.Income & Caste Certificate copy
9.Passport size photo-1
(ಅರ್ಜಿದಾರರು ಅಲ್ಲದ ಮನೆಯ ಇತರ ಸದಸ್ಯರ ಹೆಸರಿನಲ್ಲಿ ಆರ್ ಟಿ ಸಿ ಇದ್ದಲ್ಲಿ ಅವರಿಂದ ಒಪ್ಪಿಗೆ ಪತ್ರ)

*2.ಜಾಗ ಇಲ್ಲದವರು ನಿವೇಶನಕ್ಕಾಗಿ ಅರ್ಜಿ*
ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆಗಳಲ್ಲಿ ಅರ್ಜಿ ಸಲ್ಲಿಸುವುದು.
1.Aadar Card copy
2.Ration Card
3.Voter Id copy
4.Bank PassBook Copy
5.Income & Caste Certificate copy

*ನಿವೇಶನ (ಜಾಗ) ಮಂಜೂರಾದಲ್ಲಿ ವಾಜಪೇಯಿ ವಸತಿ ಯೋಜನೆ / ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಧನಸಹಾಯ ಕೂಡ ಪಡೆಯಬಹುದು*

*3.ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್:*
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕುಗಳಲ್ಲಿ ಆರು ಲಕ್ಷ ಲೋನ್ ಪಡೆದಲ್ಲಿ ಬಡ್ಡಿ ಮೊತ್ತ 6 % ರಂತೆ ಸುಮಾರು ಎರಡು ಲಕ್ಷದವರೆಗೆ ಸಬ್ಸಿಡಿ ಕೇಂದ್ರ ಸರಕಾರದಿಂದ ಖಾತೆಗೆ ಬೀಳಲಿದ್ದು, ಉಳಿದ ಹಣ ಪಾವತಿಮಾಡಬೇಕು. ಯೋಜನೆಗೆ ಅರ್ಜಿಯನ್ನು ಬ್ಯಾಂಕ್ ಮೂಲಕವೇ ಸಲ್ಲಿಸುವುದು.

*4.* ಗ್ರಾಮೀಣ ಪ್ರದೇಶದವರಿಗೆ ನರೇಗಾ ಯೋಜನೆ ಅಡಿಯಲ್ಲಿ ಬಾವಿ ತೋಡಲು ಸುಮಾರು 1 ಲಕ್ಷದ ವರೆಗೂ & ದನದ ಕೊಟ್ಟಿಗೆ ಗೆ 16000 ವರೆಗೂ ಸಹಾಯಧನವಿದೆ.



1) *ಸ್ವಯಂ ಉದ್ಯೋಗ ಯೋಜನೆ*
2) *ಸ್ವಯಂ ಉದ್ಯೋಗ ಯೋಜನೆ*
3) *ಶ್ರಮಶಕ್ತಿ ಯೋಜನೆ* 
4)    *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
5)    *ಕಿರುಸಾಲ ಯೋಜನೆ*
6)    *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*
7)    *ಗಂಗಾಕಲ್ಯಾಣ ಯೋಜನೆ* 
8)    *ಪಶು ಸಂಗೋಪನಾ ಯೋಜನೆ*
9)    *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ* 

1) *ಸ್ವಯಂ ಉದ್ಯೋಗ ಯೋಜನೆ*: 

  ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್ಗವಳು/ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5.00 ಲಕ್ಷ ರೂವರೆಗೆ ಆರ್ಥಿಕ ನೆರವು ಒದಗಿಸುವುದು. ಘಟಕ ವೆಚ್ಚ 5,00,000/- ರೂಗಳವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1,65,000/-ಗಳ ಸಹಾಯಧನ ಹಾಗೂ ಘಟಕವೆಚ್ಚದ ರೂ.1,00,000/-ರೂಗಳ ಒಳಗೆ ಇರುವ ಚಟುವಟಿಕೆಗಳಿಗೆ ಶೇಕಡಾ 50% ಅಥವಾ ಗರಿಷ್ಟ ಮಿತಿ ರೂ. 35,000/- ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ಗಿಳು ಭರಿಸುವುದು. 
ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಕೊಟೇಶನ್/ಯೋಜನಾವರದಿ ಮತ್ತು ಲೈಸಸ್ಸ್ 
4.)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನುಾ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರಣ  ಪತ್ರ) 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು 
8)ಅರ್ಜಿದಾರರು ಬ್ಯಾಂಕ್ ಪ್ರಭಂದಕರನ್ನು ಸಂರ್ಪಕಿಸಿ ಸಾಲ ನಿಡುವ ಬಗ್ಗೆ ಕಚಿತಪಡಿಸುವುದು.

2) *ಶ್ರಮಶಕ್ತಿ ಯೋಜನೆ*
 
ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಡು ಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿಕುಲಕಸುಬುದಾರರು ಆಧುನಿಕತಂತ್ರಜ್ಞಾನ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯಾ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ, „ಶ್ರಮಶಕ್ತಿ‟ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಸಾಂಪ್ರದಾಯಿಕ ವೃತ್ತಿ ಕುಲಕಸುಬುಗಳಾದ ಅಟೋಮೊಬೈಲ್ರಿಿಪೇರಿ ಮತ್ತು ಸರ್ವಿಸಿಂಗ್, ಗ್ಯಾಸ್ ಅಂಡ್ ಅರ್ಕ್ ವೆಲ್ಡಿಂಗ್, ಬೆಡ್ ಮೇಕಿಂಗ್, ವಲ್ಕನೈಸಿಂಗ್ ಮರದಕೆತ್ತನೆ ಕೆಲಸ, ಬಡಗಿ, ಟೈಲರಿಂಗ್, ಬಟ್ಟ ಮೇಲೆ ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ, ಬೆತ್ತದ ಕೆಲಸ ಸಿಲ್ಕ್ ರೀಲಿಂಗ್ ಮತ್ತು ಟ್ವಸ್ಟಿಂಗ್ ಕೆಲಸ, ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಮರದ ಆಟಿಕೆ ತಯಾರಿಕೆ ಮಂಡಕ್ಕೆ ಬಟ್ಟಿ, ಅವಲಕ್ಕೆ ಬಟ್ಟಿ, ಬಿದರಿ ವರ್ಕ್, ಕುಮ್ಮಾರಿಕೆ, ಎಲೆಕ್ಟೀಕಲ್ ವೈರಿಂಗ್ ಅಂಡ್ ರೀವೈಡಿಂಗ್ ಆಫ್ ಮೋಟಾರ್ಸ್, ಮೀನುಗಾರಿಕೆ ಸಲಕರಣೆ ಖರೀದಿ, ಹ್ಯಾಂಡಿಕ್ರಾಪ್ಟ್, ಹೈನುಗಾರಿಕೆ, ಕಲ್ಲುಕತ್ತನೆ ಕೆಲಸ, ಪಾತ್ರೆ ತಯಾರಿಕೆ, ಕಲಾಯಿ ಕೆಲಸ, ಸುಣ್ಣದಕಲ್ಲು ಸುಡುವಿಕೆ, ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಅಡಿಕೆತಟ್ಟೆ ಕಾಗದ ತಟ್ಟೆ ತಾಯಾರಿಕೆ, ಕಿರಾಣಿ ಅಂಗಡಿ, ಫಾಸ್ಟ್ ಪುಡ್ ಸೆಂಟರ್, ಬೇಕರಿ ಮತ್ತು ಕಾಂಡಿಮೆಂಟ್ಸ್, ತಂಪು ಪಾನೀಯ, ಕಬ್ಬಿನರಸ, ರೇμÉ್ಮ/ಹತ್ತಿ ನೇಕಾರಿಕೆ, ಏಲಕ್ಕಿ ಹಾರತಯಾರಿಕೆ, ಮೇಣದ ಬತ್ತಿ ತಯಾರಿಕೆ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಪೊರಕೆ ತಯಾರಿಕೆ, ಸೋಫಾ ಸೆಟ್ ತಯಾರಿಕೆ, ಬ್ಯೂಟಿ ಪಾರ್ಲರ್, ಎಲೆಕ್ಟಿಕಲ್ ಲಾಂಡ್ರಿ ಎ.ಸಿ/ಪ್ರಿಡ್ಜ್ರಿಪೇರಿ, ಜರ್ಡೋಸಿ/ಎಂಬ್ರಾಯಿಡರಿ, ಫೋಟೋ ಫ್ರೇಮಿಂಗ್ ಮುಂತಾದ ಅವಶ್ಯಕತೆಗೆ ಇರುವ ಯಂತರೋಪಕರಣಗಳು/ಸಲಕರಣೆಗಳು ಹಾಗೂ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು ರೂ. 50,000/- ದವರೆಗೆ ಸಾಲ:ಸಹಾಯಧನ ಸೌಲಭ್ಯವನ್ನು ನೀಡಲಾಗುವುದು. ಘಟಕ ವೆಚ್ಚ ರೂ. 50,000/-ಗಳ ಸಾಲದ ಮಂಜೂರಾತಿಯು ಸಾಂಪ್ರದಾಯಿಕ (ಪರಂಪರಾಗತ ಕುಶಲಕಮಿಗಳು/ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕೆತೆ ಮತ್ತು ಆದಾಯಗಳಿಕಗೆ ಅನುಗುಣವಾಗಿ ರೂ.25,000/-ಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇಕಡಾ 50% ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇಕಡಾ 4%ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು. 

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2).ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ ಮತ್ತು ಲೈಸಸ್ಸ್ 
4)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5)ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರ ಪತ್ರ) 
7)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

3) *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
 
ಈ ಯೋಜನೆಯ ಅಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್(ಎಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೋಮಾ, ನರ್ಸಿಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್ ಮೈಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಕಲ್ ಮ್ಯಾನೆಜ್ಮೆಂ ಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ. 10,000/- ದಿಂದ ರೂ.75,000/-ದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯು ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ. 

‘ಅರಿವು’ (CET) ಯೋಜನೆ
 
ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಕಿಂಗ್ ಪಡೆದು ವೃತ್ತಿಪರಶಿಕ್ಷಣಕ್ಕೆ ಸೀಟನ್ನು ಆಯ್ಕೆಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಏಇಂ ಮೂಲಕ ಪಾವತಿಸುತ್ತದೆ.
 
‘ಅರಿವು’ (NEET) ಯೋಜನೆ 

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ, ಅವರ ಬೋಧನಾ ಶುಲ್ಕದ ಸರ್ಕಾರಿ ಸೀಟ್ನಂ ಶೇ.100ರಷ್ಟು ಅಥವಾ ಖಾಸಗಿ ಸೀಟ್ನಹ ಶೇ.50ರಷ್ಟು ಸಾಲವನ್ನಾಗಿ ಮಂಜೂರು ಮಾಡಲಾಗುತ್ತದೆ. 

ಬೇಕಾಗುವ ದಾಖಲಾತಿಗಳು: 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 6,00,000/-ರೂಗಳ ಒಳಗಿರಬೇಕು. 
2) ವಿದ್ಯಾರ್ಥಿಯ 4 ಭಾವಚಿತ್ರ ಮತ್ತು ತಂದೆ ಅಥವಾ ತಾಯಿಯ 2 ಭಾವಚಿತ್ರ. 
3)ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
4) ಎಸ್.ಎಸ್.ಎಲ್.ಸಿ, ಡಿಪ್ಲೋಮಾ, ಪಿಯುಸಿ, ಡಿಗ್ರಿ ಮತ್ತು ಸೆಮಿಸ್ಟರ್ ಮಾಕ್ರ್ಸ್ ಕಾರ್ಡ್(ದೃಡಿಕರಿಸಿದ ಪ್ರತಿ)
5) ಸ್ಟಡಿ ಸರ್ಟಿಫಿಕೇಟ್ ಮೂಲ ಪ್ರತಿ
6)ಫೀಸ್ ಸ್ಟ್ರಕ್ಚರ್ (ಒಟ್ಟು ವ್ಯಾಸಂಗದ ಅವಧಿ). 
7) ಸಿಇಟಿ/ನೀಟ್ ಪ್ರಮಾಣ ಪತ್ರದ ಜರಾಕ್ಸ್. 
8) 50 ರೂಪಾಯಿಯ ಛಾಪಾ ಕಾಗದ (Indemnity Bond) ತಂದೆ ಅಥವಾ ತಾಯಿಯ ಹೆಸರಿನಲ್ಲಿ (ನೋಟರಿಯೊಂದಿಗೆ) 2nd Party DM KMDC  ಎಂದು ನಮೂದಿಸಬೇಕು. 
9) ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ ಬ್ಯಾಂಕ್ ಖಾತೆ, (Bank name, Account payee name, Account number, ifsc code) ಮತ್ತು ಇಮೇಲ್ ಐಡಿ.

4) *ಕಿರುಸಾಲ ಯೋಜನೆ*. 

ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮತೀಯ ಅಲ್ಪಸಂಖ್ಯಾತರು ಸಾಮನ್ಯಾವಾಗಿ ಅನಕ್ಷರಸ್ಥರಾಗಿದ್ದು, ಅಂತಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವಾ ಕುಶಲಯಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. 
ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗುಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ ಸಹಾಯ ಗುಂಪುಗಳು ಮೂಲಕ ಯೋಜನೆಯನ್ನು ಸಿದ್ದಪಡಿಸಿ ಅನುμÁ್ಠನಗೊಳಿಸಬುದಾಗಿದೆ. ಸ್ವ-ಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದಲ್ಲ. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇಕಡ 50 ರಷ್ಟು ಸಹಯಾಧನ, ಗರಿಷ್ಟ ರೂ.5,000/-ಗಳು ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕಿನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವ ಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇಕಡ 5ರಬಡ್ಡಿ ದರದಲ್ಲಿ ನೀಡಬೇಕು. 

ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಸಂಘದ ಹೆಸರಿನ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ. ಮತ್ತುssಸಂಘ ರಚನೆಯಾಗಿ  ಕನಿಷ್ಟ 1 ವರ್ಷ ಆಗಿರಬೇಕು 
6) ಬ್ಯಾಂಕ್ ಬೇ ಬಾಕಿ ಪ್ರಮಾಣ ಪತ್ರ. 
7) ಸಂಘದ ನಡಾವಳಿ ಪುಸ್ತಕ. 
8) ಸ್ವಸಹಾಯ ಗುಂಪಿನ ಗಾತ್ರ ಕನಿಷ್ಟ 10 ರಿಂದ ಗರಿಷ್ಟ 20 ಸದಸ್ಯರ ಮಿತಿಯಲ್ಲಿರಬೇಕು.
9)ಪ್ರತಿ ಸದಸ್ಯರ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜರಾಕ್ಸ್ಪ್ರರತಿ. 
10)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 10) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು. 

5) *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*  (Minoritys Farmers Scheme) :

ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ಕೀಳುವ ಯಂತ್ರ, ಪಂಪ್ಸೆ ಟ್, ಟ್ರಾಕ್ಟರ್, ಮುಂತಾದ ನೂತನ ಕೃಷಿ ಸಲಕರಣಿಗಳನ್ನು sಶೇ.50 ರಷ್ಟು ಸಹಾಯಧನ ಸೇರಿ ಗರಿಷ್ಟ 1 ಲಕ್ಷ ರೂ. ಘಟಕ ವೆಚ್ಚದಲ್ಲಿ ನೀಡಲಾಗುವುದು.

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
2)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ)
3) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
4) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್
5) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
6) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು್ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
7) )ಆರ್.ಟಿ.ಸಿಯ ಮೂಲಪ್ರತಿ  
8) ಕೊಟೇಶನ್  
9) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ(Affidavit).
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ (Affidavit).

6) *ಗಂಗಾಕಲ್ಯಾಣ ಯೋಜನೆ*
 
ಈ ಯೋಜನೆಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಯಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2.00 ಲಕ್ಷ ರೂಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ತೆರೆದ ಬಾವಿ ಕೊರೆಯಿಸಿ ಪಂಪ್ಸೆ ಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸುವುದು.
ಬೇಕಾಗುವ ದಾಖಲಾತಿಗಳು : 

1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/
2) ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಆರ್.ಟಿ.ಸಿಯ ಮೂಲಪ್ರತಿ ಹಾಗೂ ಅರ್ಜಿದಾರರ 4 ಭಾವಚಿತ್ರ 
4) ಇಸಿ, ಭೂ ನಕ್ಷೆ, ವಂಶವೃಕ್ಷ(ಸಂತತಿ ನಕ್ಷೆ) ಮತ್ತು ಕಂದಾಯ ರಶೀದಿ ಮೂಲ ಪ್ರತಿ 
5) ಸಣ್ಣ ಹಿಡುವಳಿದಾರರ ಪ್ರಮಾಣಪತ್ರ.(ತಹಶೀಲ್ದಾರರಿಂದ) 
6).ಕೃಷಿ ಅವಲಂಬಿತರಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಂದ ದೃಢೀಕರಣ ಪತ್ರ. 
7) ಬೇರೆ ನೀರಾವರಿ ಸೌಲಭ್ಯ ಇಲ್ಲದ ಬಗ್ಗೆ ಸ್ವಯಂ ಘೋಷಣಾ ಪತ್ರ. 
8) ಕೊಳವೆ ಬಾವಿ ಕೊರೆಯುವ ಬಗ್ಗೆ ಗ್ರಾಮ ಪಂಚಾಯತ್ನ  ಪಿ.ಡಿ.ಒ ರಿಂದ ಪಡೆದ ಆಕ್ಷೇಪಣಾ ರಹಿತ ಪ್ರಮಾಣ ಪತ್ರ. 9)ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಮಾಣ ಪತ್ರ. 
10) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 11)ಅರ್ಜಿದಾರರ ವಯಸ್ಸು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

7) *ಪಶು ಸಂಗೋಪನಾ ಯೋಜನೆ*
 
ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ.50 ರಷ್ಟು ಸಹಾಯಧನ ಸೇರಿ ರೂ.40,000 ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ.100ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗುವುದು. 

ಬೇಕಾಗುವ ದಾಖಲಾತಿಗಳು: 
1) ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 1,03,000/- ಒಳಗಿರಬೇಕು. 
2) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಜಾನುವಾರು ಮೌಲ್ಯ ಬಗ್ಗೆ ಪಶು ವೈದ್ಯಾದಿಕಾರಿಯಿಂದ ಪ್ರಮಾಣ ಪತ್ರ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ). 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
8) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ
9) ಕಳೆದ 05 ವರ್ಷಗಳಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

8) *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*
 
ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದವರು ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿಧ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಗದೇ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಟ 3.00ಲಕ್ಷಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಟ ರೂ. 4.00 ಲಕ್ಷಗಳಿಂದ ಗರಿಷ್ಟ ರೂ. 7.50ಲಕ್ಷಗಳಾಗಿರತಕ್ಕದ್ದು (ತೆರಿಗೆಯನ್ನು ಹೊರತುಪಡಿಸಿ). 

ಬೇಕಾಗುವ ದಾಖಲಾತಿಗಳು: 
1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
 2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
3ಕೊಟೇಶನ್ ಮತ್ತು ಲೈಸಸ್ಸ್ ಬ್ಯಾಡ್ಜ್ನೊಂ.ದಿಗೆ. 
4. ಅರ್ಜಿದಾರರ  ತಲಾ ಮೂರು ಭಾವಚಿತ್ರ. 
5. ಅರ್ಜಿದಾರರ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ. 
6. ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
7.ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ  ಪತ್ರ) 
8. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
9. ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ. 
10. ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
11. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.




 ಇದರ ಅಡಿಯಲ್ಲಿ ತಮ್ಮ ಹತ್ತಿರದ  ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ ಉದ್ಯೋಗ ಚೀಟಿ (job card) ಮಾಡಿಸಿ ಕೊಳ್ಳಲು ವಿನಂತಿ.  

ಒಂದು ಕುಟುಂಬಕ್ಕೆ 150 ದಿನಗಳ ಉದ್ಯೋಗ ಖಾತರಿ,ಒಂದು ದಿನಕ್ಕೆ 249/-ಕೂಲಿ ದರವನ್ನಾಗಿ ನಿಗದಿ ಪಡಿಸಲಾಗಿದೆ. 

ಇದರ ಮುಖ್ಯ ಉದ್ದೇಶ ಗ್ರಾಮೀಣ ಬಡ ಜನರಿಗೆ ಆಧಾರವಾಗಿ ನೈಸಗ೯ಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥಿ೯ಕ ಭದ್ರತೆ ಒದಗಿಸುವುದು ಮತ್ತು ಆಸ್ತಿ ಸೃಜನೆ ಮಾಡುವುದಾಗಿದೆ.

 ಇದರಿಂದಾಗುವ ಪ್ರಯೋಜನಗಳು:-

1.ಸಕಾ೯ರದಿಂದ ವಸತಿ ಮಂಜೂರಾದರೆ ಈ ಯೋಜನೆಯ ಅಡಿಯಲ್ಲಿ ಕೂಲಿ ಹಣ 22,410 ರೂ/- ದೊರೆಯುತ್ತದೆ.

2.ದನದ ಕೊಟ್ಟಿಗೆ ,ಕುರಿ ಶೆಡ್,ಮೇಕೆ ಶೆಡ್,ಕೋಳಿ ಶೆಡ್,ಹಂದಿ ಶೆಡ್ ನಿಮಾ೯ಣಕ್ಕೆ 43,000/- ದೊರೆಯುತ್ತದೆ.

3. ಜಮೀನು ಸಮತಟ್ಟು ಮಾಡಲು 10,000/- ದೊರೆಯುತ್ತದೆ.

4. ಜಮೀನಿನಲ್ಲಿ ತಡೆ ಗೋಡೆ( ರಿವೀಟ್ ಮೆಂಟ್ ) ಕಟ್ಟಲು ಪ್ರತೀ ರೈತರಿಗೆ 1 ಲಕ್ಷ ರೂ/- ವರೆಗೆ ದೊರೆಯುತ್ತದೆ.

5.ಜಮೀನಿನಲ್ಲಿ ಕೃಷಿ ಹೊಂಡ ನಿಮಾ೯ಣ ಮಾಡಲು 43.000/- ದೊರೆಯುತ್ತದೆ.

6.ಜಮೀನಿನಲ್ಲಿ ಕೊಳವೆ ಬಾವಿಗೆ ಹಿಂಗು ಗುಂಡಿ ನಿಮಾ೯ಣ ಮಾಡಲು 19.000/- ದೊರೆಯುತ್ತದೆ.

7. ಮನೆಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗೆ 30.000/- ದೊರೆಯುತ್ತದೆ.

8. ತಮ್ಮ ಜಮೀನುಗಳಲ್ಲಿ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳು

   ಬೆಳೆ         ಹೆಕ್ಟೇರ್ ಗೆ

a. ತೆಂಗು   - 62.496/-
b. ಗೇರು    - 72.048/-
c. ಮಾವು,ಸಪೋಟ  - 101957 
d. ದಾಳಿಂಬೆ - 59879/-
e. ಸೀಬೆ  -  94704/-
f.  ಸಿಟ್ರಸ್ - 71316/-
g. ಹುಣಸೆ - 94704/-
h.ಸೀತಾಫಲ  -  53330/-
i. ನುಗ್ಗೆ     -    116996/-
j. ಬಾಳೆ   -    211656/-
k. ಪಪ್ಪಾಯ - 205498/- 

9. ತೇಗ, ವನ್ನೆ, ಬೀಟೆ, ಶ್ರೀಗಂಧ,ಅಕೇಶಿ, ರಕ್ತಚಂಧನ, ಸಿಲ್ವರ್, ಟೇಕ್ ಇತರೆ ಜಾತಿಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಲು MGNREGA  ಯೋಜನೆಯಲ್ಲಿ ಸಹಾಯ ಧನ  ದೊರೆಯುತ್ತದೆ.

10. ಹಿಪ್ಪುನೇರಳೆ ಹೊಸ ನಾಟಿ ಮತ್ತು ಹಿಪ್ಪುನೇರಳೆ ಮರದ ಕಡ್ಡಿ ನೆಡಲು ಸಹಾಯ ಧನ ದೊರೆಯುತ್ತದೆ.

11. ಮೀನು ಸಾಕಾಣಿಕೆ ತೊಟ್ಟಿ ನಿಮಿ೯ಸಲು ಸಹಾಯ ಧನ ದೊರೆಯುತ್ತದೆ.



1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. ​ವಿದ್ಯಸಿರಿ​ ​ಮತ್ತು ಶುಲ್ಕ​ ​ವಿನಾಯಿತಿ​
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. ​ಸರ್ಕಾರದ​ ​ಧನಸಹಾಯಗಳ​ ​ವೆಬ್ ವಿಳಾಸ​

http://karepass.cgg.gov.in/ 

14. ​ಜಿಂದಾಲ್ scholarship​

 http://www.sitaramjindalfoundation.org/scholarships.php 

15. ​B.L ಹೇಮವತಿ ಧನಸಹಾಯ​

 http://www.blhtrust.org/schpro.html 

16. ​ಕೇಂದ್ರ ಸರ್ಕಾರದ ಧನಸಹಾಯಗಳು​

Central Govt Scholarship

     http://mhrd.gov.in/ 

Thursday 15 July 2021

Learners Tech

CLICK HERE TO VIEW

ಶಿಕ್ಷಕರ ವೇದಿಕೆ

CLICK HERE TO VIEW

ಕಗ್ಗ

CLICK HERE TO DOWNLOAD

HIGH SCHOOL MITR

CLICK HERE TO VIEW

ತನ್ವಿ ಚಿತ್ರಕಲಾ ಅಕಾಡೆಮಿ

ತನ್ವಿ ಚಿತ್ರಕಲಾ ಅಕಾಡೆಮಿ

ಸಕಾಲ

ಸಕಾಲ ಆನ್ ಲೈನ್ ಮಾಹಿತಿ

ಡಿ.ಎಸ್.ಇ.ಆರ್.ಟಿ ಯಿಂದ 4ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರಕಟಿಸಿರುವ ಅಭ್ಯಾಸ ಪುಸ್ತಕಗಳು

CLICK HERE TO DOWNLOAD

Tuesday 13 July 2021

ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ e- ಸಾಹಿತ್ಯ...

ಕರ್ನಾಟಕ ಸರ್ಕಾರ
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ1063044 e-ಪುಸ್ತಕಗಳು 63550 ಜರ್ನಲಗಳು 6858 ಮೌಲ್ಯಮಾಪನಗಳು  ಜೊತೆಗೆ ರಸಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು344 ಸಿಮ್ಯುಲೇಶನ ಲ್ಯಾಬಗಳನ್ನು ಕೂಡ ನೋಡಬಹುದು.ಕಲೆ,ವಾಣಿಜ್ಯ,ಲಿಟರೇಚರ್ ,ರ್ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ,ವಾಣಿಜ್ಯ ಸಾಹಿತ್ಯ,ಬಿಡುವಿನ ವೇಳೆಯಲ್ಲಿ ಸಾಹಿತ್ಯ ,ಮ್ಯಾಗ್ಜಿನ್ ಗಳು ನ್ಯೂಸ್ ಪೇಪರ್ ಗಳು,ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ,ಶಾಲೆ,ವಿಜ್ಞಾನ ಮತ್ತು ತಂತ್ರಜ್ಞಾನ,ಅಂತರರಾಷ್ಟ್ರೀಯ ವಿಡಿಯೋಗಳು ಲಭ್ಯ ಇವೆ.

CLICK HERE TO DOWNLOAD

Sunday 11 July 2021

ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು..

ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ  ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ.

·         ಚಹಾ ಅಥವಾ ಕಾಫಿಯ ಖಾಲಿ ಸೇವನೆಯು ಹಾನಿಕಾರಕವಾಗಿದೆ.

·         ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಎಂದಿಗೂ ಸೇವಿಸಬೇಡಿ.

·         ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. 


ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ. ಹಾಗಿ ಬೆಳಗಿನ ಉಪಹಾರದಲ್ಲಿ ಯಾವಾಗಲೂ ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಾಹಾರದಲ್ಲಿ ಹುಳಿ ವಸ್ತುಗಳನ್ನು ತಪ್ಪಿಸಬೇಕು.  ಏಕೆಂದರೆ ಅವುಗಳ ಸೇವನೆಯು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸಬೇಡಿ: 
1. ಟೀ-ಕಾಫಿ: 
ಹೆಚ್ಚಿನವರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹಾನಿಕಾರಕ. ಹಾಗಾಯಿ ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯುವಾಗ ಬಿಸ್ಕೆಟ್  ಆದರೂ ಜೊತೆಗಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸುವುದರಿಂದ ಆಸಿಡಿಟಿ  ಉಂಟಾಗುತ್ತದೆ.

2.  ಪೇರಳೆ ಹಣ್ಣು : ಪೇರಳೆ ಹಣ್ಣು ಜೀರ್ಣಕ್ರಿಯೆಗೆ  ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ  ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಹಣ್ಣು  ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು. 

3.  ಸೇಬುಹಣ್ಣು : ವಿಟಮಿನ್ ಎಬಿಸಿಕ್ಯಾಲ್ಸಿಯಂಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇಬಿನಲ್ಲಿ ಹೇರಳವಾಗಿ ಕಂಡುಬರುತ್ತವೆ.  ಇವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸುವುದು ಹಾನಿಕಾರಕವಾಗಿದೆ. 

4. ಸಲಾಡ್: ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಲಾಡ್ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಸೇವಿಸುವುದರಿಂದ ಆಸಿಡಿಟಿ  ಮತ್ತು ಎದೆಯುರಿ ಉಂಟಾಗುತ್ತದೆ.

Friday 25 June 2021

ಸೇತುಬಂಧ ಕಾರ್ಯಕ್ರಮ ವಿವರಣೆ ಇಲಾಖೆಯ ವೆಬ್ನಲ್ಲಿ ನಭ್ಯವಿದೆ..

*👆ಸಾರ್ವಜನಿಕ ಶಿಕ್ಷಣ ಇಲಾಖೆ , ಡಿಎಸ್ಇಆರ್.ಟಿ ಯಿಂದ ಬಿಡುಗಡೆಗೊಂಡ 2020 -21 ನೇ ಸಾಲಿನ ಸೇತುಬಂಧ ಸಾಹಿತ್ಯ*👇👇 ಅಧಿಕೃತವಾದದ್ದು.

CLICK HERE TO DOWNLOAD

Saturday 19 June 2021

ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ.

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
20.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :62
•••••••••
✒️ ಇಂದಿನ ವಿಷಯ:
ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ. 
•••••••••••••••••••

ರಾಸಾಯನಿಕ ಸಂಘಟನೆಗಳ ಆಧಾರದ ಮೇಲೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಅನುಚಿತ ನಿರ್ಧಾರಗಳಿಂದ ಹೆಸರಾಂತ ಆಹಾರ ತಜ್ಞರು, ವೈದ್ಯರೂ ಸೇರಿದಂತೆ ಅಲ್ಪ ಮಾಹಿತಿ ಹೊಂದಿದವರೂ ಸಹ ಇಂಥದೇ ಆಹಾರ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದೆಂದು ಸಾರುತ್ತಿದ್ದಾರೆ. 

ಈ ರೀತಿಯ ಅನುಚಿತ ಹೇಳಿಕೆಗಳಲ್ಲಿ ಖಾದ್ಯ ತೈಲವೂ ಸೇರಿಕೊಂಡುಬಿಟ್ಟಿದೆ. ರಿಫೈನ್ಡ್ ಎಣ್ಣೆಯ ಬಳಕೆ ದೋಷಪೂರಿತವಾದುದು ಎಂದು ತಿಳಿದಮೇಲಂತೂ ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ದೊರೆಯುವ ಖಾದ್ಯ ತೈಲವನ್ನು ಇಡೀ ಜಗತ್ತಿಗೆ ಹಂಚಲು ಅಸಾಧ್ಯವೆಂದು ತಿಳಿದೂ ಸಹ ಅದರ ಗುಣವಿಶೇಷಗಳನ್ನು ಹೋಗಳುತ್ತ ಅದನ್ನು ಬಳಸುವವರು ಶ್ರೇಷ್ಠ ಎಂತಲೂ ,ಅದನ್ನು ಬಳಸದವರು ಏನೋ ಕಳೆದುಕೊಂಡವರಂತೆ ಕೀಳರಿಮೆಯಿಂದ ಬಾಳುವಂತಾಗುತ್ತಿದೆ. 
ಇದು ಪಾಶ್ಚಾತ್ಯರ ವ್ಯಾಪಾರೀಕರಣದ ಭಾವಧೋರಣೆ. ಆಲೀವ್ ಆಯಿಲ್ ಅನ್ನು ಹೆಚ್ಚು ಪ್ರಚಾರ ಮಾಡುವ ಅವರ ಹಾದಿಯನ್ನೇ ಅನುಸರಿಸಿ ಕೇವಲ ಕೊಬ್ಬರಿ ಎಣ್ಣೆಯೊಂದೇ ಶ್ರೇಷ್ಠ ಎಂದು ಸಾರುತ್ತಿದ್ದೇವೆ. ಈ ದೇಶ ಪ್ರಾಂತ್ಯವಾರು ಆಹಾರ , ಜೀವನಶೈಲಿ ಅಷ್ಟೇ ಏಕೆ ನೈಸರ್ಗಿಕವಾಗಿ ಬರುವ  ಶಾರೀರಿಕ ಪ್ರಕೃತಿಗಳನ್ನೂ ಪ್ರಾಂತ್ಯವಾರು ವಿಭಿನ್ನವಾಗಿ ಇಟ್ಟಿದೆ. ಕನ್ನಡ ಭಾಷೆಯನ್ನೇ ಹತ್ತು ಶೈಲಿಗಳಲ್ಲಿಯೂ , ಮತ್ತು ಒಂದೇ ವಸ್ತುವಿಗೆ ಇದೊಂದೇ ಭಾಷೆಯಲ್ಲಿ ಪ್ರಾಂತ್ಯವಾರು ಬೇರೆ ಬೇರೆ ಶಬ್ದಗಳಿಂದ ಕರೆಯುವಷ್ಟು ವೈವಿದ್ಯಮಯ ಸಹಜ ಬಾಳು ಭಾರತೀಯರದು. 

ಇಂತಹ ವಿಭಿನ್ನ ಶಾರೀರಿಕ ಪ್ರಕೃತಿ ಉಳ್ಳವರಿಗೆ ಒಂದು ನಿರ್ದಿಷ್ಟ ಆಹಾರವೇ ಶ್ರೇಷ್ಠ ಎಂದು ತಜ್ಞರಾದಿ ಸಾಮಾನ್ಯರೂ ಹೇಳುತ್ತಿರುವುದು ಅನುಚಿತ ಎನಿಸುತ್ತಿದೆ. 

ಆತ್ಮೀಯರೇ,
ನೀವು ಹುಟ್ಟಿದ , ಬೆಳೆದು ಬಾಳಿದ ಪ್ರಾಂತ್ಯದಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸುವುದರಿಂದ ಶರೀರ ಆರೋಗ್ಯದಿಂದ ಇರಬಲ್ಲದು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವಲಸೆ ಹೋಗಿ ನೇಲಿಸಿದವರು ಕನಿಷ್ಠ ಶೇಕಡಾ 70 ಭಾಗ ತಮ್ಮ ಮೂಲ ಆಹಾರವನ್ನು ಉಳಿದ 30 ಭಾಗ ತಾವು ನೆಲೆಸಿದ ಪ್ರಾಂತೀಯ ಭಾಗದ ಆಹಾರವನ್ನು ಸೇವಿಸುತ್ತ ನಿಧಾನವಾಗಿ ಆಯಾ ಪ್ರಾಂತೀಯ ಆಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. 
★ ಉದಾಹರಣೆಗೆ:
ಕರಾವಳಿಯ ಜನರ ಪ್ರಧಾನ ಆಹಾರ ಮೀನು, ಅವರು ಒಳನಾಡುಗಳಲ್ಲಿ ನೆಲೆಸಿ ಮೀನನ್ನೇ ಪ್ರಧಾನ ಆಹಾರವಾಗಿ ಸೇವಿಸಿದರೆ ಅವರಿಗೆ ಚರ್ಮದ ರೋಗ, ಮಧುಮೇಹ ಬರುವ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ, ಕರಾವಳಿಯಲ್ಲಿ ಸದಾ ಬೆವರು ಹೊರಹೋಗುತ್ತ ಚರ್ಮದ ಅಡಿ ಸಂಚಯವಾಗುವ ಕ್ಲೇದ ಅಥವಾ ಜಿಡ್ಡು ನಿರಂತರವಾಗಿ ಬೆವರಿನ ಮುಖಾಂತರ ಹೊರಕ್ಕೆ ಹೋಗಿ ಚರ್ಮ ಮತ್ತು ದೇಹ ನೈಸರ್ಗಿಕವಾಗಿ ಶುದ್ಧಿಯಾಗುತ್ತದೆ. ಅದೇ, ಒಳ ಪ್ರಾಂತ್ಯದಲ್ಲಿ ಅಷ್ಟು ಪ್ರಮಾಣದ ಬೆವರು ಹೊರ ಹೋಗದ ಕಾರಣ ಅದು ಶರೀರದಲ್ಲಿ ಸಂಚಯವಾಗಿ ಚರ್ಮದ ಕಾಯಿಲೆಯನ್ನೋ, ಮಧುಮೇಹವನ್ನೋ ತರುತ್ತದೆ.
●●●●

ಈಗ, ಖಾದ್ಯತೈಲಕ್ಕೆ ಬರೋಣ.
ಕರಾವಳಿ ಮಲೆನಾಡಿನ ಜನರಿಗೆ ಶುದ್ಧ ತೆಂಗಿನಎಣ್ಣೆಯು , ಒಳನಾಡಿನವರಿಗೆ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಯೂ, ಉತ್ತರಕರ್ನಾಟಕ ಭಾಗದವರಿಗೆ ಶೇಂಗಾ, ಕುಸುಬೆ ಎಣ್ಣೆಗಳನ್ನೂ ಹಾಗೆಯೇ, ಉತ್ತರಭಾರತಕ್ಕೆ ಹೋದರೆ ಸಾಸುವೆ ಎಣ್ಣೆಯನ್ನು ಬಳಸುವುದು ಅತ್ಯಂತ ಶ್ರೇಯಸ್ಕರವಾಗಿರುತ್ತದೆ. 
ಶತಮಾನಗಳಿಂದ ಈ ಶರೀರಕ್ಕೆ ಸಾತ್ಮ್ಯವಾಗಿರುವ ಎಣ್ಣೆಯನ್ನೇ ಬಳಸುವುದರಿಂದ ಆಯಾ ಹವಾಮಾನಕ್ಕೆ ಸೂಕ್ತವಾಗಿ ಶರೀರವನ್ನು ಸಧೃಢವಾಗಿ ಇಟ್ಟಿರುತ್ತದೆ.

 ಉತ್ತರಕರ್ನಾಟಕದ ಜನರು ಕಡಿಮೆ ಜಿಡ್ಡಿನ ಅಂಶವುಳ್ಳ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅವರ ಶರೀರ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಹಾಗೆಯೇ ಮಲೆನಾಡಿನ ಶೀತ ಭಾಗದ ಜನ ಹೆಚ್ಚು ಜಿಡ್ಡುಳ್ಳ ಶೇಂಗಾ ಎಣ್ಣೆಯನ್ನು ಬಳಸಿದರೆ ತೊಂದರೆ ಉಂಟಾಗುತ್ತದೆ. ಇತ್ತೀಚಿನ ಜನರ ಜೀವನ ಶೈಲಿಯ ಆಧಾರದಲ್ಲಿ ನಾವು ಆಹಾರವನ್ನು ಹೀಗೆ ವಿಂಗಡಿಸಬಹುದು.
ಮಾನವ ಯಾವ ಯಾವ ಪ್ರಾಂತ್ಯದಲ್ಲಿ ನೆಲೆಸಿದರೂ ಅವರು ಅತ್ಯಂತ ಕಡಿಮೆ ಶಾರೀರಿಕ ಶ್ರಮದಿಂದ ಮತ್ತು ಹೆಚ್ಚು ಬೌದ್ಧಿಕ ಸಾಮರ್ಥ್ಯದಿಂದ ದುಡಿಮೆ ಮಾಡುವವರು ಕೊಬ್ಬರಿ ಎಣ್ಣೆಯನ್ನೂ, ಹೆಚ್ಚು ಶಾರೀರಿಕ ಶ್ರಮದಿಂದ ದುಡಿಮೆ ಮಾಡುವವರು ಶೇಂಗಾ, ಸೂರ್ಯಕಾಂತಿ ಮುಂತಾದ ತೈಲಗಳನ್ನು ಬಳಸಬಹುದೆಂದು ಸ್ಥೂಲವಾಗಿ ಹೇಳಬಹುದು. 
ಆದಾಗ್ಯೂ , ಪ್ರಾಂತೀಯಮಟ್ಟದ ಆಹಾರ ಸೇವನೆ ಸರ್ವದಾ ಶ್ರೇಷ್ಠವಾಗಿ ಇರುವುದು.

ಧನ್ಯವಾದಗಳು
•••••••••••••••••

Tuesday 15 June 2021

ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
16.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :60
•••••••••
✒️ ಇಂದಿನ ವಿಷಯ:
*ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*
••••••••••••••
ಇಲ್ಲಿಯವರೆಗೆ ಹೇಳಿದ್ದೀರಿ-
• ಪಾಮ್ ಆಯಿಲ್ ಹಾನಿಕರ
• ರಿಫೈನ್ಡ್ ಆಯಿಲ್ ಹಾನಿಕರ
• ಸಂಸ್ಕರಿಸದ ಕೋಲ್ಡ್‌ಪ್ರಸ್ ಎಣ್ಣೆ ಹಾನಿಕರ
• ಕರಿದದ್ದು ಹಾನಿಕರ
• ಒಗ್ಗರಣೆ ಕಲಸಿದ ಅನ್ನಗಳು ಹಾನಿಕರ

ಸರಿ, ಈಗಾಗಲೇ ಗೊತ್ತಿಲ್ಲದೇ ಸೇವಿಸಿದ್ದೇವೆ, ಇನ್ನುಮುಂದೆ ಈ ತಪ್ಪು ಮಾಡುವುದಿಲ್ಲ ಆದರೆ, ಈಗಾಗಲೇ ಈ ರೀತಿ ಸೇವಿಸಿದ ಎಣ್ಣೆಯ ದುಷ್ಪರಿಣಾಮ ನಮ್ಮ ದೇಹದಲ್ಲಿದೆಯಲ್ಲ ಅದನ್ನು ಹೋಗಲಾಡಿಸಲು ಯಾವುದಾದರೂ ಉಪಾಯ ತಿಳಿಸಿ.

ಓದುಗರ ಈ ಪ್ರಶ್ನೆಗೆ ಸರಳ ಉಪಾಯವನ್ನಿಂದು ಕೊಡುತ್ತಿದ್ದೇವೆ.
•••

*ಸರಳ‌ ಉಪಾಯಗಳು:*
• ಮೊದಲು ಎಣ್ಣೆಯನ್ನು ವಿಕೃತ ಸಂಸ್ಕಾರದಿಂದ ತಿನ್ನುವ ಕ್ರಮವನ್ನು ಶಾಶ್ವತವಾಗಿ ನಿಲ್ಲಿಸಿ.
• ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ.
• ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ.
•••••••

*ವಿಕೃತ ಕ್ರಮದಿಂದ ಎಣ್ಣೆಯ ಸೇವನೆ ನಿಲ್ಲಿಸಿ*
• ಎಣ್ಣೆ/ತುಪ್ಪದಲ್ಲಿ ಕರಿದ, ಹುರಿದ, ಒಗ್ಗರಣೆಯನ್ನು ಮೇಲಿನಿಂದ ಕಲಸಿದ, ನೀರೇ ಇಲ್ಲದಂತೆ ಒಣಗಿಸಿ ಎಣ್ಣೆ ಬೆರೆಸಿ ಸೇವಿಸುವ ಕ್ರಮವನ್ನು ನಿಲ್ಲಿಸಿ. 
• ಪಾಮ್ ಆಯಿಲ್ ಬಳಕೆ, ರಿಫೈನ್ಡ್ ಆಯಿಲ್ ಬಳಕೆ ಮತ್ತು ಮನೆಯಲ್ಲಿ ಪುನಃ ಸಂಸ್ಕರಿಸದೇ ಉಪಯೋಗಿಸುವ ಕೋಲ್ಡ್‌ಪ್ರಸ್ ಎಣ್ಣೆ 
ಇವುಗಳನ್ನು ಇನ್ನು ಮುಂದೆ ಸೇವಿಸದಿರಲು ನಿರ್ಧರಿಸಿ.
• ಅಪರೂಪಕ್ಕೆ ಯಾರದ್ದೋ ಮನೆಗೆ ಹೋದಾಗ ಅವರಿಗೆ ಮುಜುಗರ ಉಂಟಾಗದಂತೆ ಅತ್ಯಲ್ಪ‌ ಪ್ರಮಾಣದಲ್ಲಿ ಸೇವಿಸಿ, ಅಗತ್ಯ ಎನ್ನಿಸಿದರೆ ಎಣ್ಣೆಯ ಬಗೆಗಿನ‌ ಮಾಹಿತಿ ಹಂಚಿಕೊಂಡು ಬನ್ನಿ.
ಹಬ್ಬ ಹರಿದಿನಗಳಲ್ಲಿ ತಯಾರಿಸಿದ ಅಪರೂಪದ ಎಣ್ಣೆ ಅಡುಗೆಯನ್ನು ಅತ್ಯಂತ ನಿಯಮಿತವಾಗಿ ಸೇವಿಸಿ ಒಂದು ಬಾರಿ ಉಪವಾಸ ಮಾಡಿ.

ಇವುಗಳನ್ನು ಪಾಲಿಸಿದರೆ ಆರೋಗ್ಯ ಹಾನಿಯಿಂದಲೂ ಮತ್ತು ಇಂದಿನ ಪ್ರಪಂಚದಿಂದ ಆಗುವ ಮುಜುಗರದಿಂದಲೂ ತಪ್ಪಿಸಿಕೊಳ್ಳಬಹುದು.
ಹಾಗೆಯೇ, ಅಪರೂಪಕ್ಕೆ ಬಾಯಿ ಚಪಲ ತೀರಿಸಿಕೊಳ್ಳಲೂ ಬಹುದು, ಇಲ್ಲದೇ ಪೂರ್ಣ ತ್ಯಜಿಸಿದರೆ ಕೆಲವರಿಗೆ ಒಮ್ಮೆಗೇ ಅನಾಹುತ ಆಗುವಷ್ಟು ತಿನ್ನಬೇಕೆನಿಸುತ್ತದೆ.
•••

*ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ*

• ದಿನಕ್ಕೆ ಅರ್ಧ ಹೋಳು ನಿಂಬೆ ಸರವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಹಿಂಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ 21  ಅಥವಾ 48 ದಿನಗಳ ಕಾಲ ಮಾಡುವುದರಿಂದ ಶರೀರದಲ್ಲಿ, ರಕ್ತನಾಳಗಳಲ್ಲಿ, ಯಕೃತ್ತಿನಲ್ಲಿ, ಮೂತ್ರಪಿಂಡಗಳಲ್ಲಿ ಮೆತ್ತಿಕೊಂಡ ಜಿಡ್ಡು ಕರಗಿ ಮಲದಿಂದ ಹೊರಹೋಗುತ್ತದೆ. ಅಂದರೆ, ದಿನಕ್ಕೆ ಒಂದು ಅಥವಾ ಎರಡುಬಾರಿ ಸಹಜ ಮಲಪ್ರವೃತ್ತಿಯಾಗಿ ಹೊರಹೋಗುತ್ತದೆ, ಹೆಚ್ಚು ಬಾರಿ ಮಲಪ್ರವೃತ್ತಿ ಆಗುವುದಿಲ್ಲ, ಭಯ ಬೇಡ.

ಆ ನಂತರ ವಾರಕ್ಕೆ ಒಂದು ಬಾರಿ ಈ ಪದ್ಧತಿಯನ್ನು ಮುಂದುವರಿಸಿರಿ ಮತ್ತು ಮೇಲೆ ತಿಳಿಸಿದಂತೆ ಆದರ್ಶ ಎಣ್ಣೆಸೇವನಾ ವಿಧಾನ ಅನುಸರಿಸಿ. 
ನಿಮಗೆ ಯಾವುದೇ ಹಾನಿಯಾಗದೇ ಆರೋಗ್ಯ ಸಹಜವಾಗಿ ಲಭಿಸುತ್ತದೆ.

ಸೂಚನೆ-
ತುಂಬಾ ತೆಳ್ಳಗೆ ಇರುವವರು, ಅತ್ಯಂತ ಹೆಚ್ಚು ಶಾರೀರಿಕ ಶ್ರಮ ಮಾಡುವವರು ತಿಂಗಳಿಗೆ ಒಂದು ಬಾರಿ ನಿಂಬೆ ಸೇವನೆ ಮಾಡಬಹುದು.
•••

*ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ*

ಇದೊಂದು ಅತ್ಯುತ್ತಮ ಸಿದ್ಧ ವಿಧಾನ, ಇತ್ತೀಚಿನ ಮಾಧ್ಯಮಗಳಲ್ಲಿ ಪ್ರಕಟವಾಗುವ ನೂರೆಂಟು ವಿಧಿ ವಿಧಾನಗಳಿಂದ ಭಯ ಹೊಗಿಸಿಕೊಂಡು ಬದುಕಿದರೆ, ನಿತ್ಯವೂ ಅಮೃತ ಸೇವಿಸುತ್ತಿದ್ದರೂ ಅದು ಅನಾರೋಗ್ಯ ತರುತ್ತದೆ. 
ಎಲ್ಲ ಮರೆತು ಶಾರೀರಿಕ ಶ್ರಮವನ್ನು ಚನ್ನಾಗಿ ಮಾಡಿ, ಶರೀರದಿಂದ ಬೆವರು ಹೊರಬಂದು ಶುದ್ಧವಾಗುತ್ತೀರಿ. ಹಾಗೆಯೇ 
ಶಾರೀರಿಕ ಶ್ರಮವು ಮನಸ್ಸಿಗೆ ಉತ್ತಮ‌ ನಿದ್ದೆಯನ್ನು ಕೊಡುತ್ತದೆ ಮತ್ತು ಆತಂಕ ದೂರಮಾಡುತ್ತದೆ.

ಎಲ್ಲ ಮರೆತು ನೆಮ್ಮದಿಯ ನಿದ್ದೆಗೆ ಜಾರಲು- 
• ಹಗಲು ಹೆಚ್ಚು ಶಾರೀರಿಕ ಶ್ರಮ ಮಾಡಿ(ರಾತ್ರಿ ಊಟದ ನಂತರ ವಾಕ್ ಒಳ್ಳೆಯದಲ್ಲ)
• ಜಿಡ್ಡು ಸೇವನೆ ಕಡಿಮೆಮಾಡಿ
ಮತ್ತು
• ರಾತ್ರಿ ಆಹಾರ ಪ್ರಮಾಣ ಕಡಿಮೆ ಗೊಳಿಸಿ.

ಧನ್ಯವಾದಗಳು
•••••••••••••••••

MATHS TIME LINE

MATHS TIME LINE https://mathigon.org/timeline