✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday 26 September 2022

ಮಜ್ಜಿಗೆಯ ಮಾತು -- ಭಾಗ-2

🦢   ಅಮೃತಾತ್ಮರೇ, ನಮಸ್ಕಾರ   🦢

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
    ಸಂಚಿಕೆ-93, ದಿನಾಂಕ: 27.09.2022
•••••••••••••••••••••••••••••••••••••••
✍️: ಇಂದಿನ ವಿಷಯ:
  ಮಜ್ಜಿಗೆಯ ಮಾತು -- ಭಾಗ-2
•••••••••••••••••••••••••••••••••••••••
  ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ ಸರಿ, ಆದರೆ ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುತ್ತದೆ.

  ಹಾಗಾಗಿ ಸರಿಯಾದ ರೀತಿ ಬಳಸುವ ವಿಧಾನ ನೋಡೋಣ...

• ಮಜ್ಜಿಗೆ ತಯಾರಾದ ತಕ್ಷಣ ಫ್ರಿಜ್ ನಲ್ಲಿ ಇಟ್ಟರೆ ಸಂಜೆ ಸೇವಿಸಬಹುದೇ?

ಉತ್ತರ:
  ಸೇವಿಸಬಹುದು, ಆದರೆ ಅದರ ಔಷಧೀಯ ಗುಣಗಳನ್ನು ಪಡೆಯಲಾರಿರಿ.

  ಫ್ರಿಜ್ ನಲ್ಲಿ ಇಟ್ಟರೆ ಹುಳಿ ಬರುವುದಿಲ್ಲ, ಹಾಗಾಗಿ ವಿಷವಾಗಿ ಪರಿಣಮಿಸುವುದಿಲ್ಲ, ಆದರೆ ಅದು ಅಮೃತಪ್ರಾಯವಲ್ಲ.

• ನನಗೆ ಬಿ.ಪಿ. ಇದೆ, ಹಾಗಾಗಿ ಉಪ್ಪು ಸೇರಿಸದೇ ಮಜ್ಜಿಗೆ ಸೇವಿಸುತ್ತೇನೆ, ಇದು ಸರಿಯೇ?
  ಖಂಡಿತಾ ತಪ್ಪು,
ಉಪ್ಪು ಸೇರಿಸಿದ ಮಜ್ಜಿಗೆ ಮೂಲವ್ಯಾಧಿಯನ್ನು ಹೋಗಲಾಡಿಸಿದರೆ, ಉಪ್ಪು ರಹಿತ ಮಜ್ಜಿಗೆ ಮೂಲವ್ಯಾಧಿಯನ್ನು ಉಂಟುಮಾಡುತ್ತದೆ! ಹೀಗೆನ್ನುತ್ತಾರೆ ಆಚಾರ್ಯರು.

  ಅಂದರೆ, ಗುದದ್ವಾರದ ರಕ್ತನಾಳಗಳು ಊದಿಕೊಳ್ಳುವ ಮೂಲವ್ಯಾಧಿ ಮತ್ತು ರಕ್ತನಾಳಗಳ ಗಡುಸಿನಿಂದ ಆಗುವ ಬಿ.ಪಿ. ಗೂ ಖಂಡಿತಾ ಸಂಬಂಧ ಇದೆ. ಆಯುರ್ವೇದ ಈ ಎರಡನ್ನೂ "ರಕ್ತನಾಳಗಳ ವಿಕಾರ" ಎಂದೇ ಹೇಳುತ್ತದೆ. ಬಿ.ಪಿ. ಬರಲು ಕೇವಲ ಉಪ್ಪು ಕಾರಣವಲ್ಲ, ಅದೊಂದು ಸಹಾಯಕ ಕಾರಣ ಅಷ್ಟೇ...

  ಉಪ್ಪು ಸೇರಿಸಿದ ಮಜ್ಜಿಗೆಯು ಆಹಾರವನ್ನು ಸೂಕ್ತ ರೀತಿಯಿಂದ ವಿಭಜಿಸುವುದೂ ಅಲ್ಲದೇ ಸಮರ್ಥವಾಗಿ ಹೀರುವಿಕೆಯನ್ನು ಮಾಡಿಸುತ್ತದೆ. ಈ ಕಾರಣದಿಂದ ಆಹಾರದ ಅತಿ ಹೆಚ್ಚಿನ ಪೋಷಕಾಂಶಗಳು ನಮಗೆ ದೊರೆಯುತ್ತವೆ.

  ಮಜ್ಜಿಗೆ ಉಪ್ಪುರಹಿತವಾದರೆ, ಜೀವಕೋಶಗಳ ಒಳಗಿನ ಶಕ್ತಿಯನ್ನು ಅದು ತನ್ನತ್ತ ಸೆಳೆಯುತ್ತದೆ, ಆ ಕಾರಣದಿಂದ ಜೀವಕೋಶಗಳು ಸೊರಗಿ, ದುರ್ಬಲಗೊಳ್ಳುತ್ತವೆ. ಆಹಾರದ ಪೋಷಕಾಂಶಗಳು ಮಲದಲ್ಲಿ ಹೊರಹೋಗುತ್ತವೆ. 

  ನಾಳೆಗೆ ಮುಂದುವರಿಯುತ್ತದೆ...


     🙏 ಧನ್ಯವಾದಗಳು 🙏
•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••

Sunday 25 September 2022

ಮಜ್ಜಿಗೆಯ ಮಾತು ಭಾಗ-01

🦢   ಅಮೃತಾತ್ಮರೇ, ನಮಸ್ಕಾರ   🦢

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
    ಸಂಚಿಕೆ-92, ದಿನಾಂಕ: 25.09.2022
•••••••••••••••••••••••••••••••••••••••
✍️: ಇಂದಿನ ವಿಷಯ:
  ಮಜ್ಜಿಗೆಯ ಮಾತು
•••••••••••••••••••••••••••••••••••••••
  "ಶಕ್ರಸ್ಯ ತಕ್ರ ದುರ್ಲಭಮ್" ಅಂದರೆ, ದೇವಲೋಕದ ಇಂದ್ರನಿಗೂ ಮಜ್ಜಿಗೆಯು ದುರ್ಲಭ; ಏಕೆಂದರೆ ಅಲ್ಲಿ‌ ಅಮೃತ ಇದೆಯಲ್ಲ, ಮತ್ತೆ ಮಜ್ಜಿಗೆ ಏಕೆ ಬೇಕು? 

  ಅಂದರೆ, "ಮಜ್ಜಿಗೆಯು ಭೂಲೋಕದ ಅಮೃತ " ಎಂದು ಹೇಳುವುದು ಶ್ಲೋಕದ ಉದ್ದೇಶ...
•••••••••••••••••••••••••••••••••••••••
  ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ.

  ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುವ ಕಾರಣ ಈ ಸಂಚಿಕೆ -- "ಮಜ್ಜಿಗೆಯ ಸರಿಯಾದ  ತಯಾರಿಕೆ ಮತ್ತು ಸೂಕ್ತ ರೀತಿಯ ಬಳಕೆಯಿಂದಾಗುವ ಸತ್ಪರಿಣಾಮಗಳನ್ನು ನೋಡೋಣ..."

• ಮಜ್ಜಿಗೆ ತಯಾರಿಸುವುದು ಹೇಗೆ?
ಉತ್ತರ:
  ಹುಳಿ ಇರದ, ಆಗತಾನೇ ಪೂರ್ಣರೂಪದಿಂದ ತಯಾರಾದ ಮೊಸರನ್ನು ಕೆನೆ ಸಮೇತ ಹದವಾಗಿ ಕಡೆಯಬೇಕು, ತೀರಾ ಅನಿವಾರ್ಯ ಎನ್ನುವವರು ಮಾತ್ರ ಮಿಕ್ಸರ್ ಬಳಸಿಯೂ ಮಜ್ಜಿಗೆ ತಯಾರಿಸಬಹುದು.

  ನಂತರ ತೆಳುವಲ್ಲದ ಒಂದು ಹದದಲ್ಲಿ ಜಿಡ್ಡು ಪ್ರತ್ಯೇಕಗೊಂಡು ಬೆಣ್ಣೆ ಬರುವ ತನಕ ಕಡೆದು, ಬೆಣ್ಣೆಯನ್ನು ಪ್ರತ್ಯೇಕಗೊಳಿಸಿದ ನಂತರ ಸೋಸಿದರೆ ಸಿಗುವ ಮಹೌಷಧಿ ರೂಪದ ಭೂಲೋಕದ ಅಮೃತವೇ ನಿಜವಾದ "ಮಜ್ಜಿಗೆ"

ಮಜ್ಜಿಗೆಗೆ ಎಕ್ಸ್‌ಪೈರಿ ಸಮಯ ಇದೆಯೇ!? ಹಾಗಿದ್ದಲ್ಲಿ ಬಳಸುವ ವಿಧಾನ:
  ಮೇಲೆ ಹೇಳಿದ ರೀತಿಯಲ್ಲಿ ಚೆನ್ನಾಗಿ ಕಡೆದ ಮಜ್ಜಿಗೆಯನ್ನು ಸೋಸಿದ ನಂತರ ಅದು ಕೇವಲ 45 ನಿಮಿಷಗಳ ಕಾಲಾವಧಿ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿರುತ್ತದೆ. ಅಂದರೆ, "ತಯಾರಾದ 45 ನಿಮಿಷಗಳಿಗೆ ಮಜ್ಜಿಗೆಯು ತನ್ನ ಅಮೃತತ್ವವನ್ನು ಅಥವಾ ಔಷಧೀಯ ಗುಣಗಳನ್ನು ಕಳೆದುಕೊಂಡು ಎಕ್ಸ್‌ಪೈರಿ ಆಗುತ್ತದೆ!!"
•••••••••••••••••••••••••••••••••••••••
ನಂತರ ಸೇವಿಸಿದರೆ ಏನಾಗುತ್ತದೆ?:
  ಕರುಳಿನ ಹೀರುವ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ. ಅಂದರೆ, ಆಚಾರ್ಯರು ಉದಾಹರಣೆ ಸಹಿತ ಹೀಗೆ ವಿವರಿಸುತ್ತಾರೆ - "ಗರಿಕೆ ಎಂಬ ಕಳೆಹುಲ್ಲು ಎಷ್ಟು ತೆಗೆದರೂ ಹೋಗದಿದ್ದರೆ, ಹುಳಿಯಾದ ಮಜ್ಜಿಗೆಯನ್ನು ಸುರಿದರೆ ಅದರ ಬೇರು ಸಂಪೂರ್ಣ ಒಣಗುತ್ತದೆ ಮತ್ತು ತನ್ನ ಆಹಾರ ಹೀರುವ ಸಾಮರ್ಥ್ಯವನ್ನು ಕಳೆದುಕೊಂಡು ಒಣಗಿಹೋಗುತ್ತದೆ!!" ಅಂದರೆ ಇಲ್ಲಿ ತಯಾರಾದ 3 ತಾಸುಗಳ ನಂತರದ ಮಜ್ಜಿಗೆಯ ಬಗ್ಗೆ ಹೇಳುತ್ತಾರೆ. ಇದನ್ನು ಯಾವುದೇ ಕಳೆನಾಶಕಕ್ಕಿಂತ ಹೆಚ್ವು ಸಮರ್ಥವಾಗಿ ನಮ್ಮ ರೈತರು ಬಳಸಬಹುದು. ಇನ್ನು ಮಾನವನ ಕರುಳುಗಳ ಗತಿ ಏನಾಗಬೇಡ? 🤔

  ಕೆಲವರು ಕೇಳಿದ್ದಾರೆ, ನಮ್ಮ ಮನೆಗಳಲ್ಲಿ ಹುಳಿ ಮಜ್ಜಿಗೆ ಊಟ ಮಾಡಿಯೇ ಜೀವಿಸಿದ್ದೇವೆ, ಏನೂ ಆಗಿಲ್ಲ...?! ಎಂದು... ಹೌದು, ಬಹುಶಃ ನಿಮ್ಮ ರಕ್ತಹೀನತೆ ಕ್ಯಾಲ್ಸಿಯಂ ಕೊರತೆ... ಮುಂತಾದವುಗಳಿಗೆ ಇದೇ ಕಾರಣ ಇರಬಹುದು ಗಮನಿಸಿ, ಇಲ್ಲ ಎಂದಾದರೆ ಸಂಧಿಗಳ ನೋವು, ಮಾಂಸಖಂಡಗಳ ನೋವಿಗೆ ಸಹ ಕಾರಣ ಆಗಿರಬಹುದು ಗಮನಿಸಿ ನೋಡಿ, ಏಕೆಂದರೆ ನಮ್ಮ ಗಮನಕ್ಕೆ ಬಂದಂತೆ ಇಂತವರ 'ಯೂರಿಕ್ ಆಮ್ಲ' ಅತಿಯಾಗಿ ಮತ್ತು ಶಾಶ್ವತವಾಗಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಮತ್ತು ಚಿಕಿತ್ಸೆಯಲ್ಲಿ ಸ್ಪಂದಿಸುವ ಅವರ ಸಾಮರ್ಥ್ಯ ಸಾಕಷ್ಟು ಕುಂಠಿತವಾಗಿರುವುದನ್ನೂ ಕಂಡಿದ್ದೇವೆ.

  ನಾಳೆಗೆ ಮುಂದುವರಿಯುತ್ತದೆ...

•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••

Thursday 23 June 2022

ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ* ! ಇದು ವೈಜ್ಞಾನಿಕ ಸತ್ಯ.....

*ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ* ! 
ಇದು ವೈಜ್ಞಾನಿಕ ಸತ್ಯ.....

*ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ!!* 

ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು. ನಮಗೆ ವಯಸ್ಸಾಗುತ್ತಿದ್ದಂತೆ, ಬಿಳಿ ಕೂದಲು (ಅಥವಾ) ಸಡಿಲವಾದ ಚರ್ಮ (ಅಥವಾ) ಮುಖದ ಸುಕ್ಕುಗಳಿಗೆ ಹೆದರಬೇಕಾಗಿಲ್ಲ.

   ಪ್ರಖ್ಯಾತ ಅಮೇರಿಕನ್ ನಿಯತಕಾಲಿಕೆ " *ಪ್ರಿವೆನ್ಷನ್* " ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದ ಪ್ರಬಲವಾದ ಕಾಲಿನ ಸ್ನಾಯುಗಳನ್ನು ಪಟ್ಟಿ ಮಾಡಿದೆ.

  *ಪ್ರತಿದಿನ ನಡೆಯಿರಿ.🚶‍♂️🏃‍♂️🚶‍♂️*

ನಾವು ಎರಡು ವಾರಗಳ ಕಾಲ ನಮ್ಮ ಕಾಲುಗಳನ್ನು ಚಲಿಸದಿದ್ದರೆ, ನಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ.
ಕಾರಣ,
  *ನಡೆಯಿರಿ, ನಡೆಯಿರಿ,   ನಡೆಯಿರಿ* 🚶‍♂️🚶‍♂️🏃‍♂️🏃‍♂️🚶‍♂️🚶‍♂️

  ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರ ಕಾಲು ಸ್ನಾಯುಗಳ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ.  ಇದು 20-30 ವರ್ಷಗಳ ವೃದ್ಧಾಪ್ಯಕ್ಕೆ ಸಮ !!

  *ಆದ್ದರಿಂದ ನಡೆಯಿರಿ* ನಡೆಯಿರಿ, ನಡೆಯಿರಿ.....🚶‍♂️🚶‍♂️🏃‍♂️🏃‍♂️🚶‍♂️🚶‍♂️

ಕಾಲಿನ ಸ್ನಾಯುಗಳು ದುರ್ಬಲಗೊಳ್ಳುವುದರಿಂದ, ನಾವು ಪುನರ್ವಸತಿ ಮತ್ತು ವ್ಯಾಯಾಮ ಮಾಡಿದರೂ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು.  ಆದ್ದರಿಂದ, ನಡಿಗೆಯಂತಹ ನಿಯಮಿತ ವ್ಯಾಯಾಮ ಬಹಳ ಮುಖ್ಯ. ಕಾಲುಗಳು ನಮ್ಮ ದೇಹದ ಎಲ್ಲಾ ತೂಕ / ತೂಕವನ್ನು ಹೊರುತ್ತವೆ.

*ಕಾಲುಗಳು ಒಂದು ರೀತಿಯ ಸ್ತಂಭ* ಇದು ಮಾನವ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳುತ್ತದೆ.

ಆದ್ದರಿಂದ *ದೈನಂದಿನ ವಾಕಿಂಗ್ ಮಾಡಿ* 🚶‍♂️🚶‍♂️🏃‍♂️🏃‍♂️🚶‍♂️
 ಕುತೂಹಲಕಾರಿಯಾದ ವಿಷಯ, ವ್ಯಕ್ತಿಯ ಮೂಳೆಗಳಲ್ಲಿ 50% ಮತ್ತು ಅವರ ಸ್ನಾಯುಗಳಲ್ಲಿ 50% ಎರಡೂ ಕಾಲುಗಳಲ್ಲಿವೆ.

ಆದ್ದರಿಂದ, ಅವುಗಳ ಆರೋಗ್ಯ  ದೇಹದ ಆರೋಗ್ಯ. ಹಾಗಾಗಿ  ನಡೆಯಿರಿ, ನಡೆಯಿರಿ, ನಡೆಯಿರಿ 🚶‍♂️🚶‍♂️🏃‍♂️🏃‍♂️🚶‍♂️🚶‍♂️

 ಮಾನವ ದೇಹದಲ್ಲಿನ ಅತಿದೊಡ್ಡ ಮತ್ತು ಬಲವಾದ ಕೀಲುಗಳು ಮತ್ತು ಮೂಳೆಗಳು ಕಾಲುಗಳಲ್ಲಿವೆ.

   *10,000 ಹೆಜ್ಜೆಗಳು ದಿನಂಪ್ರತಿ* .....
    ಬಲವಾದ ಮೂಳೆಗಳು, ಬಲವಾದ ಸ್ನಾಯುಗಳು ಮತ್ತು ಹೊಂದಿಕೊಳ್ಳುವ ಕೀಲುಗಳನ್ನು ಹೊಂದಿರುವ ದೇಹ  ಕಬ್ಬಿಣ ತ್ರಿಕೋನವನ್ನು ರೂಪಿಸುತ್ತದೆ,
ಮಾನವ ದೇಹವನ್ನು ಒಯ್ಯುತ್ತದೆ.

ವ್ಯಕ್ತಿಯ ಜೀವನದ 70%  ಭಾಗವು,  ಮಾನವ ಚಟುವಟಿಕೆಗಳಿಗೆ ಮತ್ತು ಎರಡು ಪಾದಗಳಿಂದ ಕ್ಯಾಲೊರಿಗಳನ್ನು ಸುಡಲು ಖರ್ಚು ಮಾಡುತ್ತದೆ.  ಇದು ನಿಮಗೆ ಗೊತ್ತಾ?

ಒಬ್ಬ ವ್ಯಕ್ತಿಯು ಚಿಕ್ಕವನಾಗಿದ್ದಾಗ, ಅವನ  ತೊಡೆಗಳು 800 ಕೆಜಿ ತೂಕದ ಸಣ್ಣ ಕಾರನ್ನು ಎತ್ತುವಷ್ಟು ಬಲವಾಗಿರುತ್ತದೆ! 

ಎರಡೂ ಕಾಲುಗಳು ಒಟ್ಟಿಗೆ 50% ನರಗಳನ್ನು, 50% ರಕ್ತನಾಳಗಳನ್ನು  ಸಂಭಾಳಿಸುತ್ತವೆ  ಮತ್ತು 50% ರಕ್ತವನ್ನು ಮಾನವ ದೇಹದಲ್ಲಿ ಒಯ್ಯುತ್ತವೆ.  ಇದು ದೇಹವನ್ನು ಸಂಪರ್ಕಿಸುವ ಅತಿ ದೊಡ್ಡ ರಕ್ತಪರಿಚಲನಾ ವ್ಯವಸ್ಥೆ.

*ಆದ್ದರಿಂದ ಪ್ರತಿದಿನ ನಡೆಯಿರಿ, ನಡೆಯಿರಿ, ನಡೆಯಿರಿ* 🚶‍♂️🚶‍♂️🏃‍♂️🏃‍♂️🚶‍♂️🚶‍♂️

ಕಾಲುಗಳು ಮಾತ್ರ ಆರೋಗ್ಯಕರವಾಗಿದ್ದಾಗ, ರಕ್ತದ ಹರಿವಿನ ಸಮೃದ್ಧ ಹರಿವು ಸರಾಗವಾಗಿ ಹೋಗುತ್ತದೆ.  ಆದ್ದರಿಂದ, ಬಲವಾದ ಕಾಲು ಸ್ನಾಯುಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಬಲವಾದ ಹೃದಯವನ್ನು ಹೊಂದಿರುತ್ತಾರೆ. ಮೊಣಕಾಲಿನ ಕೆಳ ಭಾಗವನ್ನು ಎರಡನೆಯ ಹೃದಯ ಎಂದು ಕರೆಯಲ್ಪಡುತ್ತದೆ.

ಒಬ್ಬರ ವಯಸ್ಸು ಪಾದದಿಂದ ಮೇಲಕ್ಕೆ ಆರಂಭವಾಗುತ್ತದೆ.  ಒಬ್ಬ ವ್ಯಕ್ತಿಯು ವಯಸ್ಸಾದಂತೆ, ಯೌವನದಲ್ಲಿ ಭಿನ್ನವಾಗಿ, ಮೆದುಳು ಮತ್ತು ಕಾಲುಗಳ ನಡುವಿನ ಆಜ್ಞೆಗಳ ಪ್ರಸರಣದ ನಿಖರತೆ ಮತ್ತು ವೇಗ ಕಡಿಮೆಯಾಗುತ್ತದೆ.

  ಆದ್ದರಿಂದ *ದಯವಿಟ್ಟು ನಡೆಯಿರಿ* 🚶‍♂️🚶‍♂️🏃‍♂️🏃‍♂️🚶‍♂️🚶‍♂️

 ಇದರ ಜೊತೆಯಲ್ಲಿ, ಮೂಳೆ ಮಜ್ಜೆಯೆಂದು ಕರೆಯಲ್ಪಡುವ ಕ್ಯಾಲ್ಸಿಯಂ ಕಾಲಾನಂತರದಲ್ಲಿ ಅಥವಾ ನಂತರ ಕಳೆದುಹೋಗುತ್ತದೆ, ಇದು ವಯಸ್ಸಾದವರಲ್ಲಿ ಮುರಿತಗಳಿಗೆ ಕಾರಣವಾಗುತ್ತದೆ.

 ಆದ್ದರಿಂದ *ವಾಕಿಂಗ್, ವಾಕಿಂಗ್, ವಾಕಿಂಗ್  ಬೇಕು, ಬೇಕು* 🚶‍♂️🚶‍♂️🏃‍♂️🏃‍♂️🚶‍♂️🚶‍♂️

 ವಯಸ್ಸಾದವರಲ್ಲಿ ಮೂಳೆ ಮುರಿತಗಳು, ಮೂಳೆ ತೊಡಕುಗಳ ಸರಣಿಗೆ ಕಾರಣವಾಗಬಹುದು, ವಿಶೇಷವಾಗಿ ಮೆದುಳಿನ ಥ್ರಂಬೋಸಿಸ್ನಂತಹ ಅಪಾಯಕಾರಿ ರೋಗಗಳು
ಕಾಣಿಸಿಕೊಳ್ಳಬಹುದು.....

ಆದ್ದರಿಂದ  *ನಡೆಯಿರಿ, ನಡೆಯಿರಿ, ನಡೆಯಿರಿ.....🚶‍♂️🚶‍♂️🏃‍♂️🏃‍♂️🚶‍♂️🚶‍♂️*

 15% ವಯಸ್ಸಾದ ರೋಗಿಗಳು ಸಾಮಾನ್ಯವಾಗಿ ಮೂಳೆ ಮುರಿತದ ಒಂದು ವರ್ಷದೊಳಗೆ ಸಾಯುತ್ತಾರೆ ಎಂದು ನಿಮಗೆ ತಿಳಿದಿದೆಯೇ?

*ಪ್ರತಿದಿನ ತಪ್ಪದೇ ನಡೆಯಿರಿ*🚶‍♂️🚶‍♂️🏃‍♂️🏃‍♂️🚶‍♂️🚶‍♂️

  60 ವರ್ಷಗಳ ನಂತರ ನಿಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವುದು ತಡವಾಗಿಲ್ಲ.  ನಮ್ಮ ಕಾಲುಗಳು ಕ್ರಮೇಣ ವಯಸ್ಸಾಗುತ್ತಿದ್ದರೂ, ನಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವುದು ಆಜೀವ ಕೆಲಸ.

  *10,000  ಹೆಜ್ಜೆಯ ನಡಿಗೆ* 
  ಯಾವಾಗಲೂ ಕಾಲುಗಳನ್ನು ಬಲಪಡಿಸುವ ಮೂಲಕ ಮತ್ತಷ್ಟು ವಯಸ್ಸಾಗುವುದನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು.

  *365 ದಿನಗಳ ನಡಿಗೆ* 

 ನಮ್ಮ ಕಾಲುಗಳಿಗೆ ಸಾಕಷ್ಟು ವ್ಯಾಯಾಮವನ್ನು ಪಡೆಯಲು ಮತ್ತು ನಮ್ಮ ಕಾಲಿನ ಸ್ನಾಯುಗಳನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ 30-40 ನಿಮಿಷಗಳ ಕಾಲ ನಡೆಯಿರಿ.

  *ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಲ್ಲಿ.....!!!!*
ಖಂಡಿತಾ
ನಡೆಯಿರಿ, ನಡೆಯಿರಿ, ನಡೆಯಿರಿ....🚶‍♂️🚶‍♂️🏃‍♂️🏃‍♂️🏃‍♂️🚶‍♂️🚶‍♂️🚶‍♂️🚶‍♂️🚶‍♂️🚶‍♂️

*ಯೋಜನಾನಾಂ ಸಹಸ್ರಂ ತು ಶನೈರ್ಯಾತಿ ಪಿಪಿಲೀಕಾ*
ಮೆಲ್ಲಮೆಲ್ಲನೆ ನಡೆದು ಹೋಗುವ ಇರುವೆಯೂ ಸಾವಿರ ಮೈಲುಗಳ ದೂರನ್ನಾದರೂ ಕ್ರಮಿಸುತ್ತದೆ. ನಡೆಯದಿದ್ದರೆ ಗರುಡವೂ ಒಂದು ಹೆಜ್ಜೆಯ ದೂರವನ್ನೂ ಕ್ರಮಿಸಲಾರದು. ನಾವು ಮುಂದೆ ಸಾಗಿದಂತೆ ಗುರಿಯು ತಾನೇ ಸಮೀಪ ಬರುತ್ತದೆ. ಒಂದು ದಿನ ನಾವು ನಮಗರಿಯದಂತೆ  ಆರೋಗ್ಯ ಭಾಗ್ಯ  ಗಳಿಸಿರುತ್ತೇವೆ.  ಇದೇ *ಮನೋದಾರ್ಢ್ಯ.*
ಆದ್ದರಿಂದ ನಡೆದರೆ ಮನಸ್ಸಿಗೂ ದೇಹಕ್ಕೂ ಹಿತ...🚶‍♂️🚶‍♂️🚶‍♂️🚶‍♂️🚶‍♂️🙏🙏

ಎಲ್ಲರೂ ಆರೋಗ್ಯವಂತರಾಗಿರಿ

ಶುಭಮಸ್ತು

Friday 10 June 2022

ಇಂದಿನ ವಿಷಯ:__ ಮಜ್ಜಿಗೆಯ ಮಾತು

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
    ಸಂಚಿಕೆ-96, ದಿನಾಂಕ: 10.06.2022
•••••••••••••••••••••••••••••••••••••••
✍️: __ಇಂದಿನ ವಿಷಯ:__
  ಮಜ್ಜಿಗೆಯ ಮಾತು
•••••••••••••••••••••••••••••••••••••••
  "ಶಕ್ರಸ್ಯ ತಕ್ರ ದುರ್ಲಭಮ್" ಅಂದರೆ, ದೇವಲೋಕದ ಇಂದ್ರನಿಗೂ ಮಜ್ಜಿಗೆಯು ದುರ್ಲಭ; ಏಕೆಂದರೆ ಅಲ್ಲಿ‌ ಅಮೃತ ಇದೆಯಲ್ಲ, ಮತ್ತೆ ಮಜ್ಜಿಗೆ ಏಕೆ ಬೇಕು? 

  ಅಂದರೆ, "ಮಜ್ಜಿಗೆಯು ಭೂಲೋಕದ ಅಮೃತ " ಎಂದು ಹೇಳುವುದು ಶ್ಲೋಕದ ಉದ್ದೇಶ...
•••••••••••••••••••••••••••••••••••••••
  ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ.

  ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುವ ಕಾರಣ ಈ ಸಂಚಿಕೆ -- "ಮಜ್ಜಿಗೆಯ ಸರಿಯಾದ  ತಯಾರಿಕೆ ಮತ್ತು ಸೂಕ್ತ ರೀತಿಯ ಬಳಕೆಯಿಂದಾಗುವ ಸತ್ಪರಿಣಾಮಗಳನ್ನು ನೋಡೋಣ..."

• ಮಜ್ಜಿಗೆ ತಯಾರಿಸುವುದು ಹೇಗೆ?
ಉತ್ತರ:
  ಹುಳಿ ಇರದ, ಆಗತಾನೇ ಪೂರ್ಣರೂಪದಿಂದ ತಯಾರಾದ ಮೊಸರನ್ನು ಕೆನೆ ಸಮೇತ ಹದವಾಗಿ ಕಡೆಯಬೇಕು, ತೀರಾ ಅನಿವಾರ್ಯ ಎನ್ನುವವರು ಮಾತ್ರ ಮಿಕ್ಸರ್ ಬಳಸಿಯೂ ಮಜ್ಜಿಗೆ ತಯಾರಿಸಬಹುದು.

  ನಂತರ ತೆಳುವಲ್ಲದ ಒಂದು ಹದದಲ್ಲಿ ಜಿಡ್ಡು ಪ್ರತ್ಯೇಕಗೊಂಡು ಬೆಣ್ಣೆ ಬರುವ ತನಕ ಕಡೆದು, ಬೆಣ್ಣೆಯನ್ನು ಪ್ರತ್ಯೇಕಗೊಳಿಸಿದ ನಂತರ ಸೋಸಿದರೆ ಸಿಗುವ ಮಹೌಷಧಿ ರೂಪದ ಭೂಲೋಕದ ಅಮೃತವೇ ನಿಜವಾದ "ಮಜ್ಜಿಗೆ"

ಮಜ್ಜಿಗೆಗೆ ಎಕ್ಸ್‌ಪೈರಿ ಸಮಯ ಇದೆಯೇ!? ಹಾಗಿದ್ದಲ್ಲಿ ಬಳಸುವ ವಿಧಾನ:
  ಮೇಲೆ ಹೇಳಿದ ರೀತಿಯಲ್ಲಿ ಚೆನ್ನಾಗಿ ಕಡೆದ ಮಜ್ಜಿಗೆಯನ್ನು ಸೋಸಿದ ನಂತರ ಅದು ಕೇವಲ 45 ನಿಮಿಷಗಳ ಕಾಲಾವಧಿ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿರುತ್ತದೆ. ಅಂದರೆ, "ತಯಾರಾದ 45 ನಿಮಿಷಗಳಿಗೆ ಮಜ್ಜಿಗೆಯು ತನ್ನ ಅಮೃತತ್ವವನ್ನು ಅಥವಾ ಔಷಧೀಯ ಗುಣಗಳನ್ನು ಕಳೆದುಕೊಂಡು ಎಕ್ಸ್‌ಪೈರಿ ಆಗುತ್ತದೆ!!"
•••••••••••••••••••••••••••••••••••••••
ನಂತರ ಸೇವಿಸಿದರೆ ಏನಾಗುತ್ತದೆ?:
  ಕರುಳಿನ ಹೀರುವ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ. ಅಂದರೆ, ಆಚಾರ್ಯರು ಉದಾಹರಣೆ ಸಹಿತ ಹೀಗೆ ವಿವರಿಸುತ್ತಾರೆ - "ಗರಿಕೆ ಎಂಬ ಕಳೆಹುಲ್ಲು ಎಷ್ಟು ತೆಗೆದರೂ ಹೋಗದಿದ್ದರೆ, ಹುಳಿಯಾದ ಮಜ್ಜಿಗೆಯನ್ನು ಸುರಿದರೆ ಅದರ ಬೇರು ಸಂಪೂರ್ಣ ಒಣಗುತ್ತದೆ ಮತ್ತು ತನ್ನ ಆಹಾರ ಹೀರುವ ಸಾಮರ್ಥ್ಯವನ್ನು ಕಳೆದುಕೊಂಡು ಒಣಗಿಹೋಗುತ್ತದೆ!!" ಅಂದರೆ ಇಲ್ಲಿ ತಯಾರಾದ 3 ತಾಸುಗಳ ನಂತರದ ಮಜ್ಜಿಗೆಯ ಬಗ್ಗೆ ಹೇಳುತ್ತಾರೆ. ಇದನ್ನು ಯಾವುದೇ ಕಳೆನಾಶಕಕ್ಕಿಂತ ಹೆಚ್ವು ಸಮರ್ಥವಾಗಿ ನಮ್ಮ ರೈತರು ಬಳಸಬಹುದು. ಇನ್ನು ಮಾನವನ ಕರುಳುಗಳ ಗತಿ ಏನಾಗಬೇಡ? 🤔

  ಕೆಲವರು ಕೇಳಿದ್ದಾರೆ, ನಮ್ಮ ಮನೆಗಳಲ್ಲಿ ಹುಳಿ ಮಜ್ಜಿಗೆ ಊಟ ಮಾಡಿಯೇ ಜೀವಿಸಿದ್ದೇವೆ, ಏನೂ ಆಗಿಲ್ಲ...?! ಎಂದು... ಹೌದು, ಬಹುಶಃ ನಿಮ್ಮ ರಕ್ತಹೀನತೆ ಕ್ಯಾಲ್ಸಿಯಂ ಕೊರತೆ... ಮುಂತಾದವುಗಳಿಗೆ ಇದೇ ಕಾರಣ ಇರಬಹುದು ಗಮನಿಸಿ, ಇಲ್ಲ ಎಂದಾದರೆ ಸಂಧಿಗಳ ನೋವು, ಮಾಂಸಖಂಡಗಳ ನೋವಿಗೆ ಸಹ ಕಾರಣ ಆಗಿರಬಹುದು ಗಮನಿಸಿ ನೋಡಿ, ಏಕೆಂದರೆ ನಮ್ಮ ಗಮನಕ್ಕೆ ಬಂದಂತೆ ಇಂತವರ 'ಯೂರಿಕ್ ಆಮ್ಲ' ಅತಿಯಾಗಿ ಮತ್ತು ಶಾಶ್ವತವಾಗಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಮತ್ತು ಚಿಕಿತ್ಸೆಯಲ್ಲಿ ಸ್ಪಂದಿಸುವ ಅವರ ಸಾಮರ್ಥ್ಯ ಸಾಕಷ್ಟು ಕುಂಠಿತವಾಗಿರುವುದನ್ನೂ ಕಂಡಿದ್ದೇವೆ.

  ನಾಳೆಗೆ ಮುಂದುವರಿಯುತ್ತದೆ...
     🙏 ಧನ್ಯವಾದಗಳು 
•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••

Friday 13 May 2022

ಕಲಿಕಾ ಚೇತರಿಕೆ ಕಾರ್ಯಕ್ರಮದ ಮುಖ್ಯ ದಾಖಲೆಗಳು

*ಕಲಿಕಾ ಚೇತರಿಕೆ ಕಾರ್ಯಕ್ರಮದ ಮುಖ್ಯ ದಾಖಲೆಗಳು ಡಿ ಎಸ್ ಈ ಆರ್ ಟಿ website ನಲ್ಲಿ ಲಭ್ಯ:*
01) ʼಕಲಿಕಾ ಚೇತರಿಕೆ ಕಾರ್ಯಕ್ರಮʼವನ್ನು ಶಾಲೆಗಳಲ್ಲಿ. 
02) ಕಲಿಕಾ ಚೇತರಿಕೆ FAQ 05/05/2022 
03) ಮಳೆಬಿಲ್ಲು - ಕೈಪಿಡಿ 13/05/2022
04) ಮಳೆಬಿಲ್ಲು- ಸುತ್ತೋಲೆ-೧, 13/05/2022
05) ಮಳೆಬಿಲ್ಲು-ಸುತ್ತೋಲೆ-೨, 13/05/2022
*ಈ ಮೇಲ್ಕಂಡ ದಾಖಲೆಗಳಿಗೆ ⬇️⤵️
CLICK HERE TO DOWNLOAD

Sunday 1 May 2022

ಅಕ್ಷಯ_ತೃತೀಯಾ ....ಇದರ ಬಗ್ಗೆ ನಿಮಗೆ ಎ‍ಷ್ಟು ಗೊತ್ತು ?

ಅಕ್ಷಯ_ತೃತೀಯಾ, ಅದರ ಬಗ್ಗೆ ಸ್ವಲ್ಪ ಮಾಹಿತಿ ನಿಮಗಾಗಿ....

ಭಾರತೀಯರಲ್ಲಿ ಹಬ್ಬ ಹರಿದಿನ,ವ್ರತಗಳ ಆಚರಣೆ,ಪ್ರತಿ ಮಾಸದಲ್ಲಿಯೂ ಒಂದಲ್ಲ ಒಂದು ನಡೆಯುತ್ತಲೇ ಇರುತ್ತದೆ.
ವೈಶಾಖ ಮಾಸದ ಹಬ್ಬಗಳಲ್ಲಿ ಅತಿಮುಖ್ಯವಾದುದು #ಅಕ್ಷಯ #ತೃತೀಯಾ.
ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು  ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ.
ಅದರಲ್ಲಿಯೂ ಅಂದು #ರೋಹಿಣಿ ನಕ್ಷತ್ರವಿದ್ದರೆ ತುಂಬ ಶ್ರೇಷ್ಠ.
ನಾಳೆ #ರೋಹಿಣಿನಕ್ಷತ್ರ ಇರುವುದು ವಿಶೇಷ.

ಅಕ್ಷಯ ಎಂದರೆ ಕ್ಷಯಿಸದೆ,
ಇರುವುದು ಎಂದು ಅರ್ಥ.
ಈ ಹೆಸರು ಬರಲೂ ಕಾರಣವಿದೆ.

ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣನು,

ಬಹುಣಾತ್ರ ಕಿಮುಕ್ತೇನ
ಕಿಂ ಬಹ್ವಕ್ಷರಮಾಲಯಾ |
ವೈಶಾಖಸ್ಯ ಸಿತಾಮೇಕಾಂ
ತೃತೀಯಾಮಕ್ಷಯಾಂ ಶೃಣು ||

"ಬಹಳ ಅಕ್ಷರಮಾಲೆಯನ್ನು ಹೇಳುವುದಕ್ಕಿಂತ ಅಕ್ಷಯ ತೃತೀಯಾದ ಮಹತ್ವವನ್ನು ಕೇಳು" ಎಂದು ಹೇಳಿದ್ದಾನೆ.

ಇದಕ್ಕೆ ಜಯಾ ತಿಥಿ ಎಂಬ ಹೆಸರೂ ಇದೆ.
ಅಕ್ಷಯ ತೃತೀಯೆಯ ದಿನ ಗಂಗಾಸ್ನಾನ,{ ಗಂಗೆಯಲ್ಲಿ ಸ್ನಾನ ಮಾಡಲಾಗದಿದ್ದರೆ,ನಾವು ಸ್ನಾನ ಮಾಡುವ ನೀರಿಗೇ ಗಂಗೆಯನ್ನು ಆವಾಹಿಸಿ  ಸ್ನಾನ ಮಾಡಬಹುದು }ಧೂಪದೀಪಾದಿಗಳಿಂದ ವಿಷ್ಣುವಿನ ಆರಾಧನೆಗೆ ವಿಶೇಷ ಪ್ರಾಶಸ್ತ್ಯವಿದೆ.
ಅಂದು ಮಾಡುವ ಗಂಗಾಸ್ನಾನ,
ಜಪ,ತಪ,ಅಧ್ಯಯನ,ದಾನ,ಧರ್ಮ,
ತರ್ಪಣ,ಎಲ್ಲವೂ ಅಕ್ಷಯವಾಗಿ,
ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಅರ್ಥ.

ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.! 
ಅಕ್ಷರಾಭ್ಯಾಸ,ಮದುವೆ,
ಉಪನಯನ,ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,
ಪಂಚಾಂಗ ಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.

ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.

ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.

ಶ್ರೀ ಮಹಾವಿಷ್ಣುವು  ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.

ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯ ತದಿಗೆಯಂದು.

ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ ಅಕ್ಷಯ ತದಿಗೆ.
ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.

ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.

ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ  ನಂಬಿಕೆ ಜನಮಾನಸದಲ್ಲಿದೆ.

ದೇವತೆಗಳು ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಕಡೆದಾಗ ಲಕ್ಷ್ಮಿಯು ಅವತರಿಸಿದ ದಿನ ಅಕ್ಷಯ ತೃತೀಯವಾಗಿತ್ತು.

ಮಹಾಭಾರತದ ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿ ಶ್ರೀಕೃಷ್ಣನು ಅವಳಿಗೆ ಅಕ್ಷಯವಸ್ತ್ರದಾನ ಮಾಡಿ,ಮಾನ ರಕ್ಷಿಸಿದ ದಿನವೂ ಅಕ್ಷಯ ತೃತೀಯ.

ಚಳಿಗಾಲದಲ್ಲಿ ಮುಚ್ಚುವ,
ಪವಿತ್ರ ತೀರ್ಥಕ್ಷೇತ್ರ ಬದರಿಯ ದೇವಾಲಯದ ಬಾಗಿಲು ತೆರೆಯುವುದು ಅಕ್ಷಯತೃತೀಯೆಯ ದಿನ.

೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.

ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜಗತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ

ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ,ಎಂದು.
ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,
ರಾವಣನ ಅಣ್ಣ!!
ರಾವಣ ಅಣ್ಣನಿಂದ,
ಲಂಕಾನಗರವನ್ನು
ವಶಪಡಿಸಿಕೊಂಡು,ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ.
ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು  ವಿಶ್ವಕರ್ಮರಿಂದ ಸುವರ್ಣದಿಂದ ಭೂಮಿಪೂಜೆಯನ್ನು ಮಾಡಿಸಿದ್ದನು.ಇದರಿಂದಲೇ
ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.

ಆಂಧ್ರಪ್ರದೇಶದ ಸಿಂಹಾಚಲಂನಲ್ಲಿರುವ ನರಸಿಂಹ ದೇವಾಲಯದ ಮೂಲ ಮೂರ್ತಿಯ ಮುಖವನ್ನು ಉಗ್ರರೂಪ ಕಾಣದಿರಲಿ ಎಂದು ವರ್ಷದ ೩೬೪ ದಿನಗಳು ಗಂಧ ಲೇಪನದಿಂದ ಮುಚ್ಚಿರುತ್ತಾರೆ.
ಆದರೆ ಅಕ್ಷಯ ತೃತೀಯೆಯ ದಿನ ಮಾತ್ರ ಮುಖವನ್ನು ತೊಳೆದು,
ಗಂಧ ಲೇಪಿಸದೆ,
ಮುಖದರ್ಶನ ಮಾಡಿಸುತ್ತಾರೆ.
ದರ್ಶನಕ್ಕಾಗಿಯೇ ಅಂದು ಲಕ್ಷಾಂತರ ಭಕ್ತರು ಸಿಂಹಾಚಲಕ್ಕೆ ಆಗಮಿಸುತ್ತಾರೆ.

ಅಕ್ಷಯ ತೃತಿಯದ ದಿನ ಮಾಡುವ,ದಾನಧರ್ಮಾದಿಗಳು ಅಕ್ಷಯವಾಗುತ್ತವೆ ಎಂದಿರುವುದನ್ನು,
ಈಗ ಸ್ವರ್ಣವನ್ನು ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.
ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.

ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ-ಶಾಂತಿ-
ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು .

*ಸರ್ವೇಜನಾಃ ಸುಖಿನೋ ಭವಂತು.*

Tuesday 12 April 2022

ವಿಷಯ: ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣೆ

*9-4-2022 ರಂದು ಮಂಗಳೂರು ಸಾಹಿತ್ಯ ಹಬ್ಬದಲ್ಲಿ ನಡೆಸಿದ ಸಂವಾದದಲ್ಲಿ ಶ್ರೀ ಅರವಿಂದ ಚೊಕ್ಕಾಡಿಯವರು ಪ್ರಸ್ತಾಪಿಸಿದ ಅಂಶಗಳು:*

ವಿಷಯ: ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣೆ
ಸಂವಾದ ನಡೆಸಿದವರು: ಶ್ರೀಮತಿ ಅಶ್ವಿನಿ ದೇಸಾಯಿ
ಸಹ ಸಂವಾದಕರು: ಶ್ರೀ ರೋಹಿತ್ ಚಕ್ರತೀರ್ಥ, ಅಧ್ಯಕ್ಷರು, ಪಠ್ಯ ಪರಿಷ್ಕರಣಾ ಸಮಿತಿ

* ಪಠ್ಯ ಪುಸ್ತಕ ಬೇಕೆ? ಯಾಕೆ ಬೇಕು? ಎಂಬ ಪ್ರಶ್ನೆಗೆ ಉತ್ತರಿಸುತ್ತೇನೆ. ಪಠ್ಯ ಪುಸ್ತಕ ಬೇಡ. ಗುರು ಕೇಂದ್ರಿತ ಶಿಕ್ಷಣದಲ್ಲಿ ಪಠ್ಯ ಪುಸ್ತಕ ಇರಲೂ ಇಲ್ಲ. ಗುರುವೇ ಪಠ್ಯವಸ್ತುವನ್ನು ನಿರ್ಧರಿಸುತ್ತಿದ್ದರು.

ಕ್ರಮೇಣ ಸಮಾಜ ಹೆಚ್ಚು ಸಂಕೀರ್ಣಗೊಳ್ಳುತ್ತಾ ಹೋದಂತೆ, ಆರ್ಥಿಕ ಚಟುವಟಿಕೆ ಹೆಚ್ಚಿ ಶಿಕ್ಷಣದಲ್ಲಿ ಪ್ರಭುತ್ವದ ಪಾಲುದಾರಿಕೆ ಜಾಸ್ತಿಯಾಗತೊಡಗಿತು. ಒಬ್ಬ ಗುರುವಿನ ಲೌಕಿಕ 'ತಲುಪುವ ವ್ಯಾಪ್ತಿ' ಗಿಂತ ಪ್ರಭುತ್ವಕ್ಕೆ ತಲುಪುವ ವ್ಯಾಪ್ತಿ ಜಾಸ್ತಿ ಇರುತ್ತದೆ. ಶಿಕ್ಷಣದಲ್ಲಿ ಪ್ರಭುತ್ವ ತೊಡಗಿಕೊಳ್ಳಲು ಅದು ಕಾರಣವಾಗುತ್ತದೆ. ರೋಹಿತ್ ಅವರು 1835 ರಲ್ಲಿ ವಸಾಹತುಶಾಹಿ ಶಿಕ್ಷಣ ಬಂದ ನಂತರ ಪಠ್ಯ ರಚನೆಯಾಗಿದೆ ಎಂದರು. ಅವರು ಕೊಟ್ಟ ಮಾಹಿತಿಗೆ ಸ್ವಲ್ಪ ಸೇರಿಸುತ್ತೇನೆ. ಪಠ್ಯ ವಸಾಹತುಶಾಹಿ ಶಿಕ್ಷಣಕ್ಕೂ ಮೊದಲೇ ಇದ್ದುದನ್ನು ಧರ್ಮಪಾಲ್ ಅವರು ತಮ್ಮ ' ಬ್ಯೂಟಿಫುಲ್ ಟ್ರೀ' ಕೃತಿಯಲ್ಲಿ ಸಾಬೀತುಪಡಿಸಿದ್ದಾರೆ. ಈ ವಿಚಾರವನ್ನು ಗಾಂಧೀಜಿಯವರೂ ಲಂಡನ್ ನಲ್ಲಿ ಪ್ರಸ್ತಾಪಿಸಿದ್ದು, ವಸಾಹತುಶಾಹಿತ್ವಕ್ಕೆ ಮೊದಲು ಭಾರತದಲ್ಲಿ 60 ವಿದ್ಯಾರ್ಥಿಗಳಿಗೆ ಒಂದು ಶಾಲೆ ಇದ್ದುದನ್ನು ಹೇಳಿದ್ದಾರೆ. ಆಗಿನ ಬಳ್ಳಾರಿ ಭಾಗದ ಪಠ್ಯದಲ್ಲಿ ಕನ್ನಡದಲ್ಲಿ ಶ್ರೀಮದ್ಭಾಗವತದ ವಿಷಯಗಳು, ವಚನಗಳು ಪಾಠಗಳಿದ್ದವು.

ವಸಾಹತುಶಾಹಿ ಶಿಕ್ಷಣದಲ್ಲೂ ಪ್ರಾರಂಭದಲ್ಲಿ ಯಾರಾದರೂ ಪಾಠ ಪುಸ್ತಕಗಳನ್ನು ಬರೆದುಕೊಟ್ಟರೆ ಅದರಲ್ಲಿ ಯಾವ ಪಾಠ ಪುಸ್ತಕ ಆಗಬಹುದು ಎಂದು‌ ಮುಖ್ಯೋಪಾಧ್ಯಾಯರೇ ತೀರ್ಮಾನಿಸುವ ಪದ್ಧತಿ ಇತ್ತು. ನಂತರ ನಾಲ್ಕೈದು ಲೇಖಕರು ಪಾಠ ಪುಸ್ತಕವನ್ನು ಬರೆದು ಶಿಕ್ಷಣ ಇಲಾಖೆಗೆ ಕೊಟ್ಟರೆ ಅದರಲ್ಲಿ ಯಾವುದು ಪಾಠ ಪುಸ್ತಕ ಆಗಬಹುದು ಎಂದು ಶಿಕ್ಷಣ ಇಲಾಖೆ ತೀರ್ಮಾನಿಸಿ ಅಳವಡಿಸಿಕೊಳ್ಳುತ್ತಿತ್ತು. ನಂತರ ಬಂದದ್ದು ಈ ಪಠ್ಯ ಪುಸ್ತಕ ರಚನಾ ಸಮಿತಿಗಳು. 

ಈಗಲೂ ನಿಜವಾಗಿ ಪಾಠ ಪುಸ್ತಕ ಬೇಡ. ಒಮ್ಮೆ ಎರಡು ತಿಂಗಳಾದರೂ ಪಾಠ ಪುಸ್ತಕ ಬರಲಿಲ್ಲ ಎಂದು ಪತ್ರಿಕೆಯವರು ಬರೆದಾಗ ನಾನು ಹೇಳಿದ್ದೆ; ನಾವು ಸಂಬಂಧಿಸಿದ ವಿಷಯದಲ್ಲಿ ಪರಿಣಿತರೆಂದೇ ಅಧ್ಯಾಪಕರಾಗಿ ನೇಮಕ ಆದವರು. ಸಿಲೆಬಸ್ ಏನು ಎಂದು ಗೊತ್ತಿದೆ. ಆಮೇಲೆ ಪಾಠ ಮಾಡಲು ಪುಸ್ತಕ ಬರಬೇಕೆಂದು ನಾವು ಯಾಕೆ ಯೋಚಿಸಬೇಕು ಎಂದು ಹೇಳಿದ್ದೆ.

ಆದರೆ ಅಧಿಕೃತ ಪಾಠ ಪುಸ್ತಕದ ಅಗತ್ಯ ಏನು ಎಂದು ಹೇಳುತ್ತೇನೆ. ಇವತ್ತು ಒಬ್ಬ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ವ್ಯಾಪ್ತಿ ಇದೆ. ನಾಳೆ ನಮ್ಮ ಒಬ್ಬ ವಿದ್ಯಾರ್ಥಿ ಲ್ಯಾಟಿನ್ ಅಮೆರಿಕದಲ್ಲಿ ವಾಸಿಸಬಹುದು. ಅವನಿಗೆ ಅಲ್ಲಿ ಯಾವ ಮೂಲ ಜ್ಞಾನ ಬೇಕಾಗುತ್ತದೆ ಎನ್ನುವ ಲ್ಯಾಟಿನ್ ಅಮೆರಿಕದ ಅಗತ್ಯದ ಅನುಭವ ನನಗಿಲ್ಲ. ಆದರೆ ಪ್ರಭುತ್ವಕ್ಕೆ ಅದನ್ನೂ ಗಳಿಸಿಕೊಳ್ಳುವ ಸಂಪನ್ಮೂಲಗಳಿವೆ. ಆದ್ದರಿಂದ ಪ್ರಭುತ್ವದ ಸೂಚನೆಯಂತೆ ಪಠ್ಯವನ್ನು ಮಾಡಿದರೆ ವಿದ್ಯಾರ್ಥಿಯ ವ್ಯಾಪ್ತಿ ಹೆಚ್ಚಾಗಲು ಸಾಧ್ಯವಿದೆ ಎನ್ನುವುದು ಒಂದು ಅಂಶ. 

ಎರಡನೆಯದಾಗಿ, ಅಧ್ಯಾಪಕರ ಮೇಲೆ ಸಮಾಜಕ್ಕೆ ವಿಶ್ವಾಸ ಇಲ್ಲದಾಗ ಅಥವಾ ಅಧ್ಯಾಪಕರು ಸಮಾಜದ ವಿಶ್ವಾಸಕ್ಕೆ ಅರ್ಹರಲ್ಲದೆ ಇದ್ದಾಗ, ಕಾನೂನಿಗೆ ಮಹತ್ವ ಬರುತ್ತದೆ. ಕಾನೂನಿನ ಸಮ್ಮುಖದಲ್ಲಿ ಇದು ಹೀಗೆ ಎಂದು ಅರ್ಥೈಸಲು ಒಂದು ದಾಖಲೆ ಬೇಕಲ್ಲ; ಅದಕ್ಕಾಗಿ ಪಾಠ ಪುಸ್ತಕ ಬೇಕು. 

ಮೂರನೆಯದಾಗಿ ಕಲಿಕಾ ಪ್ರಕ್ರಿಯೆಗೆ ಒಂದು ಸ್ಪಷ್ಟ ಚೌಕಟ್ಟು ಮತ್ತು ಕ್ರಮಬದ್ಧ ವಿಸ್ತರಣೆಗಾಗಿ ಪಠ್ಯ ಪುಸ್ತಕ ಬೇಕು. ಹಾಗಾದರೆ ಪಠ್ಯ ಪುಸ್ತಕ ಪರಿಪೂರ್ಣವೇ? ಎಂದು ಕೇಳಿದರೆ ಪರಿಪೂರ್ಣ ಅಲ್ಲ. ನೋಡಿ, ಅಧ್ಯಾಪಕರ ನೇಮಕಾತಿಯಾದಾಗ 72.66% ನವನು ನೇಮಕ ಆಗುತ್ತಾನೆ. 72.65 ನವ ನೇಮಕ ಆಗುವುದಿಲ್ಲ. 0.01% ಕಡಿಮೆ ಅಂಕದವನ ಮೆರಿಟ್ ಭಾರೀ ಕಡಿಮೆ ಇದ್ದು ನೇಮಕಾತಿಗೆ ಅನರ್ಹನೇ? ಎಂದು ಕೇಳಿದರೆ ಅಲ್ಲ; ಅವನೂ ಅರ್ಹನೇ. ಆದರೆ ಒಂದು ವ್ಯವಸ್ಥೆಯಲ್ಲಿ ಯಾವುದಾದರೊಂದು ಮಾನದಂಡ ಬೇಕಾಗುತ್ತದೆ. ಪಠ್ಯವೂ ಅಷ್ಟೆ.

* ಅಧಿಕೃತ ಪಠ್ಯ ಇಲ್ಲದ ನಲಿ- ಕಲಿಯ ವೈಫಲ್ಯದ ಬಗ್ಗೆ ಕೇಳಿದ್ದೀರಿ. ಅಲ್ಲಿ ಪಠ್ಯದ ಅಗತ್ಯ ಇಲ್ಲ. ಆದರೆ ಪಾಠ ಪುಸ್ತಕ ಕೊಡದ ಮೇಲೆ ಇಂತಿಂತಹ ಸಾಮರ್ಥ್ಯ ಮಗುವಿಗೆ ಬರಬೇಕು ಎಂದು ತಿಳಿಸಿ ಬೋಧನಾ ಸ್ವಾತಂತ್ರ್ಯವನ್ನು ಅಧ್ಯಾಪಕರಿಗೆ ಕೊಡಬೇಕು. ಅದು ಬಿಟ್ಟು ನಾವು ಕಾರ್ಡ್ ಕೊಡುತ್ತೇವೆ ಎನ್ನುವುದು, ಕಾರ್ಡು ಕೊಡದೆ ಇರುವುದು, ಯಾಕೆ ಮಾಡಲಿಲ್ಲ ಎಂದು ಕೇಳುವುದು ಇಂತಾದ್ದೆಲ್ಲ ಮಾಡಿದರೆ ವಿಫಲವಾಗುತ್ತದೆ.

* ಇತಿಹಾಸ ಪಠ್ಯ ಯಾಕೆ ವಿವಾದ ಆಗುತ್ತದೆ? ಎಂದು ಕೇಳಿದ್ದೀರಿ. ಇತಿಹಾಸದಲ್ಲಿ ರಾಜಕೀಯ ಇತಿಹಾಸ ಇದೆ. ಆ ಇತಿಹಾಸದ ಬೆಳವಣಿಗೆಯೇ ಇಂದಿನ ರಾಜಕೀಯವಾಗಿರುತ್ತದೆ. ಆದ್ದರಿಂದ ಇತಿಹಾಸದ ರಾಜಕೀಯ ಅಂಶಗಳಿಗೆ ವರ್ತಮಾನದ ರಾಜಕೀಯದ ಪ್ರವೇಶವೂ ಜಾಸ್ತಿ ಇರುತ್ತದೆ. ಅಲ್ಲಿ ಒಂದು ರಾಜಕೀಯ ಸಂಕಥನವನ್ನು ಪ್ರಶ್ನಿಸುವ ಮತ್ತೊಂದು ರಾಜಕೀಯ ಸಂಕಥನ ಇದ್ದಾಗ ರಾಜಕೀಯ ಸಂಕಥನಗಳ ನಡುವಿನ ಸಂಘರ್ಷದ ಪರಿಣಾಮವಾಗಿ ವಿವಾದ ಆಗುತ್ತದೆ. ಜನಜೀವನದ ಇತಿಹಾಸ ವಿವಾದ ಆಗುವುದಿಲ್ಲ.

ನಾನು ಜನ ಜೀವನದ ಇತಿಹಾಸ ಎಂದುದನ್ನು ರೋಹಿತ್ ಚಕ್ರತೀರ್ಥ ಅವರು," ಆರ್ಯರು ಮಧ್ಯ ಏಷ್ಯಾದಿಂದ ಬಂದರು. ಅದನ್ನು ವೇದ ಕಾಲೀನ ಸಂಸ್ಕೃತಿ ಎನ್ನುತ್ತಾರೆ" ಎಂಬ ವಾಕ್ಯದ ಮೂಲಕ ಜನ ಜೀವನದ ಇತಿಹಾಸವೂ ವಿವಾದ ಆಗಲು ಸಾಧ್ಯವಿದೆ ಎಂದರು. ಅವರು ಹೇಳಿದ ವಿಷಯ ಸರಿ. ಆದರೆ ಈ ವಾಕ್ಯ ಜನ ಜೀವನದ ಇತಿಹಾಸ ಅಲ್ಲ. ಅದು ರಾಜಕೀಯ ದೃಷ್ಠಿಕೋನದ ಸಂಕಥನ. ಆದ್ದರಿಂದ ವಿವಾದ ಆಗುತ್ತದೆ. ನಾನೊಂದು ವಾಕ್ಯ ಕೊಡುತ್ತೇನೆ. " ಋಗ್ವೇದದಲ್ಲಿ ನೂಲು ತೆಗೆದು ಬಟ್ಟೆ ಮಾಡುವುದನ್ನು ಹೇಳಿದ್ದಾರೆ". ಇದು ನನ್ನ ವಾಕ್ಯ. ಇದು ಜನ ಜೀವನದ ಇತಿಹಾಸ. ಇದು ಯಾರಿಗೂ ವಿವಾದದ ವಿಷಯವಲ್ಲ. ಇನ್ನೊಂದು ವಾಕ್ಯ ಕೊಡುತ್ತೇನೆ. "ಔರಂಗಜೇಬನು ಟೊಪ್ಪಿಯನ್ನು ತಾನೇ ಹೊಲಿದು ಮಾರಾಟಕ್ಕೆ ಕಳಿಸುತ್ತಿದ್ದನು". ಇದು ನನ್ನ ವಾಕ್ಯ. ಅವನು ರಾಜ. ಅವನ ಬಗ್ಗೆ ಸಿಕ್ಕಾಪಟ್ಟೆ ವಿವಾದಗಳಿವೆ. ಆದರೆ ನಾನು ಹೇಳಿದ ವಾಕ್ಯದ ಬಗ್ಗೆ ವಿವಾದ ಎಲ್ಲಿದೆ? ಇದು ಒಬ್ಬ ಮನುಷ್ಯನಾಗಿ ಅವನ ನಡೆವಳಿಕೆ ಅಷ್ಟೆ. ಆದರೆ ಇದೂ ರಾಜಕೀಯ ದೃಷ್ಟಿಕೋನದಲ್ಲಿ ಅರ್ಥೈಸಲ್ಪಟ್ಟಾಗ ವಿವಾದ ಆಗುತ್ತದೆ.

* ವಿವಾದಿತ ವಿಷಯವನ್ನು ಒಬ್ಬ ಅಧ್ಯಾಪಕನಾಗಿ ನಾನು ಹೇಗೆ ಪಾಠ ಮಾಡುತ್ತೇನೆ ಎಂದು ಕೇಳಿದ್ದೀರಿ. ಎಷ್ಟೇ ವಿವಾದಿತ ಪಾಠವಾದರೂ ನನಗೆ ಕಿಂಚಿತ್ತೂ ಸಮಸ್ಯೆ ಇಲ್ಲ. ಅದನ್ನು ಹೇಗೆ ಪಾಠ ಮಾಡಬೇಕು ಎಂದು ನನಗೆ ಪಾಠ ಪುಸ್ತಕ ಹೇಳುವುದಿಲ್ಲ. ಬದಲು ಹಿಸ್ಟರಿ ಮೆಥಡಾಲಜಿ ನನಗದನ್ನು ಹೇಳಿದೆ. ಪಾಠ ಪುಸ್ತಕ ನೀವು ಕೊಟ್ಟದ್ದನ್ನು ನಾನು ಮಾಡಬೇಕು. ಹೇಗೆ ಮಾಡಬೇಕು ಎನ್ನುವುದು ಮೆಥಡಾಲಜಿ ನನಗೆ ಏನನ್ನು ಹೇಳಿದೆಯೋ ಅದನ್ನು ಮಾಡಬೇಕು. ಇತಿಹಾಸದ ಬೋಧನೋದ್ದೇಶ ಏನು? ಇತಿಹಾಸ ಕಳೆದುಹೋಗಿದೆ. ಏನು ಮಾಡಿಯೂ ಅದನ್ನು ತಿದ್ದಲಾಗದು. ಆದರೆ," ಹಿಸ್ಟರಿ ಈಸ್ ಟೆಲಿಸ್ಕೋಪ್ ಆಫ್ ದ ಪಾಸ್ಟ್, ಮೈಕ್ರೋಸ್ಕೋಪ್ ಆಫ್ ದ ಪ್ರಸೆಂಟ್. ಹಾರೋಸ್ಕೋಪ್ ಆಫ್ ದ ಫ್ಯೂಚರ್". ಭವಿಷ್ಯದ ನಿರ್ಮಾಣ- ವರ್ತಮಾನದ ನಿರ್ವಹಣೆ. ಮಗುವಿಗೆ ಮಾನವ ನಾಗರಿಕತೆಯ ಯಾನದ ಪರಿಚಯ ಆಗಬೇಕು. ಅದರಲ್ಲಿ ಒಳಿತು, ಕೆಡುಕು, ಅಸಹ್ಯ ಎಲ್ಲವೂ ಇದೆ. ಇದನ್ನೆಲ್ಲ ಓದಿದಾಗ ಸಂಕುಚಿತ ದೃಷ್ಟಿಕೋನ ಹೊರಟು ಹೋಗಿ ವಿಶಾಲ ದೃಷ್ಟಿ ಪ್ರಾಪ್ತವಾಗಬೇಕು. ಎರಡನೆಯದಾಗಿ ಮಗುವಿನಲ್ಲಿ ಮೆಚ್ಚುಗೆಯ ಭಾವನೆ ಬರಬೇಕು. ವಿಮರ್ಶಾ ಪ್ರಜ್ಞೆಯೂ ಬರಬೇಕು. ಯಾವುದನ್ನು ಮೆಚ್ಚುಗೆಯಾಗಿ ಕೊಡಬೇಕು, ಯಾವುದನ್ನು ವಿಮರ್ಶೆಯಾಗಿ ಕೊಡಬೇಕು ಎಂದು ನಿರ್ಧರಿಸಲಿಕ್ಕಾಗಿಯೇ ನನಗೆ ಬಿ. ಎಡ್. ಪದವಿ ಕೊಟ್ಟಿರುವುದು. ನಾಲ್ಕನೆಯದಾಗಿ ಮಾನವ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞೆ ಮಗುವಿನಲ್ಲಿ ಬರಬೇಕು. ಒಬ್ಬ ಕೆಟ್ಟ ರಾಜ ಎಂದು ಭಾವಿಸಿ. ಅಂತಹವನಿಗೂ ಸಾವು ಇತ್ತು. ಸಾಯುವ ಕೊನೆಯ ಕ್ಷಣದಲ್ಲಾದರೂ ತಾನು ಮಾಡಿದ ಕೆಡುಕುಗಳು ತಪ್ಪಾಯಿತು ಎಂದು ಅವನಿಗೆ ಅನಿಸಿರಲಿಕ್ಕಿಲ್ಲವೆ? ಏಕೆಂದರೆ ಅವನೂ ಒಬ್ಬ ಮನುಷ್ಯ. ಅಥವಾ ಅನಿಸಿಲ್ಲದೆಯೂ ಇರಬಹುದು. ಅನಿಸಿದ್ದರೆ ಯಾಕೆ ಅನಿಸಿರುತ್ತದೆ? ಅನಿಸಿಲ್ಲದಿದ್ದರೆ ಯಾಕೆ ಅನಿಸಿಲ್ಲ? ಎಂಬ ಬಹುಮುಖಿ ಚಿಂತನೆಯ ಪ್ರಶ್ನೆಯನ್ನು ಮಗುವಿಗೆ ಬಿಟ್ಟುಬಿಡುತ್ತೇನೆ. ಮಗು ಅದರ ಬಗ್ಗೆ ಯೋಚಿಸಿದಂತೆಲ್ಲ ಮಾನವ ವರ್ತನೆಗಳನ್ನು ಅದು ತನ್ನೊಳಗೆ ತಾನೇ ಅಭ್ಯಾಸ ಮಾಡುತ್ತಾ ಹೋಗುತ್ತದೆ.

* ನಾನು ಹೇಳಲೇ ಬೇಕಾದ್ದು ಶಿಕ್ಷಣ ಯಶಸ್ವಿಯಾಗಬೇಕಾದರೆ ಪಠ್ಯ ವಸ್ತು- ಕಲಿಕಾ ಪ್ರಕ್ರಿಯೆ- ಮೌಲ್ಯಮಾಪನ ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿ ಬರಬೇಕು? ಉದಾಹರಣೆಗೆ ಭಾಷಾ ಪಠ್ಯಗಳು. ಆಲಿಸುವ ಸಾಮರ್ಥ್ಯ, ಮಾತನಾಡುವ ಸಾಮರ್ಥ್ಯ, ಓದುವ ಸಾಮರ್ಥ್ಯ, ಬರೆಯುವ ಸಾಮರ್ಥ್ಯ, ಚಿಂತನಾ ಸಾಮರ್ಥ್ಯ, ಪರಾಮರ್ಶನಾ ಸಾಮರ್ಥ್ಯ ಇಷ್ಟು ಅಂಶಗಳು ಭಾಷಾ ಬೋಧನೆಯಿಂದ ಮಗುವಿಗೆ ಬರಬೇಕು. ಈ 6 ಸಾಮರ್ಥ್ಯದಲ್ಲಿ ಬರೆಯುವ ಸಾಮರ್ಥ್ಯ ಒಂದು ಮಾತ್ರ ಪರೀಕ್ಷೆಗೆ ಒಳಗಾಗುತ್ತದೆ. ಹಾಗಾದರೆ ಉಳಿದ 5 ಸಾಮರ್ಥ್ಯಗಳು‌ ಮಗುವಿಗೆ ಬಂದಿದೆಯೊ ಇಲ್ಲವೊ? ಎಂದು ಗೊತ್ತಾಗುವುದು ಹೇಗೆ? ಗೊತ್ತಾಗುವುದೇ ಇಲ್ಲ. ಪ್ರಮಾಣ ಪತ್ರ ಕೊಡಲಾಗುತ್ತದೆ. ಪಠ್ಯ ರಚನೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆಯೆ? ಉದಾಹರಣೆಗೆ ಕನ್ನಡ ಪಠ್ಯ. ಒಂದು‌ ಅಭಿಜಾತ ಕಾವ್ಯ, ಒಂದು ನವೋದಯ, ಒಂದು ನವ್ಯ, ಒಂದು ಬಂಡಾಯ, ಒಬ್ಬ ಮಹಿಳೆ, ಒಬ್ಬ ದಲಿತ, ಒಬ್ಬ ಮುಸ್ಲಿಂ, ಒಬ್ಬ ಉತ್ತರ ಕರ್ನಾಟಕ, ಒಬ್ಬ ದಕ್ಷಿಣ ಕರ್ನಾಟಕ ಎಂದು ಕವಿಗೆ ನ್ಯಾಯ ಸಲ್ಲಿಸುವ ರೀತಿಯಲ್ಲಿ ಪಾಠ ಪುಸ್ತಕ ಇರುತ್ತದೆ. ಮಗುವಿಗೆ ನ್ಯಾಯ ಸಲ್ಲಿಸಿದ್ದೀರಾ? ಶೈಕ್ಷಣಿಕ ಮನೋವಿಜ್ಞಾನವನ್ನು ಅಭ್ಯಾಸ ಮಾಡಿದವನಿಗೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಾಳ ಹಾಕಿಕೊಂಡು ಹೇಳುವ ರೀತಿಯ ಕವಿತೆ ಇಷ್ಟವಾಗುತ್ತದೆ. ಪ್ರೌಢಶಾಲಾ ಮಕ್ಕಳಿಗೆ ಏರು ದನಿಯಲ್ಲಿ 'ಜೋಶ್' ನಲ್ಲಿ ಹೇಳುವ ಕವಿತೆ ಇಷ್ಟವಾಗುತ್ತದೆ ಎಂದು ಗೊತ್ತಿರುತ್ತದೆ. ಪಠ್ಯ ರಚನೆ ಮಾಡುವವರು ಈ ಆಧಾರದಲ್ಲಿ ರಚಿಸಬೇಕಾಗುತ್ತದೆ.

ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯ, ವಿಮರ್ಶಾತ್ಮಕತೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವ ಹಂತದಲ್ಲಿ ಎಷ್ಟು? ಲಾರೆನ್ಸ್ ಕೊಹಲ್ಬರ್ಗ್ ಅವರ ನೈತಿಕತೆಯ ವಿಕಾಸದ ಪ್ರಮೇಯದ ಅರಿವಿರುವವನಿಗೆ ಇದು ಗೊತ್ತಿರುತ್ತದೆ. ಒಂದು ಸನ್ನಿವೇಶವನ್ನು ಉಳಿದ ಸನ್ನಿವೇಶಕ್ಕಿಂತ ತೀರಾ ಪ್ರತ್ಯೇಕವಾಗಿ ಇರಿಸಿ ಅರ್ಥೈಸಬೇಕಾದ ವಿಷಯಗಳನ್ನು ಪ್ರೌಢ ಹಂತದ ವರೆಗೆ ಕೊಡಬಾರದು. ಆ ಸಾಮರ್ಥ್ಯ ಬರುವುದು ಪದವಿಯ ಹಂತದಲ್ಲಿ. ಪ್ರೌಢ ಹಂತದಲ್ಲಿ ಮಗು ನೈತಿಕತೆಯ ಸಾರ್ವತ್ರಿಕ ಅಭಿಸ್ಥಾಪನೆಯ ಹಂತದಲ್ಲಿರುತ್ತದೆ. ಅಂದರೆ ನೀತಿ ಸಾರ್ವತ್ರಿಕವಾಗಿ ಅನ್ವಯವಾಗಬೇಕೆಂದು ಭಾವಿಸುವುದು. ಹಿಂದೆ ಕನ್ನಡದಲ್ಲಿ ಗೀತಾ ನಾಗಭೂಷಣರ ಒಂದು ಪಾಠ ಇತ್ತು. ಅದರಲ್ಲಿ ಬಡ ತಾಯಿ ತನ್ನ ದೇಹವನ್ನು ವಿಕ್ರಯಿಸಿ ಮಗುವಿಗೆ ಒಳ್ಳೆಯದನ್ನು ಮಾಡಲು ಹೊರಡುತ್ತಾಳೆ. ಪಾಠದ ಆಶಯ ಒಳ್ಳೆಯದೇ. ಯಾರಿಗೆ? ನಮಗೆ. ನೀತಿ ಸಾರ್ವತ್ರಿಕವಾಗಿ ಒಂದೇ ರೀತಿ ಇರಬೇಕು ಎಂದು ಭಾವಿಸುವ ವ್ಯಕ್ತಿತ್ವ ವಿಕಾಸದ ಹಂತದಲ್ಲಿರುವ ಮಗು ಇದನ್ನು ಹೇಗೆ ಅರ್ಥೈಸಬೇಕು?

* ಭಾಷಾ ಕಲಿಕೆಯ ಬಗ್ಗೆ ರೋಹಿತ್ ಚಕ್ರತೀರ್ಥ ಅವರನ್ನು ನಾನು ಪೂರ್ತಿಯಾಗಿ ಸಮರ್ಥಿಸುತ್ತೇನೆ. ಭಾಷಾ ಕಲಿಕೆ ವ್ಯಾಕರಣದ ತಳಹದಿಯಲ್ಲೆ ನಡೆಯಬೇಕು.

* ಭಾರತೀಯತೆಯ ಮೇಲೆಯೇ ಪಠ್ಯವನ್ನು ರೂಪಿಸಬಹುದು ಎಂಬ ರೋಹಿತ್ ಅವರ ವಿಚಾರ ಚೆನ್ನಾಗಿದೆ.‌ಆದರೆ ಅದರ ಸಾಧ್ಯತೆಯ ಬಗ್ಗೆ ನನಗೆ ಅನುಮಾನಗಳಿವೆ. ಮೊದಲನೆಯದಾಗಿ ಇಂದು ನಮ್ಮೆಲ್ಲರ ಅಸ್ತಿತ್ವ ಅಂತಾರಾಷ್ಟ್ರೀಯ ಅಸ್ತಿತ್ವದ ಒಂದು ಭಾಗ. ಹಾಗಿರುವಾಗ ಅದರಿಂದ ಭಾರತೀಯತೆಯನ್ನು ಪ್ರತ್ಯೇಕಿಸುವುದು ಹೇಗೆ ಎಂಬ ಪ್ರಶ್ನೆ ಇದೆ. ಸಂಸ್ಕೃತಿಯ ಆಧಾರದಲ್ಲಿ ಪ್ರತ್ಯೇಕಿಸುತ್ತೇವೆ ಎಂದು ಭಾವಿಸಿ. ಆದರೆ ಶಿಕ್ಷಣದ ಉದ್ದೇಶ ಸಂಸ್ಕೃತಿ ಮಾತ್ರವೇ ಆಗಿರುವುದಿಲ್ಲ.‌ ಸಂಸ್ಕೃತಿಗೆ ಆರ್ಥಿಕತೆಯ ಬೆಂಬಲ ಬೇಕು. ಪುರಾತನ ಗುರುಕುಲ ಶಿಕ್ಷಣ ಅಂತರಂಗದ ಸಮೃದ್ಧತೆಗೆ ಜಾಸ್ತಿ ಒತ್ತುಕೊಟ್ಟು ಬಹಿರಂಗವನ್ನು ಹೆಚ್ಚು ಗಮನಿಸದೆ ಕುಸಿಯಿತು. ಇಂದಿನ ಆಧುನಿಕ ಶಿಕ್ಷಣ ಬಹಿರಂಗಕ್ಕೆ ಮಾತ್ರ ಆದ್ಯತೆ ಕೊಟ್ಟು ಅಂತರಂಗವನ್ನು ಖಾಲಿ ಇರಿಸಿ ಕುಸಿಯುತ್ತಿದೆ. ಶಿಕ್ಷಣವು ಆರ್ಥಿಕ-ಸಾಂಸ್ಕೃತಿಕ- ಆಧ್ಯಾತ್ಮಿಕ ಮೂರೂ ಅವಶ್ಯಕತೆಗಳನ್ನೂ ತುಂಬಿಕೊಡಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮೈತ್ರೇಯಿ ಕೇಳಿದ ಪ್ರಶ್ನೆಗೆ ಯಾಜ್ಞ ವಲ್ಕ್ಯ ನಾನು ನನ್ನನ್ನು ಪ್ರೀತಿಸುವುದರಿಂದ ನಿನ್ನನ್ನು ಪ್ರೀತಿಸುತ್ತೇನೆ. ನಾನು ನನ್ನನ್ನು ಪ್ರೀತಿಸುವುದರಿಂದ ದೇವರನ್ನು ಪ್ರೀತಿಸುತ್ತೇನೆ. ನಾನು ನನ್ನನ್ನು ಪ್ರೀತಿಸುವುದರಿಂದ ವಿಶ್ವವನ್ನು ಪ್ರೀತಿಸುತ್ತೇನೆ ಎನ್ನುತ್ತಾ ವಿಶ್ವದ ಒಂದು ಭಾಗವಾಗಿಯೇ ವ್ಯಕ್ತಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಬೃಹತ್ ವಿಶ್ವಾತ್ಮಕ ದೃಷ್ಟಿಯನ್ನು ಮಂಡಿಸುತ್ತಾರೆ. ಈ ಪರಿಕಲ್ಪನೆಯ ತಾತ್ವಿಕತೆಯನ್ನು ಅಂತಾರಾಷ್ಟ್ರೀಯ ಮುಖ್ಯವಾಹಿನಿಯ ಭಾಗವಾಗಿ ಮಾಡಿದಾಗ ಭಾರತೀಯತೆಯ ಆಧಾರದಲ್ಲೆ ಶಿಕ್ಷಣವನ್ನು ರೂಪಿಸಬಹುದು.

ಇಂತಹ ಪ್ರಯೋಗಗಳು ವೈಯಕ್ತಿಕವಾಗಿ ಯಶಸ್ವಿಯಾಗುತ್ತವೆ. ನನ್ನ ಇಬ್ಬರು ಮಕ್ಕಳೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯವರೇ. ಆದರೆ ಎಲ್ಲರೂ ಅದನ್ನೆ ಮಾಡಿ ಎಂದರೆ ಸಾರ್ವತ್ರಿಕ ಸ್ವೀಕಾರಾರ್ಹತೆ ಬರುತ್ತದಾ? ಸಾರ್ವತ್ರಿಕ ಸ್ವೀಕಾರಾರ್ಹತೆ ಬರುವುದಾದರೆ ಭಾರತೀಯತೆಯ ಆಧಾರದಲ್ಲಿ ಪಠ್ಯವನ್ನು ರೂಪಿಸಬಹುದು.

* ಕಂಠಪಾಠ ಮತ್ತು ಅರ್ಥ ಮಾಡಿಕೊಂಡು ಕಲಿಯುವ ವಿಚಾರದಲ್ಲಿ ಕೇಳಿದ ಪ್ರಶ್ನೆಯ ಬಗ್ಗೆ ಉತ್ತರಿಸುವ ಮೊದಲು ಈ ಚರ್ಚೆಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಇದು ತಂದೆಯ ಕಾಲದಲ್ಲಿ ಕಿರುಕುಳ ಕೊಡುತ್ತಿದ್ದ ಬೆಕ್ಕನ್ನು ಕಟ್ಟಿ ಹಾಕಿ ಶ್ರಾದ್ಧ ಮಾಡಿದ್ದನ್ನು ನೋಡಿ ನೋಡಿ ಅದೂ ಶ್ರಾದ್ಧದ ಪದ್ಧತಿಯೇ ಎಂದು ಭಾವಿಸಿದ ಮಗ ತನ್ನ ಕಾಲದಲ್ಲಿ ಪಕ್ಕದ ಮನೆಯಿಂದ ಬೆಕ್ಕನ್ನು ತಂದು ಕಟ್ಟಿ ಹಾಕಿ ಶ್ರಾದ್ಧ ಮಾಡಿದ ಹಾಗೆ ಆಗಿದೆ. ಕಂಠ ಪಾಠ ಬೇಡ ಎಂದರೆ ಕಂಠ ಪಾಠದ ಮೂಲಕವೇ ಸಾವಿರಾರು ವರ್ಷಗಳ ಕಾಲ ನೆನಪಿರಿಸಿಕೊಂಡು ಬಂದ ಸಾಹಿತ್ಯ ಪರಂಪರೆಯ ಹಿಂದೆ ಇರುವ ನೆನಪಿನ ಸಾಮರ್ಥ್ಯಕ್ಕೆ ಆಕ್ಷೇಪ ಅಲ್ಲ. ಅದು ಕೇವಲ ಯಾಂತ್ರಿಕ ಕಲಿಕೆ ಆಗಬಾರದು ಎಂದಷ್ಟೆ. ಕಂಠ ಪಾಠವೂ ಕಲಿಕೆಯ ಒಂದು ಪದ್ಧತಿಯೇ. ಎಲ್ಲಿ ಕಂಠ ಪಾಠ ಪದ್ಧತಿಯನ್ನು ಅಳವಡಿಸಬೇಕು, ಎಲ್ಲಿ ಅರ್ಥ ಮಾಡಿಕೊಳ್ಳುವ ಪದ್ಧತಿಯನ್ನು ಅನುಸರಿಸಬೇಕು ಎಂದು ಗೊತ್ತಿರಬೇಕು.

* ವೈವಿಧ್ಯದಲ್ಲಿ ಏಕತೆಯೊ- ಏಕತೆಯಲ್ಲಿ ವೈವಿಧ್ಯವೊ ಎಂಬ ಶಬ್ದ ಜಿಜ್ಞಾಸೆಗೆ ನಾನಿಲ್ಲಿ ಹೋಗುವುದಿಲ್ಲ. ನಿಮ್ಮ ಪ್ರಶ್ನೆ ಅರ್ಥ ಆಗಿದೆ. ವೈವಿಧ್ಯವನ್ನು ಪ್ರತಿನಿಧಿಸುವ ಹಾಗೆ ಪಠ್ಯವನ್ನು ಮಾಡಬಹುದೆ? ಎಂದು ನಿಮ್ಮ ಪ್ರಶ್ನೆ. 

ಇಲ್ಲಿ ಪರಿಕಲ್ಪನಾ ಸ್ಪಷ್ಟತೆ ಬೇಕು. ಈಗ ಇತಿಹಾಸ ಮತ್ತು ಚರಿತ್ರೆ ಎರಡನ್ನೂ ಒಂದೇ ಎಂದು ನಾವು ಭಾವಿಸುತ್ತೇವೆ. ಆದರದು ಹಾಗಿಲ್ಲ. ಚರಿತ್ರೆ ನಿರೂಪಣೆ ಭಾರತೀಯ ಪದ್ಧತಿ. ರಾಮ ಚರಿತ್ರೆ, ಶರಭ ಚರಿತ್ರೆ...ಹೀಗೆ. ಅದರಲ್ಲಿ ರೂಪಕ ಭಾಷೆಯ ಬಳಕೆ ಇದೆ. ಆದರೆ ಮೌಲ್ಯಾತ್ಮಕವಾದದ್ದನ್ನು ಅದು ದಾಖಲಿಸುತ್ತದೆ. ಅದು ರಚನೆಗೊಂಡ ಕಾಲಮಾನಕ್ಕೆ ಕೆಡುಕು ಎನಿಸಿದ್ದನ್ನು ಹೆಚ್ಚು ಉಳಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ರೂಪಕ ಭಾಷೆ ಇರಕೂಡದು. ಅದು ಘಟನೆಗಳ ಸರಮಾಲೆ. ಒಳ್ಳೆಯದೊ ಕೆಟ್ಟದೊ ಎನ್ನುವುದು ಮುಖ್ಯವಲ್ಲ. ನನಗೆ ಸಿಕ್ಕಿದ ದಾಖಲೆ ಇದನ್ನು ಹೇಳುತ್ತದೆ ಎಂದಷ್ಟೆ. ಅದೇ ರೀತಿ ಅಸಮಾನತೆ ಮತ್ತು ಭಿನ್ನತೆ. ಭಿನ್ನತೆ ಪ್ರಕೃತಿಯ ನಿಯಮ. ಅಸಮಾನತೆ ಪ್ರಕೃತಿ ನಿಯಮವಲ್ಲ. ಸಿಂಹಕ್ಕಿಂತ ದುರ್ಬಲವಾದ ಜಿಂಕೆಗೆ ಸಿಂಹ ನಾನು ನೀರು ಕುಡಿಯುವ ಕೊಳದಲ್ಲಿ ನೀನು ನೀರು ಕುಡಿಯಬಾರದು ಎಂದು ಯಾವತ್ತೂ ಹೇಳುವುದಿಲ್ಲ.

ಇಲ್ಲಿ ಕಲಿಕಾ ವಸ್ತು ಮತ್ತು ಕಲಿಕಾ ಸಾಮರ್ಥ್ಯಗಳು ಬೇರೆ ಬೇರೆ ಎಂದು ಅರ್ಥ ಮಾಡಿಕೊಳ್ಳಬೇಕು. ದಕ್ಷಿಣ ಕನ್ನಡದಲ್ಲಿ ಮಳೆಗಾಲ ಹಾಕಿಕೊಳ್ಳಲು ಗೊರಬ್ಬೆ ಎಂದು ಮಾಡುತ್ತಾರೆ. ಇದನ್ನು ಮಕ್ಕಳಿಗೆ ಕಲಿಸುತ್ತೀರಿ ಎಂದು ಭಾವಿಸಿ. ಬೀದರ್‌ನಲ್ಲಿ ಬಿದರಿ ಕೆತ್ತನೆಯನ್ನು ಮಕ್ಕಳಿಗೆ ಕಲಿಸುತ್ತೀರಿ ಎಂದು ಭಾವಿಸಿ. ಎರಡೂ ಜಿಲ್ಲೆಯ ಮಕ್ಕಳಿಗೆ ಕಲಿಕಾ ವಸ್ತುಗಳು ಬೇರೆ ಬೇರೆ. ಆದರೆ ಎರಡು ಜಿಲ್ಲೆಯವರಲ್ಲೂ ಕಲಿಕಾ ಸಾಮರ್ಥ್ಯ ಸಮಾನವಾಗಿ ಹೆಚ್ಚಾಗಿದೆ. ಪಠ್ಯ ಪುಸ್ತಕಗಳನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಿದರೆ ವೈವಿಧ್ಯಗಳನ್ನು ಹೆಚ್ಚು ಒಳಗೊಳಿಸಿಕೊಂಡು ಪಠ್ಯವನ್ನು ಮಾಡಬಹುದು.

ಆದರೆ ಈ ವೈವಿಧ್ಯ ಮತ್ತು ಏಕತೆಯನ್ನು ತೀರಾ ಅತಿಯಾಗಿಸಬಾರದು. ಹಾಗೆ ವೈವಿಧ್ಯ ಎಂದರೆ ಒಬ್ಬೊಬ್ಬ ವ್ಯಕ್ತಿಯೂ ವೈವಿಧ್ಯವೇ. ಹಾಗೆಂದು ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಪಠ್ಯ ಮಾಡಲು ಬರುವುದಿಲ್ಲ. ವೈವಿಧ್ಯತೆಯ ಪ್ರತಿಪಾದನೆಯು ರಾಷ್ಟ್ರವನ್ನು ಛಿದ್ರಗೊಳಿಸುವ ಪ್ರತಿಪಾದನೆಯಾಗದೆ, ಏಕತೆಯ ಪ್ರತಿಪಾದನೆಯು ಭಿನ್ನ ಅಸ್ತಿತ್ವವೇ  ಇಲ್ಲದಂತೆ ಮಾಡುವ ಪ್ರತಿಪಾದನೆಯಾಗದೆ ಒಂದು ಸಾಮಾನ್ಯ ಸ್ತರದಲ್ಲಿ ಹೊಂದಾಣಿಕೆಯನ್ನು ಸಾಧಿಸುವ ಮಾದರಿಯಲ್ಲಿ ಇರಬೇಕಾಗುತ್ತದೆ.

ಆದರೆ ಬಹುತ್ವವನ್ನು ಒಳಗೊಳಿಸಲು ಜಿಲ್ಲಾ ಮಟ್ಟದ ಪಠ್ಯಗಳಿಗೆ ಸಾಧ್ಯವಾದರೂ ಆಗ ಶಿಕ್ಷಣ ಯಶಸ್ಸನ್ನು ಕಾಣಬೇಕಾದರೆ ಆರ್ಥಿಕ ಮತ್ತು ಆಡಳಿತಾತ್ಮಕ ಮರು ರಚನೆಗಳು ಬೇಕಾಗುತ್ತವೆ. ಆರ್ಥಿಕತೆಯೊಂದಿಗೆ ಸಂಬಂಧವನ್ನು ಸಾಧಿಸದ ಶಿಕ್ಷಣ ಯಶಸ್ವಿಯಾಗುವುದಿಲ್ಲ. ಕಾರ್ಪೊರೇಟ್ ರಂಗದ ಅಂತಾರಾಷ್ಟ್ರೀಯ ಮುಕ್ತ ಆರ್ಥಿಕತೆ, ಸ್ವಲ್ಪ ಮಟ್ಟಿಗೆ ಮಧ್ಯಮ ಹಂತದಲ್ಲಿ ಸರಕಾರದ ಮಧ್ಯಪ್ರವೇಶ ಇರುವ ನೆಹರೂವಿಯನ್ ಮಾದರಿಯ ಆರ್ಥಿಕತೆ, ತಳಹಂತದಲ್ಲಿ ಸರಕಾರದ ಪ್ರವೇಶ ಇಲ್ಲದ ಆದರೆ ಜನರ ಸಹಭಾಗಿತ್ವದ ಗಾಂಧಿಯನ್ ಮಾದರಿಯ ಸಹಕಾರಾತ್ಮಕ ಆರ್ಥಿಕತೆಯ ಸ್ವರೂಪವನ್ನು ಮಾಡಿಕೊಂಡರೆ ಅಲ್ಲಿ ಜಿಲ್ಲಾ ಮಟ್ಟದ ಪಠ್ಯಗಳು ಯಶಸ್ವಿಯಾಗಲು ಸಾಧ್ಯವಿದೆ.

*💦SSLC 2022 OFFICIAL KEY ANSWERS*🍅ಮಾರ್ಚ ಎಪ್ರೀಲ್ 2022 ರ SSLC ಮುಖ್ಯ ಪರೀಕ್ಷೆಯ ಮಾದರಿ ಕೀ ಉತ್ತರಗಳು ಅಧಿಕೃತವಾಗಿ ಪ್ರಕಟವಾಗಿದ್ದು, ವೀಕ್ಷಿಸಲು*👇🏿

ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿCLICK 

Friday 1 April 2022

_*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿

🦢  _*ಅಮೃತಾತ್ಮರೇ, ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು*_  🦢

  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-92*_
     _*ದಿನಾಂಕ: 02.04.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
   _*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿
••••••••••••••••••••••••••••••••••••••••••••
  _ಯುಗಾದಿಯಲ್ಲಿ "ಮಾನವ ಶರೀರದಲ್ಲಿ ಆಗುವ ಬದಲಾವಣೆ" ಮತ್ತು "ಬೇವು-ಬೆಲ್ಲ" ಈ ಎರಡರ ಮಹತ್ವವನ್ನು ನೋಡಿದರೆ ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿನ ಆಹಾರದಿಂದ ಒದಗಿಬರುವ ಆರೋಗ್ಯದ ಮಹತ್ವವನ್ನು ತಿಳಿಯಬಹುದು. ಇದಕ್ಕಾಗಿ ಭಾರತೀಯರು ಕಂಡುಕೊಂಡ "ಆಸ್ಪತ್ರೆ ರಹಿತ ಜೀವನ" ಮತ್ತು "ಆಯುರ್ವೇದ ಚಿಕಿತ್ಸೆ" ಎರಡನ್ನೂ ಅರಿಯಬಹುದು._
          🌿🌿🌿🌿🌿

*ಯುಗಾದಿಯಲ್ಲಿ ಮಾನವ ಶರೀರದಲ್ಲಿ ಆಗುವ ಬದಲಾವಣೆ:*

  _ಮಾನವನ ಶರೀರದಲ್ಲಿ ನಿತ್ಯವೂ ಹೆಚ್ಚುವರಿ ಶಕ್ತಿಯು ಶೇಖರಣೆಯಾಗುತ್ತದೆ. ಇದನ್ನು ಆಯುರ್ವೇದಿಯ ದೃಷ್ಟಿಯಲ್ಲಿ "ಕಫ" ಎಂದು ಕರೆಯುತ್ತೇವೆ, ಇದು ನಾವು ಉಗುಳುವ ಕಫವಲ್ಲ, ಇಲ್ಲಿ ಶರೀರದ‌ ಸರ್ವಶಕ್ತಿಯನ್ನೇ ಕಫ ಎಂದು ಸಂಬೋಧಿಸಲಾಗಿದೆ._

  _ವಸಂತ ಋತುವಿನ ಆರಂಭದ ಚೈತ್ರಮಾಸದಲ್ಲಿ ಬರುವ ಬಿಸಿಲಿನಿಂದಾಗಿ ಶಕ್ತಿರೂಪದ ಈ ಕಫವು ಕರಗಿ ಹರಿಯಲಾರಂಭಿಸುತ್ತದೆ, ಆಗ ಅದನ್ನು ಉತ್ಲೇಷ ಎಂದು ಕರೆಯುತ್ತಾರೆ. ಅಂದರೆ ತನ್ನ ಸ್ಥಾನದಿಂದ ಚ್ಯುತವಾದ ಈ ಶಕ್ತಿಯು ಶರೀರಕ್ಕೆ ಬಲ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಅದನ್ನು ಮಲರೂಪದ ಕಫ ಎನ್ನುತ್ತೇವೆ. ಮುಂದೆ ಇದೇ ಕಫವು ಇಡೀ ವರ್ಷಪೂರ್ತಿ ಸೋಂಕಿಗೆ ಆಹಾರವಾಗುತ್ತದೆ ಮತ್ತು ಸೋಂಕು ಉಳಿದುಕೊಳ್ಳಲು ಸಹಕರಿಸುತ್ತದೆ!!_ 🤔

  _ಅಂದರೆ, ಸೋಂಕು ಜೀವಾಣು ಈ ಶರೀರದಲ್ಲಿ ಉಳಿಯಲು ಅದಕ್ಕೆ ಅಂಟಿನಂತಹ ಸೂಕ್ತ ವಾತಾವರಣ ಬೇಕು ಮತ್ತು ತಿನ್ನಲು ಆಹಾರ ಬೇಕು, ಅದನ್ನು ಪೂರೈಸುವ ವ್ಯವಸ್ಥೆ ಈ ಶರೀರದಲ್ಲಿ ಇದ್ದರೆ ಅದು ಒಳಗೆ ಉಳಿದುಕೊಂಡು, ತನ್ನ ಸಂತತಿಯನ್ನು ಬೆಳೆಸುತ್ತದೆ, ಮತ್ತು ರೋಗವನ್ನು ತರುತ್ತದೆ._ 🤭
          🌿🌿🌿🌿🌿

*ರೋಗ ಬರುವುದನ್ನು ತಡೆಯುವ ವಿಧಾನಗಳು:*

*1) ಆಸ್ಪತ್ರೆ ರಹಿತವಾಗಿ*
*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

*1) ಆಸ್ಪತ್ರೆ ರಹಿತ ರೋಗ ತಡೆ:*
  _ಸನಾತನ ಭಾರತೀಯ ಆಯುರ್ವೇದವು ಸರ್ವರ ಆರೋಗ್ಯವನ್ನು ಕಾಪಾಡಲು ಆಸ್ಪತ್ರೆ ರಹಿತವಾಗಿ ಮನೆಯಲ್ಲಿಯೇ ಏನು ಮಾಡಬಹುದೆಂದು ಅಲೋಚಿಸುತ್ತದೆ. ಹಾಗಾಗಿ, ಈ ಅನಗತ್ಯ "ಮಲ ರೂಪೀ ಕಫ"ದ ಹರಿವನ್ನು ಹೋಗಲಾಡಿಸಲು ಬೇವು-ಬೆಲ್ಲವನ್ನು ರೂಢಿಗೆ ತಂದಿದೆ!_
          •~•~•~•~•

  _ಭಾರತೀಯ ಭೂಮಿ ದೇವಭೂಮಿ, ಇಲ್ಲಿ ಎಲ್ಲವೂ ಪೂಜನೀಯ, ಜನರು ಯಾವುದೇ ವೈಜ್ಞಾನಿಕ ವಿಷಯಗಳನ್ನು ಪಾಲಿಸಿ ರೋಗರಹಿತವಾಗಿರಲು, ಅದನ್ನು ಅವರ ದಾರಿಯಲ್ಲೇ ಹೇಳಬೇಕಾಗುತ್ತದೆ..._

  _ಆದ್ದರಿಂದ ಪ್ರತಿ ಹಬ್ಬದಲ್ಲಿಯೂ ನಿರ್ದಿಷ್ಟವಾಗಿ ಹೇಳುವ ಎಳ್ಳು-ಬೆಲ್ಲ, ಬೇವು-ಬೆಲ್ಲ, ಪ್ರೋಟೀನ್‌ಯುಕ್ತ ಉಂಡೆಗಳು ಹೀಗೆ, ಆಯಾ ಋತುವಿನಲ್ಲಿ ಶರೀರದೊಳಗೆ ಆಗುವ ರೋಗಕಾರಕ ಶಕ್ತಿ ಉತ್ಕ್ಲೇಷಗಳನ್ನು, ಆಯುರ್ವೇದೋಕ್ತ  ವಿಶೇಷವಾದ ಆಹಾರಗಳು ಶಮನಗೊಳಿಸಿ ನಮ್ಮ  ಜೀವಕೋಶಗಳನ್ನು ಸಂರಕ್ಷಿಸುತ್ತವೆ._
*ಮತ್ತು* 
  _ಆಚರಣೆಯ ಹಿನ್ನೆಲೆಯಲ್ಲಿನ ದೈವೀಕ‌ ಮನಸ್ಥಿತಿಯ ಕಾರಣ ಮನಸ್ಸಿನ ಪ್ರಸನ್ನತೆ ಉಂಟಾಗಿ ಹಾರ್ಮೋನ್‌ಗಳನ್ನು ಉನ್ನತೀಕರಿಸಿ ಜೀವಕೋಶಗಳ ಸತ್‌ಶಕ್ತಿಯನ್ನು  ವರ್ಧಿಸುತ್ತವೆ, ತನ್ಮೂಲಕ ಈ ಕಾರಣದಿಂದ ಬರಬಹುದಾದ ರೋಗಗಳನ್ನು ಒಂದು ವರ್ಷಪೂರ್ತಿ ತಡೆದುಬಿಡುತ್ತವೆ!_ 🤔 -- *"ಔಷಧಗಳಿಲ್ಲದೇ! ಆಸ್ಪತ್ರೆಗಳಿಲ್ಲದೇ!! ಖರ್ಚಿಲ್ಲದೇ!!!"*
          •~•~•~•~•
*ಬೇವು-ಬೆಲ್ಲದ ಮಹತ್ವ:*

*ಬೇವು:*
  _ಸಂಸ್ಕೃತದಲ್ಲಿ "ನಿಂಬ" ಎಂದು ಕರೆಸಿಕೊಳ್ಳುವ ಬೇವನ್ನು ತುಸುವೇ ಪ್ರಮಾಣದಲ್ಲಿ ಸೇವಿಸುವುದರಿಂದ ಅದು ವಿಕೃತರೂಪದಿಂದ ವೃದ್ಧಿಯಾದ ಕಫವನ್ನು ಶಮನಗೊಳಿಸಿ, ಇಡೀ ವರ್ಷ ಕಫದಿಂದ ಉಂಟಾಗುವ ಅನೇಕ ರೋಗಗಳನ್ನು ತಡೆಯುತ್ತದೆ._

          🌿🌿🌿🌿🌿

*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

  _ಆಯುರ್ವೇದ ಅಸ್ಪತ್ರೆಗಳು "ಸೇವಾ ಕೇಂದ್ರಗಳು" ರೋಗ ತರಿಸಿ, ಔಷಧಿ ಕೊಟ್ಟು ಸರಿಪಡಿಸಲು ಯೋಚಿಸುವ "ರಿಪೇರಿ ಕೇಂದ್ರಗಳಲ್ಲ." ನಮ್ಮ ಮೋಟಾರ್ ವಾಹನ ಕೆಟ್ಟಮೇಲೆ ರಿಪೇರಿಗೆ ಒಯ್ಯುತ್ತೇವೆಯೋ ಅಥವಾ ಕೆಡುವ ಮೊದಲೇ  ಸೇವಾಕೇಂದ್ರಕ್ಕೋ?_

*ವಮನ ವಸಂತ:*
  _ವಸಂತ ಋತುವಿನಲ್ಲಿ ಹೇಳುವ ವಮನವೆಂಬ ಚಿಕಿತ್ಸೆಯು ಕಫವನ್ನು ಶಮನಗೊಳಿಸುವ ಬದಲು ಶೋಧನ ಮಾಡಿ ಹೊರತೆಗೆಯುತ್ತದೆ. ಅತ್ಯಂತ ಶ್ರೇಷ್ಠ ವಿಧಾನವಾದ ಇದನ್ನು "ಸ್ವಸ್ಥ ಪಂಚಕರ್ಮ" ಎಂದು ಕರೆಯುತ್ತೇವೆ._

  _ಪಂಚಕರ್ಮದ ಈ ಶೋಧನ ಚಿಕಿತ್ಸೆಯು ಶರೀರದ ಯಾವುದೇ ಜೀವಕೋಶಗಳಲ್ಲಿ ಅಡಗಿ ಕುಳಿತಿರಬಹುದಾದ "ಮಲರೂಪೀ ಕಫ" ವನ್ನು ಎಳೆದು ಹೊರಹಾಕುತ್ತದೆ, ಆದ್ದರಿಂದ ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ._

  _ಆದರೆ, ಎಲ್ಲರಿಗೂ ಆಸ್ಪತ್ರೆಗೆ ಬಂದು ಶೋಧನ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರಬಹುದು, ಆದ್ದರಿಂದ ಋತು ಬದಲಾವಣೆಯ ಸಂದರ್ಭದಲ್ಲಿ ಅಂದರೆ ಋತುಸಂಧಿಕಾಲದಲ್ಲಿ ಆಗುವ ಶಾರೀರಿಕ ವಿಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು, ಮುಂಬರುವ ರೋಗಗಳನ್ನು ತಡೆಯಲು, ಒಂದೊಂದು ಹಬ್ಬದ ಆಚರಣೆಯನ್ನೂ ಮತ್ತು ವಿಶೇಷ ಆಹಾರಗಳನ್ನೂ ಹೇಳುತ್ತಾ ಮನುಕುಲವನ್ನು "ಸಂಪೂರ್ಣ ರೋಗರಹಿತವಾಗಿ ಇಡುತ್ತದೆ."_
••••••••••••••••••••••••••••
••••••••••••••••••••••••••••••••••••••••••••
  🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴
•••••••••••••••••••••••••••••••••••

Sunday 27 March 2022

**ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಪಾಲಿಸಬೇಕಾದ ಕ್ರಮಗಳು**

ಮಕ್ಕಳೇ,

 *ನಾಳೆ ಬರೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಗಮನಿಸೋಣ.* 

*ಪರೀಕ್ಷಾ ಕೊಠಡಿಗೆ ಹೊರಡುವ ಮುನ್ನ:* 

 * ಲಘುವಾಗಿ ಆಹಾರ ಸೇವಿಸುವುದು ಒಳ್ಳೆಯದು.

* ಪರೀಕ್ಷೆಯ ಹಾಲ್ ನಲ್ಲಿ  ತೆಗೆದುಕೊಂಡು ಹೋಗುವ ವಸ್ತುಗಳು.

1. ಮಾಸ್ಕ್ ಕಡ್ಡಾಯವಾಗಿ ಧರಿಸುವಂತದ್ದು. ಶಾಲೆಯ ಸಮವಸ್ತ್ರ ಹಾಕಿಕೊಂಡು ಹೋಗುವುದು. 

2. ಎರಡು ರಿಂದ ಮೂರು ಪೆನ್ ಗಳು.

3. ಕಂಪಾಸ್ ಬಾಕ್ಸ್ ತೆಗೆದುಕೊಂಡು ಹೋಗಿ.

4. ಸಾಮಾನ್ಯ ಕೈ ಗಡಿಯಾರ  ಮತ್ತು ನೀರಿನ ಬಾಟಲ್.

* ಸಮಯಕ್ಕಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಸ್ಥಳ ತಲುಪಿ.

* ಪರೀಕ್ಷೆಯಲ್ಲಿ ಭಯಪಡದೆ ಶಾಂತವಾಗಿರಿ.

* ಪರೀಕ್ಷೆ ಆರಂಭಕ್ಕೂ ಮುನ್ನ
   ಶೌಚಾಲಯಕ್ಕೆ ಹೋಗಿ ಬನ್ನಿ.

 *ಪ್ರಶ್ನೋತ್ತರಗಳನ್ನು ಆರಂಭಿಸುವುದಕ್ಕೂ ಮುನ್ನ:* 

* ಮೊದಲು ನಿಮಗೆ ಕೊಟ್ಟಿರುವ ಉತ್ತರ ಪತ್ರಿಕೆಯ ಮುಖಪುಟದಲ್ಲಿ ಸರಿಯಾಗಿ ನಿಮ್ಮ ನೋಂದಣಿ ಸಂಖ್ಯೆ ಭರ್ತಿ ಮಾಡುವುದು. 

* ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಮುಖಪುಟದಲ್ಲಿ ಇರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.

* ಮೇಲಿನ ಅಂಶ ನೋಡಿದ ನಂತರ ಐದರಿಂದ ಹತ್ತು ನಿಮಿಷಗಳ ಕಾಲಾವಧಿ ತೆಗೆದುಕೊಂಡು, ಪ್ರಶ್ನೆಪತ್ರಿಕೆಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳಿ.

* ನಂತರ ಯಾವ-ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬುವುದು ಮೊದಲು ತಿಳಿದುಕೊಳ್ಳಿ.

* ನೀವು ತಕ್ಷಣ ಉತ್ತರಿಸಬಹುದಾದ ಹಾಗೂ ಸುಲಭವಾಗಿರುವ ಪ್ರಶ್ನೆಗಳನ್ನು ಮೊದಲು ಬರೆಯಲು ಪ್ರಯತ್ನಿಸಿ.

* ಮಕ್ಕಳೇ ಗಮನವಿರಲಿ, ಬಹು ಆಯ್ಕೆ ಪ್ರಶ್ನೆ ಗಳಿಗೆ, ಉತ್ತರ ಆಯ್ಕೆ ಮಾಡಬೇಕಾದರೆ, ಸರಿಯಾಗಿ ಆಲೋಚಿಸಿ ಉತ್ತರವನ್ನು ಆಯ್ಕೆ ಮಾಡಿಕೊಂಡ ನಂತರವೇ  ನಿಮ್ಮ ಉತ್ತರ ಪತ್ರಿಕೆಯಲ್ಲಿ ಬರೆಯಿರಿ. 

* ಬಹು ಆಯ್ಕೆಯ ಪ್ರಶ್ನೆಗಳ ಉತ್ತರ ಬರೆಯಬೇಕಾದರೆ ನಾಲ್ಕು ಉತ್ತರಗಳಲ್ಲಿ  ಸರಿಯಾದ ಉತ್ತರ ಬರೆಯಬೇಕು. ಉತ್ತರದ ಹಿಂದೆ ಇರುವ A, B, C, D ಅಂತ ಬರೆದು ಉತ್ತರ ಬರೆಯಬೇಕು.   
   
* ಪ್ರಶ್ನೆಗಳ ಉತ್ತರ ಗೊತ್ತಿದ್ದು ಗೊಂದಲ ಉಂಟುಮಾಡುತ್ತಿದ್ದರೆ, ಒಂದು ನಿಮಿಷದವರೆಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಧಾನವಾಗಿ,ದೀರ್ಘವಾಗಿ, ಉಸಿರಾಡಿ. ಹೀಗೆ ಮಾಡುವುದರಿಂದ ಮೈಂಡ ಶಾಂತವಾಗಿ ಉತ್ತರ ನೆನಪಿಗೆ ಬರುವ ಸಾಧ್ಯತೆ ಇರುತ್ತೆ ಆದರೆ ನೆನಪಿರಲಿ ವಿಷಯದ ಬಗ್ಗೆ ಓದಿದಾಗ ಮಾತ್ರ.

* ಜೊತೆಗೆ ಒಂದು ಪ್ರಶ್ನೆಗೆ ಉತ್ತರ ಬರೆಯುವಾಗ, ಇನ್ನೊಂದು ಪ್ರಶ್ನೆಯ ಉತ್ತರದ ಬಗ್ಗೆ ಆಲೋಚನೆ ಮಾಡಬೇಡಿ.

* ಮುಖ್ಯವಾಗಿ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ, ಏನಾದರೂ ಕಚ್ಚಾ ಕೆಲಸ ಇದ್ದರೆ ಉತ್ತರ ಪತ್ರಿಕೆಯ ಪ್ರತಿ ಪುಟದ ಕೆಳಗಡೆ ಕಚ್ಚಾ ಉಪಯೋಗ ಅಂತ ಇರುತ್ತದೆ ಅಲ್ಲಿ ಮಾಡಬಹುದು. 

* ಯಾವುದೇ ಪ್ರಶ್ನೆಗೆ ಯೋಚನೆ ಮಾಡಲು ಉತ್ತರ ಕಷ್ಟವಾದರೆ, ಸಮಯ ಹಾಳುಮಾಡದೆ, ನಂತರದ ಪ್ರಶ್ನೆಗೆ ಹೋಗಿ, ಪುನ: ಮತ್ತೆ ಬಂದು ಮುಖ್ಯ ಪ್ರಶ್ನೆ ಸಂಖ್ಯೆ ಹಾಕಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

* ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡಬೇಡಿ, ಒಂದು ವೇಳೆ ಭಯಪಟ್ಟಿದ್ದೇ ಆದರೆ ನಿಮ್ಮ ಮೆದುಳು ಯೋಚನೆ ಮಾಡುವುದಿಲ್ಲ.

* ನಿಮ್ಮ ಸುತ್ತಮುತ್ತ ಯಾವುದೇ ಕಾರಣಕ್ಕೂ ನೋಡಬೇಡಿ,ಹಾಗೂ ನಿರಂತರವಾಗಿ ಬರೆಯುತ್ತಿರುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

* ಮಕ್ಕಳೇ, ನೆನಪಿರಲಿ ಉತ್ತರ ಬರೆಯುವಾಗ ಅತಿವೇಗ ಮತ್ತು ಅತಿ ನಿಧಾನ ಎರಡು ಅಪಾಯ.

* ವಿದ್ಯಾರ್ಥಿಗಳೇ ಕೊನೆಯದಾಗಿ, ನಿಮ್ಮ ಉತ್ತರ ಪತ್ರಿಕೆಯಲ್ಲಿ ಹಾಗೂ ಹೆಚ್ಚುವರಿ ತೆಗೆದುಕೊಂಡ ಉತ್ತರ ಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟರ್ ನಂಬರ್, ನಿಮ್ಮ ಸಹಿ ಮತ್ತು ಕೊಠಡಿ ಮೇಲ್ವಿಚಾರಕ  ಸಹಿಯನ್ನು ಪರಿಶೀಲಿಸಿಕೊಳ್ಳಿ. ಜೊತೆಗೆ ನಿಮ್ಮ ಹಾಲ್ ಟಿಕೆಟ್ ಮೇಲೆ ಕೂಡ ಮೇಲ್ವಿಚಾರಕ  ಸಹಿ ಮಾಡಿಸಿಕೊಳ್ಳಿ.

*ವಿದ್ಯಾರ್ಥಿಗಳೇ ತಮಗೆಲ್ಲರಿಗೂ ಶುಭವಾಗಲಿ.* 

*ALL THE BEST MY DEAR STUDENTS* 
👍👍👍👍👍👍👍

Saturday 26 March 2022

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್  

ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಂದೇ ಬಿಟ್ಟಿದೆ. ಲಕ್ಷಾಂತರ ಮಕ್ಕಳು ಬೋರ್ಡ್ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಸಂತಸದಿಂದ ಇದ್ದರೆ, ಇನ್ನು ಕೆಲವರು ಆತಂಕ ಸಂದಿಗ್ದತೆಯಲ್ಲಿ ಇದ್ದಾರೆ. ವರ್ಷ ಪೂರ್ತಿ ಅಭ್ಯಾಸ ಮಾಡಿದ್ದು ಮೂರೇ ಮೂರು ಗಂಟೆಯಲ್ಲಿ ಅಭಿವ್ಯಕ್ತಡಿಸಿ ಸಾಮರ್ಥ್ಯ ಒರೆಗೆ ಹಚ್ಚಬೇಕಾದ ಕಾಲ ಸನ್ನಿಹಿತವಾಗಿದೆ. ಶೈಕ್ಷಣಿಕ ಕವಲುದಾರಿ ಅರಸಿ, ಆರಿಸಿಕೊಂಡು ಕನಸು ಗುರಿ ನಿರ್ಧರಿಸಿಕೊಂಡು ಹಸನಾದ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕಿದೆ.

ಕೊವಿಡ್ -19 ಸಾಂಕ್ರಾಮಿಕ ರೋಗದ ಕಂಟಕ ಎಲ್ಲಡೆಯೂ ಆವರಿಸಿದ ಪರಿಣಾಮ, ಶಾಲಾ ಆರಂಭದಲ್ಲೇ ಅಧ್ಯಯನದಲ್ಲಿ ನಿರತರಾದ ಮಕ್ಕಳಿಗೆ ಒಂದಿಷ್ಟು ಭಯ ಆತಂಕ ಹುಟ್ಟಿತ್ತು. ಈ ವರ್ಷದ ಬೋರ್ಡ್ ಪರೀಕ್ಷೆ ಎದುರಿಸುವ ಮಕ್ಕಳು ಒಂಭತ್ತನೇ ತರಗತಿಯಲ್ಲಿ ಬಹುತೇಕ ಒಂದು ವರ್ಷ ಶಿಕ್ಷಣದಿಂದ ವಂಚನೆಗೆ ಒಳಗಾದವರು. ಹೀಗಾಗಿ ಒಂದಿಷ್ಟು ಆತಂಕ ಎಲ್ಲರಲ್ಲೂ ಸಹಜ. ಆದರೆ, ಪೋಷಕರು, ಮಕ್ಕಳು ಹೆದರುವ ಅಗತ್ಯವಿಲ್ಲ. ಅಂತಿಮ ಹಂತದ ಸಿದ್ಧತೆ, ತಯಾರಿಯಲ್ಲಿ ಕೊಂಚ ಯಾಮಾರಿದರೂ ನಿರೀಕ್ಷಿತ ಫಲಿತಾಂಶ ಬರದೇ ಹೋಗಬಹುದು. ಹೀಗಾಗಿ ಮಕ್ಕಳೇ ಸ್ವಯಂ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಮೂಲಕ ಪರೀಕ್ಷೆ ಬರೆಯಲು ಸನ್ನದ್ದರಾಗಿದ್ದಿರಿ. ಯಾವ ಆತಂಕ ಭಯ ದುಗುಡವಿಲ್ಲದೇ ಶಾಲೆಯಲ್ಲಿ ಬರೆಯುವ ಪರೀಕ್ಷೆಯಂತೆಯೇ ಸಹಜವಾಗಿ ಬೋರ್ಡ್ ಪರೀಕ್ಷೆ ಎದುರಿಸಿರಿ. ಈ ಒಂದಿಷ್ಟು ಮುನ್ನಚ್ವರಿಕೆಯ ಅಗತ್ಯ ಕ್ರಮ ಅನುಸರಿಸಿರಿ. ಯಶಸ್ಸು ಖಂಡಿತಾ ನಿಮ್ಮದಾಗುವದು.

ಅಂತಿಮ ಗುರಿ ತಲುಪಿ ಕನಸು ನನಸಾಗುವ ಕಾಲದಲ್ಲಿ, ಆತಂಕ ಭಯ ಬೇಡ. ಇರುವ ಒಂದೆರಡು ದಿನಗಳಲ್ಲಿ ಸಮಯಾವಕಾಶವನ್ನು ಅತ್ತ್ಯುತ್ತಮವಾಗಿ ಸದುಪಯೋಗ ಪಡಿಸಿಕೊಳ್ಳಿರಿ. ಈ ಮೂಲಕ ಪರೀಕ್ಷೆಯಲ್ಲಿ ಉತ್ತಮ‌ಸಾಧನೆ ಮಾಡಲು ಪ್ರಯತ್ನಿಸಿ.

ಪರೀಕ್ಷೆ ಮುನ್ನಾ ದಿನ, ಪರೀಕ್ಷೆ ಆರಂಭ ಆಗುವ ಮೊದಲು, ಹಾಗೂ ಪರೀಕ್ಷೆ ಬರೆಯುವಾಗ ಮಕ್ಕಳು ಏನು ಮಾಡಬೇಕು ಎನ್ನುವ ಕೆಲವು ಮುಖ್ಯ ಟಿಪ್ಸ್ ಇಲ್ಲಿ ನೀಡಲಾಗಿದೆ. ಇವು ನಿಮಗೆ ಸಹಾಯಕ್ಕೆ ಬರಬಹುದು.

ಪರೀಕ್ಷೆ ಆರಂಭದ ಹಿಂದಿನ ದಿನ

ಪರೀಕ್ಷೆ ಆರಂಭವಾಗುವ ಮುನ್ನಾದಿನ ಒಂದಿಷ್ಟು ಪೂರ್ಷ ಸಿದ್ಧತೆ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲ ಆತಂಕ ಉಂಟಾಗುವದಿಲ್ಲ. ಪರೀಕ್ಷೆ ಸುಲಭವಾಗಿ ಎದುರಿಸಲು ಸಹಕಾರಿಯಾಗುವದು.
*ಎರಡು ಪೆನ್ನು, ಪೆನ್ಸಿಲ್, ಉದ್ದದ ಸ್ಕೆಲ್, ಜಾಮಿಟ್ರಿ ಬಾಕ್ಸ್, ಸಿದ್ದಪಡಿಸಿಕೊಳ್ಳಿರಿ.
*ಪ್ರವೇಶ ಪತ್ರ ಸೂಕ್ತ ಸ್ಥಳದಲ್ಲಿ ಇಟ್ಟು ಕೊಳ್ಳಿ.
*ಉತ್ತಮವಾದ ಕ್ಲಿಪ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿರಿ.
*ಸುಲಭವಾಗಿ ಜಿರ್ಣವಾಗುವ ಆಹಾರ ಸೇವಿಸಿ.
* ಅತಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಡಿ.
*ರಾತ್ರಿ ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು ನಿದ್ದೆ ಮಾಡಿ.
*ಸಾಮಾನ್ಯ ಕೈ ಗಡಿಯಾರವೊಂದು ಇಟ್ಟುಕೊಳ್ಳಿ.
*ಪ್ರಶ್ನೆಪತ್ರಿಕೆ ಸೋರಿಕೆ, ಗಾಸಿಪ್ ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
* ಯಾರೊಂದಿಗೂ ಜಗಳ ಕಾಯಬೇಡಿ.
* ರಿಲ್ಯಾಕ್ಸ್ ಮೂಡ್ ನಲ್ಲಿ ಇರಿ.
*ಹೆಚ್ಚು ಪಾನಿಯ ರೂಪದ ಆಹಾರ ಸೇವನೆ ಮಾಡಿ.
* ಪರೀಕ್ಷೆ ಬರೆದ ನಂತರ ಆ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವದು ತರವಲ್ಲ.
* ನಕಾರಾತ್ಮಕ ಧೋರಣೆ ಯಾರೋ ಸಹಾಯ ಸಹಕಾರ ಮಾಡುತ್ತಾರೆ ಎಂದು ನಂಬಬೇಡಿ.
*ಪರೀಕ್ಷೆ ನಡೆಯುವ ದಿನಗಳಲ್ಲಿ ರಜೆ ಬಂದಾಗ ಆ ದಿನ‌ ಸದ್ಬಳಕೆ ಮಾಡಿಕೊಳ್ಳಿ.
* ಅನಗತ್ಯ ಸಿಟ್ಟು ಮಾಡಿಕೊಳ್ಳಬೇಡಿ.
*ಪರೀಕ್ಷೆ ಹೇಗೆ ನಡೆಯುವದೊ, ಓದಿದ್ದು ಬರುವದೊ ಇಲ್ಲವೊ, ಎಂಬ ಆತಂಕಕ್ಕೆ ದುಗುಡಕ್ಕೆ ಒತ್ತಡಕ್ಕೆ ಒಳಗಾಗಬೇಡಿ.
*ಆತ್ಮವಿಶ್ವಾಸ ವಿರಲಿ. ಅತಿ ವಿಶ್ವಾಸ ಬೇಡ. ಜೊತೆಗೆ ಒಂದಿಷ್ಟು ಜಾಗೃತಿ ಇರಲಿ.
*ಉಢಾಫೆ ಬೇಜವಾಬ್ದಾರಿ ಬೇಡ ತೀಳುವಳಿಕೆ ಇರಲಿ.
* ಮುಖ್ಯಾಂಶಗಳು, ಕೀ ಪೈಂಟ್, ರಿವಿಜನ್ ಮಾಡಿರಿ.
*ಜಾತ್ರೆ ಸಭೆ ಸಮಾರಂಭ ಎಂದು ಕಾಲ ಹರಣ ಮಾಡಬೇಡಿ
*ಪ್ರಶ್ನೆ ಪತ್ರಿಕೆ ವಿನ್ಯಾಸ ಮಾದರಿ ಪಶ್ನೆ ಒಮ್ಮೆ ಕಣ್ಣಾಡಿಸಿರಿ.
*ಅತಿ ಹುರುಪು ಅತಿ ಆಲಸ್ಯೆ, ಹುಂಬುತನ ಮಾಡಬೇಡಿ.
* ಶಿಕ್ಷಕರಿಂದ ಅಂತಿಮ ಮಾರ್ಗದರ್ಶನ ಸಲಹೆ ಸೂಚನೆ ಪಡೆಯಿರಿ.
* ಅಗತ್ಯ ಎನಿಸಿದರೆ ಬೋರ್ಡ್ ಸಹಾಯವಾಣಿ ಸಂಪರ್ಕಿಸಿ.
*ಮನೆಯ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಗೆ ಹಚ್ಚಿಕೊಳ್ಳುವದು ಬೇಡ.
* ನಿಮ್ಮ ಪರೀಕ್ಷೆ ಕೇಂದ್ರ ಖಚಿತ ಪಡಿಸಿಕೊಳ್ಳಿ
* ಪರೀಕ್ಷಾ ನಿಯಮಗಳನ್ನು ತಿಳಿದುಕೊಳ್ಳಿರಿ.
* ಪರೀಕ್ಷೆ ಹಾಲ್ ನಲ್ಲಿ ಹೇಗೆ ವರ್ತಿಸಬೇಕು ಎನ್ನುವ ಸಾಮಾನ್ಯ ಅರಿವಿರಲಿ.
*ಪರೀಕ್ಷೆ ಬರೆಯುವಾಗ ಎದುರಾಗಬಹುದಾದ ಸಮಸ್ಯೆ ಗೊಂದಲಗಳಿಗೆ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಿ.
* ಪರೀಕ್ಷಾ ಕೇಂದ್ರದಲ್ಲಿ ನೀಡುವ ಸೂಚನೆಗಳು ಅರಿಯಿರಿ.
* ವಿಷಯದ ಸಂದೇಹ, ಗೊಂದಲಗಳಿದ್ದರೆ, ಸ್ನೇಹಿತರೊಂದಿಗೆ ಗುಂಪು ಚರ್ಚೆ ಮಾಡಿ.

ಪರೀಕ್ಷೆ ಆರಂಭವಾಗುವ ಮೊದಲು

ಪರೀಕ್ಷೆ ದಿನ ಬಂದೇ ಬಿಟ್ಟಿತು. ಎಷ್ಟು ಅಭ್ಯಾಸ ಮಾಡಿದೆ ಎನ್ನುವದಕ್ಕಿಂತ, ಹೇಗೆ ಪರೀಕ್ಷೆ ಬರೆಯ ಬೇಕು ಎನ್ನುವದು ಬಹು ಮುಖ್ಯವಾಗುವದು. ಹೀಗಾಗಿ ಪರೀಕ್ಷೆಯ ದಿನ ಒಂದಿಷ್ಟು ಸಿದ್ಧತೆಯಾಗುವದು ಅಗತ್ಯ.
*ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪಿರಿ.
*ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಓದು ನಿಲ್ಲಿಸಿ.
* ಹಿತ ಮಿತ ಆಹಾರ ಸೇವಿಸಿ.
* ಶುಭ್ರ ಹಿತಕರವಾದ ಬಟ್ಟೆ ಧರಿಸಿ.
*ಲೇಖನ ಸಾಮಗ್ರಿ ಅಂತಿಮವಾಗಿ ಚಕ್ ಮಾಡಿಕೊಳ್ಳಿರಿ.
* ಪರೀಕ್ಷೆ ಕೊಠಡಿ ಪ್ರವೇಶ ಮುನ್ನ ಒಮ್ಮೆ ಏನಾದರೂ ಸ್ಲಿಪ್, ಬರಹ ಇದೆ ಚಕ್ ಮಾಡಿ ತಗೆದು ಹಾಕಿಬಿಡಿ.
*ಪ್ರವೇಶ ಪತ್ರ ಹೊಂದಿಸಿಕೊಳ್ಳಿರಿ.
* ಒತ್ತಡ ದುಗುಡ ಆತಂಕ‌ ಭಯ ಬೇಡ ರಿಲ್ಯಾಕ್ಸ್ ಆಗಿರಿ.
*ಪರೀಕ್ಷಾ ಕೊಠಡಿ ಪ್ರವೇಶ ಮಾಡಿದ ಮೇಲೆ ಯಾರೊಂದಿಗೂ ಮಾತಿಗಿಳಿಯಬೇಡಿ.
* ಕುಳಿತ ಆಸನ ಸಂಖ್ಯೆ, ಪ್ರವೇಶ ಪತ್ರ ಸಂಖ್ಯೆ ಎರಡೂ ಒಂದೇ ಎನ್ನುವದು ಖಚಿತಪಡಿಸಿಕೊಳ್ಳಿ.
* ಆಸನ ಸ್ಥಳದಲ್ಲಿ ‌ಕುಳಿತು ಒಂದೆರಡು ನಿಮಿಷ ಧ್ಯಾನ ಮಾಡಿ. ದಿರ್ಘವಾಗಿ ಉಸಿರಾಡಿ.
*ಕೊಠಡಿ ಮೇಲ್ವಿಚಾರಕರಿಗೆ ನಿಮ್ಮ ಅಗತ್ಯ ಮಾಹಿತಿ ನೀಡಿ.
* ಉತ್ತರ ಪತ್ರಿಕೆಯು ಬರೆಯಲು ಯೋಗ್ಯವಾಗಿದೆಯೆ ಎಂದು ಖಚಿತ ಪಡಿಸಿಕೊಳ್ಳಿರಿ.
* ಪ್ರಶ್ನೆ ಪತ್ರಿಕೆ ಒಮ್ಮೆ ಪೂರ್ಣ ಓದಿಕೊಳ್ಳಿರಿ.
* ಪ್ರತಿ ಉತ್ತರಕ್ಕೂ ಅಂದಾಜು ಸಮಯ ನಿಗದಿ ಪಡಿಸಿಕೊಳ್ಳಿ.
* ಅಗತ್ಯ ಏನಿಸಿದರೆ ಒಂದು ಚಿಕ್ಕ ಬಾಟಲ್ ನೀರು ಜೊತೆಗಿರಲಿ.
* ಸಣ್ಣ ಕರವಸ್ತ್ರ ಜೋತೆಗೆ ಇಟ್ಟುಕೊಳ್ಳಿರಿ
*ಉತ್ತರ ಪತ್ರಿಕೆಯ ಸೂಕ್ತ ಸ್ಥಳದಲ್ಲಿ ನೊಂದಣಿ ಸಂಖ್ಯೆ, ಅಗತ್ಯ ಮಾಹಿತಿ ತುಂಬಿರಿ.
*ಪರೀಕ್ಷೆ ಆರಂಭದಲ್ಲೆ ಆತಂಕ ಭಯ ಖಿನ್ನತೆಗೆ ಒಳಗಾಗಬೇಡಿ.
*ಕೊಠಡಿ ಒಳಗೆ ಮೊಬೈಲ್ ಪೋನ್ ಡಿಜಿಟಲ್ ವಾಚ್ ಬ್ಲ್ಯೂಟುತ್ ಅಂತ ಸಾಮಗ್ರಿ ತಗೆದುಕೊಂಡು ಹೋಗುವಂತಿಲ್ಲ.
* ವೈಯಕ್ತಿಕ ಸ್ವಚ್ಚತೆ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ

ಪರೀಕ್ಷೆ ಬರೆಯುವಾಗ ಒಂದಿಷ್ಟು ಸಲಹೆಗಳು

ಉತ್ತರ ಬರೆಯುವದು ಒಂದು ಸ್ಕಿಲ್. ಎಷ್ಟು ಓದಿದ್ದೇವೆ ಅರ್ಥೈಸಿಕೊಂಡಿದ್ದೇವೆ ಎನ್ನುವದಕ್ಕಿಂತ ಹೇಗೆ ಉತ್ತರ ಬರೆದಿದ್ದೇವೆ ಎನ್ನುವದು ಬಹು ಮುಖ್ಯ. ನಿಗದಿತ ಮೂರು ಗಂಟೆಯಲ್ಲಿ ವ್ಯವಸ್ಥಿತವಾಗಿ, ಮೌಲ್ಯಮಾಪಕರು ನಿರೀಕ್ಷಿಸುವ ರೀತಿಯಲ್ಲಿ ಉತ್ತರ ಬರೆಯುವದು ಅತ್ಯಗತ್ಯ. ಆಗಲೇ ಹೆಚ್ಚು ಅಂಕ ಪಡೆಯಸು ಸಾಧ್ಯ. ಅತ್ಯುತ್ತಮ ಉತ್ತರ ಬರೆಯಲು ಒಂದಿಷ್ಟು ಸಲಹೆಗಳು.
* ಆದಷ್ಟು ಕ್ರಮವಾಗಿಯೇ ಉತ್ತರ ಬರೆಯಿರಿ.
*ಉತ್ತರವು ನಿಖರ, ನಿರ್ದಿಷ್ಟ, ಸ್ಪಷ್ಟವಾಗಿರಲಿ.
* ಅಗತ್ಯಕ್ಕಿಂತ ಹೆಚ್ಚು ಉತ್ತರ ಬರೆದು ಸಮಯ ಹಾಳು ಮಾಡಿಕೊಳ್ಳಬೇಡಿ.
*ಬರವಣಿಗೆ ಶುದ್ದವಾಗಿ ಅಂದವಾಗಿ ಆಕರ್ಷಣಿಯವಾಗಿರಲಿ.
*ಪ್ರತಿ ಉತ್ತರದ ನಡುವೆ ಎರಡು ಲೈನ್ ಗಳ ಅಂತರವಿರಲಿ.
*ಚಿತ್ರ, ನಕ್ಷೆಗೆ ಮಾತ್ರ ಪೆನ್ಸಿಲ್ ಬಳಸಿ.
* ಕಪ್ಪು ಅಥವಾ ನೀಲಿ ಪೆನ್ನು ಮಾತ್ರ ಬರವಣಿಗೆಗೆ ಬಳಸಿ.
*ಪೆನ್ನು ಬದಲಿಸುವ ಮುನ್ನ ಮೇಲ್ವಿಚಾರಕರಿಂದ ಅನುಮತಿ ಪಡೆಯಿರಿ.
* ಗೊಂದಲಕ್ಕಿಡುಮಾಡುವ ತಿರುಚಿದ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಂಡು ನಂತರ ಉತ್ತರಿಸಿ.
*ಉತ್ತರ ಪತ್ರಿಕೆಯಲ್ಲಿ ಯಾವುದೇ ಧಾರ್ಮಿಕ ಚಿನ್ನೆ ಹೆಸರು ಹಾಕಬೇಡಿ.
* ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಬರಹ, ಗುರುತು ಮಾಡಬೇಡಿ
*ಎಡಿಷನಲ್ ಹಾಳೆ ಕಟ್ಟುವಾಗ ಅಗತ್ಯ ಮಾಹಿತಿ ತುಂಬಿರಿ.
* ಆಸನ ಬಿಟ್ಟು ಕದಲಬೇಡಿ ಅನಗತ್ಯವಾಗಿ ನಿಲ್ಲಬೇಡಿ.
* ಮೂರು- ನಾಲ್ಕು ಅಂಕದ ಪ್ರಶ್ನೆ ಉತ್ತರಿಸುವಾಗ ಸಮಯ ನಿಗದಿಪಡಿಸಿಕೋಳ್ಳಿರಿ.
*ಹದಿನೈದು ನಿಮಿಷ ಮೊದಲೇ ಎಲ್ಲವೂ ಉತ್ತರಿಸಿ ಬಿಡಿ
*ಕೊನೆಯ ಹದಿನೈದು ನಿಮಿಷ ಉತ್ತರ ಪತ್ರಿಕೆ ಪುನ:ಪರೀಶಿಲಿಸಿ.
*ಅಗತ್ಯ ಇರುವ ಕಡೆ ಮೇಲ್ವಿಚಾರಕರ ಸಹಿ ಪಡೆಯಿರಿ.
* ಬಹು ಅಂಶ ಆಯ್ಕೆ ಉತ್ತರ ಒಮ್ಮೆ ಮಾತ್ರ ಉತ್ತರಿಸಿ ಚಿತ್ತು ಮಾಡಬೇಡಿ

*ಎ ಎಂ ಎಲ್ , ನಾಮಿನಲ್ ರೋಲ್ ಗೆ ಸಹಿ ಮಾಡುವದು ಮರೆಯದಿರಿ.
*ಉತ್ತರದ ಮುಖ್ಯಾಂಶಗಳಿಗೆ ಅಗತ್ಯವಿರುವಡೆ ಅಡಿಗೆರೆ ಹಾಕಿರಿ.
*ಉತ್ತರರಿಸಿದ ಮೇಲೆ ಮುಕ್ತಾಯ ಎಂದು ಬರೆಯಿರಿ.
*ಒಂದು ಎರಡು ಮೂರು ಅಂಕದ ಪ್ರಶ್ನೆ ಶಿಕ್ಷಾರ್ಹ ಅಪರಾಧವಾಗಿದೆ ಮಾಡಬೇಡಿ.
* ಕುಳಿತ ಆಸನದ ಸುತ್ತ ಮುತ್ತ ಹಾಳೆ ಬರವಣಿಗೆ ಏನಾದರೂ ಇದ್ದರೆ, ಮೇಲ್ವಿಚಾರಕರ ಗಮನಕ್ಕೆ ತನ್ನಿ
* ಪ್ರಶ್ನೆ ಸಂಖ್ಯೆ ದೊಡ್ಡದಾಗಿ ನಮೂದಿಸಿ.
*ಪರೀಕ್ಷೆ ಆರಂಭ ನಂತರದ ಅರ್ಧಗಂಟೆ ಶೌಚಕ್ಕೆ ಹೋಗಲು ಅವಕಾಶವಿಲ್ಲ ಎಂದು ತಿಳಿಯಿರಿ.
* ಉತ್ತರಿಸುವಾಗ ವ್ಯಾಕರಣಾಂಶಗಳತ್ತ ಗಮನ ಹರಿಸಿ
*ಕೊಠಡಿಯೊಳಗೆ ಬಂದು ಹೋಗುವ ಅಧಿಕಾರಿಗಳತ್ತ ಗಮನ ಹರಿಸುವದು ಬೇಡ.
ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಯಾವತ್ತೂ ಸಿಕ್ಕೆ ಸಿಗುತ್ತದೆ . ಅರ್ಹತೆ ಸಾಮರ್ಥ್ಯ ವರೆಗೆ ಹಚ್ಚಿ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡಿದರೆ, ಖಂಡಿತ ಉತ್ತಮ‌ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ. ಉಜ್ವಲ ಭವಿಷ್ಯ ನಿರ್ಮಾಣದ ಮೊದಲ ಘಟ್ಟ ದಾಟಿ, ಉನ್ನತ ಶಿಕ್ಷಣದ ರಹದಾರಿ ಪ್ರವೇಶಿಸಿ ಯಶಸ್ಸು ಸಾಧಿಸಿ. ಸುಂದರ ಬದುಕು ಕಟ್ಟಿಕೊಳ್ಳವ ಪ್ರಯತ್ನ ನಿಮ್ಮದಾಗಲಿ ಎಂದು ಶುಭ ಹಾರೈಸುವೆ.

Wednesday 23 March 2022

*ನಿಮ್ಮ ಶೇ. 70ಕ್ಕಿಂತ ಹೆಚ್ಚು ಭಾರ ಹೊರುವುದು ನಿಮ್ಮ ಸ್ನಾಯುಗಳು - ಮೂಳೆಗಳಲ್ಲ!*

🦢   _*ಅಮೃತಾತ್ಮರೇ, ನಮಸ್ಕಾರ*
••••••••••••••••••••••••••••••••••••••••••••
  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-91*_
     _*ದಿನಾಂಕ: 24.03.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
  _*ನಿಮ್ಮ ಶೇ. 70ಕ್ಕಿಂತ ಹೆಚ್ಚು ಭಾರ ಹೊರುವುದು ನಿಮ್ಮ ಸ್ನಾಯುಗಳು - ಮೂಳೆಗಳಲ್ಲ!*_
••••••••••••••••••••••••••••••••••••••••••••
  _ಇಂದು ಎಲ್ಲಾ ಕೀಲುನೋವು, ಬೆನ್ನು ನೋವುಗಳಿಗೆ, ಮೂಳೆ ಸವೆದಿದೆ, ಡಿಸ್ಕ್ ಒಣಗಿದೆ -- ಇಂತಹ ಮಾತುಗಳನ್ನು ಸ್ವತಃ ವೈದ್ಯರ ಬಾಯಲ್ಲಿ ಕೇಳುತ್ತೇವೆ ಮತ್ತು ಅವುಗಳನ್ನೇ ದೃಢವಾಗಿ ನಂಬಿದ್ದೇವೆ!!_

*ವೈಜ್ಞಾನಿಕ ಸತ್ಯ ಏನು?*
  _ಸಾಂಪ್ರದಾಯಿಕ ನೋವು ನಿವಾರಕಗಳು ಮತ್ತು ಆಯುರ್ವೇದ ಸಹಾಯ ರಹಿತ ಕೇವಲ ಫಿಜಿಯೋಥೆರಪಿಗಳು ತಾತ್ಕಾಲಿಕ ಪರಿಹಾರವನ್ನು ನೀಡಬಲ್ಲವು._

  _ಶರೀರದ ಚಲನೆಯುಳ್ಳ ಯಾವುದೇ ಸಂಧಿಗಳಲ್ಲಿ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ, ಹತ್ತಿರವೂ ಇಲ್ಲ. ಈ ಎರಡು ಅಥವಾ ಮೂರು ಮೂಳೆಗಳನ್ನು ಬಿಗಿಯಾಗಿ ಹಿಡಿದು ಒಂದು ಸಂಧಿಯನ್ನು ಮಾಡಿರುವುದು ನಮ್ಮ ಸ್ನಾಯುಗಳು, ಇವುಗಳ ದುರ್ಬಲತೆಯೇ ಸಂಧು ಮತ್ತು ಬೆನ್ನು ನೋವುಗಳು!!_ 🤔

*ಉದಾಹರಣೆಗೆ:*
  _ಸೊಂಟದ ನೋವಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ MRI Scanning ಮಾಡಿಸಿ, ಡಿಸ್ಕ್ ಒಡೆದಿದೆ, ಒಣಗಿದೆ, ನರಗಳು ಒತ್ತಿ ನೋವು ಬಂದಿದೆ, ಶಸ್ತ್ರಚಿಕಿತ್ಸೆ ಬೇಕು ಎಂದು ಟಿಪ್ಪಣಿ ಬರೆಯುತ್ತಾರೆ._

  _ಸರಿ, ಸೊಂಟದ ಮೂಳೆಯ ರಚನೆ ನೋಡೋಣ -- ಅಲ್ಲಿ L5, S1, Left Hip bone, Right Hip bone ಇಷ್ಟು ಮೂಳೆಗಳು ಒಂದೊಂದು ನಿರ್ದಿಷ್ಟ ಅಂತರದಲ್ಲಿ ಸ್ಥಿತವಾಗಿ ನಿಂತಿರಲು, ನಮ್ಮ ಶರೀರದ ಭಾರವನ್ನು ಕಾಲುಗಳಿಗೆ ವರ್ಗಾಯಿಸಲು ಕಾರಣವಾಗಿರುವುದು ಅಲ್ಲಿನ ಬಲವಾದ ಆದರೆ ಮೃದುವಾದ ಚಲನೆಗೆ ಹೊಂದಿಕೊಳ್ಳುವ ಸ್ನಾಯುಗಳು!! ಇದು ಬಹುಜನರಿಗೆ ಗೊತ್ತಿಲ್ಲ, ಇಲ್ಲಿ ಒಂದು ಮೂಳೆಗೆ ಇನ್ನೊಂದು ಭಾರ ವರ್ಗಾಯಿಸುವುದು ಇದೇ ಸ್ನಾಯುಗಳಿಂದಲೇ ಹೊರತೂ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ._
 
*ಹಾಗೆಯೇ:*
  _ಮೊಣಕಾಲಿನಲ್ಲಿ, Femur, Tibia, Patella ಮತ್ತು Fibula ಎಂಬ ಮೂಳೆಗಳನ್ನು ಹಿಡಿದಿಡಲು 4+2 ಸ್ನಾಯುಗಳು ಕೆಲಸ ಮಾಡುತ್ತವೆ._ *ಅವುಗಳೆಂದರೆ* - 
  _Anterior Cruciate Ligament (ACL)_ 

  _Posterior Cruciate Ligament (PCL)_ 

  _Medial Collateral Ligament (MCL)_

  _Lateral Collateral Ligament (LCL)_

  _Fibular Collateral Ligament (FCL)_
*ಮತ್ತು*
  _Coronary Ligaments._

  _ಮೊದಲ ನಾಲ್ಕು ಪ್ರಮುಖವಾಗಿ ಮತ್ತು ಕೊನೆಯ ಎರಡು ಸಹಾಯಕರಾಗಿ ನಮ್ಮ‌ ಇಡೀ ಶರೀರದ ಭಾರವನ್ನು ಭೂಮಿಗೆ ವರ್ಗಾಯಿಸುತ್ತವೆ, ನಮ್ಮ ಮೊಣಕಾಲು ಮಡಿಚಿ ಕುಕ್ಕರಗಾಲಿನಲ್ಲಿ ಕುಳಿತಾಗಲೂ!! ಅಂದರೆ ಭಾರ ಹೊರುತ್ತಿರುವುದು ಮೂಳೆಗಳೋ, ಸ್ನಾಯುಗಳೋ? ಅಂದರೆ, ಚಿಕಿತ್ಸೆಗೆ ಕ್ಯಾಲ್ಸಿಯಂ ಬೇಕೋ, ಸ್ನಾಯುವಿಗೆ ತೈಲ ಬೇಕೋ?!_ 🤔
            •~•~•~•~•

  _ವಿಜ್ಞಾನ ಕೃತಕತೆಗೆ ಶರಣಾಗಿ ಹೋಗಿದೆ. ಅದು ತನ್ನ ಕೃತಕ ಪ್ರತಿಕೃತಿಯನ್ನು ಸೃಷ್ಟಿಸುವ ಅಸಂಬದ್ಧಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದೇವೆ._ 🙄

  _ಸತ್ಯವನ್ನು ಬಚ್ಚಿಟ್ಟು ಶಸ್ತ್ರಚಿಕಿತ್ಸೆ ಒಂದೇ ದಾರಿ ಎಂದು ಕೇಳಿಸಿಕೊಂಡು ನಂಬುವ ನಾವು ತಾರ್ಕಿಕ ಯೋಚನೆಯತ್ತ ಮುಖ ಮಾಡಬೇಕಿದೆ._ 🤔

*ಚಿಕಿತ್ಸೆ ಏನು:?*
  _ನಿಮ್ಮ ಆಹಾರಗಳಿಂದ ಸ್ನಾಯುಗಳನ್ನು ದುರ್ಬಲಗೊಳಿಸಬೇಡಿ. ಸದೃಢ ಸ್ನಾಯುಗಳು ಕೇವಲ ಪೋಷಕಾಂಶಗಳಿಂದ ಬರುವುದಿಲ್ಲ, ಜೊತೆಗೆ ವ್ಯಾಯಾಮ ಬೇಕು. ಹೆಚ್ಚು ಗಮನೀಯ ಅಂಶ ಎಂದರೆ, ಮಾನಸಿಕ ಒತ್ತಡ ಇದ್ದಾಗ ಬೆನ್ನು ನೋವು ಹೆಚ್ಚು ಅಲ್ಲವೇ? ನಮ್ಮ ಮನಸ್ಸು ಕ್ಷೋಭೆಗೊಂಡ ತಕ್ಷಣ ಮುಖದ ಆಕಾರ ಬದಲಾಗಲು ಕಾರಣ ಅಲ್ಲಿನ ಸ್ನಾಯುಗಳು, ಹಾಗೆಯೇ ಹೃದಯದ, ಬೆನ್ನು, ಕೈಕಾಲುಗಳ ಸ್ನಾಯುಗಳನ್ನೂ ಸೇರಿ ನಮ ಶರೀರದ ಸರ್ವ ಸ್ನಾಯುಗಳೂ ಸಂಕೋಚಗೊಳ್ಳುತ್ತವೆ. ನೋವು ಬಾರದಿರಲು ಸಾಧ್ಯವೇ?_

  _ನೀವು ಖುಷಿಯಾಗಿ, ಮನಸ್ಸು ಪ್ರಸನ್ನವಾಗಿ, ಪ್ರವಾಸದಲ್ಲಿದ್ದಾಗ ನಿಮ್ಮ ಬೆನ್ನು ನೋವು ಇತ್ತೇ? ಗಮನಿಸಿ ನೋಡಿ..._ 🤭
   ~_ಮಾ ಶಾರದಾದಾಸ_
••••••••••••••••••••••••••••••
   🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴

Tuesday 22 March 2022

SSLCಪರೀಕ್ಷೆ ತಯಾರಿ ಹೀಗಿದ್ದರೆ ಉತ್ತಮ....

*ಪರೀಕ್ಷೆ ತಯಾರಿ ಹೀಗಿರಲಿ*
  
ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸ್ಸಿನಲ್ಲೂ ಅದೇ ವಿಷಯ, ಪರೀಕ್ಷೆ ಹತ್ತಿರ ಬಂದಾಗ ಏನು ಓದುವುದೆಂದೇ ತಿಳಿಯುವುದಿಲ್ಲ, ಓದಿದ್ದು ತಲೆಗೆ ಹೋಗುವುದಿಲ್ಲ, ಓದುತ್ತಾ ಕುಳಿತರೆ ನಿದ್ದೆ ಬಂದು ಬಿಡುತ್ತದೆ. ಈ ರೀತಿಯ ಮಾತುಗಳನ್ನು ವಿದ್ಯಾರ್ಥಿಗಳು ಹೇಳುವುದುಂಟು. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಭಯದಿಂದ ಒತ್ತಡ, ಖಿನ್ನತೆ, ಪೂರ್ಣವಾಗಿ ಆರೋಗ್ಯವೂ ಕೆಟ್ಟು ಹೋಗುತ್ತದೆ. ಪರೀಕ್ಷಾ ಜ್ವರ ಯಾರನ್ನೂ ಬಿಟ್ಟಿದ್ದಿಲ್ಲ.

ಆದರೆ ಇದರ ಹಿಂದಿನ ಕಾರಣವೂ ಮುಖ್ಯವಲ್ಲವೇ? ಮೊದಲೇ ಇದು ಸ್ಪರ್ಧಾ ಯುಗ, ಹೆಚ್ಚು ಅಂಕ ಗಳಿಸಬೇಕು, ಕಡಿಮೆ ಅಂಕ ಗಳಿಸಿದರೆ ಬೇರೆಯವರೊಂದಿಗೆ ಹೋಲಿಸುತ್ತಾರೆ. ಅಲ್ಲಿ ನಿರಾಕರಣೆಯ ಭಯದ ಜೊತೆಗೆ ಅನಾಥ ಭಾವ ಮೂಡಿ ಬಿಡುತ್ತದೆ. ಫಲಿತಾಂಶ ಚೆನ್ನಾಗಿ ಬಾರದಿದ್ದರೆ ಎಲ್ಲರಿಗೂ ಮುಖ ತೋರಿಸುವುದು ಹೇಗೆ ಎನ್ನುವ ಅಂಜಿಕೆ ಮೂಡುತ್ತದೆ.

ಎಲ್ಲ ವಿದ್ಯಾರ್ಥಿಗಳ ಸಮಸ್ಯೆಯೂ ಒಂದೇ ಅದೇನೆಂದರೆ ಓದಿದ್ದು ನೆನಪಿನಲ್ಲಿಯೇ ಉಳಿಯುವುದಿಲ್ಲ ಎಂಬುದು. ಕಾರಣ ಓದುವ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದಿಲ್ಲ. ಓದಿದ ನಂತರ ಮತ್ತೆ ಪುನಾರಾವರ್ತನೆ ಮಾಡುವ ಬಗ್ಗೆಯೂ ಯೋಚಿಸಿರುವುದಿಲ್ಲ. ಒಂದೇ ಸಮನೆ ಓದಿ ಬಿಟ್ಟರಾಯಿತೇ, ಸರಿಯಾದ ವಿಶ್ರಾಂತಿಯೂ ಅಗತ್ಯ. ಪರೀಕ್ಷೆಗಾಗಿ ಓದುವ ಬಗ್ಗೆ ಸಮರ್ಪಕವಾದ ಯೋಜನೆಯನ್ನು ರೂಪಿಸಿಕೊಳ್ಳಿ.

ಓದಲು ಸಮರ್ಪಕ ಯೋಜನೆ-ಟೈಮ್ ಟೇಬಲ್
ಪರೀಕ್ಷೆಗೆ ಇನ್ನೆಷ್ಟು ದಿನಗಳಿವೆ ಎಂದು ಯೋಚಿಸಿ, ದಿನದ 24ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. 12 ಗಂಟೆ ಓದು, ಏಳುಗಂಟೆ ನಿದ್ದೆ, ಊಟಕ್ಕೆ ಒಂದು ಗಂಟೆ, ಮನರಂಜನೆಗೆ ಒಂದು ಗಂಟೆ, ದಿನ ನಿತ್ಯದ ಕೆಲಸಗಳಿಗೆ ಒಂದು ಗಂಟೆ, ಹಾಗೂ ಇನ್ನೂ ಎರಡು ಗಂಟೆ ಉಳಿಯುತ್ತದೆ.

ಓದಿನ ಹನ್ನೆರಡು ಗಂಟೆಗಳನ್ನು ಸಮವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿಕೊಳ್ಳಿ. ಅದರಲ್ಲೇ ಓದು, ಬರವಣಿಗೆ ಮತ್ತು ಪುನಾರಾವರ್ತನೆಗೂ ಸಮಯ ಮೀಸಲಿಡಿ. ನೀವು ಹಾಕಿಕೊಂಡ ಟೈಮ್ ಟೇಬಲ್ ಪ್ರಾಮಾಣಿಕವಾಗಿ ಪಾಲಿಸಿ. ಪ್ರಗತಿಯನ್ನು ಗಮನಿಸಿ, ಸಮಾಧಾನಕರವಾಗಿಲ್ಲವೆನಿಸಿದರೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರೆಂದೇ ಅರ್ಥ.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು?
*ದಿನವೂ ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಕುಳಿತುಕೊಳ್ಳಿ. ಆ ವಾತಾವರಣಕ್ಕೆ ನಿಮ್ಮ ಮನಸ್ಸು ಹೊಂದಿಕೊಳ್ಳುತ್ತದೆ.
*ಮೊಬೈಲ್, ಟಿ.ವಿ. ಟ್ಯಾಬ್, ಕಂಪ್ಯೂಟರ್. ಎಲ್ಲವನ್ನೂ ಆರಿಸಿಬಿಡಿ.
*ಓದುವಾಗ ಯಾವ ರೀತಿಯಲ್ಲೂ ನಿಮಗೆ ತೊಂದರೆ ಕೊಡಬಾರದೆಂದು ಮನೆಯವರಿಗೆ ಹೇಳಿ.
*ಆ ಸಮಯದಲ್ಲಿ ಯಾವುದೇ ಫೋನ್, ಮೊಬೈಲ್ ಕರೆಗಳನ್ನು ಸ್ವೀಕರಿಸಬೇಡಿ.
*ಆದಷ್ಟು ಇತರ ಕಾರ್ಯಕ್ರಮಗಳಿಗೆ ಹೋಗದಿರಿ.
*ಕ್ರಿಕೆಟ್ ಪಂದ್ಯ ಮತ್ತು ಗೆಳೆಯ ಮತ್ತು ಗೆಳತಿಯರಿಂದ ಆದಷ್ಟು ದೂರವಿರಿ.

ಇಷ್ಟಾಗಿಯೂ ನಿಮಗೆ ಓದಲು ಏಕಾಗ್ರತೆ ಬರುತ್ತಿಲ್ಲವೇ ಹಾಗಾದರೆ ಕೆಲವು ವಿಧಾನಗಳನ್ನು ಪ್ರಯತ್ನಿಸಿ.
*ದೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳಿ
*ನಿಮ್ಮ ಅಂಗೈಗಳನ್ನು ಚೆನ್ನಾಗಿ ಉಜ್ಜಿಕೊಂಡು ಕಣ್ಣುಗಳ ಮೇಲಿಟ್ಟುಕೊಳ್ಳಿ
*ಬಗ್ಗುವ, ಕೈ ಕಾಲುಗಳನ್ನು ಚಾಚುವಂತಹ ವ್ಯಾಯಾಮವನ್ನು ಮಾಡಿ.
*ಮೆಲುವಾದ ಸಂಗೀತವನ್ನು ಕೇಳಿಸಿಕೊಳ್ಳಿ.
*ಪುನಾರವರ್ತನೆ ಮಾಡುವಾಗ ವೇಗವಾಗಿ ಓದಿ.

*ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳನ್ನು ದೊಡ್ಡದಾಗಿ ಬರೆದು ಓಡಾಡುವಾಗ ನಿಮ್ಮ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ.
*ನಿಮ್ಮ ಪಾಠಗಳನ್ನು ಮನಸ್ಸಿನಲ್ಲೇ ಊಹಿಸಿಕೊಳ್ಳಿ.
*ಗೆಲುವು ನಿಮ್ಮದೆನ್ನುವ ಭಾವ ಬೆಳೆಸಿಕೊಳ್ಳಿ.
ಓದುವಾಗ ಗಮನಿಸಬೇಕಾದ ಅಂಶಗಳು
*ಕಷ್ಟವಾಗಿರುವುದನ್ನು ಮೊದಲು ಓದಿ

*ಕಷ್ಟದ ವಿಷಯವೆಂದು ಇಂದು, ನಾಳೆ ಎಂದು ಮುಂದೂಡಬೇಡಿ. ಅಗತ್ಯವೆನಿಸಿದರೆ ನಿಮ್ಮ ಗೆಳೆಯ/ತಿ, ಶಿಕ್ಷಕರ ಸಲಹೆ ತೆಗೆದುಕೊಳ್ಳಿ.
*ನೀವು ಬರೆದುಕೊಂಡ ನೋಟ್ಸ್ ಅಲ್ಲದೆ ಮಿಕ್ಕ ಪುಸ್ತಕಗಳನ್ನೂ ಓದಿ.

*ಪರೀಕ್ಷೆಯ ಭಯದಲ್ಲಿ ಓದುತ್ತೇನೆಂದು ಗಂಟೆಗಟ್ಟಲೇ ಓದುವ ಅಗತ್ಯವಿಲ್ಲ. *5 ನಿಮಿಷಕ್ಕಿಂತ ಹೆಚ್ಚಾಗಿ ಒಂದೇ ಸಮನೆ ಓದಲಾಗದು ಅಥವಾ ಓದಿದರೂ ಅದು ತಲೆಯಲ್ಲಿ ಉಳಿಯಲಾರದು. ಆದ್ದರಿಂದ ಓದಿನ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ. ಮಧ್ಯೆ ವಿರಾಮದಲ್ಲಿ ಯಾರನ್ನಾದರೂ ಮಾತನಾಡಿಸಿ, ನಗಿಸಿ, ವಿರಮಿಸಿ, ಸ್ವಲ್ಪ ಹೊತ್ತು ಹೊರಗೆ ಹೋಗಿ, ಒಟ್ಟಿನಲ್ಲಿ ನಿಮಗಿಷ್ಟವಾದುದನ್ನು ಮಾಡಿ, ನಿಮ್ಮಲ್ಲಿ ಆಸಕ್ತಿ ಮೂಡುವಂತೆ ಮಾಡಿಕೊಳ್ಳಿ.

*ಸರಿಯಾಗಿ ನಿದ್ದೆ ಮಾಡಿ, ನಿದ್ದೆ ಮಾಡದಿದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ಓದಲು ಆಸಕ್ತಿಯೇ ಹೊರಟು ಹೋಗುತ್ತದೆ.
ನಿಮ್ಮ ಬಗೆಗಿನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ

ನಿಮ್ಮ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ, ಈಗ ಪ್ರಾರಂಭಿಸಿದರೂ ತಡವಾಗಿಲ್ಲ ಎನ್ನುವ ಭಾವ ಬೆಳೆಸಿಕೊಳ್ಳಿ, ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ನನ್ನಿಂದ ಮಾಡಲು ಸಾಧ್ಯವಿದೆ, ನಾನು ಮಾಡಬಲ್ಲೆ, ನನ್ನಲ್ಲಿ ನಾನು ನಂಬಿಕೆ ಇಡುತ್ತೇನೆ, ನಾನಿರುವಂತೆ ಅಭಿಮಾನ ಪಡುತ್ತೇನೆ, ಐ ಆಮ್ ದ ಬೆಸ್ಟ್ ಎನ್ನುವ ಭಾವ ನಿಮ್ಮದಾಗಲಿ.

ಅಬ್ಬಬ್ಬಾ ಎಂದರೆ ಏನಾಗಲು ಸಾಧ್ಯ? ಈ ಪರೀಕ್ಷೆಗಳೇನೂ ಅಂತಿಮವಲ್ಲ, ಸೋಲಾದರೂ ಎದುರಿಸುತ್ತೇನೆ, ಮುಂದೆ ನನ್ನ ಸೋಲನ್ನು ಗೆಲುವಾಗುವಂತೆ ಮಾಡುತ್ತೇನೆ ಎನ್ನುವ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಪರೀಕ್ಷೆಯ ಬಗೆಗಿನ ನಿಮ್ಮ ಭಯದ ಬಗ್ಗೆ, ನಿಮ್ಮ ಗುರಿಯ ಬಗ್ಗೆ, ನಿಮ್ಮ ಪೋಷಕರೊಡನೆ ಮುಕ್ತವಾಗಿ ಮಾತನಾಡಿ. ಅವರು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಾರೆ? ಅವರಿಂದ ನೀವು ಯಾವ ರೀತಿಯ ಸಹಕಾರ ಬಯಸುತ್ತೀರೆಂದು ಸ್ಪಷ್ಟವಾಗಿ ತಿಳಿಸಿ. ನಿಮ್ಮ ಓದಿನ, ಪರೀಕ್ಷೆಯ, ಮುಂದೆ ಆರಿಸುವ ವೃತ್ತಿಯ, ನಿಮ್ಮ ಜೀವನದ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

 ನನ್ನಿಂದಾಗದು ಎನ್ನುವ ಮಂತ್ರ ಬಿಟ್ಟು ನಿಮ್ಮಲ್ಲಿ ನಂಬಿಕೆ ಇಡಿ, ನೀವಿರುವಂತೆ ನಿಮ್ಮನ್ನು ಸ್ವೀಕರಿಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಹಿಂದಿನ ನೆನಪು ಬೇಡ. ಈಗೇನು ಮಾಡಬಹುದೆನ್ನುವ ಬಗ್ಗೆ ಯೋಚಿಸಿ. ನೀವು ಮಾಡುವುದನ್ನು ಪ್ರೀತಿಸಿ ಅಥವಾ ನಿಮಗೆ ಪ್ರೀತಿ ಇರುವುದನ್ನು ಮಾಡಿ. ನೀವು ಅಂದು ಕೊಂಡಿರುವುದಕ್ಕಿಂತಾ ನಿಮ್ಮಲ್ಲಿ ಹೆಚ್ಚಿನ ಶಕ್ತಿ ಇದೆ. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿ. ನಿಮ್ಮಲ್ಲಿರುವ ಅಂತಃ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳಿ.

ಪರೀಕ್ಷೆಗೇನೋ ಸಿದ್ಧವಾದಿರಿ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ನಿಮಗೆ ಗೊತ್ತಿಲ್ಲದಿರುವುದನ್ನು ಹುಡುಕಬೇಡಿ. *ಮೊದಲು ಗೊತ್ತಿರುವುದರ ಬಗ್ಗೆ ಗಮನ ಕೊಡಿ.* ನಂತರ ಕಷ್ಟದ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. *ಸಮಯದ ಬಗ್ಗೆ ಗಮನ ಕೊಡಿ.* ಒಂದೇ ಪ್ರಶ್ನೆಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳ ಬೇಡಿ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ. *ಪರೀಕ್ಷೆ ಮುಗಿಯಿತು, ಹೊರಗೆ ಬಂದು ಬರೆದಿರುವ ಉತ್ತರಗಳ ಬಗ್ಗೆ ಯಾರೊಡನೆಯೂ ಚರ್ಚೆ ಬೇಡ.* ಆಗಿರುವುದನ್ನು ಬದಲಿಸಲಾಗದು ಆದರೆ ಅದರ ಪರಿಣಾಮ ಮುಂದೆ ಬರೆಯುವ ಪತ್ರಿಕೆಗಳ ಮೇಲೂ ಆಗುತ್ತದೆ.

MATHS TIME LINE

MATHS TIME LINE https://mathigon.org/timeline