✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday 17 March 2021

ವ್ಯಾಯಾಮ (ಶಾರೀರಿಕ ಶ್ರಮದ) ಲಾಭಗಳು ಭಾಗ-4

🙏ಅಮೃತಾತ್ಮರೇ ನಮಸ್ಕಾರ 🙏
       ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
          ಸ್ವಾಸ್ಥ್ಯ ಸರ್ವರದ್ದೂ ಆಗಲಿ
        🍁🍁🍁🍁🍁🍁🍁🍁
••••••••••••••••••••••••••••••••••••••••••
18.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-39
••••••••••••••
✍️: ಇಂದಿನ ವಿಷಯ:
ವ್ಯಾಯಾಮ (ಶಾರೀರಿಕ ಶ್ರಮದ) ಲಾಭಗಳು
 ಭಾಗ-4
•••••••••••••••••••••••••••••••••••••••••
(ವ್ಯಾಯಾಮದ ಸಂಕ್ಷಿಪ್ತ ಪರಿಚಯ ಇಲ್ಲಿಗೆ ಮುಗಿಯುತ್ತದೆ).

1⃣ ಎಷ್ಟು ಸಮಯ ವ್ಯಾಯಾಮ ಸೂಕ್ತ? :
ಲಲಾಟ (ಹಣೆ), ನಾಸಾ (ಮೂಗು), ಕಕ್ಷ (ಕಂಕಳು) ಗಳಲ್ಲಿ ಬೆವರು ಬಂದರೆ ನಮ್ಮ ಶರೀರದ 1/2 ಶಕ್ತಿ ವ್ಯಯವಾಗಿದೆ ಎಂದರ್ಥ. ಇದೇ ಆ ವ್ಯಕ್ತಿಯ "ವ್ಯಾಯಾಮ ಸಿದ್ಧಿಲಕ್ಷಣ".

ಯಾವುದೇ ವ್ಯಕ್ತಿಗೆ, ಯಾವುದೇ ದೇಶದಲ್ಲಿ, ಯಾವುದೇ ಕಾಲದಲ್ಲಿ  ವ್ಯಾಯಾಮದ ಪ್ರಮಾಣ ಅವರವರ ಬಲಕ್ಕೆ ಅನುಗುಣವಾಗಿ ಇರುತ್ತದೆ. 
ಎಲ್ಲರಿಗೂ ಒಂದೇ ತರಹದಲ್ಲಿ ಅಂದರೆ ಕಿಲೋ ಕ್ಯಾಲೊರಿಯಲ್ಲಿ ಶಕ್ತಿಯನ್ನು ವ್ಯಯಿಸಬೇಕೆನ್ನುವ ವಾದ ಸರಿಯಾದುದಲ್ಲ, ಪ್ರತಿ ದಿನ, ಕಾಲಾದಿಗಳ ಆಧಾರದಲ್ಲಿ ನಿತ್ಯವೂ ಭಿನ್ನ ಪ್ರಮಾಣದಲ್ಲಿ ನೆಲೆಸಿರುವ ನಮ್ಮ ಬಲವನ್ನು ನಮ್ಮ ಕೆಲಸ ಸಾಮರ್ಥ್ಯದಿಂದಲೇ ಅಳೆಯಬೇಕು.
  💥(ಬಲಂ ವ್ಯಾಯಾಮ ಶಕ್ತ್ಯಾತ್ ಪರಿಕ್ಷೆತ್......)

2⃣ ಹೆಚ್ಚು ಅಥವಾ ಅಕಾಲದಲ್ಲಿ ವ್ಯಾಯಾಮ ಮಾಡುವುದರಿಂದ ಹಾನಿ:
ತೂಕ ಇಳಿಸುವ, ದೇಹ ದೃಢ ಮಾಡುವ ಹೆಸರಿನಿಂದ ಅಥವಾ ಹುಮ್ಮಸಿನಲ್ಲಿ ಅತೀ ವ್ಯಾಯಾಮ ಮಾಡುವುದು ನಿಶಿದ್ಧ, ಮತ್ತು ಅಕಾಲದಲ್ಲಿ ಅಂದರೆ ಉಷ್ಣ ಋತುವಿನಲ್ಲಿ ಅತಿಯಾದ ವ್ಯಾಯಾಮದಿಂದ ಅವಯವಗಳು ದುರ್ಬಲಗೊಂಡರೆ, ಅವಯವಕ್ಕೆ ಸಂಬಂಧಿಸಿ ಅನೇಕ ರೋಗಗಳು ಬಾಧಿಸುತ್ತವೆ.
◆ ಉದಾ: ಕೀಲು ನೋವು, ಶಕ್ತಿಹ್ರಾಸ, ನರಗಳ ದೌರ್ಬಲ್ಯ, ರಕ್ತಪಿತ್ತ(ರಕ್ತ‌ ಮತ್ತು ರಕ್ತನಾಳಗಳ ವಿಕಾರ- BP, Varicose veins...), ಪುಪ್ಪುಸಗಳ ರೋಗಗಳಾದ ಅಸ್ತಮಾ, TB, ಜ್ವರಾದಿಗಳು ಬರುತ್ತವೆ.

3⃣ ಕಡಿಮೆ ವ್ಯಾಯಾಮದ ಹಾನಿ:
ಇಂದಿನ ಬಹು ದೊಡ್ಡ ಸಮಸ್ಯೆ ಇದು.
ಇದು ತಿಂದರೆ ಮೂಳೆಗೆ ಶಕ್ತಿ ಬರುತ್ತದೆ, ಅದು ತಿಂದರೆ ಕಣ್ಣಿಗೆ ಒಳ್ಳೆಯದು, ಹೀಗೆ ಏನೇನೋ ಹೇಳಿ ತಿನ್ನುತ್ತಾರೆ.
ಶಕ್ತಿಯನ್ನು ಸಂಗ್ರಹಿಸುತ್ತಾರೆ  ಆದರೆ ವ್ಯಯಿಸದೆ ಹೋದರೆ ಆ ಶಕ್ತಿ (Hot feeling) ಹೊರ ಹೋಗಲು ನರಗಳನ್ನು ಮಾಂಸಗಳನ್ನು ಆಶ್ರಯಿಸಿರುತ್ತದೆ. ಬಹಳ ಜನ Heat ಆಗಿದೆ ಎಂದು ಮೋಸರು, ಎಳನೀರು, ಸೇವಿಸುತ್ತಾರೆ ಅದರ ಬದಲು ವ್ಯಾಯಾಮ ಮಾಡಿದರೆ ಅತ್ಯಂತ ಸೂಕ್ತ.
ಯಾವುದೇ ಆಹಾರ ಪದಾರ್ಥ ತಾನಾಗಿಯೇ ಒಳ್ಳೆಯದನ್ನು ಮಾಡುವುದಿಲ್ಲ. ನಮ್ಮ ಅಗ್ನಿ ಅದನ್ನು ಒಪ್ಪಿಕೊಂಡು ಜೀರ್ಣಿಸಿ ಒಳಗೆ ಕಳಿಸಿದರೆ ಮಾತ್ರ ಒಳ್ಳೆಯದನ್ನು ಮಾಡುತ್ತದೆ.‌ ಹಾಗೆ ಜೀರ್ಣಿಸಲು ಬೇಕಾದ ಪ್ರಮುಖ ಅಂಶ ಎಂದರೆ ಶಾರೀರಿಕ ಶ್ರಮ, ಅದರ ಹೊರತು ಅಮೃತ ಸೇವಿಸಿದರೂ ರೋಗವೇ ಹೊರತು ಆರೋಗ್ಯವಲ್ಲ.

4⃣ ವ್ಯಾಯಾಮ ಯಾವಾಗ ಮಾಡಬಾರದು:
 
    💥(ಭುಕ್ತ ವಾನ್ ಕೃತ ಸಂಭೋಗ.....)

• ಭೋಜನದ ತಕ್ಷಣ ಶ್ರಮದ ಕೆಲಸ ಮಾಡಿದರೆ  ಆವರಣವಾತ(ಆಮವಾತ) ರೋಗಗಳು ಮತ್ತು ಉಪವಾಸದ ಅಥವಾ ಸಂಭೋಗದ ನಂತರ ವ್ಯಾಯಾಮ ಮಾಡಿದರೆ ಧಾತುಕ್ಷಯಜನ್ಯ ವಾತ (ಮೂಳೆ ಸವೆತ, ಹೃದಯ ಮಾಂಸ ದೌರ್ಬಲ್ಯ, ಪಕ್ಷಾಘಾತ, ನೆನಪಿನ ಶಕ್ತಿ ಹ್ರಾಸತೆ) ರೋಗಗಳು ಬರುತ್ತವೆ.
• ಪುಪ್ಪುಸಕ್ಕೆ ಸಂಬಂಧಿ ರೋಗಗಳಿದ್ದಾಗಲೂ ವ್ಯಾಯಾಮ ಮಾಡಲೇಬಾರದು, ಆಗ ಶರೀರಕ್ಕೆ ಗಾಳಿ (ಆಮ್ಲಜನಕ) ಕೊರತೆಯಾಗಿ ಎಲ್ಲಾ ಧಾತುಗಳು ದುರ್ಬಲಗೊಳುತ್ತವೆ ಅಥವಾ ತೀವ್ರತೆ ಹೆಚ್ಚಿದ್ದರೆ ಹೃದಯಾಘಾತದ ಸಾಧ್ಯತೆ ಹೆಚ್ಚು.
• ರಕ್ತಪಿತ್ತ ಇರುವಾಗಲೂ ವ್ಯಾಯಾಮ‌ ಅಲ್ಪ ಪ್ರಮಾಣದಲ್ಲಿರಲಿ.

🎗 ಸದೃಢ ಆರೋಗ್ಯ ಇದ್ದರೆ ಯಾವ ವಿಧಿ ನಿಷೇಧಗಳೂ ಇಲ್ಲದೇ ಜೀವನವನ್ನು ಸುಖಪ್ರದವಾಗಿಸಿಕೊಳ್ಳಬಹುದು. 🎗

👁‍🗨 ಆಸ್ಪತ್ರೆಗಳಿಂದ ಸಿಗುವ ಆರೋಗ್ಯ ಎಂದಿಗೂ ನೈಸರ್ಗಿಕ ಅಲ್ಲ 👁‍🗨

         🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline