✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday 9 March 2021

ವ್ಯಾಯಾಮದ (ಶಾರೀರಿಕ ಶ್ರಮದ) ಲಾಭಗಳು ಭಾಗ-2

🙏ಅಮೃತಾತ್ಮರೇ ನಮಸ್ಕಾರ 🙏
  🍃ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍃
     🍃ಸ್ವಾಸ್ಥ್ಯ ಸರ್ವರದ್ದೂ ಆಗಲಿ🍃
••••••••••••••••••••••••••••••••••••••••••
10.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-37
••••••••••••••
✍️: ಇಂದಿನ ವಿಷಯ:
ವ್ಯಾಯಾಮದ (ಶಾರೀರಿಕ ಶ್ರಮದ) ಲಾಭಗಳು
 ಭಾಗ-2
•••••••••••••••••••••••••••••••••••••••••

(.....ಮುಂದುವರಿದ ಭಾಗ)
❄️ ವ್ಯಾಯಾಮದಿಂದ ಆಗುವ ಶರೀರದ ಆಂತರಿಕ ಬದಲಾವಣೆಗಳು:-

🚴‍♂ ಮುಪ್ಪು ಬೇಗಬಾರದು:
ಧಾತುಗಳ, ಅವಯವಗಳ ಹ್ರಾಸತೆಯ ಅವಸ್ಥೆಯೇ ಮುಪ್ಪು. 
ಇದು ಆರಂಭವಾಗುವುದು ರಸಧಾತುವಿನ ಶಕ್ತಿಗುಂದುವಿಕೆ ಮತ್ತು ಪಿತ್ತದೋಷದಿಂದ. ಧಾತು, ಅವಯವಗಳಲ್ಲಿನ ರಸಕ್ಕೆ ಪಿತ್ತದ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇಲ್ಲವಾಗುತ್ತದೆ.(ರಸಧಾತುವಿನ ವಿಶೇಷ ಕಾರ್ಯ: *ಜಠರಾನಲ ಊಷ್ಮಜನ್ಯ ಸಂತಾಪ ನಿವಾರಣಕೃತ್* ಅಂದರೆ ರಸಧಾತುವು ಶರೀರದಲ್ಲಿರುವ ಎಲ್ಲಾ ಅಗ್ನಿಗಳಿಂದ ಉಂಟಾಗುವ ತಾಪದಿಂದ ಧಾತುಗಳನ್ನು ರಕ್ಷಿಸುತ್ತದೆ.) ಆಗ ಧಾತುಗಳು ಪಿತ್ತದಿಂದ ಮೆತ್ತಗಾದರೆ ಮಾತ್ರ ಕ್ಷೀಣತೆ ಆರಂಭವಾಗುತ್ತದೆ, ಇದೇ ಮುಪ್ಪು.
ನಿತ್ಯವೂ ತಪ್ಪದೇ ಮಾಡುವ ವ್ಯಾಯಾಮವು ಪಿತ್ತದ ಮೂಲವನ್ನೇ ಜೀರ್ಣಿಸುತ್ತದೆ. ಆಹಾರವೂ ಚನ್ನಾಗಿ ಜೀರ್ಣಗೊಂಡು ರಸ ಪೋಷಣೆ ಮಾಡುವ ಕಾರಣ ಧಾತುರಸ ಕಡಿಮೆಯಾಗದು, ಹಾಗಾಗಿ ಧಾತು ಮೃದು/ಶಿಥಿಲವಾಗದು.

ಚನ್ನಾಗಿ ಜೀರ್ಣಶಕ್ತಿ ಇರುವ ದೇಹದಲ್ಲಿ ಧಾತುಗತ ಅಜೀರ್ಣವು (free radical) ಅತ್ಯಂತ ಕಡಿಮೆ ಇರುವ ಕಾರಣ ಮುಪ್ಪಾಗುವಿಕೆಯನ್ನು ಮುಂದೂಡುತ್ತದೆ. 
 
🤽‍♀ ಮುಪ್ಪು ಬೇಗ ಏರದು:
ಒಂದುವೇಳೆ ಮುಪ್ಪು ಆರಂಭವಾದರೂ,
ಕಬ್ಬಿಣವು ತುಕ್ಕು ಹಿಡಿಯುವಂತೆ ವ್ಯಾಯಾಮ ಮಾಡದವರ ಧಾತು/ಅವಯವಗಳು ಬಹು ಬೇಗ oxidation ಗೆ ಒಳಪಟ್ಟು ಶೀಘ್ರವಾಗಿ 1-2 ವರ್ಷದಲ್ಲೇ ವಾರ್ದಖ್ಯ ನಿರಂತರ ಏರುತ್ತದೆ!!?

ಔಷಧಿ, ಪೌಷ್ಟಿಕಾಂಶಗಳನ್ನು ಕೊಟ್ಟು ಎಷ್ಟೇ ಸಂರಕ್ಷಿಸಿದರೂ, ಪಿತ್ತದ ಪ್ರಾಬಲ್ಯ ನಿಲ್ಲಿಸುವುದು ಅತ್ಯಂತ ಕಷ್ಟ.  ಬೆಂಕಿ ಬಿದ್ದ ಮನೆಗಳನ್ನು ರಕ್ಷಿಸುವುದು ಎಷ್ಟು ಕಷ್ಟವೋ ಅಷ್ಟೇ ದಾರುಣವಾದ ಕೆಲಸ ಇದು.
ಬೆಂಕಿ ಉರಿಯಲು ಬೇಕಾಗುವ ಇಂದನವನ್ನೇ ಉರಿಸಿ ಅದರಿಂದ ಆಹಾರವನ್ನು ಜೀರ್ಣಿಸುವಂತೆ ಮಾಡುವ ವ್ಯಾಯಾಮದಿಂದ ಧಾತುಗಳ ಮೆತ್ತಗಾಗುವ ಬದಲು ಇನ್ಮಷ್ಟು ಗಟ್ಟಿಗೊಳ್ಳುತ್ತವೆ.

🧗‍♂ ವ್ಯಾಯಾಮವು ಸರ್ವದಾ ಬಲಕಾರಕ:

• "ಬಲಂ ವ್ಯಾಯಾಮ ಶಕ್ತ್ಯಾತ್ ಪರೀಕ್ಷೇತ್...|"
ಮನುಷ್ಯನ ಬಲವನ್ನು ಅವನ ಕರ್ಮ ಸಾಮರ್ಥ್ಯದಿಂದ ಅಳೆಯಬೇಕು. ಅಂದರೆ ವ್ಯಾಯಾಮಕ್ಕೂ ಬಲಕ್ಕೂ ಉತ್ತಮ ಸಂಭಂದ ಇದೆ.
"ಬಲ ಹೆಚ್ಚಾದರೆ ವ್ಯಾಯಾಮ ಸಾಮರ್ಥ್ಯ ಹೆಚ್ಚು. ಹಾಗೆಯೇ, ವ್ಯಾಯಾಮದಿಂದ ಮತ್ತೆ ಬಲ ಹೆಚ್ಚುತ್ತದೆ. ಆದರೆ ಇದೆಲ್ಲ ಆಗುವುದು 16 ರಿಂದ 25 ರ ವಯಸ್ಸಿನ ಮದ್ಯದಲ್ಲಿ 
ಆರಂಭಿಸುವ ವ್ಯಾಯಾಮದಿಂದಲೇ ಹೊರತು 40-50 ವರ್ಷಗಳವರಗೆ ಶ್ರಮದ ಕೆಲಸ ಮಾಡದೆ ಕೊನೆಗೆ ಮುಪ್ಪಿಗೆ ಹೆದರಿ ವ್ಯಾಯಾಮ ಆರಂಭಿಸಿದರೆ ಸ್ವಲ್ಪ ಜೀರ್ಣಶಕ್ತಿ ವೃದ್ಧಿಯಾಗಬಹುದೇ ಹೊರತು ಜೀವಕೋಶಗಳ ಒಳಗೆ ಆಹಾರ ಸಂಪೂರ್ಣ ಹೋಗಿ ಹೊಸಚಿಗುರೊಡೆಯಲು ಸಾದ್ಯವಿಲ್ಲ.

ಯಾವುದನ್ನೇ ಆದರೂ ಸೂಕ್ತ ಸಮಯ ಮತ್ತು ವಿಧಿ ಪೂರ್ವಕ ಅನುಸರಿಸುವುದರಿಂದ ಮಾತ್ರ ಗುಣವರ್ಧಕವಾಗುತ್ತದೆ. 
ಹಾಗಾಗಿ ವ್ಯಾಯಾಮದ ವಿಧಿಯನ್ನ ನಾಳಿನ ಸಂಚಿಕೆ ಯಲ್ಲಿ ನೋಡೋಣ.

               🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline