✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday 15 April 2021

ಕೊರೋನಾ ಭಾಗ-2ಇದರಲ್ಲಿ,ಅಪಾಯದ ಮುನ್ಸೂಚನೆ ಇದೆ ; ಕರೋನಾವನ್ನು ಹೇಗಾದರೂ ತಡೆಯಿರಿ

ಆತ್ಮೀಯರೇ ನಮಸ್ಕಾರ, 🙏.
***************************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
16.04.2021                
   ಸಂಚಿಕೆ-50
***************************
✍️: ಇಂದಿನ ವಿಷಯ:- 
ಕೊರೋನಾ ಭಾಗ-2
ಇದರಲ್ಲಿ,
ಅಪಾಯದ ಮುನ್ಸೂಚನೆ ಇದೆ ; ಕರೋನಾವನ್ನು ಹೇಗಾದರೂ ತಡೆಯಿರಿ
***************************
ಯಾವುದೇ ಒಂದು ಪದ್ಧತಿಯನ್ನು ನಂಬಿ ಕೂಡುವ ಕಾಲ ಇದಲ್ಲ. ಹೇಗಾದರೂ ವೈರಸ್ ಹರಡುವುದನ್ನು ತಡೆಯೋಣ, ಇಲ್ಲದಿದ್ದಲ್ಲಿ ಅಪಾಯ ಜೋರಾಗಿ ಬರುತ್ತದೆ.

ಭಾರತದಲ್ಲಿ ಸಾವಿನ ಸಧ್ಯಕ್ಕೆ ಪ್ರಮಾಣ ಕಡಿಮೆ ಇರಬಹುದು ಆದರೆ ಒಂದೊಮ್ಮೆ ನಮಗೇ ಕೊರೋನಾ ಬಂದಿದೆ ಎಂದಾದರೆ ನಮ್ಮ ಮನದಲ್ಲಿ, ನಮ್ಮ ಕುಟುಂಬದಲ್ಲಿ ಎಷ್ಟು ಆತಂಕ ಮನೆಮಾಡುತ್ತದೆ!!! ಗುಣಮುಖರಾದರೂ ಮತ್ತೆ ಬರಲಾರದೆಂದೂ ಇಲ್ಲ. 

ಈ ಯೋಚನೆಗಳ ನಡುವೆ ನಿತ್ಯವೂ ಭಯರಹಿತವಾಗಿ ಬದುಕಲು ಏನು ಮಾಡಬಹುದೆಂದು ಆಯುರ್ವೇದ ಆಚಾರ್ಯರು ಏನು ಹೇಳಿದ್ದಾರೆ ನೋಡೋಣ.

ಈ ರೀತಿಯ ರೋಗಗಳು ಬರುವ ಕಾರಣಗಳನ್ನು ಬಹು ಸೂಕ್ಷ್ಮವಾಗಿ ಹೇಳಿದ್ದಾರೆ.

ಸಧ್ಯಕ್ಕೆ ಹರಡುವ ವಿಧಾನಗಳನ್ನು ತಡೆಯಲು ಆಯುರ್ವೇದ ಏನು ಹೇಳುತ್ತದೆ ನೋಡೋಣ.

A) ಸೋಂಕು ಹರಡುವಿಕೆಯನ್ನು ತಡೆಯುವ ವಿಧಾನ:

• ಗಾತ್ರ ಸಂಸ್ಪರ್ಶಾತ್- ನೇರವಾಗಿ ಮುಟ್ಟುವುದನ್ನು, ಯಾವುದೇ ರೀತಿಯ ಶಾರೀರಿಕ ಸಂಬಂಧ ಇಟ್ಟುಕೊಳ್ಳುವುದು ಬೇಡ.

• ಸಹಾಸನ- ಅಂದರೆ ಸಂಬಂಧಿಗಳೂ, ಪರಿಚಯದವರೆಂದರೂ ಅತಿ ಹತ್ತಿರದಿಂದ ಒಂದೇ ಆಸನದಲ್ಲಿ ಕುಳಿತುಕೊಳ್ಳುವುದು ಬೇಡ.

• ಸಹಶಯ್ಯಾ- ಅಂದರೆ ಒಂದು ಹಾಸಿಗೆಯಲ್ಲೇ ಇಬ್ಬರು ಮಲಗುವುದು 

• ಸಹಭೋಜನ- ಒಂದೇ ತಟ್ಟೆಯಲ್ಲಿ ಊಟ ಮಾಡುವುದು/ಮಾಡಿಸುವುದು ಬೇಡ

• ಸಹಪಾನ- ಒಂದೇ ಕಪ್ ನಲ್ಲಿ ಇಬ್ಬರು ಪಾನೀಯ ಸೇವಿಸುವುದು ನಿಶಿದ್ಧ

• ಉಡುಪುಗಳನ್ನು ಆಭರಣಗಳನ್ನು ಹಂಚಿಕೊಳ್ಳುವುದು ಸಲ್ಲದು.
ಇವುಗಳಿಂದ ಜನಸಮೂಹವನ್ನು ಧ್ವಂಸಮಾಡುವ ಸೋಂಕು ಹರಡುತ್ತವೆ, ಇಂತಹ ರೋಗಗಳನ್ನು ಜನಪದೋಧ್ವಂಸ ವ್ಯಾಧಿಗಳೆಂದು ಕರೆಯುತ್ತಾರೆ.



B) ವೈರಾಣು ಶರೀರದೊಳಗೆ ಬೆಳೆಯುವಿಕೆಯನ್ನುಬತಡೆಯಿರಿ:

ಸೋಂಕು ತಗುಲಿದರೂ ಸಹ ಎಲ್ಲರೂ ಧ್ವಂಸಗೊಳ್ಳುತ್ತಾರೆ ಅಥವಾ ಮರಣಿಸುತ್ತಾರೆ ಎಂದೇನೂ ಇಲ್ಲ.‌ ಏಕೆಂದರೆ ಆ ವೈರಾಣು ಮಾನವನ ಶರೀರದಲ್ಲಿ ತನ್ನ ಸಂತತಿಯನ್ನು ಬೆಳೆಸಿ, ಆ ಶರೀರವನ್ನು ನಾಶ ಮಾಡಲು ಸೂಕ್ತ ಆಂತರಿಕ ವಾತಾವರಣ ಬೇಕೇಬೇಕು.  ಅದಕ್ಕೆ ಪೂರಕ ಅಂಶಗಳೆಂದರೆ-

1) ಕಾರ್ಬನ್ ಡೈಆಕ್ಸೈಡ್
2) ಜೀರ್ಣವಾಗದೇ ಉಳಿದ ಪ್ರೋಟೀನ್ & ಕೊಬ್ಬು 
ಮತ್ತು 
3) ಸರ್ವಧಾತುಗತ ಶುಕ್ತಪಾಕ (ವ್ಯತ್ಯಾಸವಾದ ಪಿ.ಹೆಚ್ ಎನ್ನಬಹುದು) 

ಈ ಮೂರೂ ಉತ್ಪತ್ತಿಯಾಗಲು ನಮ್ಮ ಕಲವು ತಪ್ಪುಗಳೇ ನೇರ ಕಾರಣ, ಅವುಗಳನ್ನು ಇಂದೇ ನಿಲ್ಲಿಸೋಣ-

• ಅಜೀರ್ಣಾಶನ- ಆಹಾರ ಜೀರ್ಣವಾಗದೇ ಇದ್ದರೂ ಸಮಯವಾಯ್ತೆಂದು ತಿನ್ನುವುದು

• ವಿಶಮಾಶನ- ಹಸಿವಾಗದೇ ತಿನ್ನುವುದು
 
• ಅದ್ಯಶನ- ಅಗತ್ಯವಿಲ್ಲದೇ ಮೇಲಿಂದ ಮೇಲೆ ತಿನ್ನುವುದು

• ರಾತ್ರಿ ಹೊಟ್ಟೆ ಬಿರಿಯುವಂತೆ ತಿಂದು ತಡವಾಗಿ ಮಲಗುವುದು.

• ವರ್ಷಕ್ಕೊಮ್ಮೆ ಪಂಚಕರ್ಮದಿಂದ ಶರೀರ ಶೋಧನ ಮಾಡಿಕೊಳ್ಳದೇ, ವ್ಯಾಧಿಗೆ ಪೂರಕ‌ಅಂಶಗಳನ್ನು ಶರೀರದಲ್ಲಿ ಇಟ್ಟುಕೊಂಡಿರುವುದು.

*

ವೈರಾಣು ಹರಡುವಿಕೆ ಮತ್ತು ಬೆಳೆಯುವಿಕೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಡೆಯುವ ವಿಧಾನಗಳನ್ನು ಪಾಲಿಸಿದಲ್ಲಿ ಕೊರೋನಾ ಒಂದೇ ಏಕೆ, ಮುಂದೆ ಬರಬಹುದಾದ ಸೋಂಕುಗಳನ್ನು ಅಲ್ಲೇ ತಡೆಯಬಹುದು.

ವಂದನೆಗಳು 
🙏🙏🙏🙏🙏
*********************

No comments:

Post a Comment

MATHS TIME LINE

MATHS TIME LINE https://mathigon.org/timeline