✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday 29 April 2021

ನಿಂಬೆ ರಸದ ಬಗ್ಗೆ ಇರುವ ಗೊಂದಲಕ್ಕೆ ಪರಿಹಾರ

CLARIFY ABOUT ನಿಂಬೆ ರಸ

Activities for children at home, please touch the link below```👉🏼 Pschool.in ```Very useful for children```

CLICK HERE TO PSchool. Activities

ಲಸಿಕೆ ಪಡೆದ ನಂತರ ನೀವು ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ತಡೆಯಲು ನೀವು ಸೇವಿಸುವ ಆಹಾರವು ಸಹ ಪ್ರಮುಖ ಪಾತ್ರ ವಹಿಸುತ್ತದೆ.

ಲಸಿಕೆ ಪಡೆದ ನಂತರ ನೀವು ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ತಡೆಯಲು ನೀವು ಸೇವಿಸುವ ಆಹಾರವು ಸಹ ಪ್ರಮುಖ ಪಾತ್ರ ವಹಿಸುತ್ತದೆ.

           ಕರೋನವೈರಸ್ ಎರಡನೇ ಅಲೆ ಸಧ್ಯ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 1 ಲಕ್ಷ 70 ಸಾವಿರ ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್(Vaccination) ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ದೇಶಾದ್ಯಂತ ಕೋಟ್ಯಂತರ ಜನರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಮತ್ತು ಲಕ್ಷಾಂತರ ಜನರು ಲಸಿಕೆ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಲಸಿಕೆ ಪಡೆದ ನಂತರ, ನೀವು ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ತಡೆಯಲು ನೀವು ಸೇವಿಸುವ ಆಹಾರವು ಸಹ ಪ್ರಮುಖ ಪಾತ್ರ ವಹಿಸುತ್ತದೆ.


ಲಸಿಕೆ ಪಡೆಯುವ ಮೊದಲು ಕುಡಿಯಿರಿ ಸಾಕಷ್ಟು ನೀರು: 
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರೋನಾ ವ್ಯಾಕ್ಸಿನ್ ಪಡೆಯುವ ಮೊದಲು ಮತ್ತು ನಂತರ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವರದಿ ಮಾಡಿದೆ. ನೀವು ಲಸಿಕೆ ಹಾಕಿಸಿಕೊಳ್ಳುವ ಮೊದಲು ಸಾಕಷ್ಟು ನೀರು ಕುಡಿಯಿರಿ(Drink water), ಕಲ್ಲಂಗಡಿ, ಸೌತೆಕಾಯಿ ಮತ್ತು ಹಣ್ಣುಗಳನ್ನು ಸೇವಿಸಿ. ಇದರಿಂದ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಉನ್ನತಾಗುತ್ತವೆ ಎಂಬ  ಭಯ ಕಡಿಮೆಯಾಗುತ್ತದೆ. 

ಮದ್ಯಪಾನದಿಂದ ದೂರವಿರಿ:
ಲಸಿಕೆಯ ನಂತರ ಆಲ್ಕೋಹಾಲ್(Avoid alcohol) ಅನ್ನು ಸೇವಿಸಬೇಡಿ ಏಕೆಂದರೆ ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ, ಇದರಿಂದಾಗಿ ಲಸಿಕೆಯ ಅಡ್ಡಪರಿಣಾಮಗಳು ಹೆಚ್ಚಾಗಬಹುದು. ಆಲ್ಕೊಹಾಲ್ ರಿಸರ್ಚ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಲಸಿಕೆ ಹಾಕಿದ ನಂತರ ಆಲ್ಕೊಹಾಲ್ ಕುಡಿಯುವುದರಿಂದ ನಿಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಕುಂಟಿತಗೊಳ್ಳುತ್ತದೆ

ಸಕ್ಕರೆ ಮಿಶ್ರಿತ ಆಹಾರಗಳಿಂದ ದೂರವಿರಿ: 
ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆ ಪಡೆದ  ನಂತರ ನೀವು ಕೊಬ್ಬು ಮತ್ತು ಕ್ಯಾಲೊರಿಗಳನ್ನು(Avoid processed food) ಹೊಂದಿರುವ ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನ ಅಧ್ಯಯನದ ಪ್ರಕಾರ, ಕರೋನಾ ಲಸಿಕೆ ಪಡೆದ ನಂತರ ಅತಿಯಾದ ಸಕ್ಕರೆ ಮಿಶ್ರಿತ ಆಹಾರದಿಂದ ದೂರವಿರಬೇಕು, ಇಲ್ಲದಿದ್ದರೆ ಒತ್ತಡ ಮತ್ತು ಆತಂಕ ಉಂಟಾಗುತ್ತದೆ ಮತ್ತು ನಿದ್ರೆಗೆ ಇದು ಅಡ್ಡಪರಿಣಾಮವಾಗುತ್ತದೆ.

ಧಾನ್ಯಗಳು ಮತ್ತು ನಾರಿನಂಶವಿರುವ ಆಹಾರ ಸೇವಿಸಿ: 
ಕರೋನಾ(Corona) ಲಸಿಕೆ ಪಡೆದ ನಂತರ, ಸಾಧ್ಯವಾದಷ್ಟು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಇದಕ್ಕೆ ಧಾನ್ಯಗಳು ಮತ್ತು ಫೈಬರ್ ಭರಿತ ಆಹಾರ ಸವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಮೆರಿಕದ ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಪ್ರಕಾರ, ಲಸಿಕೆ ತೆಗೆದುಕೊಂಡ ನಂತರ ಕೆಲವರಲ್ಲಿ ಸುಂದಾಗುವ ಲಕ್ಷಣಗಳು ಕಂಡು ಬರುತ್ತವೆ. ಇಂತಹ ಸಂಧರ್ಭದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಗಳನ್ನು ತಡೆಯಬಹುದು.

Wednesday 28 April 2021

ಸೋಂಕಿನಿಂದ ರಕ್ಷಣೆ ಪಡೆಯುವ ಸರಳೋಪಾಯಗಳು"

ಅಮೃತಾತ್ಮರೇ ನಮಸ್ಕಾರ 🙏
28.04.2021, 

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ  ಸಂಚಿಕೆ: 58
••••••••••

"ಸೋಂಕಿನಿಂದ ರಕ್ಷಣೆ ಪಡೆಯುವ ಸರಳೋಪಾಯಗಳು"
•••••••••••••••••••••••••••

• ಎರಡನೇ ಅಲೆ ಬಂದಿಲ್ಲ ಅಪ್ಪಳಿಸಿದೆ...
ಇದು ಮೊಟ್ಟಮೊದಲು ಸದಾ ನೆನಪಿಟ್ಟುಕೊಳ್ಳಬೇಕಾದ ಸಂಗತಿ.

• ಯಾರೊಂದಿಗೂ ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಮುಖಾಮುಖಿ ಸಂಭಾಷಣೆ(ಮಾಸ್ಕ ಧರಿಸಿದ್ದರೂ ಸಹ) ಬೇಡವೇ ಬೇಡ, ಇದೇ ಸೋಂಕಿಗೆ ಹೆದ್ದಾರಿ.

• ಹೆಚ್ಚಿನ ಸಮಯದ ಮಾತುಕತೆ ಅನಿವಾರ್ಯತೆ ಇದ್ದಲ್ಲಿ ದೂರವಾಣಿ ಅಥವಾ ಹತ್ತು ಅಡಿ ದೂರದಲ್ಲಿ ಇದ್ದು ಸಂವಹನ‌ ನಡೆಸಿ. 

• ನಮಗೆ ಸೋಂಕು ಬರುವುದಿಲ್ಲ ಎಂಬ ಭ್ರಮೆ ಈ ಅಲೆಯಲ್ಲಿ ಬೇಡವೇ ಬೇಡ. ಯಾರಿಗೂ ಸಹ ಬರಬಹುದು, ಯಾವಾಗ ಬೇಕಾದರೂ ಬರಬಹುದು.

• ವ್ಯಾಕ್ಸೀನ್ ಅಗತ್ಯ ಎನ್ನಿಸಿದರೆ ಮನೆ ಮಂದಿಯಲ್ಲಾ ಒಮ್ಮೆಗೇ, ಒಂದೇ‌ ದಿನ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಿ. 

• ಒಬ್ಬೊಬ್ಬರಾಗಿ ವ್ಯಾಕ್ಸಿನೇಷನ್‌ ಮಾಡಿಸಿದರೆ, ಅವರೊಂದಿಗೆ  ಜೀವಿಸುವ ವ್ಯಾಕ್ಸಿನ್ ಮಾಡಿಸಿಕೊಳ್ಳದಿರುವವರಿಗೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. 

• ಇದುವರೆಗೆ ಅತ್ಯಂತ ಯಶಸ್ಸನ್ನು ಕಂಡಿರುವ ಆಯುರ್ವೇದದ Viropyrine & Ayurlung ಕಷಾಯಗಳನ್ನು ಬಳಸಿ, ಸೋಂಕಿನಿಂದ ದೂರ ಇರಿ. ಇದು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬಳಸುವವರೇ ತಿಳಿಸಿದ್ದಾರೆ.

• ಸೋಂಕು ಹರಡಿದ ಮೇಲೆ Viropyrine & Ayurlung ಬಳಕೆ ಆರಂಭಿಸಿದರೂ ಸಹ ತೀವ್ರ ಬಾಧೆ ಅಥವಾ ಆಸ್ಪತ್ರೆಗೆ ಸೇರುವ ಅಗತ್ಯ ಬಾರದು.

• ಲಕ್ಷಣ ಯಾರಿಗಾದರೂ ಬಂದರೆ, ತಕ್ಷಣ ಆ್ಯಂಟಿಬಯೋಟಿಕ್ ಗೆ ಮೊರೆಹೋಗದಿರಿ. ಅದರಿಂದ ನಮ್ಮ ರೋಗನಿರೋಧಕ ಶಕ್ತಿ ಕುಗ್ಗುವುದು ಗ್ಯಾರಂಟಿ. 

• ಸೋಂಕು ಲಕ್ಷಣಗಳು ಬಂದರೆ ಆ್ಯಂಟಿಬಯೋಟಿಕ್ ಬದಲು ಆಯುರ್ವೇದ ಔಷಧಿಗಳನ್ನು ಪ್ರತಿ 90 ನಿಮಿಷಗಳಿಗೊಮ್ಮೆ ಸೇವಿಸಿ, 12ಗಂಟೆಗಳಲ್ಲಿ ಶೇ 90% ಲಕ್ಷಣಮುಕ್ತರಾಗುತ್ತೀರಿ.

• ನಂತರ ತಪ್ಪದೇ ಆಹಾರ ನಿಯಮ‌ಗಳನ್ನು ಕನಿಷ್ಠ ಎರಡು ವಾರಗಳ ಕಾಲ ಪಾಲಿಸಿ.

• ಅತ್ಯಂತ ದೀರ್ಘವಾಗಿ ಮತ್ತು ಆಳವಾಗಿ ನಿದ್ರಿಸಿದರೆ, ಶರೀರ ಶಕ್ತಿಗಳಿಸುವುದು, ಸೋಂಕಿನಿಂದ ಮತ್ತು ಲಕ್ಷಣಗಳಿಂದ  ದೂರ ಉಳಿಯುತ್ತೀರಿ ಅಥವಾ ಚಿಕಿತ್ಸೆಯ ಅಗತ್ಯ ಬೀಳದು. 

• ಅತ್ಯಂತ ಶಕ್ತಿಯುತ ಆಹಾರ ಸೇವನೆಯಿಂದ ವೈರಾಣು ಪೊರೆ ದೊಡ್ಡದಾಗಿ ಬೆಳೆಯುತ್ತದೆ.

• ಈ ಹಿಂದೆ ನಾವು ಜ್ವರ ಅಥವಾ ಯಾವುದೇ ರೋಗ ಬಂದಾಗ ಶಕ್ತಿಯುತ ಆಹಾರ ಸೇವನೆ ಎಂದಾದರೂ ಮಾಡಿದ್ದೇವೆಯೇ? ಇಂದೇಕೆ ಹೀಗೆ ಮಾಡುತ್ತಿದ್ದೇವೆ!!? ಸಲಹೆ ಕೊಡುವ ವೈದ್ಯರಾದರೂ ಈ ಬಗ್ಗೆ ಯೋಚಿಸಬೇಕಿದೆ.

• ಅತ್ಯಗತ್ಯ ವಿಷಯಗಳಿಗಲ್ಲದೇ, ಮನೆಯಿಂದ ಹೊರ ಬರುವ ಯೋಚನೆ ಬೇಡ.

• ಸೋಂಕಿತರು, ಲಕ್ಷಣ ಉಳ್ಳವರು ಸಮುದಾಯದ ಆರೋಗ್ಯಕ್ಕಾಗಿ ಸ್ವಯಂ ಬಂಧನದೊಳಗೆ ಇರೋಣ.
.............

ಸಂಗೀತ ಶಿಕ್ಷಣ

ಸಂಗೀತ ಶಿಕ್ಷಣ

ಉಸಿರಾಟದ ಸಮಸ್ಯೆಯೇ ? ಶ್ವಾಸಕೋಶವನ್ನು ಬಲಪಡಿಸಲು ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿ

ಉಸಿರಾಟದ ಸಮಸ್ಯೆಯೇ ? ಶ್ವಾಸಕೋಶವನ್ನು ಬಲಪಡಿಸಲು ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿ

28 Apr 2021

ಉಸಿರಾಟದ ಸಮಸ್ಯೆಯೇ ? ಶ್ವಾಸಕೋಶವನ್ನು ಬಲಪಡಿಸಲು ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿ

ದೇಹವು ಯಾವಾಗಲೂ ಆರೋಗ್ಯವಾಗಿರಲು, ಶ್ವಾಸಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದು ಅವಶ್ಯಕ. ಶ್ವಾಸಕೋಶದಿಂದ ಫಿಲ್ಟರ್ ಮಾಡಿದ ನಂತರ ಮಾತ್ರ, ಆಮ್ಲಜನಕವು ದೇಹದ ಪ್ರತಿಯೊಂದು ಭಾಗವನ್ನು ತಲುಪುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಶ್ವಾಸಕೋಶದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಶ್ವಾಸಕೋಶವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾ, ಕ್ಷಯ, ಕ್ಯಾನ್ಸರ್ ಮುಂತಾದ ಮಾರಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗವನ್ನು ತಪ್ಪಿಸಲು, ಶ್ವಾಸಕೋಶವನ್ನು ಬಲಪಡಿಸುವುದು ಬಹಳ ಮುಖ್ಯ.

ಆರೋಗ್ಯ ತಜ್ಞರು ಕೊರೋನವೈರಸ್ ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

ಇದರಿಂದಾಗಿ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದು ಹೇಳುತ್ತಾರೆ.

ಕೊರೋನವೈರಸ್ ನ ಎರಡನೇ ತರಂಗದೊಂದಿಗೆ, 60 ರಿಂದ 65 ಪ್ರತಿಶತದಷ್ಟು ರೋಗಿಗಳು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಆಮ್ಲಜನಕದ ಮಟ್ಟವು ವೇಗವಾಗಿ ಕಡಿಮೆಯಾಗುತ್ತಿದೆ. 2 ರಿಂದ 3 ದಿನಗಳಲ್ಲಿ, ಆಮ್ಲಜನಕ ಮಟ್ಟವು 80 ಕ್ಕಿಂತ ಕಡಿಮೆ ತಲುಪುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಆಮ್ಲಜನಕದ ಅಗತ್ಯವಿದೆ. ಈ ಅವಧಿಯಲ್ಲಿ ಆಮ್ಲಜನಕ ಲಭ್ಯವಿಲ್ಲದಿದ್ದರೆ, ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶ್ವಾಸಕೋಶವನ್ನು ಬಲಪಡಿಸುವುದು ಬಹಳ ಮುಖ್ಯ. ನಿಮ್ಮ ಶ್ವಾಸಕೋಶವನ್ನು ಬಲಪಡಿಸುವ ಕೆಲವು ಆಹಾರಗಳು ಇಲ್ಲಿವೆ.

ಅರಿಶಿನ

ಅರಿಶಿನವು ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಗಳಿಂದ ಕೂಡಿದ್ದು ಅದು ನಿಮ್ಮನ್ನು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಪ್ರತಿದಿನ ಮಲಗುವ ಮುನ್ನ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಇದರೊಂದಿಗೆ ನೀವು ಅರಿಶಿನ, ಅಮೃತ ಬಳ್ಳಿ, ದಾಲ್ಚಿನ್ನಿ, ಲವಂಗ, ಶುಂಠಿ ಮತ್ತು ತುಳಸಿ ಕಷಾಯ ತಯಾರಿಸಬಹುದು. ಇದು ಶ್ವಾಸಕೋಶವನ್ನು ಬಲವಾಗಿರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಜೇನುತುಪ್ಪ

ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ, ಶ್ವಾಸಕೋಶವು ಬಲಗೊಳ್ಳುತ್ತದೆ. ಇದಲ್ಲದೆ, ದೇಹದಿಂದ ವಿಷವನ್ನು ತೆಗೆದುಹಾಕಲು ಬೆಳಿಗ್ಗೆ ಬೆಚ್ಚಗಿನ ನಿಂಬೆ ನೀರಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಇದಲ್ಲದೆ, ಕಷಾಯಕ್ಕೆ ಕೂಡ ಜೇನುತುಪ್ಪವನ್ನು ಸೇರಿಸಬಹುದು.

ತುಳಸಿ

ತುಳಸಿ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಕ್ಲೋರೊಫಿಲ್ ಮೆಗ್ನೀಸಿಯಮ್, ಕ್ಯಾರೋಟಿನ್ ಮತ್ತು ವಿಟಮಿನ್-ಸಿ ಇರುತ್ತವೆ. ಇದು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ 4-5 ತುಳಸಿ ಎಲೆಗಳನ್ನು ಅಗಿಯಬೇಕು. ಇದಲ್ಲದೆ, ನೀವು ಅಮೃತ ಬಳ್ಳಿ ಮತ್ತು ತುಳಸಿಯ ಆಯುರ್ವೇದ ಕಷಾಯವನ್ನು ತಯಾರಿಸಿ ಕುಡಿಯಬಹುದು.

ಅಂಜೂರ

ಅಂಜೂರದಲ್ಲಿ ಬಹಳಷ್ಟು ಉತ್ತಮ ಅಂಶಗಳು ಕಂಡುಬರುತ್ತವೆ. ಇದರಲ್ಲಿ ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಎ, ವಿಟಮಿನ್-ಸಿ, ವಿಟಮಿನ್-ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ ಮತ್ತು ಕಬ್ಬಿಣವಿದೆ. ಇದನ್ನು ಸೇವಿಸುವುದರಿಂದ ಶ್ವಾಸಕೋಶವು ಬಲಗೊಳ್ಳುತ್ತದೆ. ಇದರೊಂದಿಗೆ ಹೃದಯವು ಆರೋಗ್ಯವಾಗಿ ಉಳಿಯುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಪ್ರತಿಜೀವಕ, ಆಂಟಿಫಂಗಲ್, ಆಂಟಿವೈರಲ್ ಗುಣಲಕ್ಷಣಗಳಿವೆ. ಇದರಲ್ಲಿರುವ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಜೀವಸತ್ವಗಳಂತಹ ಅಂಶಗಳು ಶ್ವಾಸಕೋಶವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ಬೆಳ್ಳುಳ್ಳಿ ಎಸಳುಗಳನ್ನು ಸೇವಿಸಬಹುದು. ಇದಲ್ಲದೆ, ಬೆಳ್ಳುಳ್ಳಿಯ ಎಸಳುಗಳನ್ನು ರಾತ್ರಿಯಲ್ಲಿ ನೆನೆಸಿ, ಬೆಳಿಗ್ಗೆ ಅವುಗಳನ್ನು ಸೇವಿಸಿ

Sunday 25 April 2021

ಕೊರೋನಾ ಸೋಂಕಿನ ಅವಸ್ಥೆಯಲ್ಲಿ "ವಿಶ್ರಾಂತಿಯೇ ಜೀವನ-ಅವಿಶ್ರಾಂತಿಯೇ ಅಪಾಯ"

ಅಮೃತಾತ್ಮರೇ ನಮಸ್ಕಾರ
     ✨✨✨✨✨✨✨✨
 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
         ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
26.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-58
••••••••••••••••
✍️: ಇಂದಿನ ವಿಷಯ:

ಕೊರೋನಾ ಸೋಂಕಿನ ಅವಸ್ಥೆಯಲ್ಲಿ 
"ವಿಶ್ರಾಂತಿಯೇ ಜೀವನ-ಅವಿಶ್ರಾಂತಿಯೇ ಅಪಾಯ" ••••••••••••••••••••••••••••••••••••••••••
 
ಎಲ್ಲರಿಗೂ ಗೊತ್ತಿರುವಂತೆ ಆಮ್ಲಜನಕದ ಕೊರತೆಯಿಂದಲೇ ಮನುಷ್ಯನ ಜೀವ ಅಪಾಯಕ್ಕೆ ತಲುಪುತ್ತಿರುವುದು. ಇಲ್ಲಿ ನಾವು ಗಮನಿಸಲೇಬೇಕಾದ ಮತ್ತು ಅನುಸರಿಸಲೇಬೇಕಾದ  ಕಡ್ಡಾಯ ವಿಷಯವೆಂದರೆ ರಕ್ತದಲ್ಲಿನ ಆಮ್ಲಜನಕದ ಸಾಂದ್ರತೆ. ಇದು ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿ ವಿಶ್ರಾಂತಿಯು ಬಹುಪಾಲು ದೊಡ್ಡದು. 

ಏಕೆಂದರೆ, 
🔷ಮನುಷ್ಯ ಕುಳಿತ ಸ್ಥಾನದಿಂದ ಎದ್ದು ಹತ್ತಿಪ್ಪತ್ತು ಹೆಜ್ಜೆ ಹಾಕಿದರೂ ಶರೀರದ ಮಾಂಸಖಂಡಗಳಿಗೆ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ, ಅದರ ಪೂರೈಕೆಯು ಪುಪ್ಪುಸಗಳನ್ನಲ್ಲದೇ ಬೇರೆ ಅವಯವಗಳಿಂದ ಸಿಗದು. ಹಾಗಾಗಿ, ಸಣ್ಣ ಕೆಲಸವೆಂದು ನಾಲ್ಕು ಹೆಜ್ಜೆ ಹಾಕಿದರೂ ಸಹ ಉಸಿರಾಟದ ಕ್ರಿಯೆ ಹೆಚ್ಚಿ ಹೃದಯದ ಬಡಿತ ಹೆಚ್ಚಿ ಆಮ್ಲಜನಕ ಪೂರೈಕೆಯಾಗಬೇಕಾಗುತ್ತದೆ .

🔷ಜೀರ್ಣಕ್ರಿಯೆಗೆ ಆಮ್ಲಜನಕವು ಹೆಚ್ಚಾಗಿ ಬೇಕಾಗುವುದರಿಂದ ಉದರ ಕರುಳುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತವು ಸಂಚರಿಸಬೇಕಾಗುತ್ತದೆ. ನಾವು ಹೆಚ್ಚು ಅತಿಹೆಚ್ಚು ಶಕ್ತಿಯುತ ಆಹಾರಗಳೆಂದು ಜೀರ್ಣಕ್ರಿಯೆಗೆ ಕಷ್ಟವಾಗುವ ಮಾಂಸಾಹಾರ, ಗೋಧಿ, ಮೈದಾ, ಉದ್ದು, ಎಣ್ಣೆ , ಸಿಹಿಗಳನ್ನು ಸೇವಿಸಿದಲ್ಲಿ ಅತಿ ಹೆಚ್ಚು ಆಮ್ಲಜನಕವನ್ನು ಬಳಸಿ ಪಚನಕ್ರಿಯೆ ನಡೆಯುವುದರಿಂದ ಪುಪ್ಪುಸಕ್ಕೆ ದೊಡ್ಡ ಹೊರೆ ಬೀಳುತ್ತದೆ.

🔷ಶಾರೀರಿಕ ಶ್ರಮ ಅಲ್ಲದಿದ್ದರೂ ಬಹು ಸಮಯ ಮಾತನಾಡುವುದು ಅಂದರೆ, ಸ್ನೇಹಿತರೋ, ಸಂಬಂಧಿಗಳೋ, ಮೊಬೈಲ್ ನಲ್ಲಿಯೂ.... ಹೆಚ್ಚು ಸಮಯ ಮಾತನಾಡುತ್ತಿದ್ದರೆ, ಪ್ರತಿ ಅಕ್ಷರಕ್ಕೂ ಪುಪ್ಪುಸಗಳಿಂದಲೇ ಗಾಳಿಯನ್ನು ಹೊರಹಾಕಬೇಕಾಗುವುದರಿಂದ ಅದಕ್ಕೆ ಒತ್ತಡ ಹೇರುತ್ತೇವೆ ಮತ್ತು ಮಾತನಾಡುವ ಕೆಲಸಕ್ಕೆ ಧ್ವನಿಪೆಟ್ಟಿಗೆಗೆ ಅತೀ ಹೆಚ್ಚು ಆಮ್ಲಜನಕ ಖರ್ಚಾಗುವುದರಿಂದ ಅದನ್ನು ಪೂರೈಸಲು ಪುಪ್ಪುಸಗಳು ಪ್ರಯತ್ನಿಸಬೇಕಾಗುತ್ತದೆ. 

🔷ಶಾರೀರಿಕ ಕೆಲಸಕ್ಕೆ ಆಮ್ಲಜನಕದ ಅವಶ್ಯಕತೆ ಎಷ್ಟಿದೆಯೋ ಅದರ ನಾಲ್ಕುಪಟ್ಟು ಅವಶ್ಯಕತೆ ಮನಸ್ಸಿನ/ಮೆದುಳಿನ ಕೆಲಸಕ್ಕೆ ಬೇಕಾಗುತ್ತದೆ. ಹೀಗೆ ಚಿಂತನೆ, ಓದು, ಚಿಂತೆ, ಭಯ, ಆತಂಕ, ಇವುಗಳೂ ಸಹ ಆಮ್ಲಜನಕದ ಬೇಡಿಕೆಯನ್ನು ಪುಪ್ಪುಸಗಳ ಮೇಲೆ ಇಡುತ್ತವೆ. 

🔷ಧನಾತ್ಮಕವೋ , ಋಣಾತ್ಮಕವೋ ಒಟ್ಟಾರೆ ಉದ್ವೇಗ ಎಂಬುದು ಹೃದಯಬಡಿತವನ್ನು, ಆವೇಗವನ್ನು ಹೆಚ್ಚಿಸುತ್ತದೆ. ಆಗಲೂ ಪುಪ್ಪುಸಗಳ ಮೇಲೆ ಒತ್ತಡ ಬೀಳುವುದು ಅನಿವಾರ್ಯ. 


♦️♦️♦️♦️♦️
ವಿಶೇಷವಾಗಿ ಗಮನಿಸಿ..
ಕೊರೋನಾ ಸೊಂಕಿನಲ್ಲಿ ಹಾನಿಗೊಳಗಾಗುತ್ತಿರುವ ಅಂಗವೇ ಪುಪ್ಪುಸ. ಅದಕ್ಕೆ ಮತ್ತಷ್ಟು ಒತ್ತಡ ಹೇರದಿರಲು, ಪುಪ್ಪುಸಗಳ ವಿಶ್ರಾಂತಿಗೆಂದು ಉಸಿರಾಡದೇ ಇರಲು ಅಸಾಧ್ಯ. ಹಾಗಾಗಿ, ಪುಪ್ಪುಸಗಳಿಂದ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮತ್ತು ಅತ್ಯಗತ್ಯ ಕ್ರಿಯೆಗೆ ಬೇಕಾದಷ್ಟು ಕೆಲಸವನ್ನು ಮಾತ್ರ ಮಾಡಿಸಿಕೊಳ್ಳಿ. 
ಅದಕ್ಕಾಗಿ ಹೀಗೆ ಮಾಡಬಹುದು👇

ಸೋಂಕಿತ ಅವಸ್ಥೆಯಲ್ಲಿ-
◆ಶಾರೀರಿಕ ಶ್ರಮ ಬೇಡ.
◆ಅತಿಯಾದ ಅಥವಾ ಪಚನಕ್ಕೆ ಕಷ್ಟವಾಗುವ ಆಹಾರ ಬೇಡ.
◆ಅತಿಯಾದ ಮಾತುಗಳು ಬೇಡ.
◆ಅತಿಯಾದ ಚಿಂತನೆಗಳು, ಓದು ಮುಂತಾದವುಗಳು ಬೇಡ.
◆ಆತಂಕ ಅಥವಾ ಉದ್ವೇಗಕ್ಕೆ ಒಳಗಾಗುವುದು ಬೇಡ.

⚛️ಆತ್ಮೀಯರೇ,
ದಯಮಾಡಿ ಈ ಮೇಲಿನ ಅಂಶಗಳನ್ನು ಉಪೇಕ್ಷಿಸದೇ ಅನುಸರಿಸಿ, 
ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಿ.
••••••••••••••••••••••••••••••••••••••
      🙏ಧನ್ಯವಾದಗಳು 🙏
••••••••••••••••••••••••••••••••••••••••••

ಶ್ವಾಸಕೋಶಗಳಿಗೆ ಶಕ್ತಿತುಂಬಲು ಹೀಗೆ ಮಾಡಿ

   🙏ಆತ್ಮೀಯರೇ ನಮಸ್ಕಾರ 🙏
🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿
    🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
25.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-57
••••••••••••••••
✍️: ಇಂದಿನ ವಿಷಯ:
ಶ್ವಾಸಕೋಶಗಳಿಗೆ ಶಕ್ತಿತುಂಬಲು ಹೀಗೆ ಮಾಡಿ
••••••••••••••••••••••••••••••••••••••• 
ಇಂದೇಕೋ ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಅತ್ಯಂತ ಬೇಸರ ಮೂಡುತ್ತಿದೆ. ಜೀರ್ಣಕ್ರಿಯೆಯಲ್ಲಿ ಆಮ್ಲಜನಕದ ಪಾತ್ರ ಅತ್ಯಂತ ಅನಿವಾರ್ಯ ಎಂದು ಗೊತ್ತಿದ್ದೂ ಸುಲಭವಾಗಿ ಜೀರ್ಣವಾಗದ ಶಕ್ತಿಯುತ ಆಹಾರಗಳನ್ನು ಸೋಂಕಿತರಿಗೆ ಸೇವಿಸಲು ಸಲಹೆ ನೀಡುತ್ತಾ ಮತ್ತು ಅದರಿಂದ ಶಕ್ತಿ ಬರುತ್ತದೆಂಬ ಅವೈಜ್ಞಾನಿಕ ಕಾರಣಗಳನ್ನು ಹೇಳುತ್ತಿರುವುದು ಅತ್ಯಂತ ಬಾಲಿಶವಾಗಿ ಕಾಣುತ್ತಿದೆ. ಇದೊಂದು ಆಧುನಿಕ ಮೂಢನಂಬಿಕೆಯೇ ಸರಿ. 

🚫 ಸೋಂಕಿತನ ಜೀವಉಳಿಸಲು ಕೊಡಬೇಕಾದುದು ಮಾಂಸಾಹಾರ,  ಉದ್ದಿನಬೇಳೆ (ಇಡ್ಲಿ, ದೋಸೆ....), ಮೈದಾ(ಬ್ರೆಡ್, ಬಿಸ್ಕೆಟ್....), ಗೋಧಿ, ಆಲೂಗಡ್ಡೆ , ಎಣ್ಣೆ , ಸಿಹಿ ಮುಂತಾದ ಆಹಾರಗಳು ಅಲ್ಲವೇ ಅಲ್ಲ. ಇವುಗಳಿಂದ ಅಪಾಯವೇ ಹೆಚ್ಚು. 

ಏಕೆಂದರೆ, 
ಯಾವುದೇ ಆಹಾರ ಉದರದಲ್ಲಿ, ಕರುಳಿನಲ್ಲಿ, ಜೀವಕೋಶಗಳ ಹಂತದಲ್ಲಿಯೂ ಸಹ ಪಚನವಾಗಿ ಶರೀರಗತವಾಗಿ ಶಕ್ತಿ ಕೊಡಲು,ಪೋಷಣೆ ಮಾಡಲು ಪ್ರತೀ ಹಂತದಲ್ಲೂ ಆಮ್ಲಜನಕದ ಉಪಸ್ಥಿತಿ  ಅತ್ಯಂತ ಅನಿವಾರ್ಯ. 
【ಉದಾ: ಬೆಂಕಿ ಉರಿಯಲು ಗಾಳಿ, ಅಂದರೆ ಆಮ್ಲಜನಕದ ಉಪಸ್ಥಿತಿ ಅನಿವಾರ್ಯ】
ಜೀರ್ಣಕ್ರಿಯೆಯಲ್ಲಿ ಅರೆಕ್ಷಣ ಆಮ್ಲಜನಕದ ಕೊರತೆ ಉಂಟಾದರೂ ತಿಂದ ಆಹಾರ ಅಜೀರ್ಣವಾಗುತ್ತದೆ. ಅದರಿಂದ, ಯಾವ ಜೀವಕೋಶವೂ ಶಕ್ತಿಯನ್ನು ಗಳಿಸಲಾರದು. ಇನ್ನೂ ಕೆಲ ಕಾಲ ಆಮ್ಲಜನಕ ಸಿಗದೇ ಹೋದರೆ ಅದೇ ಆಹಾರ ವಿಷವಾಗಿ ಪರಿಣಮಿಸುತ್ತದೆ!! 

ನಮ್ಮ ಶರೀರದಲ್ಲಿ ಬೇಕಾಗುವ ಆಮ್ಲಜನಕದ ಎಲ್ಲಾ ಪ್ರಮಾಣವನ್ನು ಪೂರೈಕೆ ಮಾಡುವುದು ನಮ್ಮ ಪುಪ್ಪುಸಗಳು ಮಾತ್ರ.  
ಜೀರ್ಣಕ್ರಿಯೆಯಲ್ಲಿ ಪುಪ್ಪುಸಗಳ ಸಹಾಯವಿಲ್ಲದಿದ್ದರೆ- "ಬೆಂಕಿಯಿಲ್ಲದೇ ಅಡುಗೆ ಮಾಡಲು ಹೊರಟವನಂತೆ ಅರ್ಥಹೀನ".
ಅಂದರೆ, ನಾವು ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಿದರೂ, ಶಕ್ತಿ ಬರಲೆಂಬ ಭ್ರಮೆಯಿಂದ ಮೇಲೆ ತಿಳಿಸಿರುವ ಮಾಂಸಾದಿ..... ಬಲವಾನ್ ಆಹಾರಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಸಹ ನಮ್ಮ ಪುಪ್ಪುಸಗಳಿಗೆ ಒತ್ತಡವನ್ನು ಹೇರುತ್ತಿದ್ದೇವೆ ಎಂದೇ ಅರ್ಥ. 

ಸೋಂಕಿತ ಅವಸ್ಥೆಯಲ್ಲಂತೂ ಈ ವಿಷಯದಲ್ಲಿ ಪುಪ್ಪುಸಗಳಿಗೆ ವಿಶ್ರಾಂತಿ ಕೊಡುವ ಬದಲು ಇನ್ನಷ್ಟು, ಮತ್ತಷ್ಟು ಒತ್ತಡವನ್ನು ಹೇರಿದರೆ ಸೋಂಕು ಬೆಳೆಯಬಲ್ಲದೇ ಹೊರತು ಕಡಿಮೆ ಹೇಗಾದೀತು?? 

ಇಲ್ಲಿ, ಮೂರು ರೀತಿಯಿಂದ ಅಪಾಯವನ್ನು ತಂದುಕೊಳ್ಳುತ್ತಿದ್ದೇವೆ. 
◆ಮೊದಲನೆಯದಾಗಿ, ಈಗಾಗಲೇ ರೋಗ ಹರಡಿದ ಭಾಗವಾದ ಪುಪ್ಪುಸಗಳನ್ನು ಬಲವಂತದಿಂದ ಕೆಲಸ ಮಾಡಿಸಿಕೊಂಡು ಅವುಗಳನ್ನು ಮತ್ತಷ್ಟು ದುರ್ಬಲಗೊಳಿಸುವುದು.! 

◆ಎರಡನೆಯದಾಗಿ:
ಆಮ್ಲಜನಕದ ಕೊರತೆಯಿಂದ ಜೀರ್ಣವಾಗದೇ, ವಿಷರೂಪಕ್ಕೆ ಪರಿವರ್ತನೆಯಾದ ಆಹಾರದಿಂದ ಪುಪ್ಪುಸಗಳು ಪೋಷಣೆಯಾಗುವ ಬದಲು ಇನ್ನಷ್ಟು ದುರ್ಬಲವಾಗುವವು.!! 

ಮತ್ತು 

◆ಮೂರನೆಯದಾಗಿ:
ಈ "ಆಹಾರ ವಿಷ"ದಿಂದ ವೈರಾಣುಗಳನ್ನು ಚನ್ನಾಗಿ ಪೋಷಣೆ ಮಾಡಿ ಬೆಳೆಸುವುದು.!!! 

•••••••••• 

ಪ್ರಾಥಮಿಕ ಶಾಲೆಯ ಪಠ್ಯದಲ್ಲಿಯೇ ನಾವು ಓದಿದ್ದೇವೆ, ಪ್ರಯೋಗಮಾಡಿ ನೋಡಿದ್ದೇವೆ- 
"ಬೆಂಕಿ ಉರಿಯಲು ಆಮ್ಲಜನಕದ ಉಪಸ್ಥಿತಿ ಅನಿವಾರ್ಯ" ಎಂದು. 
ಹಾಗೆಯೇ,
"ಜೀರ್ಣಕ್ರಿಯೆಗೆ ಆಮ್ಲಜನಕವನ್ನು ಪೂರೈಕೆ ಮಾಡಲು ಪುಪ್ಪುಸಗಳು ಅನಿವಾರ್ಯ" ಎಂಬ ಸಣ್ಣ ಮಕ್ಕಳಿಗೂ ಅರ್ಥವಾಗುವ ಈ ಅತ್ಯಂತ ಸರಳ  ಸಿದ್ಧಾಂತವನ್ನು ನಾವುಗಳು ಇಂದು ನಿರ್ಲಕ್ಷಿಸುತ್ತಿರುವುದು ಸರಿಯೇ? 

• ಈ ಸಿದ್ಧಾಂತವನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳವಲ್ಲಿ ನಾವು ಗಮನಹರಿಸದಿರುವುದು ಎಷ್ಟು ಬಾಲಿಶವಾಗಿದೆ ಅಲ್ಲವೇ‼️❓❓

• ಇದರಿಂದ ಆಗುವ ಅಪಾಯದ ಊಹೆಯಾದರೂ ಬೇಡವೇ ‼️❓❓ 

• ಆಗುವ ನಷ್ಟವನ್ನು ಮರಳಿ ತುಂಬಲು ಸಾಧ್ಯವೇ ‼️??

Friday 16 April 2021

ಕೊರೋನಾ ಭಾಗ-3ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ

ಆತ್ಮೀಯರೇ ನಮಸ್ಕಾರ, 🙏.
***********************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
17.04.2021.                
  ಸಂಚಿಕೆ-52
***********************
✍️: ಇಂದಿನ ವಿಷಯ:- 
ಕೊರೋನಾ ಭಾಗ-3

ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.
***********************
ಮತ್ತೆ ಕರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಲವು ಕಡೆ ಸೀಮಿತವಾಗಿರುವ ನಿರ್ದಾಕ್ಷಿಣ್ಯ ಲಾಕ್ ಡೌನ್ ಎಲ್ಲಕಡೆ ಲಾಕ್ ಡೌನ್ ಮಾಡುವ ಆತಂಕವೂ ಇದೆ.

ಹಾಗಾದರೆ ಪರಿಹಾರವೇನು? ಎಂದರೆ, ನಾವು ಅತ್ಯಗತ್ಯ ಕೆಲಸಗಳಿಗಾಗಿ ಹೊರಹೋಗಲೇಬೇಕಾದ ಪರಿಸ್ಥಿತಿಯಲ್ಲಿ ವೈರಾಣು ಗೊತ್ತಲ್ಲದಂತೆ ಸೋಂಕಲು ಬಂದರೆ  ಅದನ್ನು ನಮ್ಮ ಗಂಟಲಿಂದ ಒಳಗಿಳಿಯದಂತೆ ತಡಡದುಬಿಡೋಣ.


ಆತ್ಮೀಯರೇ,
ಪ್ರಕೃತಿ ನಮ್ಮ ಆಸೆಗಳನ್ನು ಸಂಪೂರ್ಣವಾಗಿ ಪೂರೈಸಲು ಸಮರ್ಥವಾಗಿದೆ ಆದರೆ ದುರಾಸೆಯನ್ನಲ್ಲ.

ಮೊದಲು ಅತ್ಯಾವಶ್ಯಕವಾಗಿ ಬೇಕಾದ ಕೆಲಸಗಳನ್ನು ಮಾತ್ರ ಮಾಡುವ ಸಂಕಲ್ಪ ಮಾಡೋಣ.

ನಮ್ಮದು ಶೇ 75 ಕ್ಕಿಂತ ಹೆಚ್ಚು 
• ಅನಗತ್ಯ ಮಾತು
• ಅನಗತ್ಯ ಓಡಾಟ
• ಅನಗತ್ಯ ದುಡಿಮೆ ಹಿಂದಿನ ಓಟ

ಹೌದೋ ಅಲ್ಲವೋ ಒಮ್ಮೆ ಪರಿಶೀಲಿಸಿ ನೋಡಿಕೊಳ್ಳೋಣ.

*

ಅದೇನೇ ಇರಲಿ,
ಮನುಷ್ಯ ತನ್ನ ಅಗತ್ಯಕ್ಕಾದರೂ ಹೊರ ಬರಲೇ ಬೇಕಲ್ಲ ಆಗ ಈ ಕೆಳಗಿನ ಒಂದಂಶ ಪಾಲಿಸಿದರೆ ವೈರಾಣು ಸೋಂಕನ್ನು ಎಷ್ಟೋ ಪಾಲು ತಡೆದಂತೆಯೇ ಸರಿ.

ಈ ಸಂಧರ್ಭದಲ್ಲಿ-
ಅಮೃತಸಮಾನವಾಗಿ ನಮ್ಮನ್ನು ರಕ್ಷಿಸುವ 2 ದ್ರವ್ಯಗಳೆಂದರೆ:
ತುಳಸಿ ಮತ್ತು ಜೇಷ್ಠ ಮಧು......

ಈ ಎರೆಡೂ ಯಾವುದೇ ತೆರನಾದ ವೈರಾಣುಗಳನ್ನು ತಡೆಯಲು ಅತ್ಯಂತ ಶ್ರೇಷ್ಠ ಎಂದು ಸಂಶೋಧನೆಗಳಿಂದ ದೃಢವಾಗಿದೆ.

ಇವುಗಳನ್ನು ಹೇಗೆ ಬಳಸಬೇಕೆಂದು ನೋಡೋಣ-

ಜೇಷ್ಠಮಧು ಫಾಂಟಾ ತಯಾರಿಕಾ ವಿಧಾನ:
(ನಾಲ್ಕು ಜನರಿಗೆ)

ರಾತ್ರಿ ಮಲಗುವ ಮೊದಲು 150 ಮಿ.ಲೀ ನೀರನ್ನು ಒಲೆಯಮೇಲೆ ಇಟ್ಟು ಅದು ಕುದಿಯಲು ಆರಂಭಿಸಿದೊಡನೆ 25ಗ್ರಾಂ ಜೇಷ್ಠಮಧು ಪುಡಿಯನ್ನು ಹಾಕಿ ಒಲೆಯನ್ನು ಆರಿಸಿ, ಸ್ವಲ್ಪ ಕದಡಿ ಮುಚ್ಚಿಟ್ಟು ಬಿಡಿ.

ಮರುದಿನ ಬೆಳಿಗ್ಗೆ ಅದನ್ನು ಮತ್ತೊಮ್ಮೆ ಕದಡಿ,‌ ಸೋಸಿ ತೆಗೆಯಿರಿ, ಬಂದ ದ್ರವವೇ "ಜೇಷ್ಠಮಧು ಫಾಂಟಾ" ಇದಕ್ಕೆ 10 ತುಳಸಿ ಎಲೆಗಳನ್ನು ಹಾಕಿ ಅದನ್ನುನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಬಳಸಬೇಕು.

ಬಳಸುವ ವಿಧಾನ:

"ಸುಮಾರು 10ಮಿ.ಲೀ. ಬೆಚ್ಚಗಿನ ಫಾಂಟಾವನ್ನು ಬಾಯಿಯಲ್ಲಿ ಹಾಕಿಕೊಂಡು ಗಂಟಲನ್ನು 60-120 ಸೆಕೆಂಡುಗಳ ಕಾಲ ತೊಳೆದುಕೊಳ್ಳಬೇಕು."

ಈ ವಿಧಾನವನ್ನು ಮನೆಯಿಂದ ಹೊರಗೆ ಹೋಗುವಾಗ, ಹೊರಗಿನಿಂದ ಬಂದ ತಕ್ಷಣ ಸಂಜೆ ಮತ್ತು ರಾತ್ರಿ ಮಲಗುವಾಗ ಅನುಸರಿಸಿದರೆ ಯಾವುದೇ ತೆರನಾದ ವೈರಾಣು ಗಂಟಲಿನಿಂದ ಪುಪ್ಪುಸಕ್ಕೆ ಇಳಿಯುವುದೇ ಇಲ್ಲ. ಏಕೆಂದರೆ ಎರೆಡೂ ದ್ರವ್ಯಗಳು ಶ್ರೇಷ್ಠ ವೈರಾಣುನಾಶಕಗಳಾಗಿವೆ ಮತ್ತು ಗಂಟಲಿನ ಕಫವನ್ನು ಛೇದಿಸಿ ಸೋಂಕಿಗೆ ಬೇಕಾದ ಮೂಲ ವಾತಾವರಣವನ್ನೇ ಇಲ್ಲವಾಗಿಸುತ್ತವೆ.

ವಿಶೇಷ ಎಂದರೆ, ಒಂದೊಮ್ಮೆ ಈ ವೈರಾಣುಗಳು ಹೊಟ್ಟೆಯೊಳಕ್ಕೆ ಹೋದರೆ ಅಲ್ಲಿನ ಆಮ್ಲೀಯತೆಗೆ ಸತ್ತುಹೋಗುತ್ತವೆ. 

ವಿಶೇಷ ಸೂಚನೆ:
ಬೆಳಿಗ್ಗೆ ಎದ್ದನಂತರ ಹಲ್ಲುಜ್ಜಲು ಯಾವ ಕಾರಣಕ್ಕೂ ಟೂತ್‌ಪೇಸ್ಟ್ ಬಳಸಬೇಡಿ. ಇದೊಂದು ಅನೇಕ ರೋಗಗಳ ಮೂಲ. ಅದರ ಬದಲು ಬೇವಿನ‌ಕಡ್ಡಿ, ಉಪ್ಪುನೀರಿನಿಂದ ಹಲ್ಲುಜ್ಜಿದರೆ ನೂರು ಪಾಲು ಉತ್ತಮ ದಂತಾರೋಗ್ಯ, ಜೀರ್ಣಶಕ್ತಿಯನ್ನು ಪಡೆಯಬಹುದು. 

*************************

Thursday 15 April 2021

SIDDAPUR TALLUK BLOG

siddapur taluk blog

ಕೊರೋನಾ ಭಾಗ-2ಇದರಲ್ಲಿ,ಅಪಾಯದ ಮುನ್ಸೂಚನೆ ಇದೆ ; ಕರೋನಾವನ್ನು ಹೇಗಾದರೂ ತಡೆಯಿರಿ

ಆತ್ಮೀಯರೇ ನಮಸ್ಕಾರ, 🙏.
***************************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
16.04.2021                
   ಸಂಚಿಕೆ-50
***************************
✍️: ಇಂದಿನ ವಿಷಯ:- 
ಕೊರೋನಾ ಭಾಗ-2
ಇದರಲ್ಲಿ,
ಅಪಾಯದ ಮುನ್ಸೂಚನೆ ಇದೆ ; ಕರೋನಾವನ್ನು ಹೇಗಾದರೂ ತಡೆಯಿರಿ
***************************
ಯಾವುದೇ ಒಂದು ಪದ್ಧತಿಯನ್ನು ನಂಬಿ ಕೂಡುವ ಕಾಲ ಇದಲ್ಲ. ಹೇಗಾದರೂ ವೈರಸ್ ಹರಡುವುದನ್ನು ತಡೆಯೋಣ, ಇಲ್ಲದಿದ್ದಲ್ಲಿ ಅಪಾಯ ಜೋರಾಗಿ ಬರುತ್ತದೆ.

ಭಾರತದಲ್ಲಿ ಸಾವಿನ ಸಧ್ಯಕ್ಕೆ ಪ್ರಮಾಣ ಕಡಿಮೆ ಇರಬಹುದು ಆದರೆ ಒಂದೊಮ್ಮೆ ನಮಗೇ ಕೊರೋನಾ ಬಂದಿದೆ ಎಂದಾದರೆ ನಮ್ಮ ಮನದಲ್ಲಿ, ನಮ್ಮ ಕುಟುಂಬದಲ್ಲಿ ಎಷ್ಟು ಆತಂಕ ಮನೆಮಾಡುತ್ತದೆ!!! ಗುಣಮುಖರಾದರೂ ಮತ್ತೆ ಬರಲಾರದೆಂದೂ ಇಲ್ಲ. 

ಈ ಯೋಚನೆಗಳ ನಡುವೆ ನಿತ್ಯವೂ ಭಯರಹಿತವಾಗಿ ಬದುಕಲು ಏನು ಮಾಡಬಹುದೆಂದು ಆಯುರ್ವೇದ ಆಚಾರ್ಯರು ಏನು ಹೇಳಿದ್ದಾರೆ ನೋಡೋಣ.

ಈ ರೀತಿಯ ರೋಗಗಳು ಬರುವ ಕಾರಣಗಳನ್ನು ಬಹು ಸೂಕ್ಷ್ಮವಾಗಿ ಹೇಳಿದ್ದಾರೆ.

ಸಧ್ಯಕ್ಕೆ ಹರಡುವ ವಿಧಾನಗಳನ್ನು ತಡೆಯಲು ಆಯುರ್ವೇದ ಏನು ಹೇಳುತ್ತದೆ ನೋಡೋಣ.

A) ಸೋಂಕು ಹರಡುವಿಕೆಯನ್ನು ತಡೆಯುವ ವಿಧಾನ:

• ಗಾತ್ರ ಸಂಸ್ಪರ್ಶಾತ್- ನೇರವಾಗಿ ಮುಟ್ಟುವುದನ್ನು, ಯಾವುದೇ ರೀತಿಯ ಶಾರೀರಿಕ ಸಂಬಂಧ ಇಟ್ಟುಕೊಳ್ಳುವುದು ಬೇಡ.

• ಸಹಾಸನ- ಅಂದರೆ ಸಂಬಂಧಿಗಳೂ, ಪರಿಚಯದವರೆಂದರೂ ಅತಿ ಹತ್ತಿರದಿಂದ ಒಂದೇ ಆಸನದಲ್ಲಿ ಕುಳಿತುಕೊಳ್ಳುವುದು ಬೇಡ.

• ಸಹಶಯ್ಯಾ- ಅಂದರೆ ಒಂದು ಹಾಸಿಗೆಯಲ್ಲೇ ಇಬ್ಬರು ಮಲಗುವುದು 

• ಸಹಭೋಜನ- ಒಂದೇ ತಟ್ಟೆಯಲ್ಲಿ ಊಟ ಮಾಡುವುದು/ಮಾಡಿಸುವುದು ಬೇಡ

• ಸಹಪಾನ- ಒಂದೇ ಕಪ್ ನಲ್ಲಿ ಇಬ್ಬರು ಪಾನೀಯ ಸೇವಿಸುವುದು ನಿಶಿದ್ಧ

• ಉಡುಪುಗಳನ್ನು ಆಭರಣಗಳನ್ನು ಹಂಚಿಕೊಳ್ಳುವುದು ಸಲ್ಲದು.
ಇವುಗಳಿಂದ ಜನಸಮೂಹವನ್ನು ಧ್ವಂಸಮಾಡುವ ಸೋಂಕು ಹರಡುತ್ತವೆ, ಇಂತಹ ರೋಗಗಳನ್ನು ಜನಪದೋಧ್ವಂಸ ವ್ಯಾಧಿಗಳೆಂದು ಕರೆಯುತ್ತಾರೆ.



B) ವೈರಾಣು ಶರೀರದೊಳಗೆ ಬೆಳೆಯುವಿಕೆಯನ್ನುಬತಡೆಯಿರಿ:

ಸೋಂಕು ತಗುಲಿದರೂ ಸಹ ಎಲ್ಲರೂ ಧ್ವಂಸಗೊಳ್ಳುತ್ತಾರೆ ಅಥವಾ ಮರಣಿಸುತ್ತಾರೆ ಎಂದೇನೂ ಇಲ್ಲ.‌ ಏಕೆಂದರೆ ಆ ವೈರಾಣು ಮಾನವನ ಶರೀರದಲ್ಲಿ ತನ್ನ ಸಂತತಿಯನ್ನು ಬೆಳೆಸಿ, ಆ ಶರೀರವನ್ನು ನಾಶ ಮಾಡಲು ಸೂಕ್ತ ಆಂತರಿಕ ವಾತಾವರಣ ಬೇಕೇಬೇಕು.  ಅದಕ್ಕೆ ಪೂರಕ ಅಂಶಗಳೆಂದರೆ-

1) ಕಾರ್ಬನ್ ಡೈಆಕ್ಸೈಡ್
2) ಜೀರ್ಣವಾಗದೇ ಉಳಿದ ಪ್ರೋಟೀನ್ & ಕೊಬ್ಬು 
ಮತ್ತು 
3) ಸರ್ವಧಾತುಗತ ಶುಕ್ತಪಾಕ (ವ್ಯತ್ಯಾಸವಾದ ಪಿ.ಹೆಚ್ ಎನ್ನಬಹುದು) 

ಈ ಮೂರೂ ಉತ್ಪತ್ತಿಯಾಗಲು ನಮ್ಮ ಕಲವು ತಪ್ಪುಗಳೇ ನೇರ ಕಾರಣ, ಅವುಗಳನ್ನು ಇಂದೇ ನಿಲ್ಲಿಸೋಣ-

• ಅಜೀರ್ಣಾಶನ- ಆಹಾರ ಜೀರ್ಣವಾಗದೇ ಇದ್ದರೂ ಸಮಯವಾಯ್ತೆಂದು ತಿನ್ನುವುದು

• ವಿಶಮಾಶನ- ಹಸಿವಾಗದೇ ತಿನ್ನುವುದು
 
• ಅದ್ಯಶನ- ಅಗತ್ಯವಿಲ್ಲದೇ ಮೇಲಿಂದ ಮೇಲೆ ತಿನ್ನುವುದು

• ರಾತ್ರಿ ಹೊಟ್ಟೆ ಬಿರಿಯುವಂತೆ ತಿಂದು ತಡವಾಗಿ ಮಲಗುವುದು.

• ವರ್ಷಕ್ಕೊಮ್ಮೆ ಪಂಚಕರ್ಮದಿಂದ ಶರೀರ ಶೋಧನ ಮಾಡಿಕೊಳ್ಳದೇ, ವ್ಯಾಧಿಗೆ ಪೂರಕ‌ಅಂಶಗಳನ್ನು ಶರೀರದಲ್ಲಿ ಇಟ್ಟುಕೊಂಡಿರುವುದು.

*

ವೈರಾಣು ಹರಡುವಿಕೆ ಮತ್ತು ಬೆಳೆಯುವಿಕೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಡೆಯುವ ವಿಧಾನಗಳನ್ನು ಪಾಲಿಸಿದಲ್ಲಿ ಕೊರೋನಾ ಒಂದೇ ಏಕೆ, ಮುಂದೆ ಬರಬಹುದಾದ ಸೋಂಕುಗಳನ್ನು ಅಲ್ಲೇ ತಡೆಯಬಹುದು.

ವಂದನೆಗಳು 
🙏🙏🙏🙏🙏
*********************

Sunday 11 April 2021

ಕೊರೋನಾ ಭಾಗ-1 ಕೊರೋನಾ ವ್ಯಾಪಿಸವುದನ್ನು ಸುಲಭವಾಗಿ ತಡೆಯೋಣ

ಆತ್ಮೀಯರೇ ನಮಸ್ಕಾರ ******************************* ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ ಸಂಚಿಕೆ-1 ******************************* ✍️: ಇಂದಿನ ವಿಷಯ:- ಕೊರೋನಾ ಭಾಗ-1 ಕೊರೋನಾ ವ್ಯಾಪಿಸವುದನ್ನು ಸುಲಭವಾಗಿ ತಡೆಯೋಣ ******************************* ಮತ್ತೆ ಕರೋನಾ ಮುಂಚೂಣಿಗೆ ಬರತೊಡಗಿದೆ, ವಿಶ್ವದ ಪಟ್ಟಿಯಲ್ಲಿ ಭಾರತ ಮೇಲಕ್ಕೇರುತ್ತಿದೆ. ವ್ಯಾಪಕವಾಗಿ ಹರಡುತ್ತಿರುವುದು ಜನರಲ್ಲಿ ಆತಂಕ ತರುತ್ತಿದೆ. ಬನ್ನಿ ನಮ್ಮ ಮನೆಗೆ ಬಾರದಂತೆ ತಡೆಯೋಣ. ಪ್ರೋಟೀನ್ ಮತ್ತು ಕೊಬ್ಬಿನ ಮಾಲಿಕ್ಯೂಲ್ ಗಳಿಂದಾದ ದೊಡ್ಡ ಪೊರೆಯೊಳಗೆ ಸುರಕ್ಷಿತವಾಗಿದ್ದು ಆತಂಕ ತರುತ್ತಿರುವ ಈ ವೈರಸ್ ನೇರ ತೀಕ್ಷ್ಣ ಸಿಂಗಲ್ ಕೆಮಿಕಲ್ ಮಾಲಿಕ್ಯೂಲ್ ಔಷಧಿಗಳಿಗಿಂತ ಮಲ್ಟಿಪಲ್ ಮತ್ತು ಕಾಂಪ್ಲೆಕ್ಸ್ ಮಾಲಿಕ್ಯೂಲ್ ಗಳು ಉತ್ತಮ ಎಂಬುದು ಸಿದ್ಧಾಂತ. ಈ ಸಿದ್ಧಾಂತದ ಅಡಿಯಲ್ಲಿ ವೈರಾಣುವಿನಿಂದ ನಮ್ಮನ್ನು ಸುರಕ್ಷಿತವಾಗಿಡಲು ನಮ್ಮ ನಮ್ಮ ಅಡುಗೆ ಮನೆಯಲ್ಲಿರುವ ತೀಕ್ಷ್ಣ ಮಸಾಲೆಗಳೇ ಸಾಕು ಎಂದಾಯಿತು!!! *** ಈ ಮಸಾಲೆಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ: ಮೂಗು, ಬಾಯಿ ಮೂಲಕ ದೇಹ ಸೇರುವ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಾಣುಗಳು ನಮ್ಮ ಶರೀರದ ಸೈನಿಕರೊಂದಿಗೆ ಮೊದಲು ಹೋರಾಡಬೇಕಾಗಿರುವುದು ಗಂಟಲೆಂಬ ಮಹಾದ್ವಾರದಲ್ಲಿ. ನಮ್ಮ ಗಂಟಲಿನ ಸೈನ್ಯವನ್ನು ಬಲಪಡಿಸುವುದು ಮತ್ತು ವೈರಾಣುಗಳಿಗೆ ಅಲ್ಲಿ ಉಳಿಯಲು ಆಹಾರ, ಸ್ಥಳ ಕೊಡದಂತೆ ನೋಡಿಕೊಂಡರೆ ಯುದ್ಧದ ಮೊದಲೇ ಗೆದ್ದಂತೆ. ಭಾರತದ ಎಲ್ಲರ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಅರಿಶಿಣ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಇವುಗಳಿಂದ ಗಂಟಲಿನಲ್ಲಿ ಅಭೇದ್ಯ ಕೋಟೆಯನ್ನೇ ಕಟ್ಟಿ ವೈರಾಣುಗಳನ್ನು ತಡೆದುಬಿಡಬಹುದು. ಅದರಲ್ಲೂ ಕಾಳು ಮೆಣಸು ವೈರಾಣುವಿನ ಪ್ರೋಟೀನ್ & ಲಿಪಿಡ್ ಪೊರೆಯನ್ನು ಹರಿದು ಹಾಕುತ್ತದೆ‌, ಅಲ್ಲಿಗೆ ವೈರಸ್ ನ ಅವನತಿ ಆರಂಭವಾಗುತ್ತದೆ. ನಮ್ಮ ಒಳಗಿನ ಸ್ವಲ್ಪವೇ ಇಮ್ಯೂನಿಟಿ ವೈರಾಣುವನ್ನು ಕೊಂದುಹಾಕುತ್ತದೆ. ಅಥವಾ ಅದಕ್ಕೂ ಸಹಕಾರ ಬೇಕಾದಲ್ಲಿ ಸರಕಾರ ನಿರ್ಧರಿಸಿದ ಇಮ್ಯೂನಿಟಿ ವರ್ಧಿಸುವ ಚವನಪ್ರಾಶವನ್ನು(ಉತ್ತಮ ಕಂಪನೆಯ ಉತ್ಪಾದನೆ ಬಳಸಿ) ಸೇವಿಸಿ ಗೆಲ್ಲಬಹುದು. ಪೇಯ ತಯಾರಿಸುವ ವಿಧಾನ: ಶುದ್ಧ ಅರಿಶಿಣ- ಒಂದು ಚಿಟಿಗೆ ಶುಂಠಿ- ಸಣ್ಣ ಚೂರು ಬೆಳ್ಳುಳ್ಳಿ- 2 ಬೇಳೆ ಕಾಳುಮೆಣಸು- 4 ನೀರು- ½ ಟೀ ಕಪ್ ಕೆಲ ಕಾಲ ಕುದಿಸಿ ¼ ಕಪ್ ಗೆ ಇಳಿಸಿ ಸೋಸಿ ನಂತರ ಸ್ವಲ್ಪವೇ ಬೆಲ್ಲ ಬೆರೆಸಿ ಕುಡಿಯಿರಿ. ಇದನ್ನು ಪ್ರತಿ 2-3 ತಾಸುಗಳಿಗೊಮ್ಮೆ ಸೇವಿಸಿ. * ಕಾಳು ಮೆಣಸು ಸೇವಿಸಿ ವೈರಾಣು ಪೊರೆ ಹರಿದುಹಾಕಿ: ಮರೀಚಂ......ಜಂತು ಸಂತಾನ ನಾಶನಂ.....ಭೂತನಾಶನಂ.......|| -ಭಾವಪ್ರಕಾಶ ನಿಘಂಟು ವಿಧಾನ 1 ಅಥವಾ 2 ಕಾಳು ಮೆಣಸುಗಳನ್ನು ಹಿಂದಿನ‌ ದವಡೆಹಲ್ಲಿನಿಂದ ಕಚ್ಚಿ ನಿಧಾನವಾಗಿ ಗಂಟಲಿಗೆ ಇಳಿಸಿ, ಇದರಿಂದ ಗಂಟಲಿನಲ್ಲೇನಾದರೂ ವೈರಾಣುಗಳಿದ್ದರೆ ಅವುಗಳ ಪೊರೆ ಹರಿದು ಹೋಗುತ್ತದೆ. ಎಲ್ಲವೂ ಪ್ರಾಕೃತಿಕ ದ್ರವ್ಯಗಳು ಮತ್ತು ನಿತ್ಯಸೇವನೆಯ ಅಡುಗೆ ಮಸಾಲೆಗಳಾದ್ದರಿಂದ ಯಾವುದೇ ಅಪಾಯ ಇಲ್ಲ. * ಇದರಿಂದ ಹೀಟ್ ಆಗಿ ಬಿಕ್ಕಳಿಕೆ ಬಂದರೆ "ಆ" ಎಂಬ ಅಕ್ಷರವನ್ನು ಆಳವಾಗಿ ಉಸಿರು ಮುಗಿವವರೆಗೆ ಹೇಳಬಹುದು. ಉರಿ ಮೂತ್ರ ಬಂದರೆ ಪೇಯವನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು 4-5 ತಾಸಿಗೊಮ್ಮೆ ಸೇವಿಸಬಹುದು. ಪಥ್ಯ ಪಾಲನೆ ನೋಡೋಣ: ಪ್ರೋಟೀನ್ ಮತ್ತು ಕೊಬ್ಬಿನ ಅಂಶವನ್ನು ಬಳಸಬೇಡಿ. ಅಂದರೆ, ಹಾಲು ಮೊಳಕೆ ಕಾಳು ತುಪ್ಪ ಮಾಂಸಾಹಾರ ಕೊಬ್ಬರಿ‌ ಶೇಂಗಾ ಕರಿದ ಮತ್ತು ವಗ್ಗರಣೆ ಕಲಸಿದ ಅನ್ನಗಳು.

ಧನ್ಯವಾದಗಳು

MATHS WITH FUN

MATHS WITH FUN

ನಮ್ಮ ಶಾಲೆ ಬ್ಲಾಗ್

ನಮ್ಮ ಶಾಲೆ

ಮೂಳೆಯ ಸಾಮರ್ಥ್ಯ ವೃದ್ಧಿಸುವುದು ಹೇಗೆ? ಭಾಗ -2

🙏ಅಮೃತಾತ್ಮರೇ ನಮಸ್ಕಾರ 🙏
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
         ಸ್ವಾಸ್ಥ್ಯ ಸರ್ವರದ್ದೂ ಆಗಲಿ
   🔆🔆🔆🔆🌷🔆🔆🔆🔆
••••••••••••••••••••••••••••••••••••••••••
11.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-48
••••••••••••••
✍️: ಇಂದಿನ ವಿಷಯ:
ಮೂಳೆಯ ಸಾಮರ್ಥ್ಯ ವೃದ್ಧಿಸುವುದು ಹೇಗೆ?  ಭಾಗ -2
•••••••••••••••••••••••••••••••••••••••••
ಮೂಳೆ ಬೆಳವಣಿಗೆಗೆ ತುಪ್ಪ ಸೇವನೆಗೆ ತಿಳಿಸಿದ್ದೆವು, ಆದರೆ ತುಪ್ಪ ಸೇವನೆ ಅಭ್ಯಾಸ ಇಲ್ಲದವರು ತುಪ್ಪಕ್ಕೆ ಪರ್ಯಾಯವನ್ನು ಕೇಳಿದ್ದಾರೆ.

ತುಪ್ಪವು ಅತ್ಯಂತ ಶ್ರೇಷ್ಠ, ಅದಕ್ಕೆ ಅನಿವಾರ್ಯ ಪರ್ಯಾಯ ಎಂದರೆ- ಪ್ರಾಣಿಗಳ(ಆಡು,ಕೋಳಿ) ಮೂಳೆಯೊಳಗಿನ ಮಜ್ಜೆ ಅಥವಾ ಯಕೃತ್ (ಲಿವರ್) ಸೇವಿಸಬಹುದು, ಆದರೆ ಅತಿಯಾದ ಮಸಾಲೆ ಬೆರೆಸಿ ಮತ್ತು ಅತಿ ಪ್ರಮಾಣದಲ್ಲಿ ಸೇವಿಸಬಾರದು. ಶುದ್ಧ ಸಸ್ಯಹಾರಿಗಳಿಗೆ ಕೊಬ್ಬರಿಎಣ್ಣೆ ಶ್ರೇಷ್ಠ, ಅದರ ನಂತರ  ಕುಸುಬೆ, ಶೇಂಗಾ, ಸಾಸುವೆ ಎಣ್ಣೆಗಳು ಸೇರುತ್ತವೆ. ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಪರ್ಯಾಯ ಸ್ನೇಹಗಳನ್ನು ಬಳಸಬಹುದು. ಆಲಿವ್ ಎಣ್ಣೆ ಪ್ರಚಲಿತದಲ್ಲಿ ಇದೆಯಾದರೂ ಕೊಬ್ಬರಿಎಣ್ಣೆ ಅದಕ್ಕಿಂತಲೂ ಶ್ರೇಷ್ಠ.

🍃 ಶಾರೀರಿಕ ಶ್ರಮ (ಖರತ್ವಂ ಮತ್ತು ಶೋಷಣತ್ವಂ):

◆ ವ್ಯಾನೇನ ರಸಧಾತುಃ ಹಿ ವಿಕ್ಷೇಪೋ...............ಭಾಷಿತಮ್||
-ಚರಕ‌ಸಂಹಿತಾ.‌ ಚಿಕಿತ್ಸಾ ಸ್ಥಾನ-15, (ಗ್ರಹಣೀ(ಅಗ್ನಿ) ಚಿಕಿತ್ಸಾ ಅಧ್ಯಾಯ)

ವ್ಯಾಯಾಮದಿಂದ ಶರೀರದಲ್ಲಿ ಉಷ್ಣತೆ ಉತ್ಪತ್ತಿಯಾಗುತ್ತದೆ, ಅದರಿಂದಲೇ ಉದರದೊಳಗೆ ಹೋದ ಆಹಾರವು ಧಾತುಗಳ ಕಡೆಗೆ ಹರಿಯುತ್ತದೆ (ಬೆವರು ಖರ್ಚಾದಂತೆ ಕರುಳಿನಲ್ಲಿರುವ ಆಹಾರ ಧಾತುಗಳ ಕಡೆಗೆ ಹರಿಯುತ್ತದೆ) ಇದು ಶ್ರೇಷ್ಠ ಉಪಾಯ. 
ಸಸ್ಯಗಳಲ್ಲಿ ascent of sap ಪ್ರಕ್ರಿಯೆಯಿಂದ ಬೇರು ನೀರನ್ನು ಹೀರುವಂತೆ. 
ಆದರೆ Guttation ಎಂಬ ವಿಧಾನದಿಂದ ತಾನಾಗಿ ಬೇರುಗಳನ್ನು ಅತಿಕ್ರಮಿಸಿ ತುಂಬಿದ ಹೆಚ್ಚಿನ ನಿರು ಉಕ್ಕಿ ಹೊರ ಹರಿಯುವಂತೆ. 
ಅಂದರೆ, ಹೆಚ್ಚಾಗಿ ತಿಂದ ಅಥವಾ ಶಾರೀರಿಕ ಶ್ರಮವಿಲ್ಲದೇ ತಿಂದ ಆಹಾರವು ಕರುಳಿನಿಂದ ಕೊಬ್ಬಿನ ಅಂಶದವರೆಗೆ ಬಂದು ನಿಂತುಬಿಡುತ್ತದೆ ಅದು ಮೂಳೆಯಾಗಿ ಬದಲಾಗುವುದು ಅತ್ಯಲ್ಪ ಪ್ರಮಾಣ ಅಷ್ಟೇ.

• ವ್ಯಾಯಾಮ (ಶಾರೀರಿಕ ಶ್ರಮ)ದಿಂದ ಖರ್ಚಾದ ಶಕ್ತಿಯು ಉಷ್ಣತೆಯನ್ನು ಬಿಡುಗಡೆಗೊಳಿಸಿ ರಕ್ತವನ್ನು ಖಾಲಿಮಾಡುತ್ತದೆ. ಯಾವುದೇ ಅಂಶ ರಕ್ತದಲ್ಲಿ ಕಡಿಮೆ ಆದರೆ ಮಾತ್ರ ಉದರದಲ್ಲಿನ ಆಹಾರ ರಕ್ತಕ್ಕೆ ಬರುತ್ತದೆ.  ಇಲ್ಲದಿದ್ದರೆ ಅಲ್ಲಿಯೇ ಶೇಖರಣೆಗೊಂಡು ಕಾಲಾಂತರದಲ್ಲಿ ಅನಗತ್ಯ ಕೊಬ್ಬಿನ ಅಂಶವಾಗಿ ಬೆಳೆಯುತ್ತದೆ.

• ಆಹಾರ ಸೇವನೆಯ ಕನಿಷ್ಠ 45 ನಿಮಿಷ, ಗರಿಷ್ಟ 90 ನಿಮಿಷಗಳವರೆಗೆ ಬೆವರು ಬರುವಂತೆ ವ್ಯಾಯಾಮ ಮಾಡುವುದು, ಲೈಂಗಿಕಕ್ರಿಯೆ ನಡೆಸುವುದು, ದೂರದ ಪ್ರಯಾಣ ಮಾಡುವುದು, ಓಡುವುದು ಸರ್ವಥಾ  ಅನರ್ಥಕಾರಿ. ಊಟ ಮಾಡಿ ಓಡುವವನನ್ನು ಮರಣವೇ ಹಿಂಬಾಲಿಸುತ್ತದೆ ಎಂದಿದ್ದಾರೆ ಆಚಾರ್ಯರು. ಏಕೆಂದರೆ ನಾವು ಸೇವಿಸುವ ಆಹಾರ ಕರುಳಿನಲ್ಲಿ, ಯಕೃತ್ತಿನಲ್ಲಿ ಸರಿಯಾಗಿ ಸಂಸ್ಕಾರವಾಗದೇ ರಕ್ತಕ್ಕೆ ಸೇರಿದರೆ ದೀರ್ಘಕಾಲೀನ ಮತ್ತು ಅಪಾಯಕಾರಿ ರೋಗಗಳಿಗೆ ಎಡೆಮಾಡುತ್ತದೆ.

• ಬೆವರು ಬರುವಂತೆ ಕೆಲಸ ಮಾಡುವುದರಿಂದ ಆ ಬೆವರಿನ ಮೂಲಕ ತ್ಯಾಜ್ಯ ಕೊಬ್ಬು(ಕ್ಲೇದ) ಹೊರ ಹೋಗಿ ಬಿಡುತ್ತದೆ. ಉಳಿದ ಸಾರ ಮೇದಸ್ಸು ಗಟ್ಟಿಗೊಳ್ಳುತ್ತಾ ಸದೃಢ ಮೂಳೆ ಮತ್ತು ಮಜ್ಜಾ ಉತ್ಪತ್ತಿಯಾಗುತ್ತದೆ.

• ಅತೀ ಸಾಹಸ ಮಾಡುವವರಿಗೆ, ಹಸಿದ ಮೇಲೂ ಊಟಮಾಡದೆ ಕೆಲಸ ಮಾಡುವವರಿಗೆ ಸಾರ ಮೇದಸ್ಸು ಕರಗಿ ಶಕ್ತಿ ಕೊಡುತ್ತಿರುತ್ತದೆ. ಅದು ಇಲ್ಲಿಯೇ ಕರಗಿದರೆ ಮೂಳೆ ತುಂಬುವುದು ಸಾಧ್ಯವಾಗದೇ ಸವಕಳಿ ಹೆಚ್ಚುತ್ತದೆ.

• ನಾವು ನಿತ್ಯವೂ 10-20 ಬಾರಿ ಮನೆಯ ಮೇಲೆ ಹತ್ತಿ ಇಳಿಯುವುದೇ ಸಾಕಷ್ಟು ವ್ಯಾಯಾಮವಾಗುತ್ತದೆ ಎನ್ನುವರಿದ್ದಾರೆ. ಅದರಿಂದ ಮೊಣಕಾಲಿನ ಕೀಲುಗಳಿಗೆ ( knee joint ) ತುಂಬಾ ತೊಂದರೆಯಾಗುತ್ತದೆ. ಶರೀರದ ಇತರೆ ಮೂಳೆಗಳು ಚನ್ನಾಗಿದ್ದರೂ  ಮೊಣಕಾಲು ಸವೆದು ಹೋಗುತ್ತದೆ. ಮಹಡಿ ಮನೆ ವಾಸ ಲಿಫ್ಟ್ ಇದರಷ್ಟೇ ಯೋಗ್ಯ. ಆಗೊಮ್ಮೆ ಈಗೊಮ್ಮೆ ಹತ್ತಿಳಿಯುವುದು ಆಗಬಹುದು. ಹಾಗೆಯೇ ವ್ಯಾಯಾಮಕ್ಕೆ ಬ್ಯಾಟ್ಮಿಂಟನ್ ಆಯ್ಕೆ ಮಾಡಿಕೊಂಡವರ ಎರಡೂ ಮೊಣಕಾಲು ಮತ್ತು ಭುಜ ಬಹು ಬೇಗ ಹಾಳುಮಾಡಿಕೊಂಡು  ಚಿಕಿತ್ಸೆಗೆ ಬರುವವರನ್ನು ನಮ್ಮಲ್ಲಿ ನಿತ್ಯವೂ ನೋಡುತ್ತೇವೆ.

• ಯೋಗ ಮಾಡುವವರು, ಜಾಗಿಂಗ್, ವಾಕಿಂಗ್ ಮುಂತಾದ ಕಸರತ್ತಿನ ಕೆಲಸದವರು ಬೆಳಿಗ್ಗೆ ಎದ್ದಾಕ್ಷಣ ಭೇದಿ ಸರಿಯಾಗಿ ಆಗಿದ್ದರೆ ಮಾತ್ರ ಇವುಗಳನ್ನು ಮಾಡಿ ಇಲ್ಲದಿದ್ದರೆ ಒಳಗಿರುವ ಕಲ್ಮಶವು ಗ್ಯಾಸ್ ರೂಪದಲ್ಲಿ ಇಡೀ ರಕ್ತನಾಳಗಳ ವ್ಯವಸ್ಥೆಯನ್ನೆ ಹಾಳುಮಾಡಿಬಿಡುತ್ತದೆ. 

• ಕ್ಯಾಲ್ಸಿಯಂ ಮಾತ್ರೆ ನಿತ್ಯ ಸೇವಿಸುವವರು ಅದರ ಅಪಾಯವನ್ನು ಮರೆಯದೆ ತಿಳಿದುಕೊಳ್ಳಿ.

• ಒಟ್ಟಾರೆಯಾಗಿ ಸ್ನಿಗ್ಧ ಆಹಾರ, ತಾಜಾ ಆಹಾರ, ಸೇವಿಸಿದ ನಂತರ 45-90  ನಿಮಿಷ ಹಾಯಾಗಿ ಕುಳಿತಿರಿ ನಂತರ ಶ್ರಮವಹಿಸಿ ಕೆಲಸ ಮಾಡಿರಿ.

• ಕರುಳಿನ ಒಳಗೆ ಆಹಾರವಾಗಲೀ, ನೀರಾಗಲೀ, ಮಲ-ಮೂತ್ರವಾಗಲೀ ಇರದೇ ಸ್ವಚ್ಛವಾಗಿರುವ ಸಮಯದಲ್ಲಿ ಪ್ರತಿದಿನ ಬಿಡುವು ಮಾಡಿಕೊಂಡು ಶಾರೀರಿಕ ಶ್ರಮದ ಕಾರ್ಯಗಳನ್ನು ಮಾಡುವುದು ಸರ್ವಶ್ರೇಷ್ಠ.

          🙏ಧನ್ಯವಾದಗಳು 🙏
•••••••••••••

Wednesday 7 April 2021

ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
08.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-47
••••••••••••••
✍️: ಇಂದಿನ ವಿಷಯ:
ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?
•••••••••••••••••••••••••••••••••••••••••

📖 ಯತ್ ದ್ರವ್ಯಂ *ಸ್ನಿಗ್ಧತ್ವಂ,‌ ಖರತ್ವಂ, ಶೋಷಣತ್ವಂ* ತತ್ ಅಸ್ಥಿನಾಂ ವರ್ಧಯಂತಿ |

🖊 ಮೂಳೆ ವರ್ಧಕ ಅಂಶಗಳು:
 ಮೂಳೆ ಉತ್ಪತ್ತಿಗೆ ಬೇಕಾಗುವ ಅಂಶಗಳು ಎರೆಡು- 
1) ತುಪ್ಪ ಸೇವನೆ(ಸ್ನಿಗ್ಧತ್ವಂ)
ಮತ್ತು 
2) ಶಾರೀರಿಕ ಶ್ರಮ(ಖರತ್ವಂ, ಶೋಷಣತ್ವಂ)
ಈ ಎರಡರಲ್ಲಿ ಕೇವಲ ಒಂದು ಮಾತ್ರ ಪಾಲಿಸಿದರೆ ನಮ್ಮ ತೂಕ ಹೆಚ್ಚುತ್ತದೆ ಅಥವಾ ಮೂಳೆ ಸವೆಯುತ್ತದೆ.
ಆದರೆ,

📍ವಿ.ಸೂಚನೆ: ತುಪ್ಪ (ಅಥವಾ ಯಾವುದೇ ಶಕ್ತಿಯುತ ಆಹಾರ) ಸೇವನೆಯ ತಕ್ಷಣ ಶಾರೀರಿಕ ವ್ಯಾಯಾಮ ಮಾಡುವುದು ಬೇಡ, ಅದರಿಂದ ಮೂಳೆ ಉತ್ಪತಿಗೆ ಮೊದಲೇ ಶರೀರದ ಸಂಧಿ, ಮಾಂಸಗಳಲ್ಲಿ ಗಂಟುಗಳಾಗುತ್ತವೆ, ರುಮ್ಯಾಟಿಸಮ್ ಬರಬಹುದು.

•  ಶಾರೀರಿಕ ಕೆಲಸ ಮಾಡದೇ ಮೂಳೆಯ ಬೆಳವಣಿಗೆ ಮತ್ತು ಮಾಂಸಖಂಡಗಳ ಗಟ್ಟಿತನ ಬರುವುದು ಸಾಧ್ಯವೇ ಇಲ್ಲ, ಆದರೆ ಶಾರೀರಿಕ ಶ್ರಮಕ್ಕೆ ಒಂದು ಸೂಕ್ತ ವಿಧಾನ ಅನುಸರಿಸಬೇಕು.

🍯 ತುಪ್ಪಸೇವನೆ ವಿಧಾನ:

•  ಗಟ್ಟಿತುಪ್ಪ ತಿನ್ನಬಾರದು,  ತುಪ್ಪದ ಪಾತ್ರೆಯನ್ನು ನೇರವಾಗಿ ಬೆಂಕಿಗೆ ಇಟ್ಟು ಕರಗಿಸಬಾರದು, ಅದರ ಬದಲು ಬಿಸಿ ಅಥವಾ ಕುದಿಯುವ ನೀರಿಗೆ ಇಟ್ಟು ಕರಗಿಸಿರಿ. ಏಕೆಂದರೆ, ನೀರು 100°c  ಗಿಂತ ಹೆಚ್ಚು ಬಿಸಿಯಾಗುವುದಿಲ್ಲ. ಆಗ ತುಪ್ಪ ಹೊಗೆಯಾಡುವಷ್ಟು ಅಥವಾ ಆವಿಯಾಗುವಷ್ಟು ಬಿಸಿಯಾಗುವುದಿಲ್ಲ. ಹೊಗೆಯಾಡಿದ ತುಪ್ಪವನ್ನು ಚೆಲ್ಲಿಬಿಡುವುದೇ ಲೇಸು. ಹಣ ದಂಡವಾಗುತ್ತದೆ ಆದರೆ ಆರೋಗ್ಯ ಉಳಿಯುತ್ತದೆ.

•  ನಾನು ತುಪ್ಪವನ್ನೇ ತಿನ್ನುವುದಿಲ್ಲ ಎನ್ನುವವರ ಮೂಳೆ ಬೇಗ ಸವೆಯುತ್ತವೆ ಮತ್ತು ಮಜ್ಜಾ ಧಾತು ಒಣಗುವ ಕಾರಣ, ಅದರಿಂದ ಉತ್ಪತ್ತಿಯಾಗುವ ರಕ್ತ ಮತ್ತು ಅದರ ಉಪಧಾತುಗಳಾದ ರಕ್ತನಾಳಗಳೂ ಒಣಗಿ ಹೃದಯ, ಮೆದುಳಿನ, ಕಿಡ್ನಿಯ ತೊಂದರೆಗಳು ಬರುವ ಸಂಭವ ಹೆಚ್ಚು.

•  ವೈದ್ಯರು ಹೇಳುತ್ತಾರೆ ತುಪ್ಪ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಅಪಾಯ! ಎಂದು, ಅದರ ವಿಚಾರವನ್ನು ಮುಂದೆ ತಿಳಿಸುತ್ತೇವೆ. 
ಯಾವ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಹೇಗಿರುವವೋ ಹಾಗೇ ಶರೀರದಲ್ಲಿ ಹೆಚ್ಚಾಗುವುದಿದ್ದರೆ ಎಲ್ಲಾ ರಾಸಾಯನಿಕಗಳನ್ನು ಬಳಸಿ ಎಲ್ಲಾ ರೋಗಗಳನ್ನು ನಿಯಂತ್ರಿಸಬಹುದಿತ್ತು ಅಲ್ಲವೇ⁉️
ಆರೋಗ್ಯಕ್ಕೆ ನಮ್ಮ ಜೀರ್ಣಕ್ರಿಯೆಯೇ ಪ್ರಧಾನ ಪಾತ್ರದಾರಿ ಹಾಗಾಗಿ ಸೇವಿಸಿದ ಅನ್ನ ಜೀರ್ಣವಾಗಲು ಕೆಲಸಗಳನ್ನು ಯಥೇಚ್ಛ ಮಾಡಿ ಮತ್ತು ನಿಮ್ಮ ಮಕ್ಕಳಿಂದ ಹೆಚ್ಚು ಶಾರೀರಿಕ ಶ್ರಮ ಆಗುವ ಆಟಗಳನ್ನು ಆಡಿಸಿ.

•  ಕೊಲೆಸ್ಟ್ರಾಲ್ ಕೊಂಚ ಹೆಚ್ಚಿರುವುದು ಉತ್ತಮ ಅದಕ್ಕೆ ಕೊಬ್ಬನ್ನು ಒಣಗಿಸುವ ಮಾತ್ರೆ ಸೇವಿಸಿದರೆ ರಕ್ತನಾಳ ಒಣಗುವ ಜೊತೆಗೆ ಮೂಳೆ ಸವೆತವು  ಹೆಚ್ಚುತ್ತದೆ.

•  ಕೊಲೆಸ್ಟ್ರಾಲ್  ಕಡಿಮೆ ಮಾಡಿಕೊಳ್ಳಲು ನಿತ್ಯ statin(atorvastatin, rosuvastatin....) ಮಾತ್ರೆ ಸೇವಿಸುವ ಜನರು ದಯವಿಟ್ಟು ಗಮನಿಸಿ.
 ನಿಮ್ಮ ಸಂದು ಕೀಲುಗಳು ಬೇಗ ನೋವು, ಸವೆತ ಬರುತ್ತವೆ. statin ಮಾತ್ರೆಗಳಿಂದ ಅಲ್ಲಿರುವ ನೈಸರ್ಗಿಕ lubricating liquid ಒಣಗುತ್ತದೆ. 

•  ಕೊಲೆಸ್ಟ್ರಾಲ್  ಭೂತಕ್ಕೆ ಹೆದರಿ ಕೊಬ್ಬನ್ನು ಕರಗಿಸುವ ಮಾತ್ರೆ ಸೇವಿಸುವ ಬದಲು, ಶಾರೀರಿಕ ಶ್ರಮದಿಂದ ಕರಗಿಸಿದರೆ ಅದೇ ಕೊಬ್ಬು ಮೂಳೆಯಾಗಿಬಿಡುತ್ತದೆ. ಮಾತ್ರೆಯಿಂದ ಒಣಗಿಸಿದರೆ ಅದೇ ರೋಗವಾಗುತ್ತದೆ ಎರಡನ್ನು ಬಿಟ್ಟು ತುಪ್ಪ ತಿನ್ನುವುದನ್ನೇ ಬಿಟ್ಟರೆ ಮೂಳೆ ಉತ್ಪತ್ತಿ ಸರಿಯಾಗಿ ಆಗುವುದೇ ಇಲ್ಲ, ಆಗ ಎಷ್ಟೇ calcium ಮಾತ್ರೆ ತಿಂದರೂ ಮೂಳೆ ಬೆಳೆಯದು, ಎಷ್ಟೇ iron ಮಾತ್ರೆ ತಿಂದರೂ ರಕ್ತ ಹೆಚ್ಚಾಗದು, ಏನೇ ನಿಗಾವಹಿಸಿದರೂ hypothyroidism ತಪ್ಪಿಸಲಾಗದು, ಎಷ್ಟು ಉಪವಾಸ ಮಾಡಿದರೂ ತೂಕ ಇಳಿಯದು.

•  ಮಜ್ಜಾದಿಂದಲೇ ರಕ್ತಕಣಗಳು ಉಂಟಾಗುವುದರಿಂದ, ತುಪ್ಪ ತಿನ್ನದೆ ಗಟ್ಟಿ ಮೂಳೆ ಮತ್ತು ಸಾರ ಮಜ್ಜಾ ಉತ್ಪತ್ತಿಯಾಗದು. ರಕ್ತೋತ್ಪತಿ ಕ್ಷೀಣಿಸುತ್ತದೆ. ಎಷ್ಟೇ iron ಮಾತ್ರೆ ತಿಂದರೂ ರಕ್ತ ಕಣಗಳೇ ಇಲ್ಲದೆ iron ಹೊರ ಹೋಗುತ್ತದೆ.

•  ರಕ್ತಕಣಗಳಿಗೆ ಶಕ್ತಿ ಇಲ್ಲದೆ ಹೋಗುವುದರಿಂದ ಚಿಕ್ಕ ಚಿಕ್ಕ ರಕ್ತ ಕಣಗಳು ಬಿಡುಗಡೆಯಾಗುತ್ತವೆ, ಇದು ಹೇಗೆಂದರೆ, ಒಂದಿಬ್ಬರು ದೊಡ್ಡವರು ಸುಲಭದಲ್ಲಿ ಮಾಡಿಮುಗಿಸುವ ಕೆಲಸಕ್ಕೆ, ನೂರಾರು ಅತೀ ಪುಟ್ಟ ಮಕ್ಕಳನ್ನು ಕಳಿಸಿದರೆ ಸಾಧ್ಯವಾದೀತೇ? ಈಗ ಹೆಚ್ಚಿನ ಜನರ ರಕ್ತದಲ್ಲಿ ಕಣಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚು, ಗಾತ್ರ ಅತ್ಯಂತ ಸಣ್ಣ ಮತ್ತು immature cells, ಇದೇ ಕಾಲಾಂತರದಲ್ಲಿ hypothyrodism  ಗೆ ತಿರುಗುತ್ತದೆ. ಇದೇ ರಕ್ತಹೀನತೆಯ ಕಾರಣ.
 ಮೇದಸ್ಸಿನಲ್ಲಿ ಜೀರ್ಣಕ್ರಿಯೆ ಕುಂದುವುದರಿಂದ ಉಪವಾಸ ಮಾಡಿದರೂ ತೂಕ ಇಳಿಯದು.

• ತುಪ್ಪ ಎಂದರೆ ಶುದ್ಧ ಹಸುವಿನ ತುಪ್ಪ ಎಂದು ಗ್ರಹಿಸಿ ಬಳಸುವುದು ಶ್ರೇಷ್ಠ.

•  ಜನರು ಅತ್ಯಂತ ಶ್ರದ್ಧೆ ಇಟ್ಟು ಅವರ ನೂರಾರು ಉತ್ಪನ್ನಗಳನ್ನು ಬಳಸುವ ಹೆಸರಾಂತ ತಯಾರಕರೊಬ್ಬರು ತಮ್ಮ ಕಂಪನಿಯಿಂದ "ಶುದ್ಧ ಹಸುವಿನ ತುಪ್ಪ" ಎಂಬ ಹೆಸರಿನಲ್ಲಿ ಕಳಪೆದರ್ಜೆಯ ತುಪ್ಪವನ್ನು ಭಾರತಾದ್ಯಂತ ಮಾರಾಟ ಮಾಡುತ್ತಿದ್ದಾರೆ!! ಆ ಬಗ್ಗೆ ಗಮನವಿರಲಿ.

•  ಶುದ್ಧ ಹಸುವಿನ ತುಪ್ಪ ಸಿಗದಿದ್ದರೆ, ಯೋಚನೆ ಬೇಡ, ಮನೆಯಲ್ಲೇ ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆದು, ಬೆಣ್ಣೆ ತಗೆದು ಕಾಯಿಸಿ ತುಪ್ಪ ಮಾಡಿ ಬಳಸಿ. ಈ ರೀತಿ ಸಂಸ್ಕರಿಸದೇ, ನೇರ ಹಾಲಿನಿಂದಲೇ ಕೊಬ್ಬನ್ನು ತೆಗೆದು ತಯಾರಿಸಿದ ತುಪ್ಪ ಸೇವನೆಯು ಮೂಳೆ, ಮಜ್ಜೆ, ರಕ್ತ ಆಗುವ ಬದಲು ಕೊಬ್ಬನ್ನು  ಹೆಚ್ಚಿಸುತ್ತದೆ. ವೈದ್ಯರು ಹೇಳುವ ದುರ್ಗುಣದ ತುಪ್ಪ ಇದು. ಇದನ್ನು ತುಪ್ಪ ಎನ್ನುವ ಬದಲು *"ಅಸಂಸ್ಕಾರಿತ ಕೊಬ್ಬು"* ಎಂದು ಕರೆಯಬಹುದು .

ಧನ್ಯವಾದಗಳು

ATAL TINKERING LAB

ATAL TINKERING LAB LINK

ಮೂಳೆ ಸವೆತ

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
08.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-426
••••••••••••••
✍️: ಇಂದಿನ ವಿಷಯ:
  🦴 ಮೂಳೆ ಸವೆತ.
•••••••••••••••••••••••••••••••••••••••••

📜 ತತ್ರ ಅಸ್ಥಿ........ಆಶ್ರಯಿಣಾಂ ಅಥಃ ||
-ವಾಗ್ಭಟ ಸೂತ್ರ ಸ್ಥಾನ

📜 ಯತ್ ದ್ರವ್ಯಂ ಸ್ನಿಗ್ಧಂ ಖರತ್ವ ಶೋಷಣತ್ವಂ ತದ್ ಅಸ್ಥಿನಾಂ ವರ್ಧಯಂತಿ||
_

 🔍 ಮೂಳೆಗಳ ಉತ್ಪತ್ತಿ ತಿಳಿಯುವ ಮಹತ್ವವೇನು?
ಉತ್ಪತ್ತಿ ಬಗ್ಗೆ ತಿಳಿಯುವುದರ ಮಹತ್ವ ಏನೆಂದರೆ ಒಂದು ದ್ರವ್ಯದ, ಜೀವಿಯ, ಉತ್ಪತ್ತಿ,  ಬೆಳವಣಿಗೆಯ ವಿಧಾನ ಗೊತ್ತಾಗದೇ, ಯಾವುದೇ ಸಮಸ್ಯೆ ಅರ್ಥವಾಗುವುದಿಲ್ಲ.

📝 ಮೂಳೆ ಉತ್ಪತ್ತಿ ವಿಧಾನ:
ಮೂಳೆ ಉತ್ಪತ್ತಿಗೆ, ಶುದ್ಧ ಕೊಬ್ಬಿನ ಅಂಶ ಬೇಕು. ಆಶ್ಚರ್ಯ ಎನಿಸುತ್ತದೆಯೇ?! ಎಲ್ಲಾ ವೈದ್ಯರು ಮೂಳೆ ಸವೆತಕ್ಕೆ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಿ ಎನ್ನುತ್ತಾರೆ!! 

ಆಹಾರದಲ್ಲಿನ ಕೊಬ್ಬಿನಅಂಶ ಉದರದಲ್ಲಿ (ಪಾಚಕಾಗ್ನಿ ಭೂತಾಗ್ನಿಗಳಿಂದ) ಸರಿಯಾಗಿ ವಿಭಜನೆಗೊಂಡು, ರಕ್ತವನ್ನು ಸೇರಿ ಎಲ್ಲಾ ಅವಯವಗಳನ್ನು ತಲುಪುತ್ತಿರುವಾಗ, ಅದು ಅಸ್ಥಿ-ಮಜ್ಜಾ ಧಾತ್ವಾಗ್ನಿಯ(The enzymes which helps in production of bone and bonemarrow) ಸಂಪರ್ಕಕ್ಕೆ ಬಂದಾಗ ನಡೆಯುವ ವಿಶೇಷ ಕ್ರಿಯೆಯಿಂದ ಮೂಳೆ ಉತ್ಪತ್ತಿಯಾಗುತ್ತದೆ. 
★ ಉದಾ: ಮಣ್ಣು+ನೀರನ್ನು ಕಲಸಿ, ಒಂದು ಆಕಾರ ಕೊಟ್ಟು ಗಾಳಿಯಿಂದ ಒಣಗಲು ಬಿಟ್ಟಾಗ ಅದು ಗಟ್ಟಿಯಾಗಿ ಕಠಿಣತ್ವ ಪಡೆಯುವಂತೆ, ಶುದ್ಧ ಕೊಬ್ಬಿನಅಂಶವನ್ನು ವಾತವು ಹೀರಿಕೊಂಡು ಒಣಗಿಸಲು ಆರಂಭಿಸುತ್ತದೆ, ಮತ್ತು ಹೀರಿಕೊಂಡ ಸ್ನೇಹಾಂಶವನ್ನು ಮೂಳೆಯ ಮಧ್ಯದಲ್ಲಿರಿಸುತ್ತದೆ.
 ಇದಕ್ಕೆ ಸಾರ ಅಥವಾ ಸರಕ್ತ ಮೇದ ಎಂಬ ಹೆಸರು, ಈ ಅಂಶಕ್ಕೆ ವಿಶೇಷ ಜೀವಾಂಶ ಸೇರಿದೊಡನೆ ಇದನ್ನೇ ಮಜ್ಜಾ ಎಂದು ಕರೆಯುತ್ತೇವೆ. ಇದು ಪರಿಪಕ್ವವಾಗಿ (ಜಲಾಂಶವನ್ನು ಕಳೆದುಕೊಂಡು ಬೆಣ್ಣೆ ತುಪ್ಪವಾದಂತೆ) ಅತ್ಯಂತ ಸಾರಭೂತ ಸ್ನೇಹವಾಗಿ ಸಶಕ್ತವಾಗುತ್ತದೆ. ಆಗ ಸದೃಢ ಮೂಳೆ ಉತ್ಪತ್ತಿಯಾಗುತ್ತದೆ. ಒಳಗೆ ಸ್ನೇಹಾಂಶ ಸರಿಯಾಗಿ ತುಂಬದ ಮೂಳೆಯನ್ನು "ಆಷ್ಟಿಯೋ ಪೊರೋಸಿಸ್" ಎನ್ನಬಹುದು.
 ಇರಲಿ ಮೂಳೆಯ ಹೊರಭಾಗ ಒಣಗಿದ ಗಡುಸಾದ ಸ್ನೇಹದಿಂದಲೂ, ಒಳಭಾಗ ಸಶಕ್ತ ಸಾರಭೂತ ಸ್ನೇಹದಿಂದಲೂ ನಿರಂತರ ಜೊತೆಯಾಗಿರುತ್ತವೆ.

ಮೂಳೆ ಕೆವಲ ಗಟ್ಟಿ ವಸ್ತುವಲ್ಲ, ಹೊರಗೆ ಕಠಿಣ ಒಳಗೆ ಅತ್ಯಂತ ಆರ್ದ್ರ ಸಂಯೋಗ ಉಳ್ಳ ಮತ್ತು ದೇಹದ ಯಾವುದೇ ಭಾಗವನ್ನು ಪರ್ಯಾಯವಾಗಿ ಉತ್ಪತ್ತಿ ಮಾಡಬಲ್ಲ ಮೂಲವಸ್ತು ಅಥವಾ stem cell ಎಂದು ಕರೆಸಿಕೊಳ್ಳುತ್ತದೆ. 

ಇನ್ನೂ ವಿಶೇಷ ಎಂದರೆ ತನ್ನಂತಹುದೇ ಇನ್ನೊಂದು ಜೀವಿಯನ್ನುಂಟುಮಾಡುವುದೂ ಸಹ ಮಜ್ಜಾಧಾತುವೇ!! ಹೌದು ಸತ್ಯ ಏನೆಂದರೆ ನಮ್ಮ ವೀರ್ಯಾಣು, ಅಂಡಾಣುಗಳು ಉತ್ಪತ್ತಿಯಾಗುವ ಮೂಲಸ್ಥಾನ ಅಸ್ಥಿಯಿಂದ ರಕ್ಷಿಸಲ್ಪಟ್ಟ ಮಜ್ಜಾಧಾತುವೇ ಆಗಿದೆ!! (ಇದನ್ನು ಮುಂದೆ ನೋಡೋಣ.....)

ಅಂದರೆ ಮೂಳೆ ಸವೆತವನ್ನು ಹಗುರವಾಗಿ ಪರಿಗಣಿಸುವಂತಹುದಲ್ಲ. ಚಿಕ್ಕವಯಸ್ಸಿನಲ್ಲೇ ಮೂಳೆಸವೆತವನ್ನು ನೋಡುತ್ತಿದ್ದೇವೆ, ಇನ್ನು ಅವರ ಮುಂದಿನ ಪೀಳಿಗೆ ಕಥೆ ಏನು?

🤔 ಸವೆಯಲು ಕಾರಣಗಳೇನು?
ಮೂಳೆ ಉತ್ಪತ್ತಿ ಶುದ್ಧ ಕೊಬ್ಬಿನಿಂದಲೇ ಆದರೂ ಕೇವಲ ಕೊಬ್ಬಿನ ಅಂಶ ಸೇವನೆ ಮಾಡುತ್ತಿದ್ದರೆ, ಅದನ್ನು ಒಣಗಿಸಿ ಗಟ್ಟಿಗೊಳಿಸುವವರು ಯಾರು? ಆದ್ದರಿಂದ ,
ಶುದ್ಧ ಕೊಬ್ಬಿನ ಅಂಶವಾದ ತುಪ್ಪದಿಂದ ಮಾತ್ರ ಸದೃಢ ಮೂಳೆಗೆ ಸಹಾಯಕ. ಇಷ್ಟನ್ನು ಮಾತ್ರ ಹೇಳಿದರೆ ಸಾಕಾಗದು. ಯಾವ ತುಪ್ಪವೂ ಚಟುವಟಿಕೆ ಮಾಡದ ಜೀವಿಯಲ್ಲಿ ಮೂಳೆಯಾಗಿ ಪರಿವರ್ತನೆಯಾಗುವುದಿಲ್ಲ, ಶಾರೀರಿಕ ವ್ಯಾಯಾಮದಿಂದ ಅದನ್ನು ಒಣಗಿಸಿದರೆ ಮಾತ್ರ ಅದು ಗಟ್ಟಿಯಾಗಿ ಮೂಳೆಯಾಗುವುದು.
👇
ಬಾಲ್ಯದಿಂದಲೂ ಹಾಲು, ಬೆಣ್ಣೆ, ತುಪ್ಪ ತಿನ್ನಿಸದಿರುವುದು ಮತ್ತು ಮಕ್ಕಳನ್ನು ಆಟವಾಡಲು ಬಿಡದಿರುವುದು ಅಥವಾ ಮಕ್ಕಳು ಕೇವಲ ವಿಡಿಯೋ, ಮೊಬೈಲ್, ಟಿ.ವಿ ಮುಂದೆ ಚಟುವಟಿಕೆ ಇಲ್ಲದೇ ಕುಳಿತುಕೊಳ್ಳುವುದು. ಸವೆತಕ್ಕೆ ಕಾರಣ.

ಇದರ ಹೊರತು ಜಾಹಿರಾತು ನೋಡಿ ಏನು ತಿನ್ನಿಸಿದರೂ ನಮ್ಮ ಮಕ್ಕಳ ಮೂಳೆ ಉದ್ದ, ಗಟ್ಟಿಯಾಗದು. 

ಇಂದಿನ ಸಮಸ್ಯೆ ಏನೆಂದರೆ, *ಏನನ್ನು ತಿಂದರೆ ಮೂಳೆಗೆ ಒಳ್ಳೆಯದು?!* ಎಂದು ಕೇಳುವುದು, ಅದನ್ನು ತಿನ್ನುವುದು!!!
ನೆನಪಿಡಿ, ವ್ಯಾಯಾಮವಿಲ್ಲದೇ ಏನು ತಿಂದರೂ ಮೂಳೆ ಬೆಳೆಯದು, ಸವೆತ ನಿಲ್ಲದು.

👉 ತೊಂದರೆಗಳೇನು?
ಮಕ್ಕಳ ವಿಷಯದಲ್ಲಿ ಮೂಳೆಯನ್ನು ಕಡೆಗಣಿಸುವಂತಿಲ್ಲ. *ಮೂಳೆಯೇ ಮಕ್ಕಳ ಇಡೀ ಜೀವನದಲ್ಲಿ ಆರೋಗ್ಯವೆಂಬ "ಠೇವಣಿ".
* ಈ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಹೆಚ್ಚೋ ಅಷ್ಟು ಸದೃಢ, ಸಶಕ್ತ. ಮತ್ತು 
*ಮೂಳೆಯೇ ನಮ್ಮ ಮಕ್ಕಳ ಮುಂದಿನ ಪೀಳಿಗೆಯ, ಮುಂದಿನ ತಲೆಮಾರಿನ ಆರೋಗ್ಯದ ಬುನಾದಿಯಾಗಿದೆ.*

ಇನ್ನೂ ಒಂದೆರೆಡು ಸಂಚಿಕೆಯಲ್ಲಿ, ಮೂಳೆ ವಿಷಯವನ್ನು ವಿಶದವಾಗಿ ಚರ್ಚಿಸೋಣ👍
          ★★★★★★

☘ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ☘

        🙏ಧನ್ಯವಾದಗಳು 🙏
••••••••••••••

Tuesday 6 April 2021

ಉರಿಮೂತ್ರಕ್ಕೆ ಪರಿಹಾರಗಳು.

🙏ಅಮೃತಾತ್ಮರೇ ನಮಸ್ಕಾರ 🙏
🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
07.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-45
••••••••••••••
✍️: ಇಂದಿನ ವಿಷಯ:
ಉರಿಮೂತ್ರಕ್ಕೆ ಪರಿಹಾರಗಳು.
•••••••••••••••••••••••••••••••••••••••••

ನಾವಂದುಕೊಂಡತೆ ಉಷ್ಣತೆ ಹೆಚ್ಚಾಗಿದೆ, ಎಳೆನೀರು, ಬಾರ್ಲಿ ಗಂಜಿ, ಹೆಚ್ಚು ನೀರು ಸೇವನೆ ಇವು ತಾತ್ಕಾಲಿಕ ಪರಿಹಾರ ಸರಿ. ಮತ್ತೆ ಮತ್ತೆ ಬರಬಾರದೆಂದರೆ ಏನು ಮಾಡಬೇಕು? ಎಂದು ನೋಡೋಣ.

ಕೆಲವರನ್ನು ನೋಡಿದರೆ ಇಡೀ ಜೀವನ ಉರಿಮೂತ್ರ ಎಂದರೇನೆಂಬುದೇ ತಿಳಿದಿರುವುದಿಲ್ಲ, ಅವರ ಶಾರೀರಿಕ ಪ್ರಕೃತಿ ಅಥವಾ ಶಕ್ತಿ ಎಂತಹುದೆಂದು ತಿಳಿದರೆ ಸಮಸ್ಯೆಗೆ ದೀರ್ಘ ಪರಿಹಾರ ಸಿಗುವುದು.

👉 ಗಮನಿಸಿ: ಯಾವುದೇ ಕಾಯಿಲೆಗೆ ಕಾರಣವಾಗುವ ಆಹಾರ ವಿಹಾರಗಳಲ್ಲಿ ಇಂದಿನವರೆಗೆ ವ್ಯತ್ಯಾಸ ಇಟ್ಟುಕೊಂಡು, ಇಂದು ಬಿಟ್ಟ ತಕ್ಷಣ 10-15ದಿನಗಳಲ್ಲಿ ಎಲ್ಲಾ ಪರಿಹಾರ ಸಾಧ್ಯವಿಲ್ಲ. ಯಾವುದೇ ನೈಸರ್ಗಿಕ ಪರಿಹಾರದ ಪೂರ್ಣ ಫಲ ‌ಲಭಿಸಲು 120 ದಿನಗಳ ಶ್ರದ್ಧಾಯುತ ಪಾಲನೆ ಮಾಡಬೇಕು.

👉 ಶಾಶ್ವತ / ದೀರ್ಘಕಾಲದ ಪರಿಹಾರ:
• ಆಹಾರ ತಯಾರಿಕೆಯಲ್ಲಿಯೇ ಸಾಕಷ್ಟು ನೀರು ಇರಲಿ, ಇದರಿಂದ ಆಹಾರದ ಕಣಗಳು ಸುಲಭವಾಗಿ ಮತ್ತು ವೇಗವಾಗಿ ವಿಭಜನೆಗೊಳ್ಳುತ್ತವೆ, ನಿಧಾನವಾಗಿ ಜೀರ್ಣಗೊಳ್ಳುವ ಆಹಾರದಿಂದ ಉಷ್ಣತೆ ಹೆಚ್ಚು ಬಿಡುಗಡೆಗೊಳ್ಳುತ್ತದೆ.

• ಕಡಿಮೆ ನೀರು ಬಳಸಿ ತಯಾರಿಸುವ ಆಹಾರ ಸೇವಿಸಿ, ಎಷ್ಟೇ ನೀರು ಕುಡಿದರೂ ಅದು ಜೀರ್ಣಕ್ಕೆ ಸಹಕಾರಿಯಲ್ಲ.

• ಬಾಯಾರಿಕೆಯನ್ನು ಪರಿಗಣಿಸದೇ ಹೆಚ್ಚು ಹೆಚ್ಚು ನೀರು ಸೇವನೆ ಮಾಡುವುದೂ ಸಹ ಉಷ್ಣತೆ ಹೆಚ್ಚುವಂತೆ ಮಾಡುತ್ತದೆ.

• ಅತಿಯಾದ ಹುಳಿ ಸೇವನೆಯೂ, ತನ್ನ ಆಮ್ಲೀಯತೆಯ ಕಾರಣ ಉರಿಮೂತ್ರವನ್ನು ಉಂಟುಮಾಡುವ  ಕಾರಣ, ಆಹಾರಕ್ಕೆ ತಕ್ಕಷ್ಟೇ ಹುಳಿ ಸೇವನೆ ಮಾಡಿದರೆ ಪರಿಹಾರವಾಗುತ್ತದೆ.

• ಉಪ್ಪು ರುಚಿಯೂ ಹೌದು, ಹೆಚ್ವಿದರೆ ಅಪಾಯವೂ ಹೌದು. ಲವಣಾಂಶ ಸೇವನೆ ಹೆಚ್ಚಿದರೆ, ಮೂತ್ರಪಿಂಡಗಳ ಸೋಸುವಿಕೆಯ ಕ್ರಿಯೆ ವ್ಯತ್ಯಾಸವಾಗುವುದು, ಇದು ಕೇವಲ ಉರಿಮೂತ್ರವಲ್ಲದೇ ಮೂತ್ರಪಿಂಡಗಳ ಆಯುಷ್ಯವನ್ನೇ ಕಸಿಯುತ್ತದೆ. ಹಾಗೂ ಶರೀರದ ರಸಧಾತು ಅತ್ಯಂತ ಶಕ್ತಿಹೀನವಾಗುವುದೂ ಸಹ ಲವಣಾಂಶದಿಂದಲೇ. ಈ ಎರೆಡು ಕಾರಣಗಳು ಒಟ್ಟಾಗಿ ಮೂತ್ರನಾಳದ ಶಕ್ತಿ ಕುಂದಿಸುತ್ತವೆ.

• ಕ್ಷಾರ, ಚುರುಗುಟ್ಟುವ ತೀಕ್ಷ್ಣಮಸಾಲೆಗಳ ಸೇವನೆ ಮಾಡಲಿಚ್ಛಿಸುವವರು ಮೊದಲು ಯಥೇಚ್ಛ ಸಿಹಿ, ಮಾಂಸ, ಮೀನು ಮುಂತಾದ ಬಲಯುತ ದ್ರವ್ಯಗಳನ್ನು ಸೇವಿಸಿ-ಜೀರ್ಣಿಸಿಕೊಂಡಿರಬೇಕು. ಅಷ್ಟು ಶಕ್ತಿ ಶರೀರದೊಳಗೆ ಇದ್ದರೆ ಮಾತ್ರ ತೀಕ್ಷ್ಣತೆಯು ಉರಿಯನ್ನುಂಟುಮಾಡದು. 

• ನಿದ್ದೆ ಸರಿಯಾಗಿ ಆಗದಿದ್ದರೆ, ಸಹಜವಾಗಿ ಆಗುವ ಮೂತ್ರವೂ ಸಹ ಉರಿಯುತ್ತದೆ. ನೇತ್ರವೂ ಉರಿಯುತ್ತದೆ.

• ಉರಿಬಿಸಿಲಿನ ನಿತ್ಯ ಸಂಪರ್ಕ ಶರೀರದ ಜಲಾಂಶವನ್ನು ಹೀರುತ್ತದೆ, ನಿರಂತರ ಬಿಸಿಲಿನಲ್ಲಿದ್ದು ಅಭ್ಯಾಸ ಆದವರ ಚರ್ಮ ಕಪ್ಪಾಗಿ ನೀರು ಆವಿಯಾಗುವಿಕೆ ಕಡಿಮೆಯಾಗಿ ಹೊಂದಿಕೊಳ್ಳುತ್ತದೆ. ಅದಿಲ್ಲದೇ ವಿಶೇಷವಾಗಿ ಬಿಸಿಲಿಗೆ ಹೋದರೆ ಉರಿಮೂತ್ರ ತಪ್ಪಿದ್ದಲ್ಲ, ಅಂತಹ ಸಂದರ್ಭದಲ್ಲಿ ಅಕ್ಕಿ, ಕುಚಲಕ್ಕಿ, ಬಾರ್ಲಿ ಗಂಜಿಯನ್ನೇ ಸೇವಿಸಿ ಬಿಸಿಲಿಗೆ ಹೋಗಬೇಕು.
 ಚನ್ನಾಗಿ ಗಟ್ಟಿ ಪದಾರ್ಥ ತಿಂದು ಬಿಸಿಲಿಗೆ ಹೋಗುವುದು ಸಲ್ಲದು.

• ತಂಪು ಕನ್ನಡಕ, ತಲೆಗೆ ಟೋಪಿ ಧಾರಣೆಯು ಸ್ವಲ್ಪಮಟ್ಟಿಗೆ ಸಹಾಯಕ. ಏಕೆಂದರೆ, ನೇತ್ರವು ತೇಜ ಮಹಾಭೂತದಿಂದ ನಿರ್ಮಾಣವಾಗಿದ್ದು, ಶರೀರದ ತೇಜಸ್ಸು ಕಾಣುವುದೇ ನೇತ್ರಗಳ ಕಾಂತಿಯಲ್ಲಿ. ಹಾಗಾಗಿ ಇದು ಉಷ್ಣತೆಯನ್ನು ನಿಯಂತ್ರಿಸುವ ಇನ್ನೊಂದು ಮಾರ್ಗ.

• ಚಿರ್ಭಟ ಫಲ(ಕಲ್ಲಂಗಡಿ ಹಣ್ಣು) ರಕ್ತಪಿತ್ತಕಾರಕ. ಉಷ್ಣತೆಯನ್ನು ಉಂಟುಮಾಡುತ್ತದೆ. ಹೆಚ್ಚು ಕಲ್ಲಂಗಡಿ ಸೇವಿಸಿ ಶರೀರವನ್ನು ತಂಪು ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹೆಚ್ಚು ಕಲ್ಲಂಗಡಿ ತಿಂದವರು ಇದರ ಪರಿಣಾಮವನ್ನು ಕಂಡಿರುತ್ತಾರೆ.

• ಎಣ್ಣೆ ಪದಾರ್ಥಗಳ ಸೇವನೆಯ ನಂತರ, ಅತಿಯಾಗಿ ಬಾಯಾರಿಕೆಯಾಗುವುದು ಏಕೆ?
 ಅದು ಜೀರ್ಣಗೊಳ್ಳದೆ ವಿದಾಹ ಉಂಟುಮಾಡುವುದು. ಇಂತಹ ಪದಾರ್ಥಗಳನ್ನು ಸೇವಿಸದಿರುವುದೇ ಸೂಕ್ತ ಅಥವಾ ಆದಷ್ಟು ಮಿತಗೊಳಿಸಿ, ಚಳಿಗಾಲದಲ್ಲಿ ಸ್ವಲ್ಪಮಟ್ಟಿಗೆ ಬಳಸಬಹುದು.

• ಚಹಾ-ಕಾಫಿ ಸೇವನೆ ರಸಧಾತುವನ್ನು ತೀಕ್ಷ್ಣವಾಗಿ ಒಣಗಿಸಿ, ನಿಶ್ಯಕ್ತಿಗೊಳಿಸುವ ಕಾರಣ, ಉರಿಮೂತ್ರ, ಮೈಗ್ರೇನ್, ವಾಂತಿ, ಕಿರಿಕಿರಿ.... ಎಲ್ಲವೂ ಅತೀ ಸಹಜ, ಈ ಪಾನೀಯಗಳ ನಿತ್ಯಸೇವನೆ ಯಾವ ಲಾಭವನ್ನೂ ತರದು.

• ಎಣ್ಣೆ, ಸಿಹಿ ಮುಂತಾದ ಪದಾರ್ಥಗಳ ಸೇವನೆಯ ದಿನ ಮಾತ್ರ ಅಲ್ಪ ಕಾಫೀ ಅಥವಾ ಚಹಾ ಸೇವನೆ ಉತ್ತಮ. ಅಥವಾ ಅತ್ಯಂತ ಕಡಿಮೆ ಪುಡಿ (ಕಾಲು ಗ್ರಾಂ)ಯಿಂದ ತಯಾರಿಸಿದರೆ ನಿತ್ಯ ಒಂದುಬಾರಿ ಸೇವನೆ ಮಾಡಬಹುದು.

• ಶಿರ ‌ತಂಪಾಗಿಯೂ, ಪಾದ ಬೆಚ್ಚಗೂ ಇರುವಂತೆ ನೋಡಿಕೊಂಡರೆ, ಶರೀರದ ಉಷ್ಣತೆ ಸ್ವಸ್ಥಾನದಲ್ಲಿ ನೆಲೆಯಾಗುತ್ತದೆ. 

• ಉರಿಮೂತ್ರ ಆದತಕ್ಷಣ, ಹೊಕ್ಕುಳಿನ ತುಂಬ ನೈಸರ್ಗಿಕ ಶುದ್ಧ ಸುಣ್ಣವನ್ನು ತುಂಬಬೇಕು ಮತ್ತು ಬಟಾಣೆ ಕಾಳಿನ ಪ್ರಮಾಣದ ಸುಣ್ಣವನ್ನು ಉಂಡೆಮಾಡಿ ನುಂಗಬೇಕು, ತಕ್ಷಣ ಪರಿಹಾರವಾಗುತ್ತದೆ. 
ಆದರೆ ನಿತ್ಯವೂ ಈ ಪರಿಹಾರ ಕಂಡುಕೊಳ್ಳಬಾರದು (ಇಂತಹುದೇ ಕಾರಣಗಳಿಗೆ ಮನೆಮದ್ದನ್ನು ತಿಳಿಸುವುದು ಸರಿಯಲ್ಲ), ಆಹಾರ, ವಿಹಾರಗಳಲ್ಲಿ ಸರಿ ಮಾಡಿಕೊಳ್ಳುವುದು ಶರೀರವನ್ನು ದೃಢವಾಗಿಯೂ‌, ಆರೋಗ್ಯದಿಂದಲೂ ಇಡುತ್ತದೆ. ಮನೆ ಮದ್ದೂ ಸಹ ಚಿಕಿತ್ಸೆಯ ಒಂದು ಭಾಗ ಅದನ್ನೇ ನಿತ್ಯ ಬಳಸಿ ಪರಿಹರಿಸಿಕೊಳ್ಳಬಾರದು.
ಉದಾ: ಕಾಫೀ ಸೇವನೆ ತಲೆನೋವನ್ನು ನಿವಾರಿಸುತ್ತದೆ. ಹಾಗೆಂದು ತಲೆನೋವು ಬಂದಾಗಲೆಲ್ಲಾ ಕಾಫಿ ಅಥವಾ ಕೆಫೇನ್ ಇರುವ ಮಾತ್ರೆ ಸೇವನೆ ಮಾಡಿಕೊಂಡರೆ ಅದು ಪರಿಹಾರವೇ ಅಲ್ಲ ಮತ್ತು ಕಾಯಿಲೆಯ ಪರಿಣಾಮ ಶರೀರ ನಿರಂತರ ಕ್ಷೀಣಿಸಿರುತ್ತದೆ.

🔺 ಸೋಂಕಿನ‌ ಅವಸ್ಥೆಯಲ್ಲೂ ಸಹ ಒಂದು ಬಾರಿ ಆ್ಯಂಟಿಬಯೋಟಿಕ್ ಕೊಟ್ಟು, ನಂತರ ಆಯುರ್ವೇದ ಹೇಳಿದ ಮೂಲ ಕಾರಣಕ್ಕೆ ಚಿಕಿತ್ಸೆ ಮಾಡಿದರೆ ಶಾಶ್ವತವಾಗಿ ಪರಿಹಾರ ಸಾಧ್ಯ.

🙏ಧನ್ಯವಾದಗಳು 🙏
••••••••••••••

Thursday 1 April 2021

ಮೂತ್ರನಾಳದ ಸೋಂಕು‌ ಅಥವಾ UTI(Urinary tract infection).

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
2.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-44
••••••••••••••
✍️: ಇಂದಿನ ವಿಷಯ:
ಮೂತ್ರನಾಳದ ಸೋಂಕು‌ ಅಥವಾ UTI(Urinary tract infection).
•••••••••••••••••••••••••••••••••••••••••

ಹೆಚ್ಚಿನ ಮಹಿಳೆಯರನ್ನು,‌ ಅನೇಕ ಪುರುಷರನ್ನು ಕಾಡುವ ಮೂತ್ರನಾಳದ ಉರಿಗೆ ಸೋಂಕು ಕಾರಣ ಎಂದು ನಂಬಿದ್ದೇವೆ, ಆದರೆ ಎಲ್ಲಾ ಉರಿಗೆ ಕಾರಣ ಸೋಂಕು ಅಲ್ಲ ಮತ್ತು ಪದೇ ಪದೇ ಸೇವಿಸುವ ಆ್ಯಂಟಿಬಯೋಟಿಕ್ ಇನ್ನಷ್ಟು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ! ಮತ್ತೆ ಸೋಂಕು ತಗುಲಲು ಮತ್ತಷ್ಟು ಸಹಾಯ ಮಾಡುತ್ತದೆ!!

ರಸಧಾತು ಎಂಬ ಶಕ್ತಿಯುತ ಸಾಂದ್ರ ದ್ರವ್ಯ ಶ್ಲೇಷ್ಮ ಎಂಬ ಹೆಸರಿನಿಂದ ಮೂತ್ರನಾಳದಲ್ಲಿಯೂ ಇರುತ್ತದೆ. ಇದು ಮೂತ್ರದ ಕ್ಷಾರೀಯ ಅಂಶದಿಂದ ನಾಳವನ್ನು ರಕ್ಷಿಸುತ್ತದೆ. 
ಈ ರಸಧಾತುವಿನ ದುರ್ಬಲತೆಯೇ ಸಹಜವಾಗಿ ಮೂತ್ರದ ಉರಿಗೆ ಕಾರಣ. ಇಲ್ಲಿ ಯಾವ ಆ್ಯಂಟಿಬಯೋಟಿಕ್ ಬೇಕು? ಹೊರಗಿನ ಕಾರಣವನ್ನೇ ಹುಡುಕುವುದು ಏಕಮುಖ ದೃಷ್ಟಿ.

ಇದು ಒಂದು ಕಾರಣ, ಮತ್ತೊಂದು ಕಾರಣ ಇನ್ನೂ ವಿಶೇಷವಾಗಿದೆ.

❄️ಮೂತ್ರಸ್ಯ ಕ್ಲೇದ ವಹನಂ.....

★ ಕ್ಲೇದ ಎನ್ನುವುದು, ಮೇದ(ಕೊಬ್ಬು)ಧಾತುವಿನ ಮಲ.
ನಾವು ಸೇವಿಸಿದ ಆಹಾರದಲ್ಲಿರುವ ಜಿಡ್ಡಿನ ಅಂಶವು ಜೀರ್ಣವಾಗುವಾಗ ಎರಡು ಭಾಗವಾಗಿ ಒಂದು ಪ್ರಾಕೃತ *ಸ್ನೇಹ* ವಾಗುತ್ತದೆ ಅದೇ ಮೇದಧಾತು, ಹಾಗೆಯೇ ಸ್ವಲ್ಪ ಭಾಗ ಮಲ ಉಂಟಾಗುತ್ತದೆ ಅದೇ *ಕ್ಲೇದ*.

ಈ ಸಾರ ಮತ್ತು ಮಲವು ನಮ್ಮ ಶರೀರದಲ್ಲಿ ನಿರಂತರ ಉಂಟಾಗುವ ಪ್ರಕ್ರಿಯೆ. 
ಸಾರವು ಶರೀರದೊಳಗೇ ಉಳಿದುಕೊಂಡು ಅಗತ್ಯಾನುಸಾರ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಮಲವು ವಿವಿಧ ಮಾರ್ಗಗಳಿಂದ ಹೊರಹೋಗುತ್ತಿರುತ್ತದೆ. 

*ಕ್ಲೇದ ಹೊರಹೋಗುವ ಮಾರ್ಗ ಮೂತ್ರ ಮತ್ತು ಸ್ವೇದ*.
ಈ ಕ್ಲೇದವು ಅಸಂಪೂರ್ಣ ಜೀರ್ಣಕ್ರಿಯೆಯಿಂದ ಉಂಟಾಗಿದ್ದರೆ ಸ್ವಲ್ಪ ಭಾಗ ಶಕ್ತಿಯನ್ನು ಉಳಿಸಿಕೊಂಡಿರುವ ಕಾರಣ ಮೂತ್ರ ಉತ್ಪತ್ತಿಯಿಂದ ವಿಸರ್ಜನೆಯವರೆಗೆ ತಡೆತಡೆದು ಚಲಿಸುತ್ತದೆ(ಅಪಕ್ವಂ ಧಾರಯತಿ... ಸಿದ್ಧಾಂತದಂತೆ), ಕ್ಲೇದ ಚಲಿಸಿ ಹೊರನಡೆಯುವಾಗ ಅದರ ಮಾರ್ಗದ ಯಾವುದೇ ಭಾಗವಾದರೂ ಅದರಲ್ಲಿರುವ ಶಕ್ತಿಯನ್ನು ಮತ್ತೆ ಹೀರಿ ಶರೀರದ ಮೇದಧಾತುವಿಗೆ ಕೊಡುವ ಸಾಧ್ಯತೆ ಇರುವ ಕಾರಣ ಚಲನೆ ನಿಧಾನವಾಗುತ್ತದೆ. *ಸ್ವಲ್ಪ ಪೋಷಣೆ ಅಂಶ ಹೊಂದಿರುವ ಕ್ಲೇದ ಸಹಜವಾಗಿ ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ. ಅದು ಮೂತ್ರನಾಳದಲ್ಲಿರುವ  ರಸಧಾತುವನ್ನು ಮೀರುವಂತಿದ್ದರೆ ಉರಿಯನ್ನು ತರುತ್ತದೆ, ಇಲ್ಲದಿದ್ದರೆ ಸರಳವಾಗಿ ಹರಿದುಹೋಗುತ್ತದೆ.* ಇಲ್ಲಿ ಯಾವ ಸೋಂಕೂ ಇರುವುದಿಲ್ಲ, ಯಾವುದೇ ಆ್ಯಂಟಿಬಯೋಟಿಕ್ ಬೇಕಿರುವುದಿಲ್ಲ. ಇಲ್ಲಿ ಬೇಕಾಗಿರುವುದು ಕ್ಲೇದ ಪಾಚನ ದ್ರವ್ಯ ಅಷ್ಟೆ. ಆಯುರ್ವೇದದಲ್ಲಿ ಅತ್ಯಂತ ಶ್ರೇಷ್ಠ ಕ್ಲೇದ ಪಾಚಕ ದ್ರವ್ಯಗಳಿವೆ. ಅಲೋಪತಿಗೆ ಹಾಗೆಂದರೇನೆಂಬುದೇ ತಿಳಿದಿಲ್ಲ!!

👉 ಆತ್ಮೀಯರೇ,
ನಮ್ಮ ಶರೀರ ಎಲ್ಲಾ ಆಹಾರವನ್ನೂ ನಿಶ್ಯೇಷವಾಗಿ ಜೀರ್ಣಿಸಲು ಸದಾ ಸಿದ್ಧ, ಇದಕ್ಕೆ ನಮ್ಮ ಸಹಕಾರ ಎಂದರೆ ಶಾರೀರಿಕ ಶ್ರಮ. 
ಇದರಿಂದ ಬೆವರಿನ ಮುಖಾಂತರ ಹೆಚ್ಚಿನ ಕ್ಲೇದವು ಹೊರಹೋದರೆ ಕಿಡ್ನಿ, ಮೂತ್ರಕೋಶ ಮತ್ತು ಮೂತ್ರಮಾರ್ಗ ಸುರಕ್ಷಿತ. 
ಆಯ್ಕೆ ನಮ್ಮದು.....

🙏ಧನ್ಯವಾದಗಳು 🙏
••••••••••••••

ಸಂಸ್ಕೃತ ಭಾಷೆಯಲ್ಲಿ ನಮ್ಮ ಶರೀರದ ಅವಯವಗಳ ಹೆಸರುಗಳು

🙏ಅಮೃತಾತ್ಮರೇ ನಮಸ್ಕಾರ 🙏
     ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
        ಸ್ವಾಸ್ಥ್ಯ ಸರ್ವರದ್ದೂ ಆಗಲಿ
       🌸🌸🌸🌸🌸🌸🌸🌸
••••••••••••••••••••••••••••••••••••••••••
01.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-44
••••••••••••••
✍️: ಇಂದಿನ ವಿಷಯ:

ಸಂಸ್ಕೃತ ಭಾಷೆಯಲ್ಲಿ ನಮ್ಮ ಶರೀರದ ಅವಯವಗಳ ಹೆಸರುಗಳು
•••••••••••••••••••••••••••••••••••••••••

ದಿನೇ ದಿನೇ ಆಸಕ್ತರು ಹೆಚ್ಚುತ್ತಿರುವ ಕಾರಣ, ಸಂಶಯಗಳೂ ಹೆಚ್ಚುತ್ತಿವೆ. ನಿವಾರಣೆಗಾಗಿ ಮತ್ತು ಮುಂದೆ ಓದುವಾಗ ಸಂಶಯ ಬಾರದಿರಲೆಂದು ಈ ಪುಟ್ಟ ಪ್ರಯತ್ನ.

✨ ನಮ್ಮ ಶರೀರದ ಅವಯವಗಳಿಗೆ ಸಂಸ್ಕೃತದಲ್ಲಿ /  ಆಯುರ್ವೇದದಲ್ಲಿ ಏನೆಂದು ಕರೆಯುತ್ತಾರೆ?
ಕುತೂಹಲವೇ?

ಮುಂದೆ ನೋಡಿ-
(ಇದೊಂದು ಸಂಗ್ರಹ ಯೋಗ್ಯ ಸಂಚಿಕೆ ಎಂಬುದು ನಮ್ಮ ಅನಿಸಿಕೆ 🙏🙏🙏)

▪️ ಕೋಷ್ಟ =ಬಾಯಿ-ಗುದದವರೆಗಿನ ಸಂಪೂರ್ಣ ಅನ್ನನಾಳ. 

▪️ಜಿಹ್ವಾ = ನಾಲಿಗೆ

▪️ದಂತ = ಹಲ್ಲು

▪️ಓಷ್ಠ = ತುಟಿ

▪️ದಂತಮೂಲ= ವಸಡು

▪️ಗಂಟಿಕಾ=ಕಿರುನಾಲಿಗೆ

▪️ತಾಲು= ಅಂಗಳು

▪️ಕಂಠ= ಕಂಠ

▪️ಕ್ಲೋಮ=ಅನ್ನನಾಳ/ಪ್ಯಾಂಕ್ರಿಯಾಸ್

▪️ಉದರ=ಉದರ

▪️ಗ್ರಹಣಿ=ಡಿಯೋಡಿನಂ ಕರುಳಿನ ಆರಂಭದ ಭಾಗ

▪️ಪಚ್ಯಮಾನಾಶಯ= ಸಣ್ಣ ಕರುಳು

▪️ಪಕ್ವಾಶಯ=ದೊಡ್ಡ ಕರುಳು

▪️ಉಂಡುಕ=ಸಣ್ಣ ಮತ್ತು ದೊಡ್ಡ ಕರುಳು ಸೇರುವ ಭಾಗ cecum

▪️ಗುದ=ಗುದ

▪️ಮಸ್ತಿಷ್ಕ=ಮೆದುಳು

▪️ಸುಷುಮ್ನಾ ನಾಡಿ= ಬೆನ್ನುಹುರಿ/spinal chord 

▪️ಇಡಾ‌, ಪಿಂಗಲ ನಾಡಿ= ಎಡ ಮತ್ತು ಬಲ ಭಾಗದ ಬೆನ್ನುಹುರಿ ನಾಡಿಗಳು

▪️ತಿರ್ಯಗ್ಗಾಮಿ ಧಮನಿಗಳು= peripheral nervous system

▪️ಧಮನಿ=Nerve impules, arterial flow

▪️ಹೃದಯ=ಹೃದಯ

▪️ಹೃದಯ(ರಸಧಾತುವಿನ ಮೂಲ)= portal system(mesentric veins to portal vein)

▪️ಸಿರಾ=ರಕ್ತನಾಳಗಳು

▪️ನೀಲ‌ಸಿರಾ=all veins and pulmonary arteries

▪️ಗೌರಿ ಸಿರಾ=All arteries and pulmonary veins

▪️ರೋಹಿಣಿ ಸಿರಾ=Microvessels, subcutaneous vessels

▪️ಗೌರಿ ಸಿರಾ= Functional part of portal system

▪️ಪುಪ್ಪುಸ=ಪುಪ್ಪುಸ

▪️ಯಕೃತ್=ಯಕೃತ್

▪️ಕ್ಲೋಮ=Pancreas? Can accept 

▪️ಪ್ಲೀಹಾ=spleen

▪️ಅಂತ್ರ= ಕರುಳು

▪️ವೃಕ್ಕ=ಮೂತ್ರಪಿಂಡ

▪️ಬಸ್ತಿ=ಮೂತ್ರಕೋಶ

▪️ಗರ್ಭಾಶಯ=ಗರ್ಭಾಶಯ

▪️ಕುಕ್ಷಿ=ಗರ್ಭ ಧರಿಸುವ ಸ್ಥಳ, ಡಿಂಬನಾಳ, fallopian tube

▪️ಕುಕ್ಷಿ=ಉದರ
(ಕುಕ್ಷಿ‌ ಎಂದರೆ ಎಲ್ಲದರ ಉತ್ಪತ್ತಿಯ ಮೂಲ ಸ್ಥಾನ, ಅಂದರೆ ಹೊಸ ಜೀವಿಯ ಉಗಮ ಸ್ಥಾನ ಡಿಂಬನಾಳ. ಪ್ರತಿದಿನದ ಈ ಶರೀರದ ಉಗಮ‌ ಸ್ಥಾನ ಉದರ)

▪️ಶಿರ=ತಲೆ

▪️ಲಲಾಟ=ಹಣೆ

▪️ಭ್ರೂ=ಹುಬ್ಬು

▪️ಸ್ತಪನಿ=ಹಣೆಯ ಮಧ್ಯಭಾಗ, ತಿಲಕ ಇಡುವ ಸ್ಥಳ

▪️ನಾಸಿಕ=ಮೂಗು

▪️ನೇತ್ರ=ಕಣ್ಣು

▪️ಕರ್ಣ=ಕಿವಿ

▪️ಕಪೋಲ=ಕೆನ್ನೆ

▪️ಚಿಬುಕ=ಗದ್ದ, Chin

▪️ಗಲ=ಗಂಟಲು

▪️ಗ್ರೀವಾ=ಕುತ್ತಿಗೆ

▪️ಪೃಷ್ಟ=ಬೆನ್ನು

▪️ಕಟಿ=ಸೊಂಟ

▪️ಸ್ಫಿಕ್=buttock, ಅಂಡು

▪️ಊರು=ತೊಡೆ

▪️ಜಾನು=ಮಂಡಿ, knee

▪️ಜಂಘಾ=ಕಾಲುಗಳು, below knee

▪️ಗುಲ್ಫ=ankle joint

▪️ಪಾದ=ಪಾದ

▪️ಪಾದ ಪೃಷ್ಟ=ಪಾದದ ಮೇಲ್ಭಾಗ

▪️ಪಾದತಲ=ಪಾದದ ತಳ

▪️ಬಾಹು=ಕೈ

▪️ಶಾಖಾ=Limbs

▪️ಅಂಗುಲಿ=ಬೆರಳು

▪️ನಖ=ಉಗುರು

▪️ಪರ್ವ=ಬೆರಳು ಸಂಧಿ

▪️ಮಣಿಬಂಧ=wrist

▪️ಕೂರ್ಪರ=elbow

▪️ಕಕ್ಷ=shoulder

▪️ಉರ=ಎದೆ

▪️ಉದರ=ಹೊಟ್ಟೆ

▪️ನಾಭಿ=ಹೊಕ್ಕುಳ

▪️ಮೇಢ್ರ=ಶಿಶ್ನ

▪️ವೃಷಣ=testis

▪️ಯೋನಿ=ಯೋನಿ, ಸ್ತ್ರೀಯರ ಸಂಪೂರ್ಣ ಪ್ರಜನನ ಸಂಸ್ಥಾನ

▪️ತ್ವಚೆ=ಚರ್ಮ, ರಸಧಾತು

▪️ಘ್ರಾಣ=ವಾಸನೆ, ಮೂಗು

▪️ಶಬ್ದ=ಶಬ್ದ

▪️ರೂಪ=ದೃಷ್ಟಿ

▪️ರಸ=ಸವಿ, ನಾಲಿಗೆ

▪️ವಾಕ್=‌ಮಾತು

▪️ಪಾಣಿ=ಹಸ್ತ

▪️ಪಾದ=ಕಾಲು

▪️ಪಾಯು=ಗುದ

▪️ಉಪಸ್ಥ=ಶಿಶ್ನ ಅಥವಾ ಯೋನಿ

▪️ಕೇಶ=ತಲೆ ಕೂದಲು

▪️ರೋಮ=ಮೈ ಕೂದಲು

▪️ಲೋಮ=axillary and pubic hairs

▪️ಶ್ಮಶೃ=ಮೀಸೆ, ದಾಡಿ

▪️ಪುರೀಷ=stool

▪️ಮೂತ್ರ=ಮೂತ್ರ

▪️ಸ್ವೇದ=ಬೆವರು

▪️ಸಿಂಘಾಣ=ಸಿಂಬಳ

▪️ಮಲ ಕಫ=ಉಗಿಯುವ ಕಫ

▪️ಮಲಪಿತ್ತ=ವಾಂತಿಯಿಂದ ಬರುವ ಪಿತ್ತ, colour of stool

▪️ಕಫ ದೋಷ= ಶರೀರದೊಳಗಿನ ಪೋಷಕ, ಅಂಟುಭಾಗ, ಸಂಬಂಧ ಬೆಸೆವ ಅಂಶ

▪️ಪಿತ್ತದೋಷ=ದ್ರವರೂಪದ ಅಗ್ನಿ, ಎಲ್ಲಾ ರೀತಿಯ ಪಚನ ಸಾಮರ್ಥ್ಯ 

▪️ವಾತದೋಷ=ಚಲನೆಕಾರಕ ಅಂಶ, ಶರೀರದ ಸರ್ವಶಕ್ತ ಭಾವ.

▪️ರಸ ಧಾತು=ಶರೀರದ ಪೋಷಣಾ ಅಂಶ

▪️ರಕ್ತ ಧಾತು= ರಕ್ತ

▪️ಮಾಂಸ ಧಾತು= ಮಾಂಸ

▪️ಮೇದ ಧಾತು=ಶರೀರಕ್ಕೆ ಶಕ್ತಿ ಕೊಡುವ ಮೇದಸ್ಸು

▪️ಮೇಧಾ=ಬುದ್ಧಿ

▪️ಅಸ್ಥಿ ಧಾತು=ಮೂಳೆ

▪️ಮಜ್ಜಾ ಧಾತು=ಮಜ್ಜೆ

▪️ಶುಕ್ರ ಧಾತು=semen,  sperms, ovum

▪️ಓಜ=ಪ್ರಾಣವನ್ನು ಹಿಡಿದಿಟ್ಟಿರುವ ಎಲ್ಲಾ ಧಾತುಗಳ, ಅವಯವಗಳ ಸಾರಭಾಗ.

▪️ಜೀವ=ಜೀವಾತ್ಮ

▪️ಆತ್ಮ= ಪರಮಾತ್ಮ

ಇನ್ನೂ ಅನೇಕ ಇವೆ,..... ಇಷ್ಟು ಸಾಕು.

        🙏ಧನ್ಯವಾದಗಳು 🙏
••••••••••••••

MATHS TIME LINE

MATHS TIME LINE https://mathigon.org/timeline