✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 27 March 2022

**ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಪಾಲಿಸಬೇಕಾದ ಕ್ರಮಗಳು**

ಮಕ್ಕಳೇ,

 *ನಾಳೆ ಬರೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಗಮನಿಸೋಣ.* 

*ಪರೀಕ್ಷಾ ಕೊಠಡಿಗೆ ಹೊರಡುವ ಮುನ್ನ:* 

 * ಲಘುವಾಗಿ ಆಹಾರ ಸೇವಿಸುವುದು ಒಳ್ಳೆಯದು.

* ಪರೀಕ್ಷೆಯ ಹಾಲ್ ನಲ್ಲಿ  ತೆಗೆದುಕೊಂಡು ಹೋಗುವ ವಸ್ತುಗಳು.

1. ಮಾಸ್ಕ್ ಕಡ್ಡಾಯವಾಗಿ ಧರಿಸುವಂತದ್ದು. ಶಾಲೆಯ ಸಮವಸ್ತ್ರ ಹಾಕಿಕೊಂಡು ಹೋಗುವುದು. 

2. ಎರಡು ರಿಂದ ಮೂರು ಪೆನ್ ಗಳು.

3. ಕಂಪಾಸ್ ಬಾಕ್ಸ್ ತೆಗೆದುಕೊಂಡು ಹೋಗಿ.

4. ಸಾಮಾನ್ಯ ಕೈ ಗಡಿಯಾರ  ಮತ್ತು ನೀರಿನ ಬಾಟಲ್.

* ಸಮಯಕ್ಕಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಸ್ಥಳ ತಲುಪಿ.

* ಪರೀಕ್ಷೆಯಲ್ಲಿ ಭಯಪಡದೆ ಶಾಂತವಾಗಿರಿ.

* ಪರೀಕ್ಷೆ ಆರಂಭಕ್ಕೂ ಮುನ್ನ
   ಶೌಚಾಲಯಕ್ಕೆ ಹೋಗಿ ಬನ್ನಿ.

 *ಪ್ರಶ್ನೋತ್ತರಗಳನ್ನು ಆರಂಭಿಸುವುದಕ್ಕೂ ಮುನ್ನ:* 

* ಮೊದಲು ನಿಮಗೆ ಕೊಟ್ಟಿರುವ ಉತ್ತರ ಪತ್ರಿಕೆಯ ಮುಖಪುಟದಲ್ಲಿ ಸರಿಯಾಗಿ ನಿಮ್ಮ ನೋಂದಣಿ ಸಂಖ್ಯೆ ಭರ್ತಿ ಮಾಡುವುದು. 

* ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಮುಖಪುಟದಲ್ಲಿ ಇರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.

* ಮೇಲಿನ ಅಂಶ ನೋಡಿದ ನಂತರ ಐದರಿಂದ ಹತ್ತು ನಿಮಿಷಗಳ ಕಾಲಾವಧಿ ತೆಗೆದುಕೊಂಡು, ಪ್ರಶ್ನೆಪತ್ರಿಕೆಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳಿ.

* ನಂತರ ಯಾವ-ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬುವುದು ಮೊದಲು ತಿಳಿದುಕೊಳ್ಳಿ.

* ನೀವು ತಕ್ಷಣ ಉತ್ತರಿಸಬಹುದಾದ ಹಾಗೂ ಸುಲಭವಾಗಿರುವ ಪ್ರಶ್ನೆಗಳನ್ನು ಮೊದಲು ಬರೆಯಲು ಪ್ರಯತ್ನಿಸಿ.

* ಮಕ್ಕಳೇ ಗಮನವಿರಲಿ, ಬಹು ಆಯ್ಕೆ ಪ್ರಶ್ನೆ ಗಳಿಗೆ, ಉತ್ತರ ಆಯ್ಕೆ ಮಾಡಬೇಕಾದರೆ, ಸರಿಯಾಗಿ ಆಲೋಚಿಸಿ ಉತ್ತರವನ್ನು ಆಯ್ಕೆ ಮಾಡಿಕೊಂಡ ನಂತರವೇ  ನಿಮ್ಮ ಉತ್ತರ ಪತ್ರಿಕೆಯಲ್ಲಿ ಬರೆಯಿರಿ. 

* ಬಹು ಆಯ್ಕೆಯ ಪ್ರಶ್ನೆಗಳ ಉತ್ತರ ಬರೆಯಬೇಕಾದರೆ ನಾಲ್ಕು ಉತ್ತರಗಳಲ್ಲಿ  ಸರಿಯಾದ ಉತ್ತರ ಬರೆಯಬೇಕು. ಉತ್ತರದ ಹಿಂದೆ ಇರುವ A, B, C, D ಅಂತ ಬರೆದು ಉತ್ತರ ಬರೆಯಬೇಕು.   
   
* ಪ್ರಶ್ನೆಗಳ ಉತ್ತರ ಗೊತ್ತಿದ್ದು ಗೊಂದಲ ಉಂಟುಮಾಡುತ್ತಿದ್ದರೆ, ಒಂದು ನಿಮಿಷದವರೆಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಧಾನವಾಗಿ,ದೀರ್ಘವಾಗಿ, ಉಸಿರಾಡಿ. ಹೀಗೆ ಮಾಡುವುದರಿಂದ ಮೈಂಡ ಶಾಂತವಾಗಿ ಉತ್ತರ ನೆನಪಿಗೆ ಬರುವ ಸಾಧ್ಯತೆ ಇರುತ್ತೆ ಆದರೆ ನೆನಪಿರಲಿ ವಿಷಯದ ಬಗ್ಗೆ ಓದಿದಾಗ ಮಾತ್ರ.

* ಜೊತೆಗೆ ಒಂದು ಪ್ರಶ್ನೆಗೆ ಉತ್ತರ ಬರೆಯುವಾಗ, ಇನ್ನೊಂದು ಪ್ರಶ್ನೆಯ ಉತ್ತರದ ಬಗ್ಗೆ ಆಲೋಚನೆ ಮಾಡಬೇಡಿ.

* ಮುಖ್ಯವಾಗಿ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ, ಏನಾದರೂ ಕಚ್ಚಾ ಕೆಲಸ ಇದ್ದರೆ ಉತ್ತರ ಪತ್ರಿಕೆಯ ಪ್ರತಿ ಪುಟದ ಕೆಳಗಡೆ ಕಚ್ಚಾ ಉಪಯೋಗ ಅಂತ ಇರುತ್ತದೆ ಅಲ್ಲಿ ಮಾಡಬಹುದು. 

* ಯಾವುದೇ ಪ್ರಶ್ನೆಗೆ ಯೋಚನೆ ಮಾಡಲು ಉತ್ತರ ಕಷ್ಟವಾದರೆ, ಸಮಯ ಹಾಳುಮಾಡದೆ, ನಂತರದ ಪ್ರಶ್ನೆಗೆ ಹೋಗಿ, ಪುನ: ಮತ್ತೆ ಬಂದು ಮುಖ್ಯ ಪ್ರಶ್ನೆ ಸಂಖ್ಯೆ ಹಾಕಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

* ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡಬೇಡಿ, ಒಂದು ವೇಳೆ ಭಯಪಟ್ಟಿದ್ದೇ ಆದರೆ ನಿಮ್ಮ ಮೆದುಳು ಯೋಚನೆ ಮಾಡುವುದಿಲ್ಲ.

* ನಿಮ್ಮ ಸುತ್ತಮುತ್ತ ಯಾವುದೇ ಕಾರಣಕ್ಕೂ ನೋಡಬೇಡಿ,ಹಾಗೂ ನಿರಂತರವಾಗಿ ಬರೆಯುತ್ತಿರುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

* ಮಕ್ಕಳೇ, ನೆನಪಿರಲಿ ಉತ್ತರ ಬರೆಯುವಾಗ ಅತಿವೇಗ ಮತ್ತು ಅತಿ ನಿಧಾನ ಎರಡು ಅಪಾಯ.

* ವಿದ್ಯಾರ್ಥಿಗಳೇ ಕೊನೆಯದಾಗಿ, ನಿಮ್ಮ ಉತ್ತರ ಪತ್ರಿಕೆಯಲ್ಲಿ ಹಾಗೂ ಹೆಚ್ಚುವರಿ ತೆಗೆದುಕೊಂಡ ಉತ್ತರ ಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟರ್ ನಂಬರ್, ನಿಮ್ಮ ಸಹಿ ಮತ್ತು ಕೊಠಡಿ ಮೇಲ್ವಿಚಾರಕ  ಸಹಿಯನ್ನು ಪರಿಶೀಲಿಸಿಕೊಳ್ಳಿ. ಜೊತೆಗೆ ನಿಮ್ಮ ಹಾಲ್ ಟಿಕೆಟ್ ಮೇಲೆ ಕೂಡ ಮೇಲ್ವಿಚಾರಕ  ಸಹಿ ಮಾಡಿಸಿಕೊಳ್ಳಿ.

*ವಿದ್ಯಾರ್ಥಿಗಳೇ ತಮಗೆಲ್ಲರಿಗೂ ಶುಭವಾಗಲಿ.* 

*ALL THE BEST MY DEAR STUDENTS* 
👍👍👍👍👍👍👍

Saturday 26 March 2022

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್  

ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಂದೇ ಬಿಟ್ಟಿದೆ. ಲಕ್ಷಾಂತರ ಮಕ್ಕಳು ಬೋರ್ಡ್ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಸಂತಸದಿಂದ ಇದ್ದರೆ, ಇನ್ನು ಕೆಲವರು ಆತಂಕ ಸಂದಿಗ್ದತೆಯಲ್ಲಿ ಇದ್ದಾರೆ. ವರ್ಷ ಪೂರ್ತಿ ಅಭ್ಯಾಸ ಮಾಡಿದ್ದು ಮೂರೇ ಮೂರು ಗಂಟೆಯಲ್ಲಿ ಅಭಿವ್ಯಕ್ತಡಿಸಿ ಸಾಮರ್ಥ್ಯ ಒರೆಗೆ ಹಚ್ಚಬೇಕಾದ ಕಾಲ ಸನ್ನಿಹಿತವಾಗಿದೆ. ಶೈಕ್ಷಣಿಕ ಕವಲುದಾರಿ ಅರಸಿ, ಆರಿಸಿಕೊಂಡು ಕನಸು ಗುರಿ ನಿರ್ಧರಿಸಿಕೊಂಡು ಹಸನಾದ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕಿದೆ.

ಕೊವಿಡ್ -19 ಸಾಂಕ್ರಾಮಿಕ ರೋಗದ ಕಂಟಕ ಎಲ್ಲಡೆಯೂ ಆವರಿಸಿದ ಪರಿಣಾಮ, ಶಾಲಾ ಆರಂಭದಲ್ಲೇ ಅಧ್ಯಯನದಲ್ಲಿ ನಿರತರಾದ ಮಕ್ಕಳಿಗೆ ಒಂದಿಷ್ಟು ಭಯ ಆತಂಕ ಹುಟ್ಟಿತ್ತು. ಈ ವರ್ಷದ ಬೋರ್ಡ್ ಪರೀಕ್ಷೆ ಎದುರಿಸುವ ಮಕ್ಕಳು ಒಂಭತ್ತನೇ ತರಗತಿಯಲ್ಲಿ ಬಹುತೇಕ ಒಂದು ವರ್ಷ ಶಿಕ್ಷಣದಿಂದ ವಂಚನೆಗೆ ಒಳಗಾದವರು. ಹೀಗಾಗಿ ಒಂದಿಷ್ಟು ಆತಂಕ ಎಲ್ಲರಲ್ಲೂ ಸಹಜ. ಆದರೆ, ಪೋಷಕರು, ಮಕ್ಕಳು ಹೆದರುವ ಅಗತ್ಯವಿಲ್ಲ. ಅಂತಿಮ ಹಂತದ ಸಿದ್ಧತೆ, ತಯಾರಿಯಲ್ಲಿ ಕೊಂಚ ಯಾಮಾರಿದರೂ ನಿರೀಕ್ಷಿತ ಫಲಿತಾಂಶ ಬರದೇ ಹೋಗಬಹುದು. ಹೀಗಾಗಿ ಮಕ್ಕಳೇ ಸ್ವಯಂ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಮೂಲಕ ಪರೀಕ್ಷೆ ಬರೆಯಲು ಸನ್ನದ್ದರಾಗಿದ್ದಿರಿ. ಯಾವ ಆತಂಕ ಭಯ ದುಗುಡವಿಲ್ಲದೇ ಶಾಲೆಯಲ್ಲಿ ಬರೆಯುವ ಪರೀಕ್ಷೆಯಂತೆಯೇ ಸಹಜವಾಗಿ ಬೋರ್ಡ್ ಪರೀಕ್ಷೆ ಎದುರಿಸಿರಿ. ಈ ಒಂದಿಷ್ಟು ಮುನ್ನಚ್ವರಿಕೆಯ ಅಗತ್ಯ ಕ್ರಮ ಅನುಸರಿಸಿರಿ. ಯಶಸ್ಸು ಖಂಡಿತಾ ನಿಮ್ಮದಾಗುವದು.

ಅಂತಿಮ ಗುರಿ ತಲುಪಿ ಕನಸು ನನಸಾಗುವ ಕಾಲದಲ್ಲಿ, ಆತಂಕ ಭಯ ಬೇಡ. ಇರುವ ಒಂದೆರಡು ದಿನಗಳಲ್ಲಿ ಸಮಯಾವಕಾಶವನ್ನು ಅತ್ತ್ಯುತ್ತಮವಾಗಿ ಸದುಪಯೋಗ ಪಡಿಸಿಕೊಳ್ಳಿರಿ. ಈ ಮೂಲಕ ಪರೀಕ್ಷೆಯಲ್ಲಿ ಉತ್ತಮ‌ಸಾಧನೆ ಮಾಡಲು ಪ್ರಯತ್ನಿಸಿ.

ಪರೀಕ್ಷೆ ಮುನ್ನಾ ದಿನ, ಪರೀಕ್ಷೆ ಆರಂಭ ಆಗುವ ಮೊದಲು, ಹಾಗೂ ಪರೀಕ್ಷೆ ಬರೆಯುವಾಗ ಮಕ್ಕಳು ಏನು ಮಾಡಬೇಕು ಎನ್ನುವ ಕೆಲವು ಮುಖ್ಯ ಟಿಪ್ಸ್ ಇಲ್ಲಿ ನೀಡಲಾಗಿದೆ. ಇವು ನಿಮಗೆ ಸಹಾಯಕ್ಕೆ ಬರಬಹುದು.

ಪರೀಕ್ಷೆ ಆರಂಭದ ಹಿಂದಿನ ದಿನ

ಪರೀಕ್ಷೆ ಆರಂಭವಾಗುವ ಮುನ್ನಾದಿನ ಒಂದಿಷ್ಟು ಪೂರ್ಷ ಸಿದ್ಧತೆ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲ ಆತಂಕ ಉಂಟಾಗುವದಿಲ್ಲ. ಪರೀಕ್ಷೆ ಸುಲಭವಾಗಿ ಎದುರಿಸಲು ಸಹಕಾರಿಯಾಗುವದು.
*ಎರಡು ಪೆನ್ನು, ಪೆನ್ಸಿಲ್, ಉದ್ದದ ಸ್ಕೆಲ್, ಜಾಮಿಟ್ರಿ ಬಾಕ್ಸ್, ಸಿದ್ದಪಡಿಸಿಕೊಳ್ಳಿರಿ.
*ಪ್ರವೇಶ ಪತ್ರ ಸೂಕ್ತ ಸ್ಥಳದಲ್ಲಿ ಇಟ್ಟು ಕೊಳ್ಳಿ.
*ಉತ್ತಮವಾದ ಕ್ಲಿಪ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿರಿ.
*ಸುಲಭವಾಗಿ ಜಿರ್ಣವಾಗುವ ಆಹಾರ ಸೇವಿಸಿ.
* ಅತಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಡಿ.
*ರಾತ್ರಿ ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು ನಿದ್ದೆ ಮಾಡಿ.
*ಸಾಮಾನ್ಯ ಕೈ ಗಡಿಯಾರವೊಂದು ಇಟ್ಟುಕೊಳ್ಳಿ.
*ಪ್ರಶ್ನೆಪತ್ರಿಕೆ ಸೋರಿಕೆ, ಗಾಸಿಪ್ ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
* ಯಾರೊಂದಿಗೂ ಜಗಳ ಕಾಯಬೇಡಿ.
* ರಿಲ್ಯಾಕ್ಸ್ ಮೂಡ್ ನಲ್ಲಿ ಇರಿ.
*ಹೆಚ್ಚು ಪಾನಿಯ ರೂಪದ ಆಹಾರ ಸೇವನೆ ಮಾಡಿ.
* ಪರೀಕ್ಷೆ ಬರೆದ ನಂತರ ಆ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವದು ತರವಲ್ಲ.
* ನಕಾರಾತ್ಮಕ ಧೋರಣೆ ಯಾರೋ ಸಹಾಯ ಸಹಕಾರ ಮಾಡುತ್ತಾರೆ ಎಂದು ನಂಬಬೇಡಿ.
*ಪರೀಕ್ಷೆ ನಡೆಯುವ ದಿನಗಳಲ್ಲಿ ರಜೆ ಬಂದಾಗ ಆ ದಿನ‌ ಸದ್ಬಳಕೆ ಮಾಡಿಕೊಳ್ಳಿ.
* ಅನಗತ್ಯ ಸಿಟ್ಟು ಮಾಡಿಕೊಳ್ಳಬೇಡಿ.
*ಪರೀಕ್ಷೆ ಹೇಗೆ ನಡೆಯುವದೊ, ಓದಿದ್ದು ಬರುವದೊ ಇಲ್ಲವೊ, ಎಂಬ ಆತಂಕಕ್ಕೆ ದುಗುಡಕ್ಕೆ ಒತ್ತಡಕ್ಕೆ ಒಳಗಾಗಬೇಡಿ.
*ಆತ್ಮವಿಶ್ವಾಸ ವಿರಲಿ. ಅತಿ ವಿಶ್ವಾಸ ಬೇಡ. ಜೊತೆಗೆ ಒಂದಿಷ್ಟು ಜಾಗೃತಿ ಇರಲಿ.
*ಉಢಾಫೆ ಬೇಜವಾಬ್ದಾರಿ ಬೇಡ ತೀಳುವಳಿಕೆ ಇರಲಿ.
* ಮುಖ್ಯಾಂಶಗಳು, ಕೀ ಪೈಂಟ್, ರಿವಿಜನ್ ಮಾಡಿರಿ.
*ಜಾತ್ರೆ ಸಭೆ ಸಮಾರಂಭ ಎಂದು ಕಾಲ ಹರಣ ಮಾಡಬೇಡಿ
*ಪ್ರಶ್ನೆ ಪತ್ರಿಕೆ ವಿನ್ಯಾಸ ಮಾದರಿ ಪಶ್ನೆ ಒಮ್ಮೆ ಕಣ್ಣಾಡಿಸಿರಿ.
*ಅತಿ ಹುರುಪು ಅತಿ ಆಲಸ್ಯೆ, ಹುಂಬುತನ ಮಾಡಬೇಡಿ.
* ಶಿಕ್ಷಕರಿಂದ ಅಂತಿಮ ಮಾರ್ಗದರ್ಶನ ಸಲಹೆ ಸೂಚನೆ ಪಡೆಯಿರಿ.
* ಅಗತ್ಯ ಎನಿಸಿದರೆ ಬೋರ್ಡ್ ಸಹಾಯವಾಣಿ ಸಂಪರ್ಕಿಸಿ.
*ಮನೆಯ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಗೆ ಹಚ್ಚಿಕೊಳ್ಳುವದು ಬೇಡ.
* ನಿಮ್ಮ ಪರೀಕ್ಷೆ ಕೇಂದ್ರ ಖಚಿತ ಪಡಿಸಿಕೊಳ್ಳಿ
* ಪರೀಕ್ಷಾ ನಿಯಮಗಳನ್ನು ತಿಳಿದುಕೊಳ್ಳಿರಿ.
* ಪರೀಕ್ಷೆ ಹಾಲ್ ನಲ್ಲಿ ಹೇಗೆ ವರ್ತಿಸಬೇಕು ಎನ್ನುವ ಸಾಮಾನ್ಯ ಅರಿವಿರಲಿ.
*ಪರೀಕ್ಷೆ ಬರೆಯುವಾಗ ಎದುರಾಗಬಹುದಾದ ಸಮಸ್ಯೆ ಗೊಂದಲಗಳಿಗೆ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಿ.
* ಪರೀಕ್ಷಾ ಕೇಂದ್ರದಲ್ಲಿ ನೀಡುವ ಸೂಚನೆಗಳು ಅರಿಯಿರಿ.
* ವಿಷಯದ ಸಂದೇಹ, ಗೊಂದಲಗಳಿದ್ದರೆ, ಸ್ನೇಹಿತರೊಂದಿಗೆ ಗುಂಪು ಚರ್ಚೆ ಮಾಡಿ.

ಪರೀಕ್ಷೆ ಆರಂಭವಾಗುವ ಮೊದಲು

ಪರೀಕ್ಷೆ ದಿನ ಬಂದೇ ಬಿಟ್ಟಿತು. ಎಷ್ಟು ಅಭ್ಯಾಸ ಮಾಡಿದೆ ಎನ್ನುವದಕ್ಕಿಂತ, ಹೇಗೆ ಪರೀಕ್ಷೆ ಬರೆಯ ಬೇಕು ಎನ್ನುವದು ಬಹು ಮುಖ್ಯವಾಗುವದು. ಹೀಗಾಗಿ ಪರೀಕ್ಷೆಯ ದಿನ ಒಂದಿಷ್ಟು ಸಿದ್ಧತೆಯಾಗುವದು ಅಗತ್ಯ.
*ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪಿರಿ.
*ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಓದು ನಿಲ್ಲಿಸಿ.
* ಹಿತ ಮಿತ ಆಹಾರ ಸೇವಿಸಿ.
* ಶುಭ್ರ ಹಿತಕರವಾದ ಬಟ್ಟೆ ಧರಿಸಿ.
*ಲೇಖನ ಸಾಮಗ್ರಿ ಅಂತಿಮವಾಗಿ ಚಕ್ ಮಾಡಿಕೊಳ್ಳಿರಿ.
* ಪರೀಕ್ಷೆ ಕೊಠಡಿ ಪ್ರವೇಶ ಮುನ್ನ ಒಮ್ಮೆ ಏನಾದರೂ ಸ್ಲಿಪ್, ಬರಹ ಇದೆ ಚಕ್ ಮಾಡಿ ತಗೆದು ಹಾಕಿಬಿಡಿ.
*ಪ್ರವೇಶ ಪತ್ರ ಹೊಂದಿಸಿಕೊಳ್ಳಿರಿ.
* ಒತ್ತಡ ದುಗುಡ ಆತಂಕ‌ ಭಯ ಬೇಡ ರಿಲ್ಯಾಕ್ಸ್ ಆಗಿರಿ.
*ಪರೀಕ್ಷಾ ಕೊಠಡಿ ಪ್ರವೇಶ ಮಾಡಿದ ಮೇಲೆ ಯಾರೊಂದಿಗೂ ಮಾತಿಗಿಳಿಯಬೇಡಿ.
* ಕುಳಿತ ಆಸನ ಸಂಖ್ಯೆ, ಪ್ರವೇಶ ಪತ್ರ ಸಂಖ್ಯೆ ಎರಡೂ ಒಂದೇ ಎನ್ನುವದು ಖಚಿತಪಡಿಸಿಕೊಳ್ಳಿ.
* ಆಸನ ಸ್ಥಳದಲ್ಲಿ ‌ಕುಳಿತು ಒಂದೆರಡು ನಿಮಿಷ ಧ್ಯಾನ ಮಾಡಿ. ದಿರ್ಘವಾಗಿ ಉಸಿರಾಡಿ.
*ಕೊಠಡಿ ಮೇಲ್ವಿಚಾರಕರಿಗೆ ನಿಮ್ಮ ಅಗತ್ಯ ಮಾಹಿತಿ ನೀಡಿ.
* ಉತ್ತರ ಪತ್ರಿಕೆಯು ಬರೆಯಲು ಯೋಗ್ಯವಾಗಿದೆಯೆ ಎಂದು ಖಚಿತ ಪಡಿಸಿಕೊಳ್ಳಿರಿ.
* ಪ್ರಶ್ನೆ ಪತ್ರಿಕೆ ಒಮ್ಮೆ ಪೂರ್ಣ ಓದಿಕೊಳ್ಳಿರಿ.
* ಪ್ರತಿ ಉತ್ತರಕ್ಕೂ ಅಂದಾಜು ಸಮಯ ನಿಗದಿ ಪಡಿಸಿಕೊಳ್ಳಿ.
* ಅಗತ್ಯ ಏನಿಸಿದರೆ ಒಂದು ಚಿಕ್ಕ ಬಾಟಲ್ ನೀರು ಜೊತೆಗಿರಲಿ.
* ಸಣ್ಣ ಕರವಸ್ತ್ರ ಜೋತೆಗೆ ಇಟ್ಟುಕೊಳ್ಳಿರಿ
*ಉತ್ತರ ಪತ್ರಿಕೆಯ ಸೂಕ್ತ ಸ್ಥಳದಲ್ಲಿ ನೊಂದಣಿ ಸಂಖ್ಯೆ, ಅಗತ್ಯ ಮಾಹಿತಿ ತುಂಬಿರಿ.
*ಪರೀಕ್ಷೆ ಆರಂಭದಲ್ಲೆ ಆತಂಕ ಭಯ ಖಿನ್ನತೆಗೆ ಒಳಗಾಗಬೇಡಿ.
*ಕೊಠಡಿ ಒಳಗೆ ಮೊಬೈಲ್ ಪೋನ್ ಡಿಜಿಟಲ್ ವಾಚ್ ಬ್ಲ್ಯೂಟುತ್ ಅಂತ ಸಾಮಗ್ರಿ ತಗೆದುಕೊಂಡು ಹೋಗುವಂತಿಲ್ಲ.
* ವೈಯಕ್ತಿಕ ಸ್ವಚ್ಚತೆ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ

ಪರೀಕ್ಷೆ ಬರೆಯುವಾಗ ಒಂದಿಷ್ಟು ಸಲಹೆಗಳು

ಉತ್ತರ ಬರೆಯುವದು ಒಂದು ಸ್ಕಿಲ್. ಎಷ್ಟು ಓದಿದ್ದೇವೆ ಅರ್ಥೈಸಿಕೊಂಡಿದ್ದೇವೆ ಎನ್ನುವದಕ್ಕಿಂತ ಹೇಗೆ ಉತ್ತರ ಬರೆದಿದ್ದೇವೆ ಎನ್ನುವದು ಬಹು ಮುಖ್ಯ. ನಿಗದಿತ ಮೂರು ಗಂಟೆಯಲ್ಲಿ ವ್ಯವಸ್ಥಿತವಾಗಿ, ಮೌಲ್ಯಮಾಪಕರು ನಿರೀಕ್ಷಿಸುವ ರೀತಿಯಲ್ಲಿ ಉತ್ತರ ಬರೆಯುವದು ಅತ್ಯಗತ್ಯ. ಆಗಲೇ ಹೆಚ್ಚು ಅಂಕ ಪಡೆಯಸು ಸಾಧ್ಯ. ಅತ್ಯುತ್ತಮ ಉತ್ತರ ಬರೆಯಲು ಒಂದಿಷ್ಟು ಸಲಹೆಗಳು.
* ಆದಷ್ಟು ಕ್ರಮವಾಗಿಯೇ ಉತ್ತರ ಬರೆಯಿರಿ.
*ಉತ್ತರವು ನಿಖರ, ನಿರ್ದಿಷ್ಟ, ಸ್ಪಷ್ಟವಾಗಿರಲಿ.
* ಅಗತ್ಯಕ್ಕಿಂತ ಹೆಚ್ಚು ಉತ್ತರ ಬರೆದು ಸಮಯ ಹಾಳು ಮಾಡಿಕೊಳ್ಳಬೇಡಿ.
*ಬರವಣಿಗೆ ಶುದ್ದವಾಗಿ ಅಂದವಾಗಿ ಆಕರ್ಷಣಿಯವಾಗಿರಲಿ.
*ಪ್ರತಿ ಉತ್ತರದ ನಡುವೆ ಎರಡು ಲೈನ್ ಗಳ ಅಂತರವಿರಲಿ.
*ಚಿತ್ರ, ನಕ್ಷೆಗೆ ಮಾತ್ರ ಪೆನ್ಸಿಲ್ ಬಳಸಿ.
* ಕಪ್ಪು ಅಥವಾ ನೀಲಿ ಪೆನ್ನು ಮಾತ್ರ ಬರವಣಿಗೆಗೆ ಬಳಸಿ.
*ಪೆನ್ನು ಬದಲಿಸುವ ಮುನ್ನ ಮೇಲ್ವಿಚಾರಕರಿಂದ ಅನುಮತಿ ಪಡೆಯಿರಿ.
* ಗೊಂದಲಕ್ಕಿಡುಮಾಡುವ ತಿರುಚಿದ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಂಡು ನಂತರ ಉತ್ತರಿಸಿ.
*ಉತ್ತರ ಪತ್ರಿಕೆಯಲ್ಲಿ ಯಾವುದೇ ಧಾರ್ಮಿಕ ಚಿನ್ನೆ ಹೆಸರು ಹಾಕಬೇಡಿ.
* ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಬರಹ, ಗುರುತು ಮಾಡಬೇಡಿ
*ಎಡಿಷನಲ್ ಹಾಳೆ ಕಟ್ಟುವಾಗ ಅಗತ್ಯ ಮಾಹಿತಿ ತುಂಬಿರಿ.
* ಆಸನ ಬಿಟ್ಟು ಕದಲಬೇಡಿ ಅನಗತ್ಯವಾಗಿ ನಿಲ್ಲಬೇಡಿ.
* ಮೂರು- ನಾಲ್ಕು ಅಂಕದ ಪ್ರಶ್ನೆ ಉತ್ತರಿಸುವಾಗ ಸಮಯ ನಿಗದಿಪಡಿಸಿಕೋಳ್ಳಿರಿ.
*ಹದಿನೈದು ನಿಮಿಷ ಮೊದಲೇ ಎಲ್ಲವೂ ಉತ್ತರಿಸಿ ಬಿಡಿ
*ಕೊನೆಯ ಹದಿನೈದು ನಿಮಿಷ ಉತ್ತರ ಪತ್ರಿಕೆ ಪುನ:ಪರೀಶಿಲಿಸಿ.
*ಅಗತ್ಯ ಇರುವ ಕಡೆ ಮೇಲ್ವಿಚಾರಕರ ಸಹಿ ಪಡೆಯಿರಿ.
* ಬಹು ಅಂಶ ಆಯ್ಕೆ ಉತ್ತರ ಒಮ್ಮೆ ಮಾತ್ರ ಉತ್ತರಿಸಿ ಚಿತ್ತು ಮಾಡಬೇಡಿ

*ಎ ಎಂ ಎಲ್ , ನಾಮಿನಲ್ ರೋಲ್ ಗೆ ಸಹಿ ಮಾಡುವದು ಮರೆಯದಿರಿ.
*ಉತ್ತರದ ಮುಖ್ಯಾಂಶಗಳಿಗೆ ಅಗತ್ಯವಿರುವಡೆ ಅಡಿಗೆರೆ ಹಾಕಿರಿ.
*ಉತ್ತರರಿಸಿದ ಮೇಲೆ ಮುಕ್ತಾಯ ಎಂದು ಬರೆಯಿರಿ.
*ಒಂದು ಎರಡು ಮೂರು ಅಂಕದ ಪ್ರಶ್ನೆ ಶಿಕ್ಷಾರ್ಹ ಅಪರಾಧವಾಗಿದೆ ಮಾಡಬೇಡಿ.
* ಕುಳಿತ ಆಸನದ ಸುತ್ತ ಮುತ್ತ ಹಾಳೆ ಬರವಣಿಗೆ ಏನಾದರೂ ಇದ್ದರೆ, ಮೇಲ್ವಿಚಾರಕರ ಗಮನಕ್ಕೆ ತನ್ನಿ
* ಪ್ರಶ್ನೆ ಸಂಖ್ಯೆ ದೊಡ್ಡದಾಗಿ ನಮೂದಿಸಿ.
*ಪರೀಕ್ಷೆ ಆರಂಭ ನಂತರದ ಅರ್ಧಗಂಟೆ ಶೌಚಕ್ಕೆ ಹೋಗಲು ಅವಕಾಶವಿಲ್ಲ ಎಂದು ತಿಳಿಯಿರಿ.
* ಉತ್ತರಿಸುವಾಗ ವ್ಯಾಕರಣಾಂಶಗಳತ್ತ ಗಮನ ಹರಿಸಿ
*ಕೊಠಡಿಯೊಳಗೆ ಬಂದು ಹೋಗುವ ಅಧಿಕಾರಿಗಳತ್ತ ಗಮನ ಹರಿಸುವದು ಬೇಡ.
ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಯಾವತ್ತೂ ಸಿಕ್ಕೆ ಸಿಗುತ್ತದೆ . ಅರ್ಹತೆ ಸಾಮರ್ಥ್ಯ ವರೆಗೆ ಹಚ್ಚಿ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡಿದರೆ, ಖಂಡಿತ ಉತ್ತಮ‌ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ. ಉಜ್ವಲ ಭವಿಷ್ಯ ನಿರ್ಮಾಣದ ಮೊದಲ ಘಟ್ಟ ದಾಟಿ, ಉನ್ನತ ಶಿಕ್ಷಣದ ರಹದಾರಿ ಪ್ರವೇಶಿಸಿ ಯಶಸ್ಸು ಸಾಧಿಸಿ. ಸುಂದರ ಬದುಕು ಕಟ್ಟಿಕೊಳ್ಳವ ಪ್ರಯತ್ನ ನಿಮ್ಮದಾಗಲಿ ಎಂದು ಶುಭ ಹಾರೈಸುವೆ.

Wednesday 23 March 2022

*ನಿಮ್ಮ ಶೇ. 70ಕ್ಕಿಂತ ಹೆಚ್ಚು ಭಾರ ಹೊರುವುದು ನಿಮ್ಮ ಸ್ನಾಯುಗಳು - ಮೂಳೆಗಳಲ್ಲ!*

🦢   _*ಅಮೃತಾತ್ಮರೇ, ನಮಸ್ಕಾರ*
••••••••••••••••••••••••••••••••••••••••••••
  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-91*_
     _*ದಿನಾಂಕ: 24.03.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
  _*ನಿಮ್ಮ ಶೇ. 70ಕ್ಕಿಂತ ಹೆಚ್ಚು ಭಾರ ಹೊರುವುದು ನಿಮ್ಮ ಸ್ನಾಯುಗಳು - ಮೂಳೆಗಳಲ್ಲ!*_
••••••••••••••••••••••••••••••••••••••••••••
  _ಇಂದು ಎಲ್ಲಾ ಕೀಲುನೋವು, ಬೆನ್ನು ನೋವುಗಳಿಗೆ, ಮೂಳೆ ಸವೆದಿದೆ, ಡಿಸ್ಕ್ ಒಣಗಿದೆ -- ಇಂತಹ ಮಾತುಗಳನ್ನು ಸ್ವತಃ ವೈದ್ಯರ ಬಾಯಲ್ಲಿ ಕೇಳುತ್ತೇವೆ ಮತ್ತು ಅವುಗಳನ್ನೇ ದೃಢವಾಗಿ ನಂಬಿದ್ದೇವೆ!!_

*ವೈಜ್ಞಾನಿಕ ಸತ್ಯ ಏನು?*
  _ಸಾಂಪ್ರದಾಯಿಕ ನೋವು ನಿವಾರಕಗಳು ಮತ್ತು ಆಯುರ್ವೇದ ಸಹಾಯ ರಹಿತ ಕೇವಲ ಫಿಜಿಯೋಥೆರಪಿಗಳು ತಾತ್ಕಾಲಿಕ ಪರಿಹಾರವನ್ನು ನೀಡಬಲ್ಲವು._

  _ಶರೀರದ ಚಲನೆಯುಳ್ಳ ಯಾವುದೇ ಸಂಧಿಗಳಲ್ಲಿ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ, ಹತ್ತಿರವೂ ಇಲ್ಲ. ಈ ಎರಡು ಅಥವಾ ಮೂರು ಮೂಳೆಗಳನ್ನು ಬಿಗಿಯಾಗಿ ಹಿಡಿದು ಒಂದು ಸಂಧಿಯನ್ನು ಮಾಡಿರುವುದು ನಮ್ಮ ಸ್ನಾಯುಗಳು, ಇವುಗಳ ದುರ್ಬಲತೆಯೇ ಸಂಧು ಮತ್ತು ಬೆನ್ನು ನೋವುಗಳು!!_ 🤔

*ಉದಾಹರಣೆಗೆ:*
  _ಸೊಂಟದ ನೋವಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ MRI Scanning ಮಾಡಿಸಿ, ಡಿಸ್ಕ್ ಒಡೆದಿದೆ, ಒಣಗಿದೆ, ನರಗಳು ಒತ್ತಿ ನೋವು ಬಂದಿದೆ, ಶಸ್ತ್ರಚಿಕಿತ್ಸೆ ಬೇಕು ಎಂದು ಟಿಪ್ಪಣಿ ಬರೆಯುತ್ತಾರೆ._

  _ಸರಿ, ಸೊಂಟದ ಮೂಳೆಯ ರಚನೆ ನೋಡೋಣ -- ಅಲ್ಲಿ L5, S1, Left Hip bone, Right Hip bone ಇಷ್ಟು ಮೂಳೆಗಳು ಒಂದೊಂದು ನಿರ್ದಿಷ್ಟ ಅಂತರದಲ್ಲಿ ಸ್ಥಿತವಾಗಿ ನಿಂತಿರಲು, ನಮ್ಮ ಶರೀರದ ಭಾರವನ್ನು ಕಾಲುಗಳಿಗೆ ವರ್ಗಾಯಿಸಲು ಕಾರಣವಾಗಿರುವುದು ಅಲ್ಲಿನ ಬಲವಾದ ಆದರೆ ಮೃದುವಾದ ಚಲನೆಗೆ ಹೊಂದಿಕೊಳ್ಳುವ ಸ್ನಾಯುಗಳು!! ಇದು ಬಹುಜನರಿಗೆ ಗೊತ್ತಿಲ್ಲ, ಇಲ್ಲಿ ಒಂದು ಮೂಳೆಗೆ ಇನ್ನೊಂದು ಭಾರ ವರ್ಗಾಯಿಸುವುದು ಇದೇ ಸ್ನಾಯುಗಳಿಂದಲೇ ಹೊರತೂ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ._
 
*ಹಾಗೆಯೇ:*
  _ಮೊಣಕಾಲಿನಲ್ಲಿ, Femur, Tibia, Patella ಮತ್ತು Fibula ಎಂಬ ಮೂಳೆಗಳನ್ನು ಹಿಡಿದಿಡಲು 4+2 ಸ್ನಾಯುಗಳು ಕೆಲಸ ಮಾಡುತ್ತವೆ._ *ಅವುಗಳೆಂದರೆ* - 
  _Anterior Cruciate Ligament (ACL)_ 

  _Posterior Cruciate Ligament (PCL)_ 

  _Medial Collateral Ligament (MCL)_

  _Lateral Collateral Ligament (LCL)_

  _Fibular Collateral Ligament (FCL)_
*ಮತ್ತು*
  _Coronary Ligaments._

  _ಮೊದಲ ನಾಲ್ಕು ಪ್ರಮುಖವಾಗಿ ಮತ್ತು ಕೊನೆಯ ಎರಡು ಸಹಾಯಕರಾಗಿ ನಮ್ಮ‌ ಇಡೀ ಶರೀರದ ಭಾರವನ್ನು ಭೂಮಿಗೆ ವರ್ಗಾಯಿಸುತ್ತವೆ, ನಮ್ಮ ಮೊಣಕಾಲು ಮಡಿಚಿ ಕುಕ್ಕರಗಾಲಿನಲ್ಲಿ ಕುಳಿತಾಗಲೂ!! ಅಂದರೆ ಭಾರ ಹೊರುತ್ತಿರುವುದು ಮೂಳೆಗಳೋ, ಸ್ನಾಯುಗಳೋ? ಅಂದರೆ, ಚಿಕಿತ್ಸೆಗೆ ಕ್ಯಾಲ್ಸಿಯಂ ಬೇಕೋ, ಸ್ನಾಯುವಿಗೆ ತೈಲ ಬೇಕೋ?!_ 🤔
            •~•~•~•~•

  _ವಿಜ್ಞಾನ ಕೃತಕತೆಗೆ ಶರಣಾಗಿ ಹೋಗಿದೆ. ಅದು ತನ್ನ ಕೃತಕ ಪ್ರತಿಕೃತಿಯನ್ನು ಸೃಷ್ಟಿಸುವ ಅಸಂಬದ್ಧಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದೇವೆ._ 🙄

  _ಸತ್ಯವನ್ನು ಬಚ್ಚಿಟ್ಟು ಶಸ್ತ್ರಚಿಕಿತ್ಸೆ ಒಂದೇ ದಾರಿ ಎಂದು ಕೇಳಿಸಿಕೊಂಡು ನಂಬುವ ನಾವು ತಾರ್ಕಿಕ ಯೋಚನೆಯತ್ತ ಮುಖ ಮಾಡಬೇಕಿದೆ._ 🤔

*ಚಿಕಿತ್ಸೆ ಏನು:?*
  _ನಿಮ್ಮ ಆಹಾರಗಳಿಂದ ಸ್ನಾಯುಗಳನ್ನು ದುರ್ಬಲಗೊಳಿಸಬೇಡಿ. ಸದೃಢ ಸ್ನಾಯುಗಳು ಕೇವಲ ಪೋಷಕಾಂಶಗಳಿಂದ ಬರುವುದಿಲ್ಲ, ಜೊತೆಗೆ ವ್ಯಾಯಾಮ ಬೇಕು. ಹೆಚ್ಚು ಗಮನೀಯ ಅಂಶ ಎಂದರೆ, ಮಾನಸಿಕ ಒತ್ತಡ ಇದ್ದಾಗ ಬೆನ್ನು ನೋವು ಹೆಚ್ಚು ಅಲ್ಲವೇ? ನಮ್ಮ ಮನಸ್ಸು ಕ್ಷೋಭೆಗೊಂಡ ತಕ್ಷಣ ಮುಖದ ಆಕಾರ ಬದಲಾಗಲು ಕಾರಣ ಅಲ್ಲಿನ ಸ್ನಾಯುಗಳು, ಹಾಗೆಯೇ ಹೃದಯದ, ಬೆನ್ನು, ಕೈಕಾಲುಗಳ ಸ್ನಾಯುಗಳನ್ನೂ ಸೇರಿ ನಮ ಶರೀರದ ಸರ್ವ ಸ್ನಾಯುಗಳೂ ಸಂಕೋಚಗೊಳ್ಳುತ್ತವೆ. ನೋವು ಬಾರದಿರಲು ಸಾಧ್ಯವೇ?_

  _ನೀವು ಖುಷಿಯಾಗಿ, ಮನಸ್ಸು ಪ್ರಸನ್ನವಾಗಿ, ಪ್ರವಾಸದಲ್ಲಿದ್ದಾಗ ನಿಮ್ಮ ಬೆನ್ನು ನೋವು ಇತ್ತೇ? ಗಮನಿಸಿ ನೋಡಿ..._ 🤭
   ~_ಮಾ ಶಾರದಾದಾಸ_
••••••••••••••••••••••••••••••
   🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴

Tuesday 22 March 2022

SSLCಪರೀಕ್ಷೆ ತಯಾರಿ ಹೀಗಿದ್ದರೆ ಉತ್ತಮ....

*ಪರೀಕ್ಷೆ ತಯಾರಿ ಹೀಗಿರಲಿ*
  
ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸ್ಸಿನಲ್ಲೂ ಅದೇ ವಿಷಯ, ಪರೀಕ್ಷೆ ಹತ್ತಿರ ಬಂದಾಗ ಏನು ಓದುವುದೆಂದೇ ತಿಳಿಯುವುದಿಲ್ಲ, ಓದಿದ್ದು ತಲೆಗೆ ಹೋಗುವುದಿಲ್ಲ, ಓದುತ್ತಾ ಕುಳಿತರೆ ನಿದ್ದೆ ಬಂದು ಬಿಡುತ್ತದೆ. ಈ ರೀತಿಯ ಮಾತುಗಳನ್ನು ವಿದ್ಯಾರ್ಥಿಗಳು ಹೇಳುವುದುಂಟು. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಭಯದಿಂದ ಒತ್ತಡ, ಖಿನ್ನತೆ, ಪೂರ್ಣವಾಗಿ ಆರೋಗ್ಯವೂ ಕೆಟ್ಟು ಹೋಗುತ್ತದೆ. ಪರೀಕ್ಷಾ ಜ್ವರ ಯಾರನ್ನೂ ಬಿಟ್ಟಿದ್ದಿಲ್ಲ.

ಆದರೆ ಇದರ ಹಿಂದಿನ ಕಾರಣವೂ ಮುಖ್ಯವಲ್ಲವೇ? ಮೊದಲೇ ಇದು ಸ್ಪರ್ಧಾ ಯುಗ, ಹೆಚ್ಚು ಅಂಕ ಗಳಿಸಬೇಕು, ಕಡಿಮೆ ಅಂಕ ಗಳಿಸಿದರೆ ಬೇರೆಯವರೊಂದಿಗೆ ಹೋಲಿಸುತ್ತಾರೆ. ಅಲ್ಲಿ ನಿರಾಕರಣೆಯ ಭಯದ ಜೊತೆಗೆ ಅನಾಥ ಭಾವ ಮೂಡಿ ಬಿಡುತ್ತದೆ. ಫಲಿತಾಂಶ ಚೆನ್ನಾಗಿ ಬಾರದಿದ್ದರೆ ಎಲ್ಲರಿಗೂ ಮುಖ ತೋರಿಸುವುದು ಹೇಗೆ ಎನ್ನುವ ಅಂಜಿಕೆ ಮೂಡುತ್ತದೆ.

ಎಲ್ಲ ವಿದ್ಯಾರ್ಥಿಗಳ ಸಮಸ್ಯೆಯೂ ಒಂದೇ ಅದೇನೆಂದರೆ ಓದಿದ್ದು ನೆನಪಿನಲ್ಲಿಯೇ ಉಳಿಯುವುದಿಲ್ಲ ಎಂಬುದು. ಕಾರಣ ಓದುವ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದಿಲ್ಲ. ಓದಿದ ನಂತರ ಮತ್ತೆ ಪುನಾರಾವರ್ತನೆ ಮಾಡುವ ಬಗ್ಗೆಯೂ ಯೋಚಿಸಿರುವುದಿಲ್ಲ. ಒಂದೇ ಸಮನೆ ಓದಿ ಬಿಟ್ಟರಾಯಿತೇ, ಸರಿಯಾದ ವಿಶ್ರಾಂತಿಯೂ ಅಗತ್ಯ. ಪರೀಕ್ಷೆಗಾಗಿ ಓದುವ ಬಗ್ಗೆ ಸಮರ್ಪಕವಾದ ಯೋಜನೆಯನ್ನು ರೂಪಿಸಿಕೊಳ್ಳಿ.

ಓದಲು ಸಮರ್ಪಕ ಯೋಜನೆ-ಟೈಮ್ ಟೇಬಲ್
ಪರೀಕ್ಷೆಗೆ ಇನ್ನೆಷ್ಟು ದಿನಗಳಿವೆ ಎಂದು ಯೋಚಿಸಿ, ದಿನದ 24ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. 12 ಗಂಟೆ ಓದು, ಏಳುಗಂಟೆ ನಿದ್ದೆ, ಊಟಕ್ಕೆ ಒಂದು ಗಂಟೆ, ಮನರಂಜನೆಗೆ ಒಂದು ಗಂಟೆ, ದಿನ ನಿತ್ಯದ ಕೆಲಸಗಳಿಗೆ ಒಂದು ಗಂಟೆ, ಹಾಗೂ ಇನ್ನೂ ಎರಡು ಗಂಟೆ ಉಳಿಯುತ್ತದೆ.

ಓದಿನ ಹನ್ನೆರಡು ಗಂಟೆಗಳನ್ನು ಸಮವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿಕೊಳ್ಳಿ. ಅದರಲ್ಲೇ ಓದು, ಬರವಣಿಗೆ ಮತ್ತು ಪುನಾರಾವರ್ತನೆಗೂ ಸಮಯ ಮೀಸಲಿಡಿ. ನೀವು ಹಾಕಿಕೊಂಡ ಟೈಮ್ ಟೇಬಲ್ ಪ್ರಾಮಾಣಿಕವಾಗಿ ಪಾಲಿಸಿ. ಪ್ರಗತಿಯನ್ನು ಗಮನಿಸಿ, ಸಮಾಧಾನಕರವಾಗಿಲ್ಲವೆನಿಸಿದರೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರೆಂದೇ ಅರ್ಥ.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು?
*ದಿನವೂ ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಕುಳಿತುಕೊಳ್ಳಿ. ಆ ವಾತಾವರಣಕ್ಕೆ ನಿಮ್ಮ ಮನಸ್ಸು ಹೊಂದಿಕೊಳ್ಳುತ್ತದೆ.
*ಮೊಬೈಲ್, ಟಿ.ವಿ. ಟ್ಯಾಬ್, ಕಂಪ್ಯೂಟರ್. ಎಲ್ಲವನ್ನೂ ಆರಿಸಿಬಿಡಿ.
*ಓದುವಾಗ ಯಾವ ರೀತಿಯಲ್ಲೂ ನಿಮಗೆ ತೊಂದರೆ ಕೊಡಬಾರದೆಂದು ಮನೆಯವರಿಗೆ ಹೇಳಿ.
*ಆ ಸಮಯದಲ್ಲಿ ಯಾವುದೇ ಫೋನ್, ಮೊಬೈಲ್ ಕರೆಗಳನ್ನು ಸ್ವೀಕರಿಸಬೇಡಿ.
*ಆದಷ್ಟು ಇತರ ಕಾರ್ಯಕ್ರಮಗಳಿಗೆ ಹೋಗದಿರಿ.
*ಕ್ರಿಕೆಟ್ ಪಂದ್ಯ ಮತ್ತು ಗೆಳೆಯ ಮತ್ತು ಗೆಳತಿಯರಿಂದ ಆದಷ್ಟು ದೂರವಿರಿ.

ಇಷ್ಟಾಗಿಯೂ ನಿಮಗೆ ಓದಲು ಏಕಾಗ್ರತೆ ಬರುತ್ತಿಲ್ಲವೇ ಹಾಗಾದರೆ ಕೆಲವು ವಿಧಾನಗಳನ್ನು ಪ್ರಯತ್ನಿಸಿ.
*ದೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳಿ
*ನಿಮ್ಮ ಅಂಗೈಗಳನ್ನು ಚೆನ್ನಾಗಿ ಉಜ್ಜಿಕೊಂಡು ಕಣ್ಣುಗಳ ಮೇಲಿಟ್ಟುಕೊಳ್ಳಿ
*ಬಗ್ಗುವ, ಕೈ ಕಾಲುಗಳನ್ನು ಚಾಚುವಂತಹ ವ್ಯಾಯಾಮವನ್ನು ಮಾಡಿ.
*ಮೆಲುವಾದ ಸಂಗೀತವನ್ನು ಕೇಳಿಸಿಕೊಳ್ಳಿ.
*ಪುನಾರವರ್ತನೆ ಮಾಡುವಾಗ ವೇಗವಾಗಿ ಓದಿ.

*ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳನ್ನು ದೊಡ್ಡದಾಗಿ ಬರೆದು ಓಡಾಡುವಾಗ ನಿಮ್ಮ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ.
*ನಿಮ್ಮ ಪಾಠಗಳನ್ನು ಮನಸ್ಸಿನಲ್ಲೇ ಊಹಿಸಿಕೊಳ್ಳಿ.
*ಗೆಲುವು ನಿಮ್ಮದೆನ್ನುವ ಭಾವ ಬೆಳೆಸಿಕೊಳ್ಳಿ.
ಓದುವಾಗ ಗಮನಿಸಬೇಕಾದ ಅಂಶಗಳು
*ಕಷ್ಟವಾಗಿರುವುದನ್ನು ಮೊದಲು ಓದಿ

*ಕಷ್ಟದ ವಿಷಯವೆಂದು ಇಂದು, ನಾಳೆ ಎಂದು ಮುಂದೂಡಬೇಡಿ. ಅಗತ್ಯವೆನಿಸಿದರೆ ನಿಮ್ಮ ಗೆಳೆಯ/ತಿ, ಶಿಕ್ಷಕರ ಸಲಹೆ ತೆಗೆದುಕೊಳ್ಳಿ.
*ನೀವು ಬರೆದುಕೊಂಡ ನೋಟ್ಸ್ ಅಲ್ಲದೆ ಮಿಕ್ಕ ಪುಸ್ತಕಗಳನ್ನೂ ಓದಿ.

*ಪರೀಕ್ಷೆಯ ಭಯದಲ್ಲಿ ಓದುತ್ತೇನೆಂದು ಗಂಟೆಗಟ್ಟಲೇ ಓದುವ ಅಗತ್ಯವಿಲ್ಲ. *5 ನಿಮಿಷಕ್ಕಿಂತ ಹೆಚ್ಚಾಗಿ ಒಂದೇ ಸಮನೆ ಓದಲಾಗದು ಅಥವಾ ಓದಿದರೂ ಅದು ತಲೆಯಲ್ಲಿ ಉಳಿಯಲಾರದು. ಆದ್ದರಿಂದ ಓದಿನ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ. ಮಧ್ಯೆ ವಿರಾಮದಲ್ಲಿ ಯಾರನ್ನಾದರೂ ಮಾತನಾಡಿಸಿ, ನಗಿಸಿ, ವಿರಮಿಸಿ, ಸ್ವಲ್ಪ ಹೊತ್ತು ಹೊರಗೆ ಹೋಗಿ, ಒಟ್ಟಿನಲ್ಲಿ ನಿಮಗಿಷ್ಟವಾದುದನ್ನು ಮಾಡಿ, ನಿಮ್ಮಲ್ಲಿ ಆಸಕ್ತಿ ಮೂಡುವಂತೆ ಮಾಡಿಕೊಳ್ಳಿ.

*ಸರಿಯಾಗಿ ನಿದ್ದೆ ಮಾಡಿ, ನಿದ್ದೆ ಮಾಡದಿದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ಓದಲು ಆಸಕ್ತಿಯೇ ಹೊರಟು ಹೋಗುತ್ತದೆ.
ನಿಮ್ಮ ಬಗೆಗಿನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ

ನಿಮ್ಮ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ, ಈಗ ಪ್ರಾರಂಭಿಸಿದರೂ ತಡವಾಗಿಲ್ಲ ಎನ್ನುವ ಭಾವ ಬೆಳೆಸಿಕೊಳ್ಳಿ, ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ನನ್ನಿಂದ ಮಾಡಲು ಸಾಧ್ಯವಿದೆ, ನಾನು ಮಾಡಬಲ್ಲೆ, ನನ್ನಲ್ಲಿ ನಾನು ನಂಬಿಕೆ ಇಡುತ್ತೇನೆ, ನಾನಿರುವಂತೆ ಅಭಿಮಾನ ಪಡುತ್ತೇನೆ, ಐ ಆಮ್ ದ ಬೆಸ್ಟ್ ಎನ್ನುವ ಭಾವ ನಿಮ್ಮದಾಗಲಿ.

ಅಬ್ಬಬ್ಬಾ ಎಂದರೆ ಏನಾಗಲು ಸಾಧ್ಯ? ಈ ಪರೀಕ್ಷೆಗಳೇನೂ ಅಂತಿಮವಲ್ಲ, ಸೋಲಾದರೂ ಎದುರಿಸುತ್ತೇನೆ, ಮುಂದೆ ನನ್ನ ಸೋಲನ್ನು ಗೆಲುವಾಗುವಂತೆ ಮಾಡುತ್ತೇನೆ ಎನ್ನುವ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಪರೀಕ್ಷೆಯ ಬಗೆಗಿನ ನಿಮ್ಮ ಭಯದ ಬಗ್ಗೆ, ನಿಮ್ಮ ಗುರಿಯ ಬಗ್ಗೆ, ನಿಮ್ಮ ಪೋಷಕರೊಡನೆ ಮುಕ್ತವಾಗಿ ಮಾತನಾಡಿ. ಅವರು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಾರೆ? ಅವರಿಂದ ನೀವು ಯಾವ ರೀತಿಯ ಸಹಕಾರ ಬಯಸುತ್ತೀರೆಂದು ಸ್ಪಷ್ಟವಾಗಿ ತಿಳಿಸಿ. ನಿಮ್ಮ ಓದಿನ, ಪರೀಕ್ಷೆಯ, ಮುಂದೆ ಆರಿಸುವ ವೃತ್ತಿಯ, ನಿಮ್ಮ ಜೀವನದ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

 ನನ್ನಿಂದಾಗದು ಎನ್ನುವ ಮಂತ್ರ ಬಿಟ್ಟು ನಿಮ್ಮಲ್ಲಿ ನಂಬಿಕೆ ಇಡಿ, ನೀವಿರುವಂತೆ ನಿಮ್ಮನ್ನು ಸ್ವೀಕರಿಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಹಿಂದಿನ ನೆನಪು ಬೇಡ. ಈಗೇನು ಮಾಡಬಹುದೆನ್ನುವ ಬಗ್ಗೆ ಯೋಚಿಸಿ. ನೀವು ಮಾಡುವುದನ್ನು ಪ್ರೀತಿಸಿ ಅಥವಾ ನಿಮಗೆ ಪ್ರೀತಿ ಇರುವುದನ್ನು ಮಾಡಿ. ನೀವು ಅಂದು ಕೊಂಡಿರುವುದಕ್ಕಿಂತಾ ನಿಮ್ಮಲ್ಲಿ ಹೆಚ್ಚಿನ ಶಕ್ತಿ ಇದೆ. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿ. ನಿಮ್ಮಲ್ಲಿರುವ ಅಂತಃ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳಿ.

ಪರೀಕ್ಷೆಗೇನೋ ಸಿದ್ಧವಾದಿರಿ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ನಿಮಗೆ ಗೊತ್ತಿಲ್ಲದಿರುವುದನ್ನು ಹುಡುಕಬೇಡಿ. *ಮೊದಲು ಗೊತ್ತಿರುವುದರ ಬಗ್ಗೆ ಗಮನ ಕೊಡಿ.* ನಂತರ ಕಷ್ಟದ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. *ಸಮಯದ ಬಗ್ಗೆ ಗಮನ ಕೊಡಿ.* ಒಂದೇ ಪ್ರಶ್ನೆಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳ ಬೇಡಿ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ. *ಪರೀಕ್ಷೆ ಮುಗಿಯಿತು, ಹೊರಗೆ ಬಂದು ಬರೆದಿರುವ ಉತ್ತರಗಳ ಬಗ್ಗೆ ಯಾರೊಡನೆಯೂ ಚರ್ಚೆ ಬೇಡ.* ಆಗಿರುವುದನ್ನು ಬದಲಿಸಲಾಗದು ಆದರೆ ಅದರ ಪರಿಣಾಮ ಮುಂದೆ ಬರೆಯುವ ಪತ್ರಿಕೆಗಳ ಮೇಲೂ ಆಗುತ್ತದೆ.

MATHS TIME LINE

MATHS TIME LINE https://mathigon.org/timeline